Tag: ನಾನು ಮತ್ತು ಗುಂಡ

  • ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

    ಕ್ಷಿಣದ ಯಾವುದೇ ಸಿನಿಮಾದಲ್ಲಿ ನಾಯಿ ಕಾಣಿಸಿಕೊಳ್ಳಲಿ ಅಲ್ಲಿ ಸಿಂಬು ಇರಲೇಬೇಕಿತ್ತು. ಅಷ್ಟರ ಮಟ್ಟಿಗೆ ಈ ಸಿಂಬು ಫೇಮಸ್ ಆಗಿದ್ದ. ಅದರಲ್ಲೂ ಶಿವರಾಜ್ ಕೆ.ಆರ್ ಪೇಟೆ ನಟನೆಯ ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ಹೈಲೈಟ್ ಆಗಿದ್ದು ಇದೇ ಸಿಂಬು ಎಂಬ ನಾಯಿ. ಈ ಸಿನಿಮಾದಿಂದ ಸಿಂಬುಗೆ ಮತ್ತಷ್ಟು ಬೇಡಿಕೆ ಬಂತು. ಇದೀಗ  ಆ ಸಿಂಬು ಇಹಲೋಕ ತ್ಯಜಿಸಿರುವ ಸುದ್ದಿ ಬಂದಿದೆ. ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

    ತಮ್ಮೊಟ್ಟಿಗೆ ನಟಿಸಿದ್ದ ಸಿಂಬುನನ್ನು ಕಳೆದುಕೊಂಡಿರುವ ವಿಷಯವನ್ನು ನಟ ಶಿವರಾಜ್ ಕೆ.ಆರ್ ಪೇಟೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ‘ನಮ್ಮೊಂದಿಗೆ ಸಿಂಬು ನಟಿಸಿರಲಿಲ್ಲ. ಅದರೊಂದಿಗೆ ನಾವು ನಟಿಸಿದ್ದೆವು. ಅದರೊಂದಿಗಿನ ನಟನೆಯನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಸಿಂಬು ಇದೀಗ ಇಲ್ಲ ಎನ್ನುವ ಸುದ್ದಿ ಕೇಳಿ ತುಂಬಾ ನೋವಾಯಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

    ನಾನು ಮತ್ತು ಗುಂಡ ಸಿನಿಮಾದಲ್ಲಿ ಸಿಂಬು ನಟಿಸುವಾಗ ಅದಕ್ಕೆ ಎಂಟು ವರ್ಷ. ಸಿಂಬು ಲ್ಯಾಬ್ರಡರ್ ತಳಿಯದ್ದಾಗಿದ್ದು, ಅದಕ್ಕೆ ಸಿನಿಮಾದಲ್ಲಿ ನಟಿಸಲು ಸ್ವಾಮಿ ಅನ್ನುವವರು ತರಬೇತಿ ಕೂಡ ಕೊಟ್ಟಿದ್ದಾರೆ. ಹೀಗಾಗಿಯೇ ಹಲವು ಸಿನಿಮಾಗಳಲ್ಲಿ ಈ ಸಿಂಬು ಕಾಣಿಸಿಕೊಂಡಿದ್ದೆ. ಮತ್ತೊಂದು ಅಚ್ಚರಿಯ ಸಂಗತಿ ಅಂದರೆ, ನಾನು ಮತ್ತು ಗುಂಡು ಸಿನಿಮಾದಲ್ಲಿ ಈ ನಾಯಿ ಡಬ್ಬಿಂಗ್ ಕೂಡ ಮಾಡಿದೆ. ಇದನ್ನೂ ಓದಿ : ಮಿಸೆಸ್ ಇಂಡಿಯಾ ಆಗಲು ನಿವೇದಿತಾ ಗೌಡ ತಯಾರಿ : ಕ್ಯಾಟ್ ವಾಕ್ ವಿಡಿಯೋದಲ್ಲಿ ಚಂದನ್ ಶೆಟ್ಟಿ ಬೊಂಬೆ

    ಸಿಂಬು ಸಿನಿಮಾ ರಂಗದಲ್ಲಿ ಕಾಲಿಟ್ಟಿದ್ದು ಬೆಂಗಳೂರು ಡೇಸ್ ಎಂಬ ಮಲಯಾಳಂ ಸಿನಿಮಾದ ಮೂಲಕ. ಆನಂತರ ಅದು ಕನ್ನಡದಲ್ಲಿ ಗುಳ್ಟು, ಶಿವಾಜಿ ಸುರತ್ಕಲ್, ಐರಾವತ ಹಾಗೂ ಕೆಲವು ಕಿರುಚಿತ್ರಗಳು ಮತ್ತು ಜಾಹೀರಾತು ಚಿತ್ರಗಳಲ್ಲೂ ಸಿಂಬು ನಟಿಸಿದೆ. ಕರ್ನಾಟಕದ ಪತ್ರಕರ್ತರೆ ಕೊಡಮಾಡುವ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯು ಕಳೆದ ವರ್ಷದ ಪ್ರಪಂಚದಲ್ಲಿ ಮೊದಲ ಬಾರಿಗೆ ನಾನ್ ಯುಮನ್ ಕ್ಯಾಟಗರಿಯಲ್ಲಿ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ನಾನು ಮತ್ತು ಗುಂಡ ಚಿತ್ರಕ್ಕಾಗಿ ಸಿಂಬುಗೆ ಕೊಡಲಾಗಿತ್ತು. ಇಂಥದ್ದೊಂದು ಪ್ರಶಸ್ತಿ ಪಡೆದ ಹೆಗ್ಗಳಿಕೆ ಈ ನಾಯಿದ್ದಾಗಿತ್ತು.

    ನಾನು ಮತ್ತು ಗುಂಡ ಸಿನಿಮಾದಲ್ಲಿ ಸಿಂಬು ಪ್ರಮುಖ ಪಾತ್ರವನ್ನೇ ವಹಿಸಿತ್ತು. ನಾಯಿ ಮತ್ತು ಮನುಷ್ಯ ಸಂಬಂಧದ ಕುರಿತಾದ ಈ ಸಿನಿಮಾದಲ್ಲಿ ನಾಯಿಗೂ ಹೀರೋನಷ್ಟೇ ಪ್ರಾಮುಖ್ಯತೆ ನೀಡಲಾಗಿತ್ತು. ಹೀಗಾಗಿಯೇ ನಿರ್ದೇಶಕ ಶ್ರೀನಿವಾಸ್, ಇದೇ ನಾಯಿಯಿಂದ ಡಬ್ಬಿಂಗ್ ಮಾಡುವ ಮೂಲಕ ಹೊಸ ದಾಖಲೆಯನ್ನೇ ಬರೆದಿದ್ದರು.

  • ‘ನಾನು ಮತ್ತು ಗುಂಡ’ ಚಿತ್ರತಂಡಕ್ಕೆ ಅಭಿನಯ ಚಕ್ರವರ್ತಿಯ ಶುಭ ಹಾರೈಕೆ

    ‘ನಾನು ಮತ್ತು ಗುಂಡ’ ಚಿತ್ರತಂಡಕ್ಕೆ ಅಭಿನಯ ಚಕ್ರವರ್ತಿಯ ಶುಭ ಹಾರೈಕೆ

    ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕ ನಟನಾಗಿ ಅಭಿನಯಿಸಿರುವ `ನಾನು ಮತ್ತು ಗುಂಡ’ ಚಿತ್ರ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

    ಕಳೆದ ಶುಕ್ರವಾರ ಬಿಡುಗಡೆಯಾದ ಈ ಚಿತ್ರದಲ್ಲಿ ನಾಯಿ ಮತ್ತು ಮನುಷ್ಯನ ಭಾವನಾತ್ಮಕ ಸಂಬಂಧದ ಎಳೆ ಇದೆ. ಬಿಡುಗಡೆಯಾಗಿರುವ ಚಿತ್ರ ಎಲ್ಲರ ಮನಸ್ಸಿಗೂ ಹತ್ತಿರವಾಗಿದ್ದು, ಎಲ್ಲರೂ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಚಿತ್ರಕ್ಕೆ ಸಿಕ್ಕ ಗೆಲುವಿನಿಂದ ಖುಷಿಯಲ್ಲಿರುವ ಚಿತ್ರತಂಡಕ್ಕೆ ಮತ್ತೊಂದು ಡಬಲ್ ಧಮಾಕ ಸಿಕ್ಕಿದೆ. ಸ್ಯಾಂಡಲ್‍ವುಡ್ ಬಾದ್ ಶಾ ಅಭಿನಯ ಚಕ್ರವರ್ತಿ ಕಿಚ್ಚ ಕೂಡ ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ನಿಂದ ಸಂತಸಗೊಂಡಿದ್ದು ಟ್ವಿಟ್ಟರಿನಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದ್ರಿಂದ ಇಡೀ ಚಿತ್ರತಂಡದ ಸಂಭ್ರಮ ದುಪ್ಪಟ್ಟಾಗಿದೆ.

    ಶಿವರಾಜ್ ಕೆ.ಆರ್.ಪೇಟೆ, ಸಂಯುಕ್ತ ಹೊರನಾಡ್ ಜೋಡಿಯಾಗಿ ಅಭಿನಯಿಸಿರುವ ಈ ಚಿತ್ರದಲ್ಲಿ ಸಿಂಬ ಎನ್ನುವ ನಾಯಿ ಗುಂಡನ ಪಾತ್ರ ನಿರ್ವಹಿಸಿದ್ದು ಗುಂಡನ ಪಾತ್ರವೇ ಈ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್. ಸದ್ಯ ಈ ಚಿತ್ರ ಪ್ರೇಕ್ಷಕನ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶ್ರೀನಿವಾಸ್ ತಿಮ್ಮಯ್ಯ ಮೊದಲ ಬಾರಿ ಆಕ್ಷನ್ ಕಟ್ ಹೇಳಿರುವ ಚಿತ್ರ ಇದಾಗಿದೆ.

    https://twitter.com/KicchaSudeep/status/1221665624885063680

  • ಗುಂಡ-ಶಂಕ್ರನ ಭಾವನಾತ್ಮಕ ಬಾಂದವ್ಯಕ್ಕೆ ಪ್ರೇಕ್ಷಕನ ಕಣ್ಣಾಲಿಗಳು ಒದ್ದೆ!

    ಗುಂಡ-ಶಂಕ್ರನ ಭಾವನಾತ್ಮಕ ಬಾಂದವ್ಯಕ್ಕೆ ಪ್ರೇಕ್ಷಕನ ಕಣ್ಣಾಲಿಗಳು ಒದ್ದೆ!

    ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ.ಆರ್.ಪೇಟೆ ನಾಯಕ ನಟನನಾಗಿ ಅಭಿನಯಿಸಿರುವ ನಾನು ಮತ್ತು ಗುಂಡ ಚಿತ್ರ ಇಂದು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಾಯಿ ಮತ್ತು ಮಾಲೀಕನ ನಡುವಿನ ಭಾವನಾತ್ಮಕ ಸಂಬಂಧವಿರುವ ಈ ಚಿತ್ರದ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿತ್ತು. ಇಂದು ಚಿತ್ರ ಬಿಡುಗಡೆಯಾಗಿ ಆ ನಿರೀಕ್ಷೆಯನ್ನು ಗೆದ್ದಿದೆ.

    ಆಟೋ ಡ್ರೈವರ್ ಶಂಕ್ರ, ಕವಿತ ಇಬ್ಬರು ಮಧ್ಯಮ ವರ್ಗದ ಸಾಮಾನ್ಯ ಗಂಡ ಹೆಂಡತಿ. ಮಕ್ಕಳಿಲ್ಲದ ಕೊರಗಿನಿಂದ ದಿನಾ ಕುಡಿಯುತ್ತಿದ್ದ ಶಂಕ್ರನಿಗೆ ಗುಂಡ ಎಂಬ ನಾಯಿ ಸಿಗುತ್ತೆ. ಪ್ರತಿನಿತ್ಯ ಸಿಗ್ತಿದ್ದ ಗುಂಡನ ಜೊತೆ ಶಂಕ್ರನಿಗೆ ಆತ್ಮೀಯತೆ ಬೆಳೆಯುತ್ತೆ. ಅದೇ ಪ್ರೀತಿಯಿಂದ ಮನೆಗೆ ಗುಂಡನನ್ನು ಕರೆದುಕೊಂಡು ಬಂದು ಮುದ್ದಾಗಿ ಸಾಕುತ್ತಿರುತ್ತಾನೆ. ಆದ್ರೆ ಹೆಂಡತಿ ಕವಿತಳಿಗೆ ಇದು ಇಷ್ವವಿರೋದಿಲ್ಲ. ಹೀಗೆ ಶಂಕ್ರು ಮತ್ತು ಗುಂಡನ ಆತ್ಮೀಯತೆ, ಗೆಳೆತನ ಗಟ್ಟಿಯಾಗಿರುವಾಗ ಗುಂಡ ಸೇಟು ಮನೆಯ ಕಳೆದೋದ ನಾಯಿ ಎನ್ನುವುದು ಗೊತ್ತಾಗುತ್ತೆ.

    ಕವಿತಾ ಗುಂಡನನ್ನು ಸೇಟುಗೆ ಕೊಡ್ತಾಳೆ ಇದು ಶಂಕ್ರು ಮನಸ್ಸಿಗೆ ನೋವನ್ನುಂಟು ಮಾಡುತ್ತೆ. ಗುಂಡನನ್ನು ಕೊಟ್ಟ ಮೇಲೆ ಮರುಗೋ ಶಂಕ್ರ ಪ್ರತಿನಿತ್ಯ ಸೇಟು ಮನೆಗೆ ಗುಂಡನನ್ನು ನೋಡಲು ಹೋಗ್ತಿರುತ್ತಾನೆ. ಹೀಗೆ ಭಾವನಾತ್ಮಕವಾಗಿ ಸಾಗೋ ಸಿನಿಮಾ ಕಣ್ಣಂಚಲ್ಲಿ ನೀರು ತರಿಸುತ್ತೆ. ಹೀಗೆ ಸಾಗುತ್ತಾ ಹೋಗೋ ಕಥೆ ದ್ವಿತಿಯಾರ್ಧದಲ್ಲಿ ಹೊಸ ತಿರುವನ್ನೆ ಪಡೆದುಕೊಳ್ಳುತ್ತೆ. ಗುಂಡ ಮತ್ತೆ ಶಂಕ್ರು ಬಳಿ ಬರ್ತಾನಾ? ಕವಿತಾ ಗುಂಡನನ್ನು ಪ್ರೀತಿಸುತ್ತಾಳ ಅನ್ನೋದಕ್ಕೆ ನೀವು ಸಿನಿಮಾ ನೋಡಲೇ ಬೇಕು. ಆದ್ರೆ ಚಿತ್ರಮಂದಿರದಿಂದ ಬರ್ತಾ ನಿಮ್ಮ ಕಣ್ಣುಗಳು ಮಾತ್ರ ಒದ್ದೆಯಾಗದೇ ಇರದು. ಅಷ್ಟು ಭಾವನಾತ್ಮಕವಾಗಿ ಕಥೆ ಹೆಣೆದಿದ್ದಾರೆ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ.

    ನಾಯಿ ಮತ್ತು ಮಾಲೀಕನ ಕಥೆ ಎಂದು ಚಿತ್ರಮಂದಿರದ ಒಳಗೆ ಹೊಕ್ಕ ಪ್ರೇಕ್ಷಕನಿಗೆ ಭಾವನಾತ್ಮಕ ಪ್ರಪಂಚ ಆವರಿಸಿಕೊಳ್ಳುತ್ತೆ. ಅಲ್ಲೇ ಇಡೀ ಚಿತ್ರತಂಡ ಗೆದ್ದು ಬಿಡುತ್ತೆ. ಇನ್ನು ಶಿವರಾಜ್ ಕೆ.ಆರ್.ಪೇಟೆ ಅಭಿನಯ ಮನಮುಟ್ಟುತ್ತದೆ. ತಮ್ಮ ಅಧ್ಬುತ ನಟನಾ ಶಕ್ತಿಯನ್ನು ತೆರೆ ಮೇಲೆ ತೋರಿಸಿದ್ದಾರೆ. ನಾಯಿ ಗುಂಡ ಕೂಡ ಅಧ್ಬುತವಾಗಿ ನಟಿಸಿದೆ. ಸಂಯುಕ್ತ ಹೊರನಾಡು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ. ಒಟ್ಟಿನಲ್ಲಿ ನಾನು ಮತ್ತು ಗುಂಡ ಚಿತ್ರ ಪ್ರೇಕ್ಷಕನ ಮನಸ್ಸಿಗೆ ಬಹಳ ಹತ್ತಿರವಾಗಿದ್ದು ಎಲ್ಲರ ಮನಸ್ಸನ್ನು ಗೆದ್ದಿದೆ. ಜಯಭೇರಿ ಬಾರಿಸಿದೆ.

    ಚಿತ್ರ: ನಾನು ಮತ್ತು ಗುಂಡ
    ನಿರ್ದೇಶನ: ಶ್ರೀನಿವಾಸ್ ತಿಮ್ಮಯ್ಯ
    ನಿರ್ಮಾಪಕ: ರಘು ಹಾಸನ್
    ಸಂಗೀತ: ಕಾರ್ತಿಕ್ ಶರ್ಮ
    ಛಾಯಾಗ್ರಹಣ: ಚಿದಾನಂದ್ ಕೆ.ಕೆ
    ತಾರಾಬಳಗ: ಶಿವರಾಜ್ ಕೆ.ಆರ್.ಪೇಟೆ. ಸಂಯುಕ್ತ ಹೊರನಾಡ್,ಸಿಂಬಾ (ನಾಯಿ ಗುಂಡ), ಇತರರು

    ರೇಟಿಂಗ್: 3.5 / 5

  • ಶಿವರಾಜ್ ಕೆ. ಆರ್ ಪೇಟೆ ಬೆಸ್ಟ್ ಫ್ರೆಂಡ್ ಗುಂಡ ಅಂತೆ!

    ಶಿವರಾಜ್ ಕೆ. ಆರ್ ಪೇಟೆ ಬೆಸ್ಟ್ ಫ್ರೆಂಡ್ ಗುಂಡ ಅಂತೆ!

    ನಾನು ಮತ್ತು ಗುಂಡ ಸ್ಯಾಂಡಲ್‍ವುಡ್ ಅಂಗಳದಲ್ಲಿ ತುಂಬಾ ವರ್ಷಗಳ ನಂತ್ರ ತಯಾರಾಗಿರೋ ಸಾಕುಪ್ರಾಣಿ ಸಂಬಂಧವನ್ನ ಸಾರುವ ಸಂಪೂರ್ಣ ಸಿನಿಮಾವೊಂದು ಸಿದ್ಧವಾಗಿದೆ. ಫಸ್ಟ್ ಲುಕ್, ಟೀಸರ್ ನಿಂದ ಸಾಕಷ್ಟು ಸದ್ದು ಮಾಡಿದ್ದ ಸಿನಿಮಾ ಕೂಡ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ. ಆರ್ ಪೇಟೆ ನಾಯಕನಾಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

    ನಾನು ಮತ್ತು ಗುಂಡ ಚಿತ್ರ ರಿಲೀಸ್‍ಗೆ ರೆಡಿಯಾಗಿದ್ದು, ಇತ್ತೀಚೆಗಷ್ಟೇ ಸೆನ್ಸಾರ್ ಪರೀಕ್ಷೆಯನ್ನೂ ಮುಗಿಸಿದ್ದಾನೆ. ಚಿತ್ರವನ್ನು ನೋಡಿ ಸೆನ್ಸಾರ್ ಮಂಡಳಿ ಮೆಚ್ಚಿಕೊಂಡಿದ್ದು ಆಗಿದೆ. ಸದಭಿರುಚಿಯ ಚಿತ್ರಗಳನ್ನ, ಅದ್ರಲ್ಲೂ ಅಪರೂಪದ ಪ್ರಯೋಗಗಳನ್ನ ಸದಾ ಬೆಂಬಲಿಸೋ, ಮತ್ತು ಅಂತಹ ಸಿನಿಮಾಗಳನ್ನ ವಿತರಿಸಿ ಸೈ ಎನ್ನಿಸಿಕೊಂಡಿರುವಂತ ಮೈಸೂರು ಟಾಕೀಸ್ ನ ಜಾಕ್ ಮಂಜು ಅವರೇ ಈ ಸಿನಿಮಾವನ್ನು ವಿತರಣೆ ಮಾಡುತ್ತಿದ್ದಾರೆ. ‘ನಾನು ಮತ್ತು ಗುಂಡ’ ಚಿತ್ರವನ್ನ ನೋಡಿ ಮೆಚ್ಚಿಕೊಂಡಿದ್ದು, ಚಿತ್ರವನ್ನ ವಿತರಣೆ ಮಾಡೋದಕ್ಕೆ ಮುಂದಾಗಿದ್ದಾರೆ.

    ಅಂದಹಾಗೇ ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಪ್ರಚಾರ ಕಾರ್ಯವನ್ನ ಶುರುಮಾಡಿದ್ದು, ಸದ್ಯದಲ್ಲೇ ಚಿತ್ರದ ಇನ್ನಷ್ಟು ವಿಶೇಷತೆಗಳನ್ನು ಹಂಚಿಕೊಳ್ಳಲಿದೆ. ಇದೇ 24 ರಂದು ತೆರೆ ಮೇಲೆ ನಾನು ಮತ್ತು ಗುಂಡನನ್ನು ಕರೆತರಲಿದ್ದಾರೆ. ಹಾಗೆಯೇ ಶಿವರಾಜ್ ಕೆ.ಆರ್ ಪೇಟೆಯ ಅಭಿನಯ ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಶಿವರಾಜ್ ಕೆ.ಆರ್.ಪೇಟೆ ಇತ್ತೀಚಿನ ಹಾಸ್ಯ ನಟರಲ್ಲಿ ಒಬ್ಬರು. ಅವರ ಸಿನಿಮಾ ಎಂದಾಕ್ಷಣಾ ಮನಸಾರೆ ನಕ್ಕು, ಟೆನ್ಷನ್ ಫ್ರಿ ಆಗುತ್ತೆ ಅನ್ನೋ ನಿರೀಕ್ಷೆ ಎಲ್ಲರಲ್ಲೂ ಇದ್ದೆ ಇದೆ. ಹಾಗೆಯರೆ ಈ ಸಿನಿಮಾದಲ್ಲಿ ಸಿಂಬಾ ಎಂಬ ನಾಯಿಯೂ ಪಾತ್ರ ಮಾಡುತ್ತಿದ್ದು, ಮತ್ತಷ್ಟು ಕಾಮಿಡಿಯನ್ನು ಸಹಜವಾಗಿಯೇ ನಿರೀಕ್ಷಿಸುತ್ತಿದ್ದಾರೆ.

    ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ, ಪೊಯಂ ಪಿಕ್ಚರ್ಸ್ ಬ್ಯಾನರ್ ನಡಿಯಲ್ಲಿ ಗಾಂಧಿಗಿರಿ ನಿರ್ದೇಶಕ ರಘು ಹಾಸನ್ ನಿರ್ಮಿಸಿರೋ ಸಿನಿಮಾ. ಶರತ್ ಚಕ್ರವರ್ತಿ ಸಂಭಾಷಣೆ ಬರೆದಿರೋ ಈ ಚಿತ್ರಕ್ಕೆ ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

  • ಪ್ರೀಮಿಯರ್ ಶೋ ನೋಡಲು ನಿಮ್ಮ ಮುದ್ದಿನ ನಾಯಿಯೊಂದಿಗೆ ಬನ್ನಿ!

    ಪ್ರೀಮಿಯರ್ ಶೋ ನೋಡಲು ನಿಮ್ಮ ಮುದ್ದಿನ ನಾಯಿಯೊಂದಿಗೆ ಬನ್ನಿ!

    ಶಿವರಾಜ್ ಕೆ.ಆರ್.ಪೇಟೆ ಮತ್ತು ಸಂಯುಕ್ತಾ ಹೊರನಾಡು ಮುಖ್ಯಪಾತ್ರದಲ್ಲಿ ನಟಿಸಿರುವ ‘ನಾನು ಮತ್ತು ಗುಂಡ’ ಚಿತ್ರದ ಪ್ರೀಮಿಯರ್ ಶೋ ನಾಳೆ ಬೆಂಗಳೂರಿನ ನಗರ್ತರ ಪೇಟೆಯ ಶಾರದ ಚಿತ್ರಮಂದಿರದಲ್ಲಿ ಸಂಜೆ 7.15ಕ್ಕೆ ಆಯೋಜನೆ ಮಾಡಲಾಗಿದೆ.

    ವಿಶೇಷ ಎಂದರೇ ಇದು ಡಾಗ್ ಪ್ರೀಮಿಯರ್ ಶೋ. ‘ಸೀ ಇಟ್ ಫಸ್ಟ್ ವಿತ್ ಯುವರ್ ಡಾಗ್ಸ್’ ಎಂಬ ಶೀರ್ಷಿಕೆಯೊಂದಿಗೆ ಚಿತ್ರತಂಡ ಪ್ರೀಮಿಯರ್ ಶೋ ಆಯೋಜಿಸಿದೆ. ಭಾರತದ ಸಿನಿಮಾ ಇತಿಹಾಸದಲ್ಲಿ ಈ ರೀತಿಯ ವಿಭಿನ್ನ ಹೆಜ್ಜೆಯನ್ನ ‘ನಾನು ಮತ್ತು ಗುಂಡ’ ಚಿತ್ರತಂಡ ಇಟ್ಟಿದೆ.

    ಈ ಚಿತ್ರವನ್ನು ರಘು ಹಾಸನ್ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಗುಂಡನ ಪಾತ್ರದಲ್ಲಿ ಒಂದು ಪುಟ್ಟ ನಾಯಿ ಅಭಿನಯಿಸಿದೆ. ಮುಗ್ಧನಾಯಿ ಗುಂಡ ಮತ್ತು ಅಟೋಚಾಲಕ ಶಂಕ್ರ (ಶಿವರಾಜ್ ಕೆ.ಆರ್.ಪೇಟೆ) ನಡುವಿನ ಬಾಂಧ್ಯವನ್ನು ಚಿತ್ರ ತೋರಿಸುತ್ತದೆ. ಎಲ್ಲಿ ಬಿಟ್ಟು ಬಂದರು ಶಂಕ್ರನ ಹಿಂದೆ ಬರುವ ಮುಗ್ಧ ಗುಂಡನ ಜೊತೆ ಶಂಕ್ರನಿಗೆ ಒಂದು ಭಾವನಾತ್ಮಕ ಸಂಬಂಧ ಬೆಳೆಯುತ್ತದೆಯಂತೆ. ಈ ಭಾವನಾತ್ಮಕ ಸಿನಿಮಾವನ್ನು ನಿಮ್ಮ ನಾಯಿಗಳ ಜೊತೆಗೂಡಿ ನೋಡಿ ಎಂಬ ಸಂದೇಶ ನೀಡುತ್ತಾ ಈ ಪ್ರೀಮಿಯರ್ ಶೋವನ್ನು ಆಯೋಜಿಸಲಾಗಿದೆಯಂತೆ.

  • ‘ನಾನು ಮತ್ತು ಗುಂಡ’ನಿಗೆ ಶಬ್ಬಾಶ್ ಗಿರಿ!

    ‘ನಾನು ಮತ್ತು ಗುಂಡ’ನಿಗೆ ಶಬ್ಬಾಶ್ ಗಿರಿ!

    ಕಾಮಿಡಿ ಕಿಲಾಡಿಗಳು ಶಿವರಾಜ್ ಕೆ.ಆರ್.ಪೇಟೆ ನಟಿಸುತ್ತಿರುವ ಸಿನಿಮಾ ‘ನಾನು ಮತ್ತು ಗುಂಡ’. ಶಿವರಾಜ್ ಕೆ. ಆರ್ ಪೇಟೆ ಎಂದಾಕ್ಷಣಾ ಅಲ್ಲೊಂದು ಕಾಮಿಡಿ ನೆನಪಾಗುತ್ತದೆ. ಸಿನಿಮಾದಲ್ಲೂ ಕಾಮಿಡಿ ಇರಬಹುದು ಎಂಬ ಊಹೆ ಎಲ್ಲರಲ್ಲೂ ಮೂಡುತ್ತೆ. ಆದ್ರೆ ಈ ಸಿನಿಮಾ ಮನುಷ್ಯ ಹಾಗೂ ಪ್ರಾಣಿ ನಡುವಿನ ಭಾವನಾತ್ಮಕ ಸಂಬಂಧವನ್ನು ಅನಾವರಣಗೊಳಿಸಲು ಸಜ್ಜಾಗಿದೆ.

    ಸದ್ಯ ರಿಲೀಸ್ ಗೆ ರೆಡಿಯಾಗಿರುವ ಸಿನಿಮಾಗೆ ಹೊಗಳಿಕೆಯ ಸುರಿಮಳೆ ಸುರೀತಾ ಇದೆ. ಸಿನಿಮಾ ಸೆನ್ಸಾರ್ ಗೆ ಹೋಗಿದ್ದು, ಶಬ್ಬಾಶ್ ಗಿರಿಯನ್ನ ಪಡೆದಿದೆ. ಸೆನ್ಸಾರ್ ನಿಂದ ಹೊಗಳಿಕೆ ಸಿಕ್ಕಿರುವ ಕಾರಣ ಚಿತ್ರತಂಡ ಸಿಕ್ಕಾಪಟ್ಟೆ ಖುಷಿಯಲ್ಲಿದೆ. ಈಗಾಗಲೇ ಪೋಸ್ಟರ್ ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ, ಅಯ್ಯಯ್ಯೋ ರಾಮ ರಾಮ ಎಂಬ ಹಾಡನ್ನು ರಿಲೀಸ್ ಮಾಡಿದೆ. ಕ್ಯಾಚಿ ಲಿರಿಕ್ಸ್ ನಿಂದ ಹಾಡು ಎಲ್ಲರನ್ನು ಮನಸೂರೆಗೊಳಿಸಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಲಭ್ಯವಿದ್ದು, ಕೇಳಿ ಆನಂದಿಸಬಹುದು.

    ಹಾಡು ನೋಡಿದರೇ ಒಂದು ಹಂತಕ್ಕೆ ಸಿನಿಮಾ ಹೇಗಿರಬಹುದು ಎಂಬುದು ತಿಳಿಯುತ್ತದೆ. ಆಟೋ ಡ್ರೈವರ್ ಶಂಕರನ ಬೆನ್ನತ್ತೋ ಗುಂಡನ ಕಾಟ ತಡೆಯಲಾರದ ಶಂಕರನ ಪರಿಸ್ಥಿತಿ ಈ ಹಾಡಿನಲ್ಲಿ ತಿಳಿಹಾಸ್ಯದೊಂದಿದೆ ವ್ಯಕ್ತವಾಗಿ ಜನಮೆಚ್ಚುಗೆ ಪಡೆಯುತ್ತಿದೆ. ಕಾರ್ತಿಕ್ ಶರ್ಮಾ ಕಂಪೋಸ್ ಮಾಡಿರೋ ಕ್ಯಾಚಿ ಟ್ಯೂನ್‍ಗೆ ರೋಹಿತ್ ರಮಣ್ ಅಷ್ಟೇ ಕ್ಯಾಚಿಯಾಗಿರೋ ಸಾಹಿತ್ಯವನ್ನ ಕಟ್ಟಿದ್ದಾರೆ. ಈ ಹಾಡು ಚಿತ್ರಪ್ರೇಮಿಗಳ ಹಾಗೂ ಶ್ವಾನಪ್ರೇಮಿಗಳ ಆಸಕ್ತಿಯನ್ನ ಮತ್ತಷ್ಟು ಹೆಚ್ಚಿಸುತ್ತಿದೆ.

  • ‘ನಾನು ಮತ್ತು ಗುಂಡ’ನದ್ದು ಭಾವನಾತ್ಮಕ ಸಂಬಂಧ!

    ‘ನಾನು ಮತ್ತು ಗುಂಡ’ನದ್ದು ಭಾವನಾತ್ಮಕ ಸಂಬಂಧ!

    ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯನ ಜೊತೆ ಬೆರೆಯುವುದಕ್ಕಿಂತ ಹೆಚ್ಚಾಗಿ ಪ್ರಾಣಿಗಳ ಜೊತೆಯಲ್ಲೇ ಬೆರೆಯುತ್ತಿದ್ದಾನೆ. ಅದರಲ್ಲೂ ನಾಯಿಗಳ ನಡುವೆ ಹೆಚ್ಚು ಬಾಂಧವ್ಯ ಹೊಂದುತ್ತಿದ್ದಾರೆ. ಇಷ್ಟವಾದ ನಾಯಿಗೆ ಲಕ್ಷ ಕೊಡುವುದಕ್ಕೂ ಹಿಂದೆ ಮುಂದೆ ನೋಡಲ್ಲ. ನಾಯಿಯೊಂದನ್ನು ತಂದು, ಮುದ್ದಾದ ಹೆಸರನ್ನಿಟ್ಟು ಸಿಕ್ಕ ಸಮಯವನ್ನು ಅದರೊಟ್ಟಿಗೆ ಕಳೆಯುತ್ತಾರೆ. ಇದೀಗ ಚಂದನವನದಲ್ಲಿ ಅದೇ ಪ್ರೀತಿಯನ್ನು ಆಧಾರವಾಗಿಟ್ಟುಕೊಂಡು ಸಿನಿಮಾವೊಂದು ಸಿದ್ಧವಾಗಿದೆ. ಬಹಳ ವರ್ಷಗಳ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮನುಷ್ಯ ಹಾಗು ಸಾಕು ಪ್ರಾಣಿ ಸಂಬಂಧ ಅನಾವರಣಗೊಳ್ಳುತ್ತಿದೆ. ಅದೇ ‘ನಾನು ಮತ್ತು ಗುಂಡ’.

    ಸಿನಿಮಾ ತನ್ನ ಫಸ್ಟ್ ಲುಕ್, ಟೀಸರ್ ನಿಂದಲೇ ಸಾಕಷ್ಟು ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಶ್ವಾನವನ್ನೇ ಮುಖ್ಯ ಪಾತ್ರದಾರಿಯನ್ನಾಗಿಸಿಕೊಂಡು ಹೆಣೆದಿರುವ ಕಥೆಯಿದಾಗಿದೆ. ಹೀಗಾಗಿ ನಾಯಿಯೇ ಪ್ರಮುಖ ಪಾತ್ರ ಮಾಡಿರುವ ಕಾರಣ ಸಿನಿಮಾದ ಬಗ್ಗೆ ವಿಶೇಷ ಕುತೂಹಲ ಎಲ್ಲರಲ್ಲೂ ಕೆರಳಿದೆ.

    ಎಲ್ಲಾ ವರ್ಗದ ಜನರು ನೋಡುವಂತಹ ಮನುಷ್ಯ ಹಾಗು ಪ್ರಾಣಿಗಳ ನಡುವಿನ ಭಾವನಾತ್ಮಕ ಸಂಬಂಧ ಬೆಸೆಯುವ ಅದ್ಭುತ ಚಿತ್ರವೆಂದು ಅದು ಬಣ್ಣಿಸಿದೆ. ಅಪರೂಪದ ಪ್ರಯೋಗಗಳನ್ನು ಬೆಂಬಲಿಸುವ ಅಂತಹ ಚಿತ್ರಗಳನ್ನು ವಿತರಿಸಿ ಯಶಸ್ಸು ಕಂಡಿರುವ ಮೈಸೂರು ಟಾಕೀಸ್‍ನ ಜಾಕ್ ಮಂಜು ಅವರು ‘ನಾನು ಮತ್ತು ಗುಂಡ’ ಚಿತ್ರವನ್ನು ನೋಡಿ ಮೆಚ್ಚಿ ವಿತರಣೆಗೆ ಮುಂದಾಗಿದ್ದಾರೆ.

    ಈ ಹಿಂದೆ ಯು ಟರ್ನ್, ಒಂದು ಮೊಟ್ಟೆಯ ಕಥೆ, ಗಂಟು ಮೂಟೆ ಸೇರಿದಂತೆ ಹಲವು ವಿಶಿಷ್ಠ ಬಗೆ ಸಿನಿಮಾಗಳನ್ನ ವಿತರಿಸಿ, ಯಶಸ್ಸು ಕಂಡಿರುವ ಜಾಕ್ ಮಂಜು, ಈ ವರ್ಷದ ಆರಂಭದಲ್ಲೇ ನಾನು ಮತ್ತು ಗುಂಡ ಚಿತ್ರವನ್ನು ವಿತರಣೆಗೆ ತೆಗೆದುಕೊಂಡು, ಈ ಚಿತ್ರದ ಮೇಲೆ ತುಂಬಾ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ನಾನು ಮತ್ತು ಗುಂಡ ಚಿತ್ರತಂಡ ಈ ಮೂಲಕ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದು, ಸದ್ಯದಲ್ಲೇ ಚಿತ್ರದ ಕುರಿತಂತೆ ಮತ್ತಷ್ಟು ವಿಶೇಷ ವಿಚಾರಗಳನ್ನು ಹಿಂಚಿಕೊಳ್ಳುವ ಧಾವಂತದಲ್ಲಿದೆ. ಇದೀಗ ನಾನು ಮತ್ತು ಗುಂಡ ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕ ಪ್ರಕಟಿಸುವ ಸನ್ನಾಹದಲ್ಲಿದೆ.

    ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆ.ಆರ್. ಪೇಟೆ, ಸಂಯುಕ್ತ ಹೊರನಾಡು ಹಾಗು ಸಿಂಬಾ ಅನ್ನುವ ಶ್ವಾನ ಅಭಿಯನದ ಚಿತ್ರ ಇದಾಗಿದೆ. ಶ್ರೀನಿವಾಸ್ ತಿಮ್ಮಯ್ಯ ನಿರ್ದೇಶನದಲ್ಲಿ ಪೊಯಂ ಪಿಕ್ಚರ್ಸ್ ಬ್ಯಾನರ್ಸ್ ನಡಿ ಗಾಂಧಿಗಿರಿ ಚಿತ್ರದ ನಿರ್ದೇಶಕ ರಘು ಹಾಸನ್ ಅವರು ನಿರ್ಮಿಸಿರುವ ಚಿತ್ರ ಇದಾಗಿದೆ. ಚಿತ್ರಕ್ಕೆ ಶರತ್ ಚಕ್ರವರ್ತಿ ಸಂಭಾಷಣೆ ಬರೆದಿದ್ದರೆ, ಕಾರ್ತಿಕ್ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ.

  • ನಾನು ಮತ್ತು ಗುಂಡ: ಶ್ವಾನ ಬಾಂಧವ್ಯದ ಮನಮುಟ್ಟುವ ಕಥೆಗಳಿಗೆ ಆಹ್ವಾನ!

    ನಾನು ಮತ್ತು ಗುಂಡ: ಶ್ವಾನ ಬಾಂಧವ್ಯದ ಮನಮುಟ್ಟುವ ಕಥೆಗಳಿಗೆ ಆಹ್ವಾನ!

    ಬೆಂಗಳೂರು: ರಘು ಹಾಸನ್ ನಿರ್ದೇಶನ ಮಾಡಿರುವ ನಾನು ಮತ್ತು ಗುಂಡ ಅಪರೂಪದ್ದೊಂದು ಕಥೆಯ ಸುಳಿವಿನೊಂದಿಗೆ, ಹೊಸ ಅಲೆಯ ಚಿತ್ರವಾಗಿ ಪ್ರೇಕ್ಷಕರೆಲ್ಲರನ್ನು ಆಕರ್ಷಿಸಿಕೊಂಡಿದೆ. ಈಗಾಗಲೇ ಎರಡೆರಡು ಟೀಸರ್‍ಗಳ ಮೂಲಕ ಈ ಸಿನಿಮಾ ಮನುಷ್ಯ ಮತ್ತು ಶ್ವಾನದ ನಡುವಲ್ಲಿರೋ ಮೂಕಪ್ರೇಮ ಎಲ್ಲರ ಮನಸುಗಳಿಗೂ ದಾಟಿ ನಾಟಿಕೊಂಡಿದೆ. ನಾಯಿ ಅಂದರೆ ಅದೊಂದು ಸಾಕು ಪ್ರಾಣಿ ಎಂಬುದರಾಚೆಗೆ ಅದನ್ನು ಹಚ್ಚಿಕೊಂಡ ಜೀವಗಳ ಭಾವುಕತೆ ಹರಡಿಕೊಂಡಿದೆ. ಅಂಥಾದ್ದೇ ಮನಮಿಡಿಯುವ ಅಪರೂಪದ ಕಥೆ ಈ ಚಿತ್ರದಲ್ಲಿದೆ.

    ಇದೀಗ ಶ್ವಾನ ಮತ್ತು ಮನುಷ್ಯರ ಬಾಂಧವ್ಯದ ನೈಜವಾದ ಘಟನೆಗಳನ್ನು ಬಿಡಿ ಬಿಡಿಯಾಗಿ ಜನರ ಮುಂದಿಡಲು ತಯಾರಾಗಿದೆ. ನಾನು ಮತ್ತು ಗುಂಡ ಸಿನಿಮಾದ ಟೀಸರ್ ಬಿಡುಗಡೆಯಾದ ನಂತರದಲ್ಲಿ ಚಿತ್ರತಂಡಕ್ಕೆ ಬರುತ್ತಿರೋ ಪ್ರತಿಕ್ರಿಯೆಗಳಿಂದ ಇದೀಗ ಹೊಸ ಆಲೋಚನೆಯೊಂದನ್ನು ಮಾಡಲಾಗಿದೆ. ಶ್ವಾನಗಳೊಂದಿಗಿನ ನೈಜವಾದ ಅಪರೂಪದ ಬಾಂಧವ್ಯದ ಘಟನಾವಳಿಗಳು ನಿಮ್ಮ ಬದುಕಲ್ಲಿಯೂ ಇದ್ದರೆ, ಅದನ್ನು ವೀಡಿಯೋ ತುಣುಕುಗಳ ಮೂಲಕ ಚಿತ್ರತಂಡಕ್ಕೆ ಕಳುಹಿಸಬಹುದು. ಅದರಲ್ಲಿ ಕಾಡುವಂಥವುಗಳನ್ನು ಆಯ್ಕೆ ಮಾಡಿ ಪ್ರತೀವಾರ ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರತಂಡವೇ ಪ್ರಚುರಪಡಿಸಲಿವೆ.

    ನಾನು ಮತ್ತು ಗುಂಡ ಎಂಬುದೇ ನಾಯಿ ಮತ್ತು ಮನುಷ್ಯನ ಬಾಂಧವ್ಯದ ಕಥೆ ಹೊಂದಿರೋ ಚಿತ್ರವಾದ್ದರಿಂದ, ಅಂಥಾ ಬಾಂಧವ್ಯದ ನೈಜ ಘಟನಾವಳಿಗಳ ಮೂಲಕವೇ ಈ ಚಿತ್ರದ ಪ್ರಚಾರ ಕಾರ್ಯ ನಡೆಸುವ ವಿನೂತನ ಆಲೋಚನೆ ನಿರ್ದೇಶಕ ರಘು ಹಾಸನ್ ಅವರದ್ದು. ನಿಮ್ಮ ಶ್ವಾನ ಬಾಂಧವ್ಯದ ಅಪರೂಪದ ವೀಡಿಯೋ ತುಣುಕುಗಳನ್ನು ಕಳಿಸಿದರೆ, ಅದು ಅಪರೂಪದ್ದಾಗಿದ್ದರೆ ಚಿತ್ರತಂಡವೇ ಬಂದು ಅದನ್ನು ಚಿತ್ರೀಕರಿಸಿಕೊಳ್ಳುತ್ತದೆ. ಈಗಾಗಲೇ ಒಂದಷ್ಟು ಇಂಥಾ ಘಟನಾವಳಿಗಳು ಚಿತ್ರತಂಡ ತಲುಪಿದೆ. ಅದರಲ್ಲಿ ಒಂದಷ್ಟು ನಿಜಕ್ಕೂ ಕಾಡುವಂತಿವೆಯಂತೆ.

    ಯಾರೇ ಈ ಶ್ವಾನಪ್ರೇಮದ ವೀಡಿಯೋ ಕಳಿಸೋದಾದರೂ ಅದು ಕಾಡುವಂತಿರಲಿ ಅನ್ನೋದು ಚಿತ್ರತಂಡದ ಮನವಿ. ರಘು ಹಾಸನ್ ನಾನು ಮತ್ತು ಗುಂಡ ಚಿತ್ರದ ಮೂಲಕ ಭಾವುಕವಾದ ಕಥೆಯೊಂದನ್ನು ಹೇಳ ಹೊರಟಿದ್ದಾರೆ. ಆದರೆ ಈಗ ಅದಕ್ಕೆ ಬರುತ್ತಿರೋ ಪ್ರತಿಕ್ರಿಯೆ, ಕೆಲವರು ತಮ್ಮ ಶ್ವಾನ ಪ್ರೇಮದ ಬಗ್ಗೆ ಹಂಚಿಕೊಳ್ಳುತ್ತಿರೋ ಅಭಿಪ್ರಾಯಗಳನ್ನೆಲ್ಲ ನೋಡಿದರೆ ಮನುಷ್ಯ ಮತ್ತು ಶ್ವಾನ ಬಾಂಧವ್ಯ ತಮ್ಮ ಎಣಿಕೆಯನ್ನೂ ಮೀರಿದ್ದೆಂಬ ವಿಚಾರವೂ ನಿರ್ದೇಶಕರಿಗೆ ಮನವರಿಕೆಯಾಗಿದೆಯಂತೆ. ಇಂಥಾ ಕಾಡುವ ಕಥೆಗಳಿದ್ದರೆ ಅದನ್ನು ಚಿತ್ರತಂಡಕ್ಕೆ ಕಳಿಸಿಕೊಡಬಹುದು. ಅದನ್ನು ಮೂರು ನಿಮಿಷಗಳ ವೀಡಿಯೋ ಮೂಲಕ ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಿದೆ.

  • ನಾನು ಮತ್ತು ಗುಂಡ: ತೆರೆಗಾಣೋ ಹಾದಿಯಲ್ಲೇ ಎರಡನೇ ಟೀಸರ್ ಅನಾವರಣ!

    ನಾನು ಮತ್ತು ಗುಂಡ: ತೆರೆಗಾಣೋ ಹಾದಿಯಲ್ಲೇ ಎರಡನೇ ಟೀಸರ್ ಅನಾವರಣ!

    ಬೆಂಗಳೂರು : ಈಗ ಕನ್ನಡ ಚಿತ್ರರಂಗದಲ್ಲಿ ಸಿದ್ಧಸೂತ್ರಗಳ ಚಿತ್ರಗಳ ಭರಾಟೆಯ ನಡುವೆಯೂ ಹೊಸಾ ಅಲೆಯ ಸಿನಿಮಾಗಳು ಸದ್ದು ಮಾಡುತ್ತಿವೆ. ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿಯೇ ಇಂಥಾ ವಿಶೇಷವಾದ ಕಥೆ ಹೇಳೋ ಕಲೆಗಾರಿಕೆಯೂ ಆಗಾಗ ಪ್ರದರ್ಶನವಾಗುತ್ತಲೇ ಬಂದಿದೆ. ಇದೀಗ ಅದೇ ರೀತಿಯ ವಿಶೇಷತೆ ಹೊಂದಿರೋ ಕಥೆ, ಪ್ರಯೋಗಾತ್ಮಕ ಅಂಶಗಳೊಂದಿಗೆ ಮೂಡಿ ಬಂದಿರೋ ಚಿತ್ರ ನಾನು ಮತ್ತು ಗುಂಡ. ಈ ಹಿಂದೆ ಮೊದಲ ಟೀಸರ್ ಮೂಲಕ ಗಮನ ಸೆಳೆದಿದ್ದ ಈ ಚಿತ್ರದ ಮತ್ತೊಂದು ಟೀಸರ್ ಬಿಡುಗಡೆಯಾಗಿದೆ.

    ಇದು ಆಟೋ ಶಂಕ್ರ ಮತ್ತು ಮುದ್ದಾದ ನಾಯಿಯ ಸುತ್ತ ಸುತ್ತೋ ಭಾವನಾತ್ಮಕ ಕಥೆಯ ಚಿತ್ರ. ಸಿನಿಮಾ ಅಂದಾಕ್ಷಣ ಸಿದ್ಧ ಸೂತ್ರದ ಕಲ್ಪನೆ ಸುಳಿದಾಡೋ ಹೊತ್ತಿನಲ್ಲಿಯೇ ನಾನು ಮತ್ತು ಗುಂಡ ಟೀಸರ್ ಬೇರೆಯದ್ದೇ ಹೊಳಹು ನೀಡುವ ಮೂಲಕ ಬಹು ನಿರೀಕ್ಷಿತ ಚಿತ್ರವಾಗಿ ಅನಾವರಣಗೊಂಡಿದೆ. ಮೊದಲ ಟೀಸರ್‍ನಲ್ಲಿಯೇ ಇದು ನಾಯಿ ಮತ್ತು ಮನುಷ್ಯನ ನಡುವಿನ ಭಾವನಾತ್ಮಕ ಕಥನದ ಚಿತ್ರವೆಂಬುದು ಜಾಹೀರಾಗಿತ್ತು. ಈ ಎರಡನೇ ಟೀಸರ್‍ನಲ್ಲಿ ಅದು ಮತ್ತಷ್ಟು ತೀವ್ರವಾಗಿ ಅನಾವರಣಗೊಂಡು ಕಥೆಯ ಒಂದಷ್ಟು ಬೇರೆ ಆಯಾಮಗಳನ್ನೂ ಕಾಣಿಸಿದೆ.

    ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್ ಕೆಆರ್ ಪೇಟೆ ನಟಿಸಿದ್ದಾರೆ. ಅವರು ಮತ್ತು ಮುದ್ದಾದ ನಾಯಿ ಈ ಸಿನಿಮಾ ಕೇಂದ್ರಬಿಂದುಗಳು. ಸಂಯುಕ್ತಾ ಹೊರನಾಡು ನಾಯಕಿಯಾಗಿ ನಟಿಸಿದ್ದಾರೆ. ಇಲ್ಲಿ ಇನ್ನೂ ಒಂದಷ್ಟು ಪಾತ್ರಗಳು ಶಿವರಾಜ್‍ಗೆ ಸಾಥ್ ಕೊಟ್ಟಿವೆ. ಕಾಮಿಡಿ ಕಿಲಾಡಿಗಳು ಶೋ ವಿನ್ನರ್ ಆದ ನಂತರ ಶಿವರಾಜ್ ಬಹು ಬೇಡಿಕೆಯ ಕಾಮಿಡಿ ನಟನಾಗಿ ಬ್ಯುಸಿಯಾಗಿದ್ದಾರೆ. ಆದರೆ ಆ ಶೋನ ಮುಕ್ತಾಯದ ಕ್ಷಣಗಳಲ್ಲಿಯೇ ಶುರುವಾಗಿದ್ದ ಚಿತ್ರ ನಾನು ಮತ್ತು ಗುಂಡ. ಇನ್ನೇನು ಶೀಘ್ರದಲ್ಲಿಯೇ ತೆರೆಗಾಣಲಿರೋ ಈ ಚಿತ್ರವೀಗ ಎರಡನೇ ಟೀಸರ್ ಮೂಲಕ ಮತ್ತಷ್ಟು ಜನರನ್ನು ತಲುಪಿಕೊಂಡಿದೆ.