Tag: ನಿವೃತ್ತ ಲೋಕಾಯುಕ್ತ

  • ಕರ್ನಾಟಕದ ಮೊದಲ ಲೋಕಾಯುಕ್ತ ಎನ್. ವೆಂಕಟಾಚಲ ವಿಧಿವಶ

    ಕರ್ನಾಟಕದ ಮೊದಲ ಲೋಕಾಯುಕ್ತ ಎನ್. ವೆಂಕಟಾಚಲ ವಿಧಿವಶ

    ಬೆಂಗಳೂರು: ಕರ್ನಾಟಕ ಮೊದಲ ಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ್ದ ಎನ್. ವೆಂಕಟಾಚಲ(89) ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

    ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇಂದು ವೆಂಕಟಾಚಲ ಅವರು ವಿಧಿವಶರಾಗಿದ್ದಾರೆ. ವಯಾಲಿಕಾವಲ್ ಮನೆಯಲ್ಲಿ ವೆಂಕಟಾಚಲ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಕೋಲಾರ ಜಿಲ್ಲೆಯ ಮುಳಬಾಗಲು ತಾಲೂಕು ಮಿತ್ತೂರ್‍ನಲ್ಲಿ 1930, ಜುಲೈ 3 ರಂದು ವೆಂಕಟಾಚಲನವರು ಜನಿಸಿದರು. ನ್ಯಾ.ನಂಜೇಗೌಡ ವೆಂಕಟಾಚಲ ಅವರು ಬಿಎಸ್ಸಿ, ಬಿ ಎಲ್ ಪದವಿ ಪಡೆದಿದ್ದರು. 1955 ರಲ್ಲಿ ಕರ್ನಾಟಕ(ಮೈಸೂರು ರಾಜ್ಯ) ಹೈಕೋರ್ಟಿನ ವಕೀಲರಾಗಿದ್ದ ಅವರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

    1973 ರಿಂದ 1977ರವರೆಗೆ ಸರ್ಕಾರದಿಂದ ಕರ್ನಾಟಕ ಹೈಕೋರ್ಟಿನ ವಕೀಲರಾಗಿದ್ದ ವೆಂಕಟಾಚಲ ಅವರನ್ನು 1977 ರಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯ್ತು. ಹಾಗೆಯೇ 2001ರಿಂದ 2006ರವರೆಗೆ ಅವರು ಲೋಕಾಯುಕ್ತರಾಗಿ ಸೇವೆ ಸಲ್ಲಿಸಿ, ಭ್ರಷ್ಟರಲ್ಲಿ ನಡುಕ ಹುಟ್ಟಿಸಿದ್ದರು.

  • ಇಂದಿನ ರಾಜಕೀಯ ಪರಿಸ್ಥಿತಿಗೆ ಮತದಾರರೇ ಮೂಲ ಕಾರಣ – ಸಂತೋಷ್ ಹೆಗ್ಡೆ

    ಇಂದಿನ ರಾಜಕೀಯ ಪರಿಸ್ಥಿತಿಗೆ ಮತದಾರರೇ ಮೂಲ ಕಾರಣ – ಸಂತೋಷ್ ಹೆಗ್ಡೆ

    ಮೈಸೂರು: ರಾಜ್ಯಪಾಲರು ಕಾನೂನಾತ್ಮಕವಾಗಿನಡೆದುಕೊಂಡಿದ್ದಾರೆ. ಶಾಸಕರ ರೆಸಾರ್ಟ್ ರಾಜಕೀಯ ಮಾಡಿದರೆ ಮಾಡಲಿ. ರೆಸಾರ್ಟ್ ನವರಿಗೆ ಒಂದಷ್ಟು ದುಡ್ಡಾದರು ಆಗುತ್ತೆ ಅಂತ ನಿವೃತ್ತ ಲೋಕಯುಕ್ತ ಸಂತೋಷ್ ಹೆಗ್ಡೆ ಹೇಳಿದ್ದಾರೆ.

    ರಾಜ್ಯ ರಾಜಕಾರಣದ ಬೆಳವಣಿಗೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆಯೇ ಬಿಜೆಪಿಯವರು ಬಹುಮತ ಸಾಬೀತು ಮಾಡಬೇಕು ಎಂಬ ಸುಪ್ರಿಂ ಆದೇಶ ಸ್ವಾಗಾತಾರ್ಹವಾಗಿದೆ. ಕುದುರೆ ವ್ಯಾಪಾರವನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಅಂದ್ರು.

    ರಾಜ್ಯಪಾಲರು ಬಿಜೆಪಿಯನ್ನು ಮೊದಲು ಸರ್ಕಾರ ರಚನೆಗೆ ಆಹ್ವಾನ ಮಾಡಿದ್ದು ಸರಿ. ಇದರಲ್ಲಿ ಯಾವ ತಪ್ಪಿಲ್ಲ. ಆದರೆ ಬಹುಮತ ಸಾಬೀತಿಗೆ 15 ದಿನ ಕಾಲಾವಕಾಶ ನೀಡಿದ್ದು ತಪ್ಪು. ಇದನ್ನು ಸುಪ್ರಿಂ ಕೋರ್ಟ್ ಸರಿಪಡಿಸಿದೆ. ರಾಜ್ಯಪಾಲರ ನಡೆಯನ್ನು ರಾಜಕೀಯವಾಗಿ ಟೀಕೆ ಮಾಡುವುದು ಸುಲಭ. ರಾಜ್ಯಪಾಲರು ಕಾನೂನಾತ್ಮಕವಾಗಿ ನಡೆದುಕೊಂಡಿದ್ದಾರೆ ಅಂತ ಅವರು ಹೇಳಿದ್ರು.

    ಇವತ್ತಿನ ರಾಜ್ಯದ ರಾಜಕೀಯ ಪರಿಸ್ಥಿತಿಗೆ ಮತದಾರರೆ ಮೂಲ ಕಾರಣ. ಜಾತಿಗಾಗಿ, ಹಣಕ್ಕಾಗಿ ಮತಹಾಕಿರುವ ಪರಿಣಾಮ ಈ ರೀತಿ ಅಂತ್ರತರ ಸೃಷ್ಟಿಯಾಗಿದೆ ಇದು ಬೇಸರದ ಸಂಗತಿಯಾಗಿದೆ ಅಂತ ಹೆಗ್ಡೆ ಹೇಳಿದೆ.