Tag: ನಗರಸಭಾ ಸದಸ್ಯೆ

  • ಸ್ವಂತ ಹಣದಿಂದ ಜನರಿಗಾಗಿ ಕೊಳವೆಬಾವಿ ಕೊರೆಸಿದ ನಗರಸಭಾ ಸದಸ್ಯೆ

    ಸ್ವಂತ ಹಣದಿಂದ ಜನರಿಗಾಗಿ ಕೊಳವೆಬಾವಿ ಕೊರೆಸಿದ ನಗರಸಭಾ ಸದಸ್ಯೆ

    ಚಿಕ್ಕಬಳ್ಳಾಪುರ: ಬರದ ನಾಡು ಅಂತಲೇ ಖ್ಯಾತಿ ಪಡೆದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಗರಸಭಾ ಸದಸ್ಯೆ ಭಾರತಿ ಅನಂದ್ ಅವರು ಸಾರ್ವಜನಿಕರಿಗೋಸ್ಕರ ತಮ್ಮ ಸ್ವಂತ ಹಣದಿಂದ ಕೊಳವೆ ಬಾವಿಯನ್ನು ಕೊರೆಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.

    ಬಯಲುಸೀಮೆ ಆಗುರುವುದರಿಂದ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಆದರಿಂದ ಸರ್ಕಾರ ಹಲವು ಕೊಳವೆಬಾವಿಯನ್ನು ತೋಡಿಸಿದರು ಸ್ಪಲ್ಪ ಮಟ್ಟಿನಲ್ಲಿ ಮಾತ್ರ ನೀರು ಸಿಗುತ್ತಿತ್ತು. ಕೆಲವೆಡೆ ಸ್ವಲ್ಪ ನೀರು ಕೂಡ ಸಿಗದೇ ಇರೋದು ಇದೆ. ಸರ್ಕಾರದಿಂದ 1000-1200 ಅಡಿ ಕೊಳವೆಬಾವಿ ಕೊರೆಸಿದ್ರೂ ನೀರು ಸಿಗೋದು ಅಪರೂಪ. ಆದ್ರೆ ಸಾರ್ವಜನಿಕರಿಗಾಗಿ ಭಾರತಿ ಅನಂದ್ ಹಾಗೂ ಅವರ ಕುಟುಂಬಸ್ಥರು ಕೊರಸಿರುವ ಕೊಳವೆಬಾವಿಯಲ್ಲಿ ಕೇವಲ 200 ಅಡಿಗೆ ನೀರು ಸಿಕ್ಕಿದೆ.

    ಜಿಲ್ಲೆಯ 12 ನೇ ವಾರ್ಡಿನ ನಗರಸಭಾ ಸದಸ್ಯೆ ಭಾರತಿ ಅನಂದ್ ಹಾಗೂ ಕುಟುಂಬಸ್ಥರು ತಮ್ಮ ಸ್ವಂತ ಹಣದಿಂದ ಕೊರೆಸಿದ ಕೊಳವೆಬಾವಿಯಲ್ಲಿ ಕೇವಲ 200 ಅಡಿಗೆ 4 ಇಂಚು ನೀರು ಸಿಕ್ಕಿದೆ. ಚಿಕ್ಕಬಳ್ಳಾಪುರ ನಗರದ ಪ್ರಮುಖ ರುದ್ರಭೂಮಿಯಾಗಿರುವ ನಕ್ಕಲಕುಂಟೆ ಸ್ಮಶಾನದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ವಿಪರ್ಯಾಸ ಅಂದ್ರೆ ನಗರದ ಹಲವೆಡೆ ಕೊಳವೆಬಾವಿ ಕೊರೆಸಿದ್ರೂ ನೀರು ಸಿಗೋದು ಅನುಮಾನ. ಆದ್ರೆ ಸ್ಮಶಾನದಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಅಂತ ಕೊರೆಸಿದ ಕೊಳವೆಬಾವಿಯಲ್ಲಿ ನೀರು ಸಿಕ್ಕಿರೋದು ಒಂದು ಕಡೆ ಆಶ್ಚರ್ಯವಾದರು ಎಲ್ಲರಿಗೂ ಸಂತಸ ತಂದಿದೆ.

    ಅಂತ್ಯ ಸಂಸ್ಕಾರಕ್ಕೆ ಅಂತ ಸ್ಮಶಾನಕ್ಕೆ ಬರುವವರು ನೀರಿಲ್ಲದೆ ಸಾಕಷ್ಟು ಕಷ್ಟ ಅನುಭವಿಸುತ್ತಿದ್ದರು. ಇದನ್ನ ಮನಗಂಡ ನಗರಸಭಾ ಸದಸ್ಯೆ ಹಾಗೂ ಕುಟುಂಬಸ್ಥರು ಕೊಳವೆಬಾವಿ ಕೊರೆಸಿ ಸಾರ್ವಜನಿಕರಿಗೆ ಸಹಾಯ ಮಾಡಿದ್ದಾರೆ. ತಮ್ಮ ಸ್ವಂತ ಹಣವನ್ನು ಖರ್ಚು ಮಾಡಿ ಜನರಿಗೆ ಸಹಾಯ ಮಾಡಿರುವ ಭಾರತಿ ಆನಂದ್ ಹಾಗೂ ಅವರ ಕುಟುಂಬಸ್ಥರ ಕೆಲಸಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇನ್ನೋವಾ ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಮಹಿಳೆ ದಾರುಣ ಸಾವು

    ಇನ್ನೋವಾ ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿ: ಮಹಿಳೆ ದಾರುಣ ಸಾವು

    ಕೋಲಾರ: ಎರಡು ಇನ್ನೋವಾ ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

    ಈ ಘಟನೆ ಕೋಲಾರ ತಾಲೂಕು ಪಟ್ನಾ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ. ಬೆಂಗಳೂರು ರಾಮಮೂರ್ತಿ ನಗರ ನಿವಾಸಿ ರೂಪಾ(28) ಮೃತ ದುರ್ದೈವಿ ಮಹಿಳೆ. ಇವರು ಕೋಲಾರ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

    ಘಟನೆಯಲ್ಲಿ ಕೋಲಾರ ನಗರಸಭೆ 27 ನೇ ವಾರ್ಡ್ ಸದಸ್ಯೆ ಸಾಕಮ್ಮ ಹಾಗೂ ಪ್ರಭಾಕರ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.