Tag: ನಟ

  • ಸಿನಿಮಾದಲ್ಲಿ ಗರ್ಲ್‍ಫ್ರೆಂಡ್‍ ಗೆ ನಂಬರ್ ಕೊಟ್ಟ ಹೀರೋ: ಫಜೀತಿಗೆ ಸಿಲುಕಿದ ರಿಯಲ್ ಆಟೋ ಡ್ರೈವರ್!

    ಸಿನಿಮಾದಲ್ಲಿ ಗರ್ಲ್‍ಫ್ರೆಂಡ್‍ ಗೆ ನಂಬರ್ ಕೊಟ್ಟ ಹೀರೋ: ಫಜೀತಿಗೆ ಸಿಲುಕಿದ ರಿಯಲ್ ಆಟೋ ಡ್ರೈವರ್!

    ಢಾಕಾ: ಸಿನಿಮಾದಲ್ಲಿ ನಟರೊಬ್ಬರು ಫೋನ್ ನಂಬರ್ ಬಳಸಿದ್ದರಿಂದ ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಆಟೋ ಡ್ರೈವರ್ ಈಗ ಫಜೀತಿಗೆ ಸಿಕ್ಕಿಕೊಂಡಿದ್ದಾರೆ.

    ಹೌದು. ಬಾಂಗ್ಲಾದೇಶದ ಪ್ರಸಿದ್ಧ ನಟ ಶಕೀಬ್ ಖಾನ್ ಅವರು ಅಭಿನಯಿಸಿದ್ದ ‘ರಾಜನೀತಿ’ ಸಿನಿಮಾ ಜೂನ್ ನಲ್ಲಿ ತೆರೆ ಕಂಡಿತ್ತು. ಈ ಚಿತ್ರದಲ್ಲಿ ಶಕೀಬ್ ಖಾನ್ ಅವರು ತಮ್ಮ ಸ್ನೇಹಿತೆಗೆ ಒಂದು ನಂಬರ್ ಕೊಟ್ಟಿದ್ದರು. ಆ ನಂಬರ್ ಇಜಜುಲ್ ಮಿಯಾ ಎಂಬವರ ಮೊಬೈಲ್ ನಂಬರ್ ಆಗಿದ್ದು ಈಗ ದಿನಕ್ಕೆ ನೂರಕ್ಕೂ ಅಧಿಕ ಕರೆಗಳು ಬರುತ್ತಿದೆ.

    ಚಿತ್ರದಲ್ಲಿ ನನ್ನ ಫೋನ್ ನಂಬರ್ ಬಳಸಿದರಿಂದ ನನ್ನ ಜೀವನ ಹಾಳಾಗಿ ಹೋಗಿದೆ. ಹಲೋ, ಶಕೀಬ್ ನಾನು ನಿಮ್ಮ ಅಭಿಮಾನಿ. ನಾನು ನಿಮ್ಮ ಜೊತೆ ಎರಡು ನಿಮಿಷ ಮಾತಾಡಬೇಕು ಎಂದು ಹೇಳಿ ಶಕೀಬ್ ಅವರ ಮಹಿಳಾ ಅಭಿಮಾನಿಗಳಿಂದ ನನಗೆ ದಿನಕ್ಕೆ 100 ಕರೆಗಳು ಬರುತ್ತಿದೆ ಎಂದು ಇಜಜುಲ್ ಮಿಯಾ ಹೇಳಿದ್ದಾರೆ.

    ಚಿತ್ರ ಬಿಡುಗಡೆಯಾದ ನಂತರ ಮಹಿಳೆಯರಿಂದ ಕರೆಗಳು ಬರುತ್ತಿರುವುದನ್ನು ಗಮನಿಸಿದ ನನ್ನ ಪತ್ನಿ ನನಗೆ ಅಕ್ರಮ ಸಂಬಂಧವಿದೆ ಎಂದು ತಿಳಿದು ನನ್ನನ್ನು ತೊರೆಯಲು ಮುಂದಾಗಿದ್ದಳು ಎಂದು ಅವರು ನೋವನ್ನು ತೋಡಿಕೊಂಡಿದ್ದಾರೆ.

    ಸಮಸ್ಯೆಯಾದರೂ ಹೊಸ ಫೋನ್ ನಂಬರ್ ತೆಗೆದುಕೊಳ್ಳಬಹುದಿತ್ತಲ್ಲ ಎನ್ನುವ ಪ್ರಶ್ನೆಗೆ, ಬಹಳ ವರ್ಷಗಳಿಂದ ಈ ಫೋನ್ ನಂಬರ್ ಬಳಸುತ್ತಿದ್ದು, ಗ್ರಾಹಕರಿಗೆ ಈ ನಂಬರ್ ನೀಡಿದ್ದೇನೆ. ನಂಬರ್ ಬದಲಾಯಿಸಿದರೆ ನನ್ನ ಉದ್ಯೋಗಕ್ಕೆ ಸಮಸ್ಯೆಯಾಗಬಹುದು ಎನ್ನುವ ಕಾರಣಕ್ಕೆ ಹೊಸ ನಂಬರ್ ತೆಗೆದುಕೊಳ್ಳಲಿಲ್ಲ ಎಂದು ಮಿಯಾ ಉತ್ತರಿಸಿದ್ದಾರೆ.

    ಹೊಸದಾಗಿ ನಾನು ಮದುವೆಯಾಗಿದ್ದು ಹಾಗೂ ನನಗೆ ಒಬ್ಬಳು ಹೆಣ್ಣು ಮಗಳು ಕೂಡ ಇದ್ದಾಳೆ. ಈ ಹಿಂದೆ ನಾನು ಶಕೀಬ್ ಎಂದು ತಿಳಿದುಕೊಂಡು ಒಬ್ಬ ಅಭಿಮಾನಿ ನಾನು ಇರುವ ಜಾಗ ತಿಳಿದುಕೊಂಡು 500 ಕಿ.ಮಿ ಫಾಲೋ ಮಾಡಿದ್ದ ಎಂದು ತಿಳಿಸಿದರು.

    ತನಗೆ ಆಗುತ್ತಿರುವ ಮಾನಸಿಕ ಕಿರುಕುಳದಿಂದ ಬೇಸತ್ತು ಹೋಗಿರುವ ಇಜಜುಲ್ ಮಿಯಾ ಅವರು ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಾಗಿರುವ ಸೂವ್ ಖಾನ್ ವಿರುದ್ಧ ಕೋರ್ಟ್ ಮೊರೆಹೋಗಿದ್ದು, 50 ಲಕ್ಷ ಟಕಾ(ಅಂದಾಜು 39.38 ಲಕ್ಷ ರೂ.) ಪರಿಹಾರ ನೀಡಲು ಆದೇಶಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ಮಿಯಾ ಪರ ವಕೀಲ ಮಜೀದ್ ಅವರು ಪ್ರತಿಕ್ರಿಯಿಸಿ, ಈ ವಾರ ನಾನು ಕಕ್ಷಿದಾರರ ಪರವಾಗಿ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದೇನೆ. ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲು ಜಿಲ್ಲಾ ನ್ಯಾಯಾಧಿಶರು ಹಿಂದೇಟು ಹಾಕಿದರು. ಆದರೆ ಫೋನ್ ಕರೆಯಿಂದ ಮಿಯಾ ಅವರ ಜೀವನ ಹೇಗೆ ಹಾಳಾಗಿದೆ ಎಂಬುದಕ್ಕೆ ಸಾಕ್ಷ್ಯವನ್ನು ಸಲ್ಲಿಸಿದ ಬಳಿಕ ಜಡ್ಜ್ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದರು.

  • ಕನ್ನಡದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ

    ಕನ್ನಡದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ

    ಬೆಂಗಳೂರು: ಕನ್ನಡದ ಸಾಕಷ್ಟು ಸಿನಿಮಾ ಧಾರಾವಾಹಿಗಳಲ್ಲಿ ಪೊಷಕ ನಟನಾಗಿ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶರಾಗಿದ್ದಾರೆ.

    ವೇಣುಗೋಪಾಲ್ ಅವರು ಮಂಗಳವಾರ ಬೆಳಿಗ್ಗೆ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ನಿಧನರಾದರು. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಕೊನೆಯದಾಗಿ ಶುದ್ಧಿ ಚಿತ್ರದಲ್ಲಿ ನಟಿಸಿದ್ದರು.

    ವೇಣುಗೊಪಾಲ್ ಅವರು ಡಾ. ವಿಷ್ಣುವರ್ಧನ್ ಅವರ ಚಿತ್ರದಲ್ಲಿ ಹೆಚ್ಚಾಗಿ ನಟಿಸಿದ್ದರು. ಸೂರಪ್ಪ, ರಾಜನರಸಿಂಹ, ಕೋಟಿಗೊಬ್ಬ, ಡಕೋಟ ಎಕ್ಸ್ ಪ್ರೆಸ್ ಇನ್ನೂ ಅನೇಕರ ಚಿತ್ರದಲ್ಲಿ ನಟಿಸಿದ್ದು, ಮನೆತನ, ಜನನಿ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.

  • ಗಂಡು ಮಗುವಿನ ತಂದೆಯಾದ ನಟ, ರಾಜಕಾರಣಿ ಪವನ್ ಕಲ್ಯಾಣ್

    ಗಂಡು ಮಗುವಿನ ತಂದೆಯಾದ ನಟ, ರಾಜಕಾರಣಿ ಪವನ್ ಕಲ್ಯಾಣ್

    ಹೈದರಾಬಾದ್: ನಟ ಕಮ್ ರಾಜಕಾರಣಿ ಪವನ್ ಕಲ್ಯಾಣ್ ಇಂದು ಗಂಡು ಮಗುವಿಗೆ ತಂದೆಯಾಗಿದ್ದಾರೆ.

    ಹೌದು. ನಟಿ ರೇಣು ದೇಸಾಯಿಗೆ ವಿಚ್ಚೇದನ ನೀಡಿದ ಬಳಿಕ ನಟ ಪವನ್ ಕಲ್ಯಾಣ್ ರಷ್ಯಾದ ಅನ್ನಾ ಲೆಜ್ನೆವಾ ಅವರನ್ನು ವರಿಸಿದ್ದರು. ಕಳೆದ 2011ರಲ್ಲಿ ಟೀನ್ ಮಾರ್ ಎಂಬ ಚಿತ್ರದ ಶೂಟಿಂಗ್ ವೇಳೆ ಪವನ್ ಅವರು ಅನ್ನಾರನ್ನು ಭೇಟಿಯಾಗಿದ್ದರು. ಆ ಬಳಿಕ ಇಬ್ಬರು ಡೇಟಿಂಗ್ ಮಾಡಿದ್ದು, ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯೂ ಆದ್ರು. ಈಗಾಗಲೇ ದಂಪತಿಗೆ ಪೊಲೆನಾ ಎಂಬ ಹೆಸರಿನ ಹೆಣ್ಣು ಮಗುವಿದೆ. ಇದೀಗ ಮತ್ತೆ ಗಂಡು ಮಗುವಿಗೆ ಅನ್ನಾ ಜನ್ಮ ನಿಡಿದ್ದು, ಎರಡೂ ಕುಟುಂಬಗಳಲ್ಲೂ ಸಂತಸ ಮನೆ ಮಾಡಿದೆ.

    ಚಿತ್ರವೊಂದರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರೂ ಪವನ್ ಹೈದರಾಬಾದ್ ಗೆ ಬಂದು ತಾಯಿ ಹಾಗೂ ಮಗುವಿನ ಆರೋಗ್ಯವನ್ನು ವಿಚಾರಿಸಿದ್ದಾರೆ. ಸದ್ಯ ತಾಯಿ- ಮಗು ಆರೋಗ್ಯವಾಗಿದ್ದಾರೆ.

    ಒಟ್ಟಿನಲ್ಲಿ ನಿರೀಕ್ಷೆಯಂತೆ ಸಂಕ್ರಾತಿಗೆ ತನ್ನ 25ನೇಯ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ತಾಯಿ-ಮಗುವಿನ ಜೊತೆ ಪವನ್ ಕಲ್ಯಾಣ್ ತನ್ನ ಜೊತೆ ತನ್ನ ಅಮೂಲ್ಯ ಕ್ಷಣಗಳನ್ನು ಕಳೆಯಲಿದ್ದಾರೆ. ಪವನ್ ಈ ಮೊದಲು ಮದುವೆಯಾದ ರೇಣು ದೇಸಾಯಿಗೆ ಇಬ್ಬರು ಮಕ್ಕಳಿದ್ದು, ಮಗ ಅಕಿರ ಹಾಗೂ ಮಗಳು ಸದ್ಯ ಇದೀಗ ತಾಯಿಯ ಜೊತೆಗಿದ್ದಾರೆ.

  • ವೆಬ್‍ಸೈಟ್‍ನಲ್ಲಿ ನಟ, ನಟಿಯರ ಅಶ್ಲೀಲ ಫೋಟೋ – ಬೆಂಗ್ಳೂರಲ್ಲಿ ಕಾಮುಕ ವಶ

    ವೆಬ್‍ಸೈಟ್‍ನಲ್ಲಿ ನಟ, ನಟಿಯರ ಅಶ್ಲೀಲ ಫೋಟೋ – ಬೆಂಗ್ಳೂರಲ್ಲಿ ಕಾಮುಕ ವಶ

    ಬೆಂಗಳೂರು: ಟಾಲಿವುಡ್‍ನ ನಟಿಯರ ಫೋಟೋ, ವೀಡಿಯೋಗಳನ್ನು ಅಶ್ಲೀಲವಾಗಿ ತೋರಿಸಿ ಆಪ್‍ಲೋಡ್ ಮಾಡ್ತಿದ್ದ ವ್ಯಕ್ತಿಯೊಬ್ಬನನ್ನು ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಕಾಮುಕ ವ್ಯಕ್ತಿಯನ್ನು ದಾಸರಿ ಪ್ರದೀಪ್ ಎನ್ನಲಾಗಿದ್ದು, ಈತ ಸುಮಾರು 30 ವೈಬ್‍ಸೈಟ್‍ಗಳಿಗೆ ನಿರ್ವಹಣೆ ಮಾಡುತ್ತಿದ್ದನು. ಅಲ್ಲದೇ ಮನಬಂದಂತೆ ನಟಿಯರ ಬಗ್ಗೆ ಅಸಭ್ಯವಾಗಿ ಆಪ್‍ಲೋಡ್ ಮಾಡ್ತಿದ್ದ ಎನ್ನಲಾಗುತ್ತಿದೆ.

    ನಟಿಯರ ದೂರಿನ ಮೇರೆಗೆ ಎಚ್ಚೆತ್ತ ಹೈದ್ರಾಬಾದ್ ಸೈಬರ್ ಕ್ರೈಂ ಪೊಲೀಸರು ನಿನ್ನೆ ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಿ ಆರೋಪಿ ಪ್ರದೀಪ್‍ನನ್ನು ವಶಕ್ಕೆ ಪಡೆದಿದ್ದು ಇಂದು ಹೈದ್ರಾಬಾದ್‍ನ ಕೋರ್ಟ್‍ಗೆ ಹಾಜರುಪಡಿಸಲಿದ್ದಾರೆ.

     

  • ನಿಜವಾದ ದರೋಡೆಕೋರ ಅಂದ್ಕೊಂಡು ಶೂಟಿಂಗ್ ಮಾಡ್ತಿದ್ದ ನಟನ ಮೇಲೆ ಫೈರಿಂಗ್ ಮಾಡಿದ ಪೊಲೀಸ್

    ನಿಜವಾದ ದರೋಡೆಕೋರ ಅಂದ್ಕೊಂಡು ಶೂಟಿಂಗ್ ಮಾಡ್ತಿದ್ದ ನಟನ ಮೇಲೆ ಫೈರಿಂಗ್ ಮಾಡಿದ ಪೊಲೀಸ್

    ವಾಷಿಂಗ್ಟನ್: ಸಿನಿಮಾಗಾಗಿ ದರೋಡೆಕೋರನಂತೆ ನಟಿಸುತ್ತಿದ್ದ ನಟನನ್ನು ನಿಜವಾದ ದರೋಡೆಕೋರ ಎಂದು ತಿಳಿದು ಪೊಲೀಸರು ಅವರ ಮೇಲೆ ಫೈರಿಂಗ್ ಮಾಡಿರೋ ಘಟನೆ ಅಮೆರಿಕದಲ್ಲಿ ನಡೆದಿದೆ.

    ಇಂಡಿಯಾನಾದ ಕ್ರಾವ್‍ಫರ್ಡ್ಸ್ ವಿಲ್ಲೆ ಪೊಲೀಸರು ಬಾಡಿಕ್ಯಾಮ್ ವಿಡಿಯೋವನ್ನ ಬಿಡುಗಡೆ ಮಾಡಿದ್ದು, ಪೊಲೀಸ್ ಅಧಿಕಾರಿಯೊಬ್ಬರು ನಟನ ಮೇಲೆ ಗುಂಡು ಹಾರಿಸೋ ದೃಶ್ಯ ಸೆರೆಯಾಗಿದೆ. ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಮುಸುಕುಧಾರಿ ವ್ಯಕ್ತಿ ಗನ್ ಹಿಡಿದು ಉಪಹಾರ ಗೃಹದೊಳಗೆ ಹೋಗುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಬಂದಿದ್ರು ಎಂದು ಇಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

    ಪೊಲೀಸರು ಸ್ಥಳಕ್ಕೆ ಬಂದ ವೇಳೆ ಶೂಟಿಂಗನ್ನು ನಿಜವಾದ ದರೋಡೆ ಎಂದು ತಿಳಿದು ಗನ್ ಕಳೆಗಿಡುವಂತೆ ಹೇಳಿದ್ದಾರೆ. ಬಳಿಕ ಅದೊಂದು ಶೂಟಿಂಗ್ ಪ್ರಾಪರ್ಟಿ ಅಷ್ಟೇ ಎಂಬುದು ಗೊತ್ತಾಗಿದೆ.

    ಡ್ರಾಪ್ ದಿ ಗನ್ ಎಂದು ಹೇಳುತ್ತಾ ಪೊಲೀಸ್ ಅಧಿಕಾರಿ ಫೈರ್ ಮಾಡೋದನ್ನ ವಿಡಿಯೋದಲ್ಲಿ ಕಾಣಬಹುದು. ಆಗ ನಟ ಜೆಫ್ ಡಫ್ ನಾವು ಸಿನಿಮಾ ಶೂಟಿಂಗ್ ಮಾಡ್ತಿದ್ದೀವಿ ಎಂದು ಕಿರುಚುತ್ತಾ ಗನ್ ಕೆಳಗಿಟ್ಟು ಮುಸುಕು ತೆಗೆದಿದ್ದಾರೆ. ಅದೃಷ್ಟವಶಾತ್ ಪೊಲೀಸರು ಹಾರಿಸಿದ ಗುಂಡು ಡಫ್‍ಗೆ ತಗುಲಲಿಲ್ಲ. ಬದಲಿಗೆ ಹತ್ತಿರದ ಕಟ್ಟಡಕ್ಕೆ ಬಿದ್ದಿದೆ. ಪೊಲೀಸ್ ಇಲಾಖೆ ಈ ವಿಡಿಯೋವನ್ನ ತನ್ನ ವೆಬ್‍ಸೈಟ್‍ನಲ್ಲಿ ಬಿಡುಗಡೆ ಮಾಡಿದೆ.

    ಈ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರೋ ಮತ್ತೊಬ್ಬ ನಟ ಫಿಲಿಪ್ ಡೆಮೊರೆಟ್, ಬುಲೆಟ್ ಆತನ ತಲೆಯ ಪಕ್ಕದಲ್ಲೇ ಹೋಯ್ತು. ಅದರ ಬಗ್ಗೆ ನಾನು ಯೋಚಿಸಲಾರೆ. ಒಂದು ವೇಳೆ ಗುಂಡು ತಾಗಿದ್ದರೆ ದೊಡ್ಡ ಅನಾಹುತವಾಗ್ತಿತ್ತು. ದೇವರ ದಯದಿಂದ ಹಾಗಾಗಲಿಲ್ಲ ಎಂದಿದ್ದಾರೆ.

    ಮಾಂಟ್ಗೊಮೆರಿ ಕೌಂಟಿ ಪ್ರೊಡಕ್ಷನ್‍ನವರು ಸಿನಿಮಾ ಶೂಟಿಂಗ್ ಮಾಡುತ್ತಿದ್ದರೆಂದು ಬಳಿಕ ಇಂಡಿಯಾನಾ ಪೊಲೀಸರಿಗೆ ಗೊತ್ತಾಗಿದೆ. ಆದ್ರೆ ಉಪಹಾರ ಗೃಹದವರಾಗಲಿ, ಪ್ರೊಡಕ್ಷನ್ ಕಂಪನಿಯವರಗಲೀ ಪೊಲೀಸರಿಗೆ ಹಾಗೂ ಅಕ್ಕಪಕ್ಕದವರಿಗೆ ಶೂಟಿಂಗ್ ನಡೆಯುವ ಬಗ್ಗೆ ತಿಳಿಸಿರಲಿಲ್ಲ ಎಂದು ವರದಿಯಾಗಿದೆ.

  • `ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

    `ಕಾರಂತ ಪ್ರಶಸ್ತಿ’ ಪ್ರಕಾಶ್ ರೈ ಸಾಧನೆಗೆ ನೀಡುತ್ತಿರುವುದು, ರಾಜಕೀಯ ಬೆರೆಸಬೇಡಿ- ಪ್ರಮೋದ್

    ಉಡುಪಿ: ನಟ ಪ್ರಕಾಶ್ ರೈಗೆ ಪ್ರಶಸ್ತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಸಮಿತಿಯಲ್ಲಿ ಯಾವುದೇ ಗೊಂದಲವಿಲ್ಲ. ನಟ ಪ್ರಕಾಶ್ ರೈಯವರೇ ಕಾರಂತರ ಹೆಸರಿನ ಗೌರವಕ್ಕೆ ಪಾತ್ರರಾಗಲಿದ್ದಾರೆ ಎಂದು ಕೋಟತಟ್ಟು ಗ್ರಾ.ಪಂ.ಅಧ್ಯಕ್ಷ ಪ್ರಮೋದ್ ಹಂದೆ ಹೇಳಿದ್ದಾರೆ.

    ಕುಂದಾಪುರ ತಾಲೂಕಿನ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಗೆ ರೈ ಆಯ್ಕೆಯನ್ನು ವಿರೋಧ ಮಾಡೋದು ಸರಿಯಲ್ಲ. ಕೋಟತಟ್ಟು ಗ್ರಾ.ಪಂ. ಶಿವರಾಮ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಶಿವರಾಮ ಕಾರಂತ ಟ್ರಸ್ಟ್ ಕೊಡುವ ಪ್ರಶಸ್ತಿ ಇದು. ಕಳೆದ 13 ವರ್ಷಗಳಿಂದ ಕೊಡುತ್ತಿರುವ ಪ್ರಶಸ್ತಿ ಈ ಬಾರಿ ನಟ ಪ್ರಕಾಶ್ ರೈಯನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ರು.

    ಪ್ರಕಾಶ್ ರೈ ಈ ಪ್ರಶಸ್ತಿಗೆ ನಿಜವಾಗಿಯೂ ಅರ್ಹರು. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ವೈಯುಕ್ತಿಕ ಹೇಳಿಕೆಗೂ ಪ್ರಶಸ್ತಿಗೂ ಸಂಬಂಧವಿಲ್ಲ. ಅಕ್ಟೋಬರ್ 10ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಾರ್ಯಕ್ರಮ ನಿಗದಿಯಂತೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಅವರು ಹೇಳಿದ್ರು.

    ಪ್ರಶಸ್ತಿ ಆಯ್ಕೆಗೆ ಐದು ಮಂದಿ ಆಯ್ಕೆ ಮಂಡಳಿ ನೇಮಕ ಮಾಡಲಾಗಿತ್ತು. ಆಯ್ಕೆ ಮಂಡಳಿ ಪ್ರಕಾಶ್ ರೈ ಅವರನ್ನು ಆಯ್ಕೆ ಮಾಡಿದೆ. ಕಳೆದ 12 ವರ್ಷಗಳಲ್ಲಿ ಸಾಧಕರಿಗೆ ನೀಡುತ್ತಾ ಬಂದಂತೆಯೇ ಈ ಬಾರಿ ಪ್ರಕಾಶ್ ರೈ ಪ್ರಶಸ್ತಿ ಸ್ವೀಕರಿಸಲು ಬರುತ್ತಾರೆ. ಕಾರಂತರ ಹೆಸರಿಗೆ ಚ್ಯುತಿ ಬರಬಾರದು. ಪ್ರಶಸ್ತಿ ನೀಡಿಕೆ ವಿಚಾರದಲ್ಲಿ ರಾಜಕೀಯ ಬೇಡ ಅಂದ್ರು.

    ಈ ಹಿಂದೆ ಕಾರಂತ ಪ್ರಶಸ್ತಿಗೆ ಪಾತ್ರರಾದವರು ಮಾಜಿ ಸಿಎಂ ವೀರಪ್ಪ ಮೊಯ್ಲಿ, ಪತ್ರಕರ್ತ ರವಿ ಬೆಳಗೆರೆ, ಸಾಹಿತಿ ಜಯಂತ್ ಕಾಯ್ಕಿಣಿ, ದಿ. ರಾಮಚಂದ್ರ ಚಿಟ್ಟಾಣಿ, ಡಾ. ಬಿ.ಎಮ್ ಹೆಗ್ಡೆ, ಸಾಲುಮರದ ತಿಮ್ಮಕ್ಕ, ಡಾ. ಎಂ ಮೋಹನ್ ಆಳ್ವ, ನಾಟಕಕಾರ ಸದಾನಂದ ಸುವರ್ಣ, ಬಿ. ಜಯಶ್ರೀ, ಗಿರೀಶ್ ಕಾಸರವಳ್ಳಿ, ಮಾಜಿ ಲೋಕಾಯುಕ್ತ ವೆಂಕಟಾಚಲಯ್ಯ, ಶಿಕ್ಷಣ ತಜ್ಞ ಕೆ.ಆರ್ ಹಂದೆ ಇವರುಗಳಿಗೆ ಕಾರಂತ ಹುಟ್ಟೂರ ಸನ್ಮಾನ ಲಭಿಸಿತ್ತು. ಈ ಬಾರಿ ನಟ ಪ್ರಕಾಶ್ ರೈ ಈ ಗೌರವಕ್ಕೆ ಪಾತ್ರರಾಗಲಿದ್ದಾರೆ.

     

  • ಬಿಗ್ ಬಾಸ್ ನಲ್ಲಿ ಅವಕಾಶಕ್ಕಾಗಿ ಸೈಕಲ್ ನಲ್ಲೇ ಬೆಂಗ್ಳೂರಿಗೆ ಬರ್ತಿದ್ದಾನೆ ಬೆಳಗಾವಿ ಯುವಕ!

    ಬಿಗ್ ಬಾಸ್ ನಲ್ಲಿ ಅವಕಾಶಕ್ಕಾಗಿ ಸೈಕಲ್ ನಲ್ಲೇ ಬೆಂಗ್ಳೂರಿಗೆ ಬರ್ತಿದ್ದಾನೆ ಬೆಳಗಾವಿ ಯುವಕ!

    ಧಾರವಾಡ: ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‍ನಲ್ಲಿ ಅವಕಾಶ ಕೊಡಿ ಎಂದು ಜಿಲ್ಲೆಯ ಯುವಕನೊಬ್ಬ ಬೆಂಗಳೂರಿಗೆ ಸೈಕಲ್ ಪ್ರಯಾಣ ಬೆಳೆಸಿದ್ದಾನೆ.

    ಹೌದು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮುಡಲಗಿ ಪಟ್ಟಣದ ಮಂಜುನಾಥ ರೆಳೆಕರ ಭಾನುವಾರ ಸೈಕಲ್ ನಲ್ಲಿ ತನ್ನ ಪ್ರಯಾಣ ಆರಂಭ ಮಾಡಿದ್ದು, ಇಂದು ಧಾರವಾಡಕ್ಕೆ ಬಂದು ತಲುಪಿದ್ದಾರೆ.

    ಮಂಜುನಾಥ ಬೆಂಗಳೂರಿಗೆ ಬಂದು ನಟ ಸುದೀಪ್ ಅವರನ್ನು ಭೇಟಿ ಮಾಡಿ ತನಗೂ ಬಿಗ್ ಬಾಸ್ ಸೀಸನ್ 5 ರಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಿದ್ದಾರೆ. ಹೀಗಾಗಿ 6 ದಿನಗಳಲ್ಲಿ ಬೆಂಗಳೂರಿಗೆ ತಲುಪುವ ಗುರಿಯನ್ನು ಹಾಕಿಕೊಂಡಿದ್ದಾರೆ.

    ಮಿಮಿಕ್ರಿ ಆರ್ಟಿಸ್ಟ್ ಆಗಿರೋ ಮಂಜುನಾಥ್ ಅವರಿಗೆ ಬಿಗ್ ಬಾಸ್‍ನಲ್ಲಿ ಭಾಗವಹಿಸಲು ಅವಕಾಶ ಕೊರಲು ಹೊರಟಿದ್ದಕ್ಕೆ, ಹಲವು ಜನರು ಬೆಂಬಲ ವ್ಯಕ್ತ ಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ತನ್ನ ಸೈಕಲ್‍ಗೆ ಕನ್ನಡ ಧ್ವಜ ಕಟ್ಟಿಕೊಂಡು ಹೊರಟಿರುವ ಇವರು ಸೆಪ್ಟೆಂಬರ್ 30 ರಂದು ಬೆಂಗಳೂರಿನಲ್ಲಿ ನಟ ಸುದೀಪ್ ಅವರನ್ನು ಭೇಟಿಯಾಗಲು ಪ್ಲಾನ್ ಮಾಡಿದ್ದಾರೆ.

  • ಭದ್ರತೆ ಕೋರಲು ಮುಂದಾದ ನಟ ಚೇತನ್

    ಭದ್ರತೆ ಕೋರಲು ಮುಂದಾದ ನಟ ಚೇತನ್

    ಬೆಂಗಳೂರು: ಸ್ಯಾಂಡಲ್ ವುಡ್ ನಟ ಚೇತನ್ ಅವರು ತನಗೆ ಭದ್ರತೆ ಒದಗಿಸಬೇಕೆಂದು ಇದೀಗ ಪೊಲೀಸರಿಗೆ ಮನವಿ ಮಾಡಲು ಮುಂದಾಗಿದ್ದಾರೆ.

    ವೀರಶೈವ ಲಿಂಗಾಯತ ಪ್ರತ್ಯೇಕತೆ ಹೋರಾಟದಲ್ಲಿ ಪಾಲ್ಗೊಂಡು ಭಾಷಣ ಮಾಡಿದ ಬಳಿಕ ತನ್ನ ಕುಮಾರ ಪಾರ್ಕ್ ಬಳಿಯ ಮನೆ ಸುತ್ತ ಅನಾಮಧೇಯ ವ್ಯಕ್ತಿಗಳು ಓಡಾಡುತ್ತಿರುವುದರಿಂದ ನನಗೆ ಜೀವಭಯವಿದೆ ಅಂದಿದ್ದಾರೆ.

    ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಬೆದರಿಕೆಗಳು ಬರುತ್ತಿವೆ. ಹೀಗಾಗಿ ನಟ ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಶೇಷಾದ್ರಿಪುರಂ ಠಾಣೆಗೆ ಮನವಿ ಮಾಡಲು ನಿರ್ಧರಿಸಿದ್ದಾರೆ.

    ಇತ್ತೀಚೆಗೆ ನಗರದ ಬಸವ ಸಮಿತಿಯಲ್ಲಿ ನಡೆಯುತ್ತಿರುವ ಲಿಂಗಾಯತ ಧರ್ಮ- ಸ್ವತಂತ್ರ ಧರ್ಮ ನಿರ್ಣಾಯಕ ಸಭೆಯಲ್ಲಿ ಮಾತನಾಡಿದ ಚೇತನ್, ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಇವುಗಳು ಅಸಮಾನತೆ ಇರುವ ಧರ್ಮ. ವೀರಶೈವದಲ್ಲಿ ಲಿಂಗಬೇಧ, ದೇವಾಲಯದ ಆಚರಣೆ, ಜಾತಿ ಬೇಧ ಒಪ್ಪಿಕೊಂಡಿದ್ದಾರೆ. ಆದ್ರೇ ಇದು ಬಸವಣ್ಣ ಒಪ್ಪಲಿಲ್ಲ. ಲಿಂಗಾಯತ ವೀರಶೈವ ಧರ್ಮ ನಮಗೆ ಬೇಕಾಗಿಲ್ಲ. ನಮ್ಮ ಒಗ್ಗಟ್ಟು ಒಡೆಯಲು ಮುಂದಾಗಿದ್ದು ಹಿಂದೂ ಧರ್ಮ, ಸುತ್ತೂರು ಮಠ ಹಾಗೂ ಯಡಿಯೂರಪ್ಪ ಅಂತ ಹೇಳಿದ್ದರು.

    ಬಸವಣ್ಣನವರ ಹೆಸರನ್ನು ರಾಜಕೀಯ ಪಕ್ಷದವರು ದುರುಪಯೋಗ ಮಾಡಿಕೊಳ್ಳುತ್ತಾರೆ. ಬಿಜೆಪಿ ಕಾರ್ಯಕ್ರಮದಲ್ಲಿ ಸಿನಿಮಾ ರಂಗದವರೊಬ್ಬರು ಆಭಿನವ ಬಸವಣ್ಣ ಅಂತ ವರ್ಣಿಸಿದ್ರು. ಭ್ರಷ್ಟಾಚಾರದ ಆರೋಪ ಹೊತ್ತಿರುವ ಯಡಿಯೂರಪ್ಪ, ದಲಿತರ ಮನೆಯಲ್ಲಿ ತಿಂಡಿ ತಿನ್ನೋ ಡ್ರಾಮಾ ಮಾಡುವ ಯಡಿಯೂರಪ್ಪ ಆಧುನಿಕ ಕೊಂಡಿ ಮನುಷ್ಯ ಅಂತ ಆಕ್ರೋಶ ವ್ಯಕ್ತಪಡಿಸಿದ್ದರು.

    https://www.youtube.com/watch?v=STXOtb7oEa0

  • 50 ಸಾಲು ಸಸಿ ನೆಡುವ ಮೂಲಕ ಸುದೀಪ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ರು!

    50 ಸಾಲು ಸಸಿ ನೆಡುವ ಮೂಲಕ ಸುದೀಪ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಆಚರಿಸಿದ್ರು!

    ಚಾಮರಾಜನಗರ: ಇಂದು ಸ್ಯಾಂಡಲ್ ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ 43ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸುದೀಪ್ ಅಭಿನಮಾನಿಗಳು ಚಾಮರಾಜನಗರದಲ್ಲಿ ವಿಶೇಷವಾಗಿ ಹುಟ್ಟುಹಬ್ಬವನ್ನು ಆಚರಿಸಿದರು.

    ಹೌದು. ನಗರದ ಈಶ್ವರಿ ಮ್ಯೂಸಿಕಲ್ ಅಕಾಡೆಮಿ ಅಂಡ್ ಸೋಷಿಯಲ್ ಟ್ರಸ್ಟ್ ವತಿಯಿಂದ 50 ಸಾಲು ಸಸಿಗಳನ್ನು ನೆಟ್ಟು, ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು.

    ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ಟ್ರಸ್ಟ್ ಅಧ್ಯಕ್ಷ ವೆಂಕಟೇಶ್, ನಟರ ಹಾಗೂ ಗಣ್ಯರ ಜನ್ಮದಿನದಂದು ಗಿಡಗಳನ್ನು ನೆಟ್ಟು ಪಾಲನೆ, ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ. ಅದ್ರಂತೆ ಸುದೀಪ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಗಿಡ ನೆಟ್ಟು ಹುಟ್ಟು ಹಬ್ಬ ಆಚರಣೆ ಮಾಡಿದ್ರು.

  • ಶೀಘ್ರದಲ್ಲೇ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ – ಅಭಿಮಾನಿಗಳ ಜೊತೆ ಭಾರೀ ಚರ್ಚೆ

    ಶೀಘ್ರದಲ್ಲೇ ಉಪೇಂದ್ರ ರಾಜಕೀಯಕ್ಕೆ ಎಂಟ್ರಿ – ಅಭಿಮಾನಿಗಳ ಜೊತೆ ಭಾರೀ ಚರ್ಚೆ

    ಬೆಂಗಳೂರು: ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಈ ಹಿಂದೆ ಸಾಕಷ್ಟು ಬಾರಿ ರಾಜಕೀಯಕ್ಕೆ ಬರೋ ಇಂಗಿತ ವ್ಯಕ್ತಪಡಿಸಿದ್ರು. ಅಲ್ಲದೇ ಕೆಲವೇ ದಿನಗಳ ಹಿಂದೆ ರಾಜಕೀಯ ಅಂದ್ರೆ ಏನು? ರಾಜಕೀಯ ಪ್ರಜಾಕೀಯ ಆಗ್ಬೇಕು ಅಂತಾ ಟ್ವೀಟ್ ಮಾಡಿದ್ರು. ಪಾಕ್, ಚೀನಾ ಜೊತೆ ಭಾರತದ ಗಡಿ ಗಲಾಟೆಗಳಾದಾಗಲೂ ಟ್ವೀಟ್ ಮಾಡಿ ರಾಜಕೀಯ ನಾಯಕರ ಗಮನ ಸೆಳೆದಿದ್ರು. ಅಣ್ಣಾ ಹಜಾರೆಯನ್ನು ಹೊಗಳಿದ್ರು. ಇದೆಲ್ಲಾ ನೋಡಿದ್ರೆ ಶೀಘ್ರದಲ್ಲೇ ಉಪೇಂದ್ರ ರಾಜಕೀಯಕ್ಕೆ ಬರೋದು ಫಿಕ್ಸ್ ಆದಂತಾಗಿದೆ.

    ಇನ್ನು ರಾಜಕಾರಣಕ್ಕೆ ಎಂಟ್ರಿ ಕೊಡುವ ಬಗ್ಗೆ ಆಪ್ತರ ಜೊತೆ ಸಮಾಲೋಚನೆ ನಡೆಸಿರೋ ಉಪ್ಪಿ, ರಾಜಕೀಯ ಪ್ರವೇಶಿಸುವ ಬಗ್ಗೆ ಈಗಾಗಲೇ ಅಂತಿಮ ಸಿದ್ಧತೆ ನಡೆಸಿದ್ದಾರೆ. ಈ ವರ್ಷವೇ ರಾಜಕೀಯಕ್ಕೆ ಧುಮುಕುವ ಬಗ್ಗೆ ಉಪೇಂದ್ರ ಗಂಭೀರ ಚಿಂತನೆ ನಡೆಸಿದ್ದು, ಕೆಲವು ಪಕ್ಷ ಹಾಗೂ ಅಭಿಮಾನಿಗಳಿಂದ ರಾಜಕೀಯಕ್ಕೆ ಬರುವಂತೆ ಒತ್ತಾಯ ಕೇಳಿಬರುತ್ತಿದೆ.

    ಭ್ರಷ್ಟಚಾರ ರಹಿತ ರಾಷ್ಟ್ರ ನಿರ್ಮಾಣದ ರಾಜಕೀಯ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಇಂಗಿತ ಹೊಂದಿದ್ದ ಉಪೇಂದ್ರ, ಆಪ್ತರ ಜೊತೆ ಸಮಾಲೋಚಿಸಿ ರಾಜಕೀಯ ರಂಗ ಪ್ರವೇಶದ ಬಗ್ಗೆ ನಿರ್ಧರಿಸಲಿದ್ದಾರೆ ಎಂಬುವುದಾಗಿ ತಿಳಿದುಬಂದಿದೆ.