Tag: ನಾಡಗೀತೆ

  • ನಾಡಗೀತೆ ಪೂರ್ಣವಾಗುವವರೆಗೆ ಕದಲದ ದನ

    ನಾಡಗೀತೆ ಪೂರ್ಣವಾಗುವವರೆಗೆ ಕದಲದ ದನ

    ಉಡುಪಿ: ರಾಷ್ಟ್ರಗೀತೆ, ನಾಡಗೀತೆಗೆ ಗೌರವ ಕೊಡಬೇಕು ಎಂಬುದು ನಿಯಮ. ಬುದ್ಧಿ ತಿಳಿದ ಮನುಷ್ಯರೇ ಕೆಲವೊಮ್ಮೆ ನಿಯಮ ಉಲ್ಲಂಘನೆ ಮಾಡಿ ಉಡಾಫೆ ತೋರಿಸುತ್ತಾರೆ. ಆದರೆ ನಿಯಮ ಗೊತ್ತಿಲ್ಲದ ಹಸುವೊಂದು ನಾಡಗೀತೆ ಕೇಳಿದ ತಕ್ಷಣ ಕೊಂಚವೂ ಅಲುಗಾಡದೆ ನಿಂತು ಗೌರವ ತೋರಿದೆ.

    ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬೈಂದೂರು ವಲಯದ ಮಾವಿನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಶಾಲಾ ವಿದ್ಯಾರ್ಥಿಗಳು ಮುಂಜಾನೆ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಹಸು ಶಾಲಾ ಆವರಣದೊಳಗೆ ಬಂದಿದೆ. ವಿದ್ಯಾರ್ಥಿಗಳು ಸಾಮೂಹಿಕವಾಗಿ ನಾಡಗೀತೆ ಹಾಡುವಾಗ ಶಿಸ್ತಿನಲ್ಲಿ ಹಸು ಒಂದೇ ಕಡೆ ನಿಂತಿದೆ. ಇದನ್ನೂ ಓದಿ: ಮುಂದಿನ ಆದೇಶದವರೆಗೆ ದೆಹಲಿಯ ಎಲ್ಲಾ ಶಾಲೆಗಳನ್ನು ಮುಚ್ಚಲಾಗುವುದು: ಗೋಪಾಲ್ ರೈ

    ಅದರಲ್ಲಿಯೂ ಈ ಹಸುವಿನ ವಿಶೇಷವೆಂದರೆ ನಾಡಗೀತೆ ಮುಗಿಯುವವರೆಗೂ ಕದಲದೆ ನಿಂತಲ್ಲೆ ನಿಂತಿದ್ದು, ನಂತರ ಹುಲ್ಲು ಅರಸುತ್ತಾ ಹೋಗಿದೆ. ನಾಡಗೀತೆಗೆ ಹಸು ಪ್ರತಿಕ್ರಿಯಿಸಿದ ಈ ವಿಶೇಷ ದೃಶ್ಯವನ್ನು ಶಿಕ್ಷಕರೊಬ್ಬರು ಸೆರೆ ಹಿಡಿದಿದ್ದಾರೆ.

  • ನಾಡಗೀತೆಗೆ ಅವಮಾನ- ಶಿಕ್ಷಕರಿಬ್ಬರ ಅಮಾನತು

    ನಾಡಗೀತೆಗೆ ಅವಮಾನ- ಶಿಕ್ಷಕರಿಬ್ಬರ ಅಮಾನತು

    ಬೀದರ್ : ಪಶು ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಾಡಗೀತೆ ಹಾಡುವಾಗ ಮೂತ್ರ ವಿಸರ್ಜನೆ ಮಾಡಿ ಅಸಭ್ಯ ವರ್ತನೆ ಮಾಡಿದ ಇಬ್ಬರು ಶಿಕ್ಷಕರನ್ನು ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

    ಔರಾದ್ ತಾಲೂಕಿನ ಹಿಪ್ಪಳಗಾಂವ ಸರ್ಕಾರಿ ಶಾಲೆಯ ಶಿಕ್ಷಕ ವಿರೇಶ್ ಹಾಗೂ ಗಂಗಾರಾಮ ತಾಂಡ ಸರ್ಕಾರಿ ಶಾಲೆಯ ಶಿಕ್ಷಕ ವಿಜಯಕುಮಾರ್ ರಾಠೋರ್ ಅಮಾನತುಗೊಂಡವರು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಕರು ಅದೇ ಪ್ರಾಂಗಣದಲ್ಲಿ ಮೂತ್ರ ವಿಸರ್ಜನೆ ಮಾಡಿ ನಾಡಗೀತೆ ಹಾಗೂ ಕ್ರೀಡಾಕೂಟಕ್ಕೆ ಶಿಕ್ಷಣ ಇಲಾಖೆಗೆ ಅವಮಾನಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದರು.

    ಈ ಹಿನ್ನೆಲೆಯಲ್ಲಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

  • ನಾಡಗೀತೆ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ ಮಕ್ಕಳು

    ನಾಡಗೀತೆ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ ಮಕ್ಕಳು

    ಚಿಕ್ಕಮಗಳೂರು: ಕುವೆಂಪು ಹುಟ್ಟುಹಬ್ಬ ಮಾಸದ ಅಂಗವಾಗಿ ಮಕ್ಕಳನ್ನು ಪ್ರವಾಸಕ್ಕೆಂದು ಕರೆದುಕೊಂಡು ಹೋದಾಗ ಮಕ್ಕಳೆಲ್ಲಾ ಸ್ವಯಂಪ್ರೇರಿತರಾಗಿ ಸಾಲಾಗಿ ನಿಂತು ಕುವೆಂಪು ಸಮಾಧಿ ಎದುರು ನಾಡಗೀತೆ ಹಾಡಿ ರಾಷ್ಟ್ರಕವಿಗೆ ಗೌರವ ಸಲ್ಲಿಸಿದ್ದಾರೆ.

    ಜಿಲ್ಲೆಯ ಕಡೂರು ತಾಲೂಕಿನ ಮುದ್ದೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಒಂದರಿಂದ ಐದನೇ ತರಗತಿ ಓದುತ್ತಿರೋ 15 ಮಕ್ಕಳನ್ನ ಪ್ರವಾಸಕ್ಕೆಂದು ಕುಪ್ಪಳ್ಳಿಯ ಕವಿಶೈಲಕ್ಕೆ ಕರೆದುಕೊಂಡು ಹೋಗಿದ್ದರು. ಆಗ ಸಮವಸ್ತ್ರ ಧರಿಸಿದ್ದ ಮಕ್ಕಳೆಲ್ಲರೂ ಸಾಲಾಗಿ ನಿಂತು ನಾಡಗೀತೆಯನ್ನ ಸಂಪೂರ್ಣವಾಗಿ ಹಾಡಿ ಕುವೆಂಪು ಸಮಾಧಿಗೆ ನಮಸ್ಕರಿಸಿದ್ದಾರೆ.

    ಮಕ್ಕಳ ನಡೆ ಕಂಡು ಶಿಕ್ಷಕರಿಗೆ ಆಶ್ಚರ್ಯವಾಗೋದ್ರ ಜೊತೆ ನಾವು ಬರೀ ಶಿಕ್ಷಣವನ್ನಷ್ಟೇ ಕಲಿಸಿದ್ದೇವೆ. ಆದರೆ ಮಕ್ಕಳು ನಾವು ಕಲಿಸಿದ ಶಿಕ್ಷಣದ ಜೊತೆ ಅದಕ್ಕಿಂತ ದೊಡ್ಡದ್ದಾದ ಸಂಸ್ಕಾರವನ್ನೂ ಕಲಿತ್ತಿದ್ದಾರೆಂದು ಮಕ್ಕಳನ್ನ ಕಂಡು ಶಿಕ್ಷಕರು ಖುಷಿ ಪಟ್ಟಿದ್ದಾರೆ. ಶಾಲೆಯ ಶಿಕ್ಷಕರಾದ ಸರ್ದಾರ್ ಖಾನ್, ಸತೀಶ್, ಅತಿಥಿ ಶಿಕ್ಷಕರಾದ ಶಿವಲೀಲಾ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಗೀತಾ ಮಕ್ಕಳ ಜೊತೆಯಲ್ಲಿದ್ದರು.

  • ಸಿಎಂ ಬರುತ್ತಿದ್ದಾರೆ ಎಂದು ನಾಡಗೀತೆ ಕಲಿಯುತ್ತಿರುವ ಮಕ್ಕಳು

    ಸಿಎಂ ಬರುತ್ತಿದ್ದಾರೆ ಎಂದು ನಾಡಗೀತೆ ಕಲಿಯುತ್ತಿರುವ ಮಕ್ಕಳು

    – ರಾಜ್ಯ ಗಡಿ ಭಾಗದಲ್ಲಿ ಕನ್ನಡಕಿಲ್ಲ ಆದ್ಯತೆ

    ಬೀದರ್: ಸಿಎಂ ಇದೇ ತಿಂಗಳು 27 ರಂದು ಗಡಿ ಜಿಲ್ಲೆ ಬೀದರ್‍ನ ಬಸವಕಲ್ಯಾಣ ತಾಲೂಕಿನ ಉಜಳಾಂಬ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳನ್ನು ಮೆಚ್ಚಿಸಲು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಈಗಾಗಲೇ ಅನೇಕ ಕಾರ್ಯಗಳನ್ನು ಕೈಗೊಂಡಿದ್ದು, ರಸ್ತೆ, ಕುಡಿಯುವ ನೀರು. ಶಾಲೆಯ ಕಟ್ಟಡ ಕಾಮಗಾರಿ ಆರಂಭಿಸಿದ್ದಾರೆ.

    ಅಲ್ಲದೇ ಉಜಳಾಂಬ ಗ್ರಾಮ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಇಲ್ಲಿನ ಮಕ್ಕಳಿಗೆ ಸರಿಯಾಗಿ ನಾಡಗೀತೆಯನ್ನು ಕೂಡ ಹಾಡಲು ಬರುತ್ತಿಲ್ಲ. ಹೀಗಾಗಿ ಸಿಎಂ ಕುಮಾರಸ್ವಾಮಿ ಬಂದ ಸಮಯದಲ್ಲಿ ನಾಡಗೀತೆ ಬರದೆ ಮುಜಗರ ಅನುಭವಿಸಬಾರದು ಎಂದು ಅಲ್ಲಿನ ಶಿಕ್ಷಕರು ಪಠ್ಯದಲ್ಲಿರೋ ನಾಡ ಗೀತೆಯನ್ನು ಮಕ್ಕಳ ಮುಂದಿಟ್ಟು ಕಂಠಪಾಠ ಮಾಡಿಸುತ್ತಿದ್ದಾರೆ.

    ಗಡಿ ಜಿಲ್ಲೆಯಲ್ಲಿ ಸರಿಯಾದ ಕನ್ನಡ ಶಿಕ್ಷಕರ ನೇಮಕಾವಾಗದೆ ಇರೋದು, ಕನ್ನಡ ಶಾಲೆ ಸರಿಯಾದ ರೀತಿಯ ನಿರ್ವಹಣೆ ಇಲ್ಲದೆ ಇರುವುದರಿಂದ ಮಕ್ಕಳಿಗೆ ನಾಡಗೀತೆಯನ್ನು ಸಹ ಹಾಡಲು ಬಾರದು ಪರಸ್ಥಿತಿ ನಿರ್ಮಾಣವಾಗಿದೆ. ಆದರೆ ಕಂಠಪಾಠ ಮಾಡಿದ ಮಕ್ಕಳಿಗೆ ನಾಡಗೀತೆ ಅರ್ಥ ಗೊತ್ತಿಲ್ಲ. ಗಡಿ ಜಿಲ್ಲೆಯಲ್ಲಿ ಪರಿಸ್ಥಿತಿ ಹೀಗೆ ಮುಂದುವರೆದರೆ ಕನ್ನಡ ಭಾಷೆ ಅಳಿವಿನಂಚಿಗೆ ಬಂದು ನಿಲ್ಲುತ್ತೆ ಅನ್ನೋದು ಸ್ಥಳೀಯ ಕನ್ನಡಿಗರ ಆತಂಕವಾಗಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮನಸೋ ಇಚ್ಛೆ ನಾಡಗೀತೆ ಹಾಡುವುದಕ್ಕೆ ಕಡಿವಾಣ – ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕಸಾಪ

    ಮನಸೋ ಇಚ್ಛೆ ನಾಡಗೀತೆ ಹಾಡುವುದಕ್ಕೆ ಕಡಿವಾಣ – ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕಸಾಪ

    ಬೆಂಗಳೂರು: ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮನಬಂದಂತೆ ನಾಡಗೀತೆ ಹಾಡುವುದಕ್ಕೆ ಕಡಿವಾಣ ಹಾಕಲು ಕರ್ನಾಟಕ ಸಾಹಿತ್ಯ ಪರಿಷತ್ ಚರ್ಚೆ ನಡೆಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

    ಈ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಸಪಾ ಅಧ್ಯಕ್ಷರಾದ ಮನು ಬಳಿಗಾರ್, ಎರಡೂವರೆ ನಿಮಿಷಗಳ ಕಾಲ ನಾಡಗೀತೆ ಹಾಡಲು ಸಮಯ ನಿಗದಿ ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ. ಈಗಾಗಲೇ 8 ನಿಮಿಷ, 9 ನಿಮಿಷ ನಾಡಗೀತೆ ಹಾಡುತ್ತಿದ್ದಾರೆ. ಸಾಹಿತಿ ನಿಸ್ಸಾರ್ ಅಹಮದ್ ಸೇರಿದಂತೆ ಹಲವು ಹಿರಿಯ ಸಾಹಿತಿಗಳು ನಾಡಗೀತೆಯನ್ನು 2.30 ನಿಮಿಷ ಹಾಡಬೇಕು ಒತ್ತಾಯ ಮಾಡಿದ್ದರು. ಈ ಕರಿತು ಕನ್ನಡ ಸಾಹಿತ್ಯ ಪರಿಷತ್ತಿಗೆ ಮನವಿ ಮಾಡಿ ಪತ್ರ ಕೂಡ ಬರೆದಿದ್ದರು. ಅದ್ದರಿಂದ ಕಸಪಾ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದೆ ಎಂದರು.

    ಅಂತರರಾಷ್ಟ್ರೀಯ ಖ್ಯಾತ ಹಿನ್ನೆಲೆ ಗಾಯಕರು ಕೂಡ ಎರಡೂವರೆ ನಿಮಿಷ ಕಾಲ ನಾಡಗೀತೆಯನ್ನು ಹಾಡಿದ್ದಾರೆ. ಹಾಗಾಗಿ ಈ ಸಮಯವನ್ನು ನಿಗದಿ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡುತ್ತಿದ್ದು, ಸರ್ಕಾರ ಇದನ್ನು ಜಾರಿಗೆ ತರಬೇಕು ಎಂದು ಹೇಳಿದರು.

    ಕಸಾಪ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಲವು ಸಾಹಿತಿಗಳು, ಕನ್ನಡಪರ ಚಿಂತಕರು, ಹೋರಾಟಗಾರರು ಮತ್ತು ಹಾಡುಗಾರರು ಭಾಗಿಯಾಗಿದ್ದರು. ಈ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರು. ಸುದ್ದಿಗೋಷ್ಠಿಗೂ ಮುನ್ನ ನಡೆದ ಸಭೆಯಲ್ಲಿ ಸಾಹಿತಿ ಚಂದ್ರಶೇಖರ್ ಕಂಬಾರ್, ಸಿದ್ದಲಿಂಗಯ್ಯ, ಕಮಲಾ ಹಂಪನಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಾಡಗೀತೆ ವೇಳೆ ಚೂಯಿಂಗ್ ಗಮ್ ಜಗಿದ ಮಹಿಳಾ ಐಎಎಸ್ ಅಧಿಕಾರಿ

    ನಾಡಗೀತೆ ವೇಳೆ ಚೂಯಿಂಗ್ ಗಮ್ ಜಗಿದ ಮಹಿಳಾ ಐಎಎಸ್ ಅಧಿಕಾರಿ

    ತುಮಕೂರು: ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಐಎಎಸ್ ಪ್ರೊಬೇಷನರಿ ಅಧಿಕಾರಿಯೊಬ್ಬರು ನಾಡಗೀತೆಗೆ ಅಗೌರವ ತೋರಿರುವ ಘಟನೆ ಜಿಲ್ಲೆಯ ಶಿರಾ ಪಟ್ಟಣದಲ್ಲಿ ನಡೆದಿದೆ.

    ಶಿರಾ ನಗರದ ಸರ್ಕಾರಿ ಕಾಲೇಜು ಮೈದಾನದಲ್ಲಿ ಸಿಎಂ ಸಿದ್ದರಾಮಯ್ಯ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಪ್ರಾರಂಭಕ್ಕೂ ಮೊದಲು ನಾಡಗೀತೆ ಹಾಡುವ ವೇಳೆ ಸಿಎಂ ಸಿದ್ದರಾಮಯ್ಯ, ಸಚಿವ ಟಿ.ಬಿ ಜಯಚಂದ್ರ, ಎಚ್. ಆಂಜನೇಯ, ಸೇರಿದಂತೆ ಸ್ಥಳೀಯ ಶಾಸಕರು, ಉನ್ನತ ಮಟ್ಟದ ಅಧಿಕಾರಿಗಳು ಎದ್ದು ನಿಂತು ಗೌರವ ಸೂಚಿಸುತ್ತಿದ್ದರು.

    ಈ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ಪ್ರೀತಿ ಗೆಲ್ಹೋಟ್, ಚೂಯಿಂಗ್ ಗಮ್ ಜಗಿಯುವ ಮೂಲಕ ನಾಡಗೀತೆಗೆ ಅಗೌರವ ತೋರಿದ್ದಾರೆ. ಪ್ರೀತಿ ಗೆಲ್ಹೋಟ್ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೇಷನರಿ ಸೇವಾವಧಿಯಲ್ಲಿ ಕೆಲಸ ನಿರ್ವಹಿಸುವ ಮೂಲಕ ತರಬೇತಿ ಪಡೆಯುತ್ತಿದ್ದಾರೆ. ಪ್ರೊಬೇಷನರಿ ಸೇವಾ ಅವಧಿಯಲ್ಲೇ ನಾಡಗೀತೆಗೆ ಅಗೌರವ ತೋರಿರುವುದು ಅಸಮಧಾನಕ್ಕೆ ಕಾರಣವಾಗಿದೆ.

  • ನಾಡಗೀತೆಯನ್ನು ಯಾವ ರಾಗದಲ್ಲಿ ಹಾಡಬೇಕೆಂದು ಇನ್ನೂ ತಿಳಿಸದ ಸರ್ಕಾರ

    ನಾಡಗೀತೆಯನ್ನು ಯಾವ ರಾಗದಲ್ಲಿ ಹಾಡಬೇಕೆಂದು ಇನ್ನೂ ತಿಳಿಸದ ಸರ್ಕಾರ

    ಬೆಂಗಳೂರು: ಇಂದು 62ನೇ ಕನ್ನಡ ರಾಜೋತ್ಸವ. ಎಲ್ಲೆಲ್ಲೂ ಕನ್ನಡದ ಕಂಪು ಹರಡಿದೆ. ನಾಡು-ನುಡಿಯ ಸಂಭ್ರಮದಲ್ಲಿ ನಾಡಗೀತೆಗೆ ಅಪಮಾನ ಮಾಡುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ನಾಡಗೀತೆಯನ್ನು ಯಾವ ರಾಗದಲ್ಲಿ ಹಾಡಬೇಕೆಂದು ಸರ್ಕಾರ ತಿಳಿಸಿಲ್ಲ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

    ಕುವೆಂಪು ರಚಿತ ವಿಶಾಲವಾದ ನಾಡಗೀತೆಯನ್ನು ಪರಿಷ್ಕರಣೆ ಮಾಡಿದ್ದು, ಕಡಿಮೆ ಸಮಯದಲ್ಲಿ ನಾಡಗೀತೆಯನ್ನು ಪರಿಷ್ಕರಿಸಲು ರಚಿಸಿದ್ದ ಕಮಿಟಿ ವರದಿ ನೀಡಿ ಸುಮಾರು 2 ವರ್ಷ ಕಳೆದಿದೆ. ಆದರೂ ನಾಡಗೀತೆಯ ಬಗ್ಗೆ ಸರ್ಕಾರ ಇನ್ನೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ 62ನೇ ಕನ್ನಡ ರಾಜ್ಯೋತ್ಸವವು ಪರಿಷ್ಕೃತ ನಾಡಗೀತೆಯಿಲ್ಲದೆ ಸಂಭ್ರಮಿಸುತ್ತಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

    ಸಾಹಿತಿ ಚೆನ್ನವೀರ ಕಣವಿ ನೇತೃತ್ವದಲ್ಲಿ ಸರ್ಕಾರದ ದೊಡ್ಡದಾಗಿದ್ದ ನಾಡಗೀತೆಯನ್ನ ಪರಿಷ್ಕರಿಸಿ, 2 ರಾಗಗಗಳ ಸಂಯೋಜನೆ ಮಾಡುವಂತೆ ಸಮಿತಿಯನ್ನು ರಚಿಸಿತ್ತು. ಸಮಿತಿ ಇದನ್ನು ಪರಿಶೀಲಿಸಿ ಸರ್ಕಾರಕ್ಕೆ ಎರಡು ರಾಗ ಸಂಯೋಜನೆಯೊಂದಿಗೆ ವರದಿ ನೀಡಿತ್ತು. ನಾಡಗೀತೆಯನ್ನ ಪೂರ್ಣ ಸಾಲುಗಳೊಂದಿಗೆ 2 ನಿಮಿಷ 20 ಸೆಕೆಂಡ್‍ಗಳಲ್ಲಿ ಹಾಡೋದು ಹಾಗೂ ಪರಿಷ್ಕೃತ ನಾಡಗೀತೆಯನ್ನ 1 ನಿಮಿಷ 30 ಸೆಕೆಂಡ್‍ಗಳಲ್ಲಿ ಸಿ.ಅಶ್ವಥ್ ಸಂಯೋಜನೆಯ ರಾಗದಲ್ಲಿ ಹಾಡಲು ವರದಿ ನೀಡಿತ್ತು.

    ಸರ್ಕಾರ ಸಮಿತಿಯ ಪರಿಷ್ಕøತ ನಾಡಗೀತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೆಬ್‍ಸೈಟ್‍ಗೆ ಹಾಕಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿತ್ತು. ಅಭಿಪ್ರಾಯ ಸಂಗ್ರಹಿಸಿದ್ದರೂ ಸರ್ಕಾರ ಈವರೆಗೂ ನಾಡಗೀತೆ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರದ ಈ ರೀತಿಯ ವರ್ತನೆಗೆ ಸಾಹಿತಿ ಬರಗೂರು ರಾಮಚಂದ್ರ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.