Tag: ಧಾರಾವಾಹಿ

  • ಕನ್ನಡದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ

    ಕನ್ನಡದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶ

    ಬೆಂಗಳೂರು: ಕನ್ನಡದ ಸಾಕಷ್ಟು ಸಿನಿಮಾ ಧಾರಾವಾಹಿಗಳಲ್ಲಿ ಪೊಷಕ ನಟನಾಗಿ, ಖಳನಟನಾಗಿ ಅಭಿನಯಿಸಿದ್ದ ಹಿರಿಯ ಕಲಾವಿದ ವೇಣುಗೋಪಾಲ್ ವಿಧಿವಶರಾಗಿದ್ದಾರೆ.

    ವೇಣುಗೋಪಾಲ್ ಅವರು ಮಂಗಳವಾರ ಬೆಳಿಗ್ಗೆ ಕತ್ರಿಗುಪ್ಪೆಯ ತಮ್ಮ ನಿವಾಸದಲ್ಲಿ ಹೃದಯಘಾತದಿಂದ ನಿಧನರಾದರು. ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದ ಇವರು ಕೊನೆಯದಾಗಿ ಶುದ್ಧಿ ಚಿತ್ರದಲ್ಲಿ ನಟಿಸಿದ್ದರು.

    ವೇಣುಗೊಪಾಲ್ ಅವರು ಡಾ. ವಿಷ್ಣುವರ್ಧನ್ ಅವರ ಚಿತ್ರದಲ್ಲಿ ಹೆಚ್ಚಾಗಿ ನಟಿಸಿದ್ದರು. ಸೂರಪ್ಪ, ರಾಜನರಸಿಂಹ, ಕೋಟಿಗೊಬ್ಬ, ಡಕೋಟ ಎಕ್ಸ್ ಪ್ರೆಸ್ ಇನ್ನೂ ಅನೇಕರ ಚಿತ್ರದಲ್ಲಿ ನಟಿಸಿದ್ದು, ಮನೆತನ, ಜನನಿ ಧಾರಾವಾಹಿಗಳಲ್ಲಿಯೂ ನಟಿಸಿದ್ದರು.

  • ಮಗನ ಶಿಕ್ಷಣಕ್ಕಾಗಿ ಹೈವೇ ಬದಿ ಕ್ಯಾಂಟೀನ್ ತೆರೆದ ಧಾರಾವಾಹಿ ನಟಿ!

    ಮಗನ ಶಿಕ್ಷಣಕ್ಕಾಗಿ ಹೈವೇ ಬದಿ ಕ್ಯಾಂಟೀನ್ ತೆರೆದ ಧಾರಾವಾಹಿ ನಟಿ!

    ನವದೆಹಲಿ: ಸಿನಿಮಾ, ಧಾರಾವಾಹಿ ನಟ-ನಟಿಯರು ಎಂದರೇ ಸಾಕು ವೈಭವಯುತ, ಅಡಂಬರದ ಜೀವನ ನಡೆಸುತ್ತಾರೆ ಎನ್ನುವ ಅಭಿಪ್ರಾಯ ಜನರಲ್ಲಿ ಇದೆ. ಆದರೆ ಮಲೆಯಾಳಂ ನಟಿಯೊಬ್ಬರು ಮಗನ ಶಿಕ್ಷಣಕ್ಕಾಗಿ ಕ್ಯಾಂಟೀನ್ ಓಪನ್ ಮಾಡಿ ಈಗ ದೇಶಾದ್ಯಂತ ಸುದ್ದಿಯಾಗಿದ್ದಾರೆ.

    ಮಲೆಯಾಳಂ ಧಾರಾವಾಹಿಗಳಲ್ಲಿ ಕವಿತಾ ಲಕ್ಷ್ಮೀ ಬಹಳ ಪ್ರಸಿದ್ಧ ನಟಿ. ಆದರೆ ಅವರ ಜೀವನದಲ್ಲಿ ಈಗ ಆರ್ಥಿಕ ಕಷ್ಟ ಎದುರಾಗಿದ್ದು ಇದನ್ನು ಮೆಟ್ಟಿನಿಲ್ಲಲು ಹೈವೇ ಪಕ್ಕದಲ್ಲಿ ಕ್ಯಾಂಟಿನ್ ಆರಂಭಿಸಿದ್ದಾರೆ. ಇಂದಿಗೂ ಧಾರವಾಹಿಗಳಲ್ಲಿ ನಟಿಸುತ್ತಿರುವ ಇವರು ಸಂಜೆಯಾದರೆ ಸಾಕು, ಶೂಟಿಂಗ್ ಮುಗಿಸಿಕೊಂಡು ತಿರುವನಂತಪುರದ ಹೈವೇ ಪಕ್ಕದಲ್ಲಿ ದೋಸೆ ಕ್ಯಾಂಟಿನ್‍ನಲ್ಲಿ ಕೆಲಸ ಆರಂಭಿಸುತ್ತಾರೆ.

    ಕವಿತಾ ಲಕ್ಷ್ಮೀ ತಮ್ಮ ಗಂಡನಿಂದ 13 ವರ್ಷಗಳ ಹಿಂದೆಯೇ ವಿಚ್ಚೇದನ ಪಡೆದಿದ್ದಾರೆ. ಈ ವೇಳೆ ತಮ್ಮ ಎರಡು ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ತಮ್ಮ ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸಲು ತೀರ್ಮಾನಿಸಿ ಏಜೆಂಟ್ ಒಬ್ಬರ ಬಳಿ ತೆರಳಿದ್ದರು. ಏಜೆಂಟ್ ಅವರ ಮಗನನ್ನು ಇಂಗ್ಲೆಂಡ್ ನಲ್ಲಿ ಶಿಕ್ಷಣ ಕೊಡಿಸಲು ಮಾಹಿತಿ ನೀಡಿ ಅಲ್ಲಿಯೇ ಪಾರ್ಟ್ ಟೈಮ್ ಜಾಬ್ ಮಾಡಿ 10 ಪೌಂಡ್ ಹಣವನ್ನು ಗಂಟೆಗೆ ಪಡೆಯಲು ಸಾಧ್ಯ. ನಿಮ್ಮ ಮಗನ ಶಿಕ್ಷಣ ವೆಚ್ಚವನ್ನು ಆತನೆ ಸಂಪಾದಿಸಬಹುದು ಎಂದು ತಿಳಿಸಿದ್ದರು. ಇದರಂತೆ ಪ್ರಾರಂಭದಲ್ಲಿ 1 ಲಕ್ಷ ರೂ. ಹಣವನ್ನು ನೀಡಿ ಮಗನನ್ನು ಕಳುಹಿಸಿದ್ದರು.

    ಆದರೇ ಅಲ್ಲಿ ತೆರಳಿದ ಮೇಲೆ ಏಜೆಂಟ್ ನೀಡಿದ್ದ ಮಾಹಿತಿ ಎಲ್ಲಾ ಸುಳ್ಳು ಎಂದು ತಿಳಿಯಿತು. ಪ್ರಸ್ತುತ ಕವಿತಾ ಅವರು ತಮ್ಮ ಮಗನ ಶಿಕ್ಷಣ ಪೂರ್ಣಗೊಳಿಸಲು ಬೇಕಾದ ಹಣವನ್ನು ಓದಗಿಸಲು ಕಷ್ಟಪಟ್ಟು ಕೆಲಸ ಮಾಡಲು ಆರಂಭಿಸಿದ್ದಾರೆ. ಪ್ರತಿ 6 ತಿಂಗಳಿಗೊಮ್ಮೆ ಅವರ ಮಗನ ಶಿಕ್ಷಣದ ಸೆಮಿಸ್ಟರ್ ಹಣವನ್ನು ಕಟ್ಟುವ ಅಗತ್ಯವಿದೆ. ಕ್ಯಾಂಟೀನ್ ಆರಂಭಿಸುವ ಮೊದಲು ಕವಿತಾ ಅವರು ಗ್ರಾನೈಟ್ ಶೋರೂಂ ತೆರೆದಿದ್ದರು. ಆದರೆ ಅದರಲ್ಲಿ ಹೆಚ್ಚಿನ ನಷ್ಟ ಉಂಟಾಗಿತ್ತು.

    ಕವಿತಾ ರಸ್ತೆ ಪಕ್ಕ ಆರಂಭಿಸಿರುವ ಸ್ಟ್ರೀಟ್ ಕ್ಯಾಂಟಿನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಕವಿತಾ ಅವರ ದೃಢ ಮನಸ್ಸಿನ ಸಂಕಲ್ಪಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

  • ರಚನಾ ಕೊನೆಯ ಆಸೆ ಏನಾಗಿತ್ತು? ಅಪಘಾತ ಆಗಿದ್ದು ಹೇಗೆ?

    ರಚನಾ ಕೊನೆಯ ಆಸೆ ಏನಾಗಿತ್ತು? ಅಪಘಾತ ಆಗಿದ್ದು ಹೇಗೆ?

    ಬೆಂಗಳೂರು: ಧಾರಾವಾಹಿಗಳಲ್ಲಿ ಉದಯೋನ್ಮುಖ ನಟ, ನಟಿಯರಾಗಿದ್ದ ರಚನಾ((23) ಮತ್ತು ಜೀವನ್‍ನ್(25) ಗುರುವಾರ ತಡರಾತ್ರಿ ನೆಲಮಂಗಲದ ಸೋಲೂರು ಬಳಿಯ ಹೈವೆಯಲ್ಲಿ ಭೀಕರ ಅಪಘಾತಕ್ಕೆ ಬಲಿಯಾಗಿದ್ದಾರೆ.

    ಸಹನಟರ ಜೊತೆ ಚಿತ್ರೀಕರಣ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಕಾರ್‍ನಲ್ಲಿ ಎಲ್ಲರೂ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹೆದ್ದಾರಿಯಲ್ಲಿ ಬಸ್ ಬಂತೆಂದು ಎಡಭಾಗಕ್ಕೆ ಕಾರನ್ನು ಚಲಾಯಿಸಿ ನಿಂತಿದ್ದ ಕ್ಯಾಂಟರ್ ಗೆ ಸಫಾರಿ ಕಾರು ಡಿಕ್ಕಿ ಹೊಡೆದಿದ್ದಾಗಿ ಗಾಯಾಳುಗಳು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ.

    ಘಟನೆಯಲ್ಲಿ ಗಾಯಗೊಂಡ ಸಹ ನಟರಾದ ಬಿಎಸ್ ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಮತ್ತು ಎರಿಕ್ ಈ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಆದರೂ ಕಾರಿನಲ್ಲಿದ್ದವರು ಮದ್ಯಪಾನ ಮಾಡಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಮಾಗಡಿಯ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಶವ ಒಪ್ಪಿಸಲಾಯಿತು. ಬಳಿಕ ಆರ್‍ಆರ್ ನಗರದ ರಚನಾ ನಿವಾಸದ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬಳಿಕ ಕೆಂಗೇರಿಯ ವಿದ್ಯುತ್ ಚಿತಾಗಾರದಲ್ಲಿ ರಚನಾ ಮತ್ತು ಜೀವನ್ ಮೃತದೇಹವನ್ನು ಅಂತ್ಯ ಸಂಸ್ಕಾರ ಮಾಡಲಾಯಿತು.

    ತ್ರಿವೇಣಿ ಸಂಗಮ, ಮಹಾನದಿ ಧಾರಾವಾಹಿಗಳಲ್ಲಿ ರಚನಾ ನಟಿಸುತ್ತಿದ್ದರೆ, ಮಜಾ ಭಾರತ ರಿಯಾಲಿಟಿ ಶೋನಲ್ಲಿ ಜೀವನ್ ನಟಿಸುತ್ತಿದ್ದರು.

    ಕೊನೆಯ ಆಸೆ: ಖಾಸಗಿ ವಾಹಿನಿ ನಡೆಸಿಕೊಡುವ ಡ್ಯಾನ್ಸ್ ಡ್ಯಾನ್ಸ್ ಜ್ಯೂನಿಯರ್ ಕಾರ್ಯಕ್ರಮದಲ್ಲಿ ಕೊರಿಯೋಗ್ರಫರ್ ಕಮ್ ಜ್ಯೂರಿ ಸಲ್ಮಾನ್ ಭೇಟಿಯಾಗಿ ತಮ್ಮ ಮನದಾಳವನ್ನು ರಚನಾ ಹಂಚಿಕೊಂಡಿದ್ದರು. ಕೊನೆಯಾಸೆಯಂತೆ ಸಲ್ಮಾನ್ ಜೊತೆ ರಚನಾ ಡ್ಯಾನ್ಸ್ ಮಾಡಿದ್ದರು. ರಚನಾ ಡ್ಯಾನ್ಸ್ ನೋಡಿ ಟೆಡ್ಡಿಬೇರ್ ಗೊಂಬೆಯನ್ನು ಸಲ್ಮಾನ್ ಉಡುಗೊರೆಯಾಗಿ ನೀಡಿದ್ದರು.

    https://youtu.be/eU7SEeUcTJ8

    https://youtu.be/78wSqmIpRo0

    ಚಿತ್ರ ಕೃಪೆ: ಸ್ಟಾರ್ ಸುವರ್ಣ

  • ಹಿರಿಯ ನಟ ಗುರುಮೂರ್ತಿ ಇನ್ನಿಲ್ಲ

    ಹಿರಿಯ ನಟ ಗುರುಮೂರ್ತಿ ಇನ್ನಿಲ್ಲ

    ಬೆಂಗಳೂರು: ತೀವ್ರ ಹೃದಯಾಘಾತದಿಂದ ಹಿರಿಯ ನಟ ಗುರುಮೂರ್ತಿ(70) ಕಳೆದ ರಾತ್ರಿ ನಗರದ ಕನಕಪುರ ರಸ್ತೆ ನಿವಾಸದಲ್ಲಿ ನಿಧನರಾಗಿದ್ದಾರೆ.

    ಶುಕ್ರವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ತೀವ್ರ ಹೃದಯಾಘಾತವಾಗಿದೆ. ಕೊಡಲೇ ಅವರನ್ನು ರಾಜಶೇಖರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗುರುಮೂರ್ತಿಯವರು ಪತ್ನಿ ಪೂರ್ಣಿಮಾ, ಮಕ್ಕಳಾದ ಜಯಂತ್, ನಿಶಾಂತ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

    ಕಿರಿಯ ಪುತ್ರ ಯೂರೋಪ್ ಪ್ರವಾಸದಲ್ಲಿರುವುದರಿಂದ ವಾಪಸ್ ಬಂದ ನಂತರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಗುರುಮೂರ್ತಿ ಭಾಜನರಾಗಿದ್ದರು.

    ಮೂಲತಃ ತುಮಕೂರಿನ ತಿಪಟೂರಿನವರಾದ ಗುರುಮೂರ್ತಿ, ಗುರುಮಾಮ ಎಂದೇ ಸಿನಿಮಾ, ಚಿತ್ರರಂಗ ಹಾಗೂ ಧಾರಾವಾಹಿಗಳಲ್ಲಿ ಫೇಮಸ್ ಆಗಿದ್ದರು. ದೂರದರ್ಶನದಲ್ಲಿ ಬರುತ್ತಿದ್ದ ‘ಅಡಚಣೆಗಾಗಿ ಕ್ಷಮಿಸಿ’ ಸಿರಿಯಲ್ ನಿಂದ ಸಾಕಷ್ಟು ಖ್ಯಾತಿಗಳಿಸಿದ್ರು.

    ದಿವಂಗತ ಗುರುಮೂರ್ತಿ ಹೆಚ್ಚಿನದಾಗಿ ಪೋಷಕ ಪಾತ್ರ ಹಾಗೂ ಕಾಮಿಡಿ ಪತ್ರಗಳಲ್ಲಿ ಅಭಿನಯಿಸಿ ಎಲ್ಲರ ಪ್ರಶಂಸೆಗಳಿಸಿದ್ರು. ‘ಮುಕ್ತ ಮುಕ್ತ’ ಧಾರಾವಾಹಿ, ಕನ್ನಡದ ‘ಕಂಟಿ’ ಸೇರಿದಂತೆ ಹಲವು ಸಿರಿಯಲ್ ಹಾಗೂ ಸಿನಿಮಾಗಳಲ್ಲಿ ಅಭಿನಯಿಸಿದ್ದರು.