Tag: ನಿದ್ರೆ

  • ಕಂಠಪೂರ್ತಿ ಕುಡಿದು ಮಂಟಪದಲ್ಲೇ ಮಲಗಿಬಿಟ್ಟ ವರ – ಮದುವೆ ಕ್ಯಾನ್ಸಲ್ ಮಾಡಿದ್ಲು ವಧು

    ಕಂಠಪೂರ್ತಿ ಕುಡಿದು ಮಂಟಪದಲ್ಲೇ ಮಲಗಿಬಿಟ್ಟ ವರ – ಮದುವೆ ಕ್ಯಾನ್ಸಲ್ ಮಾಡಿದ್ಲು ವಧು

    ದಿಸ್ಪುರ್: ವಧು-ವರರು ಕೊನೇ ಕ್ಷಣದಲ್ಲಿ ಮದುವೆಯನ್ನು (Marriage) ರದ್ದು ಮಾಡುವಂತಹ ಅದೆಷ್ಟೋ ಘಟನೆಗಳು ನಡೆಯುತ್ತಲೇ ಇರುತ್ತವೆ. ಮದುವೆ ಮಂಟಪದಲ್ಲಿಯೇ ಭಿನ್ನಾಭಿಪ್ರಾಯಗಳು ಉಂಟಾಗಿ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದು, ಸಂಬಂಧಗಳು ಮುರಿದೂ ಬೀಳುತ್ತವೆ. ಇಲ್ಲೊಬ್ಬ ವರ (Groom) ಕಂಠಪೂರ್ತಿ ಕುಡಿದು (Drunk) ಬಂದು ಮಂಟಪದಲ್ಲೇ ಮಲಗಿಬಿಟ್ಟ ಅಂತ ವಧು (Bride) ಮದುವೆ ಕ್ಯಾನ್ಸಲ್ ಮಾಡಿರುವ ಘಟನೆ ನಡೆದಿದೆ.

    ಅಸ್ಸಾಂನ (Assam) ನಲ್ಬರಿ ಜಿಲ್ಲೆಯಲ್ಲಿ ವರನೊಬ್ಬ ಮದ್ಯ ಸೇವಿಸಿ, ತನ್ನ ಮದುವೆಯ ವೇಳೆಯೇ ಮಂಟಪದಲ್ಲಿ ಮಲಗಿಬಿಟ್ಟಿದ್ದಾನೆ. ಪಂಡಿತರು ಹೇಳಿಕೊಡುತ್ತಿರುವ ಮಂತ್ರವನ್ನು ತನ್ನ ಬಾಯಿಂದ ಹೇಳಲೂ ಸಾಧ್ಯವಾಗದೇ ಆತ ಅಲ್ಲೇ ಮಲಗಿಬಿಟ್ಟಿದ್ದಾನೆ. ಇದರಿಂದ ವಧು ತನ್ನ ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ.

     

    ವರನನ್ನು ನಲ್ಬರಿ ನಗರದ ನಿವಾಸಿ ಪ್ರಸೇನಜಿತ್ ಹಲೋಯ್ ಎಂದು ಗುರುತಿಸಲಾಗಿದೆ. ಮದುವೆ ಕಾರ್ಯಕ್ರಮಗಳು ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ನಮ್ಮ ಕಡೆಯಿಂದ ಎಲ್ಲಾ ವಿಧಿವಿಧಾನಗಳನ್ನು ಅಚ್ಚುಕಟ್ಟಾಗಿ ಮಾಡಿದ್ದೇವೆ. ನಾವು ಮದುವೆ ಕಾರ್ಯಕ್ರಮಗಳನ್ನು ಚೆನ್ನಾಗಿಯೇ ನೆರವೇರಿಸಲು ಪ್ರಯತ್ನಿಸಿದ್ದೇವೆ. ಆದರೆ ವರ ಕಂಠಪೂರ್ತಿ ಕುಡಿದು ಮಂಟಪದಲ್ಲಿಯೇ ಮಲಗಿಬಿಟ್ಟಿದ್ದರಿಂದ ಮದುವೆ ರದ್ದುಗೊಳಿಸಲು ನಿರ್ಧರಿಸಬೇಕಾಯಿತು ಎಂದು ವಧುವಿನ ಕಡೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾದ ಮಹಿಳೆ – 24 ಗಂಟೆಯಲ್ಲಿ ವಿಚ್ಛೇದನ ಘೋಷಣೆ

     

    ವರ ಕುಡಿದ ನಶೆಯಲ್ಲಿ ತೂರಾಡುವುದನ್ನು ಕಂಡು ವಧು ಮಂಟಪದಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದಾಳೆ. ಬಳಿಕ ವರ ಮಂತ್ರಗಳನ್ನು ಉಚ್ಛರಿಸಲಾಗದೇ ಮಲಗಿದ್ದಾನೆ. ವರನ ಕಡೆಯವರು ಹೆಚ್ಚಿನ ಮಂದಿ ಕುಡಿದುಕೊಂಡೇ ಮದುವೆಗೆ ಬಂದಿದ್ದರು. ಬಳಿಕ ಮದುವೆಯನ್ನು ಕ್ಯಾನ್ಸಲ್ ಮಾಡಿ, ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ತಿಳಿಸಿದ್ದಾರೆ.

     

    ಲಕ್ಷಾಂತರ ರೂ. ಖರ್ಚು ಮಾಡಿ ವಧುವಿನ ಕಡೆಯವರು ಮದುವೆಯ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದರೆ, ವರನ ಕಡೆಯವರು ಈ ರೀತಿ ಮದ್ಯ ಸೇವಿಸಿ ಅವಮಾನ ಮಾಡಿದ್ದಾರೆ. ನಲ್ಬರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಮದುವೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಉದ್ಘಾಟನೆಗೂ ಮುನ್ನವೇ ಹುಬ್ಬಳ್ಳಿ ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಗಿನ್ನಿಸ್ ದಾಖಲೆ

  • ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!

    ಈ ಮಹಿಳೆ ದಿನಕ್ಕೆ 22 ಗಂಟೆ ನಿದ್ರೆ ಮಾಡ್ತಾಳಂತೆ – ಒಮ್ಮೊಮ್ಮೆ 4 ದಿನ ಆದ್ರೂ ಎದ್ದೇಳಲ್ವಂತೆ!

    ಲಂಡನ್: ಮನುಷ್ಯ ಆರೋಗ್ಯವಾಗಿರಬೇಕು ಅಂದ್ರೆ ನಿತ್ಯ ನಿಯಮಿತ ಪ್ರಮಾಣದಲ್ಲಿ ನಿದ್ರೆ ಮಾಡುವುದು ಅಗತ್ಯ. ದಿನಕ್ಕೆ 8 ಗಂಟೆ ನಿದ್ರೆ ಮಾಡಬೇಕು ಎಂದು ವೈದ್ಯರು ಸಲಹೆ ನೀಡುವುದು ಕಾಮನ್.‌ ಹೀಗಿದ್ದೂ ಕೆಲಸದ ಒತ್ತಡ, ಬದಲಾದ ಜೀವನ ಶೈಲಿ ಕಾರಣಕ್ಕೆ ಎಷ್ಟೋ ಮಂದಿ ಸರಿಯಾಗಿ ನಿದ್ರೆ ಮಾಡುವುದು. ಆದ್ರೆ ಕೆಲವರು ಸೋಂಬೇರಿಗಳಂತೆ ಹೆಚ್ಚಿನ ಸಮಯ ನಿದ್ರೆ ಮಾಡುತ್ತಾರೆ. ಆದರೆ ಯುಕೆನಲ್ಲಿ ಮಹಿಳೆಯೊಬ್ಬರು ನಿದ್ರೆ ಮಾಡುವ ಸಮಯ ಕೇಳಿದ್ರೆ ನೀವು ಶಾಕ್‌ ಆಗ್ತೀರಾ!

    ಇಂಗ್ಲೆಂಡ್‌ನಲ್ಲಿ (England) 38 ವಯಸ್ಸಿನ ಮಹಿಳೆಯೊಬ್ಬರು ದಿನ 24 ಗಂಟೆಯಲ್ಲಿ 22 ಗಂಟೆಗಳ ಕಾಲ ನಿದ್ರೆ ಮಾಡ್ತಾರೆ. ಇಷ್ಟು ಸಮಯ ನಿದ್ರೆ ಮಾಡುವ ಅಸಮಾನ್ಯ ಸಾಮರ್ಥ್ಯ ಹೊಂದಿರುವ ಈ ಮಹಿಳೆ ʼಸ್ಲೀಪಿಂಗ್‌ ಬ್ಯೂಟಿʼ (Sleeping Beauty) ಎಂದೇ ಹೆಸರಾಗಿದ್ದಾರೆ. ಮಹಿಳೆಗಿರುವ ವಿಶೇಷ ಕಾಯಿಲೆಯೇ ಈಕೆ ನಿತ್ಯ ಹೀಗೆ 22 ಗಂಟೆಗಳ ಕಾಲ ನಿದ್ರೆ ಮಾಡುವುದಕ್ಕೆ ಪ್ರಮುಖ ಕಾರಣವಂತೆ. ಇದನ್ನೂ ಓದಿ: ಸುಂದರಿಯ ದೇಹವನ್ನು ತುಂಡಾಗಿ ಕತ್ತರಿಸಿ, ತಲೆಯನ್ನು ಸೂಪ್ ಮಾಡಲು ಇಟ್ಟಿದ್ರು..!

    ಅಂದಹಾಗೆ, ಈಕೆ ಹೆಸರು ಜೊವಾನ್ನಾ ಕಾಕ್ಸ್. ಇಂಗ್ಲೆಂಡ್‌ನ ವೆಸ್ಟ್ ಕ್ಯಾಸಲ್‌ಫೋರ್ಡ್‌ನಲ್ಲಿ ವಾಸವಾಗಿದ್ದಾರೆ. ಹಾಗಾದ್ರೆ ಈಕೆಗಿರುವ ವಿಶೇಷ ಕಾಯಿಲೆಯಾದರೂ ಏನು ಅಂತಾ ಕೇಳ್ತೀರಾ? ಈ ಕಾಯಿಲೆ ಹೆಸರು ʼಇಡಿಯೋಪಥಿಕ್ ಹೈಪರ್ಸೋಮ್ನಿಯಾʼ ಅಂತಾ. 2021 ರಲ್ಲಿ ಅವರಿಗೆ ಈ ಕಾಯಿಲೆ ಇರುವುದು ಗೊತ್ತಾಗಿದೆ. ಇದರಿಂದ ಜನರಿಗೆ ಹಗಲಿನಲ್ಲೂ ನಿದ್ರೆಯ ತೀವ್ರತೆ ಹೆಚ್ಚಾಗಿರುತ್ತದೆ. ಆಗಾಗ್ಗೆ ಎಚ್ಚರಗೊಳ್ಳಲು ಹೆಣಗಾಡುತ್ತಾರೆ.

    “ಒಮ್ಮೆ ಮಲಗಿದ ಮೇಲೆ ನನ್ನನ್ನು ಎಬ್ಬಿಸಲು ಸಾಧ್ಯವಿಲ್ಲ. ನಾನು ಎಚ್ಚರಗೊಂಡಾಗ ಎಷ್ಟು ಸಮಯ ನಿದ್ರೆ ಮಾಡಿದೆ ಎಂಬುದೇ ತಿಳಿಯುವುದಿಲ್ಲ. ಒಮ್ಮೊಮ್ಮೆ ನಾನು ಎಚ್ಚರಗೊಳ್ಳದೇ ಸತತ ನಾಲ್ಕು ದಿನ ನಿದ್ರೆ ಮಾಡಿದ್ದೇನೆ. ಇದು ನನ್ನ ಜೀವನವನ್ನೇ ಹಾಳು ಮಾಡುತ್ತಿದೆ” ಎಂದು ಕಾಕ್ಸ್‌ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ʼಲೇಡಿ ಅಲ್‌ ಖೈದಾʼ ಕರೆತರಲು ಪಾಕ್‌ ಸರ್ಕಾರಕ್ಕೆ ಒತ್ತಾಯ – 13 ವರ್ಷಗಳಿಂದ ಅಮೆರಿಕ ಜೈಲಲಿದ್ದಾಳೆ ಪಾಕ್‌ ಸುಂದರಿ

    ಈಕೆ ಪ್ರೊಟೀನ್ ಶೇಕ್‌ಗಳು ಮತ್ತು ಪೋಷಕಾಂಶಯುಕ್ತ ಊಟದಿಂದ ಬದುಕುಳಿದಿದ್ದಾರೆ. ಏಕೆಂದರೆ ಹೆಚ್ಚಿನ ಸಮಯ ನಿದ್ರೆಯಲ್ಲೇ ಇದ್ದಾಗ ದೇಹಕ್ಕೆ ಅಗತ್ಯ ಪೋಷಕಾಂಶದ ಕೊರತೆ ಹೆಚ್ಚು ಬಾಧಿಸಬಹುದು.

  • ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು

    ಪಕ್ಕದ ಮನೆಯವರ ಕೋಳಿಗಳು ಕೂಗೋದ್ರಿಂದ ನಿದ್ರೆ ಮಾಡೋಕಾಗ್ತಿಲ್ಲ – ಬೆಂಗಳೂರು ಪೊಲೀಸರಿಗೆ ವ್ಯಕ್ತಿ ದೂರು

    ಬೆಂಗಳೂರು: ಪಕ್ಕದ ಮನೆಯವರ ಕೋಳಿ ಕೂಗುವುದರಿಂದ ರಾತ್ರಿಹೊತ್ತು ನಾವು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ತುಂಬಾ ತೊಂದರೆಯಾಗುತ್ತಿದೆ ಎಂದು ಬೆಂಗಳೂರು ಪೊಲೀಸರಿಗೆ (Bengaluru Police) ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ.

    ನೆರೆಮನೆಯವರನ್ನು ದೂರಿ ನೆಮೊ ಹೆಸರಿನ ವ್ಯಕ್ತಿ ಟ್ವಿಟ್ಟರ್‌ ಖಾತೆ ಪೋಸ್ಟ್‌ ಹಾಕಿದ್ದಾನೆ. ಪೋಸ್ಟ್‌ನಲ್ಲಿ ಮನೆಯ ವೀಡಿಯೋ ಜೊತೆಗೆ ತಮಗಾಗುತ್ತಿರುವ ಸಮಸ್ಯೆ ಕುರಿತು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಪುಂಡರ ಹಾವಳಿ – ಮೀನಿನ ಅಂಗಡಿ ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ರೌಡಿ

    ಜೆಪಿ ನಗರ 8ನೇ ಹಂತದಲ್ಲಿನ ಮನೆಯೊಂದರಲ್ಲಿ ಕೋಳಿ ಮತ್ತು ಬಾತುಕೋಳಿ ಸಾಕಾಣೆ ಮಾಡ್ತಾರೆ. ಬೆಳಗ್ಗೆ ಮೂರು ಗಂಟೆಗೆ ಕೋಳಿಗಳು ಒಟ್ಟಾಗಿ ಕೂಗುತ್ತವೆ. ಇದರಿಂದ ನಮ್ಮ ಮಗು ನಿದ್ರೆಯಿಂದ ಎದ್ದುಬಿಡ್ತಾನೆ.

    ಕೋಳಿ ಕೂಗೋದರಿಂದ ನಮಗೂ ನಿದ್ದೆ ಬರ್ತಿಲ್ಲ, ಅಕ್ಕಪಕ್ಕದವರಿಗೂ ನಿದ್ರೆ ಸಮಸ್ಯೆ ಎದುರಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ದೂರು ನೀಡಿ ಟ್ವೀಟ್‌ ಮಾಡಿರುವ ಆ ವ್ಯಕ್ತಿ, ಟ್ವಿಟ್ಟರ್‌ನಲ್ಲಿ ಪೊಲೀಸ್‌ ಕಮಿಷನರ್‌, ಡಿಸಿಪಿಗೆ ಟ್ಯಾಗ್‌ ಮಾಡಿ ದೂರಿದ್ದಾನೆ. ಇದನ್ನೂ ಓದಿ: ಕ್ಲಬ್, ಪಬ್‌ನಲ್ಲಿ ಮಹಿಳಾ ಸಿಬ್ಬಂದಿ ಕಡ್ಡಾಯ – ಹೊಸ ವರ್ಷಾಚರಣೆಗೆ ಪಿಂಕ್‌ಸ್ಕ್ವಾಡ್‌ ಸರ್ಪಗಾವಲು

    Live Tv
    [brid partner=56869869 player=32851 video=960834 autoplay=true]

  • ನಿತ್ಯ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಈ ಕಾಯಿಲೆಗಳು ಬರುತ್ತೆ!

    ನಿತ್ಯ 5 ಗಂಟೆಗಿಂತ ಕಡಿಮೆ ನಿದ್ರೆ ಮಾಡಿದ್ರೆ ಈ ಕಾಯಿಲೆಗಳು ಬರುತ್ತೆ!

    ನಿದ್ರೆ (Sleep) ಅಂದ್ರೆ ಎಲ್ಲರಿಗೂ ಇಷ್ಟ. ಆದರೆ ಬದಲಾದ ಜೀವನಶೈಲಿ, ಒತ್ತಡದ ಬದುಕಿನಿಂದಾಗಿ ಬಹುಪಾಲು ಮಂದಿ ನಿದ್ರೆ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಎಷ್ಟೋ ಮಂದಿ ನಿದ್ರೆಗಿಂತ ತಮ್ಮ ಕೆಲಸಗಳಿಗೇ ಹೆಚ್ಚು ಆದ್ಯತೆ ನೀಡುತ್ತಾರೆ. ಇನ್ನೂ ಕೆಲವರಿಗೆ ಮೊಬೈಲ್‌, ಲ್ಯಾಪ್‌ಟಾಪ್‌ ಕೈಯಲಿದ್ರೆ ಸಾಕು, ನಿದ್ರೆಯನ್ನೇ ಮರೆತುಬಿಡ್ತಾರೆ. ಇಂಥವರಿಗೆ ಅಧ್ಯಯನವೊಂದು ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ. ಅದರಲ್ಲೂ ಮುಖ್ಯವಾಗಿ 50 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ನಿದ್ರೆಗೂ ಹೆಚ್ಚಿನ ಒತ್ತು ನೀಡಬೇಕು.

    50 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಜನರು ದಿನಕ್ಕೆ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಸಮಯ ನಿದ್ರೆ ಮಾಡಿದರೆ ಹೃದ್ರೋಗ (Heart Disease), ಮಧುಮೇಹ (Diabetes) ಮತ್ತು ಕ್ಯಾನ್ಸರ್‌ನಂತಹ (Cancer) ಬಹು ದೀರ್ಘಕಾಲದ ಕಾಯಿಲೆಗಳು ಎದುರಾಗುವ ಸಮಸ್ಯೆ ಇರುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್‌ ಗುಣಗಳೇನು ಗೊತ್ತಾ?

    ಈಚೆಗೆ ಪೀರ್-ರಿವ್ಯೂಡ್ ಜರ್ನಲ್ PLOS ಮೆಡಿಸಿನ್‌ನಲ್ಲಿ ತಮ್ಮ ಸಂಶೋಧನೆಗಳನ್ನು ಸಂಶೋಧಕರ ತಂಡವು ಪ್ರಕಟಿಸಿದೆ. 50, 60 ಮತ್ತು 70 ವರ್ಷ ವಯಸ್ಸಿನ 7,864 ಬ್ರಿಟಿಷ್ ನಾಗರಿಕ ಸೇವಕರ ಡೇಟಾವನ್ನು ಸಂಶೋಧಕರ ತಂಡವು ವಿಶ್ಲೇಷಿಸಿದೆ.

    ಸಂಶೋಧನೆಗಳ ಪ್ರಕಾರ, 50ನೇ ವಯಸ್ಸಿನಲ್ಲಿ ಐದು ಗಂಟೆಗಳ ಅಥವಾ ಅದಕ್ಕಿಂತ ಕಡಿಮೆ ಅವಧಿ ನಿದ್ರೆ ಮಾಡುವವರಲ್ಲಿ ದೀರ್ಘಕಾಲದ ಕಾಯಿಲೆಗಳು ಶೇ.20 ವೃದ್ಧಿಯಾಗುತ್ತದೆ.

    50, 60 ಮತ್ತು 70ನೇ ವಯಸ್ಸಿನಲ್ಲಿ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಕಾಲ ನಿದ್ರಿಸುವುದು ಮಲ್ಟಿಮಾರ್ಬಿಡಿಟಿಯ ಸಮಸ್ಯೆಯನ್ನು ಶೇ.30 ರಿಂದ 40 ರಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದನ್ನೂ ಓದಿ: ಬುದ್ಧಿವಂತರು ಯಾವಾಗಲು ಏಕಾಂಗಿಯಾಗಿಯೇ ಕೆಲಸ ಮಾಡ್ತಾರೆ.. ಯಾಕೆ ಗೊತ್ತಾ?

    ಜನರು ವಯಸ್ಸಾದಂತೆ ಅವರ ನಿದ್ರೆಯ ಅಭ್ಯಾಸಗಳು ಮತ್ತು ನಿದ್ರೆಯ ರಚನೆಯು ಬದಲಾಗುತ್ತದೆ. ಆದಾಗ್ಯೂ ರಾತ್ರಿಯಲ್ಲಿ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡುವುದು ಒಳಿತು. ಅದಕ್ಕಿಂತ ಕಡಿಮೆ ಅವಧಿಯ ನಿದ್ರೆಯಿಂದ ದೀರ್ಘಕಾಲದ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕ ಡಾ. ಸೆವೆರಿನ್ ಸಬಿಯಾ ತಿಳಿಸಿದ್ದಾರೆ.

    ನೀವು ಮಲಗುವ ಕೋಣೆ ಶಾಂತ, ಕತ್ತಲೆ, ಆರಾಮದಾಯಕ ತಾಪಮಾನದಲ್ಲಿರಬೇಕು. ರಾತ್ರಿ ಹೊತ್ತು ಅತಿಯಾಗಿ ಊಟ ಸೇವಿಸುವುದು ಸರಿಯಲ್ಲ. ಹಗಲಿನಲ್ಲಿ ವ್ಯಾಯಾಮ, ದೈಹಿಕ ಶ್ರಮ ಹಾಕಿದರೆ ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಮಾಡಬಹುದು ಎನ್ನುತ್ತಾರೆ ಡಾ. ಸಬಿಯಾ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..

    Live Tv
    [brid partner=56869869 player=32851 video=960834 autoplay=true]

  • ಮಾಂಸದೂಟದ ಕನಸು ಕಾಣ್ತಾ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ!

    ಮಾಂಸದೂಟದ ಕನಸು ಕಾಣ್ತಾ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡ!

    ಮಧ್ಯಪ್ರದೇಶ: ಮಾಂಸದೂಟ ತಿನ್ನುವ ಆಸೆಯಾಗಿ ಮೇಕೆ ಕತ್ತರಿಸುವ ಕನಸು ಕಂಡ ವ್ಯಕ್ತಿ, ನಿಜವಾಗಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

    ಘಾನಾದ ಅಸ್ಸಿನ್ ಫೋಸು ಎಂಬಲ್ಲಿ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೋಫಿ ಅಟ್ಟಾ ಎಂಬ ವ್ಯಕ್ತಿ ನಿದ್ರೆಯಿಂದ ಎಚ್ಚರವಾದಾಗ ತನ್ನ ಮರ್ಮಾಂಗ ಕತ್ತರಿಸಿಕೊಂಡಿರುವುದನ್ನು ನೋಡಿದ್ದಾನೆ. ತೀವ್ರ ರಕ್ತಸ್ರಾವ ಉಂಟಾಗಿದ್ದರಿಂದ ಮಧ್ಯಪ್ರದೇಶದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಯಾಳು ಕೋಫಿ ಅಟ್ಟಾ ಸಂಬಂಧಿಕರು ಹಣ ಸಂಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: 400 ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿದ ಚಿರತೆ ಸೆರೆಗೆ ಹೈ ಡೆಫೆನೆಶನ್ ಡ್ರೋನ್ ಬಳಕೆ

    ನಾನು ನಿದ್ರಿಸಿದ್ದಾಗ ಕುರ್ಚಿಯಲ್ಲಿ ಕುಳಿತಿದ್ದೆ. ನಾನು ಮೇಕೆಯನ್ನು ಕತ್ತರಿಸುತ್ತಿದ್ದೇನೆ ಎಂದು ಕನಸು ಕಂಡೆ, ಆದರೆ ನನ್ನ ಜನನಾಂಗಕ್ಕೆ ಹೇಗೆ ಚಾಕು ಹಾಕಿಕೊಂಡೆ ಎಂಬುದರ ಬಗ್ಗೆ ಯಾವ ನೆನಪೂ ಇಲ್ಲ ಎಂದು ಹೇಳಿಕೊಂಡಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ರಾತ್ರಿ ಹೊತ್ತು ದಿವ್ಯಾ, ಅರವಿಂದ್ ಪಿಸುಗುಸು – ನಿದ್ರೆ ಇಲ್ಲದೇ ಮನೆಮಂದಿ ಒದ್ದಾಟ

    ರಾತ್ರಿ ಹೊತ್ತು ದಿವ್ಯಾ, ಅರವಿಂದ್ ಪಿಸುಗುಸು – ನಿದ್ರೆ ಇಲ್ಲದೇ ಮನೆಮಂದಿ ಒದ್ದಾಟ

    ದೊಡ್ಮನೆಯ ಜೋಡಿ ಹಕ್ಕಿ ಅಂದರೆ ಅದು ದಿವ್ಯಾ ಹಾಗೂ ಅರವಿಂದ್. ಬಿಗ್‍ಬಾಸ್ ಮನೆಯಲ್ಲಿ ಎಲ್ಲಿ ನೋಡಿದರೂ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವ ಈ ಜೋಡಿ ಹಗಲಲ್ಲಿ ಅಷ್ಟೇ ಅಲ್ಲದೇ ರಾತ್ರಿ ಕೂಡ ಮಾತನಾಡುತ್ತಿರುತ್ತಾರೆ ಎಂದು ಮನೆಯ ಮಂದಿ ಆರೋಪಿಸಿದ್ದಾರೆ. ಜೊತೆಗೆ ಇವರಿಬ್ಬರ ಪಿಸು ಮಾತಿನಿಂದ ರಾತ್ರಿ ಹೊತ್ತು ನಿದ್ರೆ ಮಾಡಲು ಆಗುತ್ತಿಲ್ಲ ಎಂದು ಸ್ಪರ್ಧಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

    ಸದ್ಯ ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನ  ಕೊನೆಯ ಫನ್ ಡೇ ವಿತ್ ಕಿಚ್ಚ ಎಪಿಸೋಡ್‍ನಲ್ಲಿ ಸುದೀಪ್‍ರವರು, ರಾತ್ರಿ ಹೊತ್ತು ಬೆಡ್ ರೂಂನಲ್ಲಿ ದಿವ್ಯಾ ಯು ಆಡುವ ಪಿಸು ಮಾತುಗಳು ಎಷ್ಟು ಬೇರೆಯವರಿಗೆ ತೊಂದರೆ ಮಾಡುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ವೈಷ್ಣವಿ ನನಗೆ ಯಾವತ್ತು ತೊಂದರೆಯಾಗಿಲ್ಲ. ಆದರೆ ಶುಭಾಗೆ ಇವರ ಮಾತಿನಿಂದ ತುಂಬಾ ತೊಂದರೆಯಾಗಿದೆ. ಆಗ ಕೋಪದಿಂದ ಬೈದು ಬಿಡುತ್ತಾರೆ. ಎಷ್ಟೇ ಬಾರಿ ಮಾತನಾಡಬೇಡಿ ಅಂದರೂ, ಅವರು ಚರ್ಚೆಯನ್ನು ಮುಗಿಸಿಯೇ ಮಲಗುವುದು. ನನ್ನ ಬಳಿ ಅರವಿಂದ್‍ಗೆ ಗುಡ್ ನೈಟ್ ಹೇಳಿ ಬರುತ್ತೇನೆ ಎಂದು ಅರ್ಧಗಂಟೆ ನಂತರ ಬರುತ್ತಾರೆ ಎನ್ನುತ್ತಾರೆ.

    ನಂತರ ಪ್ರಶಾಂತ್ ರಾತ್ರಿ 10 ನಿಮಿಷ ಮಾತನಾಡಿ ಹೋಗು ಎಂದು ಹೇಳುತ್ತೇನೆ. ಆಗ ಸರಿ ಹತ್ತು ನಿಮಿಷ ಮಾತನಾಡಿ ಹೋಗುತ್ತೇನೆ ಎಂದು ಮಾತನಾಡುತ್ತಲೇ ಇರುತ್ತಾರೆ. ನನಗೆ ಅವರು ಗುಸುಗುಸು ಮಾತುಗಳು, ಇಬ್ಬರು ಏನು ಜೋಕ್ ಮಾಡುತ್ತಾರೆ ಗೊತ್ತಿಲ್ಲ ಆದರೆ ಇಬ್ಬರು ಸಿಕ್ಕಾಪಟ್ಟೆ ಜೋರಾಗಿ ನಗುವುದು ಇದೆಲ್ಲಾ ಕೇಳಿ ಅಭ್ಯಾಸ ಆಗಿ ಹೋಗಿದೆ. 5 ನಿಮಿಷ ಎಂದು ಹೇಳಿ 20 ನಿಮಿಷ ಮಾತನಾಡುತ್ತಲೇ ಇರುತ್ತಾರೆ. ಕೊನೆಗೆ ಹೋಗಬೇಕಾದರೆ ಮಕ್ಕಳಂತೆ ಎರಡು ಕೆನ್ನೆಯನ್ನು ಮುದ್ದಾಗಿ ಮುಟ್ಟುತ್ತಾ ನಂತರ ಹೋಗಿ ಮಲಗುತ್ತಾರೆ ಎಂದಿದ್ದಾರೆ.

    ಆಗ ಅರವಿಂದ್ ದಿವ್ಯಾ ಬಂದಿದ ತಕ್ಷಣವೇ ನಾನು ಹೋಗಿ ಮಲಗಿಕೋ ಎಂದು ಹೇಳುತ್ತೇನೆ. ಎಷ್ಟು ಬಾರಿ ಹೇಳಿದರೂ ಅದು ಹೇಳುವುದನ್ನು ಕೇಳುವ ಜಾತಿ ಅಲ್ಲ. ಕೈ ಮುಗಿದು ಹೋಗಿ ಮಲಗಿಕೋ ಅಂತ ಹೆಳುತ್ತೇನೆ. ಆದರೂ ಹೋಗಿ ಮಲಗುವುದಿಲ್ಲ. 2 ನಿಮಿಷ, 3 ನಿಮಿಷ, 5 ನಿಮಿಷ ಎಂದು ಮಾತನಾಡುತ್ತಿರುತ್ತಾಳೆ ಎಂದು ಹೇಳಿದ್ದಾರೆ. ಇದನ್ನೂ ಓದಿ:ಇವಾಗ್ಲೇ ಮದ್ವೆಗೆ ರೆಡಿ ಅಗಿದ್ದೀರಲ್ರೀ..

  • ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

    ಮಂಜು ನಿದ್ದೆ ಹೋಗಿಸಿದ ಬಿಗ್‍ಬಾಸ್

    ಬಿಗ್‍ಬಾಸ್ ಮನೆಯಲ್ಲಿ ರಾತ್ರಿ ಹೊತ್ತು ಬಿಟ್ಟರೆ ಹಗಲಿನಲ್ಲಿ ಸ್ಪರ್ಧಿಗಳು ನಿದ್ರೆ ಮಾಡುವಂತಿಲ್ಲ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೂ ಮನಸ್ಸಿನಲ್ಲಿ ನಿದ್ದೆ ಮಾಡಬಾರದು ಅಂತ ಅಂದುಕೊಂಡರೂ ಕಣ್ಣುಗಳು ಮಾತು ಕೇಳಬೇಕಲ್ವಾ? ಆಗಾಗ ಕಣ್ಣುಗಳು ನಿದ್ರೆಗೆ ಜಾರಿಯೇ ಬಿಡುತ್ತದೆ. ಇನ್ನೂ ದೊಡ್ಮನೆಯಲ್ಲಿ ಸ್ಪರ್ಧಿಗಳು 5 ನಿಮಿಷ ನಿದ್ರೆಗೆ ಜಾರುವಂತಿಲ್ಲ, ಅಷ್ಟರಲ್ಲಿ ಎದ್ದೇಳು ಮಂಜುನಾಥ ಸಾಂಗ್ ಪ್ಲೇ ಮಾಡಿ ಬಿಗ್‍ಬಾಸ್ ಎದ್ದೇಳುವಂತೆ ಎಚ್ಚರಿಸುತ್ತಾರೆ. ಆದ್ರೆ ಈ ಬಾರಿ ನಿದ್ದೆ ಗುಂಗಲ್ಲಿ ಇದ್ದ ಮಂಜು ಹಾಗೂ ವೈಷ್ಣವಿಗೆ ಬಿಗ್‍ಬಾಸ್ ವಿಭಿನ್ನವಾಗಿ ಟ್ವಿಸ್ಟ್ ನೀಡುವ ಮೂಲಕ ನಿದ್ದೆ ಹೋಗಿಸಿದ್ದಾರೆ.

    ಹೌದು, ನಿದ್ರೆ ಕಣ್ಣಿನಲ್ಲಿದ್ದ ಮಂಜುಗೆ ಬಿಗ್‍ಬಾಸ್ ಕರೆ ಮಾಡಿ, ನಿಮಗೆ ನಿದ್ದೆ ಬರುತ್ತಿದ್ಯಾ? ನಿಮಗೆ ಅಷ್ಟೇನಾ ಅಥವಾ ಇನ್ನೂ ಯಾರಿಗಾದರೂ ನಿದ್ರೆ ಬರುತ್ತಿದ್ಯಾ ಎಂದು ಪ್ರಶ್ನಿಸಿದ್ದಾರೆ. ಆಗ ಮಂಜು ನನಗೆ ಹಾಗೂ ವೈಷ್ಣವಿ, ಶುಭಾಗೆ ನಿದ್ರೆ ಬರುತ್ತಿದೆ ಎಂದಿದ್ದಾರೆ. ಇದಕ್ಕೆ ಬಿಗ್‍ಬಾಸ್ ನಿಮಗೆ ಹಾಗೂ ವೈಷ್ಣವಿಗೆ ನಿದ್ದೆ ಹೋಗಿಸಲು ಚಟುವಟಿಕೆ ನೀಡಲಾ ಎಂದು ಕೇಳಿದ್ದಾರೆ. ಅದಕ್ಕೆ ಮಂಜು ಒಪ್ಪಿಕೊಂಡಿದ್ದಾರೆ. ಹೀಗಾಗಿ ಸ್ಟೋರ್ ರೂಮ್‍ನಲ್ಲಿ ಕೆಲವು ಚಟುವಟಿಕೆ ಸಾಮಾಗ್ರಿ ಹಾಗೂ ವಿವರಗಳನ್ನು ಕಳುಹಿಸಿಕೊಡುವುದಾಗಿ ಬಿಗ್‍ಬಾಸ್ ತಿಳಿಸಿದ್ದಾರೆ.

    ಅದರಂತೆ ಸ್ಟೋರ್ ರೂಮ್‍ಗೆ ಹೋಗಿ ನೋಡಿದ ಮಂಜುಗೆ ಅಕ್ಕಿ ಹಾಗೂ ಜೀರಿಗೆ ಕಂಡಿದೆ. ಅದನ್ನು ಎತ್ತಿಕೊಂಡು ಬಂದ ಮಂಜು ಅಕ್ಕಿ ಹಾಗೂ ಜೀರಿಗೆ ಕೊಟ್ಟು ಬೇರೆ ಮಾಡಿ ಅಂತ ಹೇಳಿದ್ದಿರಲ್ಲ ಬಿಗ್‍ಬಾಸ್ ಎಂದು ಗೋಳಾಡಿದ್ದಾರೆ. ಇದನ್ನು ಕಂಡು ಮನೆ ಮಂದಿಯೆಲ್ಲಾ ಎದ್ದು ಬಿದ್ದು ನಗುತ್ತಾ, ಅಕ್ಕಿ ಮತ್ತು ಜೀರಿಗೆಯನ್ನು ಬೇರೆ, ಬೇರೆ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

    ನಂತರ ಅಕ್ಕಿ ಹಾಗೂ ಜಿರಿಗೆ ಸೋಸುವುದಕ್ಕೆ ಕುಳಿತ ಮಂಜು ಸುಸ್ತಾಗಿ, ಒಳ್ಳೆ ಶಿಕ್ಷೆ ಕೊಟ್ರಿ ಬಿಗ್‍ಬಾಸ್, ಕತ್ತು ನೋವು ಬರುತ್ತಿದೆ, ಬಿಗ್‍ಬಾಸ್ ಸ್ವಲ್ಪ ಶಿಕ್ಷೆ ಕಡಿಮೆ ಮಾಡಿ ಎಂದು ಮಂಜು ಮನವಿ ಮಾಡಿಕೊಂಡಿದ್ದಾರೆ. ಕೊನೆಗೆ ಬಿಗ್‍ಬಾಸ್ ಅಕ್ಕಿ- ಜಿರಿಗೆಯನ್ನು ಬೇರ್ಪಡಿಸಿರುವುದು ಆಗಿದ್ದರೆ, ಮಂಜು, ವೈಷ್ಣವಿ ನಿದ್ದೆ ಹೋಗಿದ್ದರೆ ಎರಡನ್ನು ಹಿಂದಿರುಗಿಸುವಂತೆ ಸೂಚಿಸಿದ್ದಾರೆ.  ಇದನ್ನೂ ಓದಿ:ಹಾಲು ಕರೆದು, ಒಲೆ ಹಚ್ಚಿ ಖಡಕ್ ರೊಟ್ಟಿ ಮಾಡಿದ ಅದಿತಿ ಪ್ರಭುದೇವ

  • ತಡರಾತ್ರಿ ನಿದ್ರೆ ಕಣ್ಣಿನಲ್ಲಿ ಪಕ್ಕದ ಮನೆಗೆ ನುಗ್ಗಿದ್ರಂತೆ ಮಂಜು!

    ತಡರಾತ್ರಿ ನಿದ್ರೆ ಕಣ್ಣಿನಲ್ಲಿ ಪಕ್ಕದ ಮನೆಗೆ ನುಗ್ಗಿದ್ರಂತೆ ಮಂಜು!

    ಬಿಗ್‍ಬಾಸ್ ಕಾರ್ಯಕ್ರಮ ಪ್ರಾರಂಭವಾದಗನಿಂದ ಮನೆಮಂದಿ ಹಲವು ವಿಚಾರಗಳನ್ನು ಒಂದೊಂದಾಗಿ ಬಿಚ್ಚಿಡುತ್ತಿದ್ದಾರೆ. ಸದ್ಯ ನಿನ್ನೆ ಲ್ಯಾಗ್ ಮಂಜು ಇಷ್ಟು ದಿನ ಮುಚ್ಚಿಟ್ಟ ಸೀಕ್ರೆಟ್ ಒಂದನ್ನು ರಿವೀಲ್ ಮಾಡಿದ್ದಾರೆ.

    ಲೀವಿಂಗ್ ಏರಿಯಾದಲ್ಲಿ ದಿವ್ಯಾ ಸುರೇಶ್, ದಿವ್ಯಾ ಉರುಡುಗ, ವಿಶ್ವನಾಥ್ ಜೊತೆ ಕುಳಿತಿದ್ದ ಮಂಜು ತಮಗೆ ನಿದ್ರೆಗಣ್ಣಿನಲ್ಲಿ ಓಡಾಡುವ ಅಭ್ಯಾಸವಿದೆ ಎಂಬ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ. ನಾನು ಯಾವಾಗಲೂ ಒಂದೇ ರೀತಿ ಮಲಗಿರುವುದಿಲ್ಲ. ಯಾವಾಗಲೂ ಒದ್ದಾಡುತ್ತಲೆ ಇರುತ್ತೇನೆ. ಅಲ್ಲದೆ ನನಗೆ ನಿದ್ರೆ ಕಣ್ಣಿನಲ್ಲಿ ಓಡಾಡುವ ಅಭ್ಯಾಸವಿತ್ತು ಆದರೆ ಈಗ ಬಿಟ್ಟಿದ್ದೇನೆ ಅಷ್ಟೇ ಎಂದು ಹೇಳುತ್ತಾರೆ.

    ಇದನ್ನು ಕೇಳಿ ಅಚ್ಚರಿಗೊಂಡ ದಿವ್ಯಾ ಸುರೇಶ್ ನಿಜಾನಾ ಎಂದು ಪ್ರಶ್ನಿಸಿದಾಗ, ಹೌದು ನಾನು ಚಿಕ್ಕವನಿದ್ದಾಗ ಊರಿನಲ್ಲಿ ನಿದ್ರೆ ಕಣ್ಣಿನಲ್ಲಿ ಹೋಗಿ ಬೇರೆಯವರ ಮನೆಯಲ್ಲಿ ಮಲಗಿದ್ದೇನೆ. ಬಾಗಿಲು ಹೇಗೆ ತೆಗೆದುಕೊಂಡು ಹೋಗುತ್ತಿದ್ದೆ ಎಂದು ದಿವ್ಯಾ ಸುರೇಶ್ ಕೇಳಿದಾಗ, ನಮ್ಮ ಊರಿನಲ್ಲಿ ಬೇಸಿಗೆ ಕಾಲದಲ್ಲಿ ಬಾಗಿಲು ಹಾಕಿಕೊಂಡು ಯಾರು ಮಲಗುತ್ತಿರಲಿಲ್ಲ. ಹೊರಗಡೆ, ಒಳಗಡೆ, ಅಲ್ಲಿ, ಇಲ್ಲಿ ಮಲಗಿಕೊಳ್ಳುತ್ತಿದ್ದರು ಈ ವೇಳೆ ನಾನು ನಿದ್ರೆ ಕಣ್ಣಿನಲ್ಲಿ ಹೋಗಿ ಮಲಗುತ್ತಿದ್ದೆ ಎಂದು ಹೇಳುತ್ತಾರೆ.

    ಬಳಿಕ ದಿವ್ಯಾ ಸುರೇಶ್ ಹಾಗಾದರೆ ಈಗಲಾದರೂ ಅದು ಸರಿ ಹೋಗಿದ್ಯಾ ಎಂದಾಗ, ಈಗ ಆ ಸಮಸ್ಯೆ ಇಲ್ಲ. ಆದರೆ ಯಾವಾಗಲಾದರೂ ಒಂದು ಸಾರಿ ಹೋದರೂ ಹೋಗಬಹುದೇನೋ ಎಂದು ಮಂಜು ಹಾಸ್ಯ ಮಾಡುತ್ತಾರೆ. ಈ ವೇಳೆ ದಿವ್ಯಾ ಉರುಡುಗ, ವಿಶ್ವನಾಥ್, ದಿವ್ಯಾ ಸುರೇಶ್ ಜೋರಾಗಿ ನಗುತ್ತಾರೆ.

  • ಹೋದ ಹೋದಲ್ಲೆಲ್ಲಾ ನಿದ್ರೆ ಹೋಗ್ತಾರೆ, ಹೀಗೊಂದು ವಿಚಿತ್ರ ಊರಿನ ರಿಯಲ್ ಕಥೆ!

    ಹೋದ ಹೋದಲ್ಲೆಲ್ಲಾ ನಿದ್ರೆ ಹೋಗ್ತಾರೆ, ಹೀಗೊಂದು ವಿಚಿತ್ರ ಊರಿನ ರಿಯಲ್ ಕಥೆ!

    ಇದು ಕಜಕಿಸ್ತಾನದ ಸುಂದರವಾದ ಪ್ರದೇಶ ಕಲಾಚಿ. ತನ್ನಲ್ಲಿರೋ ನೈಸರ್ಗಿಕ ಸಂಪತ್ತಿನಿಂದ ಹಾಗೂ ಪ್ರಾಕೃತಿಕ ಸೌಂದರ್ಯದಿಂದಾಗಿ ಕಲಾಚಿ ಪ್ರಸಿದ್ಧಿಯನ್ನ ಹೊಂದಿದೆ. ಇಲ್ಲಿ ನೆಲೆಸಿರೋ ಜನ ಕೂಡಾ ಅಷ್ಟೇ ನೆಮ್ಮದಿಯಿಂದ ಜೀವನ ಕಂಡುಕೊಂಡಿದ್ದಾರೆ. ಇಲ್ಲಿಯೇ ಹುಟ್ಟಿ ಬೆಳೆದು ತಮ್ಮ ಹಳ್ಳಿ ತಮ್ಮ ಜನ ಅಂತ ದಿನಗಳನ್ನು ದೂಡ್ತಿದ್ದವರಿಗೆ ಈಗ ಒಂದು ವಿಚಿತ್ರ ಸಮಸ್ಯೆ ಕಾಡೋಕೆ ಶುರುವಾಗಿದೆ. ಅದು ನಿದ್ದೆ.

    ನಾವು ನೀವೆಲ್ಲಾ ಬೆಳಗ್ಗೆಯಿಂದ ಸಂಜೆತನಕ ದುಡಿದು ಒಮ್ಮೆ ಮನೆ ಸೇರಿ ನೆಮ್ಮದಿಯಾಗಿ ನಿದ್ರಾದೇವಿಯ ಮಡಿಲು ಸೇರೋ ತವಕದಲ್ಲಿರ್ತೀವಿ. ಆದ್ರೆ, ಕಜಕಿಸ್ತಾನದ ಕಲಾಚಿ ಗ್ರಾಮದವ್ರಿಗೆ ನಿದ್ರಾದೇವಿಯೇ ಶಾಪವಾಗಿ ಪರಿಣಮಿಸಿದ್ದಾಳೆ. ಇವರಿಗೆ ನಿದ್ದೆ ಅಂದ್ರೆ ಬೆಚ್ಚಿಬೀಳೋ ಪರಿಸ್ಥಿತಿ ಉಂಟಾಗಿದ್ಯಂತೆ. ಕೇಳೋಕೆ ವಿಚಿತ್ರ ಅಂತಾ ಅನ್ಸಿದ್ರೂ ಇದು ಖಂಡಿತಾ ನಿಜ.

    ಕಲಾಚಿ ಅನ್ನೋ ಈ ಸುಂದರ ಹಳ್ಳಿಯ ಜನರಿಗೆ ನಿದ್ದೆಯ ರೋಗ ಇನ್ನಿಲ್ಲದಂತೆ ಕಾಡ್ತಾ ಇದೆ. ಕಳೆದ ನಾಲ್ಕೈದು ವರ್ಷಗಳಿಂದ ಇಂತಹಾ ತೊಂದ್ರೆ ಕಾಣಿಸ್ಕೊಳ್ಳೋದಕ್ಕೆ ಶುರುವಾಗಿದೆ. ಇಲ್ಲಿ ನಿದ್ರೆಗೆ ಹೊತ್ತು ಗೊತ್ತಿಲ್ಲ. ಯಾವ್ ಟೈಮಲ್ಲಿ, ಏನೇ ಕೆಲ್ಸ ಮಾಡ್ತಿದ್ರೂ ಸಡನ್ ಆಗಿ ತೂಕಡಿಸೋದಕ್ಕೆ ಶುರುವಾಗುತ್ತೆ. ನೀವು ಒಂದು ಪಕ್ಷ ಕುಂಭಕರ್ಣನನ್ನ ಬೇಕಾದ್ರೂ ಎಬ್ಬಿಸ್ಬೋದೇನೊ. ಆದ್ರೆ, ಇಲ್ಲಿ ಒಮ್ಮೆ ಮಲಗಿದೋರು ಅವ್ರಾಗೇ ಏಳೋವರೆಗೂ ಎಬ್ಬಿಸೋದಕ್ಕೆ ಸಾಧ್ಯಾನೇ ಇಲ್ಲ. ಇಲ್ಲಿ ಕೆಲವರ ನಿದ್ದೆಯಂತೂ ಕೆಲವು ಗಂಟೆಗಳಿಂದ ಹಿಡಿದು ತಿಂಗಳವರೆಗೂ ನಡೆಯುತ್ತೆ.

    ಅಂದ್ಹಾಗೆ, ಈ ಕಾಯಿಲೆ ಆರಂಭವಾಗಿರೋದು ಸುಮಾರು 2010ರ ಏಪ್ರಿಲ್ ತಿಂಗಳಲ್ಲಿ. ಮೊದ ಮೊದಲು ಇದನ್ನ ಹಗುರವಾಗಿ ಪರಿಗಣಿಸಿದ ಜನಕ್ಕೆ ಬರ್ತಾ ಬರ್ತಾ ಇದ್ರ ತೀವ್ರತೆ ಅರ್ಥವಾಗ್ತಾಹೋಯ್ತು. ಕೂತಲ್ಲಿ, ನಿಂತಲ್ಲಿ, ಯಾವುದೋ ಶಾಪಿಂಗ್ ಕಾಂಪ್ಲೆಕ್ಸ್ ಗೆ ಹೋದಲ್ಲಿ, ಸ್ಕೂಲಲ್ಲಿ, ದೇವಸ್ಥಾನದಲ್ಲಿ ಹೀಗೆ ಎಲ್ಲೆಂದ್ರಲ್ಲಿ ಧಡಾರ್ ಅಂತಾ ನಿದ್ರಾ ದೇವಿ ಅಟ್ಯಾಕ್ ಮಾಡಿಬಿಡ್ತಾ ಇದ್ಲು. ಸರಿ ಸುಮಾರು 800 ಜನ ಇರೋ ಈ ಗ್ರಾಮದಲ್ಲಿ 15% ಜನ ಈ ರೋಗಕ್ಕೆ ತುತ್ತಾಗಿರೋದು ನಿಜಕ್ಕೂ ಭಯಹುಟ್ಟಿಸಿಬಿಟ್ಟಿತ್ತು.

    ನಿದ್ದೆ ಬರ್ದೇ ಇದ್ರೆ, ಡಾಕ್ಟರ್ ಬಳಿ ಹೋಗೋದನ್ನ ನೋಡಿರ್ತೀವಿ. ಆದ್ರೆ, ಇಲ್ಲಿನ ಜನ ಮಾತ್ರ ತಮಗೆ ನಿದ್ದೆ ಹೆಚ್ಚಾಗಿದೆ ಅನ್ನೋ ಕಾರಣಕ್ಕೆ ವೈದ್ಯರ ಬಳಿ ಧಾವಿಸೋದಕ್ಕೆ ಶುರು ಮಾಡಿಬಿಟ್ಟಿದ್ರು. ಡಾಕ್ಟರ್ ಕೂಡಾ ಕಾರಣ ಗೊತ್ತಾಗದೆ ಕೈಚೆಲ್ಲಿದಾಗ, ವಿಜ್ಞಾನಿಗಳ ಮೊರೆ ಹೋದ್ರು ಇಲ್ಲಿನ ಜನ. ರಹಸ್ಯವನ್ನು ಹೇಗಾದ್ರೂ ಬೇಧಿಸ್ಲೇಬೇಕು ಅಂತಾ ಡಿಸೈಡ್ ಮಾಡಿದ ವಿಜ್ಞಾನಿಗಳ ತಂಡವೊಂದು ಈ ಕಾಯಿಲೆ ಯಾಕೆ ಹರಡುತ್ತೆ ಅಂತಾ ಕಾರಣ ಹುಡುಕ್ತಾ ಸಾಗಿದ್ರು. ಈ ನಿದ್ರೆಯ ಜಾಡು ಹಿಡಿದವರಿಗೆ ಇಲ್ಲೊಂದು ಮಹತ್ವದ ಸುಳಿವು ಸಿಕ್ಕಿತ್ತು. ಈ ರೋಗಕ್ಕೆ ತುತ್ತಾದವ್ರ ಮೆದುಳಿನಲ್ಲಿ ದ್ರವ ರೂಪದ ಪದಾರ್ಥ ಹೆಚ್ಚಾಗ್ತಾ ಹೋಗ್ತಿತ್ತು. ಆದ್ರೆ, ದ್ರವ ರೂಪದ ಪದಾರ್ಥ ಹೆಚ್ಚಾಗ್ತಿರೋದ್ಯಾಕೆ ಅಂತಾ ನೋಡಿದಾಗ ಅಂತಿಮವಾಗಿ ಸಿಕ್ಕ ಕಾರಣವೇ ಕಲುಷಿತ ನೀರು.

    ಕಜಕಿಸ್ಥಾನದ ಕಲಾಚಿ ಅನ್ನೋ ಈ ಗ್ರಾಮದ ಬಳಿ ಹಿಂದೆ ಒಂದು ಯುರೇನಿಯಂ ಗಣಿ ಇತ್ತು. ಆದ್ರೀಗ ಆ ಗಣಿ ಬಂದ್ ಆಗಿದ್ರೂ, ಅದ್ರಿಂದಾಗಿ ವಿಷಕಾರಿ ರೇಡಿಯೇಷನ್ ಉತ್ಪತ್ತಿಯಾಗುತ್ತೆ. ಇದೇ ರೇಡಿಯೇಶನ್ ನಿಂದಾಗಿ ಜನರಿಗೆ ಒಂದು ರೀತಿಯ ಮಂಪರು ಆವರಿಸುತ್ತಿದೆ ಅನ್ನೋದಾಗಿ ವಿಜ್ಞಾನಿಗಳು ಹೇಳ್ತಾರೆ. ಆದ್ರೆ, ಕಾರಣ ಇಂದಿಗೂ ಅಸ್ಪಷ್ಟವಾಗೇ ಉಳಿದಿದೆ. ಇಂದಿಗೂ ಜನ ಇದೇ ಮಂಪರಿನಲ್ಲಿ ದಿನ ದೂಡ್ತಿದ್ದಾರೆ.

    ಕ್ಷಮಾ ಭಾರದ್ವಾಜ್, ಉಜಿರೆ

  • ಪ್ಲೀಸ್ ಅಲರ್ಟ್ ಸಿಎಂ ಸರ್ ಸ್ಲೀಪಿ: ಸಿಎಂ ಸಿದ್ದರಾಮಯ್ಯಗೆ ಚೀಟಿ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

    ಪ್ಲೀಸ್ ಅಲರ್ಟ್ ಸಿಎಂ ಸರ್ ಸ್ಲೀಪಿ: ಸಿಎಂ ಸಿದ್ದರಾಮಯ್ಯಗೆ ಚೀಟಿ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

    ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮನ್ವಯ ಸಭೆಯ ಬಳಿಕ ನಿದ್ದೆ ತೂಕಡಿಸುತ್ತಿದ್ದ ಸಿಎಂ ಸಿದ್ದರಾಮಯ್ಯನವರನ್ನು ದಿನೇಶ್ ಗುಂಡೂರಾವ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಸಿದ ಘಟನೆ ನಡೆದಿದೆ.

    ಒಂದೂವರೆ ಗಂಟೆಗಳ ಕಾಲ ನಡೆದ ಸಮನ್ವಯ ಸಮಿತಿ ಸಭೆಯ ಬಳಿಕ ಸಂಜೆ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿದರು. ಈ ಸುದ್ದಿಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಮೂವರು ಉಸ್ತುವಾರಿ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

    ಸುದ್ದಿಗೋಷ್ಠಿ ನಡೆಯುತ್ತಿದ್ದಾಗ ಸಿಎಂ ಸಿದ್ದರಾಮಯ್ಯ ನಿದ್ರೆಗೆ ಜಾರಿದ್ದರು. ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್, ‘ಪ್ಲೀಸ್ ಅಲರ್ಟ್ ಸಿಎಂ ಸರ್ ಸ್ಲೀಪಿ’ ಎಂದು ಬರೆದು ಚೀಟಿ ಕಳುಹಿಸಿದರು. ಕೂಡಲೇ ದಿನೇಶ್ ಗುಂಡೂರಾವ್ ಕನ್ನಡಕ ಕೊಟ್ಟು ಸಿದ್ದರಾಮಯ್ಯನವರನ್ನು ಎಚ್ಚರಿಸಿದರು.

    ಸುದ್ದಿಗೋಷ್ಠಿ ಮುಗಿದ ಬಳಿಕ ಸಿಎಂ ಈ ಆ ಚೀಟಿಯನ್ನು ಹಾಗೆಯೇ ಬಿಟ್ಟು ಹೋಗಿದ್ದರು. ಮಾಧ್ಯಮದ ವ್ಯಕ್ತಿಗಳು ವೇದಿಕೆಯ ಮೇಲೆ ಹೋಗಿ ಆ ಚೀಟಿಯಲ್ಲಿ ಏನಿದೆ ಎಂದು ಕುತೂಹಲದಿಂದ ನೋಡಿದಾಗ, ‘ಪ್ಲೀಸ್ ಅಲರ್ಟ್ ಸಿಎಂ ಸರ್ ಸ್ಲೀಪಿ’ ಎಂಬುದಾಗಿ ಅದರಲ್ಲಿ ಬರೆಯಲಾಗಿತ್ತು.