Tag: ನವೀನ್

  • ಬಿಗ್‍ಬಾಸ್ ಮನೆಯಲ್ಲಿ ಮುತ್ತು ಕೊಟ್ಟ ಸೋನು – ಕಿಸ್ ಪಡೆದವ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ

    ಬಿಗ್‍ಬಾಸ್ ಮನೆಯಲ್ಲಿ ಮುತ್ತು ಕೊಟ್ಟ ಸೋನು – ಕಿಸ್ ಪಡೆದವ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ನಲ್ಲಿ ಪ್ರತಿ ಸೀಸನ್ ನಲ್ಲಿ ಒಂದು ಜೋಡಿ ಸ್ಪರ್ಧಿಗಳ ನಡುವೆ ಪ್ರೀತಿ ಇದೆ ಎಂಬ ಗಾಸಿಪ್ ಇರುತ್ತದೆ. ಅದೇ ರೀತಿ ಈ ಬಾರಿಯೂ ಸೀಸನ್ 6 ರಲ್ಲಿ ಸ್ಪರ್ಧಿ ಸೋನು ಪಾಟೀಲ್ ಮತ್ತು ಗಾಯಕ ನವೀನ್ ಇಬ್ಬರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

    ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ನವೀನ್ ಮತ್ತು ಸೋನು ಪಾಟೀಲ್ ಮಧ್ಯೆ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಅಷ್ಟೇ ಅಲ್ಲದೇ ಈ ನಡುವೆ ಸೋನು ಎಲ್ಲರ ಮುಂದೆ ನವೀನ್ ಗೆ ಐ ಲವ್ ಯೂ ಎಂದು ಹೇಳಿದ್ದರು. ಈಗ ಸೋನು ಪಾಟೀಲ್ ನವೀನ್ ಗೆ ಕಿಸ್ ಕೊಡುವ ಮೂಲಕ ಬಿಗ್‍ಬಾಸ್ ಮನೆಯ ಇತರೆ ಸ್ಪರ್ಧಿಗಳಿಗೆ ಶಾಕ್ ಕೊಟ್ಟಿದ್ದಾರೆ.


    ಬಿಗ್ ಬಾಸ್ ಶೋ ಪ್ರತಿದಿನ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತದೆ. ಈ ದಿನ ಬಿಗ್‍ಬಾಸ್ ಮನೆ ಮಂದಿಗೆ ಕ್ರೇಜಿಟಾಸ್ಕ್ ಕೊಡಲಾಗಿದೆ. ಈ ಟಾಸ್ಕ್ ನಲ್ಲಿ ಎಲ್ಲರೂ ಒಂದೊಂದು ರೀತಿಯ ಟಾಸ್ಕ್ ಮಾಡುತ್ತಾರೆ. ಈ ವೇಳೆ ಸೋನು ಪಾಟೀಲ್ ಎಲ್ಲರ ಮುಂದೆ ನವೀನ್ ಕೆನ್ನೆಗೆ ಕಿಸ್ ಕೊಟ್ಟಿದ್ದಾರೆ. ಸೋನು ಕಿಸ್ ಕೊಟ್ಟ ಬಳಿಕ ನವೀನ್ ಅಲ್ಲಿನ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದಿದ್ದಾರೆ. ಈ ವೇಳೆ ಸೋನು ‘ಬೇಡ’ ಎಂದು ಹೇಳಿರುವ ಪ್ರೋಮೋ ಪ್ರಸಾರವಾಗುತ್ತಿದೆ. ಆದರೆ ಬಿಗ್‍ಬಾಸ್ ನೀಡಿದ್ದ ಕ್ರೇಜಿ ಟಾಸ್ಕ್ ಏನು ಎಂದು ಯಾರಿಗೂ ತಿಳಿದಿಲ್ಲ. ಇಂದಿನ ಎಪಿಸೋಡ್ ನಲ್ಲಿ ಪ್ರಸಾರವಾಗುತ್ತದೆ.

    ಈ ಹಿಂದೆ ನವೀನ್ ತಮ್ಮ ಜರ್ಕಿನ್ ಕೊಟ್ಟಿದ್ದಕ್ಕೆ ಸೋನು ನೀನು ನನಗೆ ಒಳ್ಳೆಯ ಸ್ನೇಹಿತನಾಗಿದ್ದೀಯಾ. ಹಾಗಾಗಿ ನಿನಗೆ ಐ ಲವ್ ಯೂ ಅಂತ ಬಿಗ್‍ಬಾಸ್ ಚಟುವಟಿಕೆಯಲ್ಲಿ ಹೇಳಿದ್ದರು. ಈ ಬಳಿಕ ಮನೆಯಲ್ಲಿದ್ದವರು ನವೀನ್ ಹಾಗೂ ಸೋನು ಬಗ್ಗೆ ಮಾತನಾಡಲು ಶುರು ಮಾಡಿದರು. ಇತರರ ಮಾತುಗಳಿಂದ ಕೋಪಗೊಂಡ ಸೋನು ಪಾಟೀಲ್, ನೀನು ನನಗೆ ಸ್ನೇಹಿತನಾಗಿ ಇಷ್ಟ. ಲವ್ ಮಾಡಿದರೆ ನಾನು ನಿನ್ನೇ ಲವ್ ಮಾಡುತ್ತೀನಿ. ಅದು ಏನ್ ಮಾಡಿಕೊಳ್ಳುತ್ತೀಯೋ ಮಾಡಿಕೋ ಎಂದು ಸವಾಲು ಹಾಕಿ ಬೇರೆ ಕಡೆ ನಡೆದಿದ್ದರು.

    ಮೂರನೇ ವಾರದ ಟಾಸ್ಕ್ ನಲ್ಲಿ ಹಾವಿನ ದ್ವೇಷ ಟಾಸ್ಕ್ ನಲ್ಲಿ ಸೋತು ಬಿಗ್‍ಬಾಸ್ ಮನೆಯ ಅಂಗಳದಲ್ಲಿ ನಿರ್ಮಿಸಲಾಗಿದ್ದ ಕೃತಕ ಸ್ಮಶಾನದಲ್ಲಿ ಕುಳಿತಕೊಳ್ಳಬೇಕಿತ್ತು. ಸ್ಮಶಾನದ ಅಂಗಳ ಸೇರಿದ ಸ್ಪರ್ಧಿ ಭೂತದ ರೀತಿಯಲ್ಲಿ ಬಿಗ್ ಬಾಸ್ ನೀಡುವ ಬಿಳಿ ಬಟ್ಟೆ ಧರಿಸಿ ನಟಿಸಬೇಕಿತ್ತು. ಟಾಸ್ಕ್ ನಲ್ಲಿ ಲಕ್ಷುರಿ ಅಂಕಗಳನ್ನು ಕಳೆದುಕೊಂಡ ಸೋನು ಸ್ಮಶಾನ ಸೇರಬೇಕಿತ್ತು. ಈ ವೇಳೆ ತಾನೇ ಬಿಗ್‍ಬಾಸ್ ಮನೆಯಲ್ಲಿ ನನ್ನ ಲವ್ ಸ್ಟಾರ್ಟ್ ಆಗಿತ್ತು. ಇಷ್ಟು ಬೇಗ ನನಗೆ ಸ್ಮಶಾನ ಸೇರುವ ಪರಿಸ್ಥಿತಿ ಬಂತು ಎಂಬ ಮಾತುಗಳನ್ನಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಭಾವನಾ-ನವೀನ್ ಆರತಕ್ಷತೆಯಲ್ಲಿ ಸ್ಯಾಂಡಲ್‍ವುಡ್ ತಾರೆಯರ ದಂಡು!

    ಭಾವನಾ-ನವೀನ್ ಆರತಕ್ಷತೆಯಲ್ಲಿ ಸ್ಯಾಂಡಲ್‍ವುಡ್ ತಾರೆಯರ ದಂಡು!

    ಬೆಂಗಳೂರು: ಬಹುಭಾಷಾ ಚಿತ್ರ ತಾರೆ, ಮಲೆಯಾಳಂ ಬೆಡಗಿ ನಟಿ ಭಾವನಾ ಕನ್ನಡದ ಹುಡುಗ ನವೀನ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹದಿನೈದು ದಿನಗಳು ಕಳೆದಿವೆ.

    ಕೇರಳದ ತ್ರಿಶೂರ್ ಜವರ್ ಲಾಲ್ ಕನ್ವೇಷನ್ ಹಾಲ್‍ನಲ್ಲಿ ಈ ಜೋಡಿ ಜನವರಿ 22 ರಂದು ಸಪ್ತಪದಿ ತುಳಿದಿತ್ತು. ಕೇರಳ ಸಂಪ್ರದಾಯದಂತೆ ಇವರ ಮದುವೆ ನಡೆದಿದ್ದು, ಹಲವು ಸಿನಿಮಾ ತಾರೆಯರು ಮತ್ತು ಆಪ್ತರು ಮದುವೆಗೆ ಹೋಗಿದ್ದರು. ಸರಳವಾಗಿ ಮದುವೆ ಮಾಡಿಕೊಂಡ ಈ ತಾರಾ ಜೋಡಿ ಕೇರಳದ ಚಿತ್ರರಂಗದ ಗಣ್ಯರಿಗೆ ಹಾಗೂ ಸ್ನೇಹಿತರಿಗಾಗಿ ಅದ್ಧೂರಿ ಆರತಕ್ಷತೆಯನ್ನ ಬೆಂಗಳೂರಿನಲ್ಲಿ ಆಯೋಜನೆ ಮಾಡಿದ್ದರು.

    ನವೀನ್ ಬೆಂಗಳೂರಿನ ನಿವಾಸಿಯಾಗಿರುವುದರಿಂದ ಇಲ್ಲಿನ ಸ್ನೇಹಿತರು ಹಾಗೂ ಸಿನಿಮಾರಂಗದ ಗಣ್ಯರಿಗಾಗಿ ಅದ್ಧೂರಿಯಾಗಿ ಭಾನುವಾರ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ಆಯೋಜಿಸಿದ್ದರು. ಭಾವನಾ ಅಭಿನಯಿಸಿದ ಚಿತ್ರಗಳಲ್ಲಿ ಕೆಲಸ ಮಾಡಿದವರು, ನವೀನ್ ಕುಟುಂಬಸ್ಥರು ಮತ್ತು ಸ್ನೇಹಿತರಷ್ಟೇ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.

    ಆರತಕ್ಷತೆಯಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್,  ಪ್ರಿಯಾಮಣಿ, ಪಾರೂಲ್ ಯಾದವ್, ಮಾನ್ವಿತಾ, ಮಾಳವಿಕಾ, ಅವಿನಾಶ್, ಹರೀಶ್ ಸೇರಿದಂತೆ ಸ್ಯಾಂಡಲ್‍ವುಡ್ ಸ್ಟಾರ್ ಗಳು ಬಂದು ನವ ವಧು-ವರರಿಗೆ ಶುಭಾ ಹಾರೈಸಿದ್ದಾರೆ.

    ಜಾಕಿ ಭಾವನಾ ಅಭಿನಯದ ಟಗರು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಆರತಕ್ಷತೆಗೆ ಇಡೀ ಟಗರು ಸಿನಿಮಾತಂಡವನ್ನ ಆಹ್ವಾನ ಮಾಡಲಾಗಿತ್ತು. ಕಲಾವಿದರು ಸೇರಿದಂತೆ ಇಡೀ ಟಗರು ತಂಡದ ತಂತ್ರಜ್ಞರು ಭಾವನಾ ಮತ್ತು ನವೀನ್ ಅವರಿಗೆ ಶುಭ ಹಾರೈಸಿದರು. ಆರತಕ್ಷತೆಯಲ್ಲಿ ನಟಿ ಭಾವನಾ ಪೀಚ್ ಗ್ರೀನ್ ಗೌನ್ ಹಾಕಿಕೊಂಡಿದ್ದು, ನವೀನ್ ಬ್ಲೂ ಸೂಟ್ ನಲ್ಲಿ ಕಾಣಿಸಿಕೊಂಡರು.

    ದಕ್ಷಿಣ ಚಿತ್ರರಂಗದ ಈ ವರ್ಷದ ಮೊದಲ ಸಿನಿಮಾ ಜೋಡಿಯ ಮದುವೆ ಇದಾಗಿತ್ತು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ. ಇದನ್ನು ಓದಿ: ಕನ್ನಡದ ಹುಡುಗನ ಜೊತೆ ಸಪ್ತಪದಿ ತುಳಿದ ಭಾವನಾ-ಫೋಟೋಗಳಲ್ಲಿ ನೋಡಿ

  • ನಟಿ ಭಾವನಾ ಮೆನನ್ ಮದುವೆಗೆ ಸ್ಪೆಷಲ್ ವಿಶ್ ಕೋರಿದ ನಟಿ ಪ್ರಿಯಾಂಕಾ ಚೋಪ್ರಾ

    ನಟಿ ಭಾವನಾ ಮೆನನ್ ಮದುವೆಗೆ ಸ್ಪೆಷಲ್ ವಿಶ್ ಕೋರಿದ ನಟಿ ಪ್ರಿಯಾಂಕಾ ಚೋಪ್ರಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಭಾವನಾ ಮೆನನ್ ಇಂದು ತಮ್ಮ ಬಹುದಿನದ ಗೆಳೆಯ ನವೀನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಭಾವನಾ ಹಾಗೂ ನವೀನ್ ದಾಂಪತ್ಯ ಜೀವನಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಡಿಯೋ ಮೂಲಕ ಅವರಿಗೆ ಶುಭಾಶಯವನ್ನು ಕೋರಿದ್ದಾರೆ.

    ನಾನು ನಿಮ್ಮ ದಾಂಪತ್ಯ ಜೀವನಕ್ಕೆ ಶುಭಾಶಯ ಕೋರುತ್ತೇನೆ. ನಿಮ್ಮ ಜೀವನದ ಪಯಣದಲ್ಲಿ ಇದೊಂದು ದೊಡ್ಡ ನಿರ್ಧಾರ. ನಾನು ನಿಮಗೆ ಗುಡ್ ಲಕ್ ತಿಳಿಸುತ್ತೇನೆ. ನೀವು ಅತ್ಯಂತ ಉತ್ಸಾಹಭರಿತ, ಕೆಚ್ಚೆದೆಯ ಮತ್ತು ಅದ್ಭುತ ಮಹಿಳೆ. ನನಗೆ ನೀವು ಎಂದರೆ ಅಚ್ಚುಮೆಚ್ಚು. ನಾನು ಯಾವಾಗಲ್ಲೂ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ವಿಡಿಯೋದಲ್ಲಿ ಪ್ರಿಯಾಂಕಾ ಶುಭಾಶಯ ಕೋರಿದ್ದಾರೆ.

    ಕೇರಳದ ತ್ರಿಶೂರ್‍ನ ಜವರ್‍ಲಾಲ್ ಕನ್ವೇಷನ್ ಹಾಲ್‍ನಲ್ಲಿ ಮದುವೆ ಸಮಾರಂಭ ನಡೆದಿದೆ. ಭಾನುವಾರ ರಾತ್ರಿ ಮಹೆಂದಿ ಕಾರ್ಯಕ್ರಮ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋಗಳು ಹರಿದಾಡುತ್ತಿವೆ.

    2017 ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜುವಾರಿಯರ್ ಹಾಗೂ ಸಂಯುಕ್ತವರ್ಮಾ ಪಾಲ್ಗೊಂಡಿದ್ದರು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.

     

  • ಮಂಡ್ಯ: ಪಂಚಾಯ್ತಿ ಅಧ್ಯಕ್ಷರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೊಳಿಸಿದ್ರು

    ಮಂಡ್ಯ: ಪಂಚಾಯ್ತಿ ಅಧ್ಯಕ್ಷರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೊಳಿಸಿದ್ರು

    ಮಂಡ್ಯ: ರಾಜಕೀಯ ದ್ವೇಷಕ್ಕೆ ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯ್ತಿ ಅಧ್ಯಕ್ಷರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ, ಕಾರನ್ನು ಸಂಪೂರ್ಣ ಜಖಂಗೊಳಿಸಿರುವ ಘಟನೆ ನಡೆದಿದೆ.

    ಶಾಸಕ ಚಲುವರಾಯಸ್ವಾಮಿ ಬೆಂಬಲಿಗರಾದ ಅಧ್ಯಕ್ಷ ನವೀನ್, ನನ್ನ ಕಾರಿನ ಮೇಲೆ ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿಗರು ಕಲ್ಲು ಎತ್ತಿ ಹಾಕಿ ಕಾರನ್ನು ಜಖಂಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

    ನವೀನ್ ನಾಗಮಂಗಲದ ಬಿಜಿ ನಗರದಲ್ಲಿನ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ತಮ್ಮ ಪತ್ನಿಯನ್ನು ಹೆರಿಗೆಗಾಗಿ ದಾಖಲಿಸಿದ್ದರು. ಆಸ್ಪತ್ರೆ ಬಳಿ ಕಾರು ನಿಲ್ಲಿಸಿ ಪತ್ನಿಗೆ ಊಟ ತರಲು ಹೊರಗೆ ತೆರಳಿದ್ದರು. ಕಾರಿನ ಬಳಿ ಯಾರೂ ಇಲ್ಲದೇ ಇರುವುದನ್ನು ಗಮನಿಸಿದ ದುಷ್ಕರ್ಮಿಗಳು ನವೀನ್ ಅವರ ಕಾರಿನ ಮೇಲೆ ಕಲ್ಲು ಎತ್ತಾಕಿ ಕಾರನ್ನು ಜಖಂಗೊಳಿಸಿದ್ದಾರೆ.

    ನವೀನ್ ಜೆಡಿಎಸ್ ಬಂಡಾಯ ಶಾಸಕ ಚಲುವರಾಯಸ್ವಾಮಿ ಬೆಂಬಲಿಗರಾಗಿದ್ದು, ಸುರೇಶ್ ಗೌಡರ ವಿರುದ್ಧ ಸಭೆಯೊಂದರಲ್ಲಿ ಮಾತನಾಡಿದಕ್ಕೆ ಈ ರೀತಿ ಕೃತ್ಯವೆಸಗಿದ್ದಾರೆ ಎಂದು ಹೇಳುತ್ತಿದ್ದಾರೆ. ಅಲ್ಲದೆ ಸುರೇಶ್ ಗೌಡ ಬೆಂಬಲಿಗರಿಂದ ಪದೇ ಪದೇ ಕೊಲೆ ಬೆದರಿಕೆಗಳು ಬರುತ್ತಿದ್ದು, ಇಂದು ಕಾರನ್ನ ಜಖಂಗೊಳಿಸಿರೋದು ಅವರ ಬೆಂಬಲಿಗರೇ ಅಂತ ಗಂಭೀರ ಆರೋಪ ಮಾಡಿದ್ದಾರೆ.

    ಸದ್ಯಕ್ಕೆ ಬೆಳ್ಳೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.


  • ಮಂಡ್ಯ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

    ಮಂಡ್ಯ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ

    ಮಂಡ್ಯ: ಯುವಕನನ್ನು ಕಟ್ಟಿ ಹಾಕಿ ನಂತರ ಅವನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ.

    28 ವರ್ಷದ ನವೀನ್ ಕೊಲೆಯಾದ ದುರ್ದೈವಿ. ಕನಕಪುರ ಮೂಲದ ನವೀನ್ ಮಂಡ್ಯದಲ್ಲಿ ವಾಸಿಸುತ್ತಿದ್ದರು. ಲಾರಿಗಳಿಗೆ ಮೂಟೆ ಹೊರುವ ಕೂಲಿ ಕೆಲಸ ಮಾಡಿಕೊಂಡಿದ್ದರು. ನವೀನ್ ಕೊಲೆಗೆ ಕಾರಣ ಏನೆಂಬುದು ತಿಳಿದುಬಂದಿಲ್ಲ.

    ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

  • ಉಡುಪಿಯ ನವೀನ್‍ಗೆ ಯುಪಿಎಸ್‍ಸಿಯಲ್ಲಿ 37ನೇ  ಶ್ರೇಯಾಂಕ

    ಉಡುಪಿಯ ನವೀನ್‍ಗೆ ಯುಪಿಎಸ್‍ಸಿಯಲ್ಲಿ 37ನೇ ಶ್ರೇಯಾಂಕ

    ಉಡುಪಿ: ಬಹು ನಿರೀಕ್ಷಿತ ಯುಪಿಎಸ್‍ಸಿ ರಿಸಲ್ಟ್ ಘೋಷಣೆಯಾಗಿದೆ. ಮೊದಲ ಶ್ರೇಯಾಂಕ ಕರ್ನಾಟಕದ ಪಾಲಾಗಿದೆ. ದೇಶದಲ್ಲೇ 37ನೇ ಶ್ರೇಯಾಂಕ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಮಾಸೆಬೈಲುವಿನ ನವೀನ್ ಭಟ್‍ಗೆ ಸಿಕ್ಕಿದೆ.

    ಸದ್ಯ ಬೆಂಗಳೂರಿನಲ್ಲಿರುವ ನವೀನ್, ಚೆನ್ನೈನ ಶಂಕರ ಐಎಎಸ್ ಅಕಾಡೆಮಿಯ ವಿದ್ಯಾರ್ಥಿಯಾಗಿ ಕೋಚಿಂಗ್ ಪಡೆದಿದ್ದರು. ಬೆಂಗಳೂರಿನ ವಿಜನ್ ಕೋಚಿಂಗ್ ಸೆಂಟರ್‍ನಲ್ಲಿ ಕೂಡಾ ನವೀನ್ ಭಟ್ ಯುಪಿಎಸ್‍ಸಿ ಪರೀಕ್ಷೆಗೆ ತರಬೇತಿ ಪಡೆದು ತಯಾರಿ ಮಾಡಿದ್ದರು. ನವೀನ್ ತಂದೆ ಉಮೇಶ್ ಭಟ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ಸಿವಿಲ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸ್ತಾಯಿದ್ದಾರೆ. ತಾಯಿ ವಿಜಯಲಕ್ಷ್ಮೀ ಭಟ್ ಮನೆಯನ್ನು ನಿರ್ವಹಣೆ ಮಾಡುತ್ತಾರೆ. ಉಮೇಶ್ ಭಟ್ ವೈ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದವರು. ನವೀನ್ ಚಾಮರಾಜಪೇಟೆಯಲ್ಲಿ ಗೆಳೆಯರ ಜೊತೆ ಇದ್ದು, ಕೋಚಿಂಗ್ ಪಡೆಯುತ್ತಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ನವೀನ್ ತಮ್ಮ ವಿದ್ಯಾಭ್ಯಾಸ ಹಾಗೂ ತರಬೇತಿ ಪಡೆದ ಬಗ್ಗೆ ಮಾತಾಡಿದ್ದಾರೆ.

    ಬಿಎಂಸಿ ಸ್ಟೂಡೆಂಟ್: ನಾನು ಬೆಂಗಳೂರು ಮೆಡಿಕಲ್ ಕಾಲೇಜು ವಿದ್ಯಾರ್ಥಿ. ಎಂಬಿಬಿಎಸ್ ಮುಗಿಸಿ ಒಂದು ವರ್ಷ ಆಯ್ತು. ವರ್ಷದಿಂದೀಚೆ ಯುಪಿಎಸ್‍ಸಿ ಕೋಚಿಂಗ್ ಪಡೆಯುತ್ತಿದ್ದೇನೆ. ಅಳಿಕೆಯ ಸತ್ಯಸಾಯಿ ಸಂಸ್ಥೆಯಲ್ಲಿ ಪಿಯುಸಿ ತನಕದ ಶಿಕ್ಷಣವನ್ನ ಪಡೆದಿದ್ದೇನೆ. ನಮ್ಮದು 10 ಜನರ ಸ್ಟಡೀ ಗ್ರೂಪ್ ಇತ್ತು. ಹಾರ್ಡ್ ವರ್ಕ್ ಜೊತೆ ಸ್ಮಾರ್ಟ್ ವರ್ಕ್ ಮಾಡಿದ್ದರಿಂದ ಈ ಸಾಧನೆ ಸಾಧ್ಯ ಆಯ್ತು.

    ಸಿಇಟಿಯಲ್ಲಿ ಮೊದಲನೇ ಶ್ರೇಯಾಂಕ: 2009ರಲ್ಲಿ ನವೀನ್ ಭಟ್ ಸಿಇಟಿಯಲ್ಲಿ ರಾಜ್ಯಕ್ಕೆ ಮೊದಲ ಶ್ರೇಯಾಂಕ ಪಡೆದಿದ್ದರು. ಎಂಜಿನಿಯರಿಂಗ್ ವಿಭಾಗದಲ್ಲಿ ನವೀನ್ ಈ ಸಾಧನೆಯನ್ನು ಮಾಡಿದ್ದರು.

    ನವೀನ್ ಹವ್ಯಾಸಗಳು: ನವೀನ್ ಓದು ಓದು ಮತ್ತು ಓದು ಅಂತ ಬರೀ ಪುಸ್ತಕ ಹಿಡ್ಕೊಂಡು ಕೂರುವವರಲ್ಲ. ಓದಿನ ನಡುವೆ ಟಿವಿ ನೋಡೋದು ಹಾಗೂ ಮೂಡ್ ಇದ್ದಾಗ ಚೆಸ್ ಆಡ್ತಾರೆ. ದೇಹಕ್ಕೆ ಸ್ವಲ್ಪ ವ್ಯಾಯಾಮ ಬೇಕು ಅಂದಾಗ ಗೆಳೆಯರ ಜೊತೆ ಸೇರಿಕೊಂಡು ಫುಟ್ಬಾಲ್, ವಾಲಿಬಾಲ್ ಆಡ್ತಾರೆ.

    ಯಕ್ಷಗಾನ ಇಷ್ಟ: ಬಾಹುಬಲಿ -2 ರೀಸೆಂಟ್ ಆಗಿ ನೋಡಿರುವ ಮೂವಿ. ಒಳ್ಳೊಳ್ಳೆ ಮೂವಿಯನ್ನ ಥಿಯೇಟರ್‍ಗೆ ಹೋಗಿಯೇ ನೋಡ್ತೇನೆ. ತಂದೆಗೆ ಯಕ್ಷಗಾನ ಅಂದ್ರೆ ಇಷ್ಟ. ಹೀಗಾಗಿ ನಾನೂ ಎಲ್ಲಾದ್ರು ಯಕ್ಷಗಾನ ನಡೀತಿದ್ರೆ ಸ್ವಲ್ಪ ಹೊತ್ತು ನಿಂತು ಆಟ ನೋಡಿ ಭಾಗವತಿಕೆ ಕೇಳಿ ಹೋಗ್ತೇನೆ ಅಂತಾರೆ ನವೀನ್.

    ಕರ್ನಾಟಕದಲ್ಲೇ ಐಎಎಸ್ ಅಧಿಕಾರಿಯಾಗ್ತೇನೆ: ರಾಜ್ಯದಲ್ಲಿ ಐಎಎಸ್ ಮೂರು ಪೋಸ್ಟ್ ಗಳು ಖಾಲಿಯಿದೆ. ಇಲ್ಲೇ ನಾನು ಸೇವೆ ಮಾಡಬೇಕು ಅಂತ ಅಂದ್ಕೊಂಡಿದ್ದೇನೆ. ನನಗಿಂದೆ ಮುಂದೆ ಇಬ್ಬರು ಇದ್ದು ಮೂರರ ಪೈಕಿ ಒಂದು ಪೋಸ್ಟ್ ನನಗೆ ಸಿಗುತ್ತೆ. ಐಎಎಸ್ ಅಧಿಕಾರಿಯಾಗಿ ರಾಜ್ಯಕ್ಕೆ, ದೇಶಕ್ಕೆ ಹೆಮ್ಮೆ ತರುವಂತಹ ಕೆಲಸ ಮಾಡುತ್ತೇನೆ. ದೇವರ ಕೃಪೆ, ತಂದೆತಾಯಿ ಆಶೀರ್ವಾದ, ಗೆಳೆಯರ ಪ್ರೋತ್ಸಾಹದಿಂದ ಉತ್ತಮ ಸೇವೆ ನೀಡುತ್ತೇನೆ ಎಂಬ ನಂಬಿಕೆಯಿದೆ ಅಂತ ನವೀನ್ ಹೇಳಿದ್ದಾರೆ.

  • ನಟಿ ಭಾವನಾ – ನವೀನ್ ಮದುವೆ ಡೇಟ್ ಫಿಕ್ಸ್

    ನಟಿ ಭಾವನಾ – ನವೀನ್ ಮದುವೆ ಡೇಟ್ ಫಿಕ್ಸ್

    ಬೆಂಗಳೂರು: ನಟಿ ಭಾವನಾ ಮೆನನ್ ಹಾಗೂ ಕನ್ನಡ ನಿರ್ಮಾಪಕ ನವೀನ್ ವಿವಾಹದ ಡೇಟ್ ಫಿಕ್ಸ್ ಆಗಿದೆ. ಇದೇ ವರ್ಷ ಅಕ್ಟೋಬರ್ 27ರಂದು ಕೇರಳದ ತ್ರಿಶೂರ್‍ನಲ್ಲಿ ವಿವಾಹವಾಗಲಿದ್ದಾರೆ.

    ಸಂಬಂಧಿಕರು ಹಾಗೂ ಆಪ್ತರನ್ನಷ್ಟೇ ಮದುವೆಗೆ ಆಹ್ವಾನಿಸುವುದಾಗಿ ಭಾವನಾ ತಾಯಿ ಪುಷ್ಪಾ ಹೇಳಿದ್ದಾರೆ. ಮೇ ತಿಂಗಳ ಕೊನೆಯಲ್ಲಿ ಭಾವನಾ ಶೂಟಿಂಗ್ ಮುಗಿಸ್ ಸ್ಕಾಟ್ಲೆಂಡ್‍ನಿಂದ ವಾಪಾಸ್ ಆಗಲಿದ್ದು, ಮದುವೆಗೆ ಚಿತ್ರರಂಗದಿಂದ ಯಾರನ್ನೆಲ್ಲಾ ಆಹ್ವಾನಿಸಬೇಕು ಎಂದು ಭಾವನಾ ಅವರೇ ಖುದ್ದಾಗಿ ನಿರ್ಧರಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಕೊಚ್ಚಿ ನಗರದಲ್ಲಿ ಯಾವುದೇ ಕಾರ್ಯಕ್ರಮ ನಿಗದಿಗೊಳಿಸಿಲ್ಲ ಎಂದೂ ಅವರು ಹೇಳಿದ್ದಾರೆ. ಸದ್ಯ ಭಾವನಾ ಸ್ಕಾಟ್ಲೆಂಡ್‍ನಲ್ಲಿ ಪೃಥ್ವಿರಾಜ್ ರಾಜ್ ಜೊತೆ ಆದಂ ಜೋನ್ ಚಿತ್ರದ ಶೂಟಿಂಗ್‍ನಲ್ಲಿದ್ದಾರೆ.

    ಕಳೆದ ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜು ವಾರಿಯರ್ ಹಾಗೂ ಸಂಯುಕ್ತ ವರ್ಮಾ ಪಾಲ್ಗೊಂಡಿದ್ದರು.

    ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಲ್ಲೂ ಅಭಿನಯಿಸಿದ್ದರು.

     

  • ಸ್ಯಾಂಡಲ್‍ವುಡ್ ನಿರ್ಮಾಪಕನ ಜೊತೆ ನಟಿ ಭಾವನಾ ಮೆನನ್ ನಿಶ್ಚಿತಾರ್ಥ

    ಸ್ಯಾಂಡಲ್‍ವುಡ್ ನಿರ್ಮಾಪಕನ ಜೊತೆ ನಟಿ ಭಾವನಾ ಮೆನನ್ ನಿಶ್ಚಿತಾರ್ಥ

    ತಿರುವನಂತಪುರಂ: ಬಹುಭಾಷಾ ನಟಿ ಭಾವನಾ ಮೆನನ್‍ಗೆ ಕಂಕಣ ಭಾಗ್ಯ ಕೂಡಿಬಂದಿದೆ. ಸ್ಯಾಂಡಲ್‍ವುಡ್‍ನಲ್ಲಿ ರೋಮಿಯೋ ಚಿತ್ರದ ನಿರ್ಮಾಪಕ ನವೀನ್ ಜೊತೆ ನಟಿ ಭಾವನರವರ ಎಂಗೇಜ್‍ಮೆಂಟ್ ನೆರವೇರಿದೆ.

    ನವೀನ್ ಮತ್ತು ಭಾವನ ನಡುವೆ ಲವ್ ಇದೆ ಎಂದು ಗಾಂಧಿನಗರದಲ್ಲಿ ಗಾಸಿಪ್‍ಗಳು ಹರಿದಾಡಿದ್ದವು. ಈಗ ಮಾತಿಗೆ ಪುಷ್ಟಿ ಎನ್ನುವಂತೆ ಇಂದು ಭಾವನಾ ಮತ್ತು ನವೀನ್ ನಿಶ್ಚಿತಾರ್ಥ ಕೇರಳದ ಕೊಚ್ಚಿಯಲ್ಲಿ ನಡೆದಿದೆ.

    ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜು ವಾರಿಯರ್ ಹಾಗೂ ಸಂಯುಕ್ತ ವರ್ಮಾ ಉಪಸ್ಥಿತರಿದ್ದರು.

    ನವೀನ್ ಹಾಗೂ ಭಾವನಾ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದು ಇದೇ ಜೂನ್‍ನಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಈ ಹಿಂದೆ ಹರಿದಾಡುತಿತ್ತು.

    ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ ‘ವಿಷ್ಣುವರ್ಧನ್’ ಹಾಗೂ ‘ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.

    ಇದನ್ನೂ ಓದಿ: ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಟ್ವಿಸ್ಟ್- ಪಲ್ಸರ್ ಸುನಿಯ ವಕೀಲರೇ ಈಗ ಸಾಕ್ಷಿಧಾರ