Tag: ನವ ಸಂಭ್ರಮ

  • ಅದ್ಧೂರಿಯಾಗಿ ನಡೆದ ಪಬ್ಲಿಕ್ ಮ್ಯೂಸಿಕ್ ನವ ಸಂಭ್ರಮ

    ಅದ್ಧೂರಿಯಾಗಿ ನಡೆದ ಪಬ್ಲಿಕ್ ಮ್ಯೂಸಿಕ್ ನವ ಸಂಭ್ರಮ

    ಬೆಂಗಳೂರು: ಆಡು ಮುಟ್ಟದ ಸೊಪ್ಪಿಲ್ಲ, ಸಂಗೀತ ಕೇಳದ ಹೃದಯವಿಲ್ಲ. ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲೂ ಬೆರೆತುಕೊಂಡಿರುವ ಸಂಗೀತ ನಮ್ಮೊಳಗೆ ಜೀವಾಮೃತದಂತೆ ಕೆಲಸ ಮಾಡುತ್ತದೆ. ಪಕ್ಷಗಳ ಚಿಲಿಪಿಲಿ ಗಾನಕ್ಕೆ ಮರಗಿಡಗಳು ತಲೆದೂಗುವಂತೆ, ಪ್ರಕೃತಿಯ ರಾಗವನ್ನು ವನ್ಯ ಜೀವಿಗಳು ಆಲಿಸುತ್ತ ತಮ್ಮದೇ ಲೋಕದಲ್ಲಿ ಎಂಜಾಯ್ ಮಾಡುತ್ತವೆ. ನೆಮ್ಮದಿ ನೀಡುವ ಸಾಧನದಂತಿರುವ ಮ್ಯೂಸಿಕ್, ಕೇಳುಗರನ್ನು ಆನಂದದ ಚರಮ ಸೀಮೆಗೊಯ್ಯುವ ಒಂದು ದೇವಕಲೆ ಅಂದರೆ ತಪ್ಪಾಗಲಾರದು. ಯಾವುದಕ್ಕೆ ಕಟ್ಟುಬೀಳದೇ ಸಂಗೀತವನ್ನು ಸತತ ಒಂಭತ್ತು ವರ್ಷಗಳಿಂದ ಪಬ್ಲಿಕ್ ಮ್ಯೂಸಿಕ್ ಕನ್ನಡಿಗರಿಗೆ ಉಣಬಡಿಸುತ್ತಿರೋದು ಹೆಮ್ಮೆಯ ಸಂಗತಿ.

    ಪಬ್ಲಿಕ್ ಮ್ಯೂಸಿಕ್‌ನ (Public Music) ನವ ಸಂಭ್ರಮವನ್ನು ದೀಪ ಬೆಳಗಿಸುವ ಮೂಲಕ ಪಬ್ಲಿಕ್ ಟಿವಿಯಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್, ಲಹರಿ ಮ್ಯೂಸಿಕ್ ಮುಖ್ಯಸ್ಥ ಮನೋಹರ್ ನಾಯ್ಡು ಮತ್ತತು ಲಹರಿ ವೇಲು, ಆನಂದ್ ಆಡಿಯೋಸ್ ಮುಖ್ಯಸ್ಥ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿ ಮುಖ್ಯಸ್ಥ ಅಶ್ವಿನಿ ರಾಮ್‌ಪ್ರಸಾದ್, ಝೇಂಕಾರ್ ಮ್ಯೂಸಿಕ್ ಮಾಲೀಕ ಭರತ್ ಜೈನ್ ಉಪಸ್ಥಿತರಿದ್ದರು. ಇದನ್ನೂ ಓದಿ: `ನವ ಸಂಭ್ರಮ’ಕ್ಕೆ ಹೊಸ ಸ್ಟಾರ್ಸ್

    ಸಿನಿಮಾ ತಾರೆಗಳಾದ ವಿಕ್ರಂ ರವಿಚಂದ್ರನ್, ಗಾನವಿ ಲಕ್ಷ್ಮಣ್, ಸಿದ್ದು ಮೂಲಿಮನಿ, ಅಮೃತ ಪ್ರೇಮ್, ಚೈತ್ರಾ ಜೆ. ಆಚಾರ್ ಹಾಗೂ ಬೃಂದಾ ಆಚಾರ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಬ್ಲಿಕ್ ಮ್ಯೂಸಿಕ್‌ಗೆ ಶುಭಹಾರೈಸಿ, ಸಂಗೀತದೊಂದಿಗಿನ ತಮ್ಮ ನಂಟು ಹಾಗೂ ನೆನಪನ್ನು ಹಂಚಿಕೊಂಡರು.

    ಈ ಸಂದರ್ಭ ಮಾತನಾಡಿದ ಪಬ್ಲಿಕ್ ಟಿವಿ (Public TV) ಮುಖ್ಯಸ್ಥ ಹೆಚ್‌ಆರ್ ರಂಗನಾಥ್ (H.R.Ranganath), ನಾವು ಮಾಡುವ ಕೆಲಸವನ್ನು ಪ್ರೀತಿಸಿದಾಗ ಮಾತ್ರ ನಮ್ಮ ಜೀವನದಲ್ಲಿ ಮುಂದೆ ಬರಲು ಸಾಧ್ಯ. ಜೀವನದಲ್ಲಿ ಸೋಲುಗಳು ಸಹಜ. ಅದರ ಬಗ್ಗೆ ತಲೆಕೆಡಿಸಿಕೊಳ್ಳದೇ ಅದರ ವಿರುದ್ಧ ಹೋರಾಡಿ. ಸಮಸ್ಯೆಗಳನ್ನು ಎದುರಿಸದೇ ಇದ್ದರೇ ಗೆಲ್ಲಲು ನಾಳೆಗಳೇ ಇರುವುದಿಲ್ಲ ಎಂದರು.

    ನಮ್ಮ ಒತ್ತಡವನ್ನು ಕಡಿಮೆ ಮಾಡುವ ಶಕ್ತಿ ಇರುವುದು ಸಂಗೀತಕ್ಕೆ (Music) ಮಾತ್ರ. ಸಂಗೀತಕ್ಕೆ ಅನೇಕ ಶಕ್ತಿಯಿದೆ. ಇದು ನಮ್ಮ ನೆನಪನ್ನು ಮೆಲುಕು ಹಾಕುವಂತೆ ಮಾಡುತ್ತದೆ ಎಂದು ಈ ಯಶಸ್ಸಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಕಾರಣೀಕರ್ತರಾದವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಇದನ್ನೂ ಓದಿ: ಪಬ್ಲಿಕ್‌ ಮ್ಯೂಸಿಕ್‌ಗೆ ನವ ಸಂಭ್ರಮ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಬ್ಲಿಕ್‌ ಮ್ಯೂಸಿಕ್‌ಗೆ ನವ ಸಂಭ್ರಮ

    ಪಬ್ಲಿಕ್‌ ಮ್ಯೂಸಿಕ್‌ಗೆ ನವ ಸಂಭ್ರಮ

    ಬೊಬ್ಬೆ ಹಾಕಿ ಅಳುವ ಮಗುವನ್ನು ಮಲಗಿಸುವ ತಾಯಿ, ಚಿನ್ನ, ಮುದ್ದು, ಬಂಗಾರಿ, ಪುಟ್ಟ ಚಿನ್ನುಮರಿ ಅಂತೆಲ್ಲ ಹೆಸರಿಡಿದು ಕರೆಯುವ ಲಾಲಿ ಹಾಡಿಗೆ ಮಗು ಮಲಗುವುದು, ಎಂತಹ ಕಠಿಣ ಮನುಷ್ಯನಾದರೂ ಸಹ ಸಂಗೀತದ ರಾಗಕ್ಕೆ ಒಮ್ಮೆಯಾದ್ರು ತಲೆದೂಗಿಯೇ ಇರುತ್ತಾನೆ. ಒಂದಲ್ಲ ಒಂದು ಹಾಡಿಗೆ ಕೈಕಾಲು ಬೆರಳು, ತಾಳ ಹಾಕಿಯೇ ಇರುತ್ತಾನೆ. ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಈ ಸಂಗೀತದ ಸಪ್ತಸ್ವರಗಳನ್ನು ಪಬ್ಲಿಕ್ ಮ್ಯೂಸಿಕ್ (PUBLIC Music) ಸತತ ಎಂಟು ವರ್ಷಗಳಿಂದ ಕನ್ನಡಿಗರಿಗೆ ನೀಡುತ್ತಲೇ ಬಂದಿದೆ.

    ನಿಮ್ಮ ಸಹಕಾರಿಂದ ಈ ಒಂಭತ್ತು ಮೆಟ್ಟಿಲುಗಳನ್ನು ಪಬ್ಲಿಕ್‌ ಮ್ಯೂಸಿಕ್‌ ಸಲೀಸಾಗಿ ದಾಟಿದೆ. ಪ್ರತೀ ಹೆಜ್ಜೆಯಲ್ಲೂ ಜೊತೆಗಿದ್ದು, ಚಿಕ್ಕಪುಟ್ಟ ತಪ್ಪುಗಳನ್ನು ಮಗುವಂತೆ ತಿದ್ದಿ-ತೀಡಿ ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲೂ ಕೈ ಹಿಡಿದು ಮುನ್ನಡೆಸುತ್ತೀರಿ ಎಂಬ ಭರವಸೆಯನ್ನೂ ನಮಗೆ ಕೊಟ್ಟಿದ್ದೀರಿ. ನಿಮ್ಮ ಪಬ್ಲಿಕ್ ಮ್ಯೂಸಿಕ್ 9 ವರ್ಷಗಳನ್ನು (9th Anniversary) ಕಳೆದ ಜರ್ನಿ ಹೇಗಿತ್ತು. ನಡೆದು ಬಂದ ಹಾದಿಯನ್ನೊಮ್ಮೆ ಮೆಲುಕು ಹಾಕೋಣ ಬನ್ನಿ. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 8ರ ಸಂಭ್ರಮ – ಇಡೀ ದಿನ ಹಲವು ಕಾರ್ಯಕ್ರಮಗಳ ರಸದೌತಣ

    ಪ್ರತೀ ವರ್ಷವೂ ಡಿಫರೆಂಟ್ ಕಾರ್ಯಕ್ರಮಗಳ ಮೂಲಕ ನಿಮ್ಮನ್ನು ಮನರಂಜಿಸಿದ್ದೇವೆ. ಹನಿಯಂತೆ ಶುರುವಾದ ಮೊದಲ ವರ್ಷದ ಮ್ಯೂಸಿಕ್ ದರ್ಬಾರನ್ನು ಮೆಚ್ಚಿಕೊಂಡು ಬೆನ್ನು ತಟ್ಟಿದ್ದೀರಿ. ಎಷ್ಟರ ಮಟ್ಟಿಗೆ ಅಂದರೆ ಎರಡನೇ ವರ್ಷದಲ್ಲಿ ನಮ್ಮ ಹರುಷವನ್ನು ಮುಗಿಲು ಮುಟ್ಟುವಷ್ಟು. ಇನ್ನು ಮೂರನೇ ಮೆಟ್ಟಿಲಿಗೆ ಬಂದಾಗ, ಮೂರು ದಾಟಿ ನಾಲ್ಕಕ್ಕೆ ಬಂದ ಖುಷಿಯಲ್ಲಿ `ಮೂರು ವರುಷ ಪ್ಲಸ್’. ಇನ್ನು ನಾಲ್ಕನೇ ವರ್ಷದ ಪಬ್ಲಿಕ್ ಮ್ಯುಸಿಕ್ ಜರ್ನಿಗೆ ʼಮ್ಯೂಸಿಕ್ ಮ್ಯಾಜಿಕ್ ಸೆಲೆಬ್ರೇಶನ್ ನಾಲ್ಕುʼ. ನಾಲ್ಕನೇ ವರ್ಷದ ವಾರ್ಷಿಕೋತ್ಸವಕ್ಕೆ ನಿಮ್ಮ ರೆಸ್ಪಾನ್ಸ್ ಮ್ಯಾಜಿಕ್ ಥರ ಇತ್ತು. ಇನ್ನು ಐದನೇ ವರ್ಷದ `ಪಬ್ಲಿಕ್ ಸಂಗೀತ ಐದನೇ ವಸಂತ’ ವಂತು ಅರ್ಧ ದಶಕವನ್ನು ಪೂರೈಸಿರುವ ಸಂತಸ ನೀಡಿತ್ತು.

    ʼ6ರ ತೇರು ಮ್ಯೂಸಿಕ್ ಜೋರುʼ, 6ನೇ ವರ್ಷದ ವಾರ್ಷಿಕೋತ್ಸವ ಆಚರಣೆಯಂತೂ ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಿದೆ. ಸೆಪ್ಟೆಂಬರ್ 28ರ ವಾರ್ಷಿಕೋತ್ಸವ ದಿನದಿಂದ ಸತತ ಮೂರು ದಿನಗಳ ಕಾಲ ವಿಶೇಷ ಪ್ರೋಗ್ರಾಮ್ ಮಾಡಿ ನಿಮ್ಮನ್ನು ಮನಂರಜಿಸಿದ್ವಿ. ಏಳನೇ ವರ್ಷದ ʼಸಪ್ತಸ್ವರʼದ ಬಗ್ಗೆ ಕೇಳ್ಬೇಕಾ? ಸಪ್ತಸ್ವರ ಹೆಸರಿಗೆ ತಕ್ಕ ಹಾಗೆ ಕೊರೊನಾ ಸಮಯದಲ್ಲಿ ನೊಂದವರಿಗೆ, ಸಂಕಷ್ಟದಲ್ಲಿರುವವರಿಗೆ ನೆರವಾದ ಏಳು ಜನ ಕೊರೊನಾ ವಾರಿಯರ್ಸ್‌ ಕರೆದು ಮಾತುಕತೆಯ ಜೊತೆಗೆ ಸನ್ಮಾನಿಸಲಾಗಿತ್ತು. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‍ಗೆ 7ರ ಸಂಭ್ರಮ – 7 ಮಂದಿ ಸಾಧಕರಿಗೆ ಗೌರವ

    ಎಂಟನೇ ವರ್ಷದ `ಪಬ್ಲಿಕ್ ಮ್ಯೂಸಿಕೋತ್ಸವ’ವನ್ನು ಉತ್ಸವದಂತೆ ಆಚರಿಸಲಾಗಿತ್ತು. ಕಾಂತಾರ ಸ್ಟಾರ್ ರಿಷಭ್ ಶೆಟ್ಟಿ, ಡೈರೆಕ್ಟರ್ ಜೋಗಿ ಪ್ರೇಮ್, ಕಾಮಿಡಿ ನಟ ಚಿಕ್ಕಣ್ಣ, ಹೆಸರಾಂತ ಚಿತ್ರ ಸಾಹಿತಿ ಕವಿರಾಜ್, ದೊಡ್ಮನೆ ಕುಡಿ ಧನ್ಯಾ ರಾಮ್‌ಕುಮಾರ್, ಯಂಗ್‌ ಹೀರೊ ಶ್ರೇಯಸ್ ಮಂಜು ಹಾಗೂ ಕೆಜಿಎಫ್ ಸಿಂಗರ್ ಸಂತೋಷ್ ವೆಂಕಿ ಅತಿಥಿಗಳಾಗಿ ಬಂದಿದ್ದರು. ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು ಈ ಎಲ್ಲಾ ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಜೊತೆ ಮಾತುಕತೆ ನಡೆಸಿ ಸನ್ಮಾನಿಸಿದ್ರು.

    ಈ ವರ್ಷದ ಸೆ.28 ರಂದು (ಗುರುವಾರ) ನಾವು 9ನೇ ವರ್ಷದ ವಾರ್ಷಿಕೋತ್ಸವದ ಸಂತಸದಲ್ಲಿದ್ದೇವೆ. ಈ ಬಾರಿಯ `ನವ ಸಂಭ್ರಮ’, ಕನ್ನಡ ಚಿತ್ರರಂಗದ ಹೊಸ ಪ್ರತಿಭೆಗಳ ಜೊತೆ ಆಚರಿಸುತ್ತಿದ್ದೇವೆ. ಪಬ್ಲಿಕ್‌ ಮ್ಯೂಸಿಕ್‌ ವಾಹಿನಿಯನ್ನು ವೀಕ್ಷಿಸುತ್ತಾ ಜೊತೆಯಾಗಿ `ನವ ಸಂಭ್ರಮ’ವನ್ನು ಆಚರಿಸೋಣ ಬನ್ನಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]