Tag: ನೀಲಾವರ

  • ನೀಲಾವರದಲ್ಲಿ ಚೆಕ್ ಡ್ಯಾಂ ಮೇಲೆ ಹರಿಯುತ್ತಿದೆ ಸೀತಾ ನದಿ ನೀರು

    ನೀಲಾವರದಲ್ಲಿ ಚೆಕ್ ಡ್ಯಾಂ ಮೇಲೆ ಹರಿಯುತ್ತಿದೆ ಸೀತಾ ನದಿ ನೀರು

    ಉಡುಪಿ: ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ನಿರಂತರ ಮಳೆಯಾಗುತ್ತಿದೆ. ಕಳೆದೆರಡು ದಿನಗಳಿಂದ 100 ಮಿಲಿಮೀಟರ್ ಗಿಂತ ಹೆಚ್ಚು ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ನದಿಗಳು ಭರ್ತಿಯಾಗಿ ಹರಿಯುತ್ತಿದೆ.

    ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟಿ ಕರಾವಳಿಯತ್ತ ಹರಿಯುವ ಸೀತಾನದಿ ಕೂಡ ತುಂಬಿ ಹರಿಯುತ್ತಿದೆ. ಹೆಬ್ರಿ ಮೂಲಕ ಹರಿದು ಬ್ರಹ್ಮಾವರ ತಾಲೂಕು ಸೇರುವ ಸಂದರ್ಭ ಹೊಳೆಗಳೆಲ್ಲ ಸೇರಿಕೊಳ್ಳುತ್ತವೆ. ನೀಲಾವರ ಸಮೀಪ ಭರ್ತಿಯಾಗಿ ಹರಿಯುತ್ತಿರುವ ಸೀತಾನದಿ, ನೀಲಾವರ ಚೆಕ್ ಡ್ಯಾಂ ಸಮೀಪ ರಭಸವಾಗಿ ಹರಿಯುತ್ತಿದ್ದಾಳೆ. ನೀಲಾವರ ಮಟಪಾಡಿ, ನಂದನ್ ಕುದ್ರು ಆನಹಳ್ಳಿ, ಬಾರ್ಕೂರು ಮುಂತಾದ ಗ್ರಾಮಗಳ ಬಳಿ ಗದ್ದೆ ತೆಂಗಿನ ತೋಟ ಅಡಿಕೆ ತೋಟಗಳಿಗೆ ಮಳೆ ನೀರು ನುಗ್ಗಿದೆ.

    ಪಶ್ಚಿಮಘಟ್ಟದಲ್ಲಿ ನಿರಂತರ ಮಳೆ ಬೀಳುತ್ತಿರುವುದರಿಂದ ಕಳೆದೆರಡು ದಿನಗಳಿಂದ ನದಿ ಯಥಾ ಸ್ಥಿತಿಯಲ್ಲಿದೆ. ನದಿ ಪಾತ್ರಗಳಲ್ಲಿ ಮನೆ ಕಟ್ಟಿಕೊಂಡಿರುವವರು ಬಹಳ ಮುನ್ನೆಚ್ಚರಿಕೆಯಿಂದ ಇರಬೇಕು. ನದಿಯ ಮಟ್ಟ ಹೆಚ್ಚಾಗುವ ಸಂದರ್ಭ ಬಂದರೆ ಜಿಲ್ಲಾಡಳಿತ ತಹಶೀಲ್ದಾರ್ ಕಚೇರಿ ಸ್ಥಳೀಯ ಪಂಚಾಯ್ತಿಗಳಿಗೆ ಮಾಹಿತಿ ಕೊಡಬೇಕು ಎಂದು ಸೂಚಿಸಲಾಗಿದೆ.

  • ಸ್ವಾಮೀಜಿ ಮೇಲೆ ಬೆಟ್ಟದಷ್ಟು ಪ್ರೀತಿ ಹರಿಸಿದ ಕರುಗಳು

    ಸ್ವಾಮೀಜಿ ಮೇಲೆ ಬೆಟ್ಟದಷ್ಟು ಪ್ರೀತಿ ಹರಿಸಿದ ಕರುಗಳು

    – ಗೋವಿನ ಪ್ರೀತಿಗೆ ಮೈಯ್ಯೊಡ್ಡಿ ಕುಳಿತ ಶ್ರೀಗಳು

    ಉಡುಪಿ: ಶ್ರೀಕೃಷ್ಣನ ಪೂಜೆಯ ಜೊತೆ ಗೋವುಗಳಿಗಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟವರು ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು. ಕರುಗಳು ಸ್ವಾಮೀಜಿ ಮೇಲೆ ಮುಗಿಬಿದ್ದು ಪ್ರೀತಿ ತೋರಿದ ವಿಡಿಯೋ ಭಾರೀ ಮೆಚ್ಚುಗೆಗೆ ಕಾರಣವಾಗಿದೆ.

    ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನೀಲಾವರದಲ್ಲಿ ಪೇಜಾವರ ಮಠದ ಗೋಶಾಲೆ ಇದೆ. ಇಲ್ಲಿ ಸಾವಿರದ ಐನೂರಕ್ಕಿಂತಲೂ ಹೆಚ್ಚು ಗೋವುಗಳಿವೆ. ಪೇಜಾವರ ಶ್ರೀಗಳಿಗೆ ಗೋವುಗಳ ಮೇಲೆ ಪ್ರೀತಿ ಇರೋದರಿಂದ ಗೋಶಾಲೆ ಮಾಡಿದ್ದಾರೆ. ಹೆಬ್ರಿಯಲ್ಲಿ ಮತ್ತೊಂದು ಗೋಶಾಲೆ ತೆರೆದಿದ್ದಾರೆ. ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ಗೋವಿನ ಮೇಲೆ ಇರುವಷ್ಟೇ ಪ್ರೀತಿ ಗೋವುಗಳಿಗೂ ಸ್ವಾಮೀಜಿಯ ಮೇಲೆ ಪ್ರೀತಿ ಇದೆ. ಇದಕ್ಕೆ ಸಾಕ್ಷಿ ಎನ್ನುವಂತಹ ವಿಡಿಯೋ ಹಾಗೂ ಫೋಟೋಗಳು ಪಬ್ಲಿಕ್ ಟಿವಿಗೆ ಸಿಕ್ಕಿವೆ. ಇದನ್ನೂ ಓದಿ: ಬ್ರಾಹ್ಮೀ ಮುಹೂರ್ತದಲ್ಲಿ ದೇವರ ಮುಂದೆ ತಲೆಬಾಗಿ ನಿಲ್ಲುತ್ತೆ ಗೋವು

    ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಗೋವುಗಳ ಜೊತೆ ಬೆರೆಯುವ ಫೋಟೋಗಳು, ವಿಡಿಯೋಗಳು ಎಲ್ಲರ ಮೊಬೈಲ್‍ನಲ್ಲಿ ಹರಿದಾಡುತ್ತಿವೆ. ಪೇಜಾವರ ಸ್ವಾಮೀಜಿಗಳನ್ನು ಮುತ್ತಿಕೊಂಡಿರುವ ಕರುಗಳು, ಸ್ವಾಮಿಗಳನ್ನು ಮುದ್ದು ಮಾಡುತ್ತದೆ. ಕರುಗಳು ಮೈಯ್ಯನ್ನೆಲ್ಲ ನೆಕ್ಕಿದರೂ ಶ್ರೀಗಳು ಮಾತ್ರ ಕರುಗಳಿಗೆ ಮೈಯ್ಯೊಡ್ಡಿ ಕುಳಿತುಕೊಂಡು ಗೋವು ಪ್ರೀತಿಯನ್ನು ಅನುಭವಿಸಿದ್ದಾರೆ.

    ಕೃಷ್ಣನ ಕೊಳಲಿನ ನಾದಕ್ಕೆ ಗೋವುಗಳ ದ್ವಾಪರದಲ್ಲಿ ತಲೆದೂಗಿದ್ದವು. ಕೃಷ್ಣ ಸೇವೆಯನ್ನು ಮಾಡುವ ಪೇಜಾವರ ಸ್ವಾಮೀಜಿಗಳ ಗೋವು ಪ್ರೀತಿ ಲಕ್ಷಾಂತರ ಭಕ್ತರ ಪ್ರೀತಿಗೆ ಕಾರಣವಾಗಿದೆ. ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಮತ್ತು ಅವರ ಸೇವೆ ಈ ಹಿಂದೆ ಪಬ್ಲಿಕ್ ಟಿವಿಯ ಪಬ್ಲಿಕ್ ಹೀರೋ ಕಾರ್ಯಕ್ರಮದಲ್ಲಿ ಪ್ರಸಾರವಾಗಿತ್ತು.