Tag: ನಟ ವಿಶಾಲ್

  • `ಕಾಂತಾರ’ ಎಫೆಕ್ಟ್, ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರಲಿದ್ದಾರೆ ನಟ ವಿಶಾಲ್

    `ಕಾಂತಾರ’ ಎಫೆಕ್ಟ್, ಭೂತಕೋಲ ನೋಡಲು ಧರ್ಮಸ್ಥಳಕ್ಕೆ ಬರಲಿದ್ದಾರೆ ನಟ ವಿಶಾಲ್

    ಅಂತರಾಷ್ಟ್ರೀಯ ಮಟ್ಟದಲ್ಲಿ `ಕಾಂತಾರ’ (Kantara) ಸದ್ದು ಜೋರಾಗಿದೆ. ಭೂತಕೋಲದ ಬಗ್ಗೆ ಪರಿಚಯ ಆದಮೇಲೆ ಅದೆಷ್ಟೋ ಜನ ದೈವ ಆರಾಧನೆಯನ್ನ ನೋಡಲು ಕಾಯ್ತಿದ್ದಾರೆ. ಹೀಗಿರುವಾಗ ಭೂತಕೋಲವನ್ನು ಸೆಲೆಬ್ರಿಟಿಗಳು ಕೂಡ ನೋಡಲು ಉತ್ಸುಕರಾಗಿದ್ದಾರೆ. ಕೋಲವನ್ನು ನೋಡಲು ಧರ್ಮಸ್ಥಳಕ್ಕೆ ಬರೋದಾಗಿ  ಕಾಲಿವುಡ್‌ (Kollywood) ನಟ ವಿಶಾಲ್ (Actor Vishal) ಹೇಳಿದ್ದಾರೆ.

    `ಕಾಂತಾರ’ ಬರೋದಕ್ಕೂ ಮುಂಚೆ ಕನ್ನಡಿಗರಿಗಷ್ಟೇ ದೈವ ಕೋಲದ ಬಗ್ಗೆ ಅರಿವಿತ್ತು. ಈ ಚಿತ್ರ ನೋಡಿದ ಮೇಲೆ ದೇಶ-ವಿದೇಶದ ಜನರಿಗೂ ಈ ಬಗ್ಗೆ ಪರಿಚಯವಾಯ್ತು. ಈ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿದ ಅನೇಕರಿಗೆ ರೋಮಾಂಚನವಾಗಿತ್ತು. ಇದೀಗ ಇದೇ ರೀತಿ ಕಾಂತಾರ ನೋಡಿ, ವಿಶಾಲ್‌ ಅವರಿಗೂ ಭಾಸವಾಗಿದೆ. ತುಳುನಾಡಿನ ಸಂಸ್ಕೃತಿಯ ದೈವ ನೇಮವನ್ನು ಕಣ್ಣಾರೆ ನೋಡಲು ವಿಶಾಲ್ ಇಷ್ಟಪಟ್ಟಿದ್ದಾರೆ. ಇದನ್ನೂ ಓದಿ: ಭೂತಕೋಲದಲ್ಲಿ ನಟಿ ಅನುಷ್ಕಾ ಶೆಟ್ಟಿ ಭಾಗಿ

    ಧರ್ಮಸ್ಥಳಕ್ಕೆ (Dharmasthaala) ತೆರಳಿ, ದೈವಕೋಲ ಮತ್ತು ಅಲ್ಲಿನ ಪ್ರತೀತಿ ಬಗ್ಗೆ ತಿಳಿದುಕೊಳ್ಳಲು ಎಂದು ನಟ ವಿಶಾಲ್  ಆಸಕ್ತಿ ತೋರಿದ್ದಾರೆ. ಸದ್ಯದಲ್ಲೇ ಧರ್ಮಸ್ಥಳ ಕ್ಷೇತ್ರಕ್ಕೆ ನಟ ಬರಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಪಘಾತದಲ್ಲಿ ಗಾಯಗೊಂಡ ನಟ ವಿಶಾಲ್

    ಅಪಘಾತದಲ್ಲಿ ಗಾಯಗೊಂಡ ನಟ ವಿಶಾಲ್

    ಚೆನ್ನೈ: ಇತ್ತೀಚೆಗಷ್ಟೇ ತಮ್ಮ ಬಹುದಿನಗಳ ಗೆಳತಿ ಅಶಿಷಾ ರೆಡ್ಡಿರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ತಮಿಳು ನಟ ವಿಶಾಲ್ ಸಿನಿಮಾ ಶೂಟಿಂಗ್ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

    ಸದ್ಯ ವಿಶಾಲ್ ಅವರ ಮುಂದಿನ ಸಿನಿಮಾದ ಶೂಟಿಂಗ್ ಟರ್ಕಿಯಲ್ಲಿ ನಡೆಯುತ್ತಿದ್ದು, ಸಹಾಸ ದೃಶ್ಯ ಚಿತ್ರೀಕರಣದ ವೇಳೆ ಬೈಕಿನಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ವಿಶಾಲ್ ಅವರ ಎಡಗೈ ಹಾಗೂ ಎಡಗಾಲಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದ ಬಳಿಕ ಕನಿಷ್ಠ 2 ವಾರಗಳ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬಳಿಕವೇ ಚಿತ್ರತಂಡ ವಾಪಸ್ ಆಗಲಿದ್ದು, ಬಹುತೇಕ ಚೇತರಿಸಿಕೊಳ್ಳುವ ನಿರೀಕ್ಷೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಇತ್ತ ತಮ್ಮ ನೆಚ್ಚಿನ ನಟ ಬಹುಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಟ್ವೀಟ್ ಮಾಡಿ ಪ್ರಾರ್ಥನೆ ಮಾಡಿದ್ದಾರೆ.

    ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು ನಟ ವಿಶಾಲ್ ತಮಿಳುನಾಡಿನಲ್ಲಿ ವಿತರಣೆ ಮಾಡಿದ್ದರು. ಆ ವೇಳೆಯೇ ಇಬ್ಬರು ನಟನ ನಡುವಿನ ಸ್ನೇಹಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಟಾಲಿವುಡ್ ಜೂನಿಯರ್ ಎನ್‍ಟಿಆರ್ ನಟನೆಯ ಟೆಂಪರ್ ಸಿನಿಮಾ ತಮಿಳು ರಿಮೇಕ್ ‘ಅಯೋಗ್ಯ’ ಸಿನಿಮಾದಲ್ಲಿ ವಿಶಾಲ್ ನಟಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ.

  • ತಮಿಳು ನಟ ವಿಶಾಲ್ ಬಂಧನ

    ತಮಿಳು ನಟ ವಿಶಾಲ್ ಬಂಧನ

    ಚೆನ್ನೈ: ತಮಿಳು ಚಿತ್ರ ನಿರ್ಮಾಪಕರ ಸಂಘದ (ಟಿಎಫ್‍ಪಿಸಿ) ಕಚೇರಿಗೆ ನುಗ್ಗಲು ಪ್ರಯತ್ನಿಸಿದ್ದಕ್ಕೆ ನಟ, ನಿರ್ಮಾಪಕ ವಿಶಾಲ್ ಅವರನ್ನು ಗುರುವಾರ ಚೆನ್ನೈನ ಟಿ. ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಡಿಸೆಂಬರ್ 19 ರಂದು ಕೆಲ ನಿರ್ಮಾಪಕರು ವಿಶಾಲ್ ಅವರ ವಿರುದ್ಧ ಪ್ರತಿಭಟನೆ ಮಾಡಿ ಚೆನ್ನೈನ ಟಿ. ನಗರ ಹಾಗೂ ಅಣ್ಣ ಸಲೈನಲ್ಲಿರುವ ತಮಿಳು ನಿರ್ಮಾಪಕರ ಸಂಘದ ಕಚೇರಿಗೆ ಬೀಗ ಹಾಕಿದ್ದರು. ವಿಶಾಲ್ ಅವರು 2015ರಲ್ಲಿ ನಡೆದ ಟಿಎಫ್‍ಪಿಸಿ ಚುನಾವಣೆಯಲ್ಲಿ ನೀಡಿದ್ದ ಭರವಸೆಯನ್ನು ಅಧ್ಯಕ್ಷರಾದ ಮೇಲೆ ಮರೆತಿದ್ದಾರೆ ಎಂದು ಆರೋಪಿಸಿ ಕೆಲ ನಿರ್ಮಾಪಕರು ಅವರ ವಿರುದ್ಧ ಪ್ರತಿಭಟನೆ ಮಾಡಿದ್ದರು.

    ಇಂದು ವಿಶಾಲ್ ಹಾಗೂ ಇತರೆ ಸದಸ್ಯರು ಟಿಎಫ್‍ಪಿಸಿ ಕಚೇರಿಗೆ ಬಂದಾಗ ಪೊಲೀಸರು ಅವರನ್ನು ತಡೆದಿದ್ದಾರೆ. ಈ ವೇಳೆ ಟಿಎಫ್‍ಪಿಸಿಗೆ ಸಂಬಂಧವಿಲ್ಲದ ವ್ಯಕ್ತಿಗಳಿಗೆ ಕಚೇರಿಗೆ ಬೀಗ ಹಾಕಿದ್ದಾರೆ ಅದಕ್ಕೆ ನೀವು ಸಾಥ್ ಕೊಟ್ಟಿದ್ದೀರಿ. ಒಂದು ವೇಳೆ ಕಚೇರಿಯಲ್ಲಿ ಮುಖ್ಯವಾದ ಕೆಲಸವಿದ್ದರೆ ಸದಸ್ಯರು ಹೋಗೋದು ಹೇಗೆ? ಕಚೇರಿ ಕೆಲಸ ನಿಲ್ಲಿಸಿದರೆ ನಷ್ಟ ಯಾರಿಗೆ ಎಂದು ಪೊಲೀಸರನ್ನು ವಿಶಾಲ್ ಪ್ರಶ್ನಿಸಿದ್ದಾರೆ. ಹಾಗೆಯೆ ಕೆಲ ಕಾಲ ಪೊಲೀಸ್ ಸಿಬ್ಬಂದಿ ಹಾಗೂ ವಿಶಾಲ್ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ವಿಶಾಲ್ ಹಾಗೂ ಅವರ ಸಹಚರರು ಕಚೇರಿ ಬೀಗ ಒಡೆಯಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿಶಾಲ್ ಅವರನ್ನು ಬಂಧಿಸಿದ್ದಾರೆ.

    ಈ ಘಟನೆ ಕುರಿತು ನಟ ವಿಶಾಲ್ ಪ್ರತಿಕ್ರಿಯಿಸಿ, ನಾನು ಪೊಲೀಸರಿಗೆ ಹಾಗೂ ಅವರ ಕೆಲಸಕ್ಕೆ ಗೌರವ ನೀಡುತ್ತೇನೆ. ಆದರೆ ಕೆಲವು ದಾಖಲೆಗಳು ಹಾಗೂ ಲೆಕ್ಕದ ಪುಸ್ತಕಗಳನ್ನು ಇಡಲು ಕಚೇರಿ ಬೀಗ ಒಡೆಯಲು ಯತ್ನಿಸಿದೆ ಅಷ್ಟೇ ಎಂದು ಹೇಳಿದ್ದಾರೆ.

    ಟಿಎಫ್‍ಪಿಸಿಗೆ ಸಂಬಂಧವಿಲ್ಲದ ಜನರು ಕಚೇರಿಯ ಬೀಗ ಹಾಕಿಸಿದ್ದಾರೆ. ಆದರೆ ಪೊಲೀಸರು ಯಾವ ತಪ್ಪು ಮಾಡದಿದ್ದರೂ ನನ್ನನ್ನು ಹಾಗೂ ನನ್ನ ಜೊತೆಗಾರರನ್ನು ಬಂಧಿಸಿದ್ದಾರೆ. ಇದನ್ನು ನಂಬಲಾಗುತ್ತಿಲ್ಲ. ನಾವು ಈ ಪ್ರಕರಣದ ವಿರುದ್ಧ ಹೋರಾಡುತ್ತೇವೆ. ಇಳೆಯರಾಜ ಅವರ ಸಂಗೀತ ಸಂಜೆ ಕಾರ್ಯಕ್ರಮ ನಡೆಸಿ ಕಷ್ಟದಲ್ಲಿರುವ ನಿರ್ಮಾಪಕರಿಗೆ ಸಹಾಯ ಮಾಡುತ್ತೇವೆ ಎಂದು ನಟ ವಿಶಾಲ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಸದ್ಯ ವಿಶಾಲ್, ಮಂಸೂರ್ ಅಲಿ ಖಾನ್ ಹಾಗೂ ಟಿಎಫ್‍ಪಿಸಿಯ ಇತರೆ ಸದಸ್ಯರನ್ನು ಪೊಲೀಸರು ಬಂಧಿಸಿದ್ದು, ಅವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv