Tag: ನಟ-ನಟಿ

  • ಲಾಕ್‍ಡೌನ್ ನಡುವೆಯೂ ಸಪ್ತಪದಿ ತುಳಿದ ನಟ, ನಟಿ

    ಲಾಕ್‍ಡೌನ್ ನಡುವೆಯೂ ಸಪ್ತಪದಿ ತುಳಿದ ನಟ, ನಟಿ

    – ಮಾಸ್ಕ್ ಧರಿಸಿ ಮದುವೆಯಾದ ಜೋಡಿ

    ಶಿವಮೊಗ್ಗ: ಕೊರೊನಾ ಲಾಕ್‍ಡೌನ್ ಭೀತಿಯ ನಡುವೆಯೇ ಶಿವಮೊಗ್ಗದಲ್ಲಿ ಸಿನಿಮಾ ಜೋಡಿಯೊಂದು ಸಪ್ತಪದಿ ತುಳಿದಿದೆ.

    ಚಲನಚಿತ್ರ ನಟ ನಟಿಯರಾಗಿರುವ ಅರ್ನವ್ ವಿನ್ಯಾಸ್ ಮತ್ತು ವಿಹಾನಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮಲೆನಾಡಿನ ತವರೂರು ಎಂದೇ ಕರೆಸಿಕೊಳ್ಳುವ ಶಿವಮೊಗ್ಗದಲ್ಲಿ ಮದುವೆಯಾಗಿ ಸುದ್ದಿಯಾಗಿದ್ದಾರೆ. ಅಂದಹಾಗೆ ಅರ್ನವ್ ವಿನ್ಯಾಸ್ ಹೊಂಬಣ್ಣ ಎಂಬ ಚಿತ್ರದಲ್ಲಿ ಹೀರೋ ಪಾತ್ರದಲ್ಲಿ ಮಿಂಚಿದ್ದು, ಅದೇ ರೀತಿ ಹೀರೋಯಿನ್ ವಿಹಾನಾ ನೆನಪುಗಳು ಎಂಬ ಚಲನಚಿತ್ರದಲ್ಲಿ ನಟಿಸಿ, ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.

    ಮಂಡ್ಯ ಮೂಲದ ನಟ ಅರ್ನವ್ ವಿನ್ಯಾಸ್, ಶಿವಮೊಗ್ಗದ ವಿಹಾನಾ ಅವರನ್ನು ಪ್ರೀತಿಸುತ್ತಿದ್ದು, ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ. ಇಂದು ಕೇವಲ ಈ ಇಬ್ಬರ ಕುಟುಂಬಸ್ಥರ ಬೆರಳೆಣಿಕೆಯಷ್ಟು ಜನರ ನಡುವೆಯೇ ಶಾಸ್ತ್ರೋಕ್ತವಾಗಿ ಸಪ್ತಪದಿ ತುಳಿದಿದ್ದಾರೆ.

    ಶಿವಮೊಗ್ಗದ ಹೊರವಲಯದಲ್ಲಿರುವ ಸೋಶಿಯಲ್ ಹಾರ್ಬರ್ ಎಂಬ ಸುಂದರ ಪ್ರಕೃತಿಯ ಮಧ್ಯೆ ಈ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಮಾಸ್ಕ್ ಧರಿಸಿಯೇ ವಿವಾಹವಾಗಿದ್ದಾರೆ. ಅಲ್ಲದೆ ಕೇವಲ ಮನೆ ಸದಸ್ಯರ ಹಾಜರಿ ನಡುವೆ ಮದುವೆ ಶಾಸ್ತ್ರ ನೆರವೇರಿಸಲಾಗಿದ್ದು, ವಾಲಗ ಮತ್ತು ವಿಡಿಯೋದವರು ಕೂಡ ಮಾಸ್ಕ್ ಧರಿಸಿಯೇ ಹಾಜರಗಿದ್ದರು. ಬೆರಳೆಣಿಕೆಯಷ್ಟು ತಮ್ಮ ಕುಟುಂಬದವರ ಜೊತೆ ಈ ಸ್ಯಾಂಡಲ್‍ವುಡ್ ತಾರೆಯರು ಹೊಸ ಜೀವನವನ್ನು ಆರಂಭಿಸಿದ್ದಾರೆ.

  • ಬಳ್ಳಾರಿ ಪೊಲೀಸರ ವಿನೂತನ ಪ್ರಯತ್ನಕ್ಕೆ ಕೈ ಜೋಡಿಸಿದ ಸ್ಯಾಂಡಲ್ ವುಡ್ ನಟ-ನಟಿಯರು!

    ಬಳ್ಳಾರಿ ಪೊಲೀಸರ ವಿನೂತನ ಪ್ರಯತ್ನಕ್ಕೆ ಕೈ ಜೋಡಿಸಿದ ಸ್ಯಾಂಡಲ್ ವುಡ್ ನಟ-ನಟಿಯರು!

    ಬಳ್ಳಾರಿ: ಅಪಘಾತವಾದಾಗ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲು ಯಾರು ಮುಂದೆ ಬರಲ್ಲ, ಗಾಯಾಳುಗಳನ್ನು ಕರೆದೊಯ್ಯುವ ಅಂಬುಲೆನ್ಸ್ ಗಳಿಗೆ ದಾರಿನೂ ಸಹ ಕೊಡಲ್ಲ. ಹೀಗಾಗಿ ಅಂಬುಲೆನ್ಸ್ ಗಳಿಗೆ ದಾರಿ ಕೊಡಿ ರೋಗಿಗಳ ಜೀವ ಉಳಿಸಿ ಎಂದು ಬಳ್ಳಾರಿ ಪೊಲೀಸರು ಜಾಗೃತಿ ಆರಂಭಿಸಿದ್ದಾರೆ. ಪೊಲೀಸರ ಈ ವಿನೂತನ ಕಾರ್ಯಕ್ಕೆ ಸ್ಯಾಂಡಲವುಡ್ ನಟ-ನಟಿಯರು ಸಹ ಸಾಥ್ ನೀಡಿದ್ದಾರೆ.

    ಅಂಬುಲೆನ್ಸ್ ಗಳಿಗೆ ಅಡ್ಡವಾಗುವ ಜನರಲ್ಲಿ ಜಾಗೃತಿ ಮೂಡಿಸಲು ಬಳ್ಳಾರಿಯ ತೋರಣಗಲ್ ಠಾಣೆಯ ಪೊಲೀಸರು ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಜಾಗೃತಿ ಆರಂಭಿಸಿದ್ದಾರೆ. ಅಂಬುಲೆನ್ಸ್ ಗಳಿಗೆ ದಾರಿ ಬಿಡಿ ರೋಗಿಗಳ ಪ್ರಾಣ ಉಳಿಸಿ ಎಂದು ಜಾಗೃತಿ ಆರಂಭಿಸುವ ಮೂಲಕ ರೋಗಿಗಳಿಗೆ ನೆರವಾಗಲು ಮುಂದಾಗಿದ್ದಾರೆ.

    ತೋರಣಗಲ್ ಪೊಲೀಸ್ ಠಾಣೆಯ ಪಿಎಸ್‍ಐ ಮೊಹ್ಮದ್ ರಫೀಕ್ ಅವರ ಈ ವಿನೂತನ ಕಾರ್ಯಕ್ಕೆ ಬಳ್ಳಾರಿ ಪೊಲೀಸರು ಸಾಥ್ ನೀಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆಟೋ, ಲಾರಿ, ಟಾಕ್ಸಿ ಚಾಲಕರು ಸೇರಿದಂತೆ ಸಾರ್ವಜನಿಕರಿಗೆ ಅಂಬುಲೆನ್ಸ್ ಗಳಿಗೆ ದಾರಿ ಬಿಡಿ ಎಂದು ಮನವರಿಕೆ ಮಾಡಿಕೊಡುತ್ತಿದ್ದಾರೆ.

    ತೋರಣಗಲ್ ಪೊಲೀಸರ ಈ ವಿನೂತನ ಜಾಗೃತಿಗೆ ಸ್ಯಾಂಡಲ್ ವುಡ್ ತಾರೆಯರಾದ ಯಶ್, ಪ್ರೇಮ್, ದಿಗಂತ್, ಐಂದ್ರಿತಾ ರೈ ಹಾಗೂ ಮೇಘನಾ ಗಾಂವ್ಕರ್ ಸಹ ಕೈ ಜೋಡಿಸಿ ಜನರಿಗೆ ಅಂಬುಲೆನ್ಸ್ ಗಳಿಗೆ ದಾರಿ ಮಾಡಿಕೊಡುವಂತೆ ಸಂದೇಶ ಸಾರುತ್ತಿದ್ದಾರೆ.

    ಬಳ್ಳಾರಿ ಪೊಲೀಸರು ವಾಹನ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ಟ್ರಾಫಿಕ್ ಸಿಗ್ನಲ್ ಗಳಲ್ಲಿ ಅಂಬುಲೆನ್ಸ್ ಗಳಿಗೆ ದಾರಿ ಬಿಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ, ಬಳ್ಳಾರಿ ಪೊಲೀಸರ ಈ ವಿನೂತನ ಕಾರ್ಯಕ್ಕೆ ಹಲವಾರು ವಿದೇಶಗಳ ರಾಯಭಾರಿಗಳು ಹಾಗೂ ಮಾಜಿ ವಿಶ್ವ ಸುಂದರಿಯರು ಸಹ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಪೊಲೀಸರ ಜಾಗೃತಿಗೆ ಕೈಜೋಡಿಸಿ ಅಂಬುಲೆನ್ಸ್ ಗಳ ಮಹತ್ವವನ್ನು ಸಾರುತ್ತಿದ್ದಾರೆ.