Tag: ನಿಯಂತ್ರಣ

  • ಜನಸಂಖ್ಯೆ ನಿಯಂತ್ರಣಕ್ಕೆ ನಟಿ ಪೂನಂ ಪಾಂಡೆ ಕೊಟ್ಟ ಐಡ್ಯಾ ಏನು?

    ಜನಸಂಖ್ಯೆ ನಿಯಂತ್ರಣಕ್ಕೆ ನಟಿ ಪೂನಂ ಪಾಂಡೆ ಕೊಟ್ಟ ಐಡ್ಯಾ ಏನು?

    ವಿವಾದಿತ ತಾರೆ, ಬಾಲಿವುಡ್ ನ ಪೂನಂ ಪಾಂಡೆ ಹಸಿಬಿಸಿ ದೃಶ್ಯಗಳ ಜೊತೆಗೆ ಬಿಸಿಬಿಸಿ ಮಾತುಗಳಿಂದಾಗಿಯೇ ಫೇಮಸ್. ಸದಾ ವಿವಾದಿತ ಮಾತುಗಳಿಂದಲೇ ಸದ್ದು ಮಾಡುವ ಈ ನಟಿ ಇದೀಗ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತುಗಳನ್ನು ಆಡಿದ್ದಾರೆ. ಅವರ ಮಾತನ್ನು ಯಾರು, ಎಷ್ಟು ಸೀರಿಯಸ್ ಆಗಿ ತಗೆದುಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ, ಆಡಿದ ಮಾತುಗಳು ಮಾತು ಸಖತ್ ಟ್ರೋಲ್ ಆಗುತ್ತಿವೆ.

    ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡ ಪೂನಂ ಪಾಂಡೆ. ಅಲ್ಲಿದ್ದ ಜನಸಂಖ್ಯೆ ನಿಯಂತ್ರಣದ ಜಾಹೀರಾತು ಕಂಡಿದ್ದಾರೆ. ಅಲ್ಲದೇ, ಜನಸಂಖ್ಯಾ ನಿಯಂತ್ರಣಕ್ಕೆ ಸರಕಾರ ಎಷ್ಟೊಂದು ಕಷ್ಟ ಪಡುತ್ತಿದೆ ಎನ್ನುವುದನ್ನು ಅರಿತಿದ್ದಾರೆ. ಹಾಗಾಗಿ ಅದಕ್ಕೆ ತಮ್ಮ ಬಿಟ್ಟಿ ಸಲಹೆಯನ್ನೂ ನೀಡಿರುವ ಅವರು, ಜನಸಂಖ್ಯೆ ನಿಯಂತ್ರಣಕ್ಕೆ ಅತ್ಯುತ್ತಮ ಪರಿಹಾರ ಎಂದರೆ ಮಕ್ಕಳನ್ನು ಮಾಡಿಕೊಳ್ಳದೇ ಇರುವುದು ಎಂದು ಹೇಳಿದ್ದಾರೆ. ಮಕ್ಕಳನ್ನು ಮಾಡಿಕೊಳ್ಳದೇ ಬದುಕನ್ನು ಎಂಜಾಯ್ ಮಾಡಿ ಅಂದಿದ್ದಾರೆ. ಇದನ್ನೂ ಓದಿ:ಕೇಕ್ ಕತ್ತರಿಸುವ ಮೂಲಕ 17 ವರ್ಷದ ಸಿನಿಪಯಣದ ಸಂಭ್ರಮ ಆಚರಿಸಿದ ಅನುಷ್ಕಾ ಶೆಟ್ಟಿ

    ಪೂನಂ ಪಾಂಡೆ ಮಾತಿಗೆ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದರೆ, ಇನ್ನೂ ಕೆಲವರು ಗರಂ ಆಗಿದ್ದಾರೆ. ಇಂತಹ ಮಾತುಗಳನ್ನು ಹೇಳುವವರು ಎಷ್ಟರ ಮಟ್ಟಿಗೆ ಅದನ್ನು ಪಾಲಿಸುತ್ತಾರೆ ಎಂದು ಕೆಲವರು ಪ್ರಶ್ನೆ ಮಾಡಿದರೆ, ಇನ್ನೂ ಕೆಲವರು ಒಳ್ಳೆಯ ಸಲಹೆ ನೀಡಿದ್ದೀರಿ. ಆದರೆ, ಮಕ್ಕಳನ್ನು ಕಡಿಮೆ ಮಾಡಿಕೊಳ್ಳಿ ಎಂದು ಹೇಳಬೇಕಿತ್ತು ಎಂದೂ ಕಾಮೆಂಟ್ ಮಾಡಿದ್ದಾರೆ. ಏನೇ ಇರಲಿ, ಜನಸಂಖ್ಯೆ ನಿಯಂತ್ರಣಕ್ಕಾಗಿ ಏನೆಲ್ಲ ಹರಸಾಹಸಗಳನ್ನು ಸರಕಾರ ಮಾಡುತ್ತಲೇ ಇರುವುದು ಸುಳ್ಳಲ್ಲ.

    Live Tv
    [brid partner=56869869 player=32851 video=960834 autoplay=true]

  • ದೆಹಲಿ ಕೊರೊನ ಲಾಕ್‍ಡೌನ್‍ನಲ್ಲಿ ಇನ್ನಷ್ಟು ಸಡಿಲಿಕೆ – ಮಾಲ್, ಮೆಟ್ರೋ ಓಪನ್

    ದೆಹಲಿ ಕೊರೊನ ಲಾಕ್‍ಡೌನ್‍ನಲ್ಲಿ ಇನ್ನಷ್ಟು ಸಡಿಲಿಕೆ – ಮಾಲ್, ಮೆಟ್ರೋ ಓಪನ್

    ನವದೆಹಲಿ: ಬೆಸ-ಸಮ ಆಧಾರದ ಮೇಲೆ ಮಾಲ್‍ಗಳು, ಅಂಗಡಿ ಮುಗ್ಗಟ್ಟು, ಮಾರುಕಟ್ಟೆ ಓಪನ್, ದೆಹಲಿ ಸರ್ಕಾರ ಕೊರೊನಾ ಲಾಕ್‍ಡೌನ್ ನಿಂದ ಕೊಂಚ ಮಟ್ಟದ ಬಿಡುಗಡೆಯನ್ನು ನೀಡಲು ಇಂದು ಅನುಮತಿಯನ್ನು ನೀಡಿದೆ.

    ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಕಷ್ಟಕರವಾದ ಪರಿಸ್ಥಿತಿ ಸುಧಾರಿಸುತ್ತಿದೆ ಹೀಗಾಗಿ ಲಾಕ್‍ಡೌನ್ ಮುಂದುವರೆಯುತ್ತದೆ. ಆದರೆ ಕೊಂಚ ಮಟ್ಟಿಗೆ ಸಡಿಲ ಗೊಳಿಸುತ್ತಿದ್ದೇವೆ ಎಂದು ದೆಹಲಿ ಮುಖ್ಯಮಂತ್ರಿ   ಹೇಳಿದ್ದಾರೆ. ಇದನ್ನೂ ಓದಿ: ರೈತರಿಗೆ ಉಚಿತ ಗೊಬ್ಬರ, ಬಿತ್ತನೆ ಬೀಜ ಕೊಡಿ ಸಿಎಂಗೆ ಸಿದ್ದರಾಮಯ್ಯ ಮನವಿ

    * ಮಾಲ್‍ಗಳು ಮತ್ತು ಶಾಪಿಂಗ್ ಕೇಂದ್ರಗಳು ಬೆಸ-ಸಮ ಆಧಾರದ ಮೇಲೆ ತೆರೆಯಲ್ಪಡುತ್ತವೆ. ಒಂದು ದಿನ ಅರ್ಧ ಅಂಗಡಿಗಳು, ಇನ್ನೊಂದು ಅರ್ಧ ಮರುದಿನ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಅಗತ್ಯ ವಸ್ತುಗಳ ಅಂಗಡಿಗಳು ಮತ್ತು ರಸಾಯನಿಕ ಅಂಗಡಿಗಳನ್ನು ಎಲ್ಲಾ ದಿನಗಳಲ್ಲಿ ತೆರೆಯಬಹುದು. ಬೆಸ-ಸಮ ನಿಯಮವು ಅವರಿಗೆ ಅನ್ವಯಿಸುವುದಿಲ್ಲ.ಇದನ್ನೂ ಓದಿ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಸಾಧ್ಯತೆ

    * ಖಾಸಗಿ ಕಚೇರಿಗಳು ಶೇಕಡಾ 50 ರಷ್ಟು ಉದ್ಯೋಗಿಗಳ ಮಿತಿಯಲ್ಲಿ ಮಾತ್ರ ಕೆಲಸವನ್ನು ಆರಂಭಿಸ ಬಹುದಾಗಿದೆ. ವರ್ಕ್ ಫ್ರಮ್ ಹೋಮ್ ಮಾಡುತ್ತಿರುವವರು ಇದನ್ನು ಮುಂದುವರಿಸಿ. ಸಾರ್ವಜನಿಕ ವಲಯದ ಕಚೇರಿಗಳಲ್ಲಿ ಎ ವರ್ಗ ಉದ್ಯೋಗಿಗಳು ಎಲ್ಲಾ ದಿನಗಳಲ್ಲಿ ಕೆಲಸ ಮಾಡಬಹುದು, ಆದರೆ ಅವರ ಅಡಿಯಲ್ಲಿರುವ ಎಲ್ಲಾ ವರ್ಗಗಳು ಕೇವಲ 50 ಪ್ರತಿಶತದಷ್ಟು ಸಾಮಥ್ರ್ಯದ ಜನರು ಮಾತ್ರ ಕೆಲಸ ಮಾಡಿ. ಮೆಟ್ರೋ ಸಹ ಸೇ.50 ರಷ್ಟು ಆಸನ ಸಾಮಥ್ರ್ಯದಲ್ಲಿ ಚಲಿಸಲಿದೆ.

    ಕೊರೊನಾ ಮೂರಲೇ ಅಲೆಗೆ ನಾವು ಸಾಕಷ್ಟು ಸಿದ್ದತೆಯನ್ನು ಮಾಡುಕೊಳ್ಳುತ್ತಿದ್ದೇವೆ. ನಾವು ಆಮ್ಲಜನಕದ ತೀವ್ರ ಕೊರತೆಯನ್ನು ಎದುರಿಸಿದ್ದೇವೆ. ನಾವು ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕದ ಮೂಲಸೌಕರ್ಯವನ್ನು ಹೆಚ್ಚಿಸುತ್ತಿದ್ದೇವೆ. ನಾವು ಮೊದಲು ನಮ್ಮದೇ ಆದ ಆಮ್ಲಜಕನ ಘಟವನ್ನು ಹೊಂದಿರದ ಕಾರಣ ನಾವು ಆಮ್ಲಜನಕ ಟ್ಯಾಂಕರ್‍ಗಳನ್ನು ಸಹ ಸಂಗ್ರಹಿಸುತ್ತಿದ್ದೇವೆ. ಅಂತಹ 25 ಟ್ಯಾಂಕರ್‍ಗಳನ್ನು ನಾವು ಖರೀದಿಸುತ್ತಿದ್ದೇವೆ.

    ದೆಹಲಿ ಸರ್ಕಾರದ ಅಂಕಿಅಂಶಗಳ ಪ್ರಕಾರ, ನಗರದಲ್ಲಿ ಶುಕ್ರವಾರ 523 ಹೊಸ ಕೊರೊನಾ ಪ್ರಕರಣಗಳು ಮತ್ತು 50 ಸಾವುನೋವುಗಳು ದಾಖಲಾಗಿವೆ. ಪಾಸಿಟಿವಿಟಿ ರೇಟ್ ಶೇ.0.68ರಷ್ಟಿದೆ. ಕೊರೊನಾದಿಂದ ಹಾನಿಗೊಳಗಾದ ರಾಜ್ಯಗಳಲ್ಲಿ ದೆಹಲಿ ಕೂಡ ಒಂದಾಗಿದೆ ಎಂದರು.

  • ನನ್ನ ಕ್ಷೇತ್ರದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಕಡಿಮೆಯಾಗಿದೆ: ಕೆಜಿ ಬೋಪಯ್ಯ

    ನನ್ನ ಕ್ಷೇತ್ರದಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಕಡಿಮೆಯಾಗಿದೆ: ಕೆಜಿ ಬೋಪಯ್ಯ

    ಮಡಿಕೇರಿ: ನನ್ನ ಕ್ಷೇತ್ರದಲ್ಲಿ ಕೊರೊನಾ ಪಾಸಿಟಿವ್‍ಗಳ ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಸಚಿವರ ಭೇಟಿ ಬಳಿಕ ಒಂದಷ್ಟು ಲಾಕ್‍ಡೌನ್ ಸಡಿಲಿಕೆಗೆ ಯೋಚನೆ ಮಾಡಲಿದ್ದೇವೆ ಎಂದು ವಿರಾಜಪೇಟೆ ಶಾಸಕ ಕೆಜಿ ಬೋಪಯ್ಯ ಹೇಳಿದ್ದಾರೆ.

    ಕೊಡಗು ಜಿಲ್ಲೆಯಲ್ಲಿ ಒಂದು ವಾರದಿಂದ ಸೋಂಕಿನ ಪ್ರಕರಣಗಳು ಕೊಂಚ ಇಳಿಮುಖ ಅಗುತ್ತಿದೆ. ಅಲ್ಲದೇ ಜಿಲ್ಲೆಯ ಮೂರು ತಾಲೂಕುಗಳ ಪೈಕಿ ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ಸೋಂಕಿತರ ಪ್ರಕರಣ ಕಡಿಮೆಯಾಗುತ್ತಿದ್ದು, ಅನೇಕ ಗ್ರಾಮಗಳು ಕೊರೊನಾ ಮುಕ್ತ ಗ್ರಾಮಗಳಾಗುತ್ತಿವೆ. ಇದನ್ನೂ ಓದಿ: ಕೆಲವೊಂದಕ್ಕೆ ವಿನಾಯಿತಿ ನೀಡಿ ಲಾಕ್‍ಡೌನ್ ವಿಸ್ತರಣೆ – ಸಿಎಂ ಬಿಎಸ್‍ವೈ

    ನನ್ನ ವಿರಾಜಪೇಟೆ ಕ್ಷೇತ್ರದಲ್ಲಿ ಕೊರೊನಾ ಪಾಸಿಟಿವ್‍ಗಳ ಸಂಖ್ಯೆ ಕಡಿಮೆಯಾಗಿದೆ. ಕೊಡಗು ಜಿಲ್ಲೆಯ ಮಟ್ಟಿಗೆ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಉಸ್ತುವಾರಿ ಸಚಿವರ ಭೇಟಿ ಬಳಿಕ ಒಂದಷ್ಟು ಜಿಲ್ಲಾ ವ್ಯಾಪ್ತಿಯ ಸಡಿಲಿಕೆಗೆ ಯೋಚಿಸಲಾಗುವುದು. ಆದರೆ ಸರ್ಕಾರ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದರ ಮೇಲೆ ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಬರಲಿದೆ: ಕೋಡಿಶ್ರೀ ಭವಿಷ್ಯ

    ಸದ್ಯ ವಿರಾಜಪೇಟೆ ಕ್ಷೇತ್ರದಲ್ಲಿ 38 ಗ್ರಾಮ ಪಂಚಾಯಿತಿಗಳು ಇದ್ದು, ಅವುಗಳ ಪೈಕಿ 28ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಒಂದು ಪ್ರಕರಣವೂ ಇಲ್ಲದೇ ಕೊರೊನಾ ಮುಕ್ತವಾಗಿದೆ. ಉಳಿದ 6-7 ಪಂಚಾಯಿತಿಗಳಲ್ಲಿ ಒಂದಷ್ಟು ಪ್ರಕರಣಗಳಿವೆ. ಅವುಗಳನ್ನು ನಾವೇ ಹಾಟ್ ಸ್ಪಾಟ್ ಎಂದು ಮಾಡಿಕೊಂಡಿದ್ದೇವೆ. ಅಲ್ಲಿಗೆ ಹೋಗಿ ಸಭೆ ಮಾಡಿ ಕೊರೊನಾ ನಿಯಂತ್ರಣ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಲಾಕ್‍ಡೌನ್ ಮಾಡಿದ ಪರಿಣಾಮದಿಂದಾಗಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ. ಕೊಡಗು ಜಿಲ್ಲೆ ಕಂಟ್ರೋಲ್‍ಗೆ ಬಂದಿದೆ. ಜಿಲ್ಲೆಯ ಜನರ ಸಲಹಾಕಾರದಿಂದ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.

  • ಕೊರೊನಾಗೆ ನೋ ಎಂಟ್ರಿ- ಗ್ರಾಮವನ್ನೇ ದಿಗ್ಬಂಧನ ಮಾಡಿಕೊಂಡ ಗ್ರಾಮಸ್ಥರು

    ಕೊರೊನಾಗೆ ನೋ ಎಂಟ್ರಿ- ಗ್ರಾಮವನ್ನೇ ದಿಗ್ಬಂಧನ ಮಾಡಿಕೊಂಡ ಗ್ರಾಮಸ್ಥರು

    ದಾವಣಗೆರೆ: ಕೊರೊನಾ ಎರಡನೇ ಅಲೆಯಲ್ಲಿ ನಗರಗಳಿಗಿಂತ ಹಳ್ಳಿಗಳಲ್ಲಿ ಸೋಂಕು ಹೆಚ್ಚಾಗಿದೆ. ಹೀಗಾಗಿ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿಯ ಗ್ರಾಮಸ್ಥರು ಇಡೀ ಗ್ರಾಮವನ್ನೇ ದಿಗ್ಬಂಧನ ಮಾಡಿಕೊಂಡಿದ್ದಾರೆ.

    ದಾವಣಗೆರೆಯ 70 ರಷ್ಟು ಗ್ರಾಮಗಳಿಗೆ ಸೋಂಕು ಹೆಚ್ಚಾಗಿದ್ದು, ಇದರಿಂದ ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿಯ ಗ್ರಾಮಸ್ಥರು ಸ್ವಯಂ ದಿಗ್ಬಂಧನ ಮಾಡಿಕೊಂಡಿದ್ದಾರೆ. ಜಗಳೂರು ತಾಲೂಕಿನ ಚಿಕ್ಕಮ್ಮನಹಟ್ಟಿ ಗ್ರಾಮದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರಿದ್ದು, ಎರಡನೇ ಅಲೆಯಲ್ಲಿ ಗ್ರಾಮಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಇಡೀ ಗ್ರಾಮಸ್ಥರು ದಿಗ್ಬಂಧನ ಮಾಡಿಕೊಳ್ಳುವಂತೆ ಗ್ರಾಮಸ್ಥರು ನಿರ್ಧರಿಸಿದ್ದಾರೆ.

    ಗ್ರಾಮಕ್ಕೆ ಎಂಟ್ರಿ ಕೊಡುವ ರಸ್ತೆಗಳನ್ನು ಬಂದ್ ಮಾಡಿದ್ದು, ರಸ್ತೆಗೆ ಮುಳ್ಳು ಹಾಕಿ ಯಾರು ಬಾರದಂತೆ ದಿಗ್ಬಂಧನ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದ ಹಾಗೂ ಗ್ರಾಮಗಳಿಂದ ಆಗಮಿಸುವವರಿಗೆ ಸಂಪೂರ್ಣ ನಿಷೇಧ ಮಾಡಿದ್ದು, ಚಿಕ್ಕಮ್ಮನಹಟ್ಟಿಯಿಂದಲೂ ಕೂಡ ಯಾರು ಹೊರ ಹೋಗದಂತೆ ಸೂಚನೆ ನೀಡಿದ್ದಾರೆ. ಗ್ರಾಮದಲ್ಲಿ ಎಲ್ಲರೂ ಆರೋಗ್ಯವನ್ನು ಕಾಪಾಡಿಕೊಂಡು, ಗುಂಪು ಸೇರದಂತೆ, ಅನಾವಶ್ಯಕ ಕೂತು ಮಾತನಾಡದಂತೆ ಡಂಗೂರ ಸಾರಿದ್ದಾರೆ. ಹೀಗೆ ತಮ್ಮ ಗ್ರಾಮಕ್ಕೆ ಕೊರೊನಾ ಎಂಟ್ರಿ ಕೊಡದ ಹಾಗೆ ಹಾಗೂ ಸೋಂಕು ನಿಯಂತ್ರಣ ಮಾಡಲು ಇಡೀ ಗ್ರಾಮಸ್ಥರು ಕ್ರಮ ಕೈಗೊಂಡಿದ್ದಾರೆ.