Tag: ನಾಗರ್ಜುನ್

  • ಭಾರವಾದ ಹೃದಯದಿಂದ ಸೊಸೆ ಕುರಿತಾಗಿ ಬರೆದ ನಾಗರ್ಜುನ್

    ಭಾರವಾದ ಹೃದಯದಿಂದ ಸೊಸೆ ಕುರಿತಾಗಿ ಬರೆದ ನಾಗರ್ಜುನ್

    ಹೈದರಾಬಾದ್: ಸೊಸೆ ಸಮಂತಾ ಅಕ್ಕಿನೇನಿ ಮತ್ತು ಮಗ ನಾಗಚೈತನ್ಯ ವಿಚ್ಛೇದನದ ವಿಚಾರವಾಗಿ ನಾಗಾರ್ಜುನ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

    ಭಾರವಾದ ಹೃದಯದಿಂದ, ನಾನು ಇದನ್ನು ಹೇಳುತ್ತೇನೆ, ಸ್ಯಾಮ್ ಮತ್ತು ಚಾಯ್ ನಡುವೆ ನಡೆದದ್ದು ತುಂಬಾ ದುರದೃಷ್ಟಕರವಾಗಿದೆ. ದಂಪತಿ ಮಧ್ಯೆ ಏನಾಗುತ್ತಿದೆ ಎನ್ನುವುದು ತುಂಬಾ ವೈಯಕ್ತಿಕವಾಗಿದೆ. ಇಬ್ಬರು ನನಗೆ ಪ್ರಿಯರು. ನನ್ನ ಕುಟುಂಬವು ಸ್ಯಾಮ್ ಜೊತೆ ಕಳೆದ ಕ್ಷಣಗಳನ್ನು ಗೌರವಿಸುತ್ತದೆ. ಅವಳು ಯಾವಾಗಲೂ ನಮಗೆ ಪ್ರಿಯಳಾಗಿರುತ್ತಾಳೆ. ದೇವರು ಅವರಿಬ್ಬರಿಗೂ ಶಕ್ತಿಯನ್ನು ನೀಡಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಗ ಮತ್ತು ಸೊಸೆ ದೂರವಾಗುತ್ತಿರುವ ಕುರಿತಾಗಿ ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:  ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

    2017ರಲ್ಲಿ ಮದುವೆಯಾದ ನಟಿ ಸಮಂತಾ ಮತ್ತು ಅಕ್ಕಿನೇನಿ ನಾಗ ಚೈತನ್ಯ ಅವರ ಸಂಸಾರದಲ್ಲಿ ಈಗ ಏನೋ ಕಿರಿಕ್ ಎದುರಾಗಿದೆ ಎಂಬ ಅನುಮಾನ ಕೆಲವು ದಿನಗಳ ಹಿಂದೆ ಮೂಡಿತ್ತು. ಆ ಅನುಮಾನಕ್ಕೆ ಪೂರಕ ಆಗುವಂತಹ ಅನೇಕ ಘಟನೆಗಳು ಮತ್ತೆ ಮತ್ತೆ ನಡೆಯುತ್ತಿದ್ದವು. ಇಂದು ಇಬ್ಬರು ತಾವು ದೂರವಾಗುತ್ತಿರುವುದು ನಿಜ ಎಂದು ಸೋಶಿಯಲ್ ಮೀಡಿಯಾ ಮೂಲಕವಾಗಿ ಹೇಳಿಕೊಂಡಿದ್ದಾರೆ. ಸೊಸೆ ಕುಟುಂಬದಿಂದ ದೂರವಾಗುತ್ತಿರುವ ಕುರಿತಾಗಿ ನಾಗಾರ್ಜುನ್ ಅವರು ಭಾರದ ಮನಸ್ಸಿನಿಂದ ಕೆಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:  ರಿಲೇಶನ್‍ಶಿಪ್‍ನಲ್ಲಿದ್ದಾಗ ಕಲಿಬೇಕು, ಮುಂದೆ ಹೋಗುತ್ತಿರಬೇಕು: ಸೋನಾಕ್ಷಿ ಸಿನ್ಹಾ

     

    View this post on Instagram

     

    A post shared by S (@samantharuthprabhuoffl)

    ಕೆಲವು ದಿನಗಳ ಹಿಂದೆ ಸಮಂತಾ ಅವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹೆಸರಿನ ಜೊತೆ ಇದ್ದ ಅಕ್ಕಿನೇನಿ ಎಂಬ ಸರ್‍ನೇಮ್ ಅನ್ನು ತೆಗೆದು ಹಾಕಿದ್ದರು. ಇದಾದ ಬಳಿಕ ಇಬ್ಬರ ದಾಂಪತ್ಯದ ಬಗ್ಗೆ ಅಭಿಮಾನಿಗಳಲ್ಲಿ ಸಂಶಯ ಹುಟ್ಟಿಕೊಂಡಿತ್ತು. ಆ ಬಗ್ಗೆ ಕುಟುಂಬದವರು ಏನೂ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಮಂತಾ, ನಾಗ ಚೈತನ್ಯ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇಂದು ಕೊನೆ ಹಾಡಿದ್ದಾರೆ. ತಾವು ವಿಚ್ಛೇದನ ಪಡೆದುಕೊಳ್ಳುತ್ತಿರುವ ಕುರಿತಾಗಿ ತಿಳಿಸಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೈತ್ರಾ ಕೊಟ್ಟೂರು!

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೈತ್ರಾ ಕೊಟ್ಟೂರು!

    ಬೆಂಗಳೂರು: ಬಿಗ್‍ಬಾಸ್ ಸೀಸನ್-7ರ ಸ್ಪರ್ಧಿಯಾಗಿ ದೊಡ್ಮನೆಗೆ ಆಗಮಿಸಿ ಭಾರೀ ಸುದ್ದಿ ಮಾಡಿದ್ದ ಚೈತ್ರಾ ಕೊಟ್ಟೂರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಚೈತ್ರಾ ಅವರ ಮದುವೆಯ ಫೋಟೋಗಳು ಸಾಮಾಜಿಕ ಜಾಲಾತಾಣದಲ್ಲಿ ಹರಿದಾಡುತ್ತಿದೆ.

    ಇಂದು ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯಪುರದ ಗಣಪತಿ ದೇವಾಲಯದಲ್ಲಿ ಸರಳವಾಗಿ ಚೈತ್ರಾಕೊಟ್ಟೂರು, ನಾಗರ್ಜುನ್ ಜೊತೆ ಸಪ್ತಪದಿ ತುಳಿದಿದ್ದಾರೆ. ಹಲವು ವರ್ಷಗಳಿಂದ ಚೈತ್ರಾ ಹಾಗೂ ನಾಗರ್ಜುನ್ ಇಬ್ಬರು ಪ್ರೀತಿಸುತ್ತಿದ್ದು, ಇದೀಗ ಸದ್ದಿಲ್ಲದೇ ಸೈಲೆಂಟ್ ಆಗಿ ವಿವಾಹವಾಗುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.

    ಇತ್ತೀಚೆಗಷ್ಟೇ ಚೈತ್ರಾಕೊಟ್ಟೂರು ಹುಡುಗರು ತುಂಬಾ ಒಳ್ಳೆಯವರು ಎಂಬ ಹಾಡೊಂದನ್ನು ಬಿಡುಗಡೆಗೊಳಿಸಿದ್ದರು. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಲ್ಲದೆ ಖಾಸಗಿ ವಾಹಿನಿಯೊಂದರ ಸಿರಿಯಲ್‍ನಲ್ಲಿ ಚೈತ್ರಾಕೊಟ್ಟೂರು ಅಭಿನಯಿಸಿದ್ದರು.

    ಈ ಹಿಂದೆ ಬಿಗ್‍ಬಾಸ್ ಸೀಸನ್-7ರಲ್ಲಿ ಅವಧಿಯಲ್ಲಿ ಒಂದು ಬಾರೀ ಎಲಿಮಿನೆಟ್ ಆಗಿ ಮತ್ತೊಂದು ಬಾರಿ ವೈಲ್ಡ್ ಕಾರ್ಡ್ ಮೂಲಕ ಬಿಗ್‍ಮನೆಗೆ ಎಂಟ್ರಿ ನೀಡಿದ್ದರು.

  • ನನ್ನ ಜೀವನದಲ್ಲಿ ಮೇ 22, 23 ಈ ಎರಡು ದಿನವನ್ನ ಮರೆಯಲು ಸಾಧ್ಯವಿಲ್ಲ: ನಾಗಾರ್ಜುನ

    ನನ್ನ ಜೀವನದಲ್ಲಿ ಮೇ 22, 23 ಈ ಎರಡು ದಿನವನ್ನ ಮರೆಯಲು ಸಾಧ್ಯವಿಲ್ಲ: ನಾಗಾರ್ಜುನ

    ಹೈದರಾಬಾದ್: ಟಾಲಿವುಡ್ ಚಿತ್ರರಂಗದ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ತಮ್ಮ ಜೀವನದ ಎರಡು ವಿಶೇಷ ದಿನಗಳು ಯಾವುದೆಂದು ತಿಳಿಸಿದ್ದಾರೆ.

    ನಟ ನಾಗಾರ್ಜುನ ತಮ್ಮ ಜೀವನದ ಎರಡು ವಿಶೇಷ ದಿನಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. “ನನ್ನ ಜೀವನದಲ್ಲಿ ಮೇ 22 ಮತ್ತು ಮೇ 23 ಈ ಎರಡು ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಯಾಕೆಂದರೆ ‘ಅನ್ನಮಯ್ಯ’ ಮತ್ತು ‘ಮನಂ’ ಎರಡೂ ಮರೆಯಲಾಗದ ಸಿನಿಮಾಗಳು ತೆರೆಗೆ ಬಂದ ದಿನ” ಎಂದು ಟ್ವೀಟ್ ಮಾಡಿದ್ದಾರೆ.

    ಜೊತೆಗೆ ಎರಡೂ ಸಿನಿಮಾಗಳ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ. ಮೇ 22 ನಾಗಾರ್ಜುನ ಅಭಿನಯದ ‘ಅನ್ನಮಯ್ಯ’ ಸಿನಿಮಾ ರಿಲೀಸ್ ಆದ ದಿನ. ಇನ್ನೂ ಮೇ 23 ‘ಮನಂ’ ಸಿನಿಮಾ ತೆರೆಗೆ ಬಂದ ದಿನವಾಗಿದೆ. ಹೀಗಾಗಿ ಈ ಎರಡು ದಿನಗಳು ನಾಗಾರ್ಜುನ ಅವರಿಗೆ ಯಾವಾಗಲು ವಿಶೇಷವಾಗಿರುತ್ತವೆ.

    1997ರಲ್ಲಿ ‘ಅನ್ನಮಯ್ಯ’ ಸಿನಿಮಾ ತೆರೆಗೆ ಬಂದಿದ್ದು, ಸಕ್ಸಸ್ ಕಂಡಿತ್ತು. ‘ಅನ್ನಮಯ್ಯ’ ಭಕ್ತಿ ಪ್ರಧಾನ ಸಿನಿಮಾವಾಗಿದ್ದು, ನಾಗಾರ್ಜುನ ಸಿನಿಮಾದಲ್ಲಿ ಅನ್ನಮಯ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಇನ್ನೂ ‘ಮನಂ ಸಿನಿಮಾ 2014ರಲ್ಲಿ ತೆರೆಗೆ ಬಂದಿದೆ. ಈ ಸಿನಿಮಾ ಕೂಡ ಸೂಪರ್ ಹಿಟ್ ಆಗಿದೆ. ವಿಶೇಷ ಅಂದರೆ ಈ ಸಿನಿಮದಲ್ಲಿ ನಾಗಾರ್ಜುನ ಕುಟುಂಬದ ಎಲ್ಲರೂ ಅಭಿನಯಿಸಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್, ಪುತ್ರ ನಾಗಾರ್ಜುನ, ಮೊಮ್ಮಗ ನಾಗ ಚೈತನ್ಯ ಮತ್ತು ಸೊಸೆ ಸಮಂತಾ ಎಲ್ಲರೂ ಈ ಸಿನಿಮಾದಲ್ಲಿ ಬಣ್ಣಹಚ್ಚಿದ್ದಾರೆ. ಹೀಗಾಗಿ ನಾಗಾರ್ಜುನ ಅವರಿಗೆ ಈ ಸಿನಿಮಾ ತುಂಬಾ ವಿಶೇಷವಾಗಿದೆ.