Tag: ನವಜೋಡಿ

  • ಯೋಧ ಗುರು ಕುಟುಂಬಕ್ಕೆ ನೆರವಾಗಲು ನವಜೋಡಿಗಳಿಂದ ವಿಶೇಷ ಕಾರ್ಯ

    ಯೋಧ ಗುರು ಕುಟುಂಬಕ್ಕೆ ನೆರವಾಗಲು ನವಜೋಡಿಗಳಿಂದ ವಿಶೇಷ ಕಾರ್ಯ

    ಹುಬ್ಬಳ್ಳಿ: ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ನೆರವು ನೀಡಲು ಹಲವರು ಮುಂದೆ ಬಂದಿದ್ದು, ಹುಬ್ಬಳ್ಳಿಯ ನವಜೋಡಿಯೊಂದು ತಮ್ಮ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಿ ಬಂದ ಆತಿಥಿಗಳಿಂದ ದೇಣಿಗೆ ಸಂಗ್ರಹ ಮಾಡಿದೆ.

    ಹುಬ್ಬಳ್ಳಿಯ ಕೃಷ್ಣ ಇರಕಲ್ ಹಾಗು ಕೀರ್ತಿ ಇರಕಲ್ ಜೋಡಿ ನಿಶ್ಚಿತಾರ್ಥ ಸಮಾರಂಭದಲ್ಲಿ ನೃತ್ಯ ಮಾಡಿ ದೇಣಿಗೆ ಸಂಗ್ರಹ ಮಾಡಿದ್ದು, ಹುತಾತ್ಮ ಯೋಧರಿಗೆ ತಮ್ಮ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಅರ್ಪಣೆ ಮಾಡಿದ್ದಾರೆ.

    ಯುವ ಜೋಡಿಯ ಕಾರ್ಯಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಮ್ಮ ಕೈಲಾದ ಸಹಾಯ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ದೇಶ ಭಕ್ತಿಗೀತೆಗೆ ನವ ಜೋಡಿ ಸೇರಿದಂತೆ ಯುವಕರ ಗುಂಪು ಡಾನ್ಸ್ ಮಾಡಿದೆ. ಸೋಮವಾರ ನಿಶ್ವಿತಾರ್ಥ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ನೇರವಾಗಿ ಹುತಾತ್ಮ ಯೋಧ ಗುರು ಅವರ ಕುಟುಂಬದ ಬ್ಯಾಂಕ್ ಖಾತೆಗೆ ಜಮೆ ಮಾಡುವುದಾಗಿ ನವಜೋಡಿ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹುತಾತ್ಮರಾದ ಯೋಧರಿಗೆ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ನವಜೋಡಿ!

    ಹುತಾತ್ಮರಾದ ಯೋಧರಿಗೆ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ನವಜೋಡಿ!

    ಗಾಂಧಿನಗರ: ಗುಜರಾತಿನ ನವಜೋಡಿಯೊಂದು ತಮ್ಮ ಮದುವೆ ಮೆರವಣಿಗೆ ವೇಳೆ ಪುಲ್ವಾಮ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿದ್ದಾರೆ.

    ಮದುವೆಯಾಗಿ ಕೇವಲ ಒಂದು ಗಂಟೆ ಸಮಯವಾಗಿದೆ ಅಷ್ಟೇ, ಆದ್ರೆ ತಮ್ಮ ಮದುವೆ ಸಂಭ್ರಮವನ್ನು ಆಚರಿಸುವ ಬದಲಾಗಿ ತಮ್ಮ ಮದುವೆ ಮೆರವಣಿಗೆ ವೇಳೆ ಹುತಾತ್ಮ ಯೋಧರ ಭಾವಚಿತ್ರವನ್ನು ಹಿಡಿದು ಗೌರವ ಸಲ್ಲಿಸಿದ್ದಾರೆ. ನವಜೋಡಿಗಳ ಈ ನಿರ್ಧಾರಕ್ಕೆ ಅವರ ಕುಟುಂಬಸ್ಥರು ಹಾಗೂ ಬಂಧು-ಮಿತ್ರರು ಕೂಡ ಸಾಥ್ ಕೊಟ್ಟು ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪುತ್ರಿ ಮದುವೆ ಊಟ ರದ್ದು ಮಾಡಿ 11 ಲಕ್ಷ ರೂ. ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದ ಉದ್ಯಮಿ

    ಮೆರವಣಿಗೆಯ ಉದ್ದಕ್ಕೂ ಯೋಧರಿಗೆ ಜೈಕಾರ ಹಾಕುತ್ತ ಉಗ್ರರ ವಿರುದ್ಧ ಘೋಷಣೆ ಕೂಗುತ್ತ ಆಕ್ರೋಶ ಹೊರಹಾಕಿದ್ದಾರೆ. ಹಾಗೆಯೇ ರಾಷ್ಟ್ರ ಧ್ವಜವನ್ನು ಹಿಡಿದು ಭಾರತದಲ್ಲಿ ಕೇವಲ 1427 ಹುಲಿಗಳಿಲ್ಲ, ಗಡಿಯಲ್ಲಿ 13 ಲಕ್ಷ ಹುಲಿಗಳು ದೇಶ ಕಾಯುತ್ತಿದ್ದಾರೆ ಎಂದು ಸಂದೇಶ ಸಾರಿದ್ದಾರೆ.

    ಕುದುರೆ ರಥದಲ್ಲಿ ನವಜೋಡಿಗಳು ಸಾಗುತ್ತಿದ್ದರೆ, ಅವರ ಮುಂದೆ ನೂರಾರು ಮಂದಿ ಭಾರತದ ಧ್ವಜವನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅದರಲ್ಲೂ ಪುಟ್ಟ ಪುಟ್ಟ ಮಕ್ಕಳು ಧ್ವಜವನ್ನು ಹಿಡಿದು ಯೋಧರಿಗೆ ಜೈಕಾರ ಹಾಕಿದರೆ ಇನ್ನು ಕೆಲವರು ಸೈನಿಕರ ವೇಷಭೂಷಣ ಧರಿಸಿ ಮೆರೆವಣಿಗೆಯಲ್ಲಿ ಸಾಗುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯಲ್ಲಿ 7ರ ಬದಲು 9 ಸಪ್ತಪದಿ ತುಳಿದ ನವಜೋಡಿ- ಕಾರಣವೇನು ಗೊತ್ತಾ?

    ಮದ್ವೆಯಲ್ಲಿ 7ರ ಬದಲು 9 ಸಪ್ತಪದಿ ತುಳಿದ ನವಜೋಡಿ- ಕಾರಣವೇನು ಗೊತ್ತಾ?

    ಚಂಡಿಗಡ: ಹರ್ಯಾಣದ ನವಜೋಡಿಯೊಂದು ತಮ್ಮ ಮದುವೆಯಲ್ಲಿ 7 ಸಪ್ತಪದಿ ಬದಲು 9 ಸಪ್ತಪಡಿ ತುಳಿದು ಒಬ್ಬರಿಗೊಬ್ಬರು ಹೊಸ ಭರವಸೆಯನ್ನು ಮಾಡಿಕೊಂಡರು.

    ಸಂದೀಪ್ ಹಾಗೂ ದೀಪಿಕಾ ಇಬ್ಬರು ಸಿವಾನಿ ಮಂಡಿಯಲ್ಲಿ ಮದುವೆಯಾಗಿದ್ದಾರೆ. ಉಪಮಂಡಲ್ ಗ್ರಾಮದ ಸಂದೀಪ್ ಚೌವ್ಹಾನ್ ಸಮಾಜಿಕ ಕಾರ್ಯಕರ್ತರಾಗಿದ್ದು, ತಮ್ಮ ಮದುವೆಯಲ್ಲಿ ಒಂಭತ್ತು ಸಪ್ತಪದಿ ತುಳಿದು ಎಲ್ಲರಿಗೂ ಮಾದರಿಯಾಗಿದ್ದಾರೆ.

    ಸಂದೀಪ್ ಪರಿಸರವನ್ನು ರಕ್ಷಿಸಲು ಗಿಡಗಳನ್ನು ಬೆಳೆಸುತ್ತೇವೆಂದು ತನ್ನ ಜೀವನ ಸಂಗಾತಿ ದೀಪಿಕಾ ಅವರ ಜೊತೆ 8ನೇ ಸಪ್ತಪದಿ ತುಳಿದರು. ಬಳಿಕ ‘ಭೇಟಿ ಬಜಾವ್, ಭೇಟಿ ಪಡಾವ್’ ಸಂಕಲ್ಪ ಮಾಡಿ ಒಂಭತ್ತನೇ ಸಪ್ತಪದಿ ತುಳಿದಿದ್ದಾರೆ. ಪುರೋಹಿತರು ಅಗ್ನಿಯನ್ನು ಸಾಕ್ಷಿಯನ್ನಾಗಿ ಮಾಡಿ ನವಜೋಡಿಯನ್ನು ಏಳರ ಬದಲು ಒಂಭತ್ತು ಸಪ್ತಪದಿ ತುಳಿಯಲು ಅವಕಾಶ ಕೊಟ್ಟರು. ಸಂದೀಪ್ ಹಾಗೂ ದೀಪಿಕಾ ಅವರ ಈ ವಿಶೇಷ ಮದುವೆ ಈಗ ಆ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ.

    ಸಂದೀಪ್ ಹಾಗೂ ದೀಪಿಕಾ ಮದುವೆಯಾಗಿ ಮನೆಗೆ ಹೋದಾಗ ತಮ್ಮ ಗ್ರಾಮದಲ್ಲಿ ಗಿಡವೊಂದನ್ನು ನೆಟ್ಟಿದ್ದಾರೆ. ನಾವು ಮಾತ್ರ ಗಿಡ ನೆಡದೇ, ಎಲ್ಲರಿಗೂ ಗಿಡ ನೆಡೆಸಲು ಜಾಗೃತಿ ಮೂಡಿಸುತ್ತೇವೆ ಎಂದು ಸಂಕಲ್ಪ ಮಾಡಿದರು. ಅಲ್ಲದೇ ಭೇಟಿ ಪಡಾವ್, ಭೇಟಿ ಬಚಾವ್ ಅಭಿಯಾನದ ಬಗ್ಗೆ ಕೂಡ ಜಾಗೃತಿ ಮೂಡಿಸುವುದಾಗಿ ಸಂಕಲ್ಪ ಮಾಡಿದರು. ಎರಡು ಗ್ರಾಮದಲ್ಲೂ ಗಿಡವನ್ನು ನೆಟ್ಟು ಅದನ್ನು ನೋಡಿಕೊಳ್ಳುತ್ತೇವೆ ಹಾಗೂ ಹೆಣ್ಣುಮಕ್ಕಳ ಬಗ್ಗೆ ಸಾಕಾರಾತ್ಮಕ ಮನೋಭಾವವನ್ನು ಇರಿಸುವುದಾಗಿ ಭರವಸೆ ನೀಡಿದ್ದರು.

    ಸಂದೀಪ್ ಚೌಹ್ವಾನ್ ಅವರ ಮದುವೆ ಯಾವಾಗ ದೀಪಿಕಾ ಅವರ ಜೊತೆ ನಿಶ್ಚಾಯವಾಯಿತ್ತೋ ಆಗ ಅವರು ಮದುವೆ ಮಂಟಪದಲ್ಲಿ ಏಳರ ಬದಲು ಒಂಭತ್ತು ಸಪ್ತಪದಿ ತುಳಿಯಲು ನಿರ್ಧರಿಸಿದ್ದರು. ಸಂದೀಪ್ ಅವರ ಈ ನಿರ್ಧಾರಕ್ಕೆ ದೀಪಿಕಾ ಅವರು ಕೂಡ ಒಪ್ಪಿಗೆ ಸೂಚಿಸಿದ್ದರು. ಮದುವೆಯಲ್ಲಿ ಎಲ್ಲ ಶಾಸ್ತ್ರಗಳು ನಡೆಯುವಾಗ ಸಂದೀಪ್ ಅವರು ಇಚ್ಛಿಸಿದ್ದಂತೆ ಒಂಭತ್ತು ಸಪ್ತಪದಿ ತುಳಿದರು. ಒಂಭತ್ತು ಸಪ್ತಪದಿ ತುಳಿದು ಖುಷಿಯಾಗುತ್ತಿದೆ ಹಾಗೂ ನಮಗೆ ಮೊದಲು ಹೆಣ್ಣು ಮಗಳು ಆಗಲಿ ಎಂದು ಇಷ್ಟಪಡುತ್ತೇವೆ ಎಂದು ನವಜೋಡಿ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv