Tag: ನಕಲಿ ನೋಟ್

  • ದೇಶಾದ್ಯಂತ ಸಂಚಲನ ಮೂಡಿಸಿದ್ದ ನಕಲಿ ನೋಟ್ ಹಾವಳಿ ಪ್ರಕರಣ – ಬಳ್ಳಾರಿ ಯುವಕನ ಬಂಧಿಸಿದ ಎನ್‍ಐಎ

    ದೇಶಾದ್ಯಂತ ಸಂಚಲನ ಮೂಡಿಸಿದ್ದ ನಕಲಿ ನೋಟ್ ಹಾವಳಿ ಪ್ರಕರಣ – ಬಳ್ಳಾರಿ ಯುವಕನ ಬಂಧಿಸಿದ ಎನ್‍ಐಎ

    ಬಳ್ಳಾರಿ: ದೇಶಾದ್ಯಾಂತ ಸಂಚಲನ ಮೂಡಿಸಿದ್ದ ನಕಲಿ ನೋಟ್ (Fake Note) ಮುದ್ರಣ ಮತ್ತು ಚಲಾವಣೆ ಪ್ರಕರಣದಲ್ಲಿ ಎನ್‍ಐಎ (NIA) ತಂಡ ಬಳ್ಳಾರಿ ಯುವಕ ಸೇರಿದಂತೆ ವಿವಿಧ ರಾಜ್ಯದ ನಾಲ್ವರನ್ನು ಬಂಧಿಸಿದೆ.

    ಬಳ್ಳಾರಿಯಲ್ಲಿ (Ballari) ಬಂಧಿಸಲಾದ ಆರೋಪಿಯನ್ನು ಗೌತಮ ನಗರದ ಮಹೇಂದ್ರ (19) ಎಂದು ಗುರುತಿಸಲಾಗಿದೆ. ಅಲ್ಲದೇ ಪ್ರಕರಣದಲ್ಲಿ ಉತ್ತರ ಪ್ರದೇಶದ ಮೂಲದ ಕಿಂಗ್‍ಪಿನ್‍ಗಳಾದ ರಾಹುಲ್ ತಾನಜಿ ಪಾಟೀಲ್, ಮಹಾರಾಷ್ಟ್ರದ ವಿವೇಕ್ ಠಾಕೂರ್, ಶಿವು ಪಾಟೀಲ್, ಬಿಹಾರದ ಶಶಿಭೂಷಣ್ ಎಂಬ ನಾಲ್ವರನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಇದನ್ನೂ ಓದಿ: ಆಸ್ತಿ ವಿಚಾರಕ್ಕೆ ಗಲಾಟೆ – ಬೈಕ್ ಅಡ್ಡಗಟ್ಟಿ ಚಿಕ್ಕಪ್ಪನನ್ನೇ ಪೆಟ್ರೋಲ್ ಸುರಿದು ಸುಟ್ಟ ಮಗ

    ಆರೋಪಿ ಮಹೇಂದ್ರನ ಮನೆಯಲ್ಲಿ 500 ರೂ. ಮುಖಬೆಲೆಯ ಅಚ್ಚಿನ ಮಾದರಿ ಮತ್ತು ಒಂದು ಮುದ್ರಣ ಯಂತ್ರವನ್ನು ಸೀಜ್ ಮಾಡಲಾಗಿದೆ. 10ನೇ ತರಗತಿಯವರೆಗೂ ಆಂಧ್ರದಲ್ಲಿ ವ್ಯಾಸಂಗ ಮಾಡಿದ್ದ ಮಹೇಂದ್ರ ಕಳೆದ ಎರಡು ವರ್ಷಗಳ ಹಿಂದೆ ಬಳ್ಳಾರಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದ. ಯುವಕನ ಮನೆ ಪರಿಸ್ಥಿತಿ ಹಾಗೂ ಅಲ್ಲಿನ ವಾತಾವರಣ ನೋಡಿದರೆ ಯುವಕನಿಗೆ ಇಷ್ಟೊಂದು ದೊಡ್ಡ ಮಟ್ಟದ ಕಾಂಟ್ಯಾಕ್ಟ್ ಹೇಗೆ ಎಂಬುದು ಹಲವು ಶಂಕೆಗಳಿಗೆ ಕಾರಣವಾಗಿದೆ. ಆರೋಪಿ ಮಹೇಂದ್ರ ಕುಟುಂಬಕ್ಕೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿದು ಬಂದಿದೆ.

    ಆರೋಪಿ ಮಹೇಂದ್ರನ ತಂದೆ ರಾಮಣ್ಣ ಕಳೆದ ಎಂಟು ವರ್ಷದ ಹಿಂದೆಯೇ ಸಾವನ್ನಪ್ಪಿದ್ದು, ತಾಯಿ ರಾಜೇಶ್ವರಿ ಮೂರು ಮಕ್ಕಳೊಂದಿಗೆ ಜನತಾ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಆರೋಪಿ ಕುಟುಂಬದ ಹಿರಿಯ ಮಗನಾಗಿದ್ದು, ಆತ ಒಮ್ಮೆಯೂ ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ ರಾಜ್ಯಗಳಿಗೆ ಹೋಗಿಲ್ಲ ಎನ್ನಲಾಗಿದೆ. ಆತನಿಗೆ ಪ್ರಮುಖ ಆರೋಪಿಗಳ ಪರಿಚಯ ಹೇಗೆ ಆಗಿದೆ ಎಂಬುದು ತಿಳಿದು ಬಂದಿಲ್ಲ. ಇದನ್ನೂ ಓದಿ: 6 ವರ್ಷದ ಬಾಲಕನಿಗೆ 11 ಕಡೆ ಕಚ್ಚಿ ಗಾಯಗೊಳಿಸಿದ ನಾಯಿ

  • ನಕಲಿ ನೋಟ್ ಪ್ರಿಂಟ್ ಮಾಡ್ತಿದ್ದ ಓರ್ವನ ಬಂಧನ

    ನಕಲಿ ನೋಟ್ ಪ್ರಿಂಟ್ ಮಾಡ್ತಿದ್ದ ಓರ್ವನ ಬಂಧನ

    ವಿಜಯಪುರ: ಈ ಮೊದಲು ಜಿಲ್ಲೆಯ ಭೀಮಾತೀರದ ಪರಿಸರದಲ್ಲಿ ಕಂಟ್ರಿ ಬಂದೂಕುಗಳು ಪತ್ತೆ ಆಗುತ್ತಿದ್ದವು. ಇದೀಗ ಇಂಡಿ ಪಟ್ಟಣದ ಕೆ.ಇ.ಬಿ. ಕಾಲೋನಿಯಲ್ಲಿ ನಕಲಿ ನೋಟ್ ಮುದ್ರಿಸುತ್ತಿದ್ದ ಮಶಿನ್ ಪತ್ತೆಯಾಗಿದ್ದು, ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

    ಕಲ್ಲಪ್ಪ ಹರಿಜನ್ ಬಂಧಿತ ಆರೋಪಿ. ಕೆ.ಇ.ಬಿ. ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಕಲ್ಲಪ್ಪ ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದನು. ಕಲ್ಲಪ್ಪ ತನ್ನ ಮನೆಯಲ್ಲಿ ಕಲರ್ ಪ್ರಿಂಟರ್ ಮತ್ತು ಸ್ಕ್ಯಾನರ್ ಇಟ್ಟುಕೊಂಡಿದ್ದನು. ಅಸಲಿ ನೋಟ್ ಗಳನ್ನು ಸ್ಕ್ಯಾನ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳುತ್ತಿದ್ದನು. ಮಾರುಕಟ್ಟೆಯಲ್ಲಿ ಅಸಲಿ ನೋಟ್ ಗಳ ಮಧ್ಯೆ ನಕಲಿ ಇರಿಸಿ ಚಲಾಯಿಸುತ್ತಿದ್ದನು. ನಕಲಿ ನೋಟ್ ಗಳನ್ನು ಪರ್ಸೆಂಟೆಜ್ ಲೆಕ್ಕದಲ್ಲಿ ಹಲವರೊಂದಿಗೆ ವಿನಿಮಯ ಮಾಡಿಕೊಳ್ಳುತ್ತಿದ್ದನು ಎಂಬ ಮಾಹಿತಿ ಲಭಿಸಿದೆ.

    ಖಚಿತ ಮಾಹಿತಿ ಪಡೆದ ಇಂಡಿ ನಗರ ಪಿಎಸ್‍ಐ ರವಿ ಯಡವನ್ನವರ್ ಮತ್ತು ಇಂಡಿ ಗ್ರಾಮೀಣ ಪಿಎಸ್‍ಐ ಸಿಂಧೂರ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಂಡಿ ಪಟ್ಟಣದ ಅಲ್ಲಾಭಕ್ಷ ನಾಗೂರು ಎಂಬವರ ಮನೆಯನ್ನು ಆರೋಪಿ ಬಾಡಿಗೆ ಪಡೆದುಕೊಂಡಿದ್ದನು. ಮನೆಯಲ್ಲಿ ನಕಲಿ ನೋಟ್ ಪ್ರಿಂಟ್ ಮಾಡುವ ಮೂಲಕ ದೇಶದ್ರೋಹ ಕೆಲಸದಲ್ಲಿ ತೊಡಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಟಿಎಂನಲ್ಲಿ ನಕಲಿ 2 ಸಾವಿರ ನೋಟಿನ ಅಸಲಿ ಮುಖ ಕೊನೆಗೂ ಬಯಲು

    ಎಟಿಎಂನಲ್ಲಿ ನಕಲಿ 2 ಸಾವಿರ ನೋಟಿನ ಅಸಲಿ ಮುಖ ಕೊನೆಗೂ ಬಯಲು

    ನವದಹಲಿ: ಎಸ್‍ಬಿಐ ಎಟಿಎಂನಲ್ಲಿ ನಕಲಿ 2 ಸಾವಿರ ರೂ. ನೋಟ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

    27 ವರ್ಷದ ಮೊಹಮ್ಮದ್ ಇಶಾ ಬಂಧಿತ ಆರೋಪಿ. ಈತ ಎಟಿಎಂ ಕ್ಯಾಶ್ ಲೋಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಸಂಗಮ್ ವಿಹಾರ್‍ನ ಎಸ್‍ಬಿಐ ಎಟಿಎಂನಲ್ಲಿ ನಕಲಿ ನೋಟು ಪತ್ತೆಯಾದ ದಿನ ಈತನೇ ಕ್ಯಾಶ್ ಕಸ್ಟೋಡಿಯನ್ ಆಗಿದ್ದ.

    ಇತ 5 ಒರಿಜಿನಲ್ ನೋಟ್‍ಗಳನ್ನ ತೆಗೆದು ಅದರ ಬದಲು ನಕಲಿ ನೋಟ್‍ಗಳನ್ನ ಇಟ್ಟಿದ್ದಾನೆ. ಈ ನೋಟುಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುತ್ತವೆ. ಇವನ್ನು ಮಕ್ಕಳು ಆಟವಾಡಲು ಬಳಸುತ್ತಾರೆ ಎಂದು ಡಿಸಿಪಿ ರೋಮಿಲ್ ಬಾನಿಯಾ ಹೇಳಿದ್ದಾರೆ.

    ಮೊದಲಿಗೆ ಹಣವಿದ್ದ ಬಾಕ್ಸ್ ಹೊಂದಿದ್ದ ವಾಹನವನ್ನು ದಕ್ಷಿಣ ದೆಹಲಿಯ ಡಿಯೋಲಿಗೆ ತೆಗೆದುಕೊಂಡು ಹೋಗಲಾಗಿತ್ತು. ಅಲ್ಲಿ ಎಟಿಎಂಗೆ ಹಣ ತುಂಬಿಸಿದ ನಂತರ ಸಂಗಮ್ ವಿಹಾರ್‍ನತ್ತ ಬಂದಿದ್ದಾರೆ. ಇಶಾ ಡಿಯೋಲಿಯಲ್ಲಿಯೇ ನಕಲಿ ನೋಟ್ ಬದಲಾಯಿಸಿದ್ದಾನೆ. ಈ ಕೆಲಸ ಮಾಡಲು ಇವನ್ನೊಬ್ಬನಿಂದಲೇ ಸಾಧ್ಯ ಎಂದು ತನಿಖಾಧಿಕಾರೊಯೊಬ್ಬರು ಹೇಳಿದ್ದಾರೆ.

    ಇಶಾ ಬದಲಾಯಿಸಿದ್ದಾನೆ ಎನ್ನಲಾದ ನೋಟ್‍ಗಳನ್ನು ಪೊಲೀಸರು ಇನ್ನೂ ವಶಪಡಿಸಿಕೊಂಡಿಲ್ಲ. ಈತನ ಬಳಿ ಈಗಿರುವ 2 ಸಾವಿರ ರೂ. ನೋಟ್‍ಗಳು ಎಟಿಎಂಗೆ ಹಾಕಬೇಕಿದ್ದ ಹಣದಿಂದ ಕದ್ದಿದ್ದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅಲ್ಲದೆ ಘಟನೆ ನಡೆದು ತುಂಬಾ ಸಮಯವಾಗಿರುವುದರಿಂದ ಈಗಾಗಲೇ ಆತ ಹಣವನ್ನು ಖರ್ಚು ಮಾಡಿರಲೂಬಹುದು ಎಂದು ವಿವರಿಸಿದ್ದಾರೆ.

    ಎಟಿಎಂನಲ್ಲಿ ಸಿಕ್ಕ ನಕಲಿ ನೋಟುಗಳು ದೆಹಲಿಯ ಮಾರುಕಟ್ಟೆಯಲ್ಲಿ 40 ರೂ. ಬೆಲೆಗೆ ಸುಲಭವಾಗಿ ಸಿಗುತ್ತವೆ ಎಂದು ಪೊಲೀಸ್ ತನಿಖೆಯಿಂದ ಬಯಲಾಗಿದೆ.