Tag: ನಾಗ ಚೈತನ್ಯ

  • ಹಿಂಸೆ ಕೊಟ್ಟ ನಾಗಚೈತನ್ಯ ಬಗ್ಗೆ ಅತ್ತೆ ಬಳಿ ಅಳಲು ತೋಡಿಕೊಂಡ ಸಮಂತಾ

    ಹಿಂಸೆ ಕೊಟ್ಟ ನಾಗಚೈತನ್ಯ ಬಗ್ಗೆ ಅತ್ತೆ ಬಳಿ ಅಳಲು ತೋಡಿಕೊಂಡ ಸಮಂತಾ

    ಟಾಲಿವುಡ್ ಬ್ಯೂಟಿ ಸಮಂತಾ(Samantha) ಸದಾ ಸುದ್ದಿಯಲ್ಲಿರುವ ನಟಿ, ಅದರಲ್ಲೂ ನಾಗಚೈತನ್ಯ(Nagchaitanya) ಜೊತೆ ಡಿವೋರ್ಸ್ ಆದ ಮೇಲೆ ಸಾಕಷ್ಟು ಗಾಸಿಪ್, ಟ್ರೋಲಿಗಳಿಗೆ ಸಮಂತಾ ಗುರಿಯಾಗಿದ್ದಾರೆ. ಇದೀಗ ತಾವು ನಾಗಚೈತನ್ಯಗೆ ಯಾಕೆ ಡಿವೋರ್ಸ್ ಕೊಟ್ಟಿದ್ದು ಎಂಬುದರ ಬಗ್ಗೆ ಮಾಜಿ ಅತ್ತೆ ಲಕ್ಷ್ಮಿ ದಗ್ಗುಬಾಟಿ (Lakshmi Daggubati) ಬಳಿ ಅಳಲು ತೋಡಿಕೊಂಡಿದ್ದಾರೆ.

    ಸೌತ್ ಸಿನಿರಂಗದಲ್ಲಿ ಮುದ್ದಾದ ಜೋಡಿಯಾಗಿ ಹೈಲೆಟ್ ಆಗಿ ನಾಗ್‌ಚೈತನ್ಯ ಮತ್ತು ಸಮಂತಾ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಒಂದು ವರ್ಷವಾಗಿದೆ. ಬಳಿಕ ತಮ್ಮ ವೃತ್ತಿ ಜೀವನದತ್ತ ನಾಗ್, ಸಮಂತಾ ಬ್ಯುಸಿಯಾಗಿದ್ದಾರೆ. `ಪುಷ್ಪ'(Pushpa Film) ಐಟಂ ಸಾಂಗ್ ಹಿಟ್ ಆದ್ಮೇಲೆ ಸಮಂತಾ ರೇಂಜ್ ಬದಲಾಗಿದೆ. ಹಾಗಾಗಿ ಹೊಸ ಹೊಸ ಗಾಸಿಪ್‌ಗಳಿಗೆ ನಟಿ ಆಹಾರವಾಗುತ್ತಿದ್ದಾರೆ.

    ಹೀಗೆ ದಿನಕ್ಕೊಂದು ಸುದ್ದಿ ಸಮಂತಾ ಬಗ್ಗೆ ಹರಿದಾಡುತ್ತಿದೆ. ಇದೀಗ ನಾಗಚೈತನ್ಯ ಅವರ ತಾಯಿ ಲಕ್ಷ್ಮಿ ದಗ್ಗುಬಾಟಿ ಅವರನ್ನ ಸಮಂತಾ ಭೇಟಿಯಾಗಿದ್ದಾರೆ ಎಂಬ ಸುದ್ದಿ ಟಿಟೌನ್‌ನಲ್ಲಿ ಹರಿದಾಡುತ್ತಿದೆ. ನಿಮ್ಮ ಮಗ ನನಗೆ ಹಿಂಸೆ ಕೊಟ್ಟ, ಅದೇ ಕಾರಣಕ್ಕೆ ನಾನು ಡಿವೋರ್ಸ್ ಕೊಟ್ಟೆ, ಮದುವೆ ನಂತರ ಅವರು ಸಾಕಷ್ಟು ಬದಲಾಗಿದ್ದರು. ನನ್ನನ್ನು ಕಂಟ್ರೋಲ್ ಮಾಡುತ್ತಿದ್ದರು ಎಂದು ಮಾಜಿ ಅತ್ತೆ ಬಳಿ ಸಮಂತಾ ತಮ್ಮ ನೋವು ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ಪ್ರೇಮ್ ಮತ್ತು ಧ್ರುವ ಕಾಂಬಿನೇಷನ್ ಸಿನಿಮಾದ ಟೈಟಲ್ ಟೀಸರ್ ಲಾಂಚ್ ಗೆ ಸಂಜಯ್ ದತ್

    ನಮ್ಮ ಮದುವೆ ಬಳಿಕ ಸಿನಿಮಾ ಮಾಡಲು ಅವಕಾಶವಿರಲಿಲ್ಲ. ನನ್ನ ಇಷ್ಟದ ಡ್ರೆಸ್ ತೊಡಲು ಬಿಡುತ್ತಿರಲಿಲ್ಲ. ನನಗೆ ಹಿಂಸೆ ಮಾಡುತ್ತಿದ್ದರು ಎಂದು ಮಾಜಿ ಅತ್ತೆ ಲಕ್ಷ್ಮಿ ದಗ್ಗುಬಾಟಿ ಅವರ ಬಳಿ ಸಮಂತಾ ಹೇಳಿಕೊಂಡಿದ್ದಾರAತೆ ಈ ಸುದ್ದಿ ಅದೆಷ್ಟು ನಿಜ ಎಂಬುದು ತಿಳಿದುಬಂದಿಲ್ಲ.

    Live Tv
    [brid partner=56869869 player=32851 video=960834 autoplay=true]

  • ಸಮಂತಾ ಮನೆಯಲ್ಲಿ 2ನೇ ಮದುವೆಗೆ ಒತ್ತಾಯ: ಕೆಟ್ಟ ನಿರ್ಧಾರ ತಗೆದುಕೊಂಡಿದ್ದಾರಂತೆ ಸ್ಯಾಮ್

    ಸಮಂತಾ ಮನೆಯಲ್ಲಿ 2ನೇ ಮದುವೆಗೆ ಒತ್ತಾಯ: ಕೆಟ್ಟ ನಿರ್ಧಾರ ತಗೆದುಕೊಂಡಿದ್ದಾರಂತೆ ಸ್ಯಾಮ್

    ನಾಗ ಚೈತನ್ಯರಿಂದ ಡಿವೋರ್ಸ್ ಪಡೆದ ನಂತರ ಸಮಂತಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗೆಳೆತಿಯರ ಜೊತೆ ದೇಶ ಸುತ್ತುತ್ತಿದ್ದಾರೆ. ತಮಗೆ ಹೇಗೆ ಬೇಕೋ ಹಾಗೆ ಬದುಕುತ್ತಾ ಇರುವ ಸ್ಯಾಮ್ ಗೆ ಮನೆಯಲ್ಲಿ ಮದುವೆ ಒತ್ತಡ ಶುರುವಾಗಿದೆಯಂತೆ. ಡಿವೋರ್ಸ್ ಆಗಿರುವುದರಿಂದ ಮತ್ತೊಂದು ಮದುವೆ ಆಗಲು ಸಮಂತಾಗೆ ಅವರ ಕುಟುಂಬ ಒತ್ತಡ ಹೇರುವುದಕ್ಕೆ ಶುರು ಮಾಡಿದೆಯಂತೆ.

    ಸಮಂತಾಗೆ ಎರಡನೇ ಮದುವೆ ಒತ್ತಡ ಹೇರುವ ಸುದ್ದಿ ತೆಲುಗು ಸಿನಿಮಾ ರಂಗದಲ್ಲಿ ಬೇರೊಂದು ರೀತಿಯ ಆಯಾಮ ಪಡೆದುಕೊಂಡಿದೆ. ತಾವು ಮುಂದೆ ಮತ್ತೆ ಮದುವೆ ಆಗಬಾರದು ಎನ್ನುವ ಕಾರಣಕ್ಕಾಗಿ ಮಕ್ಕಳು ಆಗದೇ ಇರುವಂತ ಚಿಕಿತ್ಸೆಗೆ ಸಮಂತಾ ಒಳಗಾಗಿದ್ದಾರೆ ಎನ್ನುವ ಸುದ್ದಿ ಹರಡಿದೆ. ಇದು ತೆಲುಗು ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡಿದೆ. ಇದನ್ನೂ ಓದಿ:ಕಿಚ್ಚ ಸುದೀಪ್ ಮನೆ ಮುಂದೆ ಅಭಿಮಾನಿಗಳ ಮಹಾಸಾಗರ: ಹ್ಯಾಪಿ ಬರ್ತ್‌ ಡೇ ಕಿಚ್ಚ

    ಮತ್ತೊಂದು ಮದುವೆಗೆ ಇಷ್ಟವಿರದೇ ಇರುವ ಕಾರಣಕ್ಕಾಗಿ ಸಮಂತಾ ಇಂಥದ್ದೊಂದು ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ನಿಜವೋ ಗಾಸಿಪ್ ಇರಬಹುದೋ? ಒಟ್ಟಿನಲ್ಲಿ ತೆಲುಗು ಸಿನಿಮಾ ರಂಗದಲ್ಲಿ ಈ ಸುದ್ದಿ ಬುಸುಗುಡುತ್ತಿದೆ. ಸಮಂತಾ ಹಾಗೆ ಮಾಡಿಕೊಳ್ಳುವುದಕ್ಕೆ ಸಾಧ್ಯವೆ? ಎನ್ನುವ ಮಾತೂ ಕೇಳಿ ಬರುತ್ತಿವೆ. ಸತ್ಯವೋ ಸುಳ್ಳೋ ಸಮಂತಾ ಯಾವುದೇ ಕಾರಣಕ್ಕೂ ಹಾಗೆ ಮಾಡಿಕೊಳ್ಳಲಾರರು ಎನ್ನುತ್ತಾರೆ ಅವರ ಅಭಿಮಾನಿಗಳು.

    Live Tv
    [brid partner=56869869 player=32851 video=960834 autoplay=true]

  • ಈ ಹಿಂದೆ ನಾಗಚೈತನ್ಯ ಬಾಲಿವುಡ್ ಚಿತ್ರಗಳಿಗೆ ನೋ ಅಂದಿದ್ಯಾಕೆ?

    ಈ ಹಿಂದೆ ನಾಗಚೈತನ್ಯ ಬಾಲಿವುಡ್ ಚಿತ್ರಗಳಿಗೆ ನೋ ಅಂದಿದ್ಯಾಕೆ?

    `ಲವ್‌ಸ್ಟೋರಿ’ ಚಿತ್ರದ ಸಕ್ಸಸ್ ನಂತರ ನಾಗಚೈತನ್ಯಗೆ ಹಲವು ಬಗೆಯ ಪಾತ್ರಗಳು ಅರಸಿ ಬರುತ್ತಿದೆ. ಸದ್ಯ `ಲಾಲ್ ಸಿಂಗ್ ಚಡ್ಡಾ’ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಇದೀಗ ಸಂದರ್ಶನವೊಂದರಲ್ಲಿ ತಮಗೆ ಹಿಂದಿ ಸಿನಿಮಾ ಅವಕಾಶ ಬಂದಾಗ ನಿರಾಕರಿಸಿದ್ದು, ಯಾಕೆ ಅನ್ನೋದನ್ನ ರಿವೀಲ್ ಮಾಡಿದ್ದಾರೆ.

    ಸದ್ಯ `ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರಚಾರ ಕಾರ್ಯಗಳು ನಿಧಾನಕ್ಕೆ ಶುರುವಾಗಿದೆ. ಬಾಲಿವುಡ್‌ನ ಡೆಬ್ಯೂ ಚಿತ್ರದ ಬಗ್ಗೆ ಮಾತನಾಡುವಾಗ ತಾವು ಯಾಕೆ ಹಿಂದಿ ಚಿತ್ರದಿಂದ ದೂರ ಸರಿಯುತ್ತಿದ್ದರು ಅಂತಾ ಮಾತನಾಡಿದ್ದಾರೆ. ಭಾಷೆಯ ಸಮಸ್ಯೆಯಿಂದಾಗಿ ಹಿಂದಿ ಸಿನಿಮಾಗಳಿಂದ ದೂರವಿದ್ದೆ ಅಂತಾ ನಾಗಚೈತನ್ಯ ಹೇಳಿದ್ದಾರೆ. ದಕ್ಷಿಣದ ಸಿನಿಮಾಗಳಲ್ಲಿ ನಟಿಸುವ ಕಾರಣ ಹಿಂದಿ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದು ಕಷ್ಟ ಎಂದರು. ಇದನ್ನೂ ಓದಿ:ಸಿನಿಮಾ ಬಹಿಷ್ಕರಿಸಬೇಡಿ, ನಾನೂ ಭಾರತವನ್ನು ಪ್ರೀತಿಸುವವನು ಎಂದ ಆಮೀರ್ ಖಾನ್

     

    View this post on Instagram

     

    A post shared by Chay Akkineni (@chayakkineni)

    `ಲಾಲ್ ಸಿಂಗ್ ಚಡ್ಡಾ’ ಚಿತ್ರವನ್ನು ಮೊದಲು ನಿರಾಕರಿಸಿದ್ದೆ, ಆದರೆ ಆಮೀರ್ ಖಾನ್ ಅವರೇ ಪಾತ್ರದ ಬಗ್ಗೆ ಜತೆಗೆ ಹೈದರಾಬಾದ್‌ನಿಂದ ಬರುವ ಹುಡುಗನ ಕಥೆಯಾಗಿದರಿಂದ ನನಗೆ ನಟಿಸಲು ಸುಲಭವಾಯಿತು ಎಂದು ತಮ್ಮ ಪಾತ್ರದ ಬಗ್ಗೆಯೂ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಟ ನಾಗ ಚೈತನ್ಯರ ಕೈ ಹಿಡಿಯಲಿಲ್ಲ ಥ್ಯಾಂಕ್ ಯೂ ಸಿನಿಮಾ

    ನಟ ನಾಗ ಚೈತನ್ಯರ ಕೈ ಹಿಡಿಯಲಿಲ್ಲ ಥ್ಯಾಂಕ್ ಯೂ ಸಿನಿಮಾ

    ಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್ ನಂತರ ಇವರಿಬ್ಬರ ಬದುಕಿನಲ್ಲೂ ಹಲವು ಬದಲಾವಣೆಗಳು ಆಗಿವೆ. ಈ ನೋವಿನಿಂದ ಇಬ್ಬರೂ ಆಚೆ ಬಂದು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಗೆಲ್ಲುತ್ತಿವೆ. ಅತೀ ಹೆಚ್ಚು ಅವಕಾಶಗಳು ಕೂಡ ಅವರನ್ನು ಹುಡುಕಿಕೊಂಡು ಬರುತ್ತಿವೆ. ಮೊದಲಿಗಿಂತಲೂ ಇದೀಗ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ ಸಮಂತಾ.

    ಆದರೆ, ನಾಗ ಚೈತನ್ಯ ಬದುಕಿನಲ್ಲಿ ಇದು ಉಲ್ಟಾ ಆಗುತ್ತಿದೆ. ಡಿವೋರ್ಸ್ ನಂತರ ಇದೇ ಮೊದಲ ಬಾರಿಗೆ ನಾಗ ಚೈತನ್ಯ ನಟನೆಯ ‘ಥ್ಯಾಂಕ್ ಯೂ’ ಚಿತ್ರ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಈ ಸಿನಿಮಾ ನಿರಾಸೆ ಮೂಡಿಸಿದೆ. ಅಷ್ಟೇನೂ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಕೂಡ ಸಿಕ್ಕಿಲ್ಲ. ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ಮಕಾಡೆ ಮಲಗಿದ್ದರಿಂದ ನಾಗ ಚೈತನ್ಯ ಅವರಿಗೆ ಸಹಜವಾಗಿಯೇ ನೋವು ತಂದಿದೆ. ಅಭಿಮಾನಿಗಳು ಕೂಡ ನೆಗೆಟಿವ್ ರಿವಿವ್ಯೂ ನೀಡಿರುವುದರಿಂದ ತೀರಾ ಅಪ್ ಸೆಟ್ ಆಗಿದ್ದಾರೆ ಎನ್ನುವ ಸುದ್ದಿಯಾಗಿದೆ. ಇದನ್ನೂ ಓದಿ:ಮಾದೇವನಿಗೆ ಸೋನಲ್ ಮೊಂಥೆರೋ ಜೋಡಿ

    ಅಮೀರ್ ಖಾನ್ ನಟನಯೆ ಲಾಲ್ ಸಿಂಗ್ ಛಡ್ಡಾ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಸಖತ್ ವೈರಲ್ ಕೂಡ ಆಗಿದೆ. ನಿರೀಕ್ಷೆಯ ಸಿನಿಮಾಗಳ ಲಿಸ್ಟ್ ನಲ್ಲೂ ಈ ಸಿನಿಮಾವಿದೆ. ಹಾಗಾಗಿ ಥ್ಯಾಂಕ್ ಯೂ ಸೋಲನ್ನು ಈ ಸಿನಿಮಾ ಮರೆಸಬಹುದಾ ಎನ್ನುವ ಚರ್ಚೆ ಕೂಡ ನಡೆದಿದೆ. ಒಂದು ಕಡೆ ಸಮಂತಾ ಏರುದಿಕ್ಕಿನತ್ತ ಮುಖ ಮಾಡಿದ್ದರೆ, ನಾಗ ಚೈತನ್ಯ ಸೋಲುಗಳಿಂದ ಕಂಗೆಟ್ಟಿದ್ದಾರೆ. ಆದರೂ, ಲಾಲ್ ಸಿಂಗ್ ಛಡ್ಡಾ ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ನಾಗಚೈತನ್ಯಗಾಗಿ ಡೇಟಿಂಗ್ ವಿಚಾರ : ನಟಿಯರಿಬ್ಬರ ಕೋಲ್ಡ್ ವಾರ್

    ನಾಗಚೈತನ್ಯಗಾಗಿ ಡೇಟಿಂಗ್ ವಿಚಾರ : ನಟಿಯರಿಬ್ಬರ ಕೋಲ್ಡ್ ವಾರ್

    ತೆಲುಗಿನ ಖ್ಯಾತ ನಟ ನಾಗಚೈತನ್ಯ ನಟಿ ಶೋಭಿತಾ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಶೋಭಿತಾ ಮತ್ತು ನಾಗ ಚೈತನ್ಯಗೆ ಟಾಂಗ್ ಕೊಡುವಂತೆ ಈ ಹಿಂದೆ ಸಮಂತಾ ಪೋಸ್ಟ್ ವೊಂದನ್ನು ಹಾಕಿಕೊಂಡಿದ್ದರು. ಎಕ್ಸ್ ಗಳ ವಿಚಾರ ಬಿಟ್ಟುಬಿಡಿ ಎನ್ನುವಂತೆ ಟ್ರೋಲ್ ಮಾಡುತ್ತಿದ್ದವರಿಗೆ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಅದಕ್ಕೆ ಪ್ರತಿಕ್ರಿಯೆ ಎನ್ನುವಂತೆ ಶೋಭಿತಾ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

    ಸಮಂತಾ ಬರಹಕ್ಕೆ ಪ್ರತ್ಯುತ್ತರ ಎನ್ನುವಂತೆ ಶೋಭಿತಾ ಮಧ್ಯೆದ ಬೆರಳು ತೋರಿಸಿದ್ದಾರೆ. ಹಾಗಾಗಿ ಮತ್ತೆ ನಟಿಯರ ಜಟಾಪಟಿ ಶುರುವಾಗಿದೆ. ಸಮಂತಾ ಕೆಟ್ಟದ್ದಾಗಿ ಪ್ರತಿಕ್ರಿಯೆ ನೀಡದೇ ಇದ್ದರೂ, ಶೋಭಿತಾ ಆ ರೀತಿಯ ವರ್ತಿಸುವುದು ಸರಿಯಲ್ಲವೆಂದು ಸಮಂತಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ಆದರೆ, ನಾಗಚೈತನ್ಯ ಅವರನ್ನು ಈ ವಿಷಯದಲ್ಲಿ ಸುಖಾಸುಮ್ಮನೆ ಎಳೆತರಲಾಗುತ್ತಿದೆ ಎಂದು ಅವರ ಅಭಿಮಾನಿಗಳು ಗರಂ ಆಗಿದ್ದಾರೆ.  ಇದನ್ನೂ ಓದಿ:ಮಲಯಾಳಂ ನಟಿ ಅಂಬಿಕಾ ರಾವ್ ನಿಧನ

    ನಾಗಚೈತನ್ಯ ಮತ್ತು ಶೋಭಿತಾ ಡೇಟಿಂಗ್ ವಿಚಾರ ಕಳೆದೊಂದು ವಾರದಿಂದ ಸಖತ್ ಸದ್ದು ಮಾಡುತ್ತಿದೆ. ಅವರಿಬ್ಬರೂ ಬರೀ ಡೇಟಿಂಗ್ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿಯೂ ಹರಡಿದೆ. ಅದಕ್ಕೆ ನಾಗಚೈತನ್ಯ ಕುಟುಂಬ ಸಹ ಒಪ್ಪಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಅಧಿಕೃತವಾಗಿ ಯಾರೂ ಹೇಳಿಕೊಂಡಿಲ್ಲ. ಆದರೂ, ಡೇಟಿಂಗ್ ವಿಚಾರ ಮಾತ್ರ ದಿನದಿಂದ ದಿನಕ್ಕೆ ಹೆಚ್ಚು ಸದ್ದು ಮಾಡುತ್ತಿರುವುದಂತೂ ಸುಳ್ಳಲ್ಲ.

    Live Tv

  • ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಸ್ಯಾಮ್ ಖಡಕ್ ರಿಯಾಕ್ಷನ್

    ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್: ಸ್ಯಾಮ್ ಖಡಕ್ ರಿಯಾಕ್ಷನ್

    ನಟಿ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು 1 ವರ್ಷ ಆಗುತ್ತಾ ಬಂದಿದೆ. ಈಗ ಇಬ್ಬರೂ ವೃತ್ತಿ ಜೀವನದ ಕಡೆ ಗಮನ ನೀಡ್ತಿದ್ದಾರೆ. ಹೀಗಿರುವಾಗ ಶೋಭಿತಾ ಧುಲಿಪಾಲ ಜೊತೆ ನಾಗ ಚೈತನ್ಯ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ವಿಚಾರದಲ್ಲಿ ಅನಗತ್ಯವಾಗಿ ಸಮಂತಾ ಅವರನ್ನು ಚೈ ಫ್ಯಾನ್ಸ್ ಎಳೆದು ತಂದಿದ್ದಾರೆ. ಇವರೆಲ್ಲರಿಗೂ ಸಮಂತಾ ಖಡಕ್ ಉತ್ತರ ನೀಡಿದ್ದಾರೆ.

    ಕಳೆದ ವರ್ಷ ಸಮಂತಾ ಮತ್ತು ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಇಬ್ಬರೂ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಿದ್ದಾರೆ. ಎಲ್ಲವನ್ನು ಮರೆತು ಹೊಸ ಜೀವನ ನಡೆಸುತ್ತಿದ್ದಾರೆ. ಹೀಗಿರುವಾಗ ಕೆಲವರು ಇವರ ಗಾಯದ ಮೇಲೆ ಮತ್ತೆ ಬರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಸಮಂತಾ ತಕ್ಕ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ಗೆ ರಾಮ್ ಚರಣ್: ಸಲ್ಮಾನ್ ಖಾನ್ ಜೊತೆ ಜ್ಯೂ.ಮೆಗಾಸ್ಟಾರ್

    ಸಮಂತಾ ಜತೆಗಿನ ವಿಚ್ಛೇದನ ನಂತರ ನಾಗಚೈತನ್ಯ ನಟಿ ಶೋಭಿತಾ ಧುಲಿಪಾಲ ಜತೆ ಪ್ರೀತಿಯಲ್ಲಿದ್ದಾರಂತೆ. ಸಾಕಷ್ಟು ದಿನಗಳಿಂದ ನಾಗ ಚೈತನ್ಯ ಶೋಭಿತಾ ಜತೆ ಡೇಟಿಂಗ್‌ನಲ್ಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ವಿಷ್ಯಕ್ಕೆ ಸಮಂತಾ ಅವರನ್ನು ಎಳೆದಿದ್ದಾರೆ. ಅದಕ್ಕೆ ಸಮಂತಾ ಟ್ವೀಟ್ ಮೂಲಕ ಖಡಕ್‌ ರಿಯಾಕ್ಷನ್ ಕೊಟ್ಟಿದ್ದಾರೆ.

    ಹೆಣ್ಣು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಅದು ನಿಜ ಎನ್ನುತ್ತೀರಿ. ಗಂಡು ಮಕ್ಕಳ ಬಗ್ಗೆ ವದಂತಿ ಹಬ್ಬಿದರೆ ಇದು ಹೆಣ್ಣಿನ ಕೆಲಸ ಎನ್ನುತ್ತೀರಿ. ಇದರಲ್ಲಿ ಭಾಗಿಯಾದವರೇ ಎಲ್ಲವನ್ನು ಬಿಟ್ಟು ಮುಂದೆ ಸಾಗಿದ್ದಾರೆ. ನೀವೂ ಇದನ್ನು ಬಿಟ್ಟು ಮುಂದೆ ಸಾಗಿ. ನಿಮ್ಮ ಕೆಲಸ ನೋಡಿಕೊಳ್ಳಿ, ನಿಮ್ಮ ಕುಟುಂಬದ ಕಡೆ ಗಮನ ನೀಡಿ ಅಂತಾ ಕೆಣಕಿದವರಿಗೆ ಸಮಂತಾ ತಿರುಗೇಟು ನೀಡಿದ್ದಾರೆ.

    ಟಾಲಿವುಡ್‌ನ ಸ್ಟಾರ್ ನಟರಲ್ಲಿ ಒಬ್ಬರಾಗಿರುವ ನಾಗ ಚೈತನ್ಯ ವಿಚ್ಛೇದನದ ಬಳಿಕ ಮತ್ತೊಂದು ಮದುವೆ ಆಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ ಈ ಸುದ್ದಿಯ ಬಗ್ಗೆ ಅಕ್ಕಿನೇನಿ ಕುಟುಂಬ ಯಾವುದೇ ರಿಯಾಕ್ಷನ್ ಕೊಟ್ಟಿರಲಿಲ್ಲ. ಇದೀಗ ಶೋಭಿತಾ ಧುಲಿಪಾಲ ಜತೆಗಿನ ಡೇಟಿಂಗ್ ವದಂತಿಗೆ ನಾಗ ಚೈತನ್ಯ ಕುಟುಂಬ ಉತ್ತರ ನೀಡತ್ತಾರಾ ಅಕ್ಕಿನೇನಿ ಮನೆ ಸೊಸೆ ಆಗಲಿದ್ದಾರಾ ಅಂತಾ ಕಾದು ನೋಡಬೇಕಿದೆ.

    Live Tv

  • ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ದಕ್ಷಿಣದ ಕಲಾವಿದನ ಕಡೆಗಣಿಸಿತಾ?

    ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ದಕ್ಷಿಣದ ಕಲಾವಿದನ ಕಡೆಗಣಿಸಿತಾ?

    ಬಾಲಿವುಡ್ ಅಂಗಳದಲ್ಲಿ ಸದ್ಯ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಛಡ್ಡಾ ಸಿನಿಮಾದ್ದೇ ಮಾತು. ಕಳೆದ ಎರಡು ವರ್ಷಗಳಿಂದ ಸೋತು ಸುಣ್ಣವಾಗಿದ್ದ ಬಿಟೌನ್ ಅಂಗಳಲ್ಲಿ ಇದು ಕಾಮಧೇನು ಎನ್ನುವಂತೆ ಬಿಂಬಿಸಲಾಗುತ್ತಿದೆ. ದಾಖಲೆಯ ಮಟ್ಟದಲ್ಲಿ ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ಗೆಲ್ಲಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಇಂಥದ್ದೊಂದು ನಿರೀಕ್ಷೆಗೆ ಕಾರಣ ಮೊನ್ನೆ ರಿಲೀಸ್ ಆದ ಸಿನಿಮಾದ ಟ್ರೈಲರ್. ಐಪಿಎಲ್ ಫಿನಾಲೆ ವೇಳೆ ಲಾಲ್ ಸಿಂಗ್ ಛಡ್ಡಾ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದೆ. ವಿಶ್ವದಾದ್ಯಂತ ಟ್ರೈಲರ್ ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಮೂಲ ಸಿನಿಮಾಗಿಂತಲೂ ಈ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ಟ್ರೈಲರ್ ವಿಮರ್ಶೆ ಮಾಡಲಾಗಿದೆ. ಆದರೆ, ಈ ಟ್ರೈಲರ್ ಬಿಟ್ಟು ಎಡವಟ್ಟು ಮಾಡಿಕೊಂಡಿದೆ ತಂಡ. ಇದನ್ನೂ ಓದಿ : ನಟ ಚೇತನ್ ಇಂದು ಕೋರ್ಟಿಗೆ ಹಾಜರ್

    ಈ ಸಿನಿಮಾದಲ್ಲಿ ತೆಲುಗಿನ ಖ್ಯಾತ ನಟ ನಾಗ ಚೈತನ್ಯ ವಿಶೇಷ ಪಾತ್ರವನ್ನು ಮಾಡಿದ್ದು, ಟ್ರೈಲರ್ ನಲ್ಲಿ ನಾಗ ಚೈತನ್ಯ ಅವರು ಸರಿಯಾದ ರೀತಿಯಲ್ಲಿ ತೋರಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ. ದಕ್ಷಿಣದ ಹೆಸರಾಂತ ಕಲಾವಿದನನ್ನು ಆಯ್ಕೆ ಮಾಡಿಕೊಂಡು, ಅವರನ್ನು ಟ್ರೈಲರ್ ನಲ್ಲಿ ಕಡೆಗಣಿಸಲಾಗಿದೆ ಎಂದು ನಾಗ ಚೈತನ್ಯ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ನಿಲ್ಲದ ನಟಿಯರ ಆತ್ಮಹತ್ಯೆ ಸರಣಿ : ಹದಿನೈದು ದಿನದಲ್ಲಿ 4 ನಟಿಯರು ನೇಣಿಗೆ ಶರಣು

    ಒಂದು ಕಡೆ ಅಮೀರ್ ಖಾನ್ ಅವರನ್ನು ಬೈಕಾಟ್ ಮಾಡಿ ಎಂದು ಕ್ಯಾಂಪೇನ್ ಶುರುವಾಗಿದ್ದರೆ, ಮತ್ತೊಂದು ಕಡೆ ನಾಗ ಚೈತನ್ಯ ಅವರನ್ನು ಸರಿಯಾಗಿ ತೋರಿಸಿಲ್ಲ ಎನ್ನುವ ಕೂಗು ಎದ್ದಿದೆ. ಅದೇನೇ ಇದ್ದರೂ, ಸಿನಿಮಾದ ಟ್ರೈಲರ್ ಮಾತ್ರ ಸೂಪರ್ ಆಗಿ ಮೂಡಿ ಬಂದಿದ್ದು, ದಾಖಲೆ ರೀತಿಯಲ್ಲಿ ಇದು ಜನರಿಗೆ ತಲುಪಲಿದೆ ಎನ್ನುವುದು ಬಿಟೌನ್ ಲೆಕ್ಕಾಚಾರವಾಗಿದೆ.

  • ಇನ್‌ಸ್ಟಾದಿಂದ ನಾಗಚೈತನ್ಯನನ್ನು ಅನ್‍ಫಾಲೋ ಮಾಡಿದ ಸಮಂತಾ

    ಇನ್‌ಸ್ಟಾದಿಂದ ನಾಗಚೈತನ್ಯನನ್ನು ಅನ್‍ಫಾಲೋ ಮಾಡಿದ ಸಮಂತಾ

    ಟಾಲಿವುಡ್ ಬ್ಯೂಟಿ ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ದಕ್ಷಿಣ ಸಿನಿರಂಗದಲ್ಲಿಯೇ ಕ್ಯೂಟ್ ಕಪಲ್ ಆಗಿದ್ದರು. ಆದರೆ ಕೆಲವು ಕಾರಣಗಳಿಂದ ಈ ಜೋಡಿಗಳು ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವಾಡಿದ್ದರು. ಆದರೂ ನಾವಿಬ್ಬರು ಗುಡ್ ಫ್ರೆಂಡ್ಸ್ ಆಗಿರುತ್ತೇವೆ ಎಂದು ಹೇಳಿಕೊಂಡಿದ್ದರು. ಆದರೆ ಇದಕ್ಕಿದ್ದ ಹಾಗೇ ಸಮಂತಾ ತಮ್ಮ Instagramನಲ್ಲಿ ನಾಗ ಚೈತನ್ಯ ಅವರನ್ನು ಅನ್‍ಫಾಲೋ ಮಾಡುವ ಮೂಲಕ ತಮ್ಮ ಸಂಬಂಧಕ್ಕೆ ಪೂರ್ಣ ಅಂತ್ಯವಾಡಿದ್ದಾರೆ ಎಂಬುದನ್ನು ಪರೋಕ್ಷವಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ.

    ನಾಗಚೈತ್ಯನ್ಯ ಜೊತೆ ವಿಚ್ಛೇದನ ಪಡೆದ ನಂತರವೂ ಸಮಂತಾ ಅವರನ್ನು ಇನ್‍ಸ್ಟಾದಲ್ಲಿ ಫಾಲೋ ಮಾಡುತ್ತಿದ್ದರು. ಆದರೆ ಇಂದು ಅವರ ಪ್ರೊಫೈಲ್ ಚೆಕ್ ಮಾಡಿದಾಗ 400ಕ್ಕೂ ಹೆಚ್ಚು ಜನರನ್ನು ಸಮಂತಾ ಫಾಲೋ ಮಾಡಿದ್ದಾರೆ. ಈ ಮಧ್ಯೆ ನಾಗಚೈತನ್ಯ ಅವರನ್ನು ಫಾಲೋ ಮಾಡುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ನಟಿ ಈ ಹಿಂದೆಯೂ ಸಹ ತಮ್ಮ ಪ್ರೊಫೈಲ್ ನಲ್ಲಿ ನಾಗಚೈತನ್ಯ ಜೊತೆ ಕಾಣಿಸಿಕೊಂಡಿದ್ದ ಎಲ್ಲ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದನ್ನೂ ಓದಿ:  ಹುಡುಗಿ ಎಂದು ಅಪ್ಪನ ಜೊತೆಗೆ ಚಾಟ್ ಮಾಡಿ ಸಿಕ್ಕಿಬಿದ್ದ ಖ್ಯಾತ ನಿರ್ಮಾಪಕ!

    ಮನಂ, ಮಜಿಲಿಯೇ ಮಾಯ ಚೇಸಾವೆ ಮುಂತಾದ ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ 2017 ರಲ್ಲಿ ಸಪ್ತಪದಿ ತುಳಿದಿತ್ತು. ಆದರೆ ಕಳೆದ ವರ್ಷವಷ್ಟೇ ಈ ತಾರಾ ಜೋಡಿ ಪ್ರತ್ಯೇಕವಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಅದರಂತೆ ಸಮಂತಾ ಪ್ರಭು ರುತ್ ಸೋಶಿಯಲ್ ಮೀಡಿಯಾದಿಂದ ‘ಅಕ್ಕಿನೇನಿ’ ಎಂಬ ನಾಗ ಚೈತನ್ಯ ಸರ್‌ ನೇಮ್‌ ತೆಗೆದುಹಾಕಿದ್ದರು. ನಂತರ ಈ ನಟಿ ‘ಎಸ್’ ಎಂದು ತಮ್ಮ ಸೋಶಿಯಲ್ ಮೀಡಿಯಾ ಪ್ರೊಫೈಲ್ ಬದಲಾಯಿಸಿಕೊಂಡಿದ್ದಾರೆ.

  • ಸಮಂತಾ ಫಿಟ್ನೆಸ್‍ಗೆ ಅಭಿಮಾನಿಗಳು ಫಿದಾ

    ಸಮಂತಾ ಫಿಟ್ನೆಸ್‍ಗೆ ಅಭಿಮಾನಿಗಳು ಫಿದಾ

    ಹೈದರಾಬಾದ್: ನಟಿ ಸಮಂತಾ ವಿಚ್ಛೇದನ ನಂತರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಅವರಿಗೆ ಬರುತ್ತಿವೆ. ಹೀಗಾಗಿ ಅವರು ಜೀಮ್‍ನಲ್ಲಿ ಬೇವರು ಹರಿಸುತ್ತಾ, ದೇಹವನ್ನು ದಂಡಿಸುತ್ತಿದ್ದಾರೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ.

    ಫಿಟ್ನೆಸ್‍ಗೆ ಹೆಚ್ಚು ಒತ್ತು ನೀಡುವ ಸಮಂತಾ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೊವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಂತಾ ಅತ್ಯಂತ ಸುಲಭವಾಗಿ ತೂಕವನ್ನು ಎತ್ತುವುದನ್ನು ಕಾಣಬಹುದು. 75, 78, 80 ಕೆ.ಜಿ ತೂಕ ಎತ್ತುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‍ನಲ್ಲಿ ನಟಿ ಅಮೂಲ್ಯ

     

    View this post on Instagram

     

    A post shared by Samantha (@samantharuthprabhuoffl)

    ಇತ್ತೀಚೆಗೆ ತೆರೆಕಂಡ ಸುಕುಮಾರ್ ನಿರ್ದೇಶನದ ಪುಷ್ಪ ಸಿನಿಮಾದಲ್ಲಿ ಸಮಂತಾ, ಮೊದಲ ಬಾರಿಗೆ ಐಟಂ ಸಾಂಗ್‍ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಹೂ ಅಂತಿಯಾ ಮಾವ. ಊ ಊ ಅಂತಿಯಾ ಹಾಡಿಗೆ ಸಮಂತಾ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ. ಸಿನಿಮಾ ಗೆಲುವಿನಲ್ಲಿ ಈ ವಿಶೇಷ ಹಾಡು ಪ್ರಮುಖ ಪಾತ್ರ ವಹಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಸೆಲೆಬ್ರಿಟಿ ದಂಪತಿ ನಾಗ ಚೈತನ್ಯ, ಸಮಂತಾ ಕಳೆದ ವರ್ಷ ದಾಂಪತ್ಯಕ್ಕೆ ಅಂತ್ಯ ಹಾಡಿದ್ದಾರೆ. ಈಗ ಇಬ್ಬರು ತಮ್ಮ ಸಿನಿಮಾ ಕೆಲಗಳಲ್ಲಿ ತೊಡಗಿಕೊಂಡಿದ್ದಾರೆ. ಇದನ್ನೂ ಓದಿ: ಐತಿಹಾಸಿಕ ಕೌತುಕಕ್ಕೆ ಸಾಕ್ಷಿಯಾದ ಗವಿ ಗಂಗಾಧರೇಶ್ವರ ದೇಗುಲ – ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ

  • ಸಮಂತಾ, ನಾಗ ಚೈತನ್ಯ  DIVORCEಗೆ ಅಸಲಿ ಕಾರಣ ಬಯಲು

    ಸಮಂತಾ, ನಾಗ ಚೈತನ್ಯ DIVORCEಗೆ ಅಸಲಿ ಕಾರಣ ಬಯಲು

    ಹೈದರಾಬಾದ್: ಟಾಲಿವುಡ್‍ನ ಕ್ಯೂಟ್ ಕಪಲ್ ಸಮಂತಾ, ನಾಗ ಚೈತನ್ಯ ಡಿವೋರ್ಸ್ ಪಡೆದುಕೊಂಡಿರುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಇವರ ಮಧ್ಯೆ ಇದ್ದಕ್ಕಿದ್ದ ಹಾಗೇ ಬಿರುಕು ಮೂಡಲು ಕಾರಣವೇನು ಎಂದು ಅಭಿಮಾನಿಗಳು ಕೇಳುತ್ತಿದ್ದರು. ಆದರೆ ಸೋಶಿಯಲ್ ಮೀಡಿಯಾದಲ್ಲಿ ಅಂತೆ ಕಂತೆ ವಿಚಾರಗಳು ಹರಿದಾಡುತ್ತಿವೆ.

    ಸಮಂತಾ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಮದುವೆ ನಂತರ ತೆರೆಕಂಡ ರಂಗಸ್ಥಲಂ, ಮಜಿಲಿ ಸೇರಿ ಅನೇಕ ಸಿನಿಮಾಗಳು ಯಶಸ್ಸು ಕಂಡಿವೆ. ಆದರೆ ನಾಗ ಚೈತನ್ಯ ವೃತ್ತಿ ಜೀವನದಲ್ಲಿ ಸಾಕಷ್ಟು ಸೋಲುಗಳನ್ನು ಕಾಣುತ್ತಿದ್ದಾರೆ. ಅವರ ನಟನೆಯ ಮಜಿಲಿ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತು. ಆದರೆ ಅಭಿಮಾನಿಗಳು ಸಿನಿಮಾ ಯಶಸ್ಸನ್ನು ಈ ಚಿತ್ರದಲ್ಲಿ ಮುಖ್ಯಪಾತ್ರ ಮಾಡಿದ ಸಮಂತಾಗೆ ನೀಡಿದರು. ಈ ರೀತಿಯ ಸಾಕಷ್ಟು ಘಟನೆಗಳು ನಡೆದಿವೆ ಎನ್ನಲಾಗುತ್ತಿದೆ. ದಿ ಫ್ಯಾಮಿಲಿ ಮ್ಯಾನ್ 2 ಯಶಸ್ಸಿನ ನಂತರ ಬಾಲಿವುಡ್ ಮಂದಿ ಸಮಂತಾ ಮನೆ ಬಾಗಿಲು ತಟ್ಟುತ್ತಿದ್ದಾರೆ. ಈ ವಿಚಾರದಲ್ಲಿ ನಾಗ ಚೈತನ್ಯ ಸಾಕಷ್ಟು ಹೊಟ್ಟೆಕಿಚ್ಚು ಮಾಡಿಕೊಳ್ಳುತ್ತಿದ್ದರು ಎಂದು ವರದಿ ಆಗಿದೆ.ಇದನ್ನೂ ಓದಿ : ನಾನು ನನ್ನನ್ನು ಬದಲಾಯಿಸಿಕೊಳ್ಳಬೇಕು: ಸಮಂತಾ

    ನಾಗ ಚೈತನ್ಯಗೆ ಮಕ್ಕಳನ್ನು ಆಡಿಸುವ ಆಸೆ ಇತ್ತು. ಆದರೆ ಸಮಂತಾಗೆ ಇಷ್ಟು ಬೇಗ ಅದು ಇಷ್ಟವಿರಲಿಲ್ಲ ಎನ್ನುತ್ತಿವೆ ಮೂಲಗಳು. ಮಕ್ಕಳಾದ ನಂತರ ಅದರ ಪಾಲನೆಗೆ ಒಂದಷ್ಟು ವರ್ಷ ಹಿಡಿಯುತ್ತದೆ. ಆ ವೇಳೆಗೆ ಚಿತ್ರರಂಗದಲ್ಲಿ ಬೇಡಿಕೆ ಕುಗ್ಗಿರುತ್ತದೆ. ಈ ಕಾರಣಕ್ಕೆ ಕೆಲ ವರ್ಷ ಬಿಟ್ಟು ಮಗುವನ್ನು ಪಡೆಯುವ ಆಲೋಚನೆ ಸಮಂತಾ ಅವರದ್ದಾಗಿತ್ತು. ಈ ವಿಚಾರಕ್ಕೂ ಇಬ್ಬರ ನಡುವೆ ವಾಗ್ವಾದಗಳು ಏರ್ಪಟ್ಟಿವೆ ಎನ್ನಲಾಗಿದೆ. ಇದನ್ನೂ ಓದಿ :  ವಿಚ್ಛೇದನ ಪಡೆಯುತ್ತಿದ್ದಂತೆ ಹೆಸರು ಬದಲಿಸಿಕೊಂಡ ಸಮಂತಾ

    ಮದುವೆ ಆದ ನಂತರದಲ್ಲಿ ಹೀರೋಯಿನ್‍ಗಳು ಬೋಲ್ಡ್ ಆಗಿ ತೆರೆಮೇಲೆ ಕಾಣಿಸಿಕೊಳ್ಳೋದು ತುಂಬಾನೇ ಅಪರೂಪ. ಕುಟುಂಬದ ಹಿರಿಯರೂ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಸಮಂತಾ ಇದಕ್ಕೆಲ್ಲ ಕೇರ್ ಮಾಡದೇ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಸಮಂತಾ ವೃತ್ತಿ ಜೀವನದ ದೃಷ್ಟಿಯಲ್ಲಿ ದಿ ಫ್ಯಾಮಿಲಿ ಮ್ಯಾನ್ 2 ಬಹಳ ಮಹತ್ವ ಪಡೆದುಕೊಂಡಿದೆ. ಈ ಕಾರಣಕ್ಕೆ ಅವರು ವೆಬ್ ಸೀರಿಸ್ ಒಪ್ಪಿಕೊಂಡಿದ್ದರು. ಇದಕ್ಕೆ ಕುಟುಂಬದವರ ವಿರೋಧವಿದ್ದರೂ ಅವರು ತಲೆಕೆಡಿಸಿಕೊಂಡಿಲ್ಲ ಎನ್ನಲಾಗುತ್ತಿದೆ. ಈ ವಿಚಾರವೇ ಈಗ ಡಿವೋರ್ಸ್‍ವರೆಗೆ ತಂದು ನಿಲ್ಲಿಸಿತು ಎಂದು ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: 200 ಕೋಟಿ ಜೀವನಾಂಶ ರಿಜೆಕ್ಟ್ ಮಾಡಿದ ಸಮಂತಾ

    ಸಮಂತಾ-ನಾಗ ಚೈತನ್ಯ ದಾಂಪತ್ಯ ಮುರಿದು ಬಿದ್ದಿದೆ. ಇದಕ್ಕೆ ಕಾರಣಗಳೇನು ಎನ್ನುವ ಬಗ್ಗೆ ಸಾಕಷ್ಟು ಜನರು ಸಾಕಷ್ಟು ರೀತಿಯಲ್ಲಿ ಚರ್ಚಿಸುತ್ತಿದ್ದಾರೆ. ಈಗ ಈ ಜೋಡಿ ಬೇರೆಯಾಗಿ ಆಗಿದೆ. ಇಬ್ಬರ ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಕಾಣಲಿ ಎನ್ನುವುದು ಅಭಿಮಾನಿಗಳ ಆಶಯವಾಗಿದೆ.