Tag: ನಟ

  • ನಿರ್ಮಾಪಕನ ಜೊತೆ ಸೇರಿ ಕಾರ್ ಕಳ್ಳತನಕ್ಕಿಳಿದಿದ್ದ ನಟ ಅರೆಸ್ಟ್

    ನಿರ್ಮಾಪಕನ ಜೊತೆ ಸೇರಿ ಕಾರ್ ಕಳ್ಳತನಕ್ಕಿಳಿದಿದ್ದ ನಟ ಅರೆಸ್ಟ್

    – ಇಬ್ಬರಿಂದ 50 ಲಕ್ಷ ನಕಲಿ ಹಣ ವಶ
    – ಒಂದು ಅಸಲಿ ನೋಟಿಗೆ, ಮೂರು ನಕಲಿ ನೋಟು

    ನವದೆಹಲಿ: ಕಾರ್ ಕಳ್ಳತನ ಪ್ರಕರಣದಲ್ಲಿ ಆಗ್ನೇಯ ದೆಹಲಿ ಪೊಲೀಸರು ಭೋಜಪುರಿ ಸಿನಿಮಾ ನಟ ಮತ್ತು ನಿರ್ಮಾಪಕನನ್ನು ಬಂಧಿಸಿದ್ದಾರೆ. ಬಂಧಿತರಿಂದ 51 ಲಕ್ಷ ಮೌಲ್ಯದ ನಕಲಿ ಹಣವನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

    ರಾಜ್ ಸಿಂಗ್ ಉರ್ಫ್ ಮೊಹಮ್ಮದ್ ಶಾಹಿದ್ ಮತ್ತು ಸೈಯದ್ ಜೈನ್ ಹುಸೈನ್ ಬಂಧಿತ ಆರೋಪಿಗಳು. ಇಬ್ಬರು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೋನಿಯ ಮಾರುಕಟ್ಟೆ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಜಾಮಿಯಾ ಬಳಿ ಕಳ್ಳತನವಾಗಿದ್ದ ಸ್ಕೂಟಿಯನ್ನ ಇವರ ಬಳಿ ವಶಕ್ಕೆ ಪಡೆದಿದ್ದಾರೆ. ಮಕ್ಕಳ ಆಟಿಕೆ ಹಣ ಸೇರಿದಂತೆ 100, 2 ಸಾವಿರ, 200 ಮತ್ತು 50 ರೂ. ಮುಖಬೆಲೆಯ ನಕಲಿ ಹಣ ಪತ್ತೆಯಾಗಿದೆ.

    ಬಂಧಿತ ಶಾಹಿದ್ ಅಲಹಬಾದ್ ಟು ಅಲಹಬಾದ್ ಸಿನಿಮಾವನ್ನು ನಿರ್ಮಾಣ ಮಾಡಿದ್ದನು. ದೆಹಲಿಯ ಆಶ್ರಮ ಇಲಾಖೆಯಲ್ಲಿ ಸಾಹಿಲ್ ಸನ್ನಿ ಹೆಸರಿನ ಪ್ರೊಡೆಕ್ಷನ್ ಹೌಸ್ ಹೊಂದಿದ್ದಾನೆ. ವೇಗವಾಗಿ ಹಣ ಮಾಡೋ ಉದ್ದೇಶದಿಂದ ನಕಲಿ ನೋಟುಗಳನ್ನ ಮಾರುಕಟ್ಟೆಯಲ್ಲಿ ಸರಬರಾಜು ಮಾಡುತ್ತಿದ್ದ ಎಂದು ಡಿಸಿಪಿ ಆರ್.ಪಿ.ಮೀನಾ ಹೇಳಿದ್ದಾರೆ.

    ಸಾರ್ವಜನಿಕರೊಂದಿಗೆ ಮೂರು ನಕಲಿ ನೋಟು ನೀಡಿ ಒಂದು ಅಸಲಿ ನೋಟು ಪಡೆದುಕೊಳ್ಳುವ ಒಪ್ಪಂದವನ್ನ ಮಾಡಿಕೊಳ್ಳುತ್ತಿದ್ದರು. ಲಾಕ್‍ಡೌನ್ ವೇಳೆ ಖಾಲಿ ಕುಳಿತಿದ್ದ ಸೈಯದ್ ಹುಸೈನ್ ಸಹ ಹಣಕ್ಕಾಗಿ ಶಾಹಿದ್ ಜೊತೆ ಕೈ ಜೋಡಿಸಿದ್ದನು. ಇಬ್ಬರು ಜೊತೆಯಾಗಿ ಕಾರ್, ಸ್ಕೂಟಿ ಕಳ್ಳತನಕ್ಕಿಳಿದಿದ್ದರು ಎಂದು ಆರ್.ಪಿ.ಮೀನಾ ಮಾಹಿತಿ ನೀಡಿದ್ದಾರೆ.

  • ಸ್ಯಾಂಡಲ್‍ವುಡ್ ನಟ ಮಯೂರ್ ಪಟೇಲ್‍ಗೆ ಜೀವ ಬೆದರಿಕೆ!

    ಸ್ಯಾಂಡಲ್‍ವುಡ್ ನಟ ಮಯೂರ್ ಪಟೇಲ್‍ಗೆ ಜೀವ ಬೆದರಿಕೆ!

    ಬೆಂಗಳೂರು: ಚಂದನವನದ ನಟ ಮಯೂರ್ ಪಟೇಲ್ ಗೆ ಜೀವ ಬೆದರಿಕೆ ಹಾಕಲಾಗಿದೆ.

    ಹೌದು. ಸೈಟ್ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಈ ಬೆದರಿಕೆ ಹಾಕಲಾಗಿದೆ. ಸುಬ್ರಹ್ಮಣ್ಯಂ ಎಂಬವರಿಂದ ಮಯೂರ್ ಅವರು ಬೆಂಗಳೂರು ಹೊರವಲಯ ಬೇಗೂರು ಬಳಿಯ ಪರಂಗಿಪಾಳ್ಯದಲ್ಲಿ ಸೈಟ್ ಖರೀದಿಗೆ ಮುಂದಾಗಿದ್ದರು.

    ಜನವರಿ 22 ರಂದು ಗೆಳೆಯನೊಂದಿಗೆ ಮಯೂರ್ ಸೈಟ್ ನೋಡಲು ಹೋಗಿದ್ದರು. ಆಗ ಮಯೂರ್ ಕರಾರು ಮಾಡಿಕೊಂಡಿದ್ದ ಸೈಟ್‍ನಲ್ಲಿ ಕಾಂಪೌಂಡ್ ಇತ್ತು. ಈ ಸೈಟ್ ಅನಂತರಾಮರೆಡ್ಡಿ ಹಾಗೂ ಗನ್ ಮಂಜಣ್ಣ ಎಂಬವರಿಗೆ ಸೇರಿದ್ದಾಗಿದ್ದು, ನೀವು ಇಲ್ಲಿಗೆ ಬಂದರೆ ಸುಮ್ಮನೇ ಬಿಡುವುದಿಲ್ಲ ಅಂತ ಮಯೂರ್‍ಗೆ ಆವಾಜ್ ಹಾಕಿದ್ದಾರೆ.

    ಇತ್ತ ಅನಂತರಾಮರೆಡ್ಡಿಯನ್ನು ಸಂಪರ್ಕಿಸಿರೋ ಮಯೂರ್, ಆ ಜಾಗವನ್ನ ನನ್ನ ಮಗನ ಹೆಸರಿಗೆ ದಾನ ಪತ್ರ ಮಾಡಿಕೊಟ್ಟಿದ್ದೇನೆ. ಅಲ್ಲಿಗೆ ಯಾರನ್ನು ಕೂಡ ಬರಲು ಬಿಡಲ್ಲ. ನೀನು ಆ ಜಾಗಕ್ಕೆ ಬಾ ಆಮೇಲೆ ನಾವು ಯಾರು ಎಂದು ಗೊತ್ತಾಗುತ್ತದೆ ಎಂದು ಅನಂತರಾಮರೆಡ್ಡಿ, ಮಯೂರ್ ಪಟೇಲ್ ಗೆ ಅವಾಜ್ ಹಾಕಿ ಜೀವಬೆದರಿಕೆ ಒಡ್ಡಿದ್ದಾರೆ.

    ನಾನು ಅಗ್ರಿಮೆಂಟ್ ಹಾಕಿಕೊಂಡಿರೋ ಸೈಟಿಗೆ ಅಕ್ರಮವಾಗಿ ಕಂಪೌಂಡ್ ನಿರ್ಮಿಸಿದ್ದಾರೆ. ನಕಲಿ ದಾಖಲಾತಿಗಳನ್ನ ಸೃಷ್ಟಿಸಿಕೊಂಡು ಅನಂತರಾಮರೆಡ್ಡಿ ನಿಜ ದಾಖಲಾತಿ ಅಂತ ಬೆದರಿಕೆ ಹಾಕ್ತಿದ್ದಾರೆ ಎಂದು ಮಯೂರ್ ದೂರಿದ್ದಾರೆ. ಅಲ್ಲದೆ ಅನಂತರಾಮರೆಡ್ಡಿ, ಆತನ ಮಗ ಮಂಜುನಾಥ್ ರೆಡ್ಡಿ ಹಾಗೂ ನಾಲ್ವರ ವಿರುದ್ಧ ಹೆಚ್.ಎಸ್.ಆರ್ ಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

  • ಪರಾರಿಯಾಗಿದ್ದ ನಟ, ಗಾಯಕ ದೀಪ್ ಸಿಧು ಕೊನೆಗೂ ಬಂಧನ

    ಪರಾರಿಯಾಗಿದ್ದ ನಟ, ಗಾಯಕ ದೀಪ್ ಸಿಧು ಕೊನೆಗೂ ಬಂಧನ

    ನವದೆಹಲಿ: ರೈತರ ಟ್ರ್ಯಾಕ್ಟರ್  ರ‍್ಯಾಲಿ ವೇಳೆ ಹಿಂಸಾಚಾರ ಮತ್ತು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಿದ ಸಂಬಂಧ ದೆಹಲಿಯ ವಿಶೇಷ ಪೊಲೀಸ್ ತಂಡ ನಟ, ಗಾಯಕ ದೀಪ್ ಸಿಧುನನ್ನು ಬಂಧಿಸಿದ್ದಾರೆ.

    ಜನವರಿ 26 ರ ದೆಹಲಿಯಲ್ಲಿ ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿ  ವೇಳೆ ಕೆಂಪು ಕೋಟೆಯ ಮೇಲೆ ಖಾಸಗಿ ಧ್ವಜ ಹಾರಿಸಲು ಸಿಧು ಸಹಕರಿಸಿದ್ದನು. ಅಷ್ಟೇ ಅಲ್ಲದೇ ಅಲ್ಲಿಂದಲೇ ಫೇಸ್‍ಬುಕ್ ಲೈವ್ ಮಾಡಿದ್ದ. ಸಿಧುನಿಂದಲೇ ಪ್ರತಿಭಟನೆ ಹಾದಿ ತಪ್ಪಿತು ಎಂದು ರೈತ ಮುಖಂಡರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಬಂಧನವಾಗಿದೆ.

    ಪ್ರಮುಖ ಆರೋಪಿಯಾಗಿರುವ ದೀಪ್ ಸಿಧು ತಲೆ ಮರೆಸಿಕೊಂಡಿದ್ದನು. ಈ ಹಿನ್ನೆಲೆ ಸಿಧು ಗಾಹೂ ಇತರೆ ಮೂವರು ಆರೋಪಿಗಳ ಕುರಿತಾಗಿ ಮಾಹಿತಿ ನೀಡಿದರೆ 1 ಲಕ್ಷ ರೂಪಾಯಿ ನೀಡುವುದಾಗಿ ಪೊಲೀಸರು ಬಹುಮಾನ ಪ್ರಕಟಿಸಿದ್ದರು. ಸಿಧುನ ಹುಡುಕಾಟದಲ್ಲಿರುವ ಪೊಲೀಸರಿಗೆ ಸಿಧು ತನ್ನ ಗೆಳತಿಯ ಫೋನ್ ಬಳಕೆ ಮಾಡುತ್ತಿದ್ದಾನೆ ಎಂದು ಸುಳಿವು ಸಿಕ್ಕಿದೆ. ಈ ಕುರಿತಾಗಿ ಮಾಹಿತಿ ಪಡೆದ ಪೊಲೀಸ್ ತಂಡ ಸಿಧು ಇದ್ದ ಸ್ಥಳವನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರೆ.

    ನನ್ನನ್ನು ದೇಶದ್ರೋಹಿ ಎಂದು ಕರೆದಿದ್ದಾರೆ. ರೈತ ಪ್ರತಿಭಟನೆಗೆ ನನ್ನನ್ನೇ ಸಮರ್ಪಿಸಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೇನು. ಆದರೆ ಗಣರಾಜ್ಯೋತ್ಸವದ ಗಲಭೆ ನಂತರ ರೈತ ಸಂಘಟನೆಗಳು, ರೈತ ಮುಖಂಡರು ನನ್ನನ್ನು ಕಡೆಗಳಿಸುತ್ತಿದ್ದಾರೆ. ನಾನು ಪಂಜಾಬ್ ಜನರಿಗಾಗಿ ಧ್ವನಿ ಎತ್ತಿದೆ. ಕೆಂಪು ಕೋಟೆಯಲ್ಲಿ ಹಲವು ಗಾಯಕರು, ನಾಯಕರು ಸೇರಿದಂತೆ 5 ಲಕ್ಷಕ್ಕೂ ಹೆಚ್ಚು ಜನರು ಇದ್ದರು. ಆದರೆ ನನ್ನನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನೋಡುತ್ತಿದ್ದಾರೆ. ನಾನೀಗ ಬಿಹಾರದ ಕಾರ್ಮಿಕರೊಂದಿಗೆ ಇದ್ದೇನೆ ಎಂದು ಫೇಸ್‍ಬುಕ್ ವೀಡಿಯೋದಲ್ಲಿ ಕಣ್ಣೀರು ಹಾಕಿದ್ದ.

  • ರಾಜ್ಯ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಕಿಡಿ

    ರಾಜ್ಯ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಕಿಡಿ

    ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ನಟ ಧ್ರುವ ಸರ್ಜಾ ಅವರು ಕಿಡಿಕಾರಿದ್ದಾರೆ.

    ಹೌದು. ಚಿತ್ರಮಂದಿರ ಶೇ.100 ಭರ್ತಿಗೆ ನಿರ್ಬಂಧ ಹೇರಿ, ಶೇ.50 ಭರ್ತಿಗೆ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ನಟ ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಧ್ರುವ, ಮಾರ್ಕೆಟ್‍ನಲ್ಲಿ ಗಿಜಿ ಗಿಜಿ ಜನ ಸೇರುತ್ತಾರೆ. ಬಸ್ಸಿನಲ್ಲೂ ಫುಲ್ ರಶ್ ಇರುತ್ತೆ. ಆದರೆ ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಅಲ್ಲದೆ ಈ ಟ್ವೀಟ್ ಅನ್ನು ಸಿಎಂ, ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಆರೋಗ್ಯ ಸಚಿವ ಸುಧಾಕರ್‍ಗೆ ಟ್ಯಾಗ್ ಮಾಡಿದ್ದಾರೆ.

    ಮಹಾಮಾರಿ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಚಿತ್ರಮಂದಿರಗಳ ಭರ್ತಿಗೆ ಆದೇಶ ನೀಡಿ ಮಾರ್ಗಸೂಚಿ ಪ್ರಕಟಿಸಿ, ರಾಜ್ಯ ಸರ್ಕಾರಗಳು ಈ ಸಂಬಂಧ ನಿರ್ಧಾರ ಕೈಗೊಳ್ಳಬಹುದು ಎಂದು ಸೂಚಿಸಿತ್ತು. ಆದರೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಆಸನ ಮಾತ್ರ ಭರ್ತಿ ಮಾಡಲು ಅವಕಾಶ ನೀಡಿ ಮಂಗಳವಾರ ಆದೇಶ ಹೊರಡಿಸಿದೆ. ಇದರಿಂದ ದೊಡ್ಡ ದೊಡ್ಡ ಸಿನಿಮಾಗಳಿಗೆ ಮತ್ತೆ ನಿರಾಸೆಯಾಗಿದೆ.

    ಒಟ್ಟಿನಲ್ಲಿ ಚಿತ್ರಮಂದಿರ ಶೇ.100 ರಷ್ಟು ಭರ್ತಿಗೆ ಕೇಂದ್ರ ಅನುಮತಿ ಕೊಟ್ಟರೂ ರಾಜ್ಯ ಸರ್ಕಾರ ಅಡ್ಡಿಪಡಿಸಿದೆ. ಈ ಹಿನ್ನೆಲೆಯಲ್ಲಿ ಟ್ವೀಟ್‍ನಲ್ಲಿ ನಟ ಧೃವ ಸರ್ಜಾ ಅಸಮಾಧಾನ ಹೊರಹಾಕಿದ್ದಾರೆ.

  • ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಅಭಿಷೇಕ್ ಚಾಲನೆ

    ಶ್ರೀ ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನಕ್ಕೆ ಅಭಿಷೇಕ್ ಚಾಲನೆ

    – ದೇಣಿಗೆ ನೀಡಿದ ಅಂಬಿ ಪುತ್ರ

    ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕೆಲಸ ಭರದಿಂದ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ನಿಧಿ ಸಮರ್ಪಣಾ ಅಭಿಯಾನ ಕೈಗೊಳ್ಳಲಾಗಿದೆ. ಅಂತೆಯೇ ಮೈಸೂರಿನಲ್ಲಿ ಈ ಅಭಿಯಾನಕ್ಕೆ ನಟ ಅಭಿಷೇಕ್ ಅಂಬರೀಶ್ ಚಾಲನೆ ನೀಡಿದ್ದಾರೆ.

    ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ನಿಧಿ ಸಮರ್ಪಣಾ ಅಭಿಯಾನ ಆಯೋಜಿಸಲಾಗಿತ್ತು. ಹೀಗಾಗಿ ಟ್ರಸ್ಟ್ ರಾಮಮಂದಿರ ನಿರ್ಮಾಣಕ್ಕೆ ಹಣ ನೀಡುವ ಸಲುವಾಗಿ ಅಭಿಯಾನ ಹಮ್ಮಿಕೊಂಡಿದೆ. ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಅಭಿಷೇಕ್ ಚಾಲನೆ ನೀಡಿದ್ದಾರೆ.

    ಚಾಲನೆ ನೀಡಿದ ಬಳಿಕ ನಟ ಟ್ರಸ್ಟ್ ಗೆ ಸ್ವತಃ ದೇಣಿಗೆ ನೀಡಿದ್ದಾರೆ. ಈ ವೇಳೆ ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ, ಸ್ಥಳೀಯ ಬಿಜೆಪಿ ಮುಖಂಡರು ಸೇರಿದಂತೆ ಟ್ರಸ್ಟ್ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.

    ಈಗಾಗಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ 25 ಲಕ್ಷ ದೇಣಿಗೆ ನೀಡಲಾಗಿದೆ. ಹಾಗೆಯೇ ನಟಿ ಪ್ರಣಿತಾ ಕೂಡ ಕೈ ಜೋಡಿಸಿದ್ದು, ರಾಮ ಮಂದಿರ ನಿರ್ಮಾಣಕ್ಕೆ 1 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ಈ ಕುರಿತು ಟ್ವೀಟ್ಟರ್‍ನಲ್ಲಿ ವೀಡಿಯೋ ಹಂಚಿಕೊಳ್ಳುವ ಮೂಲಕ ತಿಳಿಸಿದ್ದ ನಟಿ, ಅಯೋಧ್ಯೆ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಭಾಗವಾಗಿ ಆರಂಭಿಕವಾಗಿ 1 ಲಕ್ಷ ರೂ. ನೀಡುವುದಾಗಿ ಪ್ರತಿಜ್ಞೆ ಸ್ವೀಕರಿಸುತ್ತಿದ್ದೇನೆ. ನೀವೂ ಸಹ ಇದರ ಭಾಗವಾಗಿ ಐತಿಹಾಸಿಕ ಅಭಿಯಾನಕ್ಕೆ ಕೈ ಜೋಡಿಸಿ ಎಂದು ನಟಿ ಮನವಿ ಮಾಡಿದ್ದರು.

  • ಸ್ನಾನಕ್ಕೆಂದು ನೀರಿಗಿಳಿದ ನಟ ಶವವಾಗಿ ಪತ್ತೆ!

    ಸ್ನಾನಕ್ಕೆಂದು ನೀರಿಗಿಳಿದ ನಟ ಶವವಾಗಿ ಪತ್ತೆ!

    ತಿರುವನಂತಪುರಂ: ಖ್ಯಾತ ನಟ ಮಾಲಂಕಾರ ಡ್ಯಾಮ್ ನಲ್ಲಿ ಸ್ನಾನಕ್ಕೆ ಎಂದು ಹೋದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅನಿಲ್ ನೆಡುಮಂಗಾಡ್ (48) ಮೃತಪಟ್ಟ ಮಲಯಾಳಂ ನಟ. ಇವರು ಸ್ನಾನಕ್ಕೆ ಎಂದು ಡ್ಯಾಮ್‍ಗೆ ಇಳಿದು ಸಾವನ್ನಪ್ಪಿದ್ದಾರೆ.

    ಪ್ರಾಥಮಿಕ ವಿಚಾರಣೆಯ ಪ್ರಕಾರ, ಸಂಜೆ ಸುಮಾರಿಗೆ ನಟ ಅನಿಲ್ ನೆಡುಮಂಗಾಡ್ ಅವರ ಸ್ನೇಹಿತರೊಂದಿಗೆ ಶೂಟಿಂಗ್ ವಿರಾಮದ ಸಮಯದಲ್ಲಿ ಸ್ನಾನ ಮಾಡಲು ಡ್ಯಾಮ್‍ಗೆ ಹೋಗಿದ್ದಾರೆ. ಆಗ ಅಲ್ಲಿ ಅವರು ಆಳವಾದ ನೀರಿಗೆ ಇಳಿದಾಗ ನೀರಿನ ಸೆಳೆತ ಅವರನ್ನು ಎಳೆದೊಯ್ದಿದೆ. ತಕ್ಷಣ ಅನಿಲ್ ಅವರನ್ನು ನೀರಿನಿಂದ ರಕ್ಷಿಸಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಿಲ್ಲ. ನಟನ ಶವವನ್ನು ತೋಡುಪುಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಎಂದು ಇಡುಕಿ ವಿಶೇಷ ಶಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಅನಿಲ್ ಟಿವಿ ನಿರೂಪಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಕಮ್ಮಟ್ಟಿ ಪಾಡಮ್, ಎನ್ಜನ್ ಸ್ಟೀವ್ ಲೋಪೆಜ್ ಮತ್ತು ಪೊರಿಂಜು ಮರಿಯಮ್ ಜೋಸ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದರು. ಇತ್ತೀಚೆಗೆ ತೆರೆಕಂಡ ಅಯ್ಯಪ್ಪನುಂಕೊಶಿಯಮ್ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದ ಅನಿಲ್, ಅಪಾರ ಜನಪ್ರಿಯತೆ ಗಳಿಸಿ ಮಲಯಾಳಂ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಮಾಡಿಕೊಂಡಿದ್ದರು.

    ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಿತ್ರದ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಅವರು ತೊಡುಪುಳದಲ್ಲಿದ್ದರೆಂದು ಮಾಹಿತಿ ತಿಳಿಸಿದೆ.

  • ಸೋನು ಸೂದ್‍ಗೆ ದೇವಾಲಯ ಕಟ್ಟಿ ಪೂಜಿಸಿದ ಅಭಿಮಾನಿಗಳು

    ಸೋನು ಸೂದ್‍ಗೆ ದೇವಾಲಯ ಕಟ್ಟಿ ಪೂಜಿಸಿದ ಅಭಿಮಾನಿಗಳು

    ಹೈದ್ರಾಬಾದ್: ನಿರ್ಗತಿಕರ ಬಾಳಿನ ಆಶಾಕಿರವಾಣವಾದ ರಿಯಲ್ ಹೀರೊ ಸೋನು ಸೂದ್ ಹಲವರ ಪಾಲಿನ ದೇವರಾಗಿದ್ದಾರೆ. ಹೀಗಿರುವಾಗ ತೆಲಂಗಾಣದಲ್ಲಿ ಅವರ ಅಭಿಮಾನಿಗಳು ಸೋನು ಸೂದ್ ಅವರ ಪ್ರತಿಮೆ ಇಟ್ಟು ದೇವಸ್ಥಾನವನ್ನು ಕಟ್ಟಿದ್ದಾರೆ.

    ಕೊರೋನಾ ಲಾಕ್‍ಡೌನ್ ವೇಳೆಯಲ್ಲಿ ನಟ ಮತ್ತು ಲೋಕೋಪಕಾರಿ ಸೋನು ಸೂದ್ ಅವರ ಮಾನವೀಯ ಕಾರ್ಯವನ್ನು ಅರಿತುಕೊಂಡು, ತೆಲಂಗಾಣದ ಸಿದ್ದಿಪೇಟೆ ಜಿಲ್ಲಾ ಅಧಿಕಾರಿಗಳ ಸಹಾಯದಿಂದ ದುಬ್ಬಾ ತಾಂಡಾ ಗ್ರಾಮದ ಸ್ಥಳೀಯ ಜನರು ದೇವಾಲಯವನ್ನು ನಿರ್ಮಿಸಿದ್ದಾರೆ. ಇವರು ಸಹಾಯವನ್ನು ನೆನೆದು ಸೋನು ಸೂದ್ ಪ್ರತಿಮೆಯನ್ನು ಪೂಜಿಸುತ್ತಿದ್ದಾರೆ.

     

    ಸ್ಥಳೀಯ ಜನರ ಸಮ್ಮುಖದಲ್ಲಿ ದೇವಾಲಯದ ಉದ್ಘಾಟನೆ ಮಾಡಲಾಗಿದೆ. ಮಹಿಳೆಯರು ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾನಪದ ಗೀತೆಗಳನ್ನು ಹಾಡುತ್ತಾ ಸೋನು ಸೂದ್ ಪ್ರತಿಮೆಗೆ ಆರತಿ ಮಾಡಿದ್ದಾರೆ.

    ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಸೂದ್ ಅವರು ಸಾರ್ವಜನಿಕರಿಗಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪರಿಷತ್ ಸದಸ್ಯ ಗಿರಿ ಕೊಂಡಾಲ್ ರೆಡ್ಡಿ ಉದ್ಘಾಟನೆ ವೇಳೆ ಹೇಳಿದ್ದಾರೆ.

    ಲಾಕ್‍ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ತೆರಳಲು ಸಾಧ್ಯವಾಗದೆ ಅಸಾಹಯಕ ಸ್ಥಿತಿಯಲ್ಲಿದ್ದಾಗ ಸೋನು ಸೂದ್ ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕವಾಗಿ ಮಾನವೀಯತೆ ಮೇರೆದಿದ್ದರು.

    ಲಾಕ್‍ಡೌನ್ ಸಮಯದಲ್ಲಿ ಮಾಡಿದ ಸಹಾಯ ರಿಯಲ್ ಹೀರೋ ಆಗಿದ್ದಾರೆ. ಮಾನವೀಯತೆಗೆ ಮತ್ತೊಂದು ಹೆಸರೆ ಸೋನು ಸೂದ್ ಆಗಿದ್ದಾರೆ. ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಬಗೆಹರಿಸುತ್ತಾರೆ. ಭಾರತದಲ್ಲಿರುವ ಒಬ್ಬನೇ ದೇವರು ಎಂದರೆ ಸೋನು ಸೂದ್. ತನ್ನ ಒಳ್ಳೆಯ ಕಾರ್ಯಗಳಿಂದ ದೇವರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಾವು ಸೋನು ಸೂದ್‍ಗಾಗಿ ದೇವಾಲಯವನ್ನು ನಿರ್ಮಿಸಿದ್ದೇವೆ ಎಂದು ಇಲ್ಲಿನ ಸ್ಥಳಿಯರು ಹೇಳಿದ್ದಾರೆ.

  • ಹಿರಿಯ ರಂಗಕರ್ಮಿ, ಗುಡ್ಡದ ಭೂತ ಸೀರಿಯಲ್ ನಟ ಉದ್ಯಾವರ ಮಾಧವ ಆಚಾರ್ಯ ಇನ್ನಿಲ್ಲ

    ಹಿರಿಯ ರಂಗಕರ್ಮಿ, ಗುಡ್ಡದ ಭೂತ ಸೀರಿಯಲ್ ನಟ ಉದ್ಯಾವರ ಮಾಧವ ಆಚಾರ್ಯ ಇನ್ನಿಲ್ಲ

    ಉಡುಪಿ: ಹಿರಿಯ ರಂಗಕರ್ಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಐವತ್ತಕ್ಕೂ ಹೆಚ್ಚು ನಾಟಕಗಳಿಗೆ ನಿರ್ದೇಶನ ಮಾಡಿದ ಉಡುಪಿಯ ಉದ್ಯಾವರ ಮಾಧವ ಆಚಾರ್ಯ ಕೊನೆಯುಸಿರೆಳೆದಿದ್ದಾರೆ.

    ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಉದ್ಯಾವರ ಮಾಧವ ಆಚಾರ್ಯರಿಗೆ 79 ವರ್ಷವಾಗಿತ್ತು. ರಂಗಭೂಮಿ ನಿರ್ದೇಶಕರಾಗಿ, ಕಥೆಗಾರನಾಗಿ, ಕವಿಯಾಗಿ ನಾಡಿನಾದ್ಯಂತ ಪ್ರಸಿದ್ಧರಾಗಿದ್ದರು. ಬಾರಿ ಜನಮೆಚ್ಚುಗೆ ಪಡೆದಿದ್ದ ಗುಡ್ಡದ ಭೂತ ಧಾರಾವಾಹಿಯಲ್ಲಿ ಮಾಧವ ಆಚಾರ್ಯ ನಟಿಸಿದ್ದರು. ಉಡುಪಿಯ ಸಮೂಹ ಸಂಸ್ಥೆಯನ್ನು ಹುಟ್ಟು ಹಾಕಿದ್ದ ಇವರು, ತಮ್ಮ ತಂಡವನ್ನು ದೇಶ-ವಿದೇಶಗಳಿಗೆ ಕೊಂಡೊಯ್ದು ನಾಟಕ, ರೂಪಕಗಳನ್ನು ಪ್ರದರ್ಶಿಸಿದ್ದರು.

    ರಾಜ್ಯೋತ್ಸವ, ರಂಗ ವಿಶಾರದ ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸನ್ಮಾನಗಳು ಆಚಾರ್ಯರಿಗೆ ಒಲಿದು ಬಂದಿದೆ. ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಕುಂದಾಪುರದ ಬಿಪಿ ಶೆಟ್ಟಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದರು.

    ಬಾಗಿದ ಮರ- ಕಥಾಸಂಕಲನ, ರಂಗಸ್ಥಳದ ಕನವರಿಕೆಗಳು, ಎಂಬ ಕವನ ಸಂಕಲನ, ಕೃಷ್ಣನ ಸೋಲು, ಗಾಂಧಾರಿ ನಾಟಕ ಶಬರಿ, ಅಂಧಯುಗ, ಪಾಂಚಾಲಿ, ಅಂಬೆ, ನಾಟಕ ನೃತ್ಯ ರೂಪಕಗಳನ್ನು ರಚಿಸಿ ನಿರ್ದೇಶಿಸಿದ್ದರು. ಮಂಗಳೂರು ಆಕಾಶವಾಣಿ ಮೂಲಕ ಹಲವಾರು ನಾಟಕಗಳು ಪ್ರಸಾರಗೊಂಡಿದ್ದವು. ಹಿರಿಯ ಅರ್ಥಶಾಸ್ತ್ರಜ್ಞರಾಗಿಯೂ ಸಮಾಜಕ್ಕೆ ಉದ್ಯಾವರ ಮಾಧವ ಆಚಾರ್ಯ ಸೇವೆ ಸಲ್ಲಿಸಿದ್ದಾರೆ.

  • ನಟನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ವ್ಯಕ್ತಿ ಅರೆಸ್ಟ್

    ನಟನ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ವ್ಯಕ್ತಿ ಅರೆಸ್ಟ್

    ಮುಂಬೈ: ನಟನರೊಬ್ಬರ ಹೆಂಡತಿಗೆ ವೀಡಿಯೋ ಕರೆ ಮಾಡಿ ಅಶ್ಲೀಲತೆ ಪ್ರದರ್ಶನ ಮಾಡಿದ್ದಕ್ಕಾಗಿ ಜೈಪುರದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಆರೋಪಿ ಪೂಜಾ ಜೈನ್ (32) ಜೈಪುರ ಮೂಲದವ ಎಂದು ತಿಳಿದುಬಂದಿದೆ. ನಟರೊಬ್ಬರ ಪತ್ನಿಗೆ ವಿಡಿಯೋ ಕಾಲ್ ಮಾಡಿ ಅಶ್ಲೀಲತೆ ಪ್ರದರ್ಶಿಸಿದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ.

    ಮಹಿಳೆಗೆ ಕೆಲವು ದಿನಗಳ ಹಿಂದೆ ಆರೋಪಿ ಪೂಜಾ ಜೈನ್‍ನಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಮಹಿಳೆ ಯಾರೋ ಸಂಬಂಧಿ ಎಂದು ತಿಳಿದು ರಿಕ್ವೆಸ್ಟ್ ಸ್ವೀಕರಿಸಿದ್ದಾಳೆ. ನಂತರ ಆರೋಪಿಯಿಂದ ಸಂದೇಶಗಳು ಬರಲು ಪ್ರಾರಂಭಿಸಿದವು. ನವೆಂಬರ್ 25 ರಂದು ಮಹಿಳೆಗೆ ಪೂಜಾ ಜೈನ್ ನಿಂದ ವಿಡಿಯೋ ಕರೆ ಒಂದು ಬಂದಿದೆ. ಅಲ್ಲಿ ಆರೋಪಿಗಳು ಅಶ್ಲೀಲ ಲೈಂಗಿಕ ಕ್ರಿಯೆಗಳಲ್ಲಿ ತೊಡಗಿರುವುದು ಕಂಡಿದೆ.

    ಮಹಿಳೆ ಈ ವಿಚಾರವನ್ನು ತನ್ನ ಪತಿಗೆ ಹೇಳಿದ್ದಾಳೆ. ಆರೋಪಿಯಿಂದ ಮತ್ತೆ ಕರೆ ಬರುವವರೆಗೂ ಈ ದಂಪತಿ ಕಾದಿದ್ದಾರೆ. ಒಂದು ದಿನ ಮತ್ತೆ ಅದೇ ವ್ಯಕ್ತಿಯಿಂದ ಕೆರೆ ಬಂದಿದೆ. ಆಗ ಅದನ್ನು ಯುವತಿಯ ಪತಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಂತರ ಈ ವಿಚಾರವಾಗಿ ಯುವತಿಯ ಪತಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದರು.

    ಡಿ ಬಿ ಮಾರ್ಗ್ ಪೊಲೀಸರು ಜೈಪುರಕ್ಕೆ ಐಪಿ ಅಡ್ರೆಸ್‍ನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಗುರುತಿಸಿದೆವು. ಆರೋಪಿ ರಾಹುಲ್ ಜೈನ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಾನೆ. ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಅವರು ನಿರುದ್ಯೋಗಿಗಳಾಗಿದ್ದರು. ಆಗ ಇಂತಹ ಕೆಲಸವನ್ನು ಮಾಡಿದ್ದಾರೆ. ಈ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕರೆ ಮಾಡಿದವರು ಅಪ್ಲಿಕೇಶನ್ ಬಳಸಿ ವೀಡಿಯೋ ಕರೆ ಮಾಡಿದ ಕಾರಣ ಮೊಬೈಲ್ ಸಂಖ್ಯೆ ಇರಲಿಲ್ಲ. ನಾವು ಅಪ್ಲಿಕೇಶನ್‍ನ ಕಚೇರಿಯನ್ನು ಸಂಪರ್ಕಿಸಿ ಐಪಿ ವಿಳಾಸವನ್ನು ತೆಗೆದುಕೊಂಡೆವು. ನಂತರ ಇಂಟರ್ನೆಟ್ ಸೇವೆ ಒದಗಿಸುವವರನ್ನು ಸಂಪರ್ಕಿಸಿ ಜೈಪುರದ ವ್ಯಕ್ತಿಯ ವಿಳಾಸವನ್ನು ಪಡೆದು ಆರೋಪಿಗಳನ್ನು ಪತ್ತೆ ಹಚ್ಚಿದೆವು ಎಂದು ಪೊಲೀಸರು ತಿಳಿಸಿದ್ದಾರೆ.

  • ಆತ್ಮಹತ್ಯೆ ಅಲ್ಲ, ಕೊಲೆ? – ನಟ ಅಕ್ಷತ್ ಉತ್ಕರ್ಷ್ ಪ್ರಕರಣದಲ್ಲಿ ಟ್ವಿಸ್ಟ್

    ಆತ್ಮಹತ್ಯೆ ಅಲ್ಲ, ಕೊಲೆ? – ನಟ ಅಕ್ಷತ್ ಉತ್ಕರ್ಷ್ ಪ್ರಕರಣದಲ್ಲಿ ಟ್ವಿಸ್ಟ್

    – ಅಕ್ಷತ್ ಪ್ರೇಯಸಿ ಸುತ್ತ ಅನುಮಾನದ ಹುತ್ತ

    ಮುಂಬೈ: ಉದಯೋನ್ಮುಖ ನಟ ಅಕ್ಷತ್ ಉತ್ಕರ್ಷ್ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಪೊಲೀಸರು ಐಪಿಸಿ ಸೆಕ್ಷನ್ 302 (ಕೊಲೆ) ಮತ್ತು 34ರ ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಈ ಮೂಲಕ ಅಕ್ಷತ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಕೊಲೆ ಎಂಬುದನ್ನ ಪೊಲೀಸರು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಇಡೀ ಪ್ರಕರಣ ಅಕ್ಷತ್ ಗೆಳತಿ ಸ್ನೇಹಾ ಚೌಹಾಣ್ ಅತ್ತ ಬೆರಳು ಮಾಡುತ್ತಿದೆ.

    ಸ್ನೇಹಾ ಚೌಹಾಣ್ ಸಹ ನಟಿಯಾಗಿದ್ದು, ಅಕ್ಷತ್ ಜೊತೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಅಕ್ಷತ್ ನಿಧನವಾದ ದಿನ ಅಂದ್ರೆ ಸೆಪ್ಟೆಂಬರ್ 27ರ ರಾತ್ರಿ ಸ್ನೇಹಾ ಚೌಹಾಣ್ ಮನೆಯಲ್ಲಿದ್ದಿದ್ದು, ಅವರೇ ಪೊಲೀಸರು ಮತ್ತು ಕುಟುಂಬಸ್ಥರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಅಕ್ಷತ್ ಜೊತೆಯಲ್ಲಿದಿದ್ದನ್ನು ಸ್ನೇಹಾ ಸಹ ಒಪ್ಪಿಕೊಂಡಿದ್ದಾರೆ. ಭಾನುವಾರ ಜೊತೆಯಲ್ಲಿ ಊಟ ಮಾಡುತ್ತಿರುವಾಗ ಅಕ್ಷತ್ ಒಂದು ರೀತಿ ವರ್ತಿಸುತ್ತಿದ್ದನು. ರಾತ್ರಿ ಸುಮಾರು 11.30ಕ್ಕೆ ಅಕ್ಷಯ್ ಶವ ಹಾಲ್ ನಲ್ಲಿ ನೇತಾಡುತ್ತಿತ್ತು. ಕೂಡಲೇ 100 ನಂಬರ್ ಗೆ ಕರೆ ಮಾಡಿದೆ. ಸ್ಥಳಕ್ಕಾಗಮಿಸಿದ ಅಂಬೋಲೆ ಪೊಲೀಸರ ಸಹಾಯದಿಂದ ಅಕ್ಷತ್ ನನ್ನು ಆಸ್ಪತ್ರೆಗೆ ಕರೆದೊಯ್ದದಾಗ ವೈದ್ಯರು ಮೃತಪಟ್ಟಿರೋದನ್ನ ಖಚಿತ ಪಡಿಸಿದರು ಎಂದು ಸ್ನೇಹಾ ಚೌಹಾಣ್ ಹೇಳಿದ್ದಾರೆ.

    ಬಿಹಾರದ ಮುಜಫರ್ ನಗರ ಮೂಲದ ಎಂಬಿಎ ಪದವಿಧರ ಅಕ್ಷತ್ ಮುಂಬೈನಲ್ಲಿ ಉಳಿದುಕೊಂಡಿದ್ದರು. ಕೆಲಸದ ಜೊತೆಯಲ್ಲಿ ಅಲ್ಬಂಗಳಲ್ಲಿಯೂ ಅಕ್ಷತ್ ಕಾಣಿಸಿಕೊಂಡಿದ್ದರು. ಮುಂಬೈನ ಸುರೇಶ್ ನಗರದಲ್ಲಿರುವ ಪಶ್ಚಿಮ ಅಂಧೇರಿಯ ಆರ್ ಟಿಓ ಲೈನ್ ಕಟ್ಟಡದಲ್ಲಿ ಅಕ್ಷತ್ ವಾಸವಾಗಿದ್ದರು.

    ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಅಕ್ಷತ್ ತಂದೆ ಜೊತೆ ಫೋನ್ ನಲ್ಲಿ ಮಾತನಾಡಿದ್ದಾನೆ. ಅದಾದ ಬಳಿಕ ಅಕ್ಷತ್ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಅಂದು ತಡರಾತ್ರಿ ಅಕ್ಷತ್ ಸಾವಿನ ಬಗ್ಗೆ ನಮಗೆ ಮಾಹಿತಿ ಬಂತು. ಮುಂಬೈ ಪೊಲೀಸರು ನಮಗೆ ಯಾವುದೇ ಮಾಹಿತಿ ನೀಡಲಿಲ್ಲ ಎಂದು ಅಕ್ಷತ್ ಮಾವ ರಂಜಿತ್ ಸಿಂಗ್ ಹೇಳಿದ್ದಾರೆ.

    ಅಕ್ಷತ್ ಸಾವು ಆಗಿದೆಯಾ ಅಥವಾ ಇಲ್ಲವಾ ಎಂಬುದರ ಕುರಿತು ಯಾವುದೇ ಸ್ಪಷ್ಟ ಮಾಹಿತಿ ಸಿಗದ ಹಿನ್ನೆಲೆ ಮುಂಬೈಗೆ ದೌಡಾಯಿಸಿದೆ. ಅಕ್ಷತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ಕೆಲವರು ಮಾಹಿತಿ ನೀಡಿದ್ರೆ, ಆತನ ಗೆಳೆಯರು ಅಕ್ಷತ್ ತಂದೆಗೆ ಫೋನ್ ಮಗ ಸಾವು ಆಗಿದೆ ಅಂತಾ ಹೇಳಿದ್ದರು. ಕೊನೆಗೆ ಮುಂಬೈಗೆ ಬಂದಾಗ ಅಕ್ಷತ್ ನಮ್ಮನ್ನು ಅಗಲಿರುವ ವಿಷಯ ತಿಳಿಯಿತು ಎಂದು ರಂಜಿತ್ ಸಿಂಗ್ ಹೇಳಿದ್ದರು.

    ಒಂದಿಷ್ಟು ಅನುಮಾನ: ಅಕ್ಷತ್ ಪ್ಲಾಸ್ಟಿಕ್ ಚೀಲ ಬಳಸಿ ನೇಣುಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಆರು ಅಡಿ ಎತ್ತರದ ಮಗನ ಭಾರವನ್ನ ಒಂದು ಸಣ್ಣ ಚೀಲ ಹಿಡಿಯಲು ಸಾಧ್ಯವೇ ಎಂದು ಅಕ್ಷತ್ ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ. ಆರಂಭದಲ್ಲಿ ಅಕ್ಷತ್ ಪೋಷಕರು ಮುಂಬೈ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಸಹ ಆರೋಪಿಸಿದ್ದರು.

    ಸುಶಾಂತ್ ಸಿಂಗ್ ರಜಪೂತ್ ಸಾವು: ಜೂನ್ 14ರಂದು ನಟ ಸುಶಾಂತ್ ಸಿಂಗ್ ರಜಪೂತ್ ಮೃತದೇಹ ಅವರ ಬಾಂದ್ರಾದ ನಿವಾಸದಲ್ಲಿ ಪತ್ತೆಯಾಗಿತ್ತು. ಆರಂಭದಲ್ಲಿ ಮಾನಸಿಕ ಖಿನ್ನತೆಯಿಂದಾಗಿ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದ್ರೆ ನಟಿ ಕಂಗನಾ ರಣಾವತ್ ಮತ್ತು ಸುಶಾಂತ್ ಅಭಿಮಾನಿಗಳು ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿ, ಸಿಬಿಐ ತನಿಖೆ ನಡೆಯಬೇಕೆಂದು ಅಭಿಯಾನ ಆರಂಭಿಸಿದ್ದರು. ಬಿಹಾರ ಮತ್ತು ಮುಂಬೈ ಪೊಲೀಸರ ಹಗ್ಗ ಜಗ್ಗಾಟದಲ್ಲಿ ಸುಶಾಂತ್ ಪ್ರಕರಣ ಸಿಬಿಐಗೆ ವರ್ಗಾವಣೆಯಾಗಿದೆ.