Tag: ನವೀಕರಣ

  • ಆಧಾರ್ ಪಡೆದು 10 ವರ್ಷ ಆಯ್ತಾ? – ಮಾಹಿತಿ ನವೀಕರಣಕ್ಕೆ ಯುಐಡಿಎಐ ಮನವಿ

    ಆಧಾರ್ ಪಡೆದು 10 ವರ್ಷ ಆಯ್ತಾ? – ಮಾಹಿತಿ ನವೀಕರಣಕ್ಕೆ ಯುಐಡಿಎಐ ಮನವಿ

    ನವದೆಹಲಿ: ನೀವು ನಿಮ್ಮ ಆಧಾರ್ ಕಾರ್ಡ್ (Aadhaar Card) ಪಡೆದು 10 ವರ್ಷ ಪೂರ್ಣವಾಗಿದೆಯಾ? ಅದರ ಬಳಿಕ ನೀವು ಎಂದೂ ತಮ್ಮ ಮಾಹಿತಿಗಳನ್ನು ನವೀಕರಿಸದೇ (Update) ಹೋಗಿದ್ದರೆ, ಇದೀಗ ನಿಮ್ಮ ವಿವರಗಳನ್ನು ಈ ಕೂಡಲೇ ನವೀಕರಿಸಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಜನರಲ್ಲಿ ಕೇಳಿಕೊಂಡಿದೆ.

    ನೀವು ನಿಮ್ಮ ಆಧಾರ್ ಅನ್ನು 10 ವರ್ಷಗಳ ಹಿಂದೆ ಪಡೆದಿದ್ದು, ಬಳಿಕ ಅದನ್ನು ನವೀಕರಿಸಿಲ್ಲವಾ? ಹಾಗಿದ್ದರೆ ನೀವು ಈ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಅನ್ನು ನವೀಕರಿಸಿ. ಇದು ನಿಮ್ಮ ಜೀವನವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ ಎಂದು ಯುಐಡಿಎಐ ಟ್ವೀಟ್‌ನಲ್ಲಿ ತಿಳಿಸಿದೆ. ಆದರೆ ಇದು ಕಡ್ಡಾಯ ಹೌದೋ ಅಲ್ಲವೋ ಎಂಬ ಬಗ್ಗೆ ಯುಐಡಿಎಐ ಮಾಹಿತಿ ನೀಡಿಲ್ಲ. ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದ ಜನತೆಗೆ ಸಿಹಿ ಸುದ್ದಿ – ದೆಹಲಿಗೆ ನಿತ್ಯ ವಿಮಾನ

    myaadhaar.uidai.gov.in ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಅಥವಾ ನಿಮ್ಮ ಸಮೀಪದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಆಫ್‌ಲೈನ್‌ನಲ್ಲಿಯೂ ನಿಮ್ಮ ವಿವರಗಳನ್ನು ಅಪ್‌ಡೇಟ್ ಮಾಡಬಹುದು ಎಂದು ತಿಳಿಸಿದೆ. ಇದನ್ನೂ ಓದಿ: ನೌಕಾನೆಲೆಯ ಲೇಬರ್ ಕಾಲೋನಿಯಲ್ಲಿ ಸಿಲಿಂಡರ್ ಸ್ಫೋಟ – ತಪ್ಪಿದ ಅನಾಹುತ

    ಆಧಾರ್ 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯಾಗಿದ್ದು, ಇದನ್ನು ಭಾರತದ ನಾಗರಿಕರು ಸ್ವಯಂಪ್ರೇರಣೆಯಿಂದ ಪಡೆಯಬಹುದು. 2009ರ ಜನವರಿಯಲ್ಲಿ ಯುಐಡಿಎಐ ಸ್ಥಾಪನೆಯೊಂದಿಗೆ ಈ ಸೌಲಭ್ಯವನ್ನು ಪ್ರಾರಂಭಿಸಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಪುಲ್ವಾಮಾದಲ್ಲಿ ಮುಸ್ಲಿಂರಿಂದ ಶಿವನ ದೇಗುಲ ಜೀರ್ಣೋದ್ಧಾರ!

    ಪುಲ್ವಾಮಾದಲ್ಲಿ ಮುಸ್ಲಿಂರಿಂದ ಶಿವನ ದೇಗುಲ ಜೀರ್ಣೋದ್ಧಾರ!

    ಪುಲ್ವಾಮಾ: ಭಾರತೀಯ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದ ಪುಲ್ವಾಮಾ ಸಮೀಪದ ಬರೇಲಿಯಲ್ಲಿ, ಸುಮಾರು 80 ವರ್ಷ ಹಳೆಯ ಶಿವ ದೇಗುಲವೊಂದನ್ನು ನವೀಕರಿಸಲು ಮುಸ್ಲಿಂರು ಹಿಂದೂಗಳ ಜೊತೆ ಕೈ ಜೋಡಿಸಿದ್ದಾರೆ.

    ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ 40ಕ್ಕೂ ಹೆಚ್ಚು ಭಾರತೀಯ ಯೋಧರ ಹುತಾತ್ಮರಾಗಿದ್ದರು. ಆಗಿನಿಂದ ಪುಲ್ವಾಮಾ ಪ್ರದೇಶದಲ್ಲಿ ಉದ್ವಿಗ್ನ ಪರಿಸ್ಥತಿ ನಿರ್ಮಾಣವಾಗಿದೆ. ಅಲ್ಲದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮೇಲಿಂದ ಮೇಲೆ ನಡೆಯುತ್ತಲೇ ಇದೆ. ಆದ್ರೆ ಈ ನಡುವೆಯೂ ಮುಸ್ಲಿಂ ಬಾಂಧವರು ಹಿಂದೂಗಳ ಜೊತೆಗೂಡಿ ಪುರಾತನ ಶಿವ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ಏಕತೆಯನ್ನು ಮೆರೆದಿದ್ದಾರೆ.

    ಪುಲ್ವಾಮಾದಿಂದ ಕೇವಲ 15 ಕಿ.ಮೀ ದೂರದಲ್ಲಿರುವ ಬರೇಲಿಯಲ್ಲಿ 80 ವರ್ಷಗಳ ಹಳೆಯ ಹಿಂದೂ ದೇವಸ್ಥಾನವಿದೆ. ಇಲ್ಲಿರುವ ಕಾಶ್ಮೀರಿ ಪಂಡಿತ್ ಕುಟುಂಬಸ್ಥರ ಜೊತೆ ಸೇರಿ ಮುಸ್ಲಿಂ ಕುಟುಂಬವೊಂದು ದೇಗುಲದ ಮರು ನವೀಕರಣ ಕಾರ್ಯಕ್ಕೆ ಕೈಜೋಡಿಸಿದೆ. ಪುಲ್ವಾಮಾ ದಾಳಿ ಬಳಿಕ ಕಾಶ್ಮೀರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆದರಿಂದ ಈ ದೇಗುಲದ ನವೀಕರಣ ಕೆಲಸವನ್ನು ನಿಲ್ಲಿಸಲಾಗಿತ್ತು. ಆದ್ರೆ ಮಹಾಶಿವರಾತ್ರಿ ಮುಗಿದ ಮೇಲೆ ಮತ್ತೆ ದೇವಸ್ಥಾನದ ಕೆಲಸವನ್ನು ಆರಂಭಿಸಲಾಗಿದೆ.

    30 ವರ್ಷಗಳ ಹಿಂದೆ ಬರೇಲಿ ಪ್ರದೇಶದಲ್ಲಿ ಉಗ್ರರ ಹಾವಳಿ ಹೆಚ್ಚಾದ ಕಾರಣಕ್ಕೆ ಅನೇಕ ಹಿಂದೂ ಕುಟುಂಬಗಳು ಇಲ್ಲಿಂದ ಬೇರೆಡೆ ಸ್ಥಳಾಂತರಗೊಂಡಿದ್ದವು. ಆದರೆ ಕೆಲ ಹಿಂದೂ ಕಾಶ್ಮೀರಿ ಪಂಡಿತರು ಇಲ್ಲಿ ವಾಸವಾಗಿದ್ದಾರೆ. ಈ ಪ್ರದೇಶದಲ್ಲಿರುವ ಶಿವ ದೇವಾಲಯ ಪಾಳುಬಿದ್ದು ಹಾಳಾಗಿ ಹೋಗಿತ್ತು. ಆದರಿಂದ ಹಿಂದೂಗಳು ಈ ದೇವಾಲಯವನ್ನು ನವೀಕರಿಸಲು ನಿರ್ಧರಿಸಿದ್ದರು. ಆದ್ರೆ ಈ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಅವರು ಮುಸ್ಲಿಂ ಭಾಂದವರ ಸಹಾಯ ಕೇಳಿದ್ದಾರೆ. ದೇಗುಲದ ಪಕ್ಕದಲ್ಲೇ ಮಸೀದಿ ಇರುವ ಕಾರಣಕ್ಕೆ ಮುಸ್ಲಿಂ ಭಾಂದವರು ಕೂಡ ದೇವಾಲಯದ ನವೀಕರಣ ಕಾರ್ಯಕ್ಕೆ ಸಹಾಯ ಮಾಡುತ್ತಿದ್ದಾರೆ.

    ಈ ಕುರಿತು ಸ್ಥಳೀಯ ಮುಸಿಂ ಭಾಂದವರು ಮಾತನಾಡಿ, ಇಲ್ಲಿ ನಾವೆಲ್ಲರು ಸಹೋದರರಂತೆ ವಾಸಿಸುತ್ತಿದ್ದೇವೆ. ನಮ್ಮ ಮಧ್ಯೆ ಧರ್ಮದ ಬೇಧವಿಲ್ಲ. ನಾವು ನಮ್ಮ ದೇಗುಲಗಳನ್ನು ಹೇಗೆ ಗೌರವಿಸುತ್ತೇವೆ ಹಾಗೆಯೇ ಹಿಂದೂ ದೇಗುಲಗಳನ್ನು ಗೌರವದಿಂದ ಕಾಣುತ್ತೇವೆ. ಆದರಿಂದ ನಮ್ಮ ಹಿಂದೂ ಭಾಂದವರ ಜೊತೆಗೂಡಿ ಶಿವ ದೇವಾಲಯದ ನವೀಕರಣ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದೇವೆ. ಈ ಹಿಂದೆ ಯಾವ ರೀತಿ ದೇವಾಲಯದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವೋ ಅದೇ ರೀತಿ ಮುಂದಿನ ದಿನಗಳಲ್ಲೂ ನಡೆಯಬೇಕು ಎಂಬ ಉದ್ದೇಶದಿಂದ ಈ ಶಿವನ ದೇವಾಲಯ ಮರು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇನ್ಮುಂದೆ ಈ ಒಂದು ಸರ್ಟಿಫಿಕೇಟ್ ಇಲ್ಲವಾದ್ರೆ ನಿಮ್ಮ ವಾಹನದ ಇನ್ಶುರೆನ್ಸ್ ನವೀಕರಣ ಆಗಲ್ಲ

    ಇನ್ಮುಂದೆ ಈ ಒಂದು ಸರ್ಟಿಫಿಕೇಟ್ ಇಲ್ಲವಾದ್ರೆ ನಿಮ್ಮ ವಾಹನದ ಇನ್ಶುರೆನ್ಸ್ ನವೀಕರಣ ಆಗಲ್ಲ

    ನವದೆಹಲಿ: ಮಾಲಿನ್ಯವನ್ನ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇಂದು ಹಲವು ನಿರ್ದೇಶನಗಳನ್ನ ನೀಡಿದೆ. ವಾಹನ ಮಾಲೀಕರು ಪೊಲ್ಯೂಷನ್ ಅಂಡರ್ ಕಂಟ್ರೋಲ್(ಪಿಯುಸಿ) ಸರ್ಟಿಫಿಕೇಟ್ ನೀಡದಿದ್ರೆ ಇನ್ಶುರೆನ್ಸ್ ಕಂಪೆನಿಗಳು ಇನ್ಮುಂದೆ ಇನ್ಶುರೆನ್ಸ್ ನವೀಕರಣ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

    ರಾಷ್ಟ್ರ ರಾಜಧಾನಿಯ ಎಲ್ಲಾ ಪೆಟ್ರೋಲ್ ಬಂಕ್‍ಗಳಲ್ಲಿ ಪಿಯುಸಿ ಸೆಂಟರ್‍ಗಳು ಇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಾಧೀಶರಾದ ಮದನ್ ಬಿ ಲೊಕುರ್ ನೇತೃತ್ವದ ಪೀಠ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯುಕ್ಕೆ ಸೂಚಿಸಿದೆ.

    ರಾಷ್ಟ್ರರಾಜಧಾನಿಯಲ್ಲಿ ವಾಹನ ಸವಾರರು ಪಿಯುಸಿ ಸರ್ಟಿಫಿಕೇಟ್ ಹೊಂದಿರುವಂತೆ ಮಾಡಲು ಪಿಯುಸಿ ಸೆಂಟರ್‍ಗಳು ಕಾರ್ಯಗತವಾಗಿರುವಂತೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ಕೇಂದ್ರಕ್ಕೆ 4 ವಾರಗಳ ಗಡುವು ನೀಡಿದೆ.

    ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ ಸಲಹೆಯ ಮೇರೆಗೆ ಕೋರ್ಟ್ ಈ ಆದೇಶ ನೀಡಿದೆ. ಮಾಲಿನ್ಯಕ್ಕೆ ಸಂಬಂಧಿಸಿದಂತೆ ಪರಿಸರವಾದಿ ಎಂಸಿ ಮೆಹ್ತಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರರಣೆ ವೇಳೆ ಪೀಠ ಈ ಆದೇಶ ನೀಡಿದೆ.

  • ನಮ್ಮ ವಿಧಾನಸಭೆ ಸ್ಪೀಕರ್ ಸಿಕ್ಕಾಪಟ್ಟೆ ಕಾಸ್ಟ್ಲಿ: ಆ ಕಾಸ್ಟ್ಲಿ ವಸ್ತುಗಳ ಬೆಲೆ ಕೇಳಿದ್ರೆ ನಿಮ್ಗೆ ಶಾಕ್ ಆಗುತ್ತೆ!

    ನಮ್ಮ ವಿಧಾನಸಭೆ ಸ್ಪೀಕರ್ ಸಿಕ್ಕಾಪಟ್ಟೆ ಕಾಸ್ಟ್ಲಿ: ಆ ಕಾಸ್ಟ್ಲಿ ವಸ್ತುಗಳ ಬೆಲೆ ಕೇಳಿದ್ರೆ ನಿಮ್ಗೆ ಶಾಕ್ ಆಗುತ್ತೆ!

    ಬೆಂಗಳೂರು: ವಿಧಾನಸಭೆಯ ಸ್ಪೀಕರ್ ಕೋಳಿವಾಡ ಅವರು ವಿಧಾನ ಸೌಧದ ತಮ್ಮ ಕೊಠಡಿಯನ್ನ ನವೀಕರಣ ಬರೋಬ್ಬರಿ 75 ಲಕ್ಷ ರೂ. ವೆಚ್ಚದಲ್ಲಿ ನವೀಕರಣ ಮಾಡಿದ್ದಾರೆ.

    ಹೌದು. ಬರಗಾಲದಲ್ಲೂ ಇಂತಹ ಖರ್ಚುಬೇಕಿತ್ತಾ ಅಂತ ವಿರೋಧಗಳು ಬಂದಿದ್ದರೂ ತಮ್ಮ ನಿಲುವನ್ನು ಸ್ಪೀಕರ್ ಸಮರ್ಥನೆ ಮಾಡಿಕೊಂಡಿದ್ದರು. ಆದರೆ ಈಗ ನಮ್ಮ ಸ್ಪೀಕರ್ ಅವರು ನವೀಕರಣಕ್ಕೆ ಎಷ್ಟು ಹಣವನ್ನು ಖರ್ಚು ಮಾಡಿದ್ದಾರೆ ಎನ್ನುವುವುದು ಮಾಹಿತಿ ಹಕ್ಕಿನ ಅಡಿ ಬೆಳಕಿಗೆ ಬಂದಿದೆ.

    ಸುಮಾರು 75. ಲಕ್ಷ ರೂ. ವೆಚ್ಚದಲ್ಲಿ ನಡೆದ ನವೀಕರಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೈಟೆಕ್ ವಸ್ತುಗಳನ್ನ ಸ್ಪೀಕರ್ ಕೊಠಡಿಗೆ ಹಾಕಲಾಗಿದೆ.

    ಯಾವುದಕ್ಕೆ ಎಷ್ಟು ವೆಚ್ಚ?
    * ಸ್ಪೀಕರ್ ಕುಳಿತುಕೊಳ್ಳೊಕೆ ಸಿಂಗಲ್ ಲೆದರ್ ಛೇರ್ – 1.5 ಲಕ್ಷ ರೂ.
    * ತ್ರಿಬಲ್ ಸೋಫಾ ಸೆಟ್ – 4 ಲಕ್ಷ. ರೂ.
    * ಸ್ಪೀಕರ್ ರೂಂ ನಲ್ಲಿ ಕಾಫಿ ಕುಡಿಯೋ ಟೇಬಲ್ – 35 ಸಾವಿರ ರೂ.
    * ಸ್ಪೀಕರ್ ಮೀಟಿಂಗ್ ಮಾಡೋಕೆ ಬಳಸೊ ಟೇಬಲ್ ಗೆ – 5 ಲಕ್ಷ ರೂ., ವಿಸಿಟರ್ ಚೇರ್ ಗೆ 4.5 ಲಕ್ಷ ರೂ.
    * ಬುಕ್ ಸ್ಟೋರ್ ಮಾಡೋಕೆ ಬುಕ್ ಸ್ಟೋರೇಜ್ ಗೆ 2.5 ಲಕ್ಷ. ರೂ.
    * ಡಬಲ್ ಕಾಟ್ ಮ್ಯಾಟ್ರಸ್ ಗೆ -1.75 ಲಕ್ಷ. ರೂ.
    * ಸೈಡ್ ಟೇಬಲ್, ಎಕ್ಸಿಕ್ಯೂಟೀವ್ ಟೇಬಲ್, ವಿವಿಧ ಮಾದರಿಯ ಟೇಬಲ್ ಗೆ 5 ಲಕ್ಷ ರೂ.

    ಗುತ್ತಿಗೆಯಲ್ಲಿ ಅಕ್ರಮದ ವಾಸನೆ: ಸ್ಪೀಕರ್ ಕೋಳಿವಾಡರ ಕಾಸ್ಟ್ಲಿ ದುನಿಯಾ ಒಂದು ಕಡೆಯಾದ್ರೆ ಮತ್ತೊಂದು ಕಡೆ ಈ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಅಕ್ರಮ ಅಂತಾ ಲೋಕೋಪಯೋಗಿ ಇಲಾಖೆಯನ್ನ ಬಿಟ್ಟು ಸ್ವತಃ ಸ್ಪೀಕರ್ ಕಚೇರಿಯವರೇ ಟೆಂಡರ್ ಕರೆದಿದ್ರು. ಗುತ್ತಿಗೆಯನ್ನ ರಿಯಾಜ್ ಅಹಮದ್ ಅನ್ನೋರಿಗೆ ನೀಡಲಾಗಿತ್ತು.

    ಅಸಲಿಗೆ ಈ ರಿಯಾಜ್ ಅಹಮದ್ ಕೇವಲ ಎಲೆಕ್ಟ್ರಿಕಲ್ ಗುತ್ತಿಗೆದಾರರಾಗಿದ್ದಾರೆ. ನಿಯಮದ ಪ್ರಕಾರ ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ಗೆ ಸಿವಿಲ್ ಕಾಮಗಾರಿ ನಿಡುವ ಹಾಗಿಲ್ಲ. ಆದ್ರೆ ಶಾಸಕರ ಭವನದ ಅಧಿಕಾರಿ ಮೊಹಮದ್ ಗೌಸ್ ಅನ್ನೋರ ಸಂಬಂಧಿ ಆಗಿರೋದ್ರೀಂದ ನಿಯಮ ಮೀರಿ ಗುತ್ತಿಗೆ ನೀಡಿದ್ದಾರೆ ಅನ್ನೋ ದೊಡ್ಡ ಆರೋಪವೊಂದು ಕೇಳಿ ಬಂದಿದೆ.

    ದುಂದು ವೆಚ್ವ ಹಾಗೂ ನಿಯಮ ಮೀರಿ ಗುತ್ತಿಗೆ ನೀಡಿರುವ ಕುರಿತು ತನಿಖೆಗೆ ಒತ್ತಾಯಿಸಿ ಸರ್ಕಾರದ ಮುಖ್ಯಕಾರ್ಯದರ್ಶಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಮರಿ ಲಿಂಗೇಗೌಡ ಮಾಲೀಪಾಟೀಲ್ ದೂರು ನೀಡಿದ್ದಾರೆ. ಸರ್ಕಾರ ಏನ್ ಕ್ರಮ ತೆಗೆದುಕೊಳ್ಳುತ್ತೋ ನೋಡೋಣ.

  • ವಿಧಾನಸಭೆ ಸಭಾಂಗಣ ನವೀಕರಣದಲ್ಲೂ ಅಕ್ರಮ?

    ವಿಧಾನಸಭೆ ಸಭಾಂಗಣ ನವೀಕರಣದಲ್ಲೂ ಅಕ್ರಮ?

    ಬೆಂಗಳೂರು: ವಿಧಾನಸಭೆಯ ಸಭಾಂಗಣ ನವೀಕರಣಕ್ಕೆ ಕೋಟಿ ಕೋಟಿ ಹಣ ಖರ್ಚು ಮಾಡಿದ್ದಾರೆ ಅನ್ನೋದು ಹಳೇ ಸುದ್ದಿ. ಆದ್ರೆ ಈಗ ಸಭಾಂಗಣಕ್ಕೆ ಖರ್ಚು ಮಾಡಿರೋ ಕೋಟಿ ಕೋಟಿ ಹಣದಲ್ಲೂ ಅಕ್ರಮ ಆಗಿದೆ ಅನ್ನೋ ಅನುಮಾನ ಮೂಡಿದೆ.

    2011-12ನೇ ಸಾಲಿನಲ್ಲಿ ವಿಧಾನಸಭೆಯ ಸಭಾಂಗಣದ 1 ಹಾಗೂ 2ನೇ ಮಹಡಿಯ ನವೀಕರಣಕ್ಕೆ ಸರ್ಕಾರ ಸುಮಾರು 15 ಕೋಟಿ ರೂ. ಹಣ ಖರ್ಚು ಮಾಡಲಾಗಿದೆ. ಆದ್ರೆ, ಕಾಮಗಾರಿ ನಡೆದು 4 ವರ್ಷದ ನಂತರ ಅಕ್ರಮದ ನಡೆದಿರೋ ಬಗ್ಗೆ ಅನುಮಾನ ಹುಟ್ಟಿದೆ. ಲೋಕೋಪಯೋಗಿ ಇಲಾಖೆಯ ದಾಖಲಾತಿಗಳು ಇದರ ಇಂಚಿಂಚು ಮಾಹಿತಿಯನ್ನ ಬಿಚ್ಚಿಟ್ಟಿದೆ.

    ಕಾಮಗಾರಿಗೆ ವಿರೋಧಿಸಿದ್ದವರೇ ಗ್ರೀನ್ ಸಿಗ್ನಲ್ ಕೊಟ್ರು!: ಅಂದಿನ ಸ್ಪೀಕರ್ ಕೆ.ಜಿ ಬೋಪಯ್ಯ ಕಾಮಗಾರಿಯ ಮೊತ್ತಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ರು. ಆದಾಗ್ಯೂ ನಿಗದಿಪಡಿಸಿದ್ದಕ್ಕಿಂತ ಹೆಚ್ಚುವರಿ 2 ಕೋಟಿ ಹಣದ ಜೊತೆ ಕಾಮಗಾರಿ ಪಾಸ್ ಆಗಿರೋದೇ ಈ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

    ಶಾಸಕರ ಕುರ್ಚಿ, ಲೆದರ್ ಸೋಫಾ ಸೆಟ್, ಟೇಬಲ್ ಟೀಪಾಯಿ, ಎಲ್‍ಇಡಿ ಡಿಸ್ಪ್ಲೇ, ಧ್ವನಿವರ್ಧಕ, ಲೈಂಟಿಂಗ್ಸ್ ಸೇರಿದಂತೆ ವಿವಿಧ ಕಾಮಗಾರಿ ನಡೆಸಲು 2010ರಲ್ಲಿ ಅಂದಿನ ಸ್ಪೀಕರ್ ನಿರ್ಧಾರ ಮಾಡಿದ್ರು. ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆ ಹಾಗೂ ಸರ್ಕಾರದ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ರಿಪೋರ್ಟ್ ರೆಡಿ ಮಾಡಿಸಿದ್ರು. ಮೊದಲ ರಿಪೋರ್ಟ್‍ನಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಿವಿಲ್ ವರ್ಕ್‍ಗಾಗಿ 3 ಕೋಟಿ ರೂ., ವಿದ್ಯುತ್ ಕಾಮಗಾರಿಗೆ 8 ಕೋಟಿ ರೂ. ಅಂದಾಜು ನೀಡಿದ್ರು. ಸಮಿತಿಯ ಸಭೆ ಸೇರುವ ಹೊತ್ತಿಗೆ ಈ ಮೊತ್ತವನ್ನ 5.90 ಕೋಟಿ ಹಾಗೂ 9.18 ಕೋಟಿಗೆ ಹೆಚ್ಚಳ ಮಾಡಲಾಗಿತ್ತು. ಸಭೆಯಲ್ಲಿ ಸ್ವತಃ ಸ್ಪೀಕರ್ ಇದಕ್ಕೆ ವಿರೋಧ ವ್ಯಕ್ತಪಡಿಸಿ ಮತ್ತೆ ಎಸ್ಟಿಮೇಟ್ ಮಾಡಲು ತಿಳಿಸಿದ್ರು. ಅಧಿಕಾರಿಗಳು ಸಿವಿಲ್ ಕಾಮಗಾರಿಯಲ್ಲಿ 1 ಕೋಟಿ ರೂ. ಕಡಿಮೆ ಮಾಡಿ ವಿದ್ಯುತ್ ಕಾಮಗಾರಿಯಲ್ಲಿ 2 ಕೋಟಿ ರೂ. ಹೆಚ್ಚಳ ಮಾಡಿ ಒಟ್ಟಾರೆ 15 ಕೋಟಿ ರೂ.ಗೆ ಎಸ್ಟಿಮೇಟ್ ಕೊಟ್ರು. ಮೊದಲ ಸಭೆಯಲ್ಲಿ ವಿರೋಧಿಸಿದ್ದ ಸ್ಪೀಕರ್ ಎರಡನೇ ಸಭೆಯಲ್ಲಿ ಮರು ಮಾತಾಡದೆ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಂದ್ರೆ ಬರೋಬ್ಬರಿ 3 ಕೋಟಿ ರೂ. ಹೆಚ್ಚುವರಿ ಎಸ್ಟಿಮೇಟ್ ನೀಡಿದ್ದಾರೆ. ಹೆಚ್ಚಳಕ್ಕೆ ಕಾರಣ ಡಾಲರ್ ಬೆಲೆ ಹೆಚ್ಚಳ ಅನ್ನೋದು ಅಧಿಕಾರಿಗಳ ಮಾತು.

    ಟೆಂಡರ್ ಕಾಮಗಾರಿಯಲ್ಲೂ ಅವ್ಯವಹಾರ?: ಕಾಮಗಾರಿ ಮೊತ್ತ ಹೆಚ್ಚಿಸಿದ್ದು ಒಂದು ಕಡೆಯಾದ್ರೆ ಟೆಂಡರ್ ಪ್ರಕ್ರಿಯೆಯೇ ಅಕ್ರಮವಾಗಿ ನಡೆದಿದೆ ಅನ್ನೋ ಅನುಮಾನ ಕೂಡಾ ವ್ಯಕ್ತವಾಗಿದೆ. ಯಾರು ಟೆಂಡರ್ ಪ್ರಕ್ರಿಯಲ್ಲಿ ಭಾಗವಹಿಸಿದ್ರು? ಪ್ರಕ್ರಿಯೆ ನಡೆದಿದ್ದು ಹೇಗೆ ಅನ್ನೋ ಮಾಹಿತಿಯನ್ನ ಆರ್‍ಟಿಐನಲ್ಲಿ ಕೇಳಿದ್ರೆ ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲೀ ಪಾಟೀಲ್ ಹೇಳಿದ್ದಾರೆ.

    ಅಗ್ರಿಮೆಂಟ್ ಪ್ರಕಾರ ವಿದೇಶದಿಂದ ತರಿಸಿದ ಮೆಟೀರಿಯಲ್‍ಗಳನ್ನ ಹಾಕಬೇಕಿತ್ತು. ಆದ್ರೆ ವಿದೇಶಿ ವಸ್ತುಗಳನ್ನ ಬಳಸಿಲ್ಲ ಅನ್ನೋ ಆರೋಪಗಳು ಕೇಳಿ ಬರುತ್ತಿದೆ. ಪತ್ರಕರ್ತರ ಗ್ಯಾಲರಿಯಲ್ಲಿ ಹೈ ಟೆಕ್ನಾಲಜಿಯ ಎಲ್‍ಸಿಡಿ ಬೋರ್ಡ್, ದೊಡ್ಡ ಎಲ್‍ಸಿಡಿ ಪರದೆ ಅಳವಡಿಕೆಯಾಗಿಲ್ಲ. ಹೀಗಾಗಿ 15 ಕೋಟಿ ರೂ. ಕಾಮಗಾರಿಯಲ್ಲಿ ಅಕ್ರಮಗಳು ನಡೆದಿರೋ ಬಗ್ಗೆ ಸಾಕಷ್ಟು ಅನುಮಾನ ಮೂಡಿಸಿದೆ.