Tag: ನಿವೇಶನ ಹಂಚಿಕೆ

  • ಮಂಡ್ಯದ ಸರ್ಕಾರಿ ನೌಕರರ ಸಂಘದಲ್ಲಿ ಭಾರೀ ಗೋಲ್‍ಮಾಲ್

    ಮಂಡ್ಯದ ಸರ್ಕಾರಿ ನೌಕರರ ಸಂಘದಲ್ಲಿ ಭಾರೀ ಗೋಲ್‍ಮಾಲ್

    – ನಿವೇಶನ ಹಂಚಿಕೆಯಲ್ಲಿ 11ಕೋಟಿ 36 ಲಕ್ಷ ವಂಚನೆ
    – 1 ಕೋಟಿ 22 ಲಕ್ಷ ರಿಕವರಿ, 9 ಕೋಟಿ ಲಾಕ್

    ಮಂಡ್ಯ: ಬಹುದೊಡ್ಡ ಅವ್ಯವಹಾರ ಪ್ರಕರಣವೊಂದನ್ನ ಮಂಡ್ಯ ಪೊಲೀಸರು ಬಯಲಿಗೆಳೆದಿದ್ದಾರೆ. ನಿವೇಶನ ಹಂಚಿಕೆ ವಿಚಾರದಲ್ಲಿ ನಡೆದಿದ್ದ ಗೋಲ್‍ಮಾಲ್ ಪ್ರಕರಣವನ್ನ ಖಾಕಿ ಪಡೆ ಭೇದಿಸಿದ್ದು. ನೌಕರರ ಸಂಘದ ಸದಸ್ಯರಿಗೆ ವಂಚಿಸಲಾಗಿದ್ದ ಕೋಟ್ಯಾಂತರ ರೂಪಾಯಿ ಹಣ ಮರಳಿ ಪಡೆದಿದ್ದಾರೆ.

    ಮಂಡ್ಯದ ಸರ್ಕಾರಿ ನೌಕರರ ಸಂಘ ಸದಸ್ಯರಿಗೆ ನಿವೇಶನ ನೀಡುವ ಉದ್ದೇಶದಿಂದ 2004ರಲ್ಲಿ ಗೃಹ ನಿರ್ಮಾಣ ಸಮಿತಿ ರಚಿಸಿತ್ತು. ಆ ವೇಳೆ ಸಂಘದ ಅಧ್ಯಕ್ಷರಾಗಿದ್ದ ಟಿ.ಎಚ್.ರಾಮಕೃಷ್ಣ ಗೃಹ ನಿರ್ಮಾಣ ಸಮಿತಿಗೆ ಅಧ್ಯಕ್ಷರಾಗಿದ್ರು. ಪ್ರತಿಯೊಬ್ಬ ಸದಸ್ಯರಿಂದಲೂ ಲಕ್ಷಾಂತರ ಹಣ ಕಟ್ಟಿಸಿಕೊಂಡು, ಕೋಣನಹಳ್ಳಿ ಬಳಿ ಜಮೀನು ಖರೀದಿಸಲಾಗಿತ್ತು.

    ಅಷ್ಟರಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ನಿರ್ಮಾಣಕ್ಕಾಗಿ ಲೇಔಟ್ ಉದ್ದೇಶಿದ ಜಾಗದಲ್ಲಿ 1,02,000 ಚದುರ ಅಡಿ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಂಡಿತ್ತು. ಇದರಿಂದ ನೌಕರರಿಗೆ ನಿವೇಶನ ಹಂಚುವ ಕಾರ್ಯಕ್ಕೆ ಗ್ರಹಣ ಹಿಡಿದಿತ್ತು. ಆದರೆ ಸರ್ಕಾರ ಸ್ವಾಧೀನ ಪಡಿಸಿಕೊಂಡ ಜಾಗಕ್ಕೆ 11,36,42.375 ರೂ. ಪರಿಹಾರ ಘೋಷಿಸಿತ್ತು.

    ಈ ನಡುವೆ ಸರ್ಕಾರಿ ನೌಕರರ ಸಂಘಕ್ಕೆ ಮತ್ತೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾದ್ರೂ ಗೃಹ ನಿರ್ಮಾಣ ಸಮಿತಿಯ ಲೆಕ್ಕಪತ್ರ, ದಾಖಲೆಗಳನ್ನು ಟಿ.ಎಚ್.ರಾಮಕೃಷ್ಣ ಹಸ್ತಾಂತರಿಸಿರಲಿಲ್ಲ. ಎಲ್ಲಾ ದಾಖಲಾತಿಗಳನ್ನು ಬಳಸಿಕೊಂಡು ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಹೊಸ ಖಾತೆ ತೆರೆದು 11,36,42.375 ರೂ. ಪರಿಹಾರದ ಹಣವನ್ನು ಜಮೆ ಮಾಡಿಸಿಕೊಂಡಿದ್ದಾರೆ. ಬಳಿಕ ವೈಯಕ್ತಿಕ ಖಾತೆಗೆ 1 ಕೋಟಿಗೂ ಹೆಚ್ಚು ಹಣವನ್ನು ವರ್ಗಾವಣೆ ಮಾಡಿಕೊಂಡು ಫಲಾನುಭವಿಗೆ ತಲುಪಬೇಕಿದ್ದ ಹಣವನ್ನು ಗೋಲ್ ಮಾಲ್ ಮಾಡಿದ್ದಾರೆ.

    ಈ ಬಗ್ಗೆ ಸರ್ಕಾರಿ ನೌಕರರ ಸಂಘ ನೀಡಿದ್ದ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು ಪ್ರಕರಣದಲ್ಲಿ 1ಕೋಟಿ 22 ಲಕ್ಷ ವಶಪಡಿಸಿಕೊಂಡು ಬ್ಯಾಂಕ್ ಖಾತೆಯಲ್ಲಿದ್ದ 9 ಕೋಟಿ ಹಣವನ್ನ ತಡೆಹಿಡಿಯುವಂತೆ ಮಾಡಿದ್ದಾರೆ.

    ಇನ್ನು 16 ವರ್ಷದ ಹಿಂದೆಯೇ ಹಣ ಕಟ್ಟಿ ಇತ್ತ ಸೈಟೂ ಇಲ್ಲ, ಅಂತ ಹಣವೂ ಇಲ್ಲ ಅಂತಿದ್ದ ಸದಸ್ಯರು ಪೊಲೀಸರ ಕಾರ್ಯ ಶ್ಲಾಘಿಸಿದ್ದಾರೆ. ಸಂಘದ ಹಾಲಿ ಅಧ್ಯಕ್ಷ ಶಂಭೂಗೌಡ ಇನ್ನು ಹೆಚ್ಚಿನ ಹಣ ರಿಕವರಿ ಆಗಬೇಕು ಎಂದಿದ್ದು ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ಆಗ್ರಹಿಸಿದ್ದಾರೆ.

    ಮಂಡ್ಯ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದಾಗಿ ಬಹುದೊಡ್ಡ ಅವ್ಯವಹಾರ ಪ್ರಕರಣ ಬಯಲಾಗಿದ್ದು. ಸದ್ಯ ಇನ್ನು ತನಿಖೆ ಹಂತದಲ್ಲಿರುವ ಈ ಕೇಸ್‍ನಲ್ಲಿ ಮತ್ತಷ್ಟು ವಿಚಾರ ಬಹಿರಂಗವಾಗಬೇಕಿದೆ.

  • ಜಿ.ಪಂ ಸದಸ್ಯನ ಗೂಂಡಾಗಿರಿ – ನಿವೇಶನ ಹಂಚಿಕೆ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ

    ಜಿ.ಪಂ ಸದಸ್ಯನ ಗೂಂಡಾಗಿರಿ – ನಿವೇಶನ ಹಂಚಿಕೆ ವಿಚಾರದಲ್ಲಿ ವ್ಯಕ್ತಿ ಮೇಲೆ ಹಲ್ಲೆ

    ತುಮಕೂರು: ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ಮತ್ತು ಅವರ ಬೆಂಬಲಿಗರು ಶ್ಯಾಮ್ ಎಂಬ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರೋ ಘಟನೆ ತುಮಕೂರಿನಲ್ಲಿ ನಡೆದಿದೆ.

    ನಾರಾಯಣ ಮತ್ತು ಶ್ಯಾಮ್ ತಿಪಟೂರು ಬಳಿ ಲೇಔಟ್ ನಿರ್ಮಾಣ ಮಾಡುತ್ತಿದ್ದರು. ಅದರಲ್ಲಿನ ನಿವೇಶನಗಳ ಹಂಚಿಕೆ ವಿಚಾರದಲ್ಲಿ ಜಗಳ ನಡೆದಿದೆ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ಜಿ.ಪಂ ಸದಸ್ಯ ನಾರಾಯಣ ಮತ್ತು ಅವರ ಬೆಂಬಲಿಗರು, ಶ್ಯಾಮ್‍ನನ್ನು 2 ದಿನಗಳ ಹಿಂದೆ ಕಿಡ್ಯ್ನಾಪ್ ಮಾಡಿ ಮನಬಂದಂತೆ ಥಳಿಸಿದ್ದಾರೆ. ಇದರಿಂದ ಶ್ಯಾಮ್ ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು ತಿಪಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಹಲ್ಲೆಗೆ ಸಂಬಂಧಿಸಿದಂತೆ ಜಿ.ಪಂ ಸದಸ್ಯ ನಾರಾಯಣ ಮತ್ತು ಅವರ 8 ಜನ ಬೆಂಬಲಿಗರ ವಿರುದ್ಧ ತಿಪಟೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.