Tag: ನಾಸಾ

  • ಅನ್ಯಗ್ರಹ ಜೀವಿಗಳು ಭೂಮಿಗೆ ಕಾಲಿಟ್ಟಿವೆ, ಆದ್ರೆ ಗುರುತಿಸಲು ಸಾಧ್ಯವಾಗುತ್ತಿಲ್ಲ- ನಾಸಾ ವಿಜ್ಞಾನಿ

    ಅನ್ಯಗ್ರಹ ಜೀವಿಗಳು ಭೂಮಿಗೆ ಕಾಲಿಟ್ಟಿವೆ, ಆದ್ರೆ ಗುರುತಿಸಲು ಸಾಧ್ಯವಾಗುತ್ತಿಲ್ಲ- ನಾಸಾ ವಿಜ್ಞಾನಿ

    ವಾಸಿಂಗ್ಟನ್: ಅನ್ಯಗ್ರಹದ ಜೀವಿಗಳು ಭೂಮಿಗೆ ಕಾಲಿಟ್ಟಿವೆ. ಆದರೆ ಅವುಗಳನ್ನು ಗುರುತಿಸಲು ನಮಗೆ ಸಾಧ್ಯವಾಗಿಲ್ಲ ಎಂದು ನಾಸಾದ ವಿಜ್ಞಾನಿಯೊಬ್ಬರು ಹೇಳಿದ್ದಾರೆ.

    ನಾಸಾದ ಕಂಪ್ಯೂಟರ್ ವಿಜ್ಞಾನಿ, ಎಮ್ಸ್ ಸಂಶೋಧನ ಕೇಂದ್ರದ ಪ್ರೊಫೆಸರ್ ಸಿಲ್ವನೋ ಪಿ ಕೊಲೊಂಬನೊ ಎಂಬವರು ಈ ಕುರಿತು ಸಂಶೋಧನ ಮಾಡಿದ್ದಾರೆ. ಈಗಾಗಲೇ ಎಲಿಯನ್ಸ್ ಭೂಮಿಗೆ ಆಗಮಿಸಿದ್ದು, ಮಾನವನ ಕಲ್ಪನೆಗಿಂತಲೂ ಭಿನ್ನವಾಗಿವೆ. ಅವುಗಳು ಕಾರ್ಬನ್ ಆಧಾರಿತ ಜೀವಿಗಳಾಗಿದ್ದು, ಕಾಣಿಸಿಕೊಳ್ಳದೆ ಉಳಿದುಕೊಂಡಿವೆ ಎಂದು ತಿಳಿಸಿದ್ದಾರೆ.

    ಈಗಾಗಲೇ ಪತ್ತೆ ಮಾಡಲಾಗದ ಅನ್ಯಗ್ರಹದ ಜೀವಿಗಳು ಭೂಮಿ ಬಂದಿರಬಹುದು ಎಂದು ನಾನು ಊಹಿಸಿದ್ದೇನೆ. ಅವುಗಳ ಬಗ್ಗೆ ಇರುವ ನಮ್ಮ ಕಲ್ಪನೆಗಳನ್ನು ಪಾಲಿಸಬೇಕು. ಜೊತೆಗೆ ವಿಭಿನ್ನ ವಿಚಾರ ಗುಣಲಕ್ಷಣ ಹೊಂದಿರುವುದನ್ನು ಪರಿಗಣಿಸಬೇಕಾಗುತ್ತದೆ. ಈಗಾಗಲೇ ಏಲಿಯನ್ಸ್ ಭೂಮಿಗೆ ಕಾಲಿಟ್ಟು ಸಂಚಾರ ಆರಂಭಿಸಿವೆ ಎಂದು ಸಿಲ್ವನೋ ಅವರು ತಮ್ಮ ಸಂಶೋಧನಾ ಪ್ರಬಂಧದಲ್ಲಿ ತಿಳಿಸಿದ್ದಾರೆ.

    ಕೇವಲ ಕಲ್ಪನೆ ಆಧಾರದ ಮೇಲೆ ಉಳಿದುಕೊಳ್ಳದೆ, ಹೀಗಾಗಿ ಉನ್ನತ ತಂತ್ರಜ್ಞಾನ ಹಾಗೂ ಇಂಟೆಲಿಜೆನ್ಸ್ ಮೂಲಕ ಎಲಿಯನ್ಸ್ ಗಳನ್ನು ಪತ್ತೆ ಹಚ್ಚುವ ಕಾರ್ಯ ನಡೆಯಬೇಕಿದೆ. ಭೂಮಿಯ ಮೇಲೆ ಸುಮಾರು 10 ಸಾವಿರ ವರ್ಷಗಳ ಹಿಂದೆ ಮಾನವ ತಂತ್ರಜ್ಞಾನವನ್ನು ಬಳಕೆ ಮಾಡಲು ಪ್ರಾರಂಭಿಸಿದ. ಆದರೆ ವೈಜ್ಞಾನಿಕ ಅಧ್ಯಯನ ವಿಧಾನವನ್ನು ಅಳವಡಿಸಿಕೊಂಡಿದ್ದು 500 ವರ್ಷಗಳ ಹಿಂದೆ. ಹೀಗಾಗಿ ವೈಜ್ಞಾನಿಕ ಅಧ್ಯಯನ ಇನ್ನೂ ಸಾಕಷ್ಟು ಆಗಬೇಕಿದೆ ಎನ್ನುವ ಸಲಹೆಯನ್ನು ನೀಡಿದ್ದಾರೆ.

    ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದ್ದರೂ, ಈ ತಂತ್ರಜ್ಞಾನಗಳನ್ನು ತಪ್ಪಿಸಿಕೊಂಡು ಭೂಮಿಯನ್ನು ಏಲಿಯನ್ಸ್ ಪ್ರವೇಶ ಮಾಡುತ್ತಿವೆ ಎಂದು ಅವರು ತಮ್ಮ ಸಂಶೋಧನಾ ಲೇಖನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಾಸಾದಿಂದ ಸೂರ್ಯ ಶಿಕಾರಿ: ಸೋಲಾರ್ ಪ್ರೋಬ್ ನೌಕೆ ಉಡಾವಣೆ ಯಶಸ್ವಿ

    ನಾಸಾದಿಂದ ಸೂರ್ಯ ಶಿಕಾರಿ: ಸೋಲಾರ್ ಪ್ರೋಬ್ ನೌಕೆ ಉಡಾವಣೆ ಯಶಸ್ವಿ

    ವಾಷಿಂಗ್ಟನ್: ಸೂರ್ಯನ ಮೇಲ್ಮೈ ಪ್ರದೇಶದ ಅಧ್ಯಯನಕ್ಕಾಗಿ ಅಮೆರಿಕದ ನಾಸಾ ರೂಪಿಸಿದ `ಪಾರ್ಕರ್ ಸೋಲಾರ್ ಪ್ರೋಬ್’ ನೌಕೆಯ ಉಡಾವಣೆ ಯಶಸ್ವಿಯಾಗಿದೆ.

    ಫ್ಲೋರಿಡಾದ ಕೇಪ್ ಕೆನವರಾಲ್‍ನಿಂದ ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆ 1 ನಿಮಿಷಕ್ಕೆ ಡೆಲ್ಟಾ -4 ಹೆಸರಿನ ರಾಕೆಟ್ ಸೋಲಾರ್ ಪ್ರೋಬ್ ಅನ್ನು ಹೊತ್ತುಕೊಂಡು ಬಾಹ್ಯಾಕಾಶಕ್ಕೆ ಚಿಮ್ಮಿದೆ. ಶನಿವಾರ ಮಧ್ಯಾಹ್ನ 1.3ಕ್ಕೆ ನಿಗದಿಯಾಗಿದ್ದರೂ ಮತ್ತೆ ಭಾರತೀಯ ಕಾಲಮಾನ ಮಧ್ಯಾಹ್ನ 2.8ಕ್ಕೆ ನಿಗದಿಯಾಗಿತ್ತು. ನಂತರ ಈ ಉಡಾವಣಾ ಸಮಯವನ್ನು ನಾಸಾ ಭಾನುವಾರಕ್ಕೆ ಮುಂದೂಡಿಕೆ ಮಾಡಿತ್ತು.

    ಸೋಲಾರ್ ಪಾರ್ಕರ್ ನೌಕೆ ಸೂರ್ಯನ ನಾಭಿಯಿಂದ 61 ಲಕ್ಷ ಕಿ. ಮೀ ಸಮೀಪ ಸಾಗಲಿದೆ. ಸೂರ್ಯನ ಬಳಿ ತಲುಪಿದ 7 ವರ್ಷಗಳ ಅವಧಿಯಲ್ಲಿ 24 ಬಾರಿ ಈ ನೌಕೆ ಹಾದು ಹೋಗಲಿದೆ. ಒಂದು ಸೆಕೆಂಡಿಗೆ ಅಂದಾಜು 200 ಕಿ.ಮೀ ವೇಗದಲ್ಲಿ ಸಾಗುವ ನೌಕೆ ಗಂಟೆಗೆ 7 ಲಕ್ಷ ಕಿ.ಮೀ ವೇಗದಲ್ಲಿ ಸೂರ್ಯನ ಸಮೀಪ ಹಾದು ಹೋಗುವಂತೆ ನಿರ್ಮಿಸಲಾಗಿದೆ. ಹೀಗಾಗಿ ಅತಿ ವೇಗದ ಮಾನವ ನಿರ್ಮಾಣ ವಾಹನವೆಂಬ ಖ್ಯಾತಿಯನ್ನು ಸೋಲಾರ್ ಪ್ರೋಬ್ ನೌಕೆ ಪಡೆದಿದೆ. ಈ ವಿಶೇಷ ಅಧ್ಯಯನಕ್ಕೆ ಅಮೆರಿಕ ಸರ್ಕಾರ 10 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ.

    ಸೂರ್ಯನ ಶಾಖದಿಂದ ನೌಕೆ ಸುಟ್ಟು ಹೋಗದೇ ಇರಲು ಕಾರ್ಬನ್ ಹೀಟ್ ಶೀಲ್ಡ್‍ಗಳನ್ನು ಬಳಸಲಾಗಿದೆ. ಹೊರಭಾಗದಲ್ಲಿ 1370 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದ್ದರೆ, ಒಳಭಾಗದಲ್ಲಿ ಕೇವಲ 30 ಡಿಗ್ರಿ ಸೆಲ್ಸಿಯಸ್ ಇರುವಂತೆ ನೌಕೆಯನ್ನು ವಿನ್ಯಾಸ ಮಾಡಲಾಗಿದೆ. ವಿದ್ಯುತ್‍ಗಾಗಿ ಸೌರ ಪ್ಯಾನೆಲ್‍ಗಳನ್ನು ಬಳಸಲಾಗಿದೆ.

    60 ವರ್ಷದ ಹಿಂದೆ ಅಮೆರಿಕದ ಭೌತಶಾಸ್ತ್ರ ವಿಜ್ಞಾನಿ ಯೂಜಿನ್ ಪಾರ್ಕರ್ ಸೌರ ಮಾರುತದ ಇರುವುಕೆಯ ಬಗ್ಗೆ ತಿಳಿಸಿದ್ದರು. ಹೀಗಾಗಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಅವರ ಹೆಸರನ್ನು ಇಡಲಾಗಿದೆ.

  • ಅಮೆರಿಕದಿಂದ ಸೂರ್ಯ ಬೇಟೆ: ನೌಕೆ ಉಡಾವಣೆ ಮುಂದಕ್ಕೆ

    ಅಮೆರಿಕದಿಂದ ಸೂರ್ಯ ಬೇಟೆ: ನೌಕೆ ಉಡಾವಣೆ ಮುಂದಕ್ಕೆ

    ವಾಷಿಂಗ್ಟನ್: ಸೂರ್ಯನ ಅಧ್ಯಯನ ನಡೆಸಲು ಇಂದು ಉಡಾವಣೆಯಾಗಬೇಕಿದ್ದ ನಾಸಾದ ಸೋಲಾರ್ ಪ್ರೋಬೋ ನೌಕೆಯ ಉಡಾವಣೆ ಮುಂದೂಡಿಕೆಯಾಗಿದೆ.

    ಭಾರತೀಯ ಕಾಲಮಾನ ಮಧ್ಯಾಹ್ನ 1.03ಕ್ಕೆ ಈ ನೌಕೆ ಅಮೆರಿಕದ ಫ್ಲೋರಿಡಾದಲ್ಲಿರುವ ಕೇಪ್ ಕೆನವೆರಲ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾಗಬೇಕಿತ್ತು. ಡೆಲ್ಟಾ -4 ಹೆಸರಿನ ರಾಕೆಟ್ ಸೋಲಾರ್ ಪ್ರೋಬ್ ಅನ್ನು ಹೊತ್ತುಕೊಂಡು ಸಾಗಬೇಕಿತ್ತು.

    ಆರಂಭದಲ್ಲಿ ಮಧ್ಯಾಹ್ನ 1.03ಕ್ಕೆ ನಿಗದಿಯಾಗಿದ್ದರೂ ಮತ್ತೆ ಭಾರತೀಯ ಕಾಲಮಾನ ಮಧ್ಯಾಹ್ನ 2.08ಕ್ಕೆ ನಿಗದಿಯಾಗಿತ್ತು. ನಂತರ ಈ ಉಡವಾಣಾ ಸಮಯವನ್ನು ನಾಸಾ ಈಗ ಭಾನುವಾರಕ್ಕೆ ಮುಂದೂಡಿದೆ. ಭಾನುವಾರ ಭಾರತೀಯ ಕಾಲಮಾನ ಮಧ್ಯಾಹ್ನ 1.01(ಅಮೆರಿಕ ಕಾಲಮಾನ ಬೆಳಗ್ಗೆ 3.31) ರಾಕೆಟ್ ಉಡಾವಣೆಯಾಗಲಿದೆ.

    ಸೋಲಾರ್ ಪಾರ್ಕರ್ ನೌಕೆ ಸೂರ್ಯನ ನಾಭಿಯಿಂದ 61 ಲಕ್ಷ ಕಿ. ಮೀ ಸಮೀಪ ಸಾಗಲಿದೆ. ಸೂರ್ಯನ ಬಳಿ ತಲುಪಿದ 7 ವರ್ಷಗಳ ಅವಧಿಯಲ್ಲಿ 24 ಬಾರಿ ಈ ನೌಕೆ ಹಾದು ಹೋಗಲಿದೆ. ಒಂದು ಸೆಕೆಂಡಿಗೆ ಅಂದಾಜು 200 ಕಿ.ಮೀ ವೇಗದಲ್ಲಿ ಸಾಗುವ ನೌಕೆ ಗಂಟೆಗೆ 7 ಲಕ್ಷ ಕಿ.ಮೀ ವೇಗದಲ್ಲಿ ಸೂರ್ಯನ ಸಮೀಪ ಹಾದು ಹೋಗುವಂತೆ ನಿರ್ಮಿಸಲಾಗಿದೆ. ಹೀಗಾಗಿ ಅತಿ ವೇಗದ ಮಾನವ ನಿರ್ಮಾಣ ವಾಹನವೆಂಬ ಖ್ಯಾತಿಯನ್ನು ಸೋಲಾರ್ ಪ್ರೋಬ್ ನೌಕೆ ಪಡೆದಿದೆ. ಈ ವಿಶೇಷ ಅಧ್ಯಯನಕ್ಕೆ ಅಮೆರಿಕ ಸರ್ಕಾರ 10 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದೆ.

    ಸೂರ್ಯನ ಶಾಖದಿಂದ ನೌಕೆ ಸುಟ್ಟು ಹೋಗದೇ ಇರಲು ಕಾರ್ಬನ್ ಹೀಟ್ ಶೀಲ್ಡ್ ಗಳನ್ನು ಬಳಸಲಾಗಿದೆ. ಹೊರಭಾಗದಲ್ಲಿ 1,370 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದ್ದರೆ, ಒಳಭಾಗದಲ್ಲಿ ಕೇವಲ 30 ಡಿಗ್ರಿ ಸೆಲ್ಸಿಯಸ್ ಇರುವಂತೆ ನೌಕೆಯನ್ನು ವಿನ್ಯಾಸ ಮಾಡಲಾಗಿದೆ. ವಿದ್ಯುತ್‍ಗಾಗಿ ಸೌರ ಪ್ಯಾನೆಲ್‍ಗಳನ್ನು ಬಳಸಲಾಗಿದೆ.

    60 ವರ್ಷದ ಹಿಂದೆ ಅಮೆರಿಕದ ಭೌತಶಾಸ್ತ್ರ ವಿಜ್ಞಾನಿ ಯೂಜಿನ್ ಪಾರ್ಕರ್ ಸೌರ ಮಾರುತದ ಇರುವುಕೆಯ ಬಗ್ಗೆ ತಿಳಿಸಿದ್ದರು. ಹೀಗಾಗಿ ಈ ಮಹತ್ವಾಕಾಂಕ್ಷಿ ಯೋಜನೆಗೆ ಅವರ ಹೆಸರನ್ನು ಇಡಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಖಾಸಗಿ ಬಾಹ್ಯಾಕಾಶ ಯಾನಕ್ಕೆ ಸುನಿತಾ ವಿಲಿಯಮ್ಸ್ ಆಯ್ಕೆ

    ಖಾಸಗಿ ಬಾಹ್ಯಾಕಾಶ ಯಾನಕ್ಕೆ ಸುನಿತಾ ವಿಲಿಯಮ್ಸ್ ಆಯ್ಕೆ

    ನ್ಯೂಯಾರ್ಕ್: ಅಮೆರಿಕ ಬಾಹ್ಯಕಾಶ ಸಂಸ್ಥೆ(ನಾಸಾ)ಯ ಮತ್ತೊಂದು ಗಗನಯಾತ್ರೆಯಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.

    2019 ರ ಮಧ್ಯಂತರದಲ್ಲಿ ನಾಸಾವು ತನ್ನ ಮೊದಲ ವಾಣಿಜ್ಯ ಯಾತ್ರೆಯನ್ನು ಒಂಬತ್ತು ಗಗನಯಾತ್ರಿಗಳನ್ನು ಒಳಗೊಂಡ ತಂಡ ಕೈಗೊಳ್ಳಲಿದ್ದು, ಈ ತಂಡದಲ್ಲಿ ಭಾರತ ಮೂಲದ ಸುನಿತಾ ವಿಲಿಯಮ್ಸ್ ಕೂಡ ಒಬ್ಬರಾಗಿದ್ದಾರೆ. ಇವರ ತಂದೆಯವರು ಮೂಲತಃ ಗುಜರಾತಿನ ಮೂಲದವರಾಗಿದ್ದಾರೆ. ಸುನಿತಾರವರು ಸದ್ಯ ಅಮೆರಿಕಾದ ನೌಕಾದಳದ ಕೋ ಪೈಲೆಟ್ ಹಾಗೂ ನಾಸಾದ ನಿವೃತ್ತ ರ್ಯಾಂಕ್ ಒನ್ ಅಧಿಕಾರಿಯಾಗಿದ್ದಾರೆ.

    ಬೋಯಿಂಗ್ ಮತ್ತು ಸ್ಪೇಸ್ ಎಕ್ಸ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಹೊಸ ನೌಕೆಯಲ್ಲಿ 9 ಗಗನಯಾತ್ರಿಗಳ ತಂಡವು ಅಧಿಕೃತ ಪ್ರವಾಸ ಕೈಗೊಳ್ಳಲಿದೆ ಎಂದು ನಾಸಾ ತಿಳಿಸಿದೆ.

    ಲಾಂಚ್ ಅಮೆರಿಕ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ನಾಸಾದ ಆಡಳಿತ ಮುಖ್ಯಸ್ಥ ಜಿಮ್ ಬ್ರಿಡೆನ್ ಸ್ಟೈನ್‍ರವರು, ಅಮೆರಿಕ ನೆಲದಿಂದ ದೇಶದ ಗಗನಯಾತ್ರಿಗಳನ್ನು ಅಮೆರಿಕದ ರಾಕೆಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ. ಸುರಕ್ಷತೆ ಹಾಗೂ ಕಾರ್ಯನಿರ್ವಹಣಾ ಅಗತ್ಯತೆಗಳನ್ನು ಪೂರೈಸಲು ಇತರೆ ಸಹಯೋಗ ಸಂಸ್ಥೆಗಳ ಜೊತೆ ನಾಸಾವು ನೌಕೆಯನ್ನು ವಿನ್ಯಾಸ, ಅಭಿವೃದ್ಧಿ ಹಾಗೂ ಪರೀಕ್ಷಾ ವಿಧಾನಗಳಲ್ಲಿ ಜತೆಯಾಗಿ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.

    ಸುನಿತಾ ವಿಲಿಯಮ್ಸ್ ಅವರೊಂದಿಗೆ ನಾಸಾದ ಖಗೋಳ ವಿಜ್ಞಾನಿಗಳಾದ ರಾಬರ್ಟ್ ಬೆಹೆಂಕೇನ್, ಡಗ್ಲಸ್ ಹರ್ಲೆ, ಏರಿಕಗ್ ಬೊಯೆ, ನಿಕೊಲೆ ಮನ್, ಬೋಯಿಂಗ್‍ನ ಅಧಿಕಾರಿ ಕ್ರಿಸ್ಟೋಫರ್ ಫರ್ಗುಸನ್ ರವರು ಸಹ ಈ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಂಗಳನ ಅಂಗಳದಲ್ಲಿ ಹಾರಲಿದೆ ಹೆಲಿಕಾಪ್ಟರ್!

    ಮಂಗಳನ ಅಂಗಳದಲ್ಲಿ ಹಾರಲಿದೆ ಹೆಲಿಕಾಪ್ಟರ್!

    ವಾಷಿಂಗ್ಟನ್:2020ರ ಜುಲೈನಲ್ಲಿ ಮಂಗಳಗ್ರಹಕ್ಕೆ ರೋವರ್ ಗಗನನೌಕೆಯ ಜೊತೆಗೆ ಹೆಲಿಕಾಪ್ಟರ್ ಕಳುಹಿಸಲು ನಾಸಾ ಸಿದ್ಧತೆ ನಡೆಸಿದೆ.

    ತನ್ನ ಮುಂದಿನ ಮಾರ್ಸ್ 2020 ರೋವರ್ ಮಿಷನ್ ಯೋಜನೆಯ ಭಾಗವಾಗಿ ಸಣ್ಣ ಸ್ವತಂತ್ರವಾದ ಹೆಲಿಕಾಪ್ಟರ್ ಅನ್ನು ಮಂಗಳ ಗ್ರಹದಲ್ಲಿ ಇಳಿಸಲಾಗುವುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ಮಂಗಳ ಗ್ರಹಕ್ಕೆ ತಲುಪಿದ ನಂತರ ಮೊದಲ 30 ದಿನ ಗ್ರಹದ ಮೆಲ್ಮೈ ಮೇಲೆ ಸುಗಮ ಹಾರಾಟಕ್ಕೆ ಸಂಬಂಧಿಸಿದಂತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅನ್ಯ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸುವ ಯೋಜನೆ ಕುತೂಹಲವನ್ನು ಸೃಷ್ಟಿ ಮಾಡಿದೆ. ಭವಿಷ್ಯದ ವಿಜ್ಞಾನಕ್ಕೆ ಹಾಗೂ ಮಂಗಳ ಗ್ರಹದ ಕುರಿತಾದ ಅನ್ವೇಷಣೆಗೆ ಈ ಯೋಜನೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ.

    ಮಂಗಳ ಗ್ರಹಕ್ಕೆ ಕಳುಹಿಸುವ ಹೆಲಿಕಾಪ್ಟರ್ ನ ತಯಾರಿ 2013 ರಲ್ಲಿ ಕ್ಯಾಲಿಫೋರ್ನಿಯದ ನಾಸಾ ಜೆಟ್ ಪ್ರೊಪಲ್ಷನ್ ಲ್ಯಾಬೋರೇಟರಿ(ಜೆಪಿಎಲ್)ಯಲ್ಲಿ ಶುರುವಾಗಿದೆ. 4 ಎಲ್‍ಬಿ ಎಸ್ (1.8 ಕೆಜಿ) ತೂಕವಿದ್ದು, ಇದರ ಮುಖ್ಯಭಾಗ ಚೆಂಡಿನ ಆಕಾರದಲ್ಲಿ ಇರಲಿದೆ. ಸೋಲಾರ್ ಸೆಲ್ ಗಳ ಚಾರ್ಜಿಂಗ್ ವ್ಯವಸ್ಥೆ ಇರಲಿದ್ದು ತಣ್ಣಗಿನ ರಾತ್ರಿಯ ಸಂದರ್ಭಕ್ಕೆ ಯಾಂತ್ರಿಕ ತಾಪಮಾನ ವ್ಯವಸ್ಥೆಯನ್ನು ಮಾಡಲಾಗಿದೆ.

    ಮಂಗಳ ಗ್ರಹದ ತೆಳುವಾದ ವಾತಾವರಣದಲ್ಲಿ ಹಾರಲು ಹೆಲಿಕಾಪ್ಟರ್ ನ ಬ್ಲೇಡ್ ಗಳು ಭೂಮಿಯ ಮೇಲೆ ತಿರುಗುವ 10 ಪಟ್ಟು ವೇಗವಾಗಿ ತಿರುಗಲಿವೆ. ಭೂಮಿಯ ಮೇಲೆ ಗರಿಷ್ಠ 40 ಸಾವಿರ (12 ಸಾವಿರ ಮೀ) ಅಡಿಗಳ ಮೇಲೆ ಹಾರಾಟ ಮಾಡಬಲ್ಲದಾಗಿದೆ. ಭೂಮಿಯ ವಾತಾವರಣದ 1% ರಷ್ಟು ವಾತಾವರಣ ಮಂಗಳನ ಮೇಲಿದೆ ಎಂದು ತಿಳಿಸಿದರು.

    ತೆಳುವಾದ ವಾತಾವರಣದಲ್ಲಿ ಹಾರಾಡುವ ಹೆಲಿಕಾಪ್ಟರ್ ಶಕ್ತಿಶಾಲಿಯಾಗಿ, ಬಲಶಾಲಿಯಾಗಿ ಇರಬೇಕಾಗಿದ್ದು ತೂಕ ಕಡಿಮೆ ಇರಬೇಕಾಗುತ್ತದೆ ಹಾಗಾಗಿ ಎಲ್ಲವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ನಾಸಾ ಅಧಿಕಾರಿ ಮಿಮಿ ಅಂಗ್ ಹೇಳಿದ್ದಾರೆ.

    ರೋವರ್ ಗೆ ಅಂಟಿಕೊಂಡು ಹೆಲಿಕಾಪ್ಟರ್ ಹಾರಲಿದೆ. ಮಂಗಳ ಗ್ರಹಕ್ಕೆ ತಲುಪಿದ ನಂತರ ಹೆಲಿಕಾಪ್ಟರ್ ಅನ್ನು ಒಂದು ಜಾಗದಲ್ಲಿ ಇರಿಸಿ ಅಲ್ಲಿಂದ ಸ್ವಲ್ಪ ದೂರದಲ್ಲಿ ರೋವರ್ ನಿಲ್ಲಲಿದೆ. ವಿಜ್ಞಾನಿಗಳು ಇಲ್ಲಿಂದ ರೋವರ್ ಅನ್ನು ನಿರ್ದೇಶಿಸುವ ಮೂಲಕ ಹೆಲಿಕಾಪ್ಟರ್ ಅನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

    ಹೆಲಿಕಾಪ್ಟರ್ ಯೋಜನೆ ಸಾಹಸದ ಕೆಲಸ ಆದರೆ ಅದರಿಂದ ಅಷ್ಟೇ ಸಹಾಯವಾಗಲಿದೆ. ಒಂದು ವೇಳೆ ಹೆಲಿಕಾಪ್ಟರ್ ಕಾರ್ಯ ನಿರ್ವಹಿಸದಿದ್ದರೂ 2020 ರೋವರ್ ಮಿಷನ್ ಗೆ ಅಡ್ಡಿಯಿಲ್ಲ ಎಂದು ಧೃಡಪಡಿಸಿದ್ದಾರೆ. ಹೆಲಿಕಾಪ್ಟರ್ ಸರಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಗ್ರಹದ ಎಲ್ಲಾ ಭಾಗಗಳ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

     

     

  • 2100ರ ಹೊತ್ತಿಗೆ ಮುಳುಗಲಿದ್ಯಂತೆ ಮಂಗಳೂರು- ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಾಸಾ ಸಿದ್ಧಪಡಿಸಿದೆ ಬೆಚ್ಚಿಬೀಳಿಸೋ ವರದಿ

    2100ರ ಹೊತ್ತಿಗೆ ಮುಳುಗಲಿದ್ಯಂತೆ ಮಂಗಳೂರು- ಗ್ಲೋಬಲ್ ವಾರ್ಮಿಂಗ್ ಬಗ್ಗೆ ನಾಸಾ ಸಿದ್ಧಪಡಿಸಿದೆ ಬೆಚ್ಚಿಬೀಳಿಸೋ ವರದಿ

    ಮಂಗಳೂರು: ಇದು ರಾಜ್ಯದ ಕರಾವಳಿ ಭಾಗದ ಜನರಿಗೆ ದೊಡ್ಡ ಬರಸಿಡಿಲಿನಂಥ ಸುದ್ದಿ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಪ್ರಕಾರ, ಇನ್ನು ಕೇವಲ ನೂರು ವರ್ಷಗಳಲ್ಲಿ ನಮ್ಮ ರಾಜ್ಯದ ಹೆಬ್ಬಾಗಿಲು ಎಂದು ಗುರುತಿಸಲ್ಪಟ್ಟಿರುವ ಮಂಗಳೂರು ನಗರ ಪೂರ್ತಿಯಾಗಿ ಸಮುದ್ರದಲ್ಲಿ ಮುಳುಗಲಿದೆಯಂತೆ.

    ಹೌದು. 2100ರ ವೇಳೆಗೆ ಮಂಗಳೂರು ನಗರವೇ ಸಮುದ್ರದಲ್ಲಿ ಲೀನವಾಗಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳುತ್ತಿದ್ದಾರೆ. ಇಂಥ ಶಾಕಿಂಗ್ ನ್ಯೂಸ್ ಕೊಟ್ಟಿದ್ದು ಯಾರೋ ಜ್ಯೋತಿಷಿಗಳಲ್ಲ. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ. ವಿಜ್ಞಾನಿಗಳು ನೀಡಿರೋ ವರದಿ ಪ್ರಕಾರ ಇನ್ನೈವತ್ತು ಅಥವಾ ನೂರು ವರ್ಷಗಳಲ್ಲಿ ಮಂಗಳೂರು ನಗರ ಸಮುದ್ರದಲ್ಲಿ ಲೀನವಾಗಲಿದೆಯಂತೆ.

    ಭೂಮಿಯ ತಾಪಮಾನ ಏರುತ್ತಿರುವುದರಿಂದ ಮಂಜುಗಡ್ಡೆಗಳು ಕರಗಲಾರಂಭಿಸಿದ್ದು, ಇಂಥ ಸ್ಥಿತಿ ಹೀಗೆ ಮುಂದುವರೆದಲ್ಲಿ 2100ರ ವೇಳೆಗೆ ದೇಶದ ಕರಾವಳಿ ಭಾಗದ ನಗರಗಳು ಸಮುದ್ರದಲ್ಲಿ ಮುಳುಗಲಿದ್ಯಂತೆ. ನಾಸಾ ವಿಜ್ಞಾನಿಗಳು ತಯಾರಿಸಿರೋ ಗ್ರೇಡಿಯಂಟ್ ಫಿಂಗರ್ ಪ್ರಿಂಟ್ ಮ್ಯಾಪಿಂಗ್ ಎನ್ನುವ ಹವಾಮಾನ ಮುನ್ಸೂಚನೆ ನೀಡುವ ಮಾಪಕ ಈ ಮಾಹಿತಿ ನೀಡಿದೆ.

    ಈ ಉಪಕರಣ ಮಂಜುಗಡ್ಡೆ ಕರಗುವಿಕೆಯಿಂದ ಜಗತ್ತಿನ ಯಾವ ಭಾಗದಲ್ಲಿ ಸಮುದ್ರ ಮಟ್ಟ ಎಷ್ಟರ ಮಟ್ಟಿಗೆ ಏರಿಕೆಯಾಗಲಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಿದ್ದು, ಅದರ ಪ್ರಕಾರ ಜಗತ್ತಿನ 290 ಬಂದರು ನಗರಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಇದರ ಪ್ರಕಾರ ಅಮೆರಿಕದ ನ್ಯೂಯಾರ್ಕ್, ಮಹಾರಾಷ್ಟ್ರದ ಮುಂಬೈ ಮತ್ತು ಕರ್ನಾಟಕದ ಮಂಗಳೂರು ಅಪಾಯದ ಮಟ್ಟದಲ್ಲಿದ್ಯಂತೆ. ಕೊಲ್ಕತ್ತಾ ಮತ್ತು ಆಂಧ್ರ ಪ್ರದೇಶದ ಕಾಕಿನಾಡ ನಗರಗಳು ನಂತರದ ಸ್ಥಾನದಲ್ಲಿದೆ ಎನ್ನಲಾಗಿದೆ.

    ಉಪಕರಣ ನೀಡುತ್ತಿರೋ ಮಾಹಿತಿ ಪ್ರಕಾರ, 2100ರ ಹೊತ್ತಿಗೆ ಒಂದು ಮೀಟರ್ ನಷ್ಟು ಸಮುದ್ರ ಮಟ್ಟ ಏರಿಕೆಯಾಗಲಿದೆ. ಹಾಗೊಂದು ವೇಳೆ ಆದಲ್ಲಿ ಭಾರತದ 14 ಸಾವಿರ ಚದರ ಕಿಮೀ ವ್ಯಾಪ್ತಿಯ ಭೂಪ್ರದೇಶ ಸಮುದ್ರದಲ್ಲಿ ಸೇರಿಕೊಳ್ಳಲಿದೆ. ಇದರಿಂದಾಗುವ ನಾಶ- ನಷ್ಟ ಊಹನಾತೀತ ಎನ್ನುವ ಅಂಶವನ್ನು ವರದಿ ಹೇಳಿದೆ.

    ಇದನ್ನೂ ಓದಿ: ಗುಣಮಟ್ಟದ ಜೀವನಕ್ಕೆ ಏಷ್ಯಾದಲ್ಲೇ ಮಂಗಳೂರು ನಂಬರ್ ಒನ್, ವಿಶ್ವದಲ್ಲಿ 7ನೇ ಸ್ಥಾನ

    ವಿಶ್ವದ ಒಟ್ಟು ನೀರಿನ ಪ್ರಮಾಣದಲ್ಲಿ ಶೇಕಡ 75ರಷ್ಟು ಅಂಟಾರ್ಟಿಕಾ ಮತ್ತು ಧ್ರುವ ಪ್ರದೇಶಗಳಲ್ಲಿ ಮಂಜುಗಡ್ಡೆಯ ರೂಪದಲ್ಲಿದ್ದು, ತಾಪಮಾನ ಏರುತ್ತಾ ಹೋದರೆ ಭೂಮಿಯ ಗತಿ ಶೋಚನೀಯ ಎನ್ನುವ ಮಾಹಿತಿಯನ್ನೂ ವರದಿ ಹೇಳಿದೆ.

    ವರದಿ ಪ್ರಕಾರ 2100ರ ವೇಳೆಗೆ ಮಂಗಳೂರಿನ ಸಮುದ್ರ ಮಟ್ಟ 10.98 ಸೆಂಟಿಮೀಟರ್ ಇದ್ದರೆ, ಮುಂಬೈನಲ್ಲಿ 15.26 ಸೆ.ಮೀ ಹಾಗೂ ನ್ಯೂಯಾರ್ಕ್ ನಲ್ಲಿ 10.65 ಸೆ.ಮೀ ಇರಲಿದೆ. ಈ ಹಿಂದಿನ ವರದಿಯಲ್ಲಿ ಮುಂಬೈ ಮತ್ತು ನ್ಯೂಯಾರ್ಕ್ ನಗರಗಳು ಮಾತ್ರ ಅಪಾಯದ ಮಟ್ಟದಲ್ಲಿದ್ದವು. ಈಗಿನ ವರದಿ ಪ್ರಕಾರ ಮಂಗಳೂರು ನಗರ ಅಪಾಯಕಾರಿ ಪಟ್ಟಿಗೆ ಸೇರ್ಪಡೆಯಾಗಿರುವುದು ಹೊಸ ಬೆಳವಣಿಗೆ.

  • ನಾಸಾ ಪ್ರವಾಸಕ್ಕೆ ಹೋಗಲಿದ್ದಾರೆ ಮಂಡ್ಯ ವಿದ್ಯಾರ್ಥಿಗಳು

    ನಾಸಾ ಪ್ರವಾಸಕ್ಕೆ ಹೋಗಲಿದ್ದಾರೆ ಮಂಡ್ಯ ವಿದ್ಯಾರ್ಥಿಗಳು

    ಮಂಡ್ಯ: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಕೇಂದ್ರ ನಾಸಾಕ್ಕೆ ಭೇಟಿ ನೀಡೋದೇ ಹೆಮ್ಮೆಯ ವಿಷಯ. ಅಂಥದ್ರಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ವಿಶ್ವದ ಪ್ರತಿಷ್ಠಿತ ಬಾಹ್ಯಾಕಾಶ ಕೇಂದ್ರಕ್ಕೆ ಪ್ರವಾಸಕ್ಕೆ ಹೋಗಲಿದ್ದಾರೆ.

    ಹೌದು. ಮಂಡ್ಯದಲ್ಲಿರುವ ಅಭಿನವ ಭಾರತಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ನಾಸಾ ಪ್ರವಾಸಕ್ಕೆ ತೆರಳಲಿದ್ದಾರೆ. ಶಾಲೆಯ ಎಂಟು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ನಾಸಾಗೆ ಕಳುಹಿಸುತ್ತಿದೆ. ವಿದ್ಯಾರ್ಥಿಗಳಾದ ಸ್ವರ್ಣ, ಚಂದನ, ವಂದನಾ, ಸಾರಿಕಾ, ಚಿದಾನಂದ, ಪ್ರಣತಿ ಆರ್. ಭಾರದ್ವಜ್, ಹರ್ಷಿತ್ ಪಿ. ಆತ್ರೇಯ, ಸೋಹನ್ ಜಿ. ನಾಯಕ್‍ನನ್ನು ನಾಸಾಕ್ಕೆ ಕರೆದುಕೊಂಡು ಹೋಗಲಾಗ್ತಿದೆ.

    ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯದ ಬಗ್ಗೆ ಅಭಿರುಚಿ ಬೆಳೆಸುವುದರ ಜೊತೆಗೆ ಮತ್ತಷ್ಟು ಸಾಧನೆಗೆ ಪ್ರೇರೇಪಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಶಾಲೆಯ ಎಲ್ಲಾ ಮಕ್ಕಳಿಗೂ ಪೂರ್ವಭಾವಿಯಾಗಿ ಪರೀಕ್ಷೆ ಮಾಡಲಾಗಿತ್ತು. ಅದ್ರಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನ ಪ್ರವಾಸಕ್ಕಾಗಿ ಆಯ್ಕೆ ಮಾಡಲಾಗಿದೆ.

    ಇದೀಗ ಮಕ್ಕಳಿಗೆ ವೀಸಾ ಬಂದಿರೋದ್ರಿಂದ ಜುಲೈನಲ್ಲಿ ಅಮೆರಿಕಾದ ಪ್ರವಾಸ ಕೈಗೊಳ್ಳಲಾಗ್ತಿದೆ. ಇನ್ನು ವಿದ್ಯಾರ್ಥಿಗಳ ಖರ್ಚು ವೆಚ್ಚವನ್ನು ಶೇ.90ರಷ್ಟು ಶಿಕ್ಷಣ ಸಂಸ್ಥೆಯೇ ಪಾವತಿ ಮಾಡುತ್ತಿದ್ದು, ಮಕ್ಕಳ ಜೊತೆಗೆ ಶಾಲೆಯಲ್ಲಿ ಕೆಲಸ ನಿರ್ವಹಿಸುವ ಮೂವರು ಸಿಬ್ಬಂದಿ ಕೂಡ ನಾಸಾಕ್ಕೆ ಪ್ರವಾಸ ಹೋಗಲಿದ್ದಾರೆ.

    ಪ್ರವಾಸದ ಬಗ್ಗೆ ಸಾಕಷ್ಟು ಉತ್ಸುಕರಾಗಿರೋ ವಿದ್ಯಾರ್ಥಿಗಳು, ಇದೊಂದು ಉತ್ತಮ ಅವಕಾಶ. ಈ ಪ್ರವಾಸ ಮುಂದಿನ ದಿನಗಳಲ್ಲಿ ನಮಗೆ ಸಾಕಷ್ಟು ಅನುಕೂಲವಾಗಲಿದೆ. ಅಲ್ಲದೆ ಇಷ್ಟು ಚಿಕ್ಕ ವಯಸ್ಸಿಗೆ ಇಷ್ಟು ದೊಡ್ಡ ಅವಕಾಶ ಸಿಕ್ಕಿರೋದು ಖುಷಿ ವಿಚಾರ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ರೀತಿಯ ಅವಕಾಶ ಸಿಗೋದೇ ಕಡಿಮೆ. ಎಲ್ಲ ಶಾಲೆಯಲ್ಲೂ ಈ ರೀತಿಯ ಆಯೋಜನೆಯಾದ್ರೆ ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯ ನಂಬರ್ 1 ಆಗಲಿದೆ ಅಂತಾ ಸಂತಸ ವ್ಯಕ್ತಪಡಿಸ್ತಿದ್ದಾರೆ.