Tag: ನರಬಲಿ

  • 10ರ ಬಾಲಕನ ನರಬಲಿ – ಕುಟುಂಬದವರೇ ಕತ್ತು ಸೀಳಿ ಕೊಂದ್ರು

    10ರ ಬಾಲಕನ ನರಬಲಿ – ಕುಟುಂಬದವರೇ ಕತ್ತು ಸೀಳಿ ಕೊಂದ್ರು

    ಲಕ್ನೋ: 10 ವರ್ಷದ ಬಾಲಕನನ್ನು (Boy) ಕುಟುಂಬದವರೇ ನರಬಲಿ (Human Sacrifice) ನೀಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ. ಬಾಲಕನನ್ನು ನರಬಲಿ ನೀಡಿದ ಆರೋಪದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

    ಪಾರ್ಸಾ ಗ್ರಾಮದ ಕೃಷ್ಣ ವರ್ಮಾ ಅವರ ಪುತ್ರ ವಿವೇಕ್ ಗುರುವಾರ ರಾತ್ರಿ ನಾಪತ್ತೆಯಾಗಿದ್ದ. ಬಳಿಕ ಬಾಲಕನಿಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಆದರೆ ಅದೇ ದಿನ ರಾತ್ರಿ ಬಾಲಕ ಶವವಾಗಿ ಸಿಕ್ಕಿದ್ದ. ಗದ್ದೆಯಲ್ಲಿ ಬಾಲಕನ ಕತ್ತು ಸೀಳಿದ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸರು ತನಿಖೆ ವೇಳೆ ಬಾಲಕನ ಕುಟುಂಬದವರೇ ಆದ ಅನೂಪ್ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ಅನೂಪ್‌ಗೆ 2 ವರ್ಷದ ಮಗುವಿದ್ದು, ಆತ ಮಾನಸಿಕ ಅಸ್ವಸ್ಥನಾಗಿದ್ದ. ಆತನಿಗೆ ಯಾವುದೇ ಚಿಕಿತ್ಸೆ ಸಕಾರಾತ್ಮಕ ಫಲಿತಾಂಶ ನೀಡದಿದ್ದಾಗ ಅನೂಪ್ ವಾಮಾಚಾರದ ಮೊರೆ ಹೋಗಿದ್ದಾನೆ. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ 3 ದಿನ ಗುಡುಗು ಸಹಿತ ಮಳೆ ಸಾಧ್ಯತೆ

    ಅನೂಪ್‌ಗೆ ವ್ಯಕ್ತಿಯೊಬ್ಬ ನರಬಲಿ ನೀಡುವಂತೆ ಸಲಹೆ ನೀಡಿದ್ದ. ಅದರಂತೆಯೇ ಅನೂಪ್ ವಿವೇಕ್‌ನ ಚಿಕ್ಕಪ್ಪ ಚಿಂತಾರಾಮ್ ಜೊತೆಗೂಡಿ ಬಾಲಕನನ್ನು ಗುದ್ದಲಿಯಿಂದ ಹೊಡೆದು ಕೊಂದಿದ್ದಾರೆ. ಬಳಿಕ ಆರೋಪಿಗಳಾದ ಅನೂಪ್, ಚಿಂತಾರಾಮ್ ಹಾಗೂ ನರಬಲಿ ನೀಡಲು ಸಲಹೆ ನೀಡಿದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ಸಂಚಾರದ ವೇಳೆ ಭದ್ರತಾ ವೈಫಲ್ಯ – ವಾಹನಗಳನ್ನು ಬೆನ್ನಟ್ಟಿದ ಬೈಕರ್ಸ್

  • ಕೇರಳದಲ್ಲಿ ನರಬಲಿ ಕೇಸ್‌ – ಮಾಟ ಮಂತ್ರ ತಡೆಗೆ ಕಠಿಣ ಕಾನೂನು: ಕೇರಳ ಸರ್ಕಾರ ನಿರ್ಧಾರ

    ಕೇರಳದಲ್ಲಿ ನರಬಲಿ ಕೇಸ್‌ – ಮಾಟ ಮಂತ್ರ ತಡೆಗೆ ಕಠಿಣ ಕಾನೂನು: ಕೇರಳ ಸರ್ಕಾರ ನಿರ್ಧಾರ

    ತಿರುನಂತರಪುರಂ: ನರಬಲಿ (Human Sacrifice) ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಕೇರಳ ಸರ್ಕಾರ (Kerala Government) ಮಾಟ, ಮಂತ್ರಗಳ ತಡೆಗೆ ಕಠಿಣ ಕಾನೂನು ಜಾರಿಗೊಳಿಸಲು ನಿರ್ಧರಿಸಿದೆ.

    ಅಲ್ಲದೇ ಮಾಟ, ಮಂತ್ರಗಳ ತಡೆಗೆ ಪ್ರಸ್ತುತವಾಗಿರುವ ಕಾನೂನನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವ ಅವಶ್ಯಕತೆಯಿದೆ ಎಂದು ಆಡಳಿತಾರೂಢ ಪಕ್ಷ ಹೇಳಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಭಾರೀ ಮಳೆ, ಹಲವೆಡೆ ರಸ್ತೆ ಸಂಚಾರ ಬಂದ್

    ಗುರುವಾರವಷ್ಟೇ ನರಬಲಿಗೆ ಕಾರಣವಾಗಿದ್ದ ಮಂತ್ರವಾದಿಯನ್ನ ಕೋರ್ಟ್‌ (Court) ಒಪ್ಪಿಸಲಾಗಿದೆ. ಮಾಟ, ಮಂತ್ರಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದ ದಂಪತಿಯನ್ನ ಬಂಧಿಸಲಾಗಿದೆ.

    ಏನಿದು ನರಬಲಿ ಪ್ರಕರಣ?
    ಹಣಕ್ಕಾಗಿ ಇಬ್ಬರು ಮಹಿಳೆಯರನ್ನ ನರಬಲಿ ಕೊಟ್ಟಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ಪದ್ಮಾ (52) ಮತ್ತು ರೋಸ್ಲಿನ್ (50) ಮೃತ ಮಹಿಳೆಯರು. ಎರ್ಬಾಕುಲಂ ಜಿಲ್ಲೆಯ ಪ್ರತ್ಯೇಕ ಊರಿನವರಾಗಿದ್ದ ರೋಸ್ಲಿನ್ ಹಾಗೂ ಪದ್ಮಾರನ್ನು ಮಾಂತ್ರಿಕ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಸೇರಿ ಹೆಚ್ಚು ಹಣ ಗಳಿಸಲು ನರಬಲಿ ನೀಡಿದ್ದರು. ಇದಕ್ಕಾಗಿ ಶಿಹಾಬ್ ಎಂಬಾತನ ಸಹಾಯ ಪಡೆದು ಅವನಿಗೂ ಕೆಲ ಆಮಿಷವೊಡ್ಡಿ ನಂಬಿಸಿದ್ದರು. ಇವರು ಹೇಳಿದ್ದ ಆಮಿಷಕ್ಕೆ ಬಲಿಯಾದ ಶಿಹಾಬ್, ಪದ್ಮಾ ಹಾಗೂ ರೋಸ್ಲಿನ್ ಅನ್ನು ಅಪಹರಿಸಿದ್ದ. ಘಟನೆಗೆ ಸಂಬಂಧಿಸಿ ಸೆ. 26ರಂದು ಪ್ರಕರಣ (FIR) ದಾಖಲಾಗಿತ್ತು. ಇದನ್ನೂ ಓದಿ: ಕಾಂತಾರ: ಬಾಲಿವುಡ್‌ನಲ್ಲಿ ಧೂಳ್, ತಮಿಳಿನ ಟ್ರೇಲರ್‌ಗೂ ಸಖತ್ ರೆಸ್ಪಾನ್ಸ್

    ಈ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ದಂಪತಿ ಭಗವಲ್ ಸಿಂಗ್ ಮತ್ತು ಲೀಲಾ ಹಾಗೂ ಏಜೆಂಟ್ ಶಿಹಾಬ್‌ನನ್ನು ಪೊಲೀಸರು (Police) ಬಂಧಿಸಿದ್ದರು. ತನಿಖೆ ವೇಳೆ ಬಲಿಯಾದ ಮಹಿಳೆಯರ ದೇಹವು 56 ತುಂಡುಗಳಾಗಿದ್ದು, ನರಬಲಿಯ ಬಳಿಕ ನರಮಾಂಸವನ್ನೂ ಭಕ್ಷಣೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.

    Live Tv
    [brid partner=56869869 player=32851 video=960834 autoplay=true]

  • ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ

    ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ

    ತಿರುವನಂತಪುರಂ: ಕೇರಳದಲ್ಲಿ (Kerala) ನಡೆದ ನರಬಲಿ (Human Sacrifice) ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇಬ್ಬರು ಮಹಿಳೆಯರನ್ನು (Women) ಪಾಪಿಗಳು ನರಬಲಿ ನೀಡಿರದೇ ಅವರ ದೇಹಗಳನ್ನು ತುಂಡು ತುಂಡಾಗಿ ಕತ್ತರಿಸಿ, ಬೇಯಿಸಿ ಭಕ್ಷಿಸಿದ್ದಾರೆ (Cannibalism) ಎಂಬ ಆಘಾತಕಾರಿ ವಿಚಾರವನ್ನು ಪೊಲೀಸರು ತಿಳಿಸಿದ್ದಾರೆ.

    ನರಬಲಿ ಪ್ರಕರಣದಲ್ಲಿ ಪೊಲೀಸರಿಗೆ ಮೊದಲ ಸುಳಿವು ನೀಡಿದ್ದು, ಕೇರಳದ ಪತ್ತನಂತಿಟ್ಟದ ಸಿಸಿಟಿವಿ (CCTV) ದೃಶ್ಯಾವಳಿ. ವೀಡಿಯೋ ತುಣುಕಿನಲ್ಲಿ ಬಲಿಯಾದ ಪದ್ಮಾ ಘಟನೆಗೂ ಮೊದಲು ಸ್ಕಾರ್ಪಿಯೋವನ್ನು ಏರಿ ಎಲ್ಲಿಗೋ ಹೊರಟಿರುವುದು ಕಂಡುಬಂದಿದೆ. ಆಕೆಯ ಜೊತೆಗೆ ಇದ್ದ ವ್ಯಕ್ತಿ ಘಟನೆಯ ಪ್ರಮುಖ ಆರೋಪಿ ಮೊಹಮ್ಮದ್ ಶಾಫಿ ಎಂಬುದು ತಿಳಿದುಬಂದಿದೆ.

    ಈ ಪ್ರಕರಣದ ಆರೋಪಿಗಳನ್ನು ಜಾಡು ಹಿಡಿಯಲು ಪೊಲೀಸರು ಮೊದಲಿಗೆ ಪದ್ಮಾ ಅವರ ಮೊಬೈಲ್ ಅನ್ನು ಟ್ರ್ಯಾಕ್ ಮಾಡಿದ್ದಾರೆ. ಬಳಿಕ ಆರೋಪಿಗಳ ನೆರೆಮನೆಯವರ ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆ ಹಾಕಿ, ಆರೋಪಿಗಳನ್ನು ಹಿಡಿಯುವಲ್ಲಿ ಸಫಲರಾದರು ಎಂದು ಪೊಲೀಸರು ತಿಳಿಸಿದ್ದಾರೆ.

    ಶೀಘ್ರವೇ ಶ್ರೀಮಂತರಾಗುತ್ತೀರಿ ಎಂದು ನಂಬಿಸಿದ ಶಾಫಿ, ದಂಪತಿಯಾದ ಭಗವಲ್ ಸಿಂಗ್ ಹಾಗೂ ಪತ್ನಿ ಲೈಲಾಗೆ ನರಬಲಿ ನೀಡುವಂತೆ ಸಲಹೆ ನೀಡಿದ್ದ. ಅದರಂತೆಯೇ ದಂಪತಿ ಪದ್ಮಾ ಹಾಗೂ ರೋಸ್ಲಿನ್ ರನ್ನು ಬಲಿ ನೀಡಲು ಕೈಜೋಡಿಸಿದ್ದಾರೆ.

    ವರದಿಗಳ ಪ್ರಕಾರ, ಪದ್ಮಾ ಸೆಪ್ಟೆಂಬರ್ 26ರಂದು ನಾಪತ್ತೆಯಾಗಿದ್ದರು. ಅಕ್ಟೋಬರ್ 9ರಂದು ಪೊಲೀಸರು ಆ ದಿನದ ಸಿಸಿಟಿವಿ ದೃಶ್ಯಾವಳಿಯನ್ನು ಜೋಸ್ ಥಾಮಸ್ ಎಂಬವರ ಮನೆಯಿಂದ ಪಡೆದಿದ್ದಾರೆ. ಸಿಸಿಟಿವಿ ದೃಶ್ಯದಲ್ಲಿ ರಸ್ತೆ ಬದಿಯಲ್ಲಿ ಸ್ಕಾರ್ಪಿಯೋ ಕಾರು ಹಾಗೂ ಪದ್ಮಾ ಆರೋಪಿಗಳ ಮನೆಯೊಳಗೆ ಹೋಗುವುದು ಕಂಡುಬಂದಿದೆ.

    ಈ ಎಲ್ಲಾ ಸಾಕ್ಷಿಗಳನ್ನು ಬಳಸಿ ಪೊಲೀಸರು ಆರೋಪಿ ದಂಪತಿಯ ಮನೆಯಲ್ಲಿ ಶೋಧ ನಡೆಸಿದಾಗ ಅಲ್ಲಿ ನಡೆದಿದ್ದ ಭಯಾನಕ ಸತ್ಯ ಹೊರ ಬಿದ್ದಿದೆ. ಆರೋಪಿಗಳು ಮಹಿಳೆಯರ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ, ಅವಶೇಷಗಳನ್ನು ತಮ್ಮದೇ ಮನೆಯ ತೋಟದಲ್ಲಿ 3 ಗುಂಡಿಗಳಲ್ಲಿ ಹೂತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ

    ಆರೋಪಿಗಳು ಪದ್ಮಾ ಅವರಿಗೆ ಚಾಕುವಿನಿಂದ ಚಿತ್ರಹಿಂಸೆ ನೀಡಿ, ಕತ್ತು ಹಿಸುಕಿ ಕೊಲೆ ಮಾಡಿದ್ದು ಮಾತ್ರವಲ್ಲದೇ ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಿ ಹೂತಿದ್ದಾರೆ. ರೋಸ್ಲಿನ್‌ಗೂ ಚಿತ್ರಹಿಂಸೆ ನೀಡಿ, ಖಾಸಗಿ ಭಾಗಕ್ಕೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವುದು ತಿಳಿದುಬಂದಿದೆ. ವಿಚಾರಣೆ ವೇಳೆ ಕೊಲೆ ನಡೆಸಿರುವುದನ್ನು ಆರೋಪಿ ಭಗವಲ್ ಸಿಂಗ್ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಹಂತಕರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಾಫಿ ಈ ಹಿಂದೆ 75 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರಿದ್ದ. 2020ರಲ್ಲಿ ಆತ ಜಾಮೀನಿನ ಮೇಲೆ ಹೊರ ಬಂದಿದ್ದ ಎನ್ನಲಾಗಿದೆ. ಆತ ಇಂತಹ ಕ್ರೌರ್ಯಗಳನ್ನು ನಡೆಸುವಲ್ಲಿ ಆನಂದ ಪಡುತ್ತಿದ್ದ ಎನ್ನಲಾಗಿದ್ದು, ವಿಕೃತ ಮನಸ್ಥಿತಿಯ ವ್ಯಕ್ತಿ ಎಂದು ಪೊಲೀಸರು ಹೆಸರಿಸಿದ್ದಾರೆ. ಇದನ್ನೂ ಓದಿ: ಬಲವಂತವಾಗಿ ಮಂಗಳಮುಖಿಯ ಮುಂದೆಲೆ ಕತ್ತರಿಸಿ ಹಲ್ಲೆ – ಇಬ್ಬರು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ

    ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ

    ತಿರುವನಂತಪುರಂ: ಆದಷ್ಟು ಬೇಗ ಹಣ ಗಳಿಸುವ ಆಸೆಯಿಂದ ಕೇರಳದ (Kerala) ದಂಪತಿ (Couple) ಇಬ್ಬರು ಮಹಿಳೆಯರನ್ನು (Women) ನರಬಲಿ (Human Sacrifice) ನೀಡಿರುವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಹಿಳೆಯರ ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಿದ್ದು ಮಾತ್ರವಲ್ಲದೇ ದುರುಳರು ನರಮಾಂಸ ಭಕ್ಷಣೆ (Cannibalism) ಮಾಡಿರುವ ಶಂಕೆಯೂ ಮೂಡಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

    ನರಬಲಿಯಾದ ರೋಸ್ಲಿನ್ ಹಾಗೂ ಪದ್ಮಾ ಅವರನ್ನು ಕತ್ತು ಹಿಸುಕಿ ಸಾಯಿಸುವುದಕ್ಕೂ ಮೊದಲು ಅವರಿಗೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ. ಮಹಿಳೆಯರ ಸ್ತನಗಳನ್ನು ಕತ್ತರಿಸಿ, ರಕ್ತ ಹರಿಯುವಂತೆ ಮಾಡಲಾಗಿದ್ದು, ಬಳಿಕ ಒಂದು ದೇಹವನ್ನು 56 ತುಂಡುಗಳನ್ನಾಗಿ ಕತ್ತರಿಸಲಾಗಿದೆ. ಮಹಿಳೆಯರ ದೇಹದ ಭಾಗಗಳು ಒಟ್ಟು 3 ಹೊಂಡಗಳಲ್ಲಿ ಪತ್ತೆಯಾಗಿರುವುದಾಗಿ ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

    ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾಫಿ 2020ರಲ್ಲಿ 75 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿದ್ದ. ಬಳಿಕ ಆತ ದಂಪತಿ ಭಗವಲ್ ಸಿಂಗ್ ಹಾಗೂ ಲೈಲಾಗೆ ಬೇಗನೆ ಹಣ ಗಳಿಸಲು ನರಬಲಿ ನೀಡುವಂತೆ ಸಲಹೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಣಗಳಿಸಲು ಇಬ್ಬರು ಮಹಿಳೆಯರ ನರಬಲಿ ಕೊಟ್ಟ ಪಾಪಿಗಳು

    ಶಫಿ ಸಾಮಾಜಿಕ ಮಾಧ್ಯಮಗಳಲ್ಲಿ ರೋಸ್ಲಿನ್ ಹಾಗೂ ಪದ್ಮಾರನ್ನು ಸಂಪರ್ಕಿಸಿ, ಅಶ್ಲೀಲ ಚಿತ್ರದಲ್ಲಿ ನಟಿಸಲು ಹಣದ ಆಮಿಷ ಒಡ್ಡಿದ್ದ ಎಂದು ಶಂಕಿಸಲಾಗಿದೆ. ನರಬಲಿ ವೇಳೆ ಶಫಿ ಪದ್ಮಾಳ ಕತ್ತು ಹಿಸುಕಿ, ಶಿರಚ್ಛೇದ ಮಾಡಿ ಆಕೆಯ ದೇಹವನ್ನು 56 ತುಂಡುಗಳಾಗಿ ಕತ್ತರಿಸಿದ್ದಾನೆ ಎಂದು ಹೇಳಿದ್ದಾರೆ.

    ಆರೋಪಿ ಲೈಲಾ ರೋಸೆಲಿನ್‌ಳ ಕತ್ತು ಹಿಸುಕಿ, ಆಕೆಯ ಸ್ತನಗಳನ್ನು ಕತ್ತರಿಸಿದ್ದಾಳೆ. ಆಕೆಗೆ ಚಾಕುವಿನಿಂದ ಚಿತ್ರಹಿಂಸೆ ನೀಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್‌ ವಿವಾದ – ಗುರುವಾರ ಸುಪ್ರೀಂ ತೀರ್ಪು ಪ್ರಕಟ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ಹಣಗಳಿಸಲು ಇಬ್ಬರು ಮಹಿಳೆಯರ ನರಬಲಿ ಕೊಟ್ಟ ಪಾಪಿಗಳು

    ಹಣಗಳಿಸಲು ಇಬ್ಬರು ಮಹಿಳೆಯರ ನರಬಲಿ ಕೊಟ್ಟ ಪಾಪಿಗಳು

    ತಿರುವನಂತಪುರಂ: ನಾಪತ್ತೆಯಾಗಿದ್ದ ಮಹಿಳೆಯರಿಬ್ಬರು ಕತ್ತು ಸೀಳಿ ದೇಹಗಳ ಭಾಗವೆಲ್ಲವೂ ಬೇರೆ ಬೇರೆಯಾಗಿ ಹೂತಿದ್ದ ರೀತಿಯಲ್ಲಿ ಪತ್ತೆಯಾಗಿದ್ದು, ಹಣಕ್ಕಾಗಿ ಅವರಿಬ್ಬರನ್ನು ನರಬಲಿ (Human Sacrifice) ಕೊಟ್ಟಿರುವ ಘಟನೆ ಕೇರಳದಲ್ಲಿ (Kerala) ನಡೆದಿದೆ.

    ಪದ್ಮಾ (52) ಮತ್ತು ರೋಸ್ಲಿನ್ (50) ಮೃತ ಮಹಿಳೆಯರು. ಎರ್ಬಾಕುಲಂ ಜಿಲ್ಲೆಯ ಪ್ರತ್ಯೇಕ ಊರಿನವರಾಗಿದ್ದ ರೋಸ್ಲಿನ್ ಹಾಗೂ ಪದ್ಮಾರನ್ನು ಮಾಂತ್ರಿಕ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಸೇರಿ ಹೆಚ್ಚು ಹಣ ಗಳಿಸಲು (Financial Troubles)  ನರಬಲಿ ನೀಡಿದ್ದಾರೆ. ಇದಕ್ಕಾಗಿ ಶಿಹಾಬ್ ಎಂಬಾತನ ಸಹಾಯ ಪಡೆದು ಅವನಿಗೂ ಕೆಲ ಆಮಿಷವೊಡ್ಡಿ ನಂಬಿಸಿದ್ದರು. ಇವರು ಹೇಳಿದ್ದ ಆಮಿಷಕ್ಕೆ ಬಲಿಯಾದ ಶಿಹಾಬ್ ಪದ್ಮಾ ಹಾಗೂ ರೋಸ್ಲಿನ್‍ನ್ನು ಅಪಹರಿಸಿದ್ದ.

    ಘಟನೆಗೆ ಸಂಬಂಧಿಸಿ ಸೆ. 26ರಂದು ಕಡವಂತ್ರದಿಂದ ಪದ್ಮಾ ನಾಪತ್ತೆಯಾಗಿದ್ದ ಸಂದರ್ಭದಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಕಾಲಡಿಯಿಂದ ರೋಸ್ಲಿನ್ ಇದೇ ರೀತಿ ನಾಪತ್ತೆ ಆಗಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರಿಗೆ ಪದ್ಮಾ ಅವರ ಮೊಬೈಲ್ ಸಿಗ್ನಲ್ ತಿರುವಲ್ಲಾನಲ್ಲಿ ಟ್ರ್ಯಾಕ್ ಮಾಡಿದ್ದಾರೆ. ಇದಾದ ಬಳಿಕ ಹೆಚ್ಚಿನ ತನಿಖೆ ಕೈಗೊಂಡ ಪೊಲೀಸರಿಗೆ ತಿರುವಲ್ಲಾದಲ್ಲಿ ಇಬ್ಬರು ಮಹಿಳೆಯರ ದೇಹಗಳು ಕತ್ತು ಸೀಳಿ, ತುಂಡು ತುಂಡಾಗಿ ಕತ್ತರಿಸಿ ಹೂಳಲಾದ ಶವವಾಗಿ ಪತ್ತೆಯಾಗಿದೆ.

    ಘಟನೆಗೆ ಸಂಬಂಧಿಸಿ ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೀಲಾ ಮತ್ತು ಏಜೆಂಟ್ ಶಿಹಾಬ್‍ನನ್ನು ಬಂಧಿಸಿದ್ದಾರೆ. ಈ ಬಗ್ಗೆ ಕೊಚ್ಚಿ ನಗರ ಪೊಲೀಸ್ ಆಯಕ್ತರು ಮಾತನಾಡಿ, ಇಬ್ಬರು ಮಹಿಳೆಯರನ್ನು ಕೊಂದು ಅವರ ಮನೆಯ ಸಮೀಪ ಹೂಳಲಾಗಿದೆ. ಈ ಕೊಲೆಯು ನರಬಲಿಯ ಭಾಗವಾಗಿತ್ತು. ಇದೇ ರೀತಿ ಮತ್ತೂ ಒಂದು ಪ್ರಕರಣವು ವರದಿಯಾಗಿದೆ. ಅದನ್ನು ಖಚಿತ ಪಡಿಸಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: BJP ಸರ್ಕಾರವನ್ನು ಯಾರೂ ಪ್ರಶ್ನೆ ಮಾಡೋ ಹಾಗಿಲ್ಲ: ಸಿದ್ದರಾಮಯ್ಯ

    ಘಟನೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಡಬಲ್ ಮರ್ಡರ್ ಎಂಬುದು ಮಾನವನ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸುವ ಸಂಗತಿಯಾಗಿದೆ. ಆತ್ಮ ಸಾಕ್ಷಿ ಇರುವವರು ಇಂತಹ ಕೃತ್ಯದಲ್ಲಿ ಭಾಗಿಯಾಗಿರಬಾರದು. ಮೂಢನಂಬಿಕೆಗಾಗಿ ಜನರನ್ನು ಕೊಲ್ಲುವುದು ಕೇರಳದಲ್ಲಿ ಯೋಚಿಸಲಾಗದ ಅಪರಾಧವಾಗಿದೆ ಎಂದರು. ಇದನ್ನೂ ಓದಿ: ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತೆಗೆ ಬೆಂಕಿಯಿಟ್ಟ ಆರೋಪಿ ತಾಯಿ, ಸಹೋದರಿ

    Live Tv
    [brid partner=56869869 player=32851 video=960834 autoplay=true]

  • 19 ವರ್ಷದ ಬಳಿಕ ಬಂತು ಬಲಿ ಹಬ್ಬ- ಜೀವ ಹೋದ ವ್ಯಕ್ತಿಗೆ ಬರುತ್ತೆ ಮರುಜೀವ

    19 ವರ್ಷದ ಬಳಿಕ ಬಂತು ಬಲಿ ಹಬ್ಬ- ಜೀವ ಹೋದ ವ್ಯಕ್ತಿಗೆ ಬರುತ್ತೆ ಮರುಜೀವ

    ಚಾಮರಾಜನಗರ: ಅಲ್ಲಿ ಆ ವ್ಯಕ್ತಿಯ ಜೀವ ಹೋಗಿರುತ್ತದೆ, ಈ ಹಿನ್ನೆಲೆಯಲ್ಲಿ ಆತನ ಶವವನ್ನು ಊರ ತುಂಬಾ ಎಸೆದಾಡಿಕೊಂಡು ಮೆರವಣಿಗೆ ಮಾಡುತ್ತಾರೆ. ಹೀಗೆ ನಿರ್ಜೀವವಾಗಿದ್ದ ವ್ಯಕ್ತಿಗೆ 9 ತಾಸಿನ ನಂತರ ಮರುಜೀವ ಬರುತ್ತದೆ.

    ಹೌದು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಸೀಗಮಾರಮ್ಮ ದೇವಿಯ ಜಾತ್ರೆಯಲ್ಲಿ ತಲತಲಾಂತರದಿಂದ ಆಚರಿಸಿಕೊಂಡು ಬಂದ ಆಚರಣೆಯಾಗಿದೆ. 19 ವರ್ಷಗಳ ಬಳಿಕ ಸೀಗಮಾರಮ್ಮ ಬಲಿ ಹಬ್ಬ ನಡೆಯುತ್ತಿದೆ. ಈ ಹಬ್ಬವನ್ನು ಗ್ರಾಮದ ಎಲ್ಲಾ ಸಮುದಾಯಗಳು ಒಟ್ಟಿಗೆ ಸೇರಿ ಆಚರಣೆ ಮಾಡುತ್ತಾರೆ. 24 ದಿನಗಳ ಕಾಲ ನಡೆಯುವ ಈ ಜಾತ್ರೆಯಲ್ಲಿ ಪ್ರತಿಯೊಂದು ಸಮುದಾಯಕ್ಕೂ ಒಂದೊಂದು ಜವಾಬ್ದಾರಿ ವಹಿಸಲಾಗುತ್ತದೆ.

    ಬಲಿ ಕೊಡುವ ಕರ್ತವ್ಯವನ್ನು ನಾಯಕ ಸಮುದಾಯಕ್ಕೆ, ಹೆಬ್ರೆ ಬಾರಿಸುವುದು ಪರಿಶಿಷ್ಟ ಜಾತಿಗೆ, ಕನಕಂಡ್ರಿ ಹೊರುವುದು ಶಿವಾರ್ಚಕರಿಗೆ ಹೀಗೆ ಎಲ್ಲಾ ಸಮುದಾಯಕ್ಕೂ ಜವಾಬ್ದಾರಿ ನೀಡಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಬಲಿ ಬೀಳುವ ವ್ಯಕ್ತಿಗೆ ಎರಡು ದಿನ ಮುಂಚೆಯೇ ವೀಳ್ಯ ನೀಡಲಾಗುತ್ತದೆ. ಅವರು ಊರಿನ ಬಲಿ ಬೀಳುವ ಮನೆಯಲ್ಲಿ ವಾಸಿಸುತ್ತಾರೆ.

    ನರ ಬಲಿ: ಬಲಿ ನೀಡುವ ದಿನ ಬಲಿ ಬೀಳುವ ವ್ಯಕ್ತಿಯನ್ನು ಗ್ರಾಮಕ್ಕೆ ಕರೆದೊಯ್ಯಲಾಗುತ್ತದೆ. ಈ ವೇಳೆ ಸೀಗಮಾರಮ್ಮ ದೇವತೆ ಮೈಮೇಲೆ ಬಂದ ಅರ್ಚಕರು ಬಲಿ ಬೀಳುವ ವ್ಯಕ್ತಿಗೆ ಅಕ್ಕಿ ಕಾಳು ಎಸೆಯುತ್ತಾರೆ. ಆ ವೇಳೆ ಅರ್ಧ ಜೀವ ಹೋಗುತ್ತದೆ.

    ಅರೆ ಜೀವವಾದ ವ್ಯಕ್ತಿಯನ್ನು ಮತ್ತೆ ಬಲಿ ಮನೆಗೆ ಕರೆತಂದು ಬಲಿ ಮನೆಯಲ್ಲಿ ಮಲಗಿಸಲಾಗುತ್ತದೆ. ಈ ವೇಳೆ ಸೀಗೆಮಾರಮ್ಮ ದೇವತೆ ಮೈಮೇಲೆ ಬರುವ ಅರ್ಚಕ ಆವೇಷದಿಂದ ಬಲಿ ವ್ಯಕ್ತಿಯ ಮೇಲೆ ಕಾಲಿಡುತ್ತಾರೆ. ಆ ಸಂದರ್ಭದಲ್ಲಿ ಆ ಬಲಿ ವ್ಯಕ್ತಿಯ ಜೀವ ಹೋಗುತ್ತದೆ ಎನ್ನುವ ನಂಬಿಕೆಯಿದೆ. ಹೀಗೆ ರಾತ್ರಿ ಆ ವ್ಯಕ್ತಿಯನ್ನು ಊರತುಂಬೆಲ್ಲಾ ಮೆರವಣಿಗೆ ಮಾಡುತ್ತಾರೆ. ಮೆರವಣಿಗೆ ವೇಳೆ ಶವವನ್ನು ಎಸೆಯಲಾಗುತ್ತದೆ. ಸತತ 9 ತಾಸು ಆತನ ಉಸಿರಾಟ ನಿಂತು ಹೋಗಿರುತ್ತದೆ. ಆದರೆ ಹೀಗೆ ಬಲಿ ಬಿದ್ದ ವ್ಯಕ್ತಿಗೆ ಬೆಳಗ್ಗೆ ಮತ್ತೆ ಮರುಜೀವ ಬರುತ್ತದೆ. ಪ್ರಾಣ ಹೋಗಿ ನಿಷ್ಕ್ರೀಯವಾದ ವ್ಯಕ್ತಿಯನ್ನು ಬಲಿ ಪೀಠಕ್ಕೆ ಕೊಂಡೊಯ್ಯುವ ಗ್ರಾಮಸ್ಥರು. ಬಲಿ ಪೀಠದ ಬಳಿ ಸತ್ತ ವ್ಯಕ್ತಿಯ ದರ್ಶನಕ್ಕೆ ಅವಕಾಶ ಕೊಡುತ್ತಾರೆ. ಇದನ್ನೂ ಓದಿ: ಲಕ್ಷ್ಮಣ ಸವದಿಯ ಮುಂದಿನ ರಾಜಕೀಯ ಹಾದಿ ಏನು?

    ಮರುಜೀವ ಬಂತು: ಬೆಳಗ್ಗೆ 9 ಗಂಟೆ ವೇಳೆಗೆ ಒಳಗೆರೆ ಹುಚ್ಚಮ್ಮ ದೇವತೆ ಮೈಮೇಲೆ ಬಂದ ಅರ್ಚಕರಿಂದ ನಿರ್ಜೀವ ವ್ಯಕ್ತಿ ಮೇಲೆ ತೀರ್ಥ ಪ್ರೋಕ್ಷಣೆ ಮಾಡಲಾಗುತ್ತದೆ. ಸತ್ತ ವ್ಯಕ್ತಿಗೆ ತೀರ್ಥ ಪ್ರೋಕ್ಷಣೆಯಿಂದ ಮರುಜೀವ ಬರುವುದೇ ವಿಶೇಷ. ಸತ್ತಿದ್ದ ವ್ಯಕ್ತಿಗೆ 11ನೇ ದಿನ ಸಾಂಕೇತಿಕವಾಗಿ ತಿಥಿ ಕಾರ್ಯ ನಡೆಯುತ್ತದೆ. ಹೀಗೆ ಬಲಿ ಬೀಳುವ ವ್ಯಕ್ತಿ ಇನ್ನು ಮುಂದೆ ತನ್ನ ಜೀವಮಾನದಲ್ಲಿ ಹೊರಗೆ ಊಟ ತಿಂಡಿ ಮಾಡುವಂತಿಲ್ಲ. ಇದನ್ನೂ ಓದಿ: ಮೈಸೂರು ಮೃಗಾಲಯದಲ್ಲಿ ಸಂಭ್ರಮ- ಮೂರು ಮರಿಗಳಿಗೆ ಜನ್ಮ ನೀಡಿದ ತಾರಾ!

    ಈ ಹಬ್ಬದ ವೇಳೆ ಗ್ರಾಮದಲ್ಲಿ ಮಾಂಸಹಾರ ಮಾಡಲ್ಲ, ಮದ್ಯಪಾನ ಮಾಡಲ್ಲ, ಮನೆಗಳಲ್ಲಿ ಒಗ್ಗರಣೆ ಹಾಕಲ್ಲ. ಈ ಅವಧಿಯಲ್ಲಿ ಮದುವೆ ಸೇರಿದಂತೆ ಶುಭಕಾರ್ಯಗಳು ನಿಷಿದ್ಧವಾಗಿದೆ. ಈ ಅವಧಿಯಲ್ಲಿ ಯಾರಾದರು ಸತ್ತರೆ ಒಂದೇ ಗಂಟೆ ಅವಧಿಯಲ್ಲಿ ಗ್ರಾಮದಿಂದ ಹೊರಕ್ಕೆ ಶವ ಸಾಗಾಣೆ ಮಾಡುತ್ತಾರೆ.

    ಒಟ್ಟಿನಲ್ಲಿ ಆಧುನಿಕ ಯುಗದಲ್ಲೂ ಕೂಡ ಇಂತಹ ಆಚರಣೆ ನಡೆಯುತ್ತಿರುವುದು ವಿಶೇಷವಾಗಿದೆ. ಬಲಿ ಬೀಳುವ ವ್ಯಕ್ತಿಗೆ ಪ್ರಾಣ ಪಕ್ಷಿ ಹಾರಿ ಹೋಗಿರುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ. ಈ ನಂಬಿಕೆಯ ಆಧಾರದ ಮೇಲೆ ಇಲ್ಲಿ ಸೀಗ ಮಾರಮ್ಮ ಬಲಿ ಜಾತ್ರೆ ನಡೆದುಕೊಂಡು ಹೋಗುತ್ತಿದೆ.

  • ನರಬಲಿಗಾಗಿ 7 ವರ್ಷದ ಕಂದಮ್ಮ ಅಪಹರಣ – ಇಬ್ಬರು ಅರೆಸ್ಟ್

    ನರಬಲಿಗಾಗಿ 7 ವರ್ಷದ ಕಂದಮ್ಮ ಅಪಹರಣ – ಇಬ್ಬರು ಅರೆಸ್ಟ್

    ಲಕ್ನೋ: ಹೋಳಿ ಹಬ್ಬದಂದು ‘ನರಬಲಿ’ ನೀಡಬೇಕೆಂದು 7 ವರ್ಷದ ಬಾಲಕಿಯನ್ನು ಅಪಹರಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.

    ನೋಯ್ಡಾದಲ್ಲಿ ಹೋಳಿ ಹಬ್ಬದ ದಿನ ನರಬಲಿ ಕೊಡಬೇಕು ಎಂದು ಏಳು ವರ್ಷದ ಬಾಲಕಿಯನ್ನು ಅಪಹರಿಸಲಾಗಿದೆ. ಆದರೆ, ಆರೋಪಿಗಳ ಜಾಲವನ್ನು ಭೇದಿಸಿದ ಪೊಲೀಸರು ಬಾಗ್ಪತ್ ಜಿಲ್ಲೆಯಿಂದ ಮಗುವನ್ನು ರಕ್ಷಿಸಿದ್ದಾರೆ. ಈ ವೇಳೆ ಬಾಲಕಿಯನ್ನು ಅಪಹರಿಸಿದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆ: ಅಸ್ಸಾಂ ಸಿಎಂ

    ನೋಯ್ಡಾ ಉಪ ಪೊಲೀಸ್ ಆಯುಕ್ತ ಹರೀಶ್ ಚಂದರ್ ಈ ಕುರಿತು ಮಾಹಿತಿ ನೀಡಿದ್ದು, ಮಾರ್ಚ್ 13 ರಂದು ಬಾಲಕಿ ನಾಪತ್ತೆಯಾಗಿದ್ದಳು. ಸೆಕ್ಟರ್ 63 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಛಿಜಾರ್ಸಿಯಲ್ಲಿ ಸ್ಥಳೀಯರು ಬಾಲಕಿಯನ್ನು ಹುಡುಕಿದರು. ಆದರೆ ಬಾಲಕಿ ಪತ್ತೆಯಾಗಿಲ್ಲ. ಈ ಹಿನ್ನೆಲೆ ಬಾಲಕಿಯ ಪೋಷಕರು ಪೊಲೀಸರನ್ನು ಸಂಪರ್ಕಿಸಿದರು ಎಂದು ತಿಳಿಸಿದರು.

    ಪೋಷಕರು ದೂರು ನೀಡಿದ ಮೇಲೆ ಐಪಿಸಿ ಸೆಕ್ಷನ್ 363 ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿಯನ್ನು ಪರಿಶೀಲನೆ ಮಾಡಲಾಯಿತು. ಈ ವೇಳೆ ಆರೋಪಿಗಳ ಸಿಕ್ಕಿಬಿದ್ದಿದ್ದು, ಅವರನ್ನು ಬಂಧಿಸಲಾಯಿತು ಎಂದು ವಿವರಿಸಿದರು.

    ಬಂಧಿತರನ್ನು ಸೋನು ವಾಲ್ಮಿಕಿ ಮತ್ತು ನೀತು ಎಂದು ಗುರುತಿಸಲಾಗಿದೆ. ಸತೇಂದ್ರ ಸೇರಿದಂತೆ ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಬಂಧಿತ ಆರೋಪಿಗಳು ಯಾವುದೇ ಅಪರಾಧದ ಇತಿಹಾಸ ಹೊಂದಿಲ್ಲದಿದ್ದರೂ ಆಗಾಗ್ಗೆ ಮದ್ಯ ಸೇವಿಸುತ್ತಿದ್ದರು ಎಂದು ಹೇಳಿದರು.

    ನಡೆದಿದ್ದೇನು?

    ಬಾಲಕಿ ವಾಸಿಸುತ್ತಿದ್ದ ಪಕ್ಕದ ಮನೆಯಲ್ಲಿಯೇ ಸೋನು ವಾಸಿಸುತ್ತಿದ್ದು, ಅವಿವಾಹಿತನಾಗಿದ್ದನು. ಈ ಹಿನ್ನೆಲೆ ಸೋನು ಸತೇಂದ್ರನನ್ನು ಸಂಪರ್ಕಿಸಿ ತನ್ನ ಕಷ್ಟವನ್ನು ಹೇಳಿಕೊಂಡಿದ್ದಾನೆ. ಆಗ ಸತೇಂದ್ರ, ಹೋಳಿಯಲ್ಲಿ ನರಬಲಿ ಕೊಟ್ಟರೆ ಮದುವೆಯಾಗುವುದಾಗಿ ಹೇಳಿದ್ದಾನೆ. ಈ ಪರಿಣಾಮ 7 ವರ್ಷದ ಬಾಲಕಿಯನ್ನು ಸೋನು ಅಪಹರಿಸಿದ್ದು, ನರಬಲಿಗೆ ಎಲ್ಲ ಸಿದ್ಧತೆ ನಡೆದಿತ್ತು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ‘ಕಾಪಾಡಿ ಕಾಪಾಡಿ’ ಎಂದು ಚೀರಾಡಿದ್ರು ಮಾನವೀಯತೆ ಮರೆತ ಜನರು – ಮೂವರು ಸಾವು 

    ಬಾಲಕಿಯನ್ನು ರಕ್ಷಿಸಿ ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ ಪೊಲೀಸ್ ಕಮಿಷನರ್ ಅಲೋಕ್ ಸಿಂಗ್ 50,000 ರೂ. ಘೋಷಿಸಿದ್ದಾರೆ.

  • ಶಿವಮೊಗ್ಗದಲ್ಲಿ ನಿಧಿ ಆಸೆಗೆ ನರಬಲಿ- ಆರೋಪಿಗಳ ಬಂಧನ

    ಶಿವಮೊಗ್ಗದಲ್ಲಿ ನಿಧಿ ಆಸೆಗೆ ನರಬಲಿ- ಆರೋಪಿಗಳ ಬಂಧನ

    ಶಿವಮೊಗ್ಗ: ನಿಧಿಯಾಸೆಗಾಗಿ ನರಬಲಿ ಕೊಟ್ಟಿರುವ ಆಘಾತಕಾರಿ ಘಟನೆ ಜಿಲ್ಲೆಯ ಶಿಕಾರಿಪುರ ತಾಲೂಕಿನ ಅಂಜನಾಪುರದಲ್ಲಿ ನಡೆದಿದೆ.

    ಕೇಶ್ಯನಾಯ್ಕ್(65) ನಿಧಿಯಾಸೆಗೆ ಬಲಿಯಾದ ವ್ಯಕ್ತಿ. ಸ್ಥಳಿಯರಾದ ರಂಗಪ್ಪ, ಶೇಖರಪ್ಪ, ಮಂಜುನಾಥ ಹಾಗೂ ಗೌಸ್ ಪೀರ್ ಎಂಬವರಿಂದ ಈ ಕೃತ್ಯ ನಡೆದಿದೆ. ಶಿಕಾರಿಪುರ ಗ್ರಾಮಾಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

    ಕಾಡಿನ ಹೊಳೆ ದಂಡೆಯಲ್ಲಿ ಇರುವ ಹೊನ್ನೇಮರ ಚೌಡಮ್ಮ ದೇವಾಲಯದ ಬಳಿ ನಿಧಿ ಇದೆ ಎಂದು ಆರೋಪಿಗಳು ನಂಬಿದ್ದರು. ನರಬಲಿ ಕೊಟ್ಟರೆ ಈ ನಿಧಿ ಪಡೆಯಬಹುದು ಎಂಬ ಮೂಢನಂಬಿಕೆಯಿಂದ ಈ ಕೃತ್ಯ ನಡೆದಿದೆ.

    ಇದೇ ತಿಂಗಳ 7ರಂದು ರುಂಡವಿಲ್ಲದ ಶವ ಪತ್ತೆಯಾಗಿದ್ದು, ಶಿಕಾರಿಪುರ ಗ್ರಾಮಾಂತರ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದಾಗ ನರಬಲಿ ಪ್ರಕರಣ ಬೆಳಕಿಗೆ ಬಂದಿದೆ.

  • ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ ಪ್ರಕರಣ – ಶಿಶು ಬಲಿ ನೀಡಿದ್ದು ಈ ಕಾರಣಕ್ಕೆ

    ಟೆರೇಸ್ ಮೇಲೆ ಮಗುವಿನ ರುಂಡ ಪತ್ತೆ ಪ್ರಕರಣ – ಶಿಶು ಬಲಿ ನೀಡಿದ್ದು ಈ ಕಾರಣಕ್ಕೆ

    ಹೈದರಾಬಾದ್: ಅಪರಿಚಿತ ಮಗುವಿನ ರುಂಡ ಮನೆಯ ಟೆರೇಸ್ ಮೇಲೆ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಇದು ಮಾನವ ಬಲಿ ಎಂದು ರಾಚಕೊಂಡ ಪೊಲೀಸರು ದೃಢಪಡಿಸಿದ್ದಾರೆ.

    ಫೆಬ್ರವರಿ 1ರಂದು ಇಲ್ಲಿನ ಉಪ್ಪಲ್ ಪ್ರದೇಶದ ಮನೆಯೊಂದರ ಮಹಡಿಯ ಮೇಲೆ ಮಗುವಿನ ರುಂಡ ಪತ್ತೆಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 40 ವರ್ಷದ ಕ್ಯಾಬ್ ಚಾಲಕ ಕೆ. ರಾಜಶೇಖರ್ ಹಾಗೂ ಆತನ ಪತ್ನಿ ಶ್ರೀಲತಾ(35) ಳನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ. ಆರೋಪಿ ರಾಜಶೇಖರ್ ನ ಪತ್ನಿಗೆ ದೀರ್ಘಕಾಲದ ಅನಾರೋಗ್ಯ ಇದ್ದು, ಅದನ್ನ ವಾಸಿ ಮಾಡಲು ನರಬಲಿ ಕೊಡಬೇಕು ಎಂದು ಯಾರೋ ಹೇಳಿದ್ದರಿಂದ ಈ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

    ಅನಾಥ ಹೆಣ್ಣುಮಗು ಕಿಡ್ನಾಪ್: ರಾಜಶೇಖರ್ ಜನವರಿ 31ರಂದು ಬೋಯಗುಡ ಪ್ರದೇಶದಲ್ಲಿ ರಸ್ತೆಬದಿಯಿಂದ 3 ತಿಂಗಳ ಅನಾಥ ಹೆಣ್ಣುಮಗುವನ್ನ ಅಪಹರಿಸಿಕೊಂಡು ಬಂದಿದ್ದ ಎಂದು ರಾಚಕೊಂಡ ಪೊಲೀಸ್ ಆಯುಕ್ತರಾದ ಮಹೇಶ್ ಎಂ ಭಾಗ್ವತ್ ಹೇಳಿದ್ದಾರೆ.

    ಮಗುವಿನ ದೇಹ, ಚಾಕುವನ್ನ ನದಿಗೆ ಎಸೆದಿದ್ದ: ರಾಜಶೇಖರ್ ಮಧ್ಯರಾತ್ರಿ ಮಗುವಿನ ರುಂಡ ಕಡಿದು, ಅದರ ದೇಹ ಮತ್ತು ಕೃತ್ಯಕ್ಕೆ ಬಳಸಿದ ಚಾಕುವನ್ನ ನದಿಗೆ ಎಸೆದಿದ್ದ. ನಂತರ ತನ್ನ ಹೆಂಡತಿ ಶ್ರೀಲತಾ ಜೊತೆಗೂಡಿ ಚಿಲುಕನಗರದ ತನ್ನ ಮನೆಯಲ್ಲಿ ಮಗುವಿನ ರುಂಡವನ್ನ ಇಟ್ಟು ಕ್ಷುದ್ರ ಪೂಜೆ ಕೈಗೊಂಡಿದ್ದ. ನಂತರ ತನಗೆ ಹೇಳಿದಂತೆ ಮಗುವಿನ ರುಂಡವನ್ನ ಮನೆಯ ಟೆರೇಸ್ ಮೇಲೆ ನೈಋತ್ಯ ಭಾಗದಲ್ಲಿ ಇಟ್ಟು ಚಂದ್ರಗ್ರಹಣದ ಬೆಳಕು ಹಾಗೂ ಬೆಳಗ್ಗೆ ಸುಮಾರು 4 ಗಂಟೆಯ ಸೂರ್ಯೋದಯದ ಬೆಳಕು ಅದರ ಮೇಲೆ ಬೀಳುವಂತೆ ಇಟ್ಟಿದ್ದ ಎಂದು ಮಹೇಶ್ ತಿಳಿಸಿದ್ದಾರೆ.

    ಜನವರಿ 31ರಂದು ಸಂಪೂರ್ಣ ಚಂದ್ರಗ್ರಹಣ ಸಂಭವಿಸಿತ್ತು. ಮರುದಿನ ಬೆಳಗ್ಗೆ ರಾಜಶೇಖರ್ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಆದ್ರೆ ಆತನ ಅತ್ತೆ ಬೆಳಗ್ಗೆ 11 ಗಂಟೆ ವೇಳೆಯಲ್ಲಿ ಮಗುವಿನ ರುಂಡವನ್ನ ನೋಡಿ ಕಿರುಚಿಕೊಂಡಾಗ ಎಲ್ಲರಿಗೂ ವಿಚಾರ ಗೊತ್ತಾಗಿ, ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

    ಪ್ರಕರಣದ ತನಿಖೆ ವೇಳೆ 122 ಮೊಬೈಲ್ ಕಾಲ್ ರೆಕಾಡ್ರ್ಸ್ ಪರಿಶೀಲಿಸಲಾಗಿತ್ತು, 45 ಜನರನ್ನ ವಿಚಾರಣೆಗೊಳಪಡಿಸಿ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನ ತಪಾಸಣೆ ಮಾಡಲಾಗಿತ್ತು ಎಂದು ಮಹೇಶ್ ಹೇಳಿದ್ದಾರೆ.

    ರಾಜಶೇಖರ್ ಮನೆಯಲ್ಲಿ ರಕ್ತದ ಕಲೆಗಳು ಪತ್ತೆಯಾಗಿದ್ದು, ಟೆರೇಸ್ ಮೇಲೆ ಪತ್ತೆಯಾದ ಮಗುವಿನ ರುಂಡದ ಡಿಎನ್‍ಎ ಮಾದರಿ ಜೊತೆ ಹೊಂದಾಣಿಕೆ ಇರುವುದು ವಿಧಿವಿಜ್ಞಾನ ಪರೀಕ್ಷೆಯ ವರದಿಯಿಂದ ತಿಳಿದುಬಂದಿತ್ತು. ಹೀಗಾಗಿ ಪೊಲೀಸರು ವಿಚಾರಣೆ ಮಾಡಿದಾಗ ರಾಜಶೇಖರ್ ತನ್ನ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ.

    ದುಷ್ಟಶಕ್ತಿ ಓಡಿಸಲು ನರಬಲಿ ಕೊಟ್ರಂತೆ: ಆರೋಪಿ ರಾಜಶೇಖರ್ ಪತ್ನಿಯ ಕಾಯಿಲೆ ಗುಣಪಡಿಸಲು 4 ವರ್ಷದಿಂದ ವೈದ್ಯರು, ಜ್ಯೋತಿಷಿಗಳು ಹಾಗೂ ಮಾಂತ್ರಿಕರನ್ನ ಸಂಪರ್ಕಿಸಿದ್ದ. ಇತ್ತೀಚೆಗೆ ಸಮ್ಮಕ್ಕ ಸರಳಮ್ಮ ಜಾತ್ರೆಗೆ ಹೋದಾಗ ಬುಡಕಟ್ಟು ವ್ಯಕ್ತಿಯೊಬ್ಬರನ್ನ ಭೇಟಿಯಾಗಿದ್ದ. ಆಗ ಅವರು, ಮನೆಯಲ್ಲಿ ದುಷ್ಟಶಕ್ತಿ ಇದೆ. ಪತ್ನಿಯ ಕಾಯಿಲೆ ವಾಸಿ ಮಾಡಲು ಮಗುವನ್ನ ಬಲಿ ಕೊಡಬೇಕೆಂದು ಹೇಳಿದ್ದರು. ವಾಪಸ್ ಬಂದ ನಂತರ ರಾಜಶೇಖರ್ ಮೂವರು ಮಾಂತ್ರಿಕರನ್ನ ಭೇಟಿಯಾಗಿದ್ದ. ಅವರು ಕೆಲವು ಪೂಜೆಗಳನ್ನ ಮಾಡಿದ್ದರೂ ಪತ್ನಿಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಹೀಗಾಗಿ ದಂಪತಿ ನರಬಲಿ ಕೊಡಲು ನಿರ್ಧರಿಸಿದ್ದರು.

    ಶ್ರೀಲತಾ ಕಳೆದ 4 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಹೀಗಾಗಿ ಅಕೆಯಿಂದ ದುಷ್ಟಶಕ್ತಿಗಳನ್ನ ದೂರ ಮಾಡಲು ಹೆಣ್ಣುಮಗುವನ್ನ ತಂದು ನರ ಬಲಿ ಕೊಡುವಂತೆ ಯಾರೋ ಸಲಹೆ ನೀಡಿದ್ದರು ಎಂದು ರಾಜಶೇಖರ್ ಪೊಲೀಸರಿಗೆ ಹೇಳಿದ್ದಾನೆ.

    ಅನಾಥ ಮಗುವನ್ನ ಅಪಹರಣ ಮಾಡಿದ್ರೆ ಅದು ಕಾಣೆಯಾದ್ರೂ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡು ರಾಜಶೇಖರ್ ಅನಾಥ ಮಗುವನ್ನೇ ಹುಡುಕಲು ನಿರ್ಧರಿಸಿದ್ದ ಎಂದು ಆಯುಕ್ತರಾದ ಮಹೇಶ್ ಹೇಳಿದ್ದಾರೆ.

    ಆರೋಪಿಗಳ ವಿರುದ್ಧ ಕೊಲೆ, ಅಪಹರಣ ಹಾಗೂ ಐಪಿಸಿ ಸೆಕ್ಷನ್ ನ ಇನ್ನಿತರೆ ಸಂಬಂಧಿತ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಮೃತ ಮಗುವಿನ ಗುರುತು ಪತ್ತೆಹಚ್ಚಲು ಮುಂದೆ ಬರುವಂತೆ ಜನರನ್ನು ಭಾಗ್ವತ್ ಮನವಿ ಮಾಡಿದ್ದಾರೆ.