Tag: ನಾರಾಯಣಗುರು

  • ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನ ಕೊಡಿ: ರವಿಕುಮಾರ್

    ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ 500 ಕೋಟಿ ಅನುದಾನ ಕೊಡಿ: ರವಿಕುಮಾರ್

    ಬೆಂಗಳೂರು/ಬೆಳಗಾವಿ: ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ಸಿಎಂ ಸಿದ್ದರಾಮಯ್ಯ ಕೂಡಲೇ 500 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಅಂತ ಬಿಜೆಪಿ ಸದಸ್ಯ ರವಿಕುಮಾರ್ (Ravi Kumar) ಆಗ್ರಹಿಸಿದ್ದಾರೆ.

    ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪ ಮಾಡಿದ ರವಿಕುಮಾರ್, ಬೆಂಗಳೂರಿನಲ್ಲಿ ಈಡಿಗ, ಬಿಲ್ಲವ ಸಮುದಾಯದ ಸಮಾವೇಶ ನಡೆಯಿತು. ಸಿಎಂ ಸಿದ್ದರಾಮಯ್ಯ ಅವರು ನಾರಾಯಣಗುರು ನಿಗಮನಕ್ಕೆ 500 ಕೋಟಿ ಬಿಡುಗಡೆ ಮಾಡಿ ಅಂದರೆ ಅಧಿವೇಶನ ಇದೆ ಅಂತ ಹೇಳಿ ಘೋಷಣೆ ಮಾಡಿರಲಿಲ್ಲ. ಆದರೆ ಹುಬ್ಬಳ್ಳಿಯಲ್ಲಿ ನಡೆದ ಅಲ್ಪಸಂಖ್ಯಾತ ಸಮುದಾಯ ಸಮಾವೇಶದಲ್ಲಿ 10 ಸಾವಿರ ಕೋಟಿ ಕೊಡೋದಾಗಿ ಘೋಷಣೆ ಮಾಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ 10 ಸಾವಿರ ಘೋಷಣೆ ಮಾಡಿ ನಾರಾಯಣಗುರು ನಿಗಮಕ್ಕೆ 500 ಕೋಟಿ ಬಿಡುಗಡೆ ಮಾಡದೇ ಹೋದರೆ ಹೇಗೆ ಅಂತ ಪ್ರಶ್ನೆ ಮಾಡಿದರು.

    ಸಿದ್ದರಾಮಯ್ಯ (Siddaramaiah) ಅವರ ಈ ನಡೆ ಹಿಂದುಳಿದ ವರ್ಗಕ್ಕೆ ಮಾಡಿದ ಅಪಮಾನ, ಅನ್ಯಾಯ. ಇಂದು ಅಥವಾ ನಾಳೆ ಒಳಗೆ ಸದನದಲ್ಲಿ ನಾರಾಯಣಗುರು ನಿಗಮಕ್ಕೆ 500 ಕೋಟಿ ಘೋಷಣೆ ಮಾಡಬೇಕು ಅಂತ ಸಿಎಂ ಸಿದ್ದರಾಮಯ್ಯರನ್ನ ರವಿಕುಮಾರ್ ಒತ್ತಾಯ ಮಾಡಿದರು. ರವಿಕುಮಾರ್ ಆಗ್ರಹಕ್ಕೆ ಸಿಎಂ ಸಿದ್ದರಾಮಯ್ಯರಿಂದ ಉತ್ತರ ಕೊಡಿಸುವುದಾಗಿ ಸಭಾನಾಯಕ ಬೋಸರಾಜು ತಿಳಿಸಿದರು. ಇದನ್ನೂ ಓದಿ: ಮೈಸೂರು ಕಾಗದ ಕಾರ್ಖಾನೆ ಮರುಪ್ರಾರಂಭಕ್ಕೆ ಕ್ರಮ: ಎಂಬಿ ಪಾಟೀಲ್

  • ಮೋದಿ ಪ್ರಧಾನಿ ಆದ ಬಳಿಕ ಸ್ವಾತಂತ್ರ್ಯ ಹೋರಾಟಗಾರರು, ಧರ್ಮ ಪ್ರಚಾರಕರ ಬಗ್ಗೆ ತಿರಸ್ಕೃತ ಭಾವನೆ ಇದೆ: ಬಿ.ಕೆ ಹರಿಪ್ರಸಾದ್

    ಮೋದಿ ಪ್ರಧಾನಿ ಆದ ಬಳಿಕ ಸ್ವಾತಂತ್ರ್ಯ ಹೋರಾಟಗಾರರು, ಧರ್ಮ ಪ್ರಚಾರಕರ ಬಗ್ಗೆ ತಿರಸ್ಕೃತ ಭಾವನೆ ಇದೆ: ಬಿ.ಕೆ ಹರಿಪ್ರಸಾದ್

    ಬೆಂಗಳೂರು: ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಸ್ವಾತಂತ್ರ ಹೋರಾಟಗಾರರನ್ನು ಮತ್ತು ನಮ್ಮ ಧರ್ಮ ಪ್ರಚಾರಕರನ್ನು ತಿರಸ್ಕೃತ ಭಾವನೆಯಿಂದ ನೋಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಆರೋಪಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣರಾಜೋತ್ಸವ ಪರೇಡ್‍ನಲ್ಲಿ ನಾರಾಯಣಗುರು ಸ್ತಬ್ಧ ಚಿತ್ರಕ್ಕೆ ಅವಕಾಶ ನಿರಾಕರಣೆ ಮಾಡಿರುವುದು ಖಂಡನಾರ್ಹ. ರಾಜ್ಯ ಸರ್ಕಾರ ಒಕ್ಕೂಟ ವ್ಯವಸ್ಥೆಯಲ್ಲಿದೆ. ಅದಕ್ಕೆ ಕೇರಳ ಸರ್ಕಾರ ನಾರಾಯಣಗುರು ಸ್ತಬ್ಧ ಚಿತ್ರ ಕಳುಹಿಸಿದೆ. ಕೇಂದ್ರ ಸರ್ಕಾರ ಸ್ತಬ್ಧ ಚಿತ್ರ ತಿರಸ್ಕರಿಸಿದೆ. ರಾಷ್ಟ್ರಕ್ಕಾಗಿ ತ್ಯಾಗ ಮಾಡಿದ ಹಿರಿಯರನ್ನು ಕಡೆಗಣಿಸಿದೆ. ತಮಿಳುನಾಡಿನ ವೀರಬೊಮ್ಮನ್ ಸ್ತಬ್ಧ ಚಿತ್ರವನ್ನು ಕೂಡ ಕಡೆಗಣಿಸಲಾಗಿದೆ. ಒನ್ ನೇಷನ್, ಒನ್ ಕಲ್ಚರ್ ಅಂತಾರೆ. ನಾರಾಯಣಗುರುಗಳ ಸ್ತಬ್ಧ ಚಿತ್ರವನ್ನು ತಿರಸ್ಕರಿಸಿದ್ದಾರೆ. ಇದಕ್ಕೆ ಮೋದಿಯವರು ಕ್ಷಮೆ ಕೇಳಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ರಾಜಪಥದಲ್ಲಿ ಭಾರತದ ವೈಭವ ಅನಾವರಣ

    ಪೂಜಾರಿಯವರು ಬಿಲ್ಲವ ಅನುಯಾಯಿ. ಇನ್ನೊಬ್ಬರು ಶಂಕರಾಚಾರ್ಯರ ಅನುಯಾಯಿ. ಹೀಗಾಗಿ ಕರಾವಳಿ ನಾಯಕರು ಮಾತನಾಡಿಲ್ಲ. ಬಿಜೆಪಿ ಅಧ್ಯಕ್ಷರು ಮೂರು ಬಾರಿ ಸಂಸದರಾದವರು ಅವರು ಇದರ ಬಗ್ಗೆ ಚಕಾರವನ್ನೇ ಎತ್ತಿಲ್ಲ. ಸಿಎಂ ಬೊಮ್ಮಾಯಿ ಎಲ್ಲ ಜಾತಿ ಪರ ಅಂತಾರೆ ಅವರು ಇದರ ಬಗ್ಗೆ ಮಾತನಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಜೈ ಹಿಂದ್ – ಗಣರಾಜ್ಯೋತ್ಸವಕ್ಕೆ ಶುಭಕೋರಿದ ಪ್ರಧಾನಿ ಮೋದಿ

    ಏಕಮಂತ್ರ ಜಪಿಸಿದ ನಾರಾಯಣ ಗುರುವನ್ನು ಮರೆತಿದ್ದು ಯಾಕೆ?. ಅದು ಸಣ್ಣ ಸಮುದಾಯ ಎಂದು ಕಡೇಗಣಿಸಿದ್ದ, ಸಚಿವರಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ ನಾರಾಯಣ ಗುರು ಅನುಯಾಯಿ. ಸುನಿಲ್ ಕುಮಾರ್, ಶಂಕರಾಚಾರ್ಯರ ಅನುಯಾಯಿ. ಇವರಿಬ್ಬರೂ ಕೂಡ ಮಾತನಾಡುತ್ತಿಲ್ಲ. ಅಲ್ಲದೇ ಮಂಗಳೂರಿಂದ ನಾರಾಯಣ ಗುರುಗಳ ಮತದಿಂದ ಗೆದ್ದ ಕಟೀಲ್ ಮೌನವೇಕೆ? ಅವರ ಮತದಿಂದ ನೀವು ಮೂರು ಬಾರಿ ಸಂಸದರಾಗಿದ್ದು ನೀವು ಕೂಡ ಹೇಳಿಕೆ ಕೊಡ್ತಿಲ್ಲ ಎಂದು ಅಸಮಾಧಾನ ತೋಡಿಕೊಂಡರು.