Tag: ನಾಗ ಚೈತನ್ಯ

  • ನಾಗಚೈತನ್ಯ ಮದುವೆ ಡೇಟ್ ಫಿಕ್ಸ್- ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಭರ್ಜರಿ ಪ್ಲ್ಯಾನ್

    ನಾಗಚೈತನ್ಯ ಮದುವೆ ಡೇಟ್ ಫಿಕ್ಸ್- ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಭರ್ಜರಿ ಪ್ಲ್ಯಾನ್

    ಸೌತ್‌ನ ನಟಿ ಸಮಂತಾರ ಮಾಜಿ ಪತಿ ನಾಗ ಚೈತನ್ಯ (Naga Chaitanya) ಮತ್ತು ಶೋಭಿತಾ (Sobhita Dhulipala) ಮದುವೆಗೆ (Wedding) ದಿನಾಂಕ ನಿಗದಿಯಾಗಿದೆ. ಅದಷ್ಟೇ ಅಲ್ಲ, ಡೆಸ್ಟಿನೇಷನ್ ವೆಡ್ಡಿಂಗ್ ಮಾಡಲು ತೆರೆಮರೆಯಲ್ಲಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು

    ಈ ವರ್ಷದ ಅಂತ್ಯದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಹಸೆಮಣೆ ಏರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಜಸ್ಥಾನ ಅಥವಾ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಸಕಲ ತಯಾರಿ ಕೂಡ ನಡೆಯುತ್ತಿದೆಯಂತೆ. ಇನ್ನೂ ಇತ್ತೀಚೆಗೆ ಮಗನ ನಿಶ್ಚಿತಾರ್ಥದ ಕುರಿತು ನಾಗರ್ಜುನ ಅಕ್ಕಿನೇನಿ ಘೋಷಿಸಿದ್ದರು. ಈಗ ಮದುವೆ ಬಗ್ಗೆ ಕೂಡ ಅಧಿಕೃತ ಮಾಹಿತಿ ನೀಡ್ತಾರಾ? ಕಾದುನೋಡಬೇಕಿದೆ.

    ಆ.8ರಂದು ಸೈಲೆಂಟ್ ಆಗಿ ನಟಿ ಶೋಭಿತಾಗೆ ರಿಂಗ್ ತೊಡಿಸಿ ಸಮಂತಾ ಫ್ಯಾನ್ಸ್‌ಗೆ ನಾಗಚೈತನ್ಯ ಶಾಕ್ ಕೊಟ್ಟಿದ್ದರು. ಈಗ ಮದುವೆ ಮುಹೂರ್ತ ಫಿಕ್ಸ್ ಮಾಡುವ ಮೂಲಕ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

    ಇನ್ನೂ ಹಲವು ವರ್ಷಗಳು ಪ್ರೀತಿಸಿ ಸಮಂತಾರನ್ನು (Actress Samantha) 2017ರಲ್ಲಿ ನಾಗಚೈತನ್ಯ ಮದುವೆಯಾಗಿದ್ದರು. ಹಿಂದೂ ಮತ್ತು ಕ್ರೈಸ್ತ ಪದ್ಧತಿಯಂತೆ ಮದುವೆ ಜರುಗಿತ್ತು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದರು.

  • ನಟ ನಾಗ ಚೈತನ್ಯನ ರಿಜೆಕ್ಟ್ ಮಾಡಿದ ಸಾರಾ ಅಲಿ ಖಾನ್

    ನಟ ನಾಗ ಚೈತನ್ಯನ ರಿಜೆಕ್ಟ್ ಮಾಡಿದ ಸಾರಾ ಅಲಿ ಖಾನ್

    ಬಾಲಿವುಡ್ (Bollywood) ನಟಿ ಸಾರಾ ಅಲಿಖಾನ್, ದಕ್ಷಿಣದ ಖ್ಯಾತ ನಟ ಚಿತ್ರದಲ್ಲಿ ತಾವು ನಟಿಸುವುದಿಲ್ಲವೆಂದು ಹೇಳಿದ್ದಾರೆ. ನಾಗ ಚೈತನ್ಯ (Naga Chaitanya) ನಟನೆಯ ಚಿತ್ರದಲ್ಲಿ ಸಾರಾ ನಟಿಸಬೇಕಾಗಿತ್ತು. ಹಾಗಾಗಿ ನಿರ್ದೇಶಕರು ಆಕೆಯನ್ನು ಸಂಪರ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನಾನು ಅವರ ಜೊತೆ ನಟಿಸಲಾರೆ ಎಂದಿದ್ದಾರೆ.

    ಹಾಗೆ ಅನ್ನುವುದಕ್ಕೆ ಕಾರಣವಿದೆ. ಹಾಗಂತ ಸಾರಾ ಅವರು ನಾಗ ಚೈತನ್ಯ ಅವರನ್ನು ದ್ವೇಷಿಸುತ್ತಿಲ್ಲ. ನಾಗ ಚೈತನ್ಯ ನನಗೆ ಅಣ್ಣನಂತೆ ಕಾಣಿಸುತ್ತಾರೆ. ಅವರೊಂದಿಗೆ ನಾನು ಹೇಗೆ ನಟಿಸಲಿ? ಇದರ ಹೊರತಾಗಿ ಯಾವುದೇ ಕಾರಣವಿಲ್ಲವೆಂದು ಅವರು ಧೈರ್ಯದಿಂದ ಹೇಳಿದ್ದಾರೆ ಎಂದು ವರದಿಯಾಗಿದೆ.

    ಸಾರಾ ಅಲಿ ಖಾನ್‌ಗೆ (Sara Ali Khan) ಚಿತ್ರರಂಗದಲ್ಲಿ ಹೇಳಿಕೊಳ್ಳುವಂತಹ ಬ್ರೇಕ್ ಸಿಗದೇ ಇದ್ರೂ ಸದಾ ಸುದ್ದಿಯಲ್ಲಿರುತ್ತಾರೆ. ಈ ಹಿಂದೆಯಷ್ಟೇ ದೇವಸ್ಥಾನದ ಬಳಿ ಬಡವರಿಗೆ ನಟಿ ಸಿಹಿ ಹಂಚಿದ್ದರು. ಸಾರಾ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದರು.

     

    ಮುಂಬೈನ ಜುಹುದಲ್ಲಿರುವ ಶನಿ ದೇವರ ದೇವಸ್ಥಾನಕ್ಕೆ ಸಾರಾ ಭೇಟಿ ನೀಡಿದ್ದರು. ಈ ನಟಿಯ ‘ಮರ್ಡರ್ ಮುಬಾರಕ್’ ಮತ್ತು ‘ಏ ವತನ್ ಮೇರೆ ವತನ್’ ಸಿನಿಮಾಗಳು ರಿಲೀಸ್ ಆದ ಸಮಯವದು. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ನಟಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಆವರಣದ ಹೊರಗೆ ಕುಳಿತಿದ್ದ ಬಡವರಿಗೆ ಸಿಹಿ ಪ್ಯಾಕೆಟ್‌ಗಳನ್ನು ಹಂಚಿದ್ದರು. ಈ ಸಂದರ್ಭದಲ್ಲಿ ತಮ್ಮನ್ನು ಸುತ್ತುವರಿದ ಪಾಪರಾಜಿಗಳಿಗೆ ವಿಡಿಯೊ ಚಿತ್ರೀಕರಿಸಿದಂತೆ ನಟಿ ಮನವಿ ಮಾಡಿಕೊಂಡಿದ್ದೂ ಗಮನ ಸೆಳೆದಿತ್ತು.

  • ಮೊದಲ ಬಾರಿಗೆ ‘ನೋ ಲಿಪ್ ಕಿಸ್’ ಪಾಲಿಸಿ ಮುರಿದ ನಟಿ ಸಾಯಿ ಪಲ್ಲವಿ

    ಮೊದಲ ಬಾರಿಗೆ ‘ನೋ ಲಿಪ್ ಕಿಸ್’ ಪಾಲಿಸಿ ಮುರಿದ ನಟಿ ಸಾಯಿ ಪಲ್ಲವಿ

    ಯಾವುದೇ ಕಾರಣಕ್ಕೂ ತಾವು ಕಿಸ್ ಮಾಡುವ ಅದರಲ್ಲೂ ಲಿಪ್ ಕಿಸ್ ಮಾಡುವ ಪಾತ್ರಗಳನ್ನು ಮಾಡಲಾರೆ ಎಂದು ದಕ್ಷಿಣದ ಹೆಸರಾಂತ ನಟಿ ಸಾಯಿ ಪಲ್ಲವಿ (Sai Pallavi) ಹೇಳಿಕೊಂಡಿದ್ದರು. ಈವರೆಗೂ ಅದನ್ನು ಪಾಲಿಸಿಕೊಂಡೇ ಬಂದಿದ್ದರು. ಮೈ ತೋರಿಸುವಂತಹ ದೃಶ್ಯವಾಗಲಿ ಅಥವಾ ಕಾಮ ಉತ್ತೇಜಿಸುವಂತಹ ಭಂಗಿಯಾಗಲಿ, ಲಿಪ್ ಕಿಸ್ (Lip Kiss) ಆಗಲಿ ಅವರು ಮಾಡಲಿಲ್ಲ.

    ಇದೀಗ ಮೊದಲ ಬಾರಿಗೆ ಅವರು ತಮ್ಮ ನೋ ಪಿಲ್ ಕಿಸ್ ಪಾಲಿಸಿಯನ್ನು ಮುರಿದಿರುವ ವಿಚಾರ ತೆಲುಗು ಸಿನಿಮಾ ರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. 2022ರಲ್ಲಿ ರಿಲೀಸ್ ಆಗಿದ್ದ ನಾಗಚೈತನ್ಯ (Naga Chaitanya) ಜೊತೆಗಿನ ಸಿನಿಮಾದಲ್ಲಿ ಸಾಯಿ ಪಲ್ಲವಿ ಲಿಪ್ ಕಿಸ್ ಮಾಡಿದ್ದರು ಎಂದು ಫೋಟೋವೊಂದನ್ನು ಹರಿಬಿಟ್ಟು ಟ್ರೋಲ್ ಮಾಡಲಾಗುತ್ತಿದೆ.

    ಕೆಲವರು ಈ ಫೋಟೋವನ್ನು ಅಸಲಿ ಎಂದರೆ, ಇನ್ನೂ ಕೆಲವರು ನಕಲಿ ಎಂದೂ ಹೇಳುತ್ತಿದ್ದಾರೆ. ನಿಜ ಏನಂದರೆ, ಲವ್ ಸ್ಟೋರಿ ಸಿನಿಮಾದ ಹಾಡೊಂದರಲ್ಲಿ ಸಾಯಿ ಪಲ್ಲವಿ ಮುತ್ತಿಡುವ ಸನ್ನಿವೇಶವೊಂದು ಇದೆ. ಆದರೆ, ಈ ದೃಶ್ಯದಲ್ಲಿ ಅವರು ಯಾವುದೇ ಕಾರಣಕ್ಕೂ ತುಟಿಗೆ ಮುತ್ತು ಕೊಟ್ಟಿಲ್ಲವೆಂದು ಹೇಳಲಾಗುತ್ತಿದೆ.

     

    ಕೆಲವು ದಿನಗಳ ಹಿಂದೆಯೂ ಈ ಕುರಿತಂತೆ ಸಾಯಿ ಪಲ್ಲವಿ ಮಾತನಾಡಿದ್ದರು. ನನಗೆ ಕಂಫರ್ಟ್ ಅನಿಸದ ದೃಶ್ಯಗಳಲ್ಲಿ ನಾನು ನಟಿಸಲ್ಲ ಎಂದು ಹೇಳಿದ್ದರು. ಅದರಲ್ಲೂ ಮುತ್ತಿನ ದೃಶ್ಯಗಳಿಂದ ದೂರ ಇರುವುದಾಗಿ ತಿಳಿಸಿದ್ದರು.

  • ನಾಗಚೈತನ್ಯನ ಮದುವೆ ಆಗೋದೇ ಜೀವನದ ಟಾರ್ಗೆಟ್- ನಟಿ ರೀತು ಚೌಧರಿ

    ನಾಗಚೈತನ್ಯನ ಮದುವೆ ಆಗೋದೇ ಜೀವನದ ಟಾರ್ಗೆಟ್- ನಟಿ ರೀತು ಚೌಧರಿ

    ಟಾಲಿವುಡ್ ನಟ ನಾಗಚೈತನ್ಯ (Nagachaitanya) ಅವರು ಸಮಂತಾ (Samantha) ಜೊತೆಗಿನ ಡಿವೋರ್ಸ್ ಬಳಿಕ ಹೆಚ್ಚೆಚ್ಚು ಸುದ್ದಿಯಲ್ಲಿದ್ದಾರೆ. ನಾಗಚೈತನ್ಯ ರಿಲೇಶನ್‌ಶಿಪ್ ಸ್ಟೇಟಸ್, 2ನೇ ಮದುವೆ ಬಗ್ಗೆ ಆಗಾಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹೀಗಿರುವಾಗ ನಾಗ ಚೈತನ್ಯ ಅವರನ್ನು ಮದುವೆ ಆಗೋದೇ ನನ್ನ ಟಾರ್ಗೆಟ್ ಎಂದು ಹೇಳಿಕೆ ನೀಡುವ ಮೂಲಕ ನಟಿ ರೀತು ಚೌಧರಿ (Rithu Chowdary) ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ.

    ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ, ನನಗೆ ನಾಗಚೈತನ್ಯ ಎಂದರೆ ತುಂಬಾ ಇಷ್ಟ. ಅವರನ್ನು ಮದುವೆಯಾಗೋದೇ ನನ್ನ ಜೀವನದ ಟಾರ್ಗೆಟ್ ಆಗಿದೆ. ಡಿವೋರ್ಸ್ ಆಗಿರುವ ವ್ಯಕ್ತಿಯನ್ನು ಮತ್ತೆ ಮದುವೆ ಆಗೋದಕ್ಕೆ ನನಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಸದ್ಯ ರೀತು ಚೌಧರಿ ನೀಡಿರುವ ಹೇಳಿಕೆ ಸಖತ್ ವೈರಲ್ ಆಗಿದೆ. ನಟಿಯ ಮಾತಿಗೆ ನಾಗಚೈತನ್ಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅಂದಹಾಗೆ, ರೀತು ಚೌಧರಿ ‘ಗೋರಿಂಟಕು’ ಸೀರಿಯಲ್‌ನಲ್ಲಿ ಗಾಯತ್ರಿ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

    2021ರಲ್ಲಿ ಸಮಂತಾಗೆ ನಾಗಚೈತನ್ಯ ಡಿವೋರ್ಸ್ ಕೊಟ್ಟ ಮೇಲೆ ಶೋಭಿತಾ (Shobita) ಜೊತೆ ನಟನ ಹೆಸರು ಸದ್ದು ಮಾಡಿತ್ತು. ಇದಾದ ಬಳಿಕ ಇತ್ತೀಚೆಗೆ ಖ್ಯಾತ ಉದ್ಯಮಿ ಪುತ್ರಿ ಜೊತೆ ಸಮಂತಾ ಮಾಜಿ ಪತಿಯ ಮದುವೆ ಎಂದು ಹೇಳಲಾಗಿತ್ತು. ಈ ಬಗ್ಗೆ ನಾಗಾರ್ಜುನ ಅಕ್ಕಿನೇನಿ ಕುಟುಂಬ ಯಾವುದೇ ಸ್ಪಷ್ಟನೆ ನೀಡಲಿಲ್ಲ. ಇದನ್ನೂ ಓದಿ:ಸಾವಿರ ಕೋಟಿ ಕ್ಲಬ್ ಸೇರಿದ ಶಾರುಖ್ ನಟನೆಯ ‘ಜವಾನ್’ ಸಿನಿಮಾ

    ಸಿನಿಮಾ ಕೆರಿಯರ್‌ಗೆ ಬಿಗ್ ಬ್ರೇಕ್‌ಗಾಗಿ ನಾಗಚೈತನ್ಯ ಕಾಯ್ತಿದ್ದಾರೆ. ಈಗ ಸಾಯಿ ಪಲ್ಲವಿ (Sai Pallavi) ಜೊತೆ ಮತ್ತೆ ರೊಮ್ಯಾನ್ಸ್ ಮಾಡಲು ನಟ ಸಜ್ಜಾಗಿದ್ದಾರೆ. ಅಲ್ಲು ಅರವಿಂದ್ ನಿರ್ಮಾಣದಲ್ಲಿ ಸಾಯಿಪಲ್ಲವಿ- ನಾಗಚೈತನ್ಯ ಹೊಸ ಸಿನಿಮಾ ಮೂಡಿ ಬರಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟಿ ಸಮಂತಾ

    ಹೈದರಾಬಾದ್‌ನಲ್ಲಿ ಐಷಾರಾಮಿ ಮನೆ ಖರೀದಿಸಿದ ನಟಿ ಸಮಂತಾ

    ಸೌತ್ ಬ್ಯೂಟಿ ಸಮಂತಾ (Samantha) ಇತ್ತೀಚಿಗೆ ನಟಿಸಿದ ‘ಶಾಕುಂತಲಂ’ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಫ್ಲಾಪ್ ಆಗಿದೆ. ಆದರೂ ಅವರಿಗೆ ಇರುವ ಬೇಡಿಕೆ ಕಮ್ಮಿಯಾಗಿಲ್ಲ. ಸೌತ್- ಬಾಲಿವುಡ್‌ನಲ್ಲಿ (Bollywood) ಸಿನಿಮಾ ಮೇಲೆ ಸಿನಿಮಾ ಮಾಡ್ತಿದ್ದಾರೆ. ಸಂಭಾವನೆ ಕೂಡ ಜಾಸ್ತಿ ಮಾಡಿದ್ದಾರೆ. ಹೀಗಿರುವಾಗ ಹೈದರಾಬಾದ್‌ನಲ್ಲಿ ದುಬಾರಿ ಮನೆಯೊಂದನ್ನ (Home) ಖರೀದಿಸಿದ್ದಾರೆ.

    ಸಮಂತಾ- ನಾಗ ಚೈತನ್ಯ (Nagachaitanya) ಡಿವೋರ್ಸ್ ಬಳಿಕ ಇಬ್ಬರೂ ಕೆರಿಯರ್ ಕಡೆ ಗಮನ ವಹಿಸುತ್ತಿದ್ದಾರೆ. ಇಬ್ಬರೂ ಮೂವ್ ಆನ್ ಆಗಿ ಹೆಚ್ಚೆಚ್ಚು ಸಿನಿಮಾಗಳನ್ನ ಮಾಡುತ್ತಾ ನೋವನ್ನ ಮರೆಯುತ್ತಿದ್ದಾರೆ. ಇನ್ನೂ ಡಿವೋರ್ಸ್ ಮೊದಲು ಸಮಂತಾ- ನಾಗ ಚೈತನ್ಯ ಒಟ್ಟಿಗೆ ವಾಸವಿದ್ದ ಅದೇ ಐಶಾರಾಮಿ ಮನೆಯನ್ನು ಡಿವೋರ್ಸ್ ಬಳಿಕ ಹಠಕ್ಕೆ ಬಿದ್ದು ನಟಿ ಸಮಂತಾ ಖರೀದಿ ಮಾಡಿ ಅದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಇತ್ತೀಚೆಗೆ ಹೈದರಾಬಾದ್‌ನ ಐಶಾರಾಮಿ ಏರಿಯಾ ಒಂದರಲ್ಲಿ ಡ್ಯೂಪ್ಲೆಕ್ಸ್ ಮನೆಯನ್ನು ಭಾರಿ ದುಬಾರಿ ಬೆಲೆಗೆ ಖರೀದಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಶಾಹಿದ್ ಕಪೂರ್ ಜೊತೆ ಪೂಜಾ ಹೆಗ್ಡೆ ರೊಮ್ಯಾನ್ಸ್

    7944 ಚದರ ಅಡಿ ವಿಸ್ತೀರ್ಣದ ನಾಲ್ಕು ಬೆಡ್‌ರೂಂಗಳುಳ್ಳ ಡ್ಯೂಪ್ಲೆಕ್ಸ್ ಮನೆಯನ್ನು ಸಮಂತಾ ಖರೀದಿ ಮಾಡಿದ್ದಾರೆ ಹೇಳಲಾಗುತ್ತಿದೆ. ಹೈದರಾಬಾದ್‌ನ ದುಬಾರಿ ಏರಿಯಾದ ಐಶಾರಾಮಿ ಅಪಾರ್ಟ್‌ಮೆಂಟ್ ಒಂದರ 14ನೇ ಅಂತಸ್ತಿನಲ್ಲಿ ಈ ಡ್ಯೂಪ್ಲೆಕ್ಸ್ ಮನೆ ಇದೆಯಂತೆ. ಈ ಡ್ಯೂಪ್ಲೆಕ್ಸ್ ಮನೆಗೆ ಸಮಂತಾ 7.8 ಕೋಟಿ ರುಪಾಯಿ ಹಣ ತೆತ್ತಿರುವುದಾಗಿ ಹಲವು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಸಮಂತಾ ಪ್ರಸ್ತುತ ಹೈದರಾಬಾದ್‌ನ ಪಲಾಟಿಯಾಲ್ ಹೌಸ್‌ನಲ್ಲಿ ನೆಲೆಸಿದ್ದಾರೆ.

    ಸಮಂತಾ ತೆಲುಗಿನ ಖುಷಿ, ಬಾಲಿವುಡ್‌ನ ಸಿಟಾಡೆಲ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಗ ಚೈತನ್ಯ- ಕೃತಿ ಶೆಟ್ಟಿ ನಟನೆಯ ‘ಕಸ್ಟಡಿ’ ಸಿನಿಮಾ ಮೇ 12ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.

  • ಸಮಂತಾ ಜೊತೆಗಿನ ಡಿವೋರ್ಸ್ ಬಗ್ಗೆ ಕೊನೆಗೂ ಮಾತನಾಡಿದ ನಾಗಚೈತನ್ಯ

    ಸಮಂತಾ ಜೊತೆಗಿನ ಡಿವೋರ್ಸ್ ಬಗ್ಗೆ ಕೊನೆಗೂ ಮಾತನಾಡಿದ ನಾಗಚೈತನ್ಯ

    ಸ್ಟಾರ್ ಜೋಡಿ ಸಮಂತಾ (Samantha) ಹಾಗೂ ನಾಗಚೈತನ್ಯ (Naga Chaitanya) ಡಿವೋರ್ಸ್ ಯಾಕೆ ಪಡೆದುಕೊಂಡರು ಎನ್ನುವ ಕುರಿತು ಅಭಿಮಾನಿಗಳಲ್ಲಿ ಸಾಕಷ್ಟು ಗೊಂದಲವಿತ್ತು. ಪ್ರೀತಿಸಿ ಮದುವೆ ಆದ ಈ ಜೋಡಿ ಇಂಥದ್ದೊಂದು ತೀರ್ಮಾನವನ್ನು ತಗೆದುಕೊಳ್ಳಲು ಕಾರಣ ಏನಿರಬಹುದು ಎನ್ನುವ ಕುತೂಹಲವೂ ಅವರದ್ದಾಗಿದೆ. ಹಲವರು ನಾನಾ ಕಾರಣಗಳನ್ನು ಕೊಟ್ಟರೂ, ಅವರಿಬ್ಬರೂ ಮಾತ್ರ ಆ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. ಮೊದಲ ಬಾರಿಗೆ ನಾಗ ಚೈತನ್ಯ ಡಿವೋರ್ಸ್ (Divorce) ಕಾರಣವನ್ನು ಹೇಳಿಕೊಂಡಿದ್ದಾರೆ.

    ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ನಾಗ ಚೈತನ್ಯ, ‘ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಗಾಸಿಪ್ ಕಾಲಂಗಳಲ್ಲಿ ಬಂದ ಸುದ್ದಿಗಳೇ ನಾವಿಬ್ಬರೂ ದೂರ ಆಗಿದ್ದಕ್ಕೆ ಕಾರಣ. ಊಹಾಪೋಹ ಸುದ್ದಿಗಳು ಬಂದಾಗ ನಮ್ಮಿಬ್ಬರ ಮಧ್ಯ ಜಗಳವಾಗುತ್ತಿತ್ತು. ಮೊದಲ ಮೊದಲು ಅದಕ್ಕೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ. ಆದರೆ, ವಿಪರೀತ ಎನ್ನುವಂತೆ ಸುದ್ದಿಗಳು ಹರಡಿದವು. ಅದು ಡಿವೋರ್ಸ್ ಗೆ ಕಾರಣವಾಯಿತು’ ಎಂದಿದ್ದಾರೆ.

    ಇಬ್ಬರೂ ಒಂದೇ ವೃತ್ತಿಯಲ್ಲಿದ್ದರೂ, ಗಾಸಿಪ್ ಬರುವುದು ಸಹಜ ಎಂದು ಗೊತ್ತಿದ್ದರೂ ಪದೇ ಪದೇ ಜಗಳವಾಗುತ್ತಿತ್ತು. ಇದರಿಂದಾಗಿ ಇಬ್ಬರೂ ನೆಮ್ಮದಿಯಿಂದ ಇರುವುದಕ್ಕೆ ಆಗಲಿಲ್ಲ. ಹಾಗಾಗಿ ದೂರ ಆಗುವಂತಹ ನಿರ್ಧಾರಕ್ಕೆ ಬರಬೇಕಾಯಿತು. ಸಮಂತಾ ಎಲ್ಲಿ ಇದ್ದರೂ ಚೆನ್ನಾಗಿರಲಿ. ಖುಷಿಯಾಗಿರಲಿ’ ಎಂದಿದ್ದಾರೆ ನಾಗ ಚೈತನ್ಯ. ಇದನ್ನೂ ಓದಿ:ಆರ್.ಎಲ್ ಜಾಲಪ್ಪ ವಿರುದ್ಧ ಸ್ಪರ್ಧಿಸಿ ಸೋತಿದ್ದರು ಹಿರಿಯ ನಟ ಶ್ರೀನಿವಾಸ್ ಮೂರ್ತಿ

    ಕಳೆದ ಎರಡು ವರ್ಷಗಳಿಂದ ಇಬ್ಬರೂ ದೂರವಿದ್ದರೂ, ಕಾನೂನು ಪ್ರಕಾರ ಡಿವೋರ್ಸ್ ಆಗಿ ಒಂದು ವರ್ಷ ಕಳೆದಿವೆ. ಆದರೂ, ಇಬ್ಬರ ಮಧ್ಯದ ಗಾಸಿಪ್ ಇನ್ನೂ ನಿಂತಿಲ್ಲ ಎಂದು ಬೇಸರವನ್ನೂ ವ್ಯಕ್ತ ಪಡಿಸಿದ್ದಾರೆ ನಾಗ ಚೈತನ್ಯ. ಈಗಲೂ ಬೇರೆ ಬೇರೆ ನಟಿಯರ ಜೊತೆ ಸಂಬಂಧ ಬೆಸೆದು ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

  • ನಟಿ ಶೋಭಿತಾ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಾಗ ಚೈತನ್ಯ

    ನಟಿ ಶೋಭಿತಾ ಜೊತೆಗಿನ ಡೇಟಿಂಗ್ ಬಗ್ಗೆ ಬಾಯ್ಬಿಟ್ಟ ನಾಗ ಚೈತನ್ಯ

    ಪೊನ್ನಿಯಿನ್ ಸೆಲ್ವನ್ 2 ಸಿನಿಮಾದ ಮೂಲಕ ಮತ್ತೆ ಸದ್ದು ಮಾಡುತ್ತಿರುವ ನಟಿ ಶೋಭಿತಾ ಧೂಲಿಪಾಲ (Shobhita Dhulipala) ಈ ಹಿಂದೆ ಡೇಟಿಂಗ್ (Dating) ವಿಚಾರವಾಗಿ ಸಾಕಷ್ಟು ಸುದ್ದಿಯಾಗಿದ್ದರು. ಅದರಲ್ಲೂ ನಟ ನಾಗ ಚೈತನ್ಯ (Naga Chaitanya) ಜೊತೆ ಲಂಡನ್ ಹೋಟೆಲ್ ವೊಂದರಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದರು. ನಾಗ ಚೈತನ್ಯ ಮತ್ತು ಶೋಭಿತಾ ಡೇಟಿಂಗ್ ಮಾಡುತ್ತಿರುವ ವಿಚಾರ ಹಲವು ಅನುಮಾನಗಳನ್ನೂ ಮೂಡಿಸಿತ್ತು.

    ಸಮಂತಾ (Samantha) ಜೊತೆಗಿನ ಬಾಂಧವ್ಯ ಕಡಿದುಕೊಂಡ ನಂತರ ನಾಗ ಚೈತನ್ಯ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಈ ವೇಳೆಯಲ್ಲಿ ಗೆಳೆತನಕ್ಕೆ ಸಿಕ್ಕವರೇ ಶೋಭಿತಾ ಎಂದು ಹೇಳಲಾಗುತ್ತಿದೆ. ನಾಗ ಚೈತನ್ಯಗೆ ಸ್ನೇಹಿತೆಯಾಗಿ ಅವರ ಜೀವನವನ್ನು ಮತ್ತಷ್ಟು ಚಂದಗೊಳಸಿದರು ಎನ್ನುವ ಮಾತಿದೆ. ಹಾಗಾಗಿ ಇಬ್ಬರೂ ಒಟ್ಟಿಗೆ ಹಲವು ದೇಶಗಳನ್ನು ಸುತ್ತಿದ್ದಾರೆ ಎನ್ನವುದಕ್ಕೆ ಲಂಡನ್ ನಲ್ಲಿ ಸಿಕ್ಕ ಫೋಟೋ ಸಾಕ್ಷಿ ಹೇಳಿತ್ತು.

    ಡೇಟಿಂಗ್ ವಿಚಾರ ಸಾಕಷ್ಟು ಸದ್ದು ಮಾಡಿದ್ದರೂ, ಈವರೆಗೂ ಒಂದೇ ಒಂದು ಪ್ರತಿಕ್ರಿಯೆ ಕೂಡ ನಾಗ ಚೈತನ್ಯ ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಶೋಭಿತಾ ಜೊತೆಗಿನ ಡೇಟಿಂಗ್ ವಿಚಾರವನ್ನು ಮಾತನಾಡಿದ್ದು, ಜೊತೆಗೆ ಡಿವೋರ್ಸ್ ಬಳಿಕದ ಜೀವನವನ್ನೂ ಅಭಿಮಾನಿಗಳ ಮುಂದೆ ತೆರೆದಿಟ್ಟಿದ್ದಾರೆ. ಸಮಂತಾ ಬಗ್ಗೆಯೂ ಮಾತನಾಡಿದ್ದಾರೆ. ಇದನ್ನೂ ಓದಿ:ವಿಧಾನಸಭೆ ಚುನಾವಣೆ 2023: ಸುದೀಪ್ ರೋಡ್ ಶೋ ಮತ್ತೆ ರದ್ದು

    ‘ಡಿವೋರ್ಸ್ (Divorce) ಬಳಿಕ ತಾವು ಯಾವತ್ತೂ ಖಿನ್ನತೆಗೆ ಒಳಗಾಗಿಲ್ಲ, ಎಲ್ಲವೂ ಪಾಠ. ಅದರ ಬಗ್ಗೆ ನನಗೆ ಯಾವುದೇ ಪಶ್ಚಾತಾಪವಿಲ್ಲ ಎಂದಿದ್ದಾರೆ ನಾಗ ಚೈತನ್ಯ. ಅಲ್ಲದೇ ಶೋಭಿತಾ ಡೇಟಿಂಗ್ ವಿಚಾರದ ಬಗ್ಗೆ ತಮಗೇನೂ ಗೊತ್ತಿಲ್ಲ.  ಆ ಕುರಿತು ಮಾತನಾಡಲಾರೆ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.

  • ನಟಿಯರ ಮೈಮುಟ್ಟಿದರೆ ನಾಗ ಚೈತನ್ಯ ‘SORRY…’  ಕೇಳ್ತಾರೆ : ನಟಿ ದಕ್ಷಾ ನಗರ್ಕರ್

    ನಟಿಯರ ಮೈಮುಟ್ಟಿದರೆ ನಾಗ ಚೈತನ್ಯ ‘SORRY…’ ಕೇಳ್ತಾರೆ : ನಟಿ ದಕ್ಷಾ ನಗರ್ಕರ್

    ತೆಲುಗು ನಟಿ ಸಮಂತಾ (Samantha) ಡಿವೋರ್ಸ್ ಹಿನ್ನೆಲೆಯಲ್ಲಿ ನಟ ನಾಗ ಚೈತನ್ಯ (Naga Chaitanya) ಕುರಿತು ಈವರೆಗೂ ನೆಗೆಟಿವ್ ಕಾಮೆಂಟ್ ಗಳೇ ಕೇಳಿ ಬಂದಿದ್ದವು. ಈ ನೋವಿನಿಂದ ಸಮಂತಾ ಆಚೆ ಬಂದರೂ, ನಾಗ ಚೈತನ್ಯ ಇನ್ನೂ ಅದರಿಂದ ಆಚೆ ಬಂದಿಲ್ಲ ಎಂದೇ ಹೇಳಲಾಗಿತ್ತು. ಆದರೂ, ನಾಗ ಚೈತನ್ಯ ಬಗ್ಗೆ ದಿನಕ್ಕೊಂದು ನೆಗೆಟಿವ್ ಸುದ್ದಿ ಆಚೆ ಬರುತ್ತಲೇ ಇವೆ. ಇದೇ ಮೊದಲ ಬಾರಿಗೆ ನಟಿಯೊಬ್ಬರು ನಾಗ ಚೈತನ್ಯ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ್ದಾರೆ. ಅವರ ಮಾತು ಸದ್ಯ ವೈರಲ್ ಆಗಿವೆ.

    ಶೂಟಿಂಗ್ ಸ್ಥಳದಲ್ಲಿ ನಾಗ ಚೈತನ್ಯ ಹೇಗಿರುತ್ತಾರೆ ಮತ್ತು ಮಹಿಳೆಯರನ್ನು ಅವರು ಹೇಗೆ ಗೌರವಿಸುತ್ತಾರೆ ಎನ್ನುವ ಕುರಿತು ನಟಿ ದಕ್ಷಾ ನಗರ್ಕರ್ (Daksha Nagarkar) ಮಾತನಾಡಿದ್ದಾರೆ. ಅವರಂತಹ ಒಳ್ಳೆಯ ವ್ಯಕ್ತಿಯನ್ನು ನಾನು ನೋಡಿಲ್ಲ ಎಂದು ಹಾಡಿ ಹೊಗಳಿದ್ದಾರೆ. ಅಲ್ಲದೇ, ಚಿತ್ರೀಕರಣ ನಡೆಯುವ ಸ್ಥಳದಲ್ಲಿನ ಅವರ ನಡೆತೆಯನ್ನೂ ದಕ್ಷಾ ಕೊಂಡಿದ್ದಾರೆ. ಇದನ್ನೂ ಓದಿ: ‘ವಿಷ್ಣುಪ್ರಿಯಾ’ಗಾಗಿ ಕೇರಳದಿಂದ ಹಾರಿಬಂದ ಕಣ್ಸನ್ನೆ ಬೆಡಗಿ ಪ್ರಿಯಾ

    ನಾಗ ಚೈತನ್ಯ ಜೊತೆ ದಕ್ಷಾ ‘ಬಂಗರ್ ರಾಜು’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಹಾಡೊಂದರಲ್ಲಿ ದಕ್ಷಾ ಮತ್ತು ನಾಗ ಚೈತನ್ಯ ಹೆಜ್ಜೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಕಿಸ್ ಕೊಡುವ ಹಾಗೂ ತಬ್ಬಿಕೊಳ್ಳುವ ದೃಶ್ಯಗಳು ಬಂದಾಗ  ಚಿತ್ರೀಕರಣ ಮುಗಿಸಿ ದಕ್ಷಾಗೆ ಕ್ಷಮೆ ಕೇಳಿದ್ದರಂತೆ ನಾಗ್. ಅಷ್ಟೊಂದು ಗೌರವವನ್ನು ಅವರು ನಟಿಯರಿಗೆ ಕೊಡುತ್ತಾರೆ ಎಂದಿದ್ದಾರೆ ದಕ್ಷಾ.

    ‘ನಾಗ ಚೈತನ್ಯ ಯಾವಾಗಲೂ ಕೂಲ್ ಆಗಿ ಇರುತ್ತಾರೆ. ಅನೇಕ ಸಲ ನನ್ನ ಯೋಗಕ್ಷೇಮ ಕೇಳಿದ್ದಾರೆ. ಅವರ ಜೊತೆಗೆ ಕೆಲಸ ಮಾಡಿದ್ದನ್ನೂ ನಾನು ಯಾವತ್ತೂ ಮರೆಯುವುದಿಲ್ಲ ಎಂದಿರುವ ನಟಿ’, ಅವರೊಂದಿಗೆ ಮತ್ತೆ ಕೆಲಸ ಮಾಡುವ ಇಂಗಿತವನ್ನೂ ವ್ಯಕ್ತ ಪಡಿಸಿದ್ದಾರೆ.

  • ಮಾಜಿ ಪತಿ ನಾಗಚೈತನ್ಯ- ಶೋಭಿತಾ ಡೇಟಿಂಗ್ ಬಗ್ಗೆ ಮೌನ ಮುರಿದ ಸಮಂತಾ

    ಮಾಜಿ ಪತಿ ನಾಗಚೈತನ್ಯ- ಶೋಭಿತಾ ಡೇಟಿಂಗ್ ಬಗ್ಗೆ ಮೌನ ಮುರಿದ ಸಮಂತಾ

    ಸೌತ್ ಚಿತ್ರ ಜಗತ್ತಿನ ಪ್ರತಿಭಾನ್ವಿತ ನಟಿ ಸಮಂತಾ (Samantha), ಸದ್ಯ ಶಾಕುಂತಲೆಯಾಗಿ ಬರಲು ರೆಡಿಯಾಗಿದ್ದಾರೆ. `ಶಾಕುಂತಲಂ’ ಚಿತ್ರ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಮಾಜಿ ಪತಿ ನಾಗ ಚೈತನ್ಯ- ಶೋಭಿತಾ (Shobitha) ಅವರ ಡೇಟಿಂಗ್ ಬಗ್ಗೆ ಸ್ಯಾಮ್ ಮಾತನಾಡಿದ್ದಾರೆ.

    `ಯಶೋದ’ (Yashoda) ಸೂಪರ್ ಸಕ್ಸಸ್ ನಂತರ Shakuntalam ಚಿತ್ರ ರಿಲೀಸ್‌ಗೆ ರೆಡಿಯಿದೆ. ಏ.14ಕ್ಕೆ ಸಿನಿಮಾ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ದೇವ್ ಮೋಹನ್ ಜೊತೆ ಸಮಂತಾ ಶಾಕುಂತಲೆಯಾಗಿ ಮಿಂಚಿದ್ದಾರೆ. ಅಲ್ಲು ಅರ್ಜುನ್ ಪುತ್ರಿ ಅರ್ಹಾ ಕೂಡ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಬ್ಲೂಫಿಲ್ಮ್ ಮಾಡ್ತೀಯಾ ಅಂತ ಕೇಳಿದ ‘ಆ’ ನಟ: ಪೆಂಟಗನ್ ನಟಿಯ ಕಣ್ಣೀರು

    ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಸಮಂತಾ, ಯಾರು ಯಾರ ಜೊತೆ ರಿಲೇಶನ್‌ಶಿಪ್ ಇಟ್ಟುಕೊಂಡಿದ್ದಾರೆ ಎಂಬ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ಪ್ರೀತಿಯ ಮೌಲ್ಯವನ್ನು ತಿಳಿಯದವರು ಎಷ್ಟು ಜನರ ಜೊತೆ ಡೇಟ್ ಮಾಡಿದರೂ ಕಣ್ಣೀರು ಹಾಕುತ್ತಾರೆ. ಕನಿಷ್ಠ ಆ ಹುಡುಗಿಯಾದರೂ ಸಂತೋಷವಾಗಿರಬೇಕು. ಅವರು ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಂಡು ಹುಡುಗಿಯನ್ನು ನೋಯಿಸದಂತೆ ನೋಡಿಕೊಂಡರೆ ಎಲ್ಲರಿಗೂ ಒಳ್ಳೆಯದು ಎಂದು ಸಮಂತಾ ಹೇಳಿದ್ದಾರೆ.

    ಯಾರ್ ಜೊತೆಯಾದ್ರು ಸಂಬಂಧ ಇಟ್ಕೊಳ್ಳಿ ನನಗೆ ಬೇಕಿಲ್ಲ. ಆ ಹುಡುಗಿಯಾದ್ರು ಖುಷಿಯಾಗಿರಬೇಕು ಎಂದು ಸಮಂತಾ ನೀಡಿರುವ ಹೇಳಿಕೆ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

  • ಸಮಂತಾ ಬಾಳಲ್ಲಿ ಆಶಾಕಿರಣ: ನಾಗ ಚೈತನ್ಯ ಮನಸ್ಸು ಮಾಡಲಿ ಎಂದು ಫ್ಯಾನ್ಸ್

    ಸಮಂತಾ ಬಾಳಲ್ಲಿ ಆಶಾಕಿರಣ: ನಾಗ ಚೈತನ್ಯ ಮನಸ್ಸು ಮಾಡಲಿ ಎಂದು ಫ್ಯಾನ್ಸ್

    ತೆಲುಗಿನ ಸೂಪರ್ ಜೋಡಿ ಸಮಂತಾ (Samantha) ಮತ್ತು ನಾಗ ಚೈತನ್ಯ ಡಿವೋರ್ಸ್ (Divorce) ನಂತರ ಅವರ ಜೀವನದಲ್ಲಿ ಹಲವಾರು ಘಟನೆಗಳು ನಡೆದಿವೆ. ಏನೇ ಘಟನೆಗಳು ಜರುಗಿದರೂ, ಇಬ್ಬರೂ ಮಾತ್ರ ವಿಚ್ಚೇದನೆಯಿಂದ ದೂರ ಸರಿಯಲು ಮನಸ್ಸು ಮಾಡಿರಲಿಲ್ಲ. ಆದರೆ, ಇದೀಗ ಈ ಜೋಡಿ ಮತ್ತೆ ಒಂದಾಗಲು ಮುಂದಾಗಿದೆ ಎನ್ನುವ ವಿಷಯ ತೆಲುಗು ಸಿನಿಮಾ ರಂಗದಲ್ಲಿ ಹರಿದಾಡುತ್ತಿದೆ. ಈ ಜೋಡಿಯನ್ನು ಒಂದು ಮಾಡಲು ಸ್ವತಃ ನಾಗ ಚೈತನ್ಯ ತಂದೆ ನಾಗಾರ್ಜುನ ಅಖಾಡಕ್ಕೆ ಇಳಿದಿದ್ದಾರಂತೆ.

    ಸಮಂತಾರ ಆರೋಗ್ಯದಲ್ಲಿ ಏರುಪೇರಾದ ಸಂದರ್ಭದಲ್ಲಿ ನಾಗಚೈತನ್ಯ ಕಾಲ್ ಮಾಡಿ ಸಮಂತಾರ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ಸಮಂತಾ ಕೂಡ ಅಷ್ಟೇ ಆಸಕ್ತಿಯಿಂದ ಮಾತನಾಡಿದ್ದಾರಂತೆ. ಇಬ್ಬರಲ್ಲೂ ಇದೀಗ ಪ್ರೀತಿ ಮತ್ತೆ ಚಿಗುರುತ್ತಿರುವುದರಿಂದ ಈ ಜೋಡಿ ಒಂದಾಗಿರಲಿ ಎನ್ನುವುದು ಹಲವರ ಆಸೆ. ಆ ಆಸೆಗೆ ಪೂರಕ ಎನ್ನುವಂತೆ ನಾಗಾರ್ಜುನ (Nagarjuna) ಕೆಲಸ ಮಾಡುತ್ತಿದ್ದಾರಂತೆ. ಈ ಕೆಲಸಕ್ಕೆ ಸಕಾರಾತ್ಮಕ ಸ್ಪಂದನೆ ಸಿಗಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಅಥರ್ವ್-ಆಧವ್ ಎಂದು ಅವಳಿ ಮಕ್ಕಳಿಗೆ ಮುದ್ದಾದ ಹೆಸರಿಟ್ಟ ನಟಿ ಅಮೂಲ್ಯ

    ಸಮಂತಾ ಮತ್ತು ನಾಗಚೈತನ್ಯ (Naga Chaitanya) ಈಗಾಗಲೇ ದೂರವಾಗಿ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದಾರೆ. ಇಬ್ಬರಿಗೂ ತಮ್ಮ ತಮ್ಮ ತಪ್ಪಿನ ಅರಿವಾಗಿದ್ದು, ಅವುಗಳನ್ನು ತಿದ್ದುಕೊಳ್ಳುವತ್ತ ಮನಸ್ಸು ಮಾಡಿದ್ದಾರೆ. ಈ ಕಾರಣದಿಂದಾಗಿಯೇ ನಾಗಾರ್ಜುನ್ ಇಂಥದ್ದೊಂದು ಕೆಲಸಕ್ಕೆ ಕೈ ಹಾಕಿದ್ದಾರಂತೆ. ಮತ್ತೆ ಈ ಜೋಡಿ ಒಂದಾಗಿ ಸಾಕಷ್ಟು ಉತ್ತಮ ಸಿನಿಮಾಗಳನ್ನು ನೀಡಲಿ ಎನ್ನುವುದು ಇಬ್ಬರೂ ಅಭಿಮಾನಿಗಳ ಆಶಯ.

    Live Tv
    [brid partner=56869869 player=32851 video=960834 autoplay=true]