Tag: ನಿಶ್ಚಿತ್ ಕೊರೋಡಿ

  • ತಾಯಿ ಕಳೆದುಕೊಂಡ ಮಗನ ಆಕ್ರಂದನ- ‘Supplier ಶಂಕರ್’ ಸಿನಿಮಾದ ಸಾಂಗ್‌ ಔಟ್

    ತಾಯಿ ಕಳೆದುಕೊಂಡ ಮಗನ ಆಕ್ರಂದನ- ‘Supplier ಶಂಕರ್’ ಸಿನಿಮಾದ ಸಾಂಗ್‌ ಔಟ್

    ‘ಗಂಟುಮೂಟೆ’, ‘ಟಾಮ್ ಆ್ಯಂಡ್‌ ಜರ‍್ರಿ’ ಸಿನಿಮಾ ಖ್ಯಾತಿಯ ನಾಯಕ ನಿಶ್ಚಿತ್ ಕೊರೋಡಿ (Nishchith Korodi) ಅಭಿನಯದ ‘ಸಪ್ಲೈಯರ್‌ ಶಂಕರ’ (Supplier Shankara) ಸಿನಿಮಾದ ಮೊದಲ ಹಾಡು ಇದೀಗ ಬಿಡುಗಡೆಯಾಗಿದೆ. ಈ ಎಮೋಷನಲ್‌ ಸಾಂಗ್‌ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

    ತಾಯಿ ಕಳೆದುಕೊಂಡ ಮಗನ ಆಕ್ರಂದನ, ತುಂಬಾ ಪ್ರೀತಿಸುವ ಜೀವ ದೂರವಾದಾಗ ಆಗುವ‌ ನೋವಿನ ಗೀತೆಯಾಗಿರುವ ಅಯ್ಯೋ ದೈವವೇ ಹಾಡಿಗೆ ನಿರ್ದೇಶಕ ರಂಜಿತ್ ಸಿಂಗ್ ರಜಪೂತ್ ಸಾಹಿತ್ಯ ಬರೆದಿದ್ದು, ಸುನಿಲ್ ಕಶ್ಯಪ್ ಧ್ವನಿಯಾಗಿದ್ದು, ಆರ್ ಬಿ ಭರತ್ ಟ್ಯೂನ್ ಹಾಕಿದ್ದಾರೆ. ಕೇಳುಗರಿಗೆ ಬಹಳ ಕನೆಕ್ಟ್ ಆಗುವ ಸೆಂಟಿಮೆಂಟ್ ಹಾಡು ಇದಾಗಿದ್ದು, ಸಾಹಿತ್ಯ, ಸಂಗೀತ ಎಲ್ಲಾ ವಿಚಾರದಲ್ಲೂ ಗಮನ ಸೆಳೆಯುತ್ತಿದೆ.

    ಇತ್ತೀಚಿಗೆ ರಿಲೀಸ್ ಆದ ಮೋಷನ್ ಪೋಸ್ಟರ್ ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿತ್ತು. ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳಿದ್ದಾರೆ. ತ್ರಿನೇತ್ರ ಫಿಲ್ಮಂಸ್ ಸಂಸ್ಥೆಯಡಿ ಎಂ.ಚಂದ್ರಶೇಖರ್ – ನಾಗೇಂದ್ರ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:ದಿಗ್ಗಜರು- 2 ಸಿನಿಮಾಗಾಗಿ ಮತ್ತೆ ಜೊತೆಯಾಗ್ತಾರಾ ಸುದೀಪ್-‌ ದರ್ಶನ್?‌

    ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಬಾರ್ ಸಪ್ಲೈಯರ್‌ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಗೋಪಾಲ ಕೃಷ್ಣ ದೇಶಪಾಂಡೆ, ಜ್ಯೋತಿ ರೈ(Jyothi Rai), ನವೀನ್ ಡಿ ಪಡಿಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ ಎಂದು ನಿರ್ದೇಶಕರು ಹೇಳಿದ್ದಾರೆ. ಸತೀಶ್ ಕುಮಾರ್.ಎ ಛಾಯಾಗ್ರಹಣ, ಆರ್.ಬಿ.ಭರತ್ ಸಂಗೀತ, ಸತೀಶ್ ಚಂದ್ರಯ್ಯ ಸಂಕಲನ ಚಿತ್ರಕ್ಕಿದೆ. ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ‘ಸಪ್ಲೈಯರ್ ಶಂಕರ’ ಬಿಡುಗಡೆಗೆ ಸಜ್ಜಾಗಿದ್ದಾನೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘Supplier ಶಂಕರ’ ಚಿತ್ರದ ಮೋಷನ್ ಪೋಸ್ಟರ್‌ ಔಟ್- ನಯಾ ಲುಕ್‌ನಲ್ಲಿ ‘ಗಂಟುಮೂಟೆ’ ಹೀರೋ

    ‘Supplier ಶಂಕರ’ ಚಿತ್ರದ ಮೋಷನ್ ಪೋಸ್ಟರ್‌ ಔಟ್- ನಯಾ ಲುಕ್‌ನಲ್ಲಿ ‘ಗಂಟುಮೂಟೆ’ ಹೀರೋ

    ‘Supplier ಶಂಕರ’ ಸದ್ದಿಲ್ಲದೇ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ‘ಸಪ್ಲೈರ್ ಶಂಕರ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಪೊಲೀಸ್ ಸ್ಟೇಷನ್‌ ದೃಶ್ಯದ ಮೂಲಕ ತೆರೆದುಕೊಳ್ಳುವ ಮೋಷನ್ ಪೋಸ್ಟರ್ ನಾನಾ ಕುತೂಹಲವನ್ನು ಹುಟ್ಟುಹಾಕಿದೆ. ರಕ್ತ ಮೆತ್ತಿದ ನಾಯಕ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.


    ಗಂಟುಮೂಟೆ, ಟಾಮ್ ಅಂಡ್ ಜರ‍್ರಿ (Tom & Jerry) ಸಿನಿಮಾಗಳ ಮೂಲಕ ಭರವಸೆ ಮೂಡಿಸಿರುವ ನಾಯಕ ನಿಶ್ಚಿತ್ ಕೊರೋಡಿ Supplier ಶಂಕರ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಯುವ ಪ್ರತಿಭೆ ರಂಜಿತ್ ಸಿಂಗ್ ರಜಪೂತ್ (Ranjith Singh Rajput) ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ತ್ರಿನೇತ್ರ ಫಿಲ್ಮಂಸ್ ಸಂಸ್ಥೆಯಡಿ ಎಂ.ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ:ಪಡ್ಡೆಹುಡುಗರ ರಾಣಿ ಶ್ರೀಲೀಲಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್


    ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು, ಟೈಟಲ್ ಹೇಳುವಂತೆ ಒಬ್ಬ ಬಾರ್ ಸಪ್ಲೈರ್ ಸುತ್ತಾ ಇಡೀ ಸಿನಿಮಾ ಸಾಗುತ್ತದೆ. ನಿಶ್ಚಿತ್ ಗೆ ಜೋಡಿಯಾಗಿ ಲಗೋರಿ ಸಿನಿಮಾ ಖ್ಯಾತಿಯ ದೀಪಿಕಾ ಆರಾಧ್ಯ (Deepika Aradya) ನಟಿಸಿದ್ದು, ಗೋಪಾಲ ಕೃಷ್ಣ ದೇಶಪಾಂಡೇ, ಜ್ಯೋತಿ ರೈ, ನವೀನ್ ಡಿ ಪಡಿಲ್ ಸೇರಿದಂತೆ ಒಂದಷ್ಟು ಹೊಸಬರು ಚಿತ್ರದಲ್ಲಿದ್ದಾರೆ.

    ‘Supplier ಶಂಕರ’ ಸಿನಿಮಾಗೆ ರಂಜಿತ್, ಕಥೆ , ಚಿತ್ರಕಥೆ, ಸಂಭಾಷಣೆ ಜೊತೆಗೆ ಸಾಹಿತ್ಯದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ವಿಜಯ್ ಪ್ರಕಾಶ್, ಅಮ್ಮ ನನ್ನೀ ಈ ಜನುಮ ಖ್ಯಾತಿಯ ಸುನಿಲ್ ಕಶ್ಯಪ್, ಮೋಹನ್ ಬಿನ್ನಿಪೇಟೆ, ಸಂತೋಷ್ ವೆಂಕಿ, ನಕುಲ್ ಅಭಯ್ಯಂಕರ್, ಐಶ್ವರ್ಯ ರಂಗರಾಜನ್ ಹಾಡುಗಳಿಗೆ ಧ್ವನಿಯಾಗಿದ್ದು, ರವಿ ಬಸ್ರೂರ್ ಬಳಿ ಕೆಲಸ ಮಾಡಿರುವ ಆರ್.ಬಿ.ಭರತ್ ಸಂಗೀತ ನೀಡಿದ್ದಾರೆ. ಸತೀಶ್ ಚಂದ್ರಯ್ಯ ಸಂಕಲನ, ಸತೀಶ್ ಕುಮಾರ್.ಎ ಛಾಯಾಗ್ರಹಣ, ಬಾಲಾಜಿ ಕಲಾ ನಿರ್ದೇಶನ Supplier ಶಂಕರ ಸಿನಿಮಾಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕಂಟ್ರಿಮೇಡ್’ನಲ್ಲಿ ಗ್ಯಾಂಗ್‌ಸ್ಟರ್ ಆದ ಟಾಮ್ ಅಂಡ್ ಜೆರ್ರಿಯ ನಿಶ್ವಿತ್ ಕೊರೋಡಿ

    ‘ಕಂಟ್ರಿಮೇಡ್’ನಲ್ಲಿ ಗ್ಯಾಂಗ್‌ಸ್ಟರ್ ಆದ ಟಾಮ್ ಅಂಡ್ ಜೆರ್ರಿಯ ನಿಶ್ವಿತ್ ಕೊರೋಡಿ

    ಹೊಸ ತಂಡದವರೇ ಸೇರಿಕೊಂಡು ನಿರ್ಮಾಣ ಮಾಡುತ್ತಿರುವ ‘ಕಂಟ್ರಿಮೇಡ್’ ಸಿನಿಮಾ ಇಂದು ಸೆಟ್ಟೇರಿದೆ. ಗೊಂಬೆ ಪಿಕ್ಚರ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಟಾಮ್ ಅಂಡ್ ಜೆರ್ರಿ ಖ್ಯಾತಿಯ ನಟ ನಿಶ್ಚಿತ್ ಕೊರೋಡಿ ನಾಯಕ ನಟ. ಈ ಬಾರಿ ಪಕ್ಕಾ ಮಾಸ್ ಅವತಾರ ತಾಳಿರುವ ನಿಶ್ಚಿತ್ ಗ್ಯಾಂಗ್‌ಸ್ಟರ್ ಕಥಾನಕವುಳ್ಳ ‘ಕಂಟ್ರಿಮೇಡ್’ ಸ್ಕ್ರಿಪ್ಟ್ ಮೆಚ್ಚಿ ಆಯ್ಕೆ ಮಾಡಿಕೊಂಡಿದ್ದಾರೆ. ಮಾಸ್ ಸಿನಿಮಾಗೆ ಸ್ಯಾಂಡಲ್‌ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಿ ಹಾಗೂ ಖಳನಟ ವಸಿಷ್ಠ ಸಿಂಹ ಸಾಥ್ ನೀಡಿದ್ದಾರೆ.

    ಇಂದು ಅದ್ಧೂರಿಯಾಗಿ ಸೆಟ್ಟೇರಿರುವ ಕಂಟ್ರಿಮೇಡ್ ಚಿತ್ರಕ್ಕೆ ದುನಿಯಾ ವಿಜಿ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ರೆ, ವಸಿಷ್ಠ ಸಿಂಹ ಕ್ಯಾಮೆರಾ ಚಾಲನೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ’ಲವ್ ಮಾಕ್ಟೆಲ್’ ತೆಲುಗು ಅವತರಣಿಕೆ ನಿರ್ಮಾಣ ಮಾಡಿರುವ ಭಾವನಾರವಿ ಗೊಂಬೆ ಪಿಕ್ಚರ್ಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

    ಕಂಟ್ರಿಮೇಡ್ ಚಿತ್ರದ ರೂವಾರಿ ರಾಘವ ಸೂರ್ಯ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿರುವ ಇವರಿಗೆ ಸಿನಿಮಾ ಮೇಲೆ ಅಪಾರ ಸೆಳೆತ. ನಿರ್ದೇಶಕನಾಗುವ ಕನಸ್ಸೊತ್ತಿರುವ ರಾಘವ್ ಸೂರ್ಯ ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ದುಡಿದ ಅನುಭವ ಹೊಂದಿದ್ದಾರೆ. ಇದೀಗ ಕಂಟ್ರಿಮೇಡ್ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಅದ್ಧೂರಿಯಾಗಿ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟ ಬಳ್ಳಾರಿ ಕುವರ ಕಿರೀಟಿ – ಸ್ಟಂಟ್, ಆ್ಯಕ್ಟಿಂಗ್, ಡ್ಯಾನ್ಸ್ ರಾಜಮೌಳಿ ಮೆಚ್ಚುಗೆ!

    ಕಲ್ಕತ್ತಾ ಮತ್ತು ಉತ್ತರ ಕರ್ನಾಟಕ ಎರಡು ಬ್ಯಾಕ್ ಡ್ರಾಪ್‌ನಲ್ಲಿ ಸಾಗುವ ಕಥೆ ಚಿತ್ರದಲ್ಲಿದೆ. ಮಾಸ್ ಗ್ಯಾಂಗ್‌ಸ್ಟರ್ ಕುರಿತಾದ ಕಥೆ ಚಿತ್ರದಲ್ಲಿದ್ದು ಬಾಲಕನಾಗಿದ್ದಾಗ ಕೆಲವು ಕಹಿ ಘಟನೆಗಳನ್ನು ಸಹಿಸಿಕೊಳ್ಳಲಾಗದೆ ಊರು ಬಿಟ್ಟು ಕಲ್ಕತ್ತಾ ಸೇರಿಕೊಳ್ಳುವ ನಾಯಕನ ಸುತ್ತ ಸಿನಿಮಾ ಹೆಣೆಯಲಾಗಿದೆ. ಚಿತ್ರದಲ್ಲಿ ನಿಶ್ವಿತ್ ಕೊರೋಡಿ ಎರಡು ಶೇಡ್‌ಗಳಲ್ಲಿ ಕಾಣಸಿಗಲಿದ್ದಾರೆ. ಇವರಿಗೆ ಜೋಡಿಯಾಗಿ, ಬೆಂಗಾಲಿ ಹುಡುಗಿಯಾಗಿ ’ಲವ್‌ಮಾಕ್ಟೆಲ್-2’ ಖ್ಯಾತಿಯ ರಚೇಲ್‌ ಡೇವಿಡ್ ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಶರತ್‌ಲೋಹಿತಾಶ್ವ, ತಬಲಾನಾಣಿ ಒಳಗೊಂಡ ತಾರಾಬಳಗವಿದೆ. ನಕುಲ್‌ ಅಭಯಂಕರ್ ಸಂಗೀತ, ಜಿ.ಎಸ್.ಶ್ರೇಯಸ್ ಕ್ಯಾಮೆರಾ ವರ್ಕ್, ದೀಪು.ಎಸ್.ಕುಮಾರ್ ಸಂಕಲನ ಸಿನಿಮಾಗೆ ಇರಲಿದೆ. ಇಂದು ಸೆಟ್ಟೇರಿರುವ ಕಂಟ್ರಿಮೇಡ್ ಏಪ್ರಿಲ್‌ನಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ. ಇದನ್ನೂ ಓದಿ: ಮೈಸೂರಿನಲ್ಲಿದೆ ಕಾಡುವ ಕಥನ: ಕೇವಲ ಪ್ರೀತಿಕಥೆಯಲ್ಲ ರೋಚಕತೆಯೂ ಇಲ್ಲುಂಟು

  • ನಾಳೆಯಿಂದ ರಾಜ್ಯಾದ್ಯಂತ ತೆರೆ ಮೇಲೆ ‘ಟಾಮ್ ಅಂಡ್ ಜೆರ್ರಿ’ಯ ಪ್ರೀತಿಯ ಕಾದಾಟ ಶುರು

    ನಾಳೆಯಿಂದ ರಾಜ್ಯಾದ್ಯಂತ ತೆರೆ ಮೇಲೆ ‘ಟಾಮ್ ಅಂಡ್ ಜೆರ್ರಿ’ಯ ಪ್ರೀತಿಯ ಕಾದಾಟ ಶುರು

    ಹಾಡು ಹಾಗೂ ಭರವಸೆ ಮೂಡಿಸುವ ಟ್ರೇಲರ್ ಮೂಲಕ ಸಖತ್ ಸುದ್ದಿಯಲ್ಲಿರುವ ಸಿನಿಮಾ ಟಾಮ್ ಅಂಡ್ ಜೆರ್ರಿ. ಡೈಲಾಗ್ ರೈಟರ್ ಆಗಿದ್ದ ರಾಘವ್ ವಿನಯ್ ಶಿವಗಂಗೆ ಮೊದಲ ಬಾರಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಈ ಚಿತ್ರದ ಮೇಲೆ ಚಂದನವನದಲ್ಲಿ ಹಾಗೂ ಪ್ರೇಕ್ಷಕರ ಮನದಲ್ಲೂ ಸಾಕಷ್ಟು ನಿರೀಕ್ಷೆ ಇದೆ. ಇದಕ್ಕೆ ಕಾರಣ ಚಿತ್ರದ ಪ್ರಾಮಿಸಿಂಗ್ ಆದ ತುಣುಕುಗಳು. ಹೊಸತನದೊಂದಿಗೆ, ಹೊಸತಂಡ ಕಟ್ಟಿಕೊಂಡು ಬಂದಿರುವ ನಿರ್ದೇಶಕರು ನಾಳೆಯಿಂದ ರಾಜ್ಯಾದ್ಯಂತ ಟಾಮ್ ಅಂಡ್ ಜೆರ್ರಿಯ ಕಥೆ ಹೇಳಲಿದ್ದಾರೆ.

    Tom and Jerry film

    ಕೊರೊನಾ ಹೊಡೆತದಿಂದ ಚೇತರಿಸಿಕೊಂಡ ಸಿನಿಮಾಗಳಲ್ಲಿ ಟಾಮ್ ಅಂಡ್ ಜೆರ್ರಿಯೂ ಒಂದು. ಇದೀಗ ಎಲ್ಲಾ ಸುಧಾರಣೆಯ ಹಂತಕ್ಕೆ ಬರುತ್ತಿದ್ದು, ತಮ್ಮ ಸಿನಿಮಾ ಮೂಲಕ ಮನರಂಜನೆ ನೀಡೋಕೆ ಸಕಲ ಸಿದ್ದವಾಗಿದೆ ಚಿತ್ರತಂಡ. ಸ್ಯಾಂಡಲ್‍ವುಡ್ ಅಂಗಳದಲ್ಲಿ ಡೈಲಾಗ್ ರೈಟರ್ ಆಗಿ, ಸಹಾಯಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ರಾಘವ್ ವಿನಯ್ ಶಿವಗಂಗೆ ಕೆಜಿಎಫ್ ಸಿನಿಮಾಗೆ ಡೈಲಾಗ್ ಬರೆದು ಖ್ಯಾತಿ ಗಳಿಸಿಕೊಂಡಿದ್ದಾರೆ. ಈಗ ಚೊಚ್ಚಲ ಸಿನಿಮಾ ನಿರ್ದೇಶಿಸಿ ಬಿಡುಗಡೆಯ ಸಂತಸದಲ್ಲಿದ್ದಾರೆ.

    ಸೆನ್ಸಾರ್ ಅಂಗಳದಲ್ಲಿ ಯು/ಎ ಸರ್ಟಿಫಿಕೇಟ್ ಪಡೆದಿರುವ ಈ ಚಿತ್ರದಲ್ಲಿ ಗಂಟುಮೂಟೆ ಸಿನಿಮಾ ಮೂಲಕ ಪರಿಚಿತರಾಗಿರುವ ನಿಶ್ಚಿತ್ ಕೊರೋಡಿ, ಜೋಡಿಹಕ್ಕಿ ಜಾನಕಿ ಟೀಚರ್ ಖ್ಯಾತಿಯ ಚೈತ್ರಾ ರಾವ್ ನಾಯಕ ಹಾಗೂ ನಾಯಕಿ. ಈ ಇಬ್ಬರ ಕಾಂಬೀನೇಶನ್ ಟ್ರೇಲರ್ ಮತ್ತು ಹಾಡಿನಲ್ಲಿ ಮೋಡಿ ಮಾಡಿದ್ದು, ತೆರೆ ಮೇಲೆ ಇವರನ್ನು ನೋಡಲು ಕಾತುರರಾಗಿದ್ದಾರೆ ಚಿತ್ರರಸಿಕರು. ಇದನ್ನೂ ಓದಿ: ಡೆಸರ್ಟ್ ಸಫಾರಿಯನ್ನು ಎಂಜಾಯ್ ಮಾಡ್ತಿರೋ ಜಾನ್ವಿ, ಖುಷಿ ಕಪೂರ್

    ಯೂತ್ ಓರಿಯೆಂಟೆಂಡ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರಕ್ಕೆ ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ನಡಿ ರಾಜು ಶೇರಿಗಾರ್ ಬಂಡವಾಳ ಹೂಡಿದ್ದು, ವಿನಯ್ ಚಂದ್ರ ಕಾರ್ಯಕಾರಿ ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಈಗಾಗಲೇ ಎರಡು ಹಾಡುಗಳು ಸೂಪರ್ ಹಿಟ್ ಆಗಿ ಎಲ್ಲರ ಫೇವರೇಟ್ ಆಗಿವೆ. ಉಳಿದಂತೆ ಸಂಕೇತ್ ಎಂವೈಎಸ್ ಛಾಯಾಗ್ರಹಣ,  ಸೂರಜ್ ಅಂಕೋಲೆಕರ್ ಸಂಕಲನವಿದೆ. ಇದನ್ನೂ ಓದಿ: ಗೃಹಿಣಿ, ಮಗುವಿನ ತಾಯಿಯಾಗಬಯಸಿದ್ದಾರಂತೆ ಕಂಗನಾ- ಬಾಳ ಸಂಗಾತಿ ಬಗ್ಗೆ ನಟಿ ಸುಳಿವು!

    ಟಾಮ್ ಅಂಡ್ ಜೆರ್ರಿಯ ತಾರಾಬಳಗವೂ ಕಲರ್ ಫುಲ್ ಆಗಿದ್ದು, ಸೂರ್ಯ ಶೇಖರ್, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಸಿನಿಮಾ ನಾಳೆಯಿಂದ ಚಿತ್ರಮಂದಿರದ ಅಂಗಳದಲ್ಲಿ ಮೋಡಿ ಮಾಡಲು ಸಜ್ಜಾಗಿದೆ.

  • ನವೆಂಬರ್‌ನಲ್ಲಿ ತೆರೆಗೆ ಅಪ್ಪಳಿಸಲಿದೆ ‘ಟಾಮ್ ಅಂಡ್ ಜೆರ್ರಿ’

    ನವೆಂಬರ್‌ನಲ್ಲಿ ತೆರೆಗೆ ಅಪ್ಪಳಿಸಲಿದೆ ‘ಟಾಮ್ ಅಂಡ್ ಜೆರ್ರಿ’

    ಬೆಂಗಳೂರು: ನಿರ್ದೇಶಕ ರಾಘವ್ ವಿನಯ್ ನವೆಂಬರ್ ನಲ್ಲಿ ‘ಟಾಮ್ ಅಂಡ್ ಜೆರ್ರಿ’ ಕಥೆ ಹೇಳಲಿದ್ದಾರೆ. ಟಾಮ್ ಅಂಡ್ ಜೆರ್ರಿ ಎಂದಾಕ್ಷಣ ನಮಗೆ ನಮ್ಮ ಬಾಲ್ಯ ಕಣ್ಮುಂದೆ ಬರುತ್ತೆ. ಇವತ್ತಿಗೂ ಟಾಮ್ ಅಂಡ್ ಜೆರ್ರಿ ಎಲ್ಲರ ಹಾರ್ಟ್ ಫೇವರೇಟ್. ಈ ಹೆಸರಿನಲ್ಲೀಗ ಸಿನಿಮಾವೊಂದು ಸೆಟ್ಟೇರಿ ಹೊಸ ಕಥೆ ಹೇಳ ಹೊರಟಿದೆ. ಚಿತ್ರೀಕರಣ ಕಂಪ್ಲೀಟ್ ಮಾಡಿ, ಬಿಡುಗಡೆಯ ದಿನಾಂಕವನ್ನು ಹೊತ್ತು ಬಂದಿರುವ ಈ ಚಿತ್ರ ನ.12ಕ್ಕೆ ಬಿಡುಗಡೆಗೆ ಸಜ್ಜಾಗಿದೆ.

    ‘ಟಾಮ್ ಅಂಡ್ ಜೆರ್ರಿ’ ಸಿನಿಮಾ ಸ್ಯಾಂಡಲ್‍ವುಡ್ ಅಂಗಳದಲ್ಲಿ ಟೈಟಲ್ ಮೂಲಕವೇ ಕುತೂಹಲ ಹುಟ್ಟು ಹಾಕಿದೆ. ರಾಘವ್ ವಿನಯ್ ಶಿವಗಂಗೆ ಈ ಚಿತ್ರದ ಕ್ಯಾಪ್ಟನ್ ಆಫ್ ದಿ ಶಿಪ್. ಕೆಜಿಎಫ್ ಸಿನಿಮಾದ ಒನ್ ಆಫ್ ದಿ ಡೈಲಾಗ್ ರೈಟರ್ ಆಗಿ, ಖ್ಯಾತಿಗಳಿಸಿರುವ ಇವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಹಾಡುಗಳ ಮೂಲಕ ಸಿನಿ ಪ್ರಿಯರಲ್ಲಿ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಸೆನ್ಸಾರ್ ಅಂಗಳದಲ್ಲಿ ಯು/ಎ ಮುದ್ರೆ ಪಡೆದುಕೊಂಡಿದ್ದು, ಇನ್ನೇನಿದ್ರು ಚಿತ್ರಮಂದಿರಕ್ಕೆ ಕಾಲಿಡೋದೊಂದೇ ಬಾಕಿ ಇದೆ. ಇದನ್ನೂ ಓದಿ: ಜಿಮ್‍ನತ್ತ ಮುಖ ಮಾಡಿದ ಗೀತಾ ಭಾರತಿ ಭಟ್

    ‘ಟಾಮ್ ಅಂಡ್ ಜೆರ್ರಿ’ ಯೂತ್ ಓರಿಯೆಂಟೆಡ್ ಸಿನಿಮಾವಾಗಿದೆ. ಯುವ ಪೀಳಿಗೆಯನ್ನು ಸೆಳೆಯುವ ಸಬ್ಜೆಕ್ಸ್ ಸಿನಿಮಾದಲ್ಲಿದೆ. ಒಂದೊಳ್ಳೆಯ ಸಂದೇಶವೂ ಇದೆ. ಇಬ್ಬರು ಸ್ನೇಹಿತರ ನಡುವಿನ ಜಗಳ, ಕೋಪ, ತರಲೆ, ತಮಾಷೆ, ಪ್ರೀತಿ, ಆಕ್ಷನ್ ಎಲ್ಲವೂ ಒಳಗೊಂಡಿರುವ ಈ ಸಿನಿಮಾದಲ್ಲಿ ಗಂಟು ಮೂಟೆ ಖ್ಯಾತಿಯ ನಿಶ್ಚಿತ್ ಕೊರೋಡಿ, ಚೈತ್ರಾ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

    ರಾಜು ಶೇರಿಗಾರ್ ಈ ಚಿತ್ರದ ನಿರ್ಮಾಪಕ. ಮೊದಲ ಬಾರಿ ಸಿನಿಮಾ ನಿರ್ಮಾಣಕ್ಕೆ ಇಳಿದಿರುವ ಇವರು ತಮ್ಮದೇ ರಿದ್ಧಿ ಸಿದ್ಧಿ ಫಿಲ್ಮ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಖಳನಟನಾಗಿ ಸೂರ್ಯ ಶೇಖರ್ ಮಿಂಚಿದ್ದು, ತಾರ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡಿ ಚಂದ್ರು, ರಾಕ್ಲೈನ್ ಸುಧಾಕರ್, ಸಂಪತ್ ಮೈತ್ರೇಯ,ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಒಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಏಕವಚನದಲ್ಲಿ ಬೈಯ್ದಿದ್ದಾರೆ – ಸಿದ್ದುಗೆ ಕಟೀಲ್ ಸವಾಲು

    ಮ್ಯಾಥ್ಯೂಸ್ ಮನು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಚಿತ್ರದಲ್ಲಿ ಆರು ಹಾಡುಗಳಿದ್ದು, ಒಂದಕ್ಕಿಂತ ಒಂದು ಹಾಡುಗಳು ಡಿಫ್ರೆಂಟ್ ಆಗಿ ಮೂಡಿ ಬಂದಿವೆ. ಈಗಾಗಲೇ ಸಿದ್ ಶ್ರೀರಾಮ್ ದನಿಯಲ್ಲಿ ಮೂಡಿ ಬಂದ ‘ಹಾಯಾಗಿದೆ ಎದೆಯೊಳಗೆ’ ಹಾಡು ಮ್ಯಾಜಿಕ್ ಮಾಡಿದ್ದು, ಎಲ್ಲರ ಫೇವರೇಟ್ ಆಗಿದೆ. ಉಳಿದಂತೆ ಸಂಕೇತ್ ಎಂವೈಎಸ್ ಕ್ಯಾಮೆರಾ ನಿರ್ದೇಶನ, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ‘ಟಾಮ್ ಅಂಡ್ ಜೆರ್ರಿ’ ಚಿತ್ರಕ್ಕಿದೆ.

  • ಸ್ಟಾರ್ ಸಿನಿಮಾಗಳ ಅಬ್ಬರದಲ್ಲೂ ಗೆದ್ದ ‘ಗಂಟುಮೂಟೆ’!

    ಸ್ಟಾರ್ ಸಿನಿಮಾಗಳ ಅಬ್ಬರದಲ್ಲೂ ಗೆದ್ದ ‘ಗಂಟುಮೂಟೆ’!

    ಬೆಂಗಳೂರು: ಒಂದೊಳ್ಳೆ ಕಂಟೆಂಟು, ಹೊಸತನಗಳನ್ನು ಜೀವಾಳವಾಗಿಸಿಕೊಂಡ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿಗೂ ಕೈ ಬಿಡುವುದಿಲ್ಲ. ಇದುವರೆಗೂ ಈ ವಿಚಾರ ಅಡಿಗಡಿಗೆ ಸಾಬೀತಾಗುತ್ತಲೇ ಬಂದಿದೆ. ಅದು ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಗಂಟುಮೂಟೆ ವಿಚಾರದಲ್ಲಿಯೂ ನಿಜವಾಗಿದೆ. ಅಷ್ಟಕ್ಕೂ ಭರಾಟೆಯಂಥಾ ಸಿನಿಮಾಗಳ ಅಬ್ಬರದ ನಡುವೆ ಈ ಚಿತ್ರ ತೆರೆಗಾಣುವ ಸನ್ನಾಹದಲ್ಲಿದ್ದಾಗಲೇ ಜನರಲ್ಲೊಂದು ಅಚ್ಚರಿ ಮನೆ ಮಾಡಿಕೊಂಡಿತ್ತು. ಆದರೆ ನೋಡುಗರೆಲ್ಲರಿಗೂ ಅಚ್ಚರಿಯಂಥಾ ತಾಜಾ ಕಥೆಯೊಂದಿಗೆ ಗಂಟುಮೂಟೆ ಚಿತ್ರ ಈ ರೇಸಿನಲ್ಲಿ ಜಯಿಸಿಕೊಂಡಿದೆ.

    ಇದು ನವ ನಿರ್ದೇಶಕಿ ರೂಪಾ ರಾವ್ ಅವರ ಚೊಚ್ಚಲ ಚಿತ್ರ. ಆದರೆ ಮೊದಲ ಹೆಜ್ಜೆಯಲ್ಲಿ ಎಂಥವರಾದರೂ ಹಿಂದೇಟು ಹಾಕುವಂಥಾ ಕಥೆಯನ್ನೇ ಅವರು ಈ ಮೂಲಕ ಹೇಳಿದ್ದಾರೆ. ತೊಂಬತ್ತರ ದಶಕದ ಹೈಸ್ಕೂಲು ಪ್ರೇಮ ಕಥಾನಕವನ್ನೊಳಗೊಂಡಿರೋ ಗಂಟುಮೂಟೆ ಪ್ರತಿಯೊಬ್ಬರನ್ನೂ ಖುಷಿಗೊಳಿಸಿದೆ. ಅನೇಕರು ತಮ್ಮದೇ ನೆನಪುಗಳ ನೆತ್ತಿ ಸವರಿಕೊಂಡು ಥ್ರಿಲ್ ಆಗಿದ್ದಾರೆ. ಮತ್ತೆ ಕೆಲವರು ಇಲ್ಲಿರೋ ಬಿಡುಬೀಸಾದ ನಿರೂಪಣೆ ಮತ್ತು ತಣ್ಣಗೆ ಪ್ರವಹಿಸುವ ಭಾವತೀವ್ರತೆಗೆ ಮನ ಸೋತಿದ್ದಾರೆ. ಎಲ್ಲರನ್ನೂ ಒಂದೊಂದು ರೀತಿಯಲ್ಲಿ ಆವರಿಸಿಕೊಂಡಿರುವ ಈ ಚಿತ್ರವೀಗ ಅದೇ ಬಲದಿಂದ ಗೆದ್ದಿದೆ.

    ಅಷ್ಟಕ್ಕೂ ಬಿಡುಗಡೆಗೂ ತುಂಬಾ ಮುಂಚೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಚಿತ್ರ ಹೆಸರು ಗಳಿಸಿತ್ತು. ಅಲ್ಲಿಯೂ ಮೆಚ್ಚುಗೆ ಗಳಿಸಿಕೊಂಡು ಪ್ರಶಸ್ತಿ ಪಡೆಯೋ ಮೂಲಕ ಕನ್ನಡದ ಘನತೆಯನ್ನು ಮಿರುಗಿಸಿತ್ತು. ಇಂಥಾ ಚಿತ್ರವೀಗ ಕನ್ನಡದಲ್ಲಿಯೂ ಗೆದ್ದಿದೆ. ದೊಡ್ಡ ಚಿತ್ರಗಳ ಭರಾಟೆಯಲ್ಲಿ ಹೊಸಬರ ಚಿತ್ರಗಳು ನೆಲೆ ಕಂಡುಕೊಳ್ಳೋದು ಎಂಥಾ ಸವಾಲಿನ ಸಂಗತಿ ಅನ್ನೋದು ಗೊತ್ತಿರುವಂಥಾದ್ದೇ. ಅದನ್ನು ರೂಪಾ ರಾವ್ ಸಾಧ್ಯವಾಗಿಸಿದ್ದಾರೆ. ತೇಜು ಬೆಳವಾಡಿ, ನಿಶ್ಚಿತ್ ಮುಂತಾದ ಹೊಸಬರನ್ನೇ ಚೆಂದಗೆ ನಟಿಸುವಂತೆ ಮಾಡಿ, ಅತ್ಯಂತ ಅಪರೂಪದ ಕಥೆ ಹೇಳುವ ಮೂಲಕ ರೂಪಾ ರಾವ್ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕಿಯಾಗಿ ನೆಲೆ ಕಂಡುಕೊಂಡಿದ್ದಾರೆ.

    https://www.facebook.com/publictv/videos/742395332886864/?v=742395332886864

  • ‘ಗಂಟುಮೂಟೆ’ಯೊಳಗಿನ ಮ್ಯಾಜಿಕ್‍ಗೆ ಮರುಳಾದ ಪ್ರೇಕ್ಷಕರು!

    ‘ಗಂಟುಮೂಟೆ’ಯೊಳಗಿನ ಮ್ಯಾಜಿಕ್‍ಗೆ ಮರುಳಾದ ಪ್ರೇಕ್ಷಕರು!

    ಬೆಂಗಳೂರು: ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಗಂಟುಮೂಟೆ ಚಿತ್ರದ ಟ್ರೇಲರ್ ನೋಡಿದವರೆಲ್ಲ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಗಾಢವಾದ ನಂಬಿಕೆ ಹೊಂದಿದ್ದರು. ಈ ಚಿತ್ರ ಅಂಥಾ ನಂಬಿಕೆಗಳನ್ನೆಲ್ಲ ನಿಜವಾಗಿಸೋ ಸ್ವರೂಪದೊಂದಿಗೇ ತೆರೆ ಕಂಡಿದೆ. ತೊಂಭತ್ತರ ದಶಕದ ಹೈಸ್ಕೂಲು ಪ್ರೇಮವೊಂದರ ಘಮ ಹೊತ್ತು ತಂದಿರುವ ಈ ಚಿತ್ರ ಬಹುತೇಕರ ನೆನಪುಗಳನ್ನು ಕೆಣಕಿದೆ. ತನ್ನ ಸೂಕ್ಷ್ಮ ಕಥಾ ಹಂದರದಿಂದ ಹಲವರ ಭಾವಕೋಶಗಳನ್ನು ನವಿರಾಗಿಯೇ ತಾಕಿದೆ. ಇದು ಯಶಸ್ವಿ ಚಿತ್ರವೊಂದರ ಲಕ್ಷಣ. ಅದಿಲ್ಲದೇ ಹೋಗಿದ್ದರೆ ದೊಡ್ಡ ಸಿನಿಮಾಗಳ ನಡುವೆ ಕಾಲೂರಿ ನಿಂತು ಯಶಸ್ವಿ ಪ್ರದರ್ಶನ ಕಾಣುವ ಕಸುವು ಈ ಚಿತ್ರಕ್ಕೆ ಬರುತ್ತಿರಲಿಲ್ಲವೇನೋ…?

    ಈ ಸ್ಪರ್ಧೆಯ ತೀವ್ರತೆಯ ನಡುವೆ ಸರಿಕಟ್ಟಾದೊಂದು ಕಂಟೆಂಟಿಲ್ಲದೇ ಹೋದರೆ ಹೊಸಬರ ತಂಡವೊಂದು ಅಖಾಡಕ್ಕಿಳಿದು ಸೆಣೆಸುವುದು ಸಾಧ್ಯವಾಗದ ಮಾತು. ಆದರೆ ರೂಪಾ ರಾವ್ ತಮ್ಮ ಮೊದಲ ಹೆಜ್ಜೆಯಲ್ಲಿಯೇ ಹೊಸಬರನ್ನು ಜೊತೆಗಿಟ್ಟುಕೊಂಡೂ ಗೆದ್ದಿದ್ದಾರೆ. ಸ್ಟಾರ್ ಸಿನಿಮಾಗಳಿದ್ದರೂ ಕೂಡಾ ಪ್ರೇಕ್ಷಕರೆಲ್ಲ ಗಂಟುಮೂಟೆಯನ್ನು ನೋಡುತ್ತಾ ಮುದಗೊಳ್ಳುತ್ತಿದ್ದಾರೆ. ಎಲ್ಲ ಚೌಕಟ್ಟುಗಳನ್ನು ಮೀರಿದ ಈ ಚೇತೋಹಾರಿ ಚಿತ್ರವೀಗ ಬಾಯಿಂದ ಬಾಯಿಗೆ ಹರಡಿಕೊಂಡಿರೋ ಒಳ್ಳೆ ಮಾತುಗಳ ಮೂಲಕವೇ ಯಶಸ್ವೀ ಪ್ರದರ್ಶನ ಕಾಣುತ್ತಿದೆ.

    ಇದು ಅದಾಗ ತಾನೇ ಹದಿಹರೆಯದ ಹೊಸ್ತಿಲ ಬಳಿ ಹೆಜ್ಜೆಯಿಡುತ್ತಿರೋ ಹೈಸ್ಕೂಲು ಜೀವನದ ಕಥೆಯಾಧಾರಿತ ಚಿತ್ರ. ಅದು ಮೊದಲ ಪ್ರೇಮದ ಪುಳಕಗಳು ಎಳೇ ಮನಸೊಳಗೆ ಹುರಿಗೊಳ್ಳುವ ಕಾಲ. ಇಂಥಾ ಹೊತ್ತಿನಲ್ಲಿಯೇ ಬೆಂಗಳೂರಿನ ಒಳ್ಳೆಯ ಕುಟುಂಬದ ಕುಡಿಯಂತಿರೋ ನಾಯಕಿ ಮೀರಾ ಕೂಡಾ ಅಂಥಾದ್ದೇ ಭಾವಗಳಿಗೆ ಪಕ್ಕಾಗುತ್ತಾಳೆ. ಆಕೆಯ ಮನೋಭೂಮಿಕೆಯ ಇಶಾರೆಯ ಮೇರೆಗೆ ಇಡೀ ಕಥೆ ಕದಲುತ್ತದೆ. ಇಂಥಾ ಕಥೆಗಳು ಹೆಣ್ಣಿನ ಮೂಲಕ ನಿರೂಪಣೆಗೊಳ್ಳೋದೇ ಹೊಸ ವಿಚಾರ. ಅದನ್ನು ಮತ್ತಷ್ಟು ಹೊಸತನಗಳೊಂದಿಗೆ ರೂಪಾ ರಾವ್ ಕಟ್ಟಿ ಕೊಟ್ಟಿದ್ದಾರೆ. ಗಂಟು ಮೂಟೆ ಚಿತ್ರಕ್ಕೆ ರಾಜ್ಯಾದ್ಯಂತ ವ್ಯಾಪಕ ಬೆಂಬಲವೇ ತೋರಿ ಬರುತ್ತಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ವಿಚಾರದಲ್ಲಿಯೂ ಏರುಗತಿ ಕಾಣುತ್ತಿದೆ. ಈ ಎಲ್ಲ ಅಂಶಗಳೊಂದಿಗೆ ರೂಪಾ ರಾವ್ ನಿರ್ದೇಶನದ ಗಂಟುಮೂಟೆ ಗೆದ್ದಿದೆ.

  • ಗಂಟುಮೂಟೆ: ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ!

    ಗಂಟುಮೂಟೆ: ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ!

    ಬೆಂಗಳೂರು: ನಿರ್ದೇಶಕಿ ರೂಪಾ ರಾವ್ ಖಂಡಿತಾ ಒಂದು ಮ್ಯಾಜಿಕ್ ಮಾಡುತ್ತಾರೆ. ಹೀಗಂತ ಗಂಟುಮೂಟೆ ಚಿತ್ರದ ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಅಂದುಕೊಂಡಿದ್ದರು. ಹದಿಹರೆಯದ ಹತ್ತತ್ತಿರ ಸಾಗುತ್ತಿರೋ ಮನಸುಗಳ ಕಥೆಯ ಸುಳಿವಿನೊಂದಿಗೆ ಈ ಚಿತ್ರದ ಟ್ರೈಲರ್ ಅಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬಂದಿತ್ತು. ಇದೀಗ ಗಂಟುಮೂಟೆ ಪ್ರೇಕ್ಷಕರೆದುರು ತೆರೆದುಕೊಂಡಿದೆ. ಅದರೊಳಗೆ ಕಾಣಿಸಿದ ಹರೆಯದ ಹೊಸ್ತಿಲ ಮೋಹಕ ಲೋಕದ ಚಿತ್ತಾರ ಕಂಡು ಪ್ರತೀ ಪ್ರೇಕ್ಷಕರು ಮುದಗೊಂಡಿದ್ದಾರೆ.

    ಈಗಾಗಲೇ ಸಿನಿಮಾ ರಂಗದಲ್ಲಿ ಹಲವಾರು ವರ್ಷಗಳ ಅನುಭವ ಹೊಂದಿರುವ ರೂಪಾ ರಾವ್ ಅದನ್ನೆಲ್ಲ ಒಟ್ಟುಗೂಡಿಸಿಕೊಂಡು ಕನ್ನಡ ಪ್ರೇಕ್ಷಕರಿಗೆ ಹೊಸ ಬಗೆಯ ಲೋಕವನ್ನೇ ಈ ಮೂಲಕ ತೆರೆದಿಟ್ಟಿದ್ದಾರೆ. ಯಾವುದೇ ಕಥೆಗಳಾದರೂ ಹುಡುಗನ ಕಣ್ಣೋಟದಿಂದಲೇ ಬಿಚ್ಚಿಕೊಳ್ಳುತ್ತದೆ. ಆತನ ಮನೋಭೂಮಿಕೆಯ ಇಷಾರೆಯ ಮೇರೆಗೇ ಕಥೆ ಕದಲುತ್ತದೆ. ಆದರೆ ಈ ಚಿತ್ರದಲ್ಲಿ ಕಥೆ ಬಿಚ್ಚಿಕೊಳ್ಳೋದೇ ನಾಯಕಿ ಮೀರಾಳ ದೃಷ್ಟಿಯಲ್ಲಿ. ಇದರಾಚೆಗೆ ಚದುರಿಕೊಳ್ಳುವ ಕಥೆ ಹಲವು ದಿಕ್ಕುಗಳಲ್ಲಿ ವಿಸ್ತಾರಗೊಳ್ಳುತ್ತಾ ತಾಜಾ ಅನುಭವವನ್ನು ಪ್ರೇಕ್ಷಕರ ಎದೆ ತುಂಬುವಷ್ಟು ಇಲ್ಲಿನ ದೃಶ್ಯಗಳು ಶಕ್ತವಾಗಿವೆ.

    ಮೀರಾ ಎಂಬುದು ಈ ಚಿತ್ರದ ಕೇಂದ್ರ ಬಿಂದುವಿನಂಥಾ ಪಾತ್ರ. ಇದು ಬೆಂಗಳೂರಿನ ಮಧ್ಯಮ ವರ್ಗದ ಭೂಮಿಕೆಯಲ್ಲಿ ಜರುಗೋ ಕಥೆ. ಕಥಾ ನಾಯಕಿ ಮೀರಾ ಹೈಸ್ಕೂಲ್ ಹುಡುಗಿ. ಮೃದು ಮಧುರ ಸ್ವಭಾವದ ಮೀರಾಗೆ ಸಿನಿಮಾ ಗುಂಗು. ಆಕೆ ಹಿಂದಿ ಸಿನಿಮಾವೊಂದನ್ನು ನೋಡಿ ಸಲ್ಮಾನ್ ಖಾನ್ ಅಭಿಮಾನಿಯಾಗಿ ಬಿಟ್ಟಿರುತ್ತಾಳೆ. ಅದು ಎಷ್ಟರ ಮಟ್ಟಿಗೆಂದರೆ ತನ್ನ ಬದುಕಿನ ಪಲ್ಲಟಗಳನ್ನೂ ಕೂಡಾ ಆ ಚಿತ್ರದ ದೃಶ್ಯಗಳೇ ಎಂಬಷ್ಟು ತೀವ್ರವಾಗಿ ಫೀಲ್ ಮಾಡಿಕೊಳ್ಳುವಷ್ಟು. ಅಂಥಾ ಹುಡುಗಿಯಲ್ಲಿ ಹೈಸ್ಕೂಲು ತಲುಪುತ್ತಲೇ ಪ್ರೇಮದ ಭಾವಗಳು ಚಿಗುರಿಕೊಳ್ಳುತ್ತವೆ. ಅದರಲ್ಲಿಯೂ ಕೂಡಾ ಸಲ್ಮಾನ್ ಖಾನ್ ಚಿತ್ರದ ಚಹರೆಗಳಿರುತ್ತವೆ.

    ತನ್ನನ್ನು ಪ್ರೇಮಿಸೋ ಹುಡುಗ ಕೂಡಾ ಸಲ್ಮಾನ್ ಖಾನನಂತಿರಬೇಕೆಂಬುದು ಆಕೆಯ ಬಯಕೆ. ಈ ದೆಸೆಯಲ್ಲಿ ಮೀರಾ ಹುಡುಕಾಡಿ ಕಡೆಗೂ ತನ್ನದೇ ಕ್ಲಾಸ್ ರೂಮಿನ ಮಧು ಎಂಬ ಹುಡುಗನಲ್ಲಿ ಸಲ್ಮಾನ್ ಚಹರೆಗಳನ್ನು ಕಂಡುಕೊಳ್ಳುತ್ತಾಳೆ. ಆ ನಂತರ ಪ್ರೇಮ ಮೂಡಿಕೊಂಡು ಕಥೆಯ ಓಘ ತೀವ್ರವಾಗುತ್ತದೆ. ಆ ಮೇಲೇನಾಗುತ್ತದೆ ಅನ್ನೋದಕ್ಕೆ ರೂಪಾ ರಾವ್ ಅತ್ಯಂತ ಚುರುಕಾದ ಅಪರೂಪದ ಉತ್ತರವನ್ನೇ ಸೃಷ್ಟಿಸಿದ್ದಾರೆ. ಇಲ್ಲಿ ಭಾವ ತೀವ್ರತೆ ಇದೆ. ಹರೆಯದ ಕೀಟಲೆ, ಭೋಳೇತನ, ರೋಮಾಂಚಕ ಅಂಶಗಳು ಸೇರಿದಂತೆ ಎಲ್ಲವೂ ಇವೆ.

    ಮೀರಾ ಪಾತ್ರಧಾರಿ ತೇಜು ಬೆಳವಾಡಿ ಪಾಲಿಗಿದು ಮೊದಲ ಅನುಭವ. ಆದರೆ ಆಕೆ ಪಳಗಿದ ನಟಿಯಂತೆ ಈ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇವರಿಗೆ ಜೋಡಿಯಾಗಿ ಮಧು ಎಂಬ ಪಾತ್ರದಲ್ಲಿ ನಟಿಸಿರೋ ನಿಶ್ಚಿತ್ ಕೊರೋಡಿ ಕೂಡಾ ಚೆಂದಗೆ ನಟಿಸಿದ್ದಾರೆ. ರೂಪಾರಾವ್ ಈ ಮೂಲಕವೇ ತಾನು ಭಿನ್ನ ನೋಟದ ನಿರ್ದೇಶಕಿ ಎಂಬುದನ್ನು ಸಾಬೀತು ಪಡಿಸುತ್ತಲೇ ನಿರ್ದೇಶಕಿಯಾಗಿ ನೆಲೆಗೊಳ್ಳುವ ಭರವಸೆ ಮೂಡಿಸಿದ್ದಾರೆ. ಅಷ್ಟು ತೀವ್ರತೆಯಿಂದ ಅವರಿಲ್ಲಿ ತೊಂಭತ್ತರ ದಶಕದ ಪ್ರೇಮಕಾವ್ಯವನ್ನು ಕಟ್ಟಿ ಕೊಟ್ಟಿದ್ದಾರೆ. ಒಂದೊಳ್ಳೆ ಚಿತ್ರ ನೋಡಿದ ಅನುಭವಕ್ಕಾಗಿ ಖಂಡಿತಾ ಗಂಟುಮೂಟೆಯನ್ನೊಮ್ಮೆ ಎಲ್ಲರೂ ನೋಡಬಹುದು.

    ರೇಟಿಂಗ್-4/5