Tag: ನಟ ಶಿವರಾಜ್ ಕುಮಾರ್

  • ʻಘೋಸ್ಟ್ʼ ಸಿನಿಮಾದಲ್ಲಿ ಪತ್ರಕರ್ತೆಯಾದ ಕೆಜಿಎಫ್‌ ನಟಿ ಅರ್ಚನಾ ಜೋಯಿಸ್

    ʻಘೋಸ್ಟ್ʼ ಸಿನಿಮಾದಲ್ಲಿ ಪತ್ರಕರ್ತೆಯಾದ ಕೆಜಿಎಫ್‌ ನಟಿ ಅರ್ಚನಾ ಜೋಯಿಸ್

    ಶಿವಣ್ಣ ನಟನೆಯ `ಘೋಸ್ಟ್’ (Ghost) ಸಿನಿಮಾ ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುಲೇ ಇದೆ. ಸ್ಟಾರ್ ಕಲಾವಿದರ ದಂಡೇ ಶಿವಣ್ಣನ ಟೀಮ್‌ಗೆ ಸೇರ್ಪಡೆಯಾಗುತ್ತಿದೆ. ಸದ್ಯ `ಕೆಜಿಎಫ್’ ಖ್ಯಾತಿಯ ಅರ್ಚನಾ ಜೋಯಿಸ್ (Archana Jois) `ಘೋಸ್ಟ್’ ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ.

     

    View this post on Instagram

     

    A post shared by Archana Jois (@jois_archie)

    `ವೇದ’ ಬಳಿಕ ಶಿವಣ್ಣ ನಟನೆಯ `ಘೋಸ್ಟ್’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇತ್ತೀಚಿಗೆ ಚಿತ್ರತಂಡಕ್ಕೆ ಅನುಪಮ್ ಖೇರ್, ಜಯರಾಮ್, ಪ್ರಶಾಂತ್ ನಾರಾಯಣ್ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈಗ ನಟಿ ಅರ್ಚನಾ ಕೂಡ ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಜೀವತುಂಬಿದ್ದಾರೆ. ಇದನ್ನೂ ಓದಿ: ರಾಕಿಂಗ್ ಸ್ಟಾರ್ ಮನೆ ಮುಂದೆ ಜನಸಾಗರ: ಯಶ್‌ ಜೊತೆಗೆ ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್

    ಶ್ರೀನಿ ನಿರ್ದೇಶನದ ಈ ಚಿತ್ರದಲ್ಲಿ `ಕೆಜಿಎಫ್’ (Kgf) ನಟಿ ಅರ್ಚನಾ ಪತ್ರಕರ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ತಮ್ಮ ಭಾಗದ ಚಿತ್ರೀಕರಣ ಕೂಡ ಕಂಪ್ಲೀಟ್ ಮಾಡಿದ್ದಾರೆ. ಎಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಅರ್ಚನಾ ನಟಿಸಿದ್ದಾರೆ.

    ಸಂದೇಶ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಶಿವಣ್ಣ ವಿಭಿನ್ನ ಗೆಟಪ್‌ನಲ್ಲಿ ನಟಿಸಿದ್ದಾರೆ. ಈಗಾಗಲೇ ಸಿನಿಮಾ 60ರಷ್ಟು ಚಿತ್ರೀಕರಣ ಆಗಿದೆ. ಸದ್ಯದಲ್ಲೇ 3ನೇ ಹಂತದ ಶೂಟಿಂಗ್ ಶುರುವಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಶಿವಣ್ಣನ ಮನೆಗೆ ಭೇಟಿ ನೀಡಿದ `ಸತ್ಯ ಇನ್ ಲವ್’ ಚಿತ್ರದ ನಾಯಕಿ ಜೆನಿಲಿಯಾ

    ಶಿವಣ್ಣನ ಮನೆಗೆ ಭೇಟಿ ನೀಡಿದ `ಸತ್ಯ ಇನ್ ಲವ್’ ಚಿತ್ರದ ನಾಯಕಿ ಜೆನಿಲಿಯಾ

    ಬಾಲಿವುಡ್ ನಟಿ ಜೆನಿಲಿಯಾ ಮತ್ತೆ ಕನ್ನಡ ಸಿನಿಮಾಗೆ ಕಂಬ್ಯಾಕ್ ಆಗಿದ್ದಾರೆ. ಬಹುಭಾಷೆಗಳಲ್ಲಿ ಜೆನಿಲಿಯಾ ಮಿಂಚುತ್ತಿದ್ದಾರೆ. ಸದ್ಯ ಬೆಂಗಳೂರಿಗೆ ಬಂದಿಳಿದಿರುವ ನಟಿ ಜೆನಿಲಿಯಾ, ನಟ ಶಿವಣ್ಣ ಮನೆಗೆ ಜೆನಿಲಿಯಾ ಮತ್ತು ರಿತೇಶ್ ಭೇಟಿ ನೀಡಿದ್ದಾರೆ.

    ಬಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳ ಮೂಲಕ ಸೈ ಎನಿಸಿಕೊಂಡ ನಟಿ ಜೆನಿಲಿಯಾ, 2018ರಲ್ಲಿ `ಸತ್ಯ ಇನ್ ಲವ್’ ಚಿತ್ರದ ಮೂಲಕ ಶಿವಣ್ಣನಿಗೆ ನಾಯಕಿಯಾಗಿ ನಟಿಸಿದ್ದರು. ಬಳಿಕ ಮದುವೆ, ಸಂಸಾರ ಅಂತಾ ಚಿತ್ರರಂಗದಿಂದ ದೂರ ಸರಿದಿದ್ದರು. ಈಗ ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ ಚಿತ್ರದಲ್ಲಿ ಪವರ್‌ಫುಲ್ ಪಾತ್ರದಲ್ಲಿ ಜೆನಿಲಿಯಾ ನಟಿಸುತ್ತಿದ್ದಾರೆ. ಇದೀಗ ಜೆನಿಲಿಯಾ ದಂಪತಿ ಶಿವಣ್ಣನ ಮನೆಗೆ ಭೇಟಿ ನೀಡಿದ್ದಾರೆ.

    `ಸತ್ಯ ಇನ್ ಲವ್’ ಚಿತ್ರದಲ್ಲಿ ಶಿವಣ್ಣನ ಜೋಡಿಯಾಗಿ ಜೆನಿಲಿಯಾ ಮಿಂಚಿದ್ದರು. ಇದೀಗ ಕಿರೀಟಿ ಮತ್ತು ಶ್ರೀಲೀಲಾ ಅಭಿನಯದ ಹೊಸ ಚಿತ್ರದಲ್ಲಿ ಜೆನಿಲಿಯಾ ನಟಿಸುತ್ತಿದ್ದಾರೆ. ಸದ್ಯ ಶಿವಣ್ಣ ಮತ್ತು ಗೀತಾ ಅವರನ್ನ ಜೆನಿಲಿಯಾ ಭೇಟಿ ಮಾಡಿದ್ದಾರೆ. ಈ ವೇಳೆ ನಟ ರಿತೇಶ್ ದೇಶ್‌ಮುಖ್ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಸದ್ದಿಲ್ಲದೆ ಹಸೆಮಣೆ ಏರಿದ್ರಾ ʻಗ್ರಾಮಾಯಣʼ ಚಿತ್ರದ ನಾಯಕಿ ಅಮೃತಾ ಅಯ್ಯರ್

    ಈ ವೇಳೆ ಕಿರೀಟಿ ಮತ್ತು ಜೆನಿಲಿಯಾ ಹೊಸ ಸಿನಿಮಾಗೆ ಶಿವರಾಜ್‌ಕುಮಾರ್ ಶುಭಹಾರೈಸಿದ್ದಾರೆ. ಈ ಚಿತ್ರದ ಶೂಟಿಂಗ್‌ ಕೂಡ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಫಿನಾಡು ಚಂದುಗೆ ಸರ್ಪ್ರೈಸ್ ಗಿಫ್ಟ್ ನೀಡಿದ ಅನುಶ್ರೀ

    ಕಾಫಿನಾಡು ಚಂದುಗೆ ಸರ್ಪ್ರೈಸ್ ಗಿಫ್ಟ್ ನೀಡಿದ ಅನುಶ್ರೀ

    ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಅಪಾರ ಅಭಿಮಾನಿಗಳ ಮನಗೆದ್ದಿರುವ ಕಾಫಿನಾಡು ಚಂದುಗೆ ಇದೀಗ ಸರ್ಪ್ರೈಸ್ ಗಿಫ್ಟೊಂದು ಸಿಕ್ಕಿದೆ. ಕಾಫಿನಾಡು ಚಂದುಗೆ ನಿರೂಪಕಿ ಅನುಶ್ರೀ ಟೈಟಾನ್ ವಾಚ್ ಗಿಫ್ಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ ಸ್ವತಃ ತಾವೇ ಚಂದು ಕೈಗೆ ವಾಚ್‌ ಕಟ್ಟಿದ್ದಾರೆ.

     

    View this post on Instagram

     

    A post shared by Coffe nadu chandu (@coffeenaduchandu)

    ಬರ್ತ್‌ಡೇ ಸಾಂಗ್ ಹೇಳುವ ಮೂಲಕ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಕಾಫಿನಾಡು ಚಂದು ಗುರುತಿಸಿಕೊಂಡಿದ್ದಾರೆ. ತಮ್ಮ ಪ್ರತಿ ವೀಡಿಯೋದಲ್ಲಿಯೂ ನಾನು ಶಿವಣ್ಣ ಮತ್ತು ಪುನೀತ್ ಅಣ್ಣ ಅವರ ಅಭಿಮಾನಿ ಎಂದು ತಮ್ಮ ಅಭಿಮಾನವನ್ನ ತಿಳಿಸುತ್ತಿದ್ದರು. ಇತ್ತೀಚೆಗೆ ಡಿಕೆಡಿ ವೇದಿಕೆಯಲ್ಲಿ ಶಿವಣ್ಣ ಮತ್ತು ಅನುಶ್ರೀ ಜತೆ ಇಡೀ ತಂಡವನ್ನ ಕಾಫಿನಾಡು ಚಂದು ಭೇಟಿಯಾಗಿದ್ದಾರೆ. ಈ ವೇಳೆ ಅನುಶ್ರೀ, ಚಂದುಗೆ ಬಂಪರ್ ಗಿಫ್ಟ್ ನೀಡಿದ್ದಾರೆ. ಇದನ್ನೂ ಓದಿ:ಬಿಗ್‌ ಬಾಸ್: ಸೋನು ಶ್ರೀನಿವಾಸ್ ಗೌಡಗೆ ಸಖತ್ ಶಾಕ್ ಕೊಟ್ಟ ಜನ

     

    View this post on Instagram

     

    A post shared by Coffe nadu chandu (@coffeenaduchandu)

    ಇತ್ತೀಚೆಗೆ ಡಿಕೆಡಿ ಶೋನಲ್ಲಿ ಕಾಫಿನಾಡು ಚಂದು ಅವರ ಆಸೆಯಂತೆ ಕಡೆಗೂ ಶಿವಣ್ಣ ಅವರನ್ನ ಭೇಟಿಯಾಗಿ ಬಂದಿದ್ದಾರೆ. ಈ ಕಾರ್ಯಕ್ರಮದ ಶೂಟಿಂಗ್ ನಂತರ ಹೊರಭಾಗದಲ್ಲಿ ಚಂದು ಕೈಗೆ ಟೈಟಾನ್ ವಾಚ್ ಕಟ್ಟಿ, ಅನುಶ್ರೀ ಶುಭಹಾರೈಸಿದ್ದಾರೆ. ಆತ್ಮೀಯತೆಯಿಂದ ಮಾತನಾಡಿಸಿದ್ದಾರೆ.

    ಅನುಶ್ರೀ ಅವರ ಗಿಫ್ಟ್ ನೋಡಿ, ಕಾಫಿನಾಡು ಚಂದು ಕೂಡ ಖುಷಿಪಟ್ಟಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ಕೊನೆಗೂ ಶಿವಣ್ಣ, ಅನುಶ್ರೀ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಕಾಫಿನಾಡು ಚಂದು

    ಸೋಷಿಯಲ್ ಮೀಡಿಯಾದ ಸೆನ್ಸೇಷನಲ್ ಸ್ಟಾರ್ ಕಾಫಿನಾಡು ಚಂದು ಮತ್ತೆ ಸುದ್ದಿಯಲ್ಲಿದ್ದಾರೆ. ಕೊನೆಗೂ ಶಿವಣ್ಣ ಅವರನ್ನ ಭೇಟಿಯಾಗಿ ತಮ್ಮ ಮಹಾದಾಸೆಯನ್ನ ಈಡೇರಿಸಿಕೊಂಡಿದ್ದಾರೆ. ಈ ಕುರಿತ ವೀಡಿಯೋವೊಂದನ್ನ ಕಾಫಿನಾಡು ಚಂದು ಶೇರ್ ಮಾಡಿದ್ದಾರೆ.

    ಬರ್ತ್ಡೇ ಸಾಂಗ್ ಹೇಳುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಸ್ಟಾರ್ ಅಂದ್ರೆ ಕಾಫಿನಾಡು ಚಂದು. ತನ್ನ ಪ್ರತಿ ವೀಡಿಯೋದಲ್ಲೂ ತಾನು ಶಿವಣ್ಣ ಮತ್ತು ಪುನೀತ್ ಅವರ ಅಭಿಮಾನಿ ಎಂದು ಹೇಳಿಯೇ ಬರ್ತ್ಡೇ ಸಾಂಗ್ ಅನ್ನು ಹೇಳುತ್ತಿದ್ದರು. ಜತೆಗೆ ಸಾಕಷ್ಟು ಬಾರಿ ತಾವು ಶಿವಣ್ಣ ಅವರನ್ನ ಭೇಟಿಯಾಗಬೇಕು ಎಂದು ಹೇಳಿಕೊಂಡಿದ್ದರು. ಈಗ ಆ ಆಸೆ ನೆರವೇರಿದೆ. ಇದನ್ನೂ ಓದಿ:ಉದಯ್‌ ಹಿಂಬದಿಯಿಂದ ತಬ್ಬಿ ಕಿಸ್‌ ಮಾಡ್ತಾರೆ: ಬಿಗ್‌ ಬಾಸ್‌ ಮನೆಯಲ್ಲಿ ಮಹಿಳಾ ಸ್ಪರ್ಧಿಗಳು ಗರಂ

    ಹೌದು. ಖಾಸಗಿ ಚಾನೆಲ್‌ನಲ್ಲಿ ಜಡ್ಜ್ ಆಗಿರುವ ಶಿವರಾಜ್‌ಕುಮಾರ್ ಅವರನ್ನ ಸೆಟ್‌ನಲ್ಲೇ ಭೇಟಿ ಮಾಡಿ, ಸ್ಜೇಜ್ ಮೇಲೆ ಹಾಡಿದ್ದಾರೆ. ಈ ವೀಡಿಯೋ ಕೂಡ ಚಂದು ಶೇರ್ ಮಾಡಿದ್ದಾರೆ. ಅಷ್ಟೇ ಅಲ್ಲ, ನಿರೂಪಕಿ ಅನುಶ್ರೀ ಅವರನ್ನ ಕೂಡ ಕಾಫಿನಾಡು ಚಂದು ಭೇಟಿ ಮಾಡಿದ್ದಾರೆ. ಈ ಕುರಿತ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ನಟ ಶಿವರಾಜ್ ಕುಮಾರ್ ಮನೆ ಬಳಿ ಕಳ್ಳತನ- ಖರ್ತನಾಕ್ ಕೊಲಂಬಿಯಾ ಗ್ಯಾಂಗ್ ಅರೆಸ್ಟ್

    ನಟ ಶಿವರಾಜ್ ಕುಮಾರ್ ಮನೆ ಬಳಿ ಕಳ್ಳತನ- ಖರ್ತನಾಕ್ ಕೊಲಂಬಿಯಾ ಗ್ಯಾಂಗ್ ಅರೆಸ್ಟ್

    – ಆರು ಕೆಜಿ ಚಿನ್ನ ಕಳ್ಳತನ ಮಾಡಿರೋ ಗ್ಯಾಂಗ್
    – ಕೃತ್ಯ ಎಸಗಲು ಗ್ಯಾಸ್‌ ಕಟ್ಟರ್‌, ವಾಕಿಟಾಕಿ ಬಳಕೆ

    ಬೆಂಗಳೂರು: ನಟ ಶಿವರಾಜ್ ಕುಮಾರ್ ಪಕ್ಕದ ಮನೆಯಲ್ಲಿ ಕಳ್ಳತನ ಮಾಡಿದ್ದ ಕೊಲಂಬಿಯಾ ದೇಶದ ಖರ್ತನಾಕ್ ಕಳ್ಳರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದಾರೆ.

    ವಿಲಿಯನ್ ಪಡಿಲ್ಲಾ, ಸ್ಟೆಫಾನಿಯಾ, ಕ್ರಿಶ್ಚಿಯನ್ ಇನಿಸ್ ಬಂಧಿತ ಆರೋಪಿಗಳಿದ್ದು, ಕೊಲಂಬಿಯಾ ಮೂಲದವರಾಗಿದ್ದಾರೆ. ಪಿಪಿಇ ಕಿಟ್ ಧರಿಸಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಪೊಲೀಸರ ಬೀಟ್ ವ್ಯವಸ್ಥೆ ವೇಳೆ ಕಳ್ಳತನ ಮಾಹಿತಿ ಪತ್ತೆಯಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಖರ್ತನಾಕ್ ಗ್ಯಾಂಗ್‍ಅನ್ನು ಬಂಧಿಸಿದ್ದಾರೆ. ಕಳೆದ 6 ತಿಂಗಳಿನಿಂದ ಈ ಗ್ಯಾಂಗ್ ಬೆಂಗಳೂರಿನಲ್ಲಿ ಸಕ್ರಿಯವಾಗಿತ್ತು ಎಂಬ ಮಾಹಿತಿ ವಿಚಾರಣೆ ವೇಳೆ ತಿಳಿದು ಬಂದಿದೆ.

    ನಗರದ ಹಲವು ಭಾಗಗಳಲ್ಲಿ ಕಳ್ಳತನ ಮಾಡಿದ್ದ ಈ ಗ್ಯಾಂಗ್ ಸದಸ್ಯರು ಸೈಕಲ್‍ನಲ್ಲಿ ಓಡಾಟ ನಡೆಸಿ ಕಳ್ಳತನ ಮಾಡಬೇಕಿದ್ದ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದರು. ಸುಮಾರು 15 ಅಡಿ ಎತ್ತರದ ಗೋಡೆಗಳನ್ನು ಸುಲಭವಾಗಿ ಜಿಗಿಯುವ ತರಬೇತಿ ಪಡೆದಿದ್ದ ಆರೋಪಿಗಳು, ಅತ್ಯಾಧುನಿಕ ಸಲಕರಣೆಗಳನ್ನ ಬಳಸಿ ಕೃತ್ಯ ಎಸಗುತ್ತಿದ್ದರು.

    ಗ್ಯಾಂಗ್‍ನಲ್ಲಿದ್ದ ಯುವತಿ ಸ್ಟೆಫಾನಿಯಾ ಮೊದಲು ಕಳ್ಳತನ ಮಾಡಬೇಕಿದ್ದ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತುತ್ತಿದ್ದಳು. ಈ ವೇಳೆ ಮನೆಯಿಂದ ಹೊಸ ಬಂದ ವ್ಯಕ್ತಿಗಳಿಗೆ ಸ್ಪ್ರೇ ಮಾಡಿ ಮೂರ್ಚೆ ಹೋಗುವಂತೆ ಮಾಡುತ್ತಿದ್ದಳು. ಬಳಿಕ ವಾಕಿಟಾಕಿಯಲ್ಲಿ ಸ್ನೇಹಿತರನ್ನು ಕರೆಸಿಕೊಂಡು ಕಳ್ಳತನ ಮಾಡುತ್ತಿದ್ದರು. ಅಲ್ಲದೇ ಮನೆಯವರು ಬೇರೆಯಾವರಿಗೆ ಮಾಹಿತಿ ನೀಡಬಾರದು ಎಂಬ ಕಾರಣಕ್ಕೆ ಮೊಬೈಲ್ ನೆಟ್‍ವರ್ಕ್ ಜಾಮರ್ ಬಳಕೆ ಮಾಡುತ್ತಿದ್ದರು.

    ಪೊಲೀಸರ ಬೀಟ್ ವ್ಯವಸ್ಥೆ ವೇಳೆ ಕಳ್ಳತನ ಮಾಹಿತಿ ಪತ್ತೆಯಾಗಿತ್ತು. ಬಳಿಕ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆನ್ ಲೈನ್ ಫುಡ್ ಡೆಲವರಿ ಮಾಡಿ ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದರು. ಇದೇ ಗ್ಯಾಂಗ್ ಈ ಹಿಂದೆ ಜಯನಗರದಲ್ಲಿ ಕಳ್ಳತನ ಮಾಡಿ ಸಿಕ್ಕಿತ್ತು ಎಂಬ ಮಾಹಿತಿ ಲಭಿಸಿದೆ. ಇದುವರೆಗೂ ಈ ಗ್ಯಾಂಗ್ ಸುಮಾರು ಆರು ಕೆಜಿ ಚಿನ್ನ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

  • ನಟ ಶಿವರಾಜ್ ಕುಮಾರ್ ಮನೆಯಲ್ಲಿ ಕನ್ನಡ ಸ್ಟಾರ್ ನಟರ ಸಭೆ

    ನಟ ಶಿವರಾಜ್ ಕುಮಾರ್ ಮನೆಯಲ್ಲಿ ಕನ್ನಡ ಸ್ಟಾರ್ ನಟರ ಸಭೆ

    ಬೆಂಗಳೂರು: ಕೊರೊನಾದಿಂದ ಕಿರುತೆರೆ ಮತ್ತು ಸಿನಿಮಾರಂಗಕ್ಕೆ ಆಗಿರುವ ಸಮಸ್ಯೆಗಳ ಬಗ್ಗೆ ಇಂದು ಕನ್ನಡ ಸ್ಟಾರ್ ನಟರು, ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಸಭೆ ನಡೆಸಿ ಚರ್ಚೆ ನಡೆಸಿದರು.

    ಚಿತ್ರಮಂದಿರ ತೆರೆಯುವುದು ಹಾಗೂ ತೆರಿಗೆ ವಿನಾಯಿತಿಗೆ ಮನವಿ ಪಡೆಯುವ ಬಗ್ಗೆ ಸಚಿವ ಸಿಟಿ ರವಿ ಅವರೊಂದಿಗೆ ಕಲಾವಿದರು ಹಾಗೂ ನಿರ್ಮಾಪಕರು ಸಭೆಯಲ್ಲಿ ಮನವಿ ಮಾಡಿದರು. ಈ ವೇಳೆ ನಟರಾದ ರವಿಚಂದ್ರನ್, ಪುನೀತ್ ರಾಜ್‍ಕುಮಾರ್, ಉಪೇಂದ್ರ, ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ಯಶ್, ರಮೇಶ್ ಅರವಿಂದ್, ಶ್ರೀಮುರಳಿ, ಗಣೇಶ್ ಹಾಗೂ ನಿರ್ಮಾಪಕರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಕಾರ್ತಿಕ್ ಗೌಡ, ಸೂರಪ್ಪ ಬಾಬು ಸೇರಿದಂತೆ ಹಲವರು ಸಭೆಯಲ್ಲಿ ಹಾಜರಿದ್ದರು.

    ಸಭೆ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಸಿಟಿ ರವಿ ಅವರು, ಚಲನಚಿತ್ರೋದ್ಯಮ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿ ಚರ್ಚೆ ನಡೆಸಿದ್ದು, ಅನೇಕ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಉದ್ಯಮವನ್ನು ಅವಲಂಬಿಸಿರುವವರಿಗೆ ವಿಶೇಷ ಪ್ಯಾಕೇಜ್ ಹಾಗೂ ಚಿತ್ರೋದ್ಯಮ ಪುನಶ್ಚೇತನಕ್ಕೆ ಸಹಕಾರ ನೀಡಲು ಮನವಿ ಮಾಡಿದ್ದಾರೆ. ಈ ಬಗ್ಗೆ ಸಿಎಂ ಅವರೊಂದಿಗೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

    ಜಿಮ್ ಮತ್ತು ಚಿತ್ರಮಂದಿರ ಪುನರಾರಂಭ ಮಾಡುವ ನೀತಿ ನಿಯಮಗಳು ಕೇಂದ್ರ ಸರ್ಕಾರದ ನೀತಿ ನಿಯಮಗಳ ಮೇಲೆ ಅವಲಂಬನೆ ಆಗಿರುತ್ತೆ. ಕೇಂದ್ರದ ನಿರ್ಧಾರದ ಮೇಲೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಚಿತ್ರಮಂದಿರದವರು ಭೇಟಿ ಮಾಡಿ ಮಾತನಾಡಿದ್ದಾರೆ. ಅಲ್ಲದೇ ಕುರಿತಂತೆ ಸಿಎಂ ಅವರನ್ನು ಭೇಟಿ ಮಾಡಿಸಿ ಚರ್ಚೆ ಮಾಡುತ್ತೇವೆ. ಚಿತ್ರೋದ್ಯಮದ ಬಗ್ಗೆ ನಮಗೂ ಕಾಳಜಿ ಇದೆ ಎಂದು ಹೇಳಿದರು.

  • ತಮಿಳುನಾಡಿನಲ್ಲೂ ಹೌಸ್‍ಫುಲ್ ದಾಖಲೆ ಬರೆದ ಕನ್ನಡ ಸಿನಿಮಾಗೆ ವರ್ಷದ ಸಂಭ್ರಮ

    ತಮಿಳುನಾಡಿನಲ್ಲೂ ಹೌಸ್‍ಫುಲ್ ದಾಖಲೆ ಬರೆದ ಕನ್ನಡ ಸಿನಿಮಾಗೆ ವರ್ಷದ ಸಂಭ್ರಮ

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಸಿನಿಮಾ ತೆರೆಕಂಡು ಇವತ್ತಿಗೆ ಒಂದು ವರ್ಷವಾಗಿದೆ.

    ಕರ್ನಾಟಕದಲ್ಲಿ ಅಷ್ಟೇ ಅಲ್ಲದೆ ನೆರೆಯ ರಾಜ್ಯ ತಮಿಳುನಾಡಿನಲ್ಲಿಯೂ ಟಗರು ಸಿನಿಮಾ ಭಾರೀ ಸದ್ದು ಮಾಡಿತ್ತು. ಈ ಮೂಲಕ ತಮಿಳುನಾಡಿನಲ್ಲಿ ಹೌಸ್‍ಫುಲ್ ಆಗಿದ್ದ ಕನ್ನಡ ಮೊದಲ ಸಿನಿಮಾ ಹೆಮ್ಮೆಯನ್ನು ಗಿಟ್ಟಿಸಿಕೊಂಡಿತ್ತು.

    ತಮಿಳುನಾಡಿನ ಯುವಕರು ಟಗರು ಸಿನಿಮಾಗೆ ಫುಲ್ ಫಿದಾ ಆಗಿದ್ದರು. ತಮ್ಮ ಬೈಕ್‍ಗಳ, ಟೀ ಶರ್ಟ್ ಹಿಂದೆ ಟಗರು ಹಾಗೂ ಶಿವರಾಜ್ ಕುಮಾರ್ ಚಿತ್ರ ಹಾಕಿಸಿಕೊಂಡಿದ್ದರು. ಕೆಲ ಅಭಿಮಾನಿಗಳು ಬ್ಯಾನರ್, ಫ್ಲೆಕ್ಸ್ ಗಳನ್ನು ಹಾಕಿಸಿ ಶಿವರಾಜ್ ಕುಮಾರ್ ಅಭಿನಯಕ್ಕೆ ಗೌರವ ಸಲ್ಲಿಸಿದ್ದರು.

     

    ಅಭಿಮಾನಿಯೊಬ್ಬ ಹೊಸೂರಿನ ರಾಘವೇಂದ್ರ ಚಿತ್ರಮಂದಿರ ಹೌಸ್‍ಫುಲ್ ಆಗಿರುವ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಬೈಕ್, ಟಿ ಶರ್ಟ್ ಮೇಲೆ ಸಿನಿಮಾ ಫೋಟೋಗಳನ್ನು ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಜೊತೆಗೆ ಶಿವರಾಜ್ ಕುಮಾರ್ ಮಚ್ಚು ಹಿಡಿದಂತೆ ತಾವು ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದಾರೆ.

    ರೌಡಿಗಳನ್ನು ಮಟ್ಟಹಾಕುವ ಕಥೆ ಆಧಾರಿತ ಟಗರು ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರತಿಕ್ಷಣಕ್ಕೂ ಪ್ರೇಕ್ಷಕರಲ್ಲಿ ಕುತುಹಲ ಹೆಚ್ಚಿಸುವ ಟಗರು ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿವರಾಜ್ ಕುಮಾರ್ ದಂಪತಿಯಿಂದ ಸಿಎಂ ಎಚ್‍ಡಿಕೆ ಭೇಟಿ

    ಶಿವರಾಜ್ ಕುಮಾರ್ ದಂಪತಿಯಿಂದ ಸಿಎಂ ಎಚ್‍ಡಿಕೆ ಭೇಟಿ

    ಬೆಂಗಳೂರು: ನಟ ಶಿವರಾಜ್ ಕುಮಾರ್ ಪತ್ನಿ ಸಮೇತ ಇಂದು ಕುಮಾರಸ್ವಾಮಿ ಅವರನ್ನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿದ್ದಾರೆ.

    ಸಿಎಂ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಅವರ ಸಮಾಧಿ ಸ್ಮಾರಕ ಸ್ಥಳ ಅಭಿವೃದ್ಧಿ ಕುರಿತಂತೆ ಸಿಎಂ ಜೊತೆ ಮಾತನಾಡಿದ್ದೇವೆ. ಶಕ್ತಿಧಾಮ ಕುರಿತು ಕೆಲವು ಮಾಹಿತಿಯನ್ನು ನೀಡಿದ್ದೇವೆ. ಈ ಕುರಿತು ಪರಿಶೀಲನೆ ನಡೆಸಿದ ಬಳಿಕ ಚರ್ಚೆ ನಡೆಸುವುದಾಗಿ ಸಿಎಂ ತಿಳಿಸಿದರು. ಆದರೆ ಈ ವೇಳೆ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಸಿಲ್ಲ ಎಂದರು.

    ಇದೇ ವೇಳೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಪತ್ನಿ ಗೀತಾ ಶಿವರಾಜ್ ಕುಮಾರ್ ಕಣಕ್ಕಿಳಿಸುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಆದರೆ ಅವರು ಸ್ಪರ್ಧಿಸಬೇಕು ಗೆಲ್ಲಬೇಕೆಂದು ದೇವರ ಇಚ್ಛೆ ಇದ್ದರೆ ಯಾರೂ ತಪ್ಪಿಸಲಾಗದು ಎಂದು ಹೇಳಿದರು.

    ಬಳಿಕ ಮಾತನಾಡಿದ ಗೀತಾ ಶಿವರಾಜ್ ಕುಮಾರ್, ಚುನಾವಣೆಯ ಕುರಿತು ಇದುವರೆಗೂ ಯಾವುದೇ ಯೋಚನೆ ಮಾಡಿಲ್ಲ. ಚುನಾವಣೆಗೆ ಇನ್ನು ಸಾಕಷ್ಟು ಸಮಯ ಇದೆ. ಈ ಕುರಿತು ನನ್ನ ಸಹೋದರನ ಜೊತೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.

    ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಮಧು ಬಂಗಾರಪ್ಪ ಅವರಿಗೆ ನೀಡುವ ಕುರಿತು ಪ್ರಶ್ನೆಗೆ ಉತ್ತರಿಸಿ, ಸಿಎಂ ಕುಮಾರಸ್ವಾಮಿ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಕುರಿತು ಇದುವರೆಗೂ ಯಾವುದೇ ಚರ್ಚೆ ನಡೆಸಿಲ್ಲ. ಸೂಕ್ತ ವ್ಯಕ್ತಿಯನ್ನು ನೇಮಕ ಮಾಡುವ ಆಶಾಭಾವನೆ ಇದೆ. ಅವರು ಯಾವುದೇ ತೀರ್ಮಾನ ತೆಗೆದುಕೊಂಡರು ಸ್ವಾಗತ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡ್ಬೇಡಿ : ಶಿವರಾಜ್ ಕುಮಾರ್

    ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡ್ಬೇಡಿ : ಶಿವರಾಜ್ ಕುಮಾರ್

    ಬೆಂಗಳೂರು: ನಾವೆಲ್ಲ ಒಂದೇ, ಒಟ್ಟಿಗೆ ಇರಬೇಕು. ಯಾವುದೇ ಕಾರಣಕ್ಕೂ ರಾಜ್ಯ ಒಡೆಯೋ ಕೆಲ್ಸ ಮಾಡಬೇಡಿ ಎಂದು ಸೆಂಚುರಿಸ್ಟಾರ್ ಶಿವರಾಜ್ ಕುಮಾರ್ ಮನವಿ ಮಾಡಿದ್ದಾರೆ.

    `ಕವಚ’ ಚಿತ್ರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದ ಏನೇ ಸಮಸ್ಯೆ ಇದ್ದರೂ ಬಗೆಹರಿಸಿಕೊಂಡು ಹೋಗೋಣ. ಖಂಡ ಖಂಡ ಕರ್ನಾಟಕ ನಮಗೆ ಗೊತ್ತಿಲ್ಲ. ನಮಗೆ ಗೊತ್ತಿರುವುದು ಒಂದೇ, ಅದು ಅಖಂಡ ಕರ್ನಾಟಕ. ನಾವೆಲ್ಲ ಒಂದೇ. ಒಟ್ಟಿಗೆ ಇರಬೇಕು. ಯಾವುದೇ ಕಾರಣಕ್ಕೂ ರಾಜ್ಯ ಒಡೆಯುವ ಕೆಲಸ ಮಾಡಬಾರದು ಎಂದು ಮನವಿ ಮಾಡಿದರು.

    ಪ್ರತ್ಯೇಕ ರಾಜ್ಯ ಬೇಕು ಎಂದು ಕೇಳುವವರಿಗೆ ಬುದ್ಧಿ ಮಾತು ಹೇಳುವಷ್ಟು ದೊಡ್ಡವನು ನಾನಲ್ಲ. ಎಲ್ಲರು ಮಾತನಾಡುವುದು ಕನ್ನಡ ಭಾಷೆ. ಇದರಲ್ಲಿ ಹುಬ್ಬಳ್ಳಿ ಭಾಷೆ, ಮೈಸೂರು, ಬೆಂಗಳೂರು ಭಾಷೆ ಎಂಬುವುದು ಇಲ್ಲ. ಒಂದರನ್ನು ನೋಡಿ ನಾವು ನಕಲು ಮಾಡುವುದು ಬೇಡ, ಯಾವುದೇ ವಿಚಾರ ಬಂದರು ಒಟ್ಟಿಗೆ ಕುಳಿತು ಮಾತನಾಡೋಣ. ನಮ್ಮ ಸ್ವಂತ ತನವನ್ನು ಬಿಟ್ಟುಕೊಡುವುದು ಬೇಡ ಎಂದು ಹೇಳಿದರು.