Tag: ನಿರೂಪಕಿ

  • ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸ ನಿರೂಪಕಿ ಎಂಟ್ರಿ

    ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸ ನಿರೂಪಕಿ ಎಂಟ್ರಿ

    ಮುಂಬೈ: ಹಿಂದಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೊಸ ನಿರೂಪಕಿ ಎಂಟ್ರಿ ಕೊಟ್ಟಿದ್ದು, ಬಾಲಿವುಡ್ ಭಾಯ್‍ಜಾನ್ ಸಲ್ಮಾನ್ ಖಾನ್ ಶೋಯಿಂದ ಹೊರ ಬಂದಿದ್ದಾರೆ.

    ಸಲ್ಮಾನ್ ಖಾನ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೆ ವೈದ್ಯರು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಸಲ್ಮಾನ್ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಬರಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಲ್ಮಾನ್ ನರವೈಜ್ಞಾನಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದಿದ್ದಾರೆ. ಅಲ್ಲದೆ ಕೋಪ ಮಾಡಿಕೊಳ್ಳದಂತೆ ವೈದ್ಯರು ಸಲ್ಮಾನ್ ಅವರಿಗೆ ಸಲಹೆ ನೀಡಿದ್ದಾರೆ. ಆದರೆ ಪ್ರತಿವಾರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸಲ್ಮಾನ್ ಸ್ಪರ್ಧಿಗಳ ವಿರುದ್ಧ ಕೋಪ ಮಾಡಿಕೊಳ್ಳುತ್ತಾರೆ. ಹಾಗಾಗಿ ಸಲ್ಮಾನ್ ಈ ಕಾರ್ಯಕ್ರಮದಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.

    ನಿರ್ದೇಶಕಿ, ನಿರ್ಮಾಪಕಿ ಫರ್ಹಾ ಖಾನ್ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮುಂದಿನ ವಾರಗಳಲ್ಲಿ ಫರ್ಹಾ ಖಾನ್ ಬಿಗ್‍ಬಾಸ್ ನಿರೂಪಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಹಿಂದಿ ಬಿಗ್‍ಬಾಸ್‍ನ 13ನೇ ಆವೃತ್ತಿ ನಡೆಯುತ್ತಿದ್ದು, ಜನವರಿ ತಿಂಗಳಿನಿಂದ ಫರ್ಹಾ ಖಾನ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲಿದ್ದಾರೆ.

    ಸದ್ಯಕ್ಕೆ ಸಲ್ಮಾನ್ ಖಾನ್ ನಟನೆಯ `ದಬಾಂಗ್ 3′ ಸಿನಿಮಾ ಡಿಸೆಂಬರ್ 20 ರಂದು ಬಿಡುಗಡೆಯಾಗುತ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರದಲ್ಲಿ ತೊಡಗಿಕೊಂಡಿದೆ. ಪ್ರಭುದೇವ್ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್, ಸೋನಾಕ್ಷಿ ಸಿನ್ಹಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  • ಮದುವೆ ಬಗ್ಗೆ ಮೌನ ಮುರಿದ ನಿರೂಪಕಿ ಅನುಶ್ರೀ

    ಮದುವೆ ಬಗ್ಗೆ ಮೌನ ಮುರಿದ ನಿರೂಪಕಿ ಅನುಶ್ರೀ

    ಬೆಂಗಳೂರು: ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ ಶೀಫ್ರದಲ್ಲೇ ಮದುವೆಯಾಗಲಿದ್ದಾರೆ. ಅವರ ಮನೆಯಲ್ಲಿ ಈಗಾಗಲೇ ಹುಡುಗನನ್ನು ಹುಡುಕಲು ಶುರು ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದೀಗ ಸ್ವತಃ ಅನುಶ್ರೀ ಈ ಬಗ್ಗೆ ಮೌನ ಮುರಿದಿದ್ದಾರೆ.

    ಇತ್ತೀಚೆಗೆ ಅನುಶ್ರೀ ಪ್ರತಿಕೆಯೊಂದಕ್ಕೆ ಮದುವೆ ಬಗ್ಗೆ ಸಂದರ್ಶನ ನೀಡಿದ್ದರು. ಈ ವೇಳೆ ನೀವು ಶೀಘ್ರದಲ್ಲೇ ಮದುವೆ ಆಗುತ್ತಿದ್ದಿರಾ ಎಂಬ ಸುದ್ದಿ ಹರಿದಾಡುತ್ತಿದೆ ಎಂದು ಪ್ರಶ್ನಿಸಿದಾಗ ಅವರು ಈ ವಿಷಯವನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಈ ಸುದ್ದಿಯಿಂದ ನನಗೆ ಬೇಸರವಾಗಿದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ಅನು, ಈಗಾಗಲೇ ಅನೇಕರು ನನಗೆ ಹಲವು ಬಾರಿ ಮದುವೆ ಮಾಡಿಸಿದ್ದಾರೆ. ಹುಡುಗಿ ಎಂದಾಕ್ಷಣ ಮದುವೆ ಮಾಡುವ ಕಾತುರ ಈ ಜನಕ್ಕೆ ಏಕೆ ಬರುತ್ತೆ ಎಂದು ನನಗೆ ಗೊತ್ತಿಲ್ಲ. ಮದುವೆ ಎನ್ನುವುದು ನನ್ನ ಸ್ವಂತ ನಿರ್ಧಾರ. ನನ್ನ ವಿವಾಹವನ್ನು ಗುಟ್ಟಾಗಿಡುವ ಅವಶ್ಯಕತೆ ಇಲ್ಲ. ನಾನೇದಾರೂ ಮದುವೆಯಾದರೆ ಎಲ್ಲರಿಗೂ ತಿಳಿಸಿಯೇ ಆಗುತ್ತೇನೆ. ನನ್ನ ಮದುವೆ ಬಗ್ಗೆ ಪದೇ ಪದೇ ಸುಳ್ಳು ಸುದ್ದಿ ಹರಿದಾಡುತ್ತಿದೆ. ಇದರಿಂದ ನನಗೆ ತುಂಬಾ ಬೇಸರವಾಗಿದೆ ಎಂದು ತಿಳಿಸಿದ್ದಾರೆ.

    ಎಲ್ಲರೂ ಒಂದಲ್ಲಾ ಒಂದು ದಿನ ಮದುವೆಯಾಗಿಯೇ ಆಗುತ್ತಾರೆ. ಆದರೆ ನನ್ನ ಮದುವೆ ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ ಇದೆ. ಸದ್ಯಕ್ಕೆ ನಾನು ಮದುವೆ ಬಗ್ಗೆ ಯೋಚಿಸಿಲ್ಲ. ಅಲ್ಲದೆ ನನ್ನ ಮನೆಯವರು ಕೂಡ ಮದುವೆಯಾಗು ಎಂದು ಒತ್ತಾಯಿಸುತ್ತಿಲ್ಲ. ನನಗೆ ಇಲ್ಲದ ಮದುವೆ ಅವಸರ ಬೇರೆಯವರಿಗೆ ಏಕೆ ಇದೆ ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದರು.

    ಈಗ ನಾನು ನನ್ನ ವೃತ್ತಿಜೀವನದ ಬಗ್ಗೆ ಯೋಚಿಸುತ್ತಿದ್ದೇನೆ. ನನ್ನ ಮದುವೆ ಬಗ್ಗೆ ಯಾರಿಗೂ ಗೊಂದಲ ಬೇಡ. ನಾನು ಈಗಲೇ ಮದುವೆಯಾಗುತ್ತಿಲ್ಲ. ನನಗೆ ಇಷ್ಟವಾಗುವ ಹುಡುಗ ಕೂಡ ಸಿಕ್ಕಿಲ್ಲ. ಹುಡುಗನ ಆಯ್ಕೆಯಿಂದ ಮದುವೆತನಕ ಎಲ್ಲಾ ವಿಚಾರವನ್ನು ಬಹಿರಂಗಪಡಿಸುತ್ತೇನೆ. ಯಾವುದನ್ನು ಗುಟ್ಟಾಗಿ ಮಾಡುವುದಿಲ್ಲ. ಹೀಗಾಗಿ ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ತಮ್ಮ ಮದುವೆ ವಂದತಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

  • ಪತಿಯ ಮೊದಲ ಪತ್ನಿಯ ರಹಸ್ಯ ಬಿಚ್ಚಿಟ್ಟ ಸಮಂತಾ

    ಪತಿಯ ಮೊದಲ ಪತ್ನಿಯ ರಹಸ್ಯ ಬಿಚ್ಚಿಟ್ಟ ಸಮಂತಾ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಕಾರ್ಯಕ್ರಮವೊಂದರಲ್ಲಿ ತಮ್ಮ ಪತಿಯ ಮೊದಲ ಪತ್ನಿಯ ರಹಸ್ಯ ಬಿಚ್ಚಿಟ್ಟಿದ್ದಾರೆ.

    ಇತ್ತೀಚೆಗೆ ನಟಿ ಸಮಂತಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಿರೂಪಕಿ ಲಕ್ಷ್ಮಿ ಮಂಚು ಅವರು ಸಮಂತಾ ಅವರನ್ನು ಬೆಡ್‍ರೂಂ ಸೀಕ್ರೆಟ್ ಹಂಚಿಕೊಳ್ಳುವಂತೆ ಕೇಳುತ್ತಾರೆ. ಆದರೆ ಸಮಂತಾ ಇದಕ್ಕೆ ನಿರಾಕರಿಸುತ್ತಾರೆ.

    ಸಮಂತಾ ನಿರಾಕರಿಸುತ್ತಿದ್ದಂತೆ ನಿರೂಪಕಿ ಲಕ್ಷ್ಮಿ ಅವರು, ನೀವು ಈಗ ನಿಮ್ಮ ಎಲ್ಲ ರಹಸ್ಯ ಬಿಚ್ಚುಡುವಂತೆ ಮಾಡುತ್ತಿದ್ದೀರಾ. ಮದುವೆಗೂ ಮೊದಲು ನೀವು ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿ ಇದ್ದೀರಿ ಎಂಬ ವಿಷಯ ನನಗೆ ಗೊತ್ತು ಎಂದು ಹೇಳಿದ್ದಾರೆ. ಬಳಿಕ ಮದುವೆ ನಂತರ ನಿಮ್ಮ ಬೆಡ್‍ರೂಂನಲ್ಲಿ ಬದಲಾದ ಮೂರು ವಿಷಯ ತಿಳಿಸಿ ಎಂದು ಪ್ರಶ್ನಿಸಿದ್ದಾರೆ.

    ಈ ವೇಳೆ ಸಮಂತಾ ಅವರು, “ಚೈತನ್ಯ ಅವರ ಮೊದಲ ಪತ್ನಿ ದಿಂಬು. ನಾನು ಚೈತನ್ಯ ಅವರಿಗೆ ಕಿಸ್ ಮಾಡಬೇಕು ಎಂದರೆ ದಿಂಬು ಯಾವಾಗಲೂ ನಮ್ಮಿಬ್ಬರ ನಡುವೆ ಬರುತ್ತದೆ” ಎಂದರು. ಸ್ವಲ್ಪ ಹೊತ್ತಿನ ಬಳಿಕ ಸಮಂತಾ, “ನಾನು ಈಗ ಸಾಕಷ್ಟು ವಿಷಯ ಹೇಳಿದ್ದೇನೆ ಅನಿಸುತ್ತೆ. ಈಗ ಇಷ್ಟು ಸಾಕು” ಎಂದು ಹೇಳಿದ್ದಾರೆ.

    ಸಮಂತಾ ಅವರು 2017, ಅಕ್ಟೋಬರ್ ತಿಂಗಳಲ್ಲಿ ನಟ ನಾಗಚೈತನ್ಯ ಅವರ ಜೊತೆ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದರು. ಮೊದಲು ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದ ಪಾಕ್ ನಿರೂಪಕಿ ಟ್ರೋಲ್: ವಿಡಿಯೋ

    ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದ ಪಾಕ್ ನಿರೂಪಕಿ ಟ್ರೋಲ್: ವಿಡಿಯೋ

    ಇಸ್ಲಾಮಾಬಾದ್: ಪಾಕಿಸ್ತಾನದ ಟಿವಿ ಚಾನೆಲ್ ನಿರೂಪಕಿಯೊಬ್ಬರು ಆ್ಯಪಲ್ ಕಂಪನಿಯನ್ನು ಹಣ್ಣು ಎಂದು ತಿಳಿದು ಟ್ರೋಲ್ ಆಗುತ್ತಿದ್ದಾರೆ.

    ಪಾಕಿಸ್ತಾನದ ಆರ್ಥಿಕ ವಿಚಾರಕ್ಕೆ ಸಂಬಂಧಿಸಿದ ನೇರ ಪ್ರಸಾರದಲ್ಲಿ ಸಾಫ್ಟ್ ವೇರ್ ದಿಗ್ಗಜ ಆ್ಯಪಲ್ ಕಂಪನಿಯ ವಾರ್ಷಿಕ ಬಜೆಟ್ ಪಾಕಿಸ್ತಾನದ ಬಜೆಟ್‍ಗಿಂತಲೂ ಹಲವಾರು ಪಟ್ಟು ಹೆಚ್ಚಾಗಿದೆ ಎಂದು ಪತ್ರಕರ್ತ ನೈಲಾ ಇನಾಯತ್ ಹೇಳಿದ್ದರು.

    ಈ ವೇಳೆ ನಿರೂಪಕಿ,” ಹೌದು. ಸೇಬಿನ ವ್ಯಾಪಾರವು ಅಭಿವೃದ್ಧಿ ಹೊಂದುತ್ತಿದೆ. ಅದರಲ್ಲಿ ಹಲವು ರೀತಿಯ ವೈವಿಧ್ಯಗಳಿವೆ, ನಾನು ಈ ಬಗ್ಗೆ ಕೇಳಿದ್ದೇನೆ ಎಂದು ಹೇಳಿದ್ದಾರೆ. ತಕ್ಷಣ ಅತಿಥಿ ನೈಲಾ ಇನಾಯತ್ ನಾನು ಸಾಫ್ಟ್ ವೇರ್ ಕಂಪನಿ ಆ್ಯಪಲ್ ಬಗ್ಗೆ ಹೇಳುತ್ತಿದ್ದೇನೆ ವಿನಃ ಸೇಬಿನ ಹಣ್ಣಿನ ಬಗ್ಗೆ ಅಲ್ಲ ಎಂದು ಕಾಲೆಳೆದಿದ್ದಾರೆ.

    ಜುಲೈ 4ರಂದು ಪಾಕಿಸ್ತಾನದ ಪತ್ರಕರ್ತ ಈ ವಿಡಿಯೋವನ್ನು ಟ್ವೀಟ್ ಮಾಡಿಕೊಂಡಿದ್ದರು. ಆ್ಯಪಲ್ ಬಗ್ಗೆ ಆಂಕರ್ ಕನ್‍ಫ್ಯೂಸ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಜನರು ವಿಧವಿಧವಾಗಿ ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಈ ವಿಡಿಯೋ ನೋಡಿ ಕೆಲವರು ಇದು ನ್ಯೂಸ್ ಚಾನೆಲ್ ಅಥವಾ ಕಾಮಿಡಿ ಚಾನೆಲಾ ಎಂದು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ತುಂಬಾ ಕೆಟ್ಟ ನಿರೂಪಣೆ. ಈ ಕಾರ್ಯಕ್ರಮ ಮುಗಿದ ಮೇಲೆ ಧಾನ್ಯಗಳ ಬಗ್ಗೆಯೂ ಮಾತನಾಡಿ ಎಂದು ಟ್ವೀಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

  • ಅನುಶ್ರೀಗೆ ಸಿಕ್ತು ಹೊಸ ಬಿರುದು

    ಅನುಶ್ರೀಗೆ ಸಿಕ್ತು ಹೊಸ ಬಿರುದು

    ಬೆಂಗಳೂರು: ಕಿರುತೆರೆಯಲ್ಲಿ ತಮ್ಮ ನಿರರ್ಗಳ ಮಾತಿನ ಮೂಲಕ ಚಾಪು ಮೂಡಿಸಿರುವ ಕರಾವಳಿ ತೀರದ ಬೆಡಗಿ ಅನುಶ್ರೀ ಅವರಿಗೆ ಹೊಸ ಬಿರುದನ್ನು ನಾದಬ್ರಹ್ಮ, ಸ್ವರದಿಗ್ಗಜ ಹಂಸಲೇಖ ನೀಡಿದ್ದಾರೆ.

    ಖಾಸಗಿ ವಾಹಿನಿಯ ಸಂಗೀತ ಕಾರ್ಯಕ್ರಮದ ನಿರೂಪಕಿಯಾಗಿರುವ ಅನುಶ್ರೀ ಎಲ್ಲರ ಅಚ್ಚುಮೆಚ್ಚಿನ ತಾರೆ. ಕಾರ್ಯಕ್ರಮದ ಮಹಾತೀರ್ಪುಗಾರರ ಸ್ಥಾನದಲ್ಲಿರುವ ಹಂಸಲೇಖ ಹೊಸ ಬಿರುದು ನೀಡಿ ಅನುಶ್ರೀ ಅವರ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಮಾತಿನ ಮಲ್ಲಿ, ಚಿನಕುರುಳಿ, ಪಟ್ ಪಟಾಕಿ ಹೀಗೆ ಅನುಶ್ರೀಯವರನ್ನ ಕರೆಯುವುದುಂಟು. ಇದೀಗ ‘ಪ್ರಸಂಗಗೀತ’ ಎಂಬ ಹೊಸ ಕನ್ನಡ ಬಿರುದನ್ನು ಹಂಸಲೇಖ ನೀಡಿದ್ದಾರೆ. ಪ್ರಸಂಗಗೀತ ಬಿರುದು ಪಡೆದ ಅನುಶ್ರೀ ಸಂತೋಷವನ್ನು ವ್ಯಕ್ತಪಡಿಸಿದರು.

    ಈ ಶನಿವಾರ ಪ್ರಸಾರವಾದ ಸಂಗೀತ ಕಾರ್ಯಕ್ರಮದ ಆರಂಭದಲ್ಲಿಯೇ ಹಂಸಲೇಖ ಇನ್ನ್ಮುಂದೆ ಪ್ರಸಂಗಗೀತ ಅನುಶ್ರೀ ಎಂದು ಹೇಳಿದರು. ಪರಸಂಗದ ತಿಮ್ಮದ ಅಂದ್ರೆ ಪರರ ಕತೆಗಳನ್ನು ವರ್ಣರಂಜಿತವಾಗಿ ಹೇಳುವ ವ್ಯಕ್ತಿ. ಸಂಗೀತ ಕಾರ್ಯಕ್ರಮದಲ್ಲಿಯೇ ಎಲ್ಲರ ಕತೆಯನ್ನು ಗೀತೆಯ ಮೂಲಕ ಹೇಳುವ ನಿರೂಪಕಿಯನ್ನು ಕನ್ನಡದಲ್ಲಿ ಪ್ರಸಂಗಗೀತ ಎಂದು ಕರೆತಯುತ್ತಾರೆ ಅಂತಾ ಹಂಸಲೇಖ ತಿಳಿಸಿದರು.

    ಹೊಸ ಬಿರುದು ಪಡೆದ ಆನುಶ್ರೀ ಚಪ್ಪಾಳೆಯ ಮೂಲಕ ಹಂಸಲೇಖರಿಗೆ ಧನ್ಯವಾದ ಅರ್ಪಿಸಿದರು. ಖುದ್ದು ಮಹಾ ಗುರುಗಳಾದ ಹಂಸಲೇಖ ಅವರು ನನಗೆ ಬಿರುದು ನೀಡಿದ್ದು, ಮುಂದಿನ ಸಂಚಿಕೆಯಿಂದ ನನ್ನ ಸಂಭಾವನೆಯಲ್ಲಿ ಹೆಚ್ಚಳ ಮಾಡಿ ಎಂದು ಹೇಳುವ ಮೂಲಕ ಎಲ್ಲರನ್ನು ನಗೆಯಲ್ಲಿ ತೇಲುವಂತೆ ಮಾಡಿದರು.

  • ಪ್ಯಾಂಟ್ ಧರಿಸಿ ಬಂದ ನಿರೂಪಕಿ ಮೇಲೆ ಬಿಜೆಪಿ ನಾಯಕಿ ಗರಂ!

    ಪ್ಯಾಂಟ್ ಧರಿಸಿ ಬಂದ ನಿರೂಪಕಿ ಮೇಲೆ ಬಿಜೆಪಿ ನಾಯಕಿ ಗರಂ!

    ಗಾಂಧಿನಗರ: ಇತ್ತೀಚೆಗೆ ಬಿಜೆಪಿ ಪಕ್ಷ ಸೇರಿರುವ ನಟಿ ಮೌಸಾಮಿ ಚಟರ್ಜಿ ಕಾರ್ಯಕ್ರಮವೊಂದರಲ್ಲಿ ಪ್ಯಾಂಟ್ ಧರಿಸಿದ್ದ ನಿರೂಪಕಿಯ ಮೇಲೆ ಗರಂ ಆಗಿದ್ದಾರೆ.

    ಸೋಮವಾರ ಗುಜರಾತಿನ ಸೂರತ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಮೌಸಾಮಿ ಚಟರ್ಜಿ ಭಾಗವಹಿಸಿದ್ದರು. ಕಾರ್ಯಕ್ರಮ ಆರಂಭಿಸಿದ ನಿರೂಪಕಿ ವೇದಿಕೆಯ ಮೇಲೆ ಆಸೀನರಾಗಿರುವ ಎಲ್ಲ ಗಣ್ಯರನ್ನು ಪರಿಚಯಿಸಿ ಸ್ವಾಗತಿಸುತ್ತಿದ್ದರು. ಈ ಸಂದರ್ಭದಲ್ಲಿ ನಟಿ ಹಾಗೂ ಬಿಜೆಪಿ ನಾಯಕಿಯಾಗಿರುವ ಮೌಸಮಿ ಅವರನ್ನು ಪರಿಚಯಿಸಿದರು. ಜನರನ್ನು ಉದ್ದೇಶಿಸಿ ಮಾತನಾಡುವಾಗ ಮೌಸಮಿ, ಪ್ಯಾಂಟ್ ಧರಿಸಿದ್ದ ನಿರೂಪಕಿಗೆ ಬಹಿರಂಗವಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಈ ರೀತಿಯ ಕಾರ್ಯಕ್ರಮಕ್ಕೆ ಪ್ಯಾಂಟ್ ಧರಿಸಿಕೊಂಡು ಬರಬಾರದು. ಪ್ಯಾಂಟ್ ಬದಲು ಸೀರೆ, ಕುರ್ತಾ, ಪೈಜಾಮ ಮತ್ತು ಚೂಡಿದಾರ್ ಧರಿಸಿಕೊಂಡು ಬರಬೇಕು. ಇದು ಸರಿಯಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ನಿರೂಪಕಿ ಏನನ್ನು ಪ್ರತಿಕ್ರಿಯಿಸದೇ ಸುಮ್ಮನಾಗಿದ್ದರು. ನಾನು ಒಬ್ಬ ಭಾರತೀಯ ಮಹಿಳೆಯಾಗಿದ್ದು, ಇಂದಿನ ಯುವಜನತೆಗೆ ಯಾವ ರೀತಿಯ ಉಡುಗೆಯನ್ನು ಧರಿಸಬೇಕು ಹೇಳುವ ಹಕ್ಕು ನನಗಿದೆ. ನಿರೂಪಕಿಗೆ ತಾಯಿಯ ಸ್ಥಾನದಲ್ಲಿ ನಿಂತು ಉಡುಗೆ-ತೊಡುಗೆಯ ಬಗ್ಗೆ ಸಲಹೆ ನೀಡಿದ್ದೇನೆ. ನನ್ನ ಹೇಳಿಕೆಗೂ ಮತ್ತು ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂಬುದನ್ನು ಚಟರ್ಜಿ ಸ್ಪಷ್ಟಪಡಿಸಿದ್ದಾರೆ.

    ಮೌಸಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾರ್ಯಕ್ರಮ ಆಯೋಜಕ ಉಮೇಶ್ ಮೆಹ್ತಾ, ನನಗೂ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಸೂರತ್ ಬಿಜೆಪಿ ಮುಖ್ಯಸ್ಥ ನಿತಿನ್ ಭಾಯಿವಾಲಾ, ಅಧ್ಯಕ್ಷ ಪಿ.ವಿ.ಎಸ್ ಮತ್ತು ಇತರೆ ಪಕ್ಷದ ಮುಖಂಡರು ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಲಾಗಿತ್ತು. ಕಾರ್ಯಕ್ರಮದ ನಿರೂಪಣೆಗಾಗಿ ಪರಿಚಯದ ಯುವತಿಯನ್ನು ಕರೆಸಲಾಗಿತ್ತು. ನಿರೂಪಣೆಗಾಗಿ ಯುವತಿಗೆ ಸಂಭಾವನೆಯನ್ನು ನೀಡಲಾಗಿದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಿದ್ದಾರೆ.

    ಜನವರಿ 2ರಂದು ಮೌಸಮಿ ಚಟರ್ಜಿ ಅಧಿಕೃತವಾಗಿ ಬಿಜೆಪಿ ಸೇರಿದ್ದರು. ಸೂರತ್ ನಗರದ ಬಿಜೆಪಿ ಮುಖಂಡರಿಂದ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮೌಸಮಿ ಚಟರ್ಜಿ ಹಾಜರಾಗಿದ್ದರು. ಈ ಹಿಂದೆ ಮೌಸಮಿ ಚಟರ್ಜಿ ಕಾಂಗ್ರೆಸ್ ನಲ್ಲಿಯೂ ಗುರುತಿಸಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್ರೂ ನೋಡ್ತಾ ಇರ್ಬೇಕಿದ್ರೆ, ಆಕೆಯನ್ನ ಇಗ್ನೋರ್ ಮಾಡುವಂತಿರಬೇಕಂತೆ ಅನು `ಚಿನ್ನು’

    ಎಲ್ರೂ ನೋಡ್ತಾ ಇರ್ಬೇಕಿದ್ರೆ, ಆಕೆಯನ್ನ ಇಗ್ನೋರ್ ಮಾಡುವಂತಿರಬೇಕಂತೆ ಅನು `ಚಿನ್ನು’

    ಈ ಹಿಂದೆ ಹೇಳಿದ್ದಂತೆ ನನಗೆ ತುಂಬಾ ಬೆಳ್ಳಗಿರುವ ಹುಡುಗರು ಇಷ್ಟ ಆಗಲ್ಲ. ಯಾಕೆಂದ್ರ ನಾನು ಅಷ್ಟಾಗಿ ಬೆಳ್ಳಗಿಲ್ಲ. ಹುಡುಗ ನೋಡೊದಕ್ಕೆ ಎಲ್ಲರಿಕ್ಕಿಂತಲೂ ಭಿನ್ನವಾಗಿಯೇ ಇರಬೇಕು. ಎಲ್ಲರೂ ನನ್ನನ್ನೇ ನೋಡ್ತಿದ್ದರೆ, ಆತ ನನ್ನನ್ನು ಇಗ್ನೋರ್ ಮಾಡುವಂತಿರಬೇಕು. ಉದಾಹರಣೆಗೆ ಹಿಂದಿಯ ‘ಕಭಿ ಖುಷಿ ಕಭಿ ಗಮ್’ ಸಿನಿಮಾದಲ್ಲಿಯಂತೆ ಕರೀನಾ ಕಪೂರ್ ಹೇಳುವ ಹಾಗೆ ಯಾರವನು ನನ್ನನ್ನೇ ನೋಡ್ತಿಲ್ಲ ಅನ್ನುವಂತಿರಬೇಕು ಅಂತ ನಿರೂಪಕಿ ಅನುಶ್ರೀ ಹೇಳಿದ್ದಾರೆ.

    ಹಿಂದೆಲ್ಲಾ ಗಾಳಿ ಬೀಸುತ್ತೆ.. ಒಂದು ರೀತಿ ಎಲ್ಲ ನಿಧಾನಕ್ಕೆ ಚಲಿಸುವಂತೆ ಫೀಲ್ ಆಗುತ್ತೆ.. ನಾನು ಅವನನ್ನ ನೋಡಿದಾಗ ದಿಢೀರ್ ಅಂತಾ ನಾಚಿಕೆ ಬರಬೇಕು.. ಈ ರೀತಿಯಲ್ಲಿ ಯಾರನ್ನು ನೋಡಿದಾಗ ಆಗುತ್ತೆ ಅವನೇ ನನ್ನ `ಚಿನ್ನು’ ಎಂದು ಮನದಾಳದ ಮಾತನ್ನು ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದ ವೇಳೆ ರಿವೀಲ್ ಮಾಡಿದ್ರು.

    ಇದೂವರೆಗೂ ಯಾರನ್ನು ನೋಡಿದರೂ ಆ ರೀತಿಯ ನಾಚಿಕೆ ಬಂದಿಲ್ಲ. ಏನ್ಮಾಡೋದು ಸಿಂಗಲ್ ಆಗಿದ್ದೇನೆ. ಗೊತ್ತಿಲ್ಲದೇ ಮುಖದಲ್ಲಿ ಒಂದು ರೀತಿಯ ನಾಚಿಕೆ ಬರಬೇಕು. ಹಿಂದೆ ಹೇಳುವ ಹಾಗೆ ಕಾಲಿನ ಹೆಬ್ಬೆರಳು ನೆಲ ಉಜ್ಜುವಂತೆ ಆಗಬೇಕು ಅನ್ನುವ ಫೀಲ್ ಆಗ್ಬೇಕು ಅಂತ ಹೇಳಿ ನಕ್ಕು ಬಿಟ್ಟರು.

    ಅಮ್ಮ ಮನೆಯಲ್ಲಿ ಗಂಡು ನೋಡಲಾ ಅಂತಾ ಹೇಳಿದ್ರು. ನನಗೂ ಜ್ಯೂಸ್, ಕಾಫಿ ಕಪ್ ಹಿಡಿದುಕೊಂಡು ಬರುವ ಅನುಭವ ಆಗಲಿ ಅಂತಾ ಹೇಳಿದ್ದೆ. ಒಂದು ಸಾರಿ ಇದನ್ನ ನನ್ನ ಫ್ರೆಂಡ್ ಗೆ ಹೇಳಿದಾಗ, ನಿನ್ನನ್ನು ನೋಡೋದಕ್ಕೆ 20 ಜನರು ಬಂದ್ರೆ ನೀನು ಸರ್ವರ್ ರೀತಿ ಆಗ್ತೀಯಾ ಅಂತಾ ಹೇಳಿದರು. ಹಾಗಾಗಿ ಆ ಪ್ಲಾನ್ ಕ್ಯಾನ್ಸಲ್ ಮಾಡಿದ್ದೀನಿ ಅಂದ್ರು.

    ಎಲ್ಲರಿಗೂ ಜ್ಯೂಸ್, ಉಪ್ಪಿಟ್ಟು ಕೊಡುತ್ತಿರೋದು ಆಗುತ್ತದೆ. ಅಂತಾ ಅಮ್ಮನಿಗೆ ಹೇಳಿ ಆ ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿದ್ದೀನಿ. ಮಗಳಿಗೆ ಒಂದು ಕೆರಿಯರ್ ಇದೆ ಅಂತಾ ಅಮ್ಮನೂ ಒಪ್ಪಿಕೊಂಡಿದ್ದಾರೆ. ಹುಡುಗಿಯರಿಗೆ ಮದುವೆ ಜೀವನದ ಪ್ರಮುಖ ಘಟ್ಟ ಅನ್ನೋದು ಸ್ವಲ್ಪ ಬದಲಾಗಿದೆ. ಇಂದು ಹಲವರು ತಡವಾಗಿ ಮದುವೆ ಆಗುತ್ತಾರೆ. ಅದನ್ನು ಇಂದು ತುಂಬಾ ಜನ ಒಪ್ಪಿಕೊಂಡಿದ್ದಾರೆ ಅಂತ ಹೇಳಿದ್ರು. ಇದನ್ನೂ ಓದಿ: ನಟ ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ ಅಂದ್ರು ಆ್ಯಂಕರ್ ಅನುಶ್ರೀ!

    ಇದೂವರೆಗೂ ನನಗೆ ಒಬ್ಬರೂ ಪ್ರಪೋಸ್ ಮಾಡಿಲ್ಲ. ಒಂದು ಸಲ ನನ್ನ ಫ್ರೆಂಡ್ಸ್ ಜೊತೆ `ಯಾಕೆ ಯಾರು ನನಗೆ ಪ್ರಪೋಸ್ ಮಾಡಲ್ಲ? ನಾನು ನೋಡೊದಕ್ಕೆ ಚೆನ್ನಾಗಿ ಇಲ್ವಾ?’ ಅಂತಾ ಕೇಳಿದ್ದಕ್ಕೆ ಸೋಶಿಯಲ್ ಆಗಿ ಎಲ್ಲರ ಜೊತೆ ಬೆರೆಯಬೇಕು ಅಂತಾ ಹೇಳಿದ್ರು. ಒಂದು ಸಾರಿ ಎಲ್ಲರ ಜೊತೆ ಪಬ್ ಗೆ ಹೋಗಿದ್ದಾಗ ಅಲ್ಲಿ ಫುಲ್ ಕತ್ತಲು. ಇದರಿಂದ ಗಾಬರಿಗೊಂಡ ನಾನು ಬಳಿಕ ಅಲ್ಲಿಗೆ ಹೋಗಲೇ ಇಲ್ಲ. ಹೀಗಾಗಿ ಶೂಟಿಂಗ್ ಮುಗಿದ ಕೂಡಲೇ ಮನೆಗೆ ಬಂದು ಬಿಡುತ್ತೇನೆ ಅಷ್ಟೇ ನನ್ನ ಜೀವನ ಅಂದ್ರು.

    ಒಮ್ಮೆ ಒಬ್ಬ ಮಹಿಳೆ ತನ್ನ ಮಗನ ಫೋಟೋ, ಜಾತಕ, ಉದ್ಯೋಗ ಮಾಹಿತಿ ಬರೆದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಪತ್ರ ಬರೆದಿದ್ದರು. ಇದನ್ನು ಅನುಶ್ರೀ ಅವರಿಗೆ ತಲುಪಿಸಬೇಕೆಂದು ಪತ್ರದಲ್ಲಿ ಬರೆದಿದ್ದರು. ಅರ್ಜುನ್ ಸರ್ ಬಂದು, ಮೇಡಂ ಪತ್ರ ನೋಡಿ ಅಂತಾ ಕೊಟ್ಟರು. ಒಂದು ಕ್ಷಣ ತುಂಬಾ ನಗು ಬಂತು. ಎಲ್ಲೋ ದೂರದಲ್ಲಿರುವ ತಾಯಿ ನನ್ನಲ್ಲಿ ಅವರ ಸೊಸೆ ಆಗುವ ಗುಣಲಕ್ಷಣ ನೋಡಿದ್ದಾರೆ ಅಂದ್ರೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ಕಾರ್ಯಕ್ರಮಗಳ ಮೂಲಕ ನಾನು ಜನರಿಗೆ ಎಷ್ಟು ಹತ್ತಿರ ಅಗಿದ್ದೀನಿ ಎಂಬುದು ಪತ್ರದ ಮೂಲಕ ತಿಳಿಯಿತು ಅಂತ ಹೇಳಿದ್ರು.  ಇದನ್ನೂ ಓದಿ: ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

    ಸ್ಕೂಲ್ ಟೈಮಲ್ಲಿ ತುಂಬಾನೇ ಪ್ರಪೋಸ್ ಬರುತ್ತಿತ್ತು. ಆದ್ರೆ ನಿರೂಪಕಿ ಆದ್ಮೇಲೆ ಒಂದು ಲೆಟರ್ ಸಹ ಬಂದಿಲ್ಲ. ಪರಿಚಯದಲ್ಲಿ ಗಂಡು ನೋಡಲಾ ಅಂತಾ ಅಮ್ಮ ಹೇಳ್ತಾ ಇರ್ತಾರೆ. ಆದ್ರೆ ಆಗಬೇಕಾದ ಸಮಯದಲ್ಲಿ ಎಲ್ಲವೂ ನಡೆಯುತ್ತದೆ ಅಂತಾ ಹೇಳಿದ್ದೀನಿ ಅಂತ ತನ್ನ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=tjMufAL6i9U

  • ನಟ ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ ಅಂದ್ರು ಆ್ಯಂಕರ್ ಅನುಶ್ರೀ!

    ನಟ ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ ಅಂದ್ರು ಆ್ಯಂಕರ್ ಅನುಶ್ರೀ!

    ಬೆಂಗಳೂರು: ಸಮಯ ಪರಿಪಾಲನೆ ಮಾಡೋದಕ್ಕೆ ನಟ ಶಂಕರ್ ನಾಗ್ ಅವರೇ ನನಗೆ ಸ್ಫೂರ್ತಿ ಅಂತ ನಿರೂಪಕಿ ಅನುಶ್ರೀ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಮಾತನಾಡಿದ ಅವರು, ಸುಮಾರು 8 ವರ್ಷಗಳ ಹಿಂದೆ ನಾನು ಟೈಮ್ ಗೆ ಅಷ್ಟೊಂದು ಮಹತ್ವ ಕೊಡುತ್ತಿರಲಿಲ್ಲ. ಆದ್ರೆ ಒಂದು ಬಾರಿ ರವಿಚಂದ್ರನ್ ಅವರು ಶಂಕರ್ ನಾಗ್ ಅವರ ಬಗ್ಗೆ ಹೇಳಿದ ಬಳಿ ನಾನು ಸಮಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೇನೆ ಅಂತ ಹೇಳಿದ್ರು.

    ರವಿಚಂದ್ರನ್ ಏನ್ ಹೇಳಿದ್ದರು?:
    ಒಂದು ಸಾರಿ ರವಿಚಂದ್ರನ್ ಸಂದರ್ಶನವೊಂದರಲ್ಲಿ, ಸ್ಯಾಂಡಲ್‍ವುಡ್ ನಲ್ಲಿ ತಾನು 24 ಗಂಟೆ ಹೀಗೆ ಇರಬೇಕು ಎಂಬುದನ್ನು ನಿಗದಿ ಮಾಡಿಕೊಂಡು ಪಾಲನೆ ಮಾಡುತ್ತಿದ್ದ ಏಕೈಕ ವ್ಯಕ್ತಿ ಅಂದ್ರೆ ಅದು ಶಂಕರ್ ನಾಗ್ ಅಂತಾ ಹೇಳಿದ್ದರು. ಅಂದು ರವಿಚಂದ್ರನ್ ಮಾತು ಕೇಳಿದಾಗಿನಿಂದ ಸಮಯಕ್ಕೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದೇನೆ ಅಂದ್ರು. ಇದನ್ನೂ ಓದಿ: ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

    ಅಂದಿನ ಕಾಲದಲ್ಲಿ ‘ಒಂದು ಮುತ್ತಿನ ಕಥೆ’ ಸಿನಿಮಾದಲ್ಲಿ ಅಂಡರ್ ವಾಟರ್‍ನಲ್ಲಿ ಶೂಟಿಂಗ್ ಮಾಡಿದ್ದಾರೆ. ಶೂಟಿಂಗ್ ಸಮಯದಲ್ಲಿ ಕೆಲವರು ತಡವಾಗಿ ಬಂದಾಗ ಮೊದಲಿಗೆ ಕೋಪ ಬರುತ್ತಿತ್ತು. ಒಂದು ಕ್ಷಣ ಯೋಚಿಸಿದಾಗ 8 ವರ್ಷಗಳ ಹಿಂದೆ ನಾನು ಹಾಗೆ ಇದ್ದೆ ಅನ್ನೋದು ನೆನಪಿಗೆ ಬರುತ್ತದೆ. ಹಾಗಾಗಿ ಯಾರ ಮೇಲೆಯೂ ಸಿಟ್ಟು ಮಾಡಿಕೊಳ್ಳುವುದಿಲ್ಲ. ಒಂದು ವೇಳೆ ಸೆಟ್ ಗೆ ತಡವಾಗಿ ಬರೋದು ಇದ್ದಿದ್ರೆ ಮೊದಲೇ ಸಂಬಂಧಪಟ್ಟವರಿಗೆ ಮಾಹಿತಿ ನೀಡಿರುತ್ತೇನೆ ಅಂತ ಹೇಳಿದ್ರು.

    ಅಂದಿನ ಕಾಲದಲ್ಲಿ ರಾಜ್‍ಕುಮಾರ್, ಶಂಕರ್ ನಾಗ್, ಅಂಬರೀಶ್, ವಿಷ್ಣುವರ್ಧನ್ ಸೇರಿದಂತೆ ಎಲ್ಲರೂ ನನ್ನ ಫೇವರೇಟ್. ಅವರಲ್ಲಿ ಯಾರು ಇಷ್ಟ ಹೇಳೋದಕ್ಕೆ ಆಗಲ್ಲ. ಅಂದಿನ ಕಾಲದ ನಟರಲ್ಲಿ ಇವರಿಷ್ಟ, ಇವರು ಅಲ್ಲ ಅಂತಾ ಡಿವೈಡ್ ಮಾಡೋದಕ್ಕೆ ಸಾಧ್ಯನೇ ಇಲ್ಲ ಅಂತ ಅವರು ಅಂದ್ರು.

    ಇದೇ ವೇಳೆ ನಿಮಗೆ ಇಷ್ಟವಾದ ತಿನಿಸುಗಳು ಯಾವುದು ಅಂತ ಕೇಳಿದಾಗ ಪ್ಲೇನ್ ಆ್ಯಪಲ್ ಹಾಗೂ ಕೇಕ್ ಇಷ್ಟ. ಇನ್ನು ಪಿಂಕ್, ನೀಲಿ ಬಣ್ಣಗಳನ್ನು ತುಂಬಾನೇ ಇಷ್ಟ ಪಡುತ್ತೇನೆ ಅಂತ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=tjMufAL6i9U

  • ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

    ಈ ಬಂಧ ‘ಅನು’ಬಂಧ- ಮಾತಿನ ಮಲ್ಲಿಯ ಮನದಾಳದ ಮಾತು

    -ಸಂದರ್ಶನದಲ್ಲಿ ಅನುಶ್ರೀ ಮದುವೆ ಗುಟ್ಟು ರಟ್ಟು
    -ಹೇಗಿರಬೇಕು ಅನುಶ್ರೀ ಮದುವೆ ಆಗೋ ಹುಡುಗ..?

    ಬೆಂಗಳೂರು: ಮಾತಿನ ಮಲ್ಲಿ ಎಂದೇ ಪ್ರಖ್ಯಾತರಾಗಿರೋ ಖ್ಯಾತ ನಿರೂಪಕಿ ಅನುಶ್ರೀ ಅವರು ಗಣೇಶ ಹಬ್ಬ ಆಚರಣೆ, ಕುಟುಂಬ ಹಾಗೂ ಮದುವೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

    ಗೌರಿ-ಗಣೇಶ ಹಬ್ಬದ ವಿಶೇಷ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಗೆ ಸಂದರ್ಶನ ನೀಡಿದ್ದ ಅವರು, ಈ ವರ್ಷ ಹಬ್ಬ ತುಂಬಾ ಸರಳವಾಗಿ ಆಚರಿಸುತ್ತಿದ್ದೇವೆ. ಪ್ರತಿ ವರ್ಷ ಹಬ್ಬವನ್ನು ಮಂಗಳೂರಿನಲ್ಲಿ ಆಚರಿಸುತ್ತಿದ್ದೇವೆ. ಆರು ತಿಂಗಳಿನಿಂದ ಅಮ್ಮ ನಮ್ಮ ಜೊತೆ ಬೆಂಗಳೂರಿನಲ್ಲಿಯೇ ಇದ್ದಾರೆ. ಈ ಬಾರಿ ಬೆಂಗಳೂರಿನಲ್ಲಿ ಅಮ್ಮ, ತಮ್ಮ ಮತ್ತು ನನ್ನ ಎರಡು ಮುದ್ದು ಮಕ್ಕಳು( ಸಾಕು ನಾಯಿ ಮತ್ತು ಮೊಲ) ಜೊತೆ ಹಬ್ಬ ಮಾಡ್ತೀವಿ ಅಂದ್ರು.

    ಮದುವೆ ಗುಟ್ಟು..?
    ಇದೂವರೆಗೂ ನನ್ನ ಒಬ್ಬರೂ ಪ್ರಪೋಸ್ ಮಾಡಿಲ್ಲ. ಒಂದು ಸಲ ನನ್ನ ಫ್ರೆಂಡ್ಸ್ ಹತ್ತರ ಯಾಕೆ ಯಾರು ನನಗೆ ಪ್ರಪೋಸ್ ಮಾಡಲ್ಲ? ನಾನು ನೋಡೊದಕ್ಕೆ ಚೆನ್ನಾಗಿ ಇಲ್ವಾ? ಅಂತಾ ಕೇಳಿದ್ದಕ್ಕೆ ಸೋಶಿಯಲ್ ಆಗಿ ಎಲ್ಲರ ಜೊತೆ ಬೆರೆಯಬೇಕು ಅಂತಾ ಹೇಳಿದ್ರು. ಒಂದು ಸಾರಿ ಎಲ್ಲರ ಜೊತೆ ಪಬ್ ಗೆ ಹೋಗಿದ್ದಾಗ ಅಲ್ಲಿ ಫುಲ್ ಕತ್ತಲು. ಇದರಿಂದ ಗಾಬರಿಗೊಂಡ ನಾನು ಬಳಿಕ ಅಲ್ಲಿಗೆ ಹೋಗಲೇ ಇಲ್ಲ. ಹೀಗಾಗಿ ಶೂಟಿಂಗ್ ಮುಗಿದ ಕೂಡಲೇ ಮನೆಗೆ ಬಂದು ಬಿಡುತ್ತೇನೆ ಅಷ್ಟೇ ನನ್ನ ಜೀವನ ಅಂದ್ರು.

    ಒಮ್ಮೆ ಒಬ್ಬ ಮಹಿಳೆ ತನ್ನ ಮಗನ ಫೋಟೋ, ಜಾತಕ, ಉದ್ಯೋಗ ಮಾಹಿತಿ ಬರೆದು ಸಂಗೀತ ನಿರ್ದೇಶಕ ಅರ್ಜುನ್ ಜನ್ಯರಿಗೆ ಪತ್ರ ಬರೆದಿದ್ದರು. ಇದನ್ನು ಅನುಶ್ರೀ ಅವರಿಗೆ ತಲುಪಿಸಬೇಕೆಂದು ಪತ್ರದಲ್ಲಿ ಬರೆದಿದ್ದರು. ಅರ್ಜುನ್ ಸರ್ ಬಂದು, ಮೇಡಂ ಪತ್ರ ನೋಡಿ ಅಂತಾ ಕೊಟ್ಟರು. ಒಂದು ಕ್ಷಣ ತುಂಬಾ ನಗು ಬಂತು. ಎಲ್ಲೋ ದೂರದಲ್ಲಿರುವ ತಾಯಿ ನನ್ನಲ್ಲಿ ಅವರ ಸೊಸೆ ಆಗುವ ಗುಣಲಕ್ಷಣ ನೋಡಿದ್ದಾರೆ ಅಂದ್ರೆ ನನಗೆ ತುಂಬಾ ಹೆಮ್ಮೆ ಆಗುತ್ತದೆ. ಕಾರ್ಯಕ್ರಮಗಳ ಮೂಲಕ ನಾನು ಜನರಿಗೆ ಎಷ್ಟು ಹತ್ತಿರ ಅಗಿದ್ದೀನಿ ಎಂಬುದು ಪತ್ರದ ಮೂಲಕ ತಿಳಿಯಿತು ಅಂತ ಹೇಳಿದ್ರು.

    ಸ್ಕೂಲ್ ಟೈಮಲ್ಲಿ ತುಂಬಾನೇ ಪ್ರಪೋಸ್ ಬರುತ್ತಿತ್ತು. ಆದ್ರೆ ನಿರೂಪಕಿ ಆದ್ಮೇಲೆ ಒಂದು ಲೆಟರ್ ಸಹ ಬಂದಿಲ್ಲ. ಪರಿಚಯದಲ್ಲಿ ಗಂಡು ನೋಡಲಾ ಅಂತಾ ಅಮ್ಮ ಹೇಳ್ತಾ ಇರ್ತಾರೆ. ಆದ್ರೆ ಆಗಬೇಕಾದ ಸಮಯದಲ್ಲಿ ಎಲ್ಲವೂ ನಡೆಯುತ್ತದೆ ಅಂತಾ ಹೇಳಿದ್ದೀನಿ ಅಂದ್ರು.

    ಕೈ ಹಿಡಿಯೋ ಹುಡ್ಗ ಹೇಗಿರಬೇಕು..?
    ನನಗೆ ತುಂಬಾ ಬೆಳ್ಳಗಿರುವ ಹುಡಗರು ಇಷ್ಟ ಆಗಲ್ಲ. ಯಾಕೆಂದ್ರೆ ನಾನು ತುಂಬಾ ಬೆಳ್ಳಗಿಲ್ಲ. ತುಂಬಾನೇ ಚಲ್ ಚಲ್ ಆಗಿ ಹುಡಗರು ಇಷ್ಟ ಆಗಲ್ಲ. ನನ್ನ ಮದುವೆ ಆಗೋ ಹುಡಗ ನನ್ನನ್ನು ಇಗ್ನೋರ್ ಮಾಡಬೇಕು. ಅಂತಹ ಹುಡಗ ನನಗಿಷ್ಟ. ಪಬ್ಲಿಕ್ ಟಿವಿ ಕಾರ್ಯಕ್ರಮ ನೋಡಿದ ಮೇಲೆ ಪ್ರಪೋಸ್ ಬಂದರೂ ಬರಬಹುದು ಅಂತ ಹೇಳುವ ಮೂಲಕ ನಕ್ಕುಬಿಟ್ಟರು.

    ಹವ್ಯಾಸ ಏನು..?
    ಶೂಟಿಂಗ್ ಬಳಿಕ ಹೆಚ್ಚಿನ ಸಮಯವನ್ನು ಮನೆಯಲ್ಲಿ ಕಳೆಯುತ್ತೇನೆ. ನಾನು ಮನೆಯಲ್ಲಿ ಹೆಚ್ಚು ಸಿನಿಮಾಗಳನ್ನು ನೋಡುತ್ತೇನೆ. ಮನೆಯಲ್ಲಿ 800 ಸಿಡಿಗಳನ್ನು ಸಂಗ್ರಹ ಮಾಡಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳನ್ನು ನೋಡುತ್ತೇನೆ. ಬೆಳಗ್ಗೆ 4 ಗಂಟೆಗೆ ಎದ್ದು ರನ್ನಿಂಗ್ ಮಾಡ್ತೀನಿ. ನಂತ್ರ ಮನೆಗೆ ಬಂದು ಟೀ ಕುಡಿದು ಫ್ರೆಶ್ ಆಗ್ತೀನಿ. ಮನೆಯ ಪಕ್ಕದಲ್ಲಿಯ ಮಕ್ಕಳೊಂದಿಗೆ ಆಟ ಆಡ್ತೀನಿ. ಅಮ್ಮನೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ.

    ಹಬ್ಬದ ಸ್ಪೆಷಲ್ ಏನು..?
    ಹಬ್ಬಕ್ಕೆ ಸಿಹಿ ಮಾಡುತ್ತೇವೆ. ಮನೆಗೆ ಕಬ್ಬುಗಳನ್ನು ಕಟ್ಟಿ, ಬಳಿಕ ಎಲ್ಲರೂ ತಿನ್ನುತ್ತೇವೆ. ವಿಶೇಷವಾಗಿ ಮನೆಯಲ್ಲಿ ಪೂಜೆ ಮಾಡುತ್ತೇವೆ. ಅಣ್ಣಂದಿರು ಗೌರಿ ಹಬ್ಬಕ್ಕೆ ಕಪ್ಪು ಬಳೆಗಳನ್ನು ಕೊಟ್ಟು, ಒಂದಿಷ್ಟು ಹಣ ಸಹ ಕೊಡುತ್ತಾರೆ. ಗೌರಿ ಹಬ್ಬಕ್ಕೆ ಅಣ್ಣಂದಿರು ಕೊಟ್ಟಿದ್ದ ಕಪ್ಪು ಬಳೆಗಳನ್ನು ತೊಟ್ಟು ಸಂಭ್ರಮಿಸುತ್ತೇವೆ.

    ಕಳೆದ ವರ್ಷ ನಾನು ಏನೂ ಬಯಸಿರಲಿಲ್ಲ. ಈ ಬಾರಿ ಸರ್ಕಾರ ನನಗೆ `ನಾಡಪ್ರಭು ಕೆಂಪೇಗೌಡ’ ಪ್ರಶಸ್ತಿ ನೀಡಿ ಗೌರವಿಸಿದೆ. ಕೆಂಪೇಗೌಡರ ಕಟ್ಟಿದ ಊರಲ್ಲಿ ಇಂದು ನಾವು ನೆಮ್ಮದಿಯಿಂದ ಇದ್ದೇವೆ. ನಮಗೆ ಊಟ, ಮನೆ ಎಲ್ಲವೂ ಬೆಂಗಳೂರು ನೀಡಿದೆ. ಅದಕ್ಕಿಂತ ಖುಷಿ ನನಗೆ ಮತ್ತೊಂದಿಲ್ಲ. ಕೊಡಗು ಪುನರ್ ನಿರ್ಮಾಣಕ್ಕೆ ಎಲ್ಲರೂ ಒಂದಾಗೋಣ ಅಂತಾ ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=tjMufAL6i9U

  • ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

    ರಿಯಾಲಿಟಿ ಶೋನಲ್ಲಿ ಕಣ್ಣೀರು ಹಾಕಿದ ನಿರೂಪಕಿ ಅನುಶ್ರೀ

    ಬೆಂಗಳೂರು: ಕನ್ನಡದ ಖ್ಯಾತ ನಿರೂಪಕಿ ಅಂತಾನೇ ಗುರುತಿಸಿಕೊಳ್ಳುವ ಅನುಶ್ರೀ ನಿರೂಪಣೆ ವೇಳೆ ಒಂದು ಕ್ಷಣ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.

    ಖಾಸಗಿ ವಾಹಿನಿಯ ಡಾನ್ಸಿಂಗ್ ರಿಯಾಲಿಟಿ ಶೋ ಕಾರ್ಯಕ್ರಮದ ನಿರೂಪಣೆ ಮಾಡುವುದು ಎಲ್ಲರಿಗೂ ಗೊತ್ತಿದೆ. ಶನಿವಾರ ಪ್ರಸಾರವಾದ ಸಂಚಿಕೆಯಲ್ಲಿ ತಮ್ಮ ಮುದ್ದು ಸಹೋದರನನ್ನು ನೆನಪಿಸಿಕೊಂಡು ಕಣ್ಣೀರು ಸುರಿಸಿದ್ದಾರೆ.

    ಸ್ವರ್ಧಿಗಳಾದ ಸೂರಜ್, ಶ್ರಾವ್ಯಾ ಮತ್ತು ಡ್ಯಾನ್ಸ್ ಮಾಸ್ಟರ್ ರುದ್ರ ಮೂವರು ಜಾಲಿಡೇಸ್ ಸಿನಿಮಾದ ಸ್ನೇಹತ್ವ ಸಾರುವ ಹಾಡಿಗೆ ಮನಮೋಹಕವಾಗಿ ಹೆಜ್ಜೆ ಹಾಕಿದ್ದರು. ಡ್ಯಾನ್ಸ್ ಮಧ್ಯೆ ತೀರ್ಪುಗಾರರ ನೆಚ್ಚಿನ ಸ್ನೇಹಿತರ ಫೋಟೋ ಸಹ ತೋರಿಸಿದರು. ರಕ್ಷಿತಾರ ಸ್ನೇಹಿತೆ ಪ್ರಶಾಂತಿ, ವಿಜಯ್ ರಾಘವೇಂದ್ರ ಗೆಳೆಯ ಕುಮಾರ್, ಅರ್ಜುನ್ ಜನ್ಯಾರ ಗೆಳೆಯ ಪ್ರಕಾಶ್ ಎಲ್ಲರ ಫೋಟೋಗಳನ್ನು ಡಿಸ್ ಪ್ಲೇ ಮಾಡಲಾಯಿತು. ಕೊನೆಗೆ ಅನುಶ್ರೀಯವರ ಫ್ರೆಂಡ್ ಬದಲಾಗಿ ತಮ್ಮ ಅಭಿಜಿತ್ ಫೋಟೋ ತೋರಿಸಲಾಯಿತು.

    ತೀರ್ಪುಗಾರರು ಎಲ್ಲರೂ ತಮ್ಮ ಸ್ನೇಹದ ಬಗ್ಗೆ ಹೇಳಿಕೊಂಡರು. ಕೊನೆಗೆ ಅನುಶ್ರೀ ತಮ್ಮನ ಬಗ್ಗೆ ಕೇಳಲಾಯಿತು. ಆ ವೇಳೆ ಭಾವುಕಾರದ ಅನುಶ್ರೀ, ಇವನು ನನ್ನ ಕನಸು, ತುಂಬಾ ವರ್ಷಗಳ ಹಿಂದೆ ಸೂಟ್‍ಕೇಸ್ ಹಿಡಿದುಕೊಂಡು ಬೆಂಗಳೂರಿಗೆ ಬಂದೆ. ನಾನು ಇಲ್ಲಿ ದುಡಿಯುತ್ತಿದ್ದರೆ, ಅಲ್ಲಿ ಅವನು ನನ್ನ ತಾಯಿಯನ್ನು 13 ವರ್ಷಗಳಿಂದ ಚೆನ್ನಾಗಿ ನೋಡಿಕೊಂಡಿದ್ದಾನೆ. ನಾನು ಏನು ಮಾಡಲು ಸಾಧ್ಯವಾಗಿಲ್ಲವೋ, ಅವೆಲ್ಲವನ್ನು ಅವನು ಇಂದು ಸಾಧಿಸಿದ್ದಾನೆ. ಒಳ್ಳೆಯ ಅಂಕಗಳೊಂದಿಗೆ ತೇರ್ಗಡೆಯಾಗಿ ತನ್ನ ಕಾಲ ಮೇಲೆ ನಿಂತುಕೊಂಡಿದ್ದಾನೆ. ದೇವರು ನನಗೆ ನೀಡಿರುವ ಎಲ್ಲ ಆಯಸ್ಸನ್ನು ಆತನಿಗೆ ನೀಡಲಿ ಎಂದು ಕೇಳಿಕೊಂಡು ಒಂದು ಕ್ಷಣ ಭಾವುಕರಾದ್ರು.

    ಕಾರ್ಯಕ್ರಮಗಳಲ್ಲಿ ತಮ್ಮ ಪಟಾಕಿ ಮಾತುಗಳಿಂದ ಎಲ್ಲರನ್ನು ನಗಿಸುವ ಅನುಶ್ರೀ ಕಣ್ಣೀರು ಹಾಕಿದ್ದರಿಂದ ಒಂದು ಕ್ಷಣ ತೀರ್ಪುಗಾರರು ಸೇರಿದಂತೆ ವೀಕ್ಷಕರು ಸಹ ಭಾವುಕರಾದರು. ಅದರಂತೆ ನಟಿ ರಕ್ಷಿತಾ ತಮ್ಮ ಸ್ನೇಹದ ಗೆಳೆತಿ ಪ್ರಶಾಂತಿಯವರ ಬಗ್ಗೆ ಹೇಳುವಾಗ ಕಣ್ಣಂಚಲಿ ಕಣ್ಣೀರು ಬಂತು.