Tag: ನಟಿ

  • ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?

    ʻಲಕ್ಷ್ಮಿ ನಿವಾಸʼದಿಂದ ಹೊರನಡೆದ ಅಂಜಲಿ – ಕಾರಣವೇನು?

    ಪ್ರತಿಷ್ಠಿತ ಧಾರಾವಾಹಿ ʻಲಕ್ಷ್ಮಿ ನಿವಾಸʼದಿಂದ ನಟಿ ಅಂಜಲಿ ಸುಧಾಕರ್ (Anjali Sudhakar) ಹೊರ ನಡೆದಿದ್ದಾರೆ. ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ರೇಣುಕಾ ಪಾತ್ರದ ಮೂಲಕ ಮನೆ ಮಾತಾಗಿದ್ದ ಅಂಜಲಿ ಸುಧಾಕರ್ ಇತ್ತೀಚೆಗೆ ತಮ್ಮ ಪಾತ್ರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಆದ್ರೆ ಈಗ ದಿಢೀರ್ ಅಂತಾ ಧಾರಾವಾಹಿಯಿಂದಲೇ ಹೊರ ಬಂದಿದ್ದಾರೆ. ಅಂಜಲಿ ಹೊರಬರೋದಕ್ಕೆ ಕಾರಣವೇನು ಎನ್ನುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ.

    ಅಂಜಲಿ ಸುಧಾಕರ್ ಸೀರಿಯಲ್‌ನಿಂದ (Lakshmi Nivasa Serial) ಹೊರ ಬಂದಿರುವ ಬಗ್ಗೆ ಅವರ ಸ್ನೇಹಿತೆ ವಿಜಯಲಕ್ಷ್ಮಿ ಸುಬ್ರಮಣಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಖುದ್ದಾಗಿ ಅಂಜಲಿಯವರನ್ನ ಸಂಪರ್ಕ ಮಾಡಿದಾಗ ಸ್ಪಷ್ಟನೆ ಕೊಟ್ಟಿದ್ದಾರೆ. ಧಾರಾವಾಹಿಯಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿತ್ತು. ಇತ್ತೀಚೆಗೆ ಪಾತ್ರದ ತಿರುವುಗಳಲ್ಲಿ ತುಂಬಾ ಬದಲಾವಣೆ ಮಾಡಿದ್ದಾರೆ. ನನ್ನ ಪಾತ್ರವನ್ನ ತುಂಬಾ ನೆಗೆಟಿವ್ ಆಗಿ ಪೋಷಣೆ ಮಾಡುತ್ತಿರೋದು ತುಂಬಾ ಬೇಸರ ಮೂಡಿಸಿದೆ. ಚಾನೆಲ್ ಅವರಿಂದ ಈ ಸಮಸ್ಯೆಯಾಗಿಲ್ಲ ಬದಲಾಗಿ ಧಾರಾವಾಹಿ ತಂಡದಿಂದ ಈ ಸಮಸ್ಯೆಯಾಗಿದೆ ಎಂದಿದ್ದಾರೆ ನಟಿ ಅಂಜಲಿ ಸುಧಾಕರ್.

    ಇನ್ನು ಈ ಲಕ್ಷ್ಮಿ ನಿವಾಸ ಧಾರಾವಾಹಿಯಿಂದ ಆಚೆ ಬಂದಿರೋದು ಪೇಮೆಂಟ್ ವಿಚಾರಕ್ಕೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೂ ನಟಿ ಸ್ಪಷ್ಟನೆ ಕೊಟ್ಟಿದ್ದಾರೆ. ನನಗೆ ಪೇಮೆಂಟ್ ವಿಚಾರದಲ್ಲಿ ಯಾವುದೇ ತೊಂದರೆಯಾಗಿಲ್ಲ, ಕೆಲವು ಬಾರಿ ಡಿಲೇ ಆಗಿದೆ, ಹೊರತು ವೇತನದ ಸಮಸ್ಯೆಯಾಗಿಲ್ಲ ಎಂದಿದ್ದಾರೆ.

    ಈ ಮುಂಚೆ ನಟಿ ಶ್ವೇತಾ ಕೂಡಾ ಈ ಧಾರಾವಾಹಿಯಿಂದ ಹೊರ ನಡೆದಿದ್ದರು. ಇದರ ಬೆನ್ನಲ್ಲೇ ಇದೀನ ನಟಿ ಅಂಜಲಿ ಸುಧಾಕರ್ ರೇಣುಕಾ ಪಾತ್ರವನ್ನ ತೊರೆದು ಆಚೆ ಬಂದಿದ್ದಾರೆ.

    ನಟಿ ಅಂಜಲಿ ಸುಧಾಕರ್ ಬೇರೆ ಬೇರೆ ಧಾರಾವಾಹಿಯಲ್ಲಿ ಪಾಸಿಟಿವ್ ಆಗಿರುವ ಪಾತ್ರದ ಮೂಲಕ ಜನಮನ್ನಣೆ ಪಡೆಯುತ್ತಿದ್ದಾರೆ. ಆದರೆ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಮಾತ್ರ ತುಂಬಾ ನೆಗೆಟಿವ್ ಆಗಿರುವ ಪಾತ್ರದ ಪೋಷಣೆ ನಿರ್ವಹಿಸುವುದು. ಆ ಮೂಲಕ ಜನರು ಸ್ವೀಕರಿಸುವ ರೀತಿ ಕಷ್ಟವಾಗುತ್ತಿರುವ ಕಾರಣದಿಂದ ಈ ಧಾರಾವಾಹಿಯಿಂದ ಆಚೆ ನಡೆದಿದ್ದಾರಂತೆ ನಟಿ ಅಂಜಲಿ ಸುಧಾಕರ್.

  • ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ – ಟ್ರೋಲ್‌ಗಳಿಗೆ ಖುಷಿ ಮುಖರ್ಜಿ ಉತ್ತರ

    ನಾನು ಬಂಗಾಳಿ ಬ್ರಾಹ್ಮಣ ಕುಟುಂಬದವಳು, ಸಂಸ್ಕೃತಿಯ ಅರಿವಿದೆ – ಟ್ರೋಲ್‌ಗಳಿಗೆ ಖುಷಿ ಮುಖರ್ಜಿ ಉತ್ತರ

    ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುವ ನಟಿಯರಲ್ಲಿ ಖುಷಿ ಮುಖರ್ಜಿ (Khushi Mukherjee) ಕೂಡ ಒಬ್ಬರು. ಸದಾ ತುಂಡುಡುಗೆ ತೊಟ್ಟು ಸದ್ದು ಮಾಡುತ್ತಿರು ಬೆಡಗಿ ಎಂದೇ ಹೇಳಬಹುದು. ಇದೀಗ ತಮ್ಮ ವಿರುದ್ಧ ಕೇಳಿಬರ್ತಿದ್ದ ನೆಗೆಟಿವ್‌ ಕಾಮೆಂಟ್‌ಗಳಿಗೆ ನಟಿ ಹನುಮಾನ್‌ ಚಾಲಿಸಾ ಪಠಿಸುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

    ತಮ್ಮ ಇನ್‌ಸ್ಟಾ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ನಟಿ, ನಾನು ಬಂಗಾಳಿ ಬ್ರಾಹ್ಮಣ ಕುಟುಂಬದಿಂದ ಬಂದವಳು. ನಮ್ಮ ಸಂಸ್ಕೃತಿಯ ನಿಯಮಗಳೆಲ್ಲವೂ ಗೊತ್ತಿದೆ. ಎಲ್ಲ ವಿಷಯಗಳ ಬಗ್ಗೆಯೂ ಒಂದಿಷ್ಟು ಜ್ಞಾನ ಇರಬೇಕು. ಅದು ನನಗೂ ಇದೆ ಎಂದಿದ್ದಾರೆ. ಈ ವೇಳೆ ಸುಮಾರು 2-3 ನಿಮಿಷಗಳ ಕಾಲ ಹನುಮಾನ್‌ ಚಾಲೀಸಾ ಪಠಿಸಿ ನನಗೂ ಸಂಸ್ಕೃತಿಯ ಬಗ್ಗೆ ಅರಿವಿದೆ ಅನ್ನೋದಕ್ಕೆ ಇದನ್ನು ಪಠಿಸಿದ್ದೇನೆ ಎಂದು ಹೇಳಿದ್ದಾರೆ.

    ಅಲ್ಲದೇ ಕೆಲವರು ಈಗಲೂ ನನ್ನನ್ನ ಟ್ರೋಲ್‌ ಮಾಡ್ತಿದ್ದಾರೆ. ಆದ್ರೆ ಒಂದು ನೆನಪಿಟ್ಟುಕೊಳ್ಳಿ. ಯಾವುದೋ ಟೈಪ್‌ ಬಟ್ಟೆ ಹಾಕಿದಾಕ್ಷಣ ನಮ್ಮ ಸಂಸ್ಕೃತಿ, ನಾನು ಎಲ್ಲಿಂದ ಬಂದವಳು ಅನ್ನೋದನ್ನ ಮರೆತಿದ್ದೀನಿ ಎಂದಲ್ಲ. ಅದು ನನ್ನ ಫ್ಯಾಷನ್‌ ಅಷ್ಟೇ ಅಂದಿದ್ದಾರೆ ಎಂದು ಟ್ರೋಲ್‌ಗಳಿಗೆ ಉತ್ತರಿದ್ದಾರೆ.

    ಇತ್ತೀಚೆಗೆ ಮುಂಬೈನಲ್ಲಿ (Mumbai) ಕಾರ್ಯಕ್ರಮವೊಂದಕ್ಕೆ ಒಳಉಡುಪು ಧರಿಸದೇ ಇರೋದು ಕಾಣಿಸುವಂತಹ ಟ್ರಾನ್ಸ್‌ಪರೆಂಟ್‌ ಡ್ರೆಸ್‌ ತೊಟ್ಟು ಫೋಟೋಗೆ ಪೋಸ್‌ ಕೊಟ್ಟಿದ್ದರು. ಅದಕ್ಕೂ ಮುನ್ನ ಗೋಲ್ಡನ್‌ ಕಲ್ಲರ್‌ ತುಂಡು ಬಟ್ಟೆ ಧರಿಸಿದ್ದ ವಿಡಿಯೋ ಹಂಚಿಕೊಂಡಿದ್ದರು. ಇತ್ತೀಚೆಗೆ ಒಳ ಉಡುಪು ಧರಿಸದ ತುಂಡು ಉಡುಗೆ ತೊಟ್ಟ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟ್ರೆಂಡ್‌ ಆಗಿತ್ತು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಕಣ್ಣುಕುಕ್ಕುವಂತೆ ಮಾಡಿತ್ತು. ಕೆಲ ನೆಟ್ಟಿಗರು ನಟಿಯ ಬೋಲ್ಡ್‌ ಅವತಾರಕ್ಕೆ ʻವಾವ್‌ ಎಷ್ಟು ಸೆಕ್ಸಿʼ ಅಂತಾ ಕಾಮೆಂಟ್‌ ಮಾಡಿದ್ರೆ ಇನ್ನೂ ಕೆಲವರು ಇನ್ನೂ ಸ್ವಲ್ಪ ಚೋಟುದ್ದ ಡ್ರೆಸ್‌ ತೊಟ್ಟಿದ್ರೆ ಮಜಾ ಇರ್ತಿತ್ತು, ನಾನೇ ಒಳಉಡುಪು ಕೊಡಿಸಲೇ? ಅಂತೆಲ್ಲಾ ಕಾಮೆಂಟ್‌ ಮಾಡಿದ್ದರು. ಇನ್ನೂ ಕೆಲವರು ನಟಿಯನ್ನ ಟ್ರೋಲಿಗೆಳೆದಿದ್ದರು.

    ಸಹಜವಾಗಿ ಚಿತ್ರ ನಟಿಯರು ಫಂಕ್ಷನ್​ಗಳಿಗೆ ಹೋಗುವಾಗ.. ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇನ್ನೂ ಕೆಲ ನಟಿಯರಿಗೆ ಮೈಮೇಲೆ ಬಟ್ಟೆಯೇ ನಿಲ್ಲುವುದಿಲ್ಲ ಎನ್ನುವಂತಹ ಡ್ರೆಸ್‌ ತೊಟ್ಟು ಟ್ರೋಲಿಗೆ ಒಳಗಾಗ್ತಾರೆ. ಖುಷಿ ಮುಖರ್ಜಿಯ ವಿಷಯದಲ್ಲೂ ಅದೇ ಆಗಿತ್ತು.

  • ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್‌ ಉತ್ತರ

    ನಾನು ಚಡ್ಡಿ ಹಾಕಿದ್ನಾ.. ಇಲ್ವಾ ಅಂತ ಬಂದು ನೋಡಿದ್ರಾ? – ನೆಟ್ಟಿಗರ ಕಾಮೆಂಟ್‌ಗೆ ಖುಷಿ ಮುಖರ್ಜಿ ಬೋಲ್ಡ್‌ ಉತ್ತರ

    ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟೀವ್‌ ಆಗಿರುವ ಬಹುಭಾಷಾ ನಟಿ ಖುಷಿ ಮುಖರ್ಜಿ (Khushi Mukherjee) ಇತ್ತೀಚೆಗೆ ಒಳ ಉಡುಪು ಕಾಣುವಂತಹ ಹಾಟ್‌ ವಿಡಿಯೋ ವೊಂದನ್ನ ಹಂಚಿಕೊಂಡಿದ್ದರು. ಇದರ ಫೋಟೋಗಳು ವೈರಲ್‌ ಆಗ್ತಿದಂತೆ ನಟಿಯ ಬಗ್ಗೆ ನಾನಾ ರೀತಿ ಕಾಮೆಂಟ್‌ಗಳು ಬರ್ತಿದ್ದವು, ಅಲ್ಲದೇ ನೀವು ಒಳ ಉಡುಪು ಧರಿಸಿದ್ದೀರಾ ಅಂತ ಕೆಲ ನೆಟ್ಟಿಗರು ಪ್ರಶ್ನೆ ಕೇಳಿದ್ದರು. ಇದೆಲ್ಲದಕ್ಕೂ ನಟಿ ಉತ್ತರ ಕೊಡೋ ಕೆಲಸ ಮಾಡಿದ್ದಾರೆ.

     

    View this post on Instagram

     

    A post shared by YT SHORTS🚀 (@yt_shorts9ine)

    ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ, ನಾನು ಚಡ್ಡಿ ಹಾಕಿದ್ದೀನಾ.. ಇಲ್ವಾ ಅಂತ ನೀವು ಬಂದು ನೋಡಿದ್ರಾ? ಆ ಬಟ್ಟೆಯಲ್ಲಿ ನಾನು ಚಡ್ಡಿ ಹಾಕಿರಲ್ಲ, ಬದಲಿಕೆ ಥಾಂಗ್ಸ್‌ (ಮಹಿಳೆಯರ ಒಳಉಡುಪು) ಹಾಕಿದ್ದೆ. ಅದನ್ನ ಮೇಲೆ ಕಟ್ಟಿದ್ದರಿಂದ ಹಾಕಿರೋದು ಕಾಣ್ತಿರಲಿಲ್ಲ ಅದಕ್ಕೆ ಕೀಳಾಗಿ ಮಾತನಾಡೋದು ಎಷ್ಟು ಸರಿ ಅಂತ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ – ಇದು ಹೃದಯ ವಿದ್ರಾವಕ ಘಟನೆ; ರಮ್ಯಾ ಬೇಸರ

    khushi mukherjee

    ಮುಂದುವರಿದು.. ನಾನು ಆ ಡ್ರೆಸ್‌ನಲ್ಲಿ ಅನ್‌ಕಂಫರ್ಟ್‌ ಆಗಿರಲಿಲ್ಲ. ಒಂದು ಕಡೆ ಕೈ, ಮತ್ತೊಂದು ಕಡೆ ತೊಡೆ ಕಾಣಿಸುವಂತೆ ಡ್ರೆಸ್‌ ಹಾಕಿದ್ದೆ. ಜೊತೆಗೆ ಎಷ್ಟು ತೋರಿಸಬೇಕು? ಎಷ್ಟು ತೋರಿಸಬಾರದು ಎಲ್ಲವೂ ನನಗೆ ಗೊತ್ತಿತ್ತು. ಆದ್ರೆ ಯಾವನೋ ಒಬ್ಬ ಕುಡುಕ ಒಂದು ಕಾಮೆಂಟ್‌ ಪಾಸ್‌ ಮಾಡಿದ, ಅದಕ್ಕೆ ಎಲ್ಲರೂ ಸಪೋರ್ಟ್‌ ಮಾಡಿ ಟ್ರೋಲ್‌ ಮಾಡೋಕೆ ಶುರು ಮಾಡಿದ್ರು ಅಂತ ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ಒಳಉಡುಪು ಧರಿಸದೇ ಪೋಸ್‌ ಕೊಟ್ಟ ಖುಷಿ ಮುಖರ್ಜಿ – ಅದೆಷ್ಟು ಬಾರಿ ಎದೆಗೆ ಬೆಂಕಿ ಹಚ್ತೀರಿ ಅಂದ್ರು ಫ್ಯಾನ್ಸ್‌

    khushi mukherjee 2

    ಇತ್ತೀಚೆಗೆ ಮುಂಬೈನಲ್ಲಿ (Mumbai) ಕಾರ್ಯಕ್ರಮವೊಂದಕ್ಕೆ ಒಳಉಡುಪು ಧರಿಸದೇ ಇರೋದು ಕಾಣಿಸುವಂತಹ ಟ್ರಾನ್ಸ್‌ಪರೆಂಟ್‌ ಡ್ರೆಸ್‌ ತೊಟ್ಟು ಫೋಟೋಗೆ ಪೋಸ್‌ ಕೊಟ್ಟಿದ್ದರು. ಅದಕ್ಕೂ ಮುನ್ನ ಗೋಲ್ಟನ್‌ ಕಲ್ಲರ್‌ ತುಂಡು ಬಟ್ಟೆ ಧರಿಸಿದ್ದ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಕಣ್ಣುಕುಕ್ಕುವಂತೆ ಮಾಡಿತ್ತು. ಕೆಲ ನೆಟ್ಟಿಗರು ನಟಿಯ ಬೋಲ್ಡ್‌ ಅವತಾರಕ್ಕೆ ʻವಾವ್‌ ಎಷ್ಟು ಸೆಕ್ಸಿʼ ಅಂತಾ ಕಾಮೆಂಟ್‌ ಮಾಡಿದ್ರೆ ಇನ್ನೂ ಕೆಲವರು ಇನ್ನೂ ಸ್ವಲ್ಪ ಚೋಟುದ್ದ ಡ್ರೆಸ್‌ ತೊಟ್ಟಿದ್ರೆ ಮಜಾ ಇರ್ತಿತ್ತು, ನಾನೇ ಒಳಉಡುಪು ಕೊಡಿಸಲೇ? ಅಂತೆಲ್ಲಾ ಕಾಮೆಂಟ್‌ ಮಾಡಿದ್ದರು. ಇನ್ನೂ ಕೆಲವರು ನಟಿಯನ್ನ ಟ್ರೋಲಿಗೆಳೆದಿದ್ದರು.

    ಸಹಜವಾಗಿ ಚಿತ್ರ ನಟಿಯರು ಫಂಕ್ಷನ್​ಗಳಿಗೆ ಹೋಗುವಾಗ.. ರೆಡ್​ ಕಾರ್ಪೆಟ್​ ಮೇಲೆ ನಡೆಯುವಾಗ ಅವರ ಡ್ರೆಸ್​ ಹಿಡಿದುಕೊಳ್ಳಲು ಇನ್ನೊಬ್ಬ ಸಹಾಯಕರು ಇರ್ತಾರೆ. ಇಡೀ ರಸ್ತೆ ಗುಡಿಸುವಂತೆ ಒಬ್ಬರು ಡ್ರೆಸ್​ ಹಾಕಿಕೊಂಡರೆ, ಹಲವಾರು ಸುತ್ತುಗಳ ವಿಚಿತ್ರ ಡ್ರೆಸ್​ ಇನ್ನೊಬ್ಬರು ಧರಿಸುತ್ತಾರೆ. ತಮ್ಮ ದೇಹಸಿರಿಯನ್ನು ತೋರಿಸುವ ಡ್ರೆಸ್​ ಹಾಕಿಕೊಂಡು ಆಗಾಗ್ಗೆ ಮೇಲೆ ಮೇಲೆ ಎಳೆದುಕೊಳ್ಳುವುದನ್ನೂ ನಾವು ನೋಡಬಹುದು. ಇನ್ನೂ ಕೆಲ ನಟಿಯರಿಗೆ ಮೈಮೇಲೆ ಬಟ್ಟೆಯೇ ನಿಲ್ಲುವುದಿಲ್ಲ ಎನ್ನುವಂತಹ ಡ್ರೆಸ್‌ ತೊಟ್ಟು ಟ್ರೋಲಿಗೆ ಒಳಗಾಗ್ತಾರೆ. ಖುಷಿ ಮುಖರ್ಜಿಯ ವಿಷಯದಲ್ಲೂ ಅದೇ ಆಗಿತ್ತು.

  • ಮಾದಕ ಲುಕ್‌ನಲ್ಲಿ ಮಿಂಚಿದ ವೈಷ್ಣವಿ – ಕೊಲ್ತಾಳಲ್ಲಪ್ಪೋ… ಅಂದ್ರು ನೆಟ್ಟಿಗರು

    ಮಾದಕ ಲುಕ್‌ನಲ್ಲಿ ಮಿಂಚಿದ ವೈಷ್ಣವಿ – ಕೊಲ್ತಾಳಲ್ಲಪ್ಪೋ… ಅಂದ್ರು ನೆಟ್ಟಿಗರು

    ಸೋಷಿಯಲ್‌ ಮೀಡಿಯಾದಲ್ಲೀಗ (Social Media) ಮಾಡೆಲ್‌ಗಳು, ನಟಿಯರು ಬಿಕಿನಿ, ಹಾಟ್‌ ಉಡುಗೆಗಳನ್ನ ತೊಟ್ಟು ಫೋಟೋ ಶೂಟ್‌ ಮಾಡಿಸುವುದು ಟ್ರೆಂಡ್‌ ಆಗಿಬಿಟ್ಟಿದೆ. ಅದರಂತೆ ಸದಾ ಹಾಟ್‌ ಬೆಡಗಿ ಅಂತಲೇ ಗುರುತಿಸಿಕೊಂಡಿರುವ ಮಾಡೆಲ್, ನಟಿ ಕಂ ಕಂಟೆಂಟ್ ಕ್ರಿಯೇಟರ್ ವೈಷ್ಣವಿ ಅಂಧಲೆ (Vaishnavi Andhale) ತಮ್ಮ ಗ್ಲಾಮರ್‌ ಮೂಲಕ ಪಡ್ಡೆ ಹೈಕಳ ಹೃದಯಕ್ಕೆ ಕೊಳ್ಳಿ ಇಟ್ಟಿದ್ದಾರೆ.

    ಅದಕ್ಕೆ ಲೇಟೆಸ್ಟ್ ಉದಾಹರಣೆ ಈ ಹೊಸ ಫೋಟೋಶೂಟ್‌ (Photoshoot) ಎನ್ನಬಹುದು. ರೆಸ್ಟೋರೆಂಟ್‌ವೊಂದರಲ್ಲಿ ಬಿಸಿ ಬಿಸಿ ಬಾರ್ಬಿಕ್ಯೂ ಜೊತೆಗೆ ಹಾಟ್ ಪೋಸ್ ನೀಡಿರುವ ವೈಷ್ಣವಿ ಪಡ್ಡೆ ಹೈಕಳ ಎದೆಬಡಿತ ಹೆಚ್ಚಿಸಿದ್ದಾರೆ. ಇದಕ್ಕೆ ʻನಮಗೆ ಪಿಜ್ಜಾ ಬಾರ್ಬಿಕ್ಯೂ ಇಲ್ವಾ.. ಆ ನೋಟ ನೋಡಿ, ಕೊಲ್ಲುವಂತೆ ಇದೆ.. ಈ ಫೋಟೋಗಳು ಮಾದಕವಾಗಿವೆ.. ನೀವು ತುಂಭಾ ಸುಂದರವಾಗಿ ಕಾಣ್ತಿದ್ದೀರಿʼ ಎಂದೆಲ್ಲ ನೆಟ್ಟಿಗರು ಕಾಮೆಂಟ್ ಮಾಡ್ತಿದ್ದಾರೆ.

    ವಿಭಿನ್ನ ಕಲೆಗಳನ್ನ ಕರಗತ ಮಾಡಿಕೊಂಡಿರೋ ವೈಷ್ಣವಿ ನರ್ತಕಿ, ಗಾಯಕಿ ಮತ್ತು ವರ್ಣಚಿತ್ರಗಾರ್ತಿ, ವಿಡಿಯೋ ಹಾಗೂ ಫೋಟೋಗ್ರಫಿ ಮಾಡೋದ್ರಲ್ಲೂ ಸೈ ಎನಿಸಿಕೊಂಡಿದ್ದಾರೆ.

    ಕಂಟೆಂಟ್‌ ಕ್ರಿಯೇಟರ್‌ ಕೂಡ ಆಗಿರುವ ವೈಶು 2019 ರಲ್ಲಿ, ವೈಷ್ಣವಿ ಫೆಮಿನಾ ಮಿಸ್ ಇಂಡಿಯಾ ಮಹಾರಾಷ್ಟ್ರ ಕಿರೀಟ ಮುಡಿಗೇರಿಸಿಕೊಂಡಿದ್ದರು. ಆ ಬಳಿಕ ಇವರ ಲಕ್ಕೇ ಬದಲಾಯ್ತು. ಅದಾದ ಬಳಿಕ ಮಾಡೆಲಿಂಗ್‌ ಜೊತೆಗೆ ಕಂಟೆಂಟ್‌ ಕ್ರಿಯೇಟ್‌, ಸಿನಿಮಾ, ಜಾಹೀರಾತು ಹಾಗೂ ಕಿರುಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

  • ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

    ರಂಗೀಲಾ ಬೆಡಗಿ ಊರ್ಮಿಳಾ ವಿಚ್ಛೇದನ !

    `ರಂಗೀಲಾ’ ಬೆಡಗಿ, ಮಾದಕ ನಟಿ ಊರ್ಮಿಳಾ ಮಾತೋಂಡ್ಕರ್ (Urmila Matondkar) ಸಂಸಾರ ಜೀವನ ಹಳಿ ತಪ್ಪಿದೆ. 2016ರಲ್ಲಿ ನಟಿ ಊರ್ಮಿಳಾ ಉದ್ಯಮಿ ಮೋಹ್ಸಿನ್ ಅಖ್ತರ್ (Mohsin Akhtar)  ಎಂಬುವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಪತಿ-ಪತ್ನಿ ಇಬ್ಬರೂ ಒಮ್ಮತದ ನಿರ್ಧಾರದ ಮೂಲಕ ದೂರಾಗೋಕೆ ಇಷ್ಟ ಪಡುತ್ತಿದ್ದು, ವಿಚ್ಛೇದನ ಕೋರಿ ಕೋರ್ಟ್‌ಗೆ ಅರ್ಜಿಯನ್ನ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

    ಹೌದು ಎನ್ನುವಂತೆ ಪತಿಯನ್ನು ಊರ್ಮಿಳಾ ಇನ್‌ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಕಳೆದ ವರ್ಷ ವಿವಾಹ ವಾರ್ಷಿಕೋತ್ಸವದ ದಿನವೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದ ದಂಪತಿ ಈಗ ಏಕಾಏಕಿ ವಿಚ್ಛೇದನ ಪಡೆಯಲು ನಿರ್ಧರಿಸಿರುವುದು ಆಶ್ಚರ್ಯಕರ ಸಂಗತಿ. ಸಿನಿಮಾದಿಂದಲೂ ಅಂತರ ಕಾಯ್ದುಕೊಂಡಿದ್ದ ಊರ್ಮಿಳಾ ಪತಿ ಜೊತೆ ಉತ್ತಮ ಸಂಸಾರ ನಡೆಸುತ್ತಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೀಗ ದಿಢೀರ್ ಇಬ್ಬರ ಸೆಪರೇಶನ್ ಸುದ್ದಿ ಬಂದಿದೆ. ಅಲ್ಲಿಗೆ 8 ವರ್ಷದ ಮದುವೆ ಸಂಬಂಧವನ್ನ ಊರ್ಮಿಳಾ ಮುರಿದುಕೊಳ್ಳಲು ನಿರ್ಧರಿಸಿದ್ದಾರಂತೆ.ಇದನ್ನೂ ಓದಿ: ಮುಂಬೈನಲ್ಲಿ ರಾಕಿಭಾಯ್ ಹವಾ ಜೋರು..!

    ರಂಗೀಲಾ (Rangeela) ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದ್ದ ಊರ್ಮಿಳಾ, 90ರ ದಶಕದ ಪಡ್ಡೆ ಹುಡುಗರ ನಿದ್ದೆ ಕದ್ದ ಪೋರಿ ಎಂದೇ ಖ್ಯಾತರಾಗಿದ್ದ ಗ್ಲ್ಯಾಮರ್‌ ನಟಿ. ಹಲವು ವರ್ಷಗಳು ಸಿಂಗಲ್ ಆಗೇ ಇದ್ದ ಊರ್ಮಿಳಾ ಅನ್ಯಕೋಮಿನ ಪುರುಷನ ಜೊತೆ ತಡವಾಗೇ ಸಂಸಾರ ಜೀವನಕ್ಕೆ ಕಾಲಿಟ್ಟಿದ್ದರು. 8 ವರ್ಷದ ದಾಂಪತ್ಯ ಜೀವನವನ್ನ ಇದೀಗ ಅಂತ್ಯಗೊಳಿಸಲು ಪರಸ್ಪರ ಮಾತನಾಡಿಕೊಂಡು ದೂರಾಗಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.

     

  • ವಿರಾಟ್ ಕೊಹ್ಲಿ ಭೇಟಿಯಾದ ತಮಿಳು ನಟಿ ರಾಧಿಕಾ ಶರತ್ ಕುಮಾರ್

    ವಿರಾಟ್ ಕೊಹ್ಲಿ ಭೇಟಿಯಾದ ತಮಿಳು ನಟಿ ರಾಧಿಕಾ ಶರತ್ ಕುಮಾರ್

    ನವದೆಹಲಿ: ತಮಿಳು ನಟಿ ರಾಧಿಕಾ ಶರತ್‌ಕುಮಾರ್ (Radhika Sarathkumar) ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯವರನ್ನು (Virat Kohli) ಭೇಟಿಯಾಗಿದ್ದು, ಅವರೊಂದಿಗಿನ ಸೆಲ್ಫಿಯನ್ನು ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಗುರುವಾರ (ಸೆ.12) ಲಂಡನ್‌ನಿಂದ (London) ಚೆನ್ನೈಗೆ (Chennai) ತೆರಳುವಾಗ ವಿಮಾನದಲ್ಲಿ ಭೇಟಿಯಾಗಿದ್ದಾರೆ. ವಿರಾಟ್ ಕೊಹ್ಲಿಯನ್ನು ಭೇಟಿಯಾದ ಕ್ಷಣವನ್ನು ರಾಧಿಕಾ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಪ್ರಜ್ವಲ್ ವಿರುದ್ಧ 3ನೇ ಕೇಸ್- ಎಸ್‌ಐಟಿಯಿಂದ 1,691 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ

    ಸೆ.19ರಿಂದ ನಡೆಯಲಿರುವ ಬಾಂಗ್ಲಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಗಾಗಿ ವಿರಾಟ್ ಕೊಹ್ಲಿ ಲಂಡನ್‌ನಿಂದ ಚೆನ್ನೈಗೆ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿ ಇಬ್ಬರು ಭೇಟಿಯಾಗಿದ್ದಾರೆ.

    ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ರಾಧಿಕಾ ಶರತ್‌ಕುಮಾರ್, ಹೃದಯ ಶ್ರೀಮಂತಿಕೆಯುಳ್ಳ ವ್ಯಕ್ತಿಯನ್ನು ನಾನು ಭೇಟಿಯಾಗಿರುವುದು ರೋಮಾಂಚನವನ್ನುಂಟು ಮಾಡಿದೆ. ಅವರೊಂದಿಗೆ ಪ್ರಯಾಣಿಸುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    ತಮಿಳು ಚಿತ್ರರಂಗದಲ್ಲಿ ನಟಿ ರಾಧಿಕಾ ಶರತ್‌ಕುಮಾರ್ ತೇರಿ, ಚಂದ್ರಮುಖಿ, ಪೊಕ್ಕಿರಿ ರಾಜ, ಚಿತ್ತಿ ಮತ್ತು ನಲ್ಲವನುಕ್ಕು ನಲ್ಲವನ್‌ನಲ್ಲಿ ತಮ್ಮ ಪಾತ್ರಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಜೊತೆಗೆ ಅವರು ಹಿಮ್ಮತ್ವಾಲಾ, ಲಾಲ್ ಬಾದ್ಶಾ, ನಸೀಬ್ ಅಪ್ನಾ ಅಪ್ನಾ, ಮತ್ತು ಮೇರಾ ಪತಿ ಸಿರ್ಫ್ ಮೇರಾ ಹೈ ಸೇರಿದಂತೆ ಹಿಂದಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ರೈತರಿಗೆ ಅನುಕೂಲ ಮಾಡದೇ ಮಣ್ಣಿನ ಮಕ್ಕಳು ಅಂತಾರೆ: ಹೆಚ್‌ಡಿಕೆ ವಿರುದ್ಧ ಸಿಎಂ ವಾಗ್ದಾಳಿ

  • ಲೋಕಸಭಾ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಖುಷ್ಬು

    ಲೋಕಸಭಾ ಚುನಾವಣಾ ಪ್ರಚಾರದಿಂದ ಹಿಂದೆ ಸರಿದ ಖುಷ್ಬು

    ಚೆನ್ನೈ: ತಮಿಳುನಾಡಿನಲ್ಲಿ ಬಿಜೆಪಿಯ ಪ್ರಮುಖ ಸದಸ್ಯರಲ್ಲಿ ಒಬ್ಬರಾಗಿರುವ ನಟಿ ಖುಷ್ಬು ಸುಂದರ್ (Khusbhu Sundar) ಅವರು ಲೋಕಸಭಾ ಚುನಾವಣಾ (Loksabha Election 2024) ಪ್ರಚಾರದಿಂದ ಹಿಂದೆ ಸರಿದಿದ್ದಾರೆ.

    ಈ ಸಂಬಂಧ ಖುಷ್ಬು ಭಾನುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (J.P Nadda) ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ. ಪತ್ರದಲ್ಲಿ ತಮ್ಮ ನಿರ್ಧಾರವನ್ನು ತಿಳಿಸಿದ್ದಾರೆ. ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಆರೋಗ್ಯದ ಮೇಲೆ ಗಮನಹರಿಸಬೇಕು. ಹೀಗಾಗಿ ನಾನು ಇಂದು ಅಂತಹ ಸಂದಿಗ್ಧದಲ್ಲಿದ್ದೇ ನೆ ಎಂದಿದ್ದಾರೆ.

    2019 ರಲ್ಲಿ ದೆಹಲಿಯಲ್ಲಿ ಸಂಭವಿಸಿದ ಅಪಘಾತದಿಂದ ಮೂಳೆ ಮುರಿದಿದೆ. ಕಳೆದ 5 ವರ್ಷಗಳಿಂದ ಆರೋಗ್ಯದ ಕುರಿತು ಮುನ್ನೆಚ್ಚರಿಕೆ ವಹಿಸುತ್ತಿದ್ದೇನೆ. ಆದರೂ ಸಮಸ್ಯೆ ನನ್ನನ್ನು ಕಾಡುತ್ತಿದೆ. ಹೀಗಾಗಿ ವೈದ್ಯರು ಚುನಾವಣಾ ಪ್ರಚಾರದಲ್ಲಿ (Election Campaign) ಭಾಗಿಯಾಗದಂತೆ ಸೂಚಿಸಿದ್ದಾರೆ ಎಂದು ಪತ್ರದಲ್ಲಿ ನಟಿ ತಿಳಿಸಿದ್ದಾರೆ.

    ಪ್ರಚಾರದ ಸಂದರ್ಭದಲ್ಲಿ ಹೆಚ್ಚು ಪ್ರಯಾಣ, ಕುಳಿತುಕೊಳ್ಳುವುದು ಅತ್ಯಗತ್ಯ. ಹೀಗಾಗಿ ಮತ್ತೆ ನನಗೆ ಸಮಸ್ಯೆ ಕಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಅಲ್ಪ ವಿರಾಮ ಘೋಷಿಸಿದ್ದೇನೆ ಎಂದು ಖುಷ್ಬು ಪತ್ರದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಶಾದ್ ಆಸ್ಪತ್ರೆಗೆ ದಾಖಲು

  • ಆಕ್ಸಿಡೆಂಟ್ ಆರೋಪ: ತಪ್ಪು ಮಾಡಿಲ್ಲ ಅಂತಿದ್ದಾರೆ ಕಿರುತೆರೆ ನಟಿ ಲಕ್ಷ್ಮಿ

    ಆಕ್ಸಿಡೆಂಟ್ ಆರೋಪ: ತಪ್ಪು ಮಾಡಿಲ್ಲ ಅಂತಿದ್ದಾರೆ ಕಿರುತೆರೆ ನಟಿ ಲಕ್ಷ್ಮಿ

    ಮ್ಮ ಸ್ಕೂಟಿಗೆ ಕಾರು ಡಿಕ್ಕಿ ಹೊಡೆಸಿ, ತಮ್ಮನ್ನು ಅವಾಚ್ಯ ಪದಗಳಿಂದ ನಟಿ (Actress) ಲಕ್ಷ್ಮಿ ಸಿದ್ದಯ್ಯ (Lakshmi Siddaiah) ನಿಂದಿಸಿದ್ದಾರೆ ಎಂದು ಇಬ್ಬರು ಹುಡುಗಿಯರು ಆರೋಪ ಮಾಡಿದ್ದರು. ತಮ್ಮನ್ನು ನಿಂದಿಸಿದ್ದಲ್ಲದೇ, ತಮ್ಮ ಮೊಬೈಲ್ ಕಿತ್ತುಕೊಂಡಿದ್ದಾರೆ ಎಂದು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಕುರಿತಂತೆ ನಟಿ ಲಕ್ಷ್ಮಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.

    ಇದು ಡಿಸೆಂಬರ್ 6ರಂದು ನಡೆದಿರುವ ಘಟನೆ (Accident). ನಾನು ವೇಗವಾಗಿ ಕಾರು ಓಡಿಸ್ತಿದ್ದೆ ಎಂದು ಹೇಳ್ತಾರೆ. ಜ್ಞಾನ ಭಾರತಿ ರಸ್ತೆಯಲ್ಲಿ, ಅದೂ ಸಂಜೆ ವೇಳೆ ಕಾರನ್ನು ವೇಗವಾಗಿ ಓಡಿಸೋಕೆ ಸಾಧ್ಯವೇ ಇಲ್ಲ. ಆ ಹುಡುಗಿಯರು ಸುಳ್ಳು ಹೇಳುತ್ತಿದ್ದಾರೆ. ಅವರ ದ್ವಿಚಕ್ರವಾಹನಕ್ಕೆ ಟಚ್ ಆಗಿದ್ದು ನಿಜ. ಅವರೇ ನನ್ನ ಮೇಲೆ ಅವಾಚ್ಯ ಪದಗಳನ್ನು ಬಳಕೆ ಮಾಡಿದ್ದು. ಅವರ ಅಣ್ಣ, ತಾಯಿ ಎಲ್ಲರೂ ಸ್ಥಳಕ್ಕೆ ಬಂದಿದ್ದರು. ನನಗೆ ಶೂಟಿಂಗ್ ಇದ್ದ ಕಾರಣ ಬೇಗ ಹೊರಟೆ. ದುಡ್ಡಿಗಾಗಿ ಅವರು ಬೇಡಿಕೆ ಇಟ್ಟರು. ನಾನು ಕೊಡುವುದಿಲ್ಲ ಎಂದೆ. ಅಷ್ಟೇ ಆಗಿದ್ದು. ಅವರು ಸುಳ್ಳು ಹೇಳುತ್ತಿದ್ದಾರೆ ಅಂತಾರೆ ಲಕ್ಷ್ಮಿ.

    ತಪ್ಪು ಮಾಡಿಲ್ಲ ಹಾಗಾಗಿ ಕಾಸು ಕೊಡಲ್ಲ ಎಂದಿರುವ ಲಕ್ಷ್ಮಿ, ಆ ಸಹೋದರಿಯ ಕಡೆಯಿಂದ ತಮಗೆ ಕರೆ ಬಂದಾಗ ಎರಡು ಲಕ್ಷ ರೂಪಾಯಿ ಕೇಳಿದರು ಎಂದು ಲಕ್ಷ್ಮಿ ಹೇಳಿದ್ದಾರೆ. ಅವರ ಮೇಲೆ ಕಾನೂನು ರೀತಿಯ ಕ್ರಮಕ್ಕಾಗಿ ಕೋರ್ಟ್ ಗೆ ಮೊರೆ ಹೋಗುವುದಾಗಿಯೂ ನಟಿ ತಿಳಿಸಿದ್ದಾರೆ.

  • ಕೆಜಿ ಚಿನ್ನ ಕದ್ದು ಗೋವಾದಲ್ಲಿ ಎಂಜಾಯ್ ಮಾಡ್ತಿದ್ದ ನಟಿ ಸೌಮ್ಯ ಶೆಟ್ಟಿ ಬಂಧನ

    ಕೆಜಿ ಚಿನ್ನ ಕದ್ದು ಗೋವಾದಲ್ಲಿ ಎಂಜಾಯ್ ಮಾಡ್ತಿದ್ದ ನಟಿ ಸೌಮ್ಯ ಶೆಟ್ಟಿ ಬಂಧನ

    ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್ ಪ್ರಕರಣ ಒಂದು ರೀತಿಯಲ್ಲಿ ಪೊಲೀಸರಿಗೆ ತಲೆಬಿಸಿಯಾಗಿದ್ದರೆ, ಮತ್ತೊಂದು ಕಡೆ ಕೆಜಿ ಚಿನ್ನ ಕದ್ದು ಗೋವಾದಲ್ಲಿ ಪಾರ್ಟಿ ಮಾಡುತ್ತಿದ್ದ ತೆಲುಗು ನಟಿ ಸೌಮ್ಯ ಶೆಟ್ಟಿ ಪೊಲೀಸರ ನಿದ್ದೆಗೆಡಿಸಿದ್ದಾಳೆ. ಪರಿಚಿತರ ಮನೆಯಲ್ಲಿ ಬರೋಬ್ಬರಿ ಒಂದು ಕೆಜಿ ಚಿನ್ನ ಕದ್ದು ಸೌಮ್ಯ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

    ತೆಲುಗು ಚಿತ್ರೋದ್ಯಮದಲ್ಲಿ ಉದಯೋನ್ಮುಖ ನಟಿಯಾಗಿರುವ ಸೌಮ್ಯ, ನಿವೃತ್ತ ಅಂಚೆ ಇಲಾಖೆಯ ನೌಕರರ ಮಗಳ ಜೊತೆ ಸ್ನೇಹವಿತ್ತು. ಆಗಾಗ್ಗೆ ಮನೆಗೆ ಬರುತ್ತಿದ್ದಳು ಸೌಮ್ಯ. ಆ ಮನೆಯಲ್ಲಿ ಬಂಗಾರ ಇರುವುದು ಗೊತ್ತಾಗಿ, ವಾಶ್ ರೂಮ್ ಗೆ ಹೋಗುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದಳು ಎಂದು ದೂರು ನೀಡಲಾಗಿದೆ.

    ತಮ್ಮ ಮನೆಗೆ ಬರುತ್ತಿದ್ದ ಸೌಮ್ಯ, ಆಗಾಗ್ಗೆ ಚಿನ್ನ ಕಳ್ಳತನ ಮಾಡುವುದು ಮನೆಯವರ ಗಮನಕ್ಕೆ ಬಂದಿಲ್ಲ. ಮದುವೆಗೆ ಹೋಗಲು ಆಭರಣ ಹುಡುಕಿದಾಗ ಮಾತ್ರ ಕಳ್ಳತನವಾಗಿರೋದು ಗೊತ್ತಾಗಿದೆ. ಕೂಡಲೇ ಅನುಮಾನಗೊಂಡು ಪೊಲೀಸ್ ರಿಗೆ ದೂರು ನೀಡಿದ್ದಾರೆ. ಸೌಮ್ಯ ತಮ್ಮ ಮನೆಗೆ ಬರುತ್ತಿದ್ದ ವಿಚಾರವನ್ನೂ ತಿಳಿಸಿದ್ದಾರೆ. ಕೊನೆಗೂ ಸೌಮ್ಯಳನ್ನು ಪತ್ತೆ ಮಾಡಿರೋ ವಿಶಾಖಪಟ್ಟಣಂ ಪೊಲೀಸರು ನಟಿಯನ್ನು ಬಂಧಿಸಿದ್ದಾರೆ.

  • ಚಳಿ ಚಳಿ ಬಿಸಿ ಬಿಸಿಯಲ್ಲಿ ಯಾಶಿಕಾ..

    ಚಳಿ ಚಳಿ ಬಿಸಿ ಬಿಸಿಯಲ್ಲಿ ಯಾಶಿಕಾ..

    ಕಾಲಿವುಡ್ ನಟಿ ಯಾಶಿಕಾ ಆನಂದ್ ಹಾಟ್ ಫೋಟೋ ಶೂಟ್
    ಸೌಂದರ್ಯದಿಂದಲೇ ಪಡ್ಡೆಗಳ ಮೈ ಬಿಸಿ ಹೆಚ್ಚಿಸಿದ ನಟಿ
    ಯಾಶಿಕಾ ನಟಿಯಾಗಿದ್ದರೂ, ಬಿಗ್ ಬಾಸ್ ಮೂಲಕ ಜನಪ್ರಿಯತೆ
    ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಈ ನಟಿ ಬದುಕುಳಿದಿದ್ದೇ ಪವಾಡ
    ಸದ್ಯ ಆರು ಚಿತ್ರಗಳಿಗೆ ಸಹಿ ಮಾಡಿ, ಅಚ್ಚರಿ ಮೂಡಿಸಿದ ಚೆಲುವೆ
    ವಿಜಯ ದೇವರಕೊಂಡ ಜೊತೆ ತೆರೆ ಹಂಚಿಕೊಂಡಿದ್ದಾರೆ ಯಾಶಿಕಾ
    ಮಾದಕ ನೋಟದಲ್ಲಿ ಯಶಿಕಾ
    ಪಡ್ಡೆಹುಡುಗರ ನಿದ್ದೆಗೆಡಿಸಿದ ಯಶಿಕಾ ಫೋಟೋಶೂಟ್‌