Tag: ನಟಿ ಆಶಿಕಾ ರಂಗನಾಥ್

  • ಆಶಿಕಾ ರಂಗನಾಥ್‌ಗೆ ಮನಸಾರೆ ಹಾರೈಸಿದ ಜ್ಯೂ.ಎನ್‌ಟಿಆರ್‌

    ಆಶಿಕಾ ರಂಗನಾಥ್‌ಗೆ ಮನಸಾರೆ ಹಾರೈಸಿದ ಜ್ಯೂ.ಎನ್‌ಟಿಆರ್‌

    ಸ್ಯಾಂಡಲ್‌ವುಡ್ (Sandalwood) ಸುಂದರಿ ಆಶಿಕಾ ರಂಗನಾಥ್ (Ashika Ranganath) ಇದೀಗ ಟಾಲಿವುಡ್‌ನತ್ತ (Tollywood) ಮುಖ ಮಾಡಿದ್ದಾರೆ. ನಂದಮೂರಿ ಕಲ್ಯಾಣ್ ರಾಮ್‌ಗೆ (Kalyan Ram) ನಾಯಕಿಯಾಗಿ ಆಶಿಕಾ ಎಂಟ್ರಿ ಕೊಡ್ತಿದ್ದಾರೆ. ಚುಟು ಚುಟು ಬೆಡಗಿಗೆ ಜ್ಯೂ.ಎನ್‌ಟಿಆರ್ ವಿಶೇಷವಾಗಿ ಸ್ವಾಗತಿಸಿದ್ದಾರೆ. ಇದನ್ನೂ ಓದಿ: `ಅವತಾರ್ ಲುಕ್‌ನಲ್ಲಿ ಮಿಂಚಿದ ನಿವೇದಿತಾ ಗೌಡ


    ರ‍್ಯಾಂಬೋ 2, ಮದಗಜ, ಅವತಾರ ಪುರುಷ, ಹೀಗೆ ಸಾಕಷ್ಟು ಸಿನಿಮಾಗಳ ಮೂಲಕ ಕಮಾಲ್ ಮಾಡಿದ ನಟಿ ಆಶಿಕಾ ರಂಗನಾಥ್ ಈಗ ತೆಲುಗು ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಕಲ್ಯಾಣ್ ರಾಮ್ ನಟನೆಯ `ಅಮಿಗೋಸ್’ ಚಿತ್ರದ ಮೂಲಕ ನಟಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕನ್ನಡದ ಹುಡುಗಿ ಆಶಿಕಾ, ತೆಲುಗಿನ ಮೊದಲ ಸಿನಿಮಾಗೆ ಜ್ಯೂ.ಎನ್‌ಟಿಆರ್ (Jr.Ntr) ವಿಶೇಷವಾಗಿ ಹಾರೈಸಿದ್ದಾರೆ.

    `ಅಮಿಗೋಸ್’ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟ ತಾರಕ್ ಎಂಟ್ರಿ ಕೊಟ್ಟಿದ್ದರು. ಸಹೋದರ ಕಲ್ಯಾಣ್ ರಾಮ್ ಮತ್ತು ಚಿತ್ರತಂಡಕ್ಕೆ ಸಿನಿಮಾ ಗೆಲುವಿಗೆ ವಿಶ್ ಮಾಡಿದ್ದರು. ಈ ವೇಳೆ ಆಶಿಕಾಗೆ, ನಿಮಗೆ ತೆಲಗು ಚಿತ್ರರಂಗಕ್ಕೆ ಸ್ವಾಗತ, ನಾನು ನಂಬುತ್ತೇನೆ ಈ ಸಿನಿಮಾ ನಿಮಗೆ ಕರೆಕ್ಟ್ ಆಗಿರುವ ಲಾಂಚ್ ಸಿನಿಮಾ ಎಂದು. ನಾನು ಹಾರೈಸುತ್ತೇನೆ ನೀವು ತೆಲುಗು ಸಿನಿಮಾಗಳಲ್ಲಿ ಸಾಕಷ್ಟು ಪಾತ್ರಗಳನ್ನ ಮಾಡಬೇಕೆಂದು. ಕ್ಷಮಿಸಿ, ಇಂಡಿಯನ್ ಫಿಲ್ಮ್ಂ ಇಂಡಸ್ಟ್ರಿಯಲ್ಲಿ ಎಂದು ಜ್ಯೂ.ಎನ್‌ಟಿಆರ್ ಮನಸಾರೆ ಹಾರೈಸಿದ್ದಾರೆ. ಈ ಮೂಲಕ ಕನ್ನಡದ ನಟಿ ಸೌತ್ ಸಿನಿಮಾಗಳಲ್ಲಿ ಬೆಳಗಲಿ ಎಂದು ಹಾರೈಸಿದ್ದಾರೆ.

    ಇನ್ನೂ ನಟಿ ಆಶಿಕಾ ರಂಗನಾಥ್ ಕೈಯಲ್ಲಿ ತೆಲುಗಿನ `ಅಮಿಗೋಸ್’ ಸೇರಿದಂತೆ ಕನ್ನಡದ ಸಾಕಷ್ಟು ಚಿತ್ರಗಳಿವೆ. ನಟಿಯ ಮೊದಲ ತೆಲುಗು ಸಿನಿಮಾ ಅಮಿಗೋಸ್‌ ಇದೇ ಫೆ.10ಕ್ಕೆ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ಸೂಚಿಸಿದ ನಟಿ ಆಶಿಕಾ ರಂಗನಾಥ್

    ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ಸೂಚಿಸಿದ ನಟಿ ಆಶಿಕಾ ರಂಗನಾಥ್

    ಬೆಂಗಳೂರು: ದೇಶಾದ್ಯಂತ ಇಂದು ವೈದ್ಯ ಸಂಘಟನೆಗಳು ರಾಷ್ಟ್ರೀಯ ಪ್ರತಿಭಟನಾ ದಿನ ಆಚರಿಸುತ್ತಿವೆ. ಕರ್ನಾಟಕ ವೈದ್ಯರ ಪ್ರೋಟೆಸ್ಟ್ ಗೆ, ಸ್ಯಾಂಡಲ್ ವುಡ್ ಖ್ಯಾತ ನಟಿ ಆಶಿಕಾ ರಂಗನಾಥ್ ಬೆಂಬಲ ಸೂಚಿಸಿದ್ದಾರೆ.

    ಈ ಪ್ರತಿಭಟನೆ ಬಗ್ಗೆ ಮಾತನಾಡಿರುವ ಅವರು, ಡಾಕ್ಟರ್ಸ್ ಎಂದರೆ ನನಗೆ ಮೊದಲು ನೆನಪಾಗುವ ಪದ ಸಂರಕ್ಷಕರು ಎಂದು. 14 ತಿಂಗಳಿನಿಂದ ಕೋವಿಡ್ ಮಹಾಮಾರಿಯ ಆರ್ಭಟ ನೆಡೆಯುತ್ತಿದೆ. ಈ ಸಂದರ್ಭದಲ್ಲಿ ಕುಟುಂಬದ ಜೊತೆ ತಮ್ಮ ಜೀವನವನ್ನು ಕೂಡ ಅಪಾಯಕ್ಕೆ ಒಡ್ಡಿಕೊಂಡು ಸಮಾಜಕ್ಕೋಸ್ಕರ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೂ ಅಭಾರಿಯಾಗಿದ್ದೇನೆ. ಆರೋಗ್ಯ ಕಾರ್ಯಕರ್ತರ ಪ್ರಯತ್ನ ಮತ್ತು ಸೇವಾ ಮನೋಭಾವಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

    ಡಾಕ್ಟರ್ಸ್‍ಗಳ ಮೇಲಿನ ಹಲ್ಲೆ ಖಂಡಿಸಿ, ಜನರಲ್ಲಿ ಸಾಮಾಜಿಕ ತಿಳುವಳಿಕೆ ಮೂಡಿಸಲು ಪ್ರತಿಭಟನೆ ನಡೆಸಲಾಗುತ್ತಿದೆ. ಈ ಜಾಗೃತಿ ಕಾರ್ಯಕ್ರಮಕ್ಕೆ ನಾನು ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ. ಎಲ್ಲರೂ ಕೂಡ ಬೆಂಬಲ ನೀಡಿ ಎಂದು ಮನವಿಮಾಡಿದ್ದಾರೆ. ನಮ್ಮ ಡಾಕ್ಟರ್ಸ್‍ನ ನಾವು ಉಳಿಸಿಕೊಳ್ಳೋಣ, ಅವರ ಪ್ರಯತ್ನಗಳನ್ನು ಶ್ಲಾಘಿಸೋಣ… #Save the Saviours# ಎನ್ನುವ ಹ್ಯಾಶ್ ಟ್ಯಾಗ್ ಮುಖಾಂತರ ಈ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಟಾಪ್‍ಲೆಸ್ ಫೋಟೋ ಶೂಟ್‍ನಲ್ಲಿ ನಟಿ ಕಿಯಾರಾ ಅಡ್ವಾಣಿ ಸಖತ್ ಹಾಟ್