Tag: ಧರ್ಮಸ್ಥಳ ಸಂಘ

  • ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ನೋಂದಣಿ – ಧರ್ಮಸ್ಥಳ ಸಂಘದ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ ನೋಂದಣಿ – ಧರ್ಮಸ್ಥಳ ಸಂಘದ ಕಾರ್ಯಕ್ಕೆ ಭಾರೀ ಮೆಚ್ಚುಗೆ

    ಚಿಕ್ಕಮಗಳೂರು: ವಿದ್ಯುತ್ ವ್ಯತ್ಯಯವಾಗಿ ನೆಟ್‍ವರ್ಕ್ (Mobile Network) ಇಲ್ಲದ ಕಾರಣ ಸ್ಥಳೀಯರು ಸಮೀಪದ ಗುಡ್ಡ ಹತ್ತಿ ಆಯುಷ್ಮಾನ್ ಕಾರ್ಡ್ (Ayushman Card) ನೋಂದಣಿ ಮಾಡಿಸಿಕೊಂಡಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ.

    ಕಳಸ ತಾಲೂಕಿನ ಕಳಕೋಡು ಹಾಗೂ ಕಾರ್ಲೆ ಗ್ರಾಮಸ್ಥರು ಗುಡ್ಡ ಹತ್ತಿ ಕಾರ್ಡ್ ನೋಂದಣಿ ಮಾಡಿಕೊಂಡಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕೇಂದ್ರ ಸರ್ಕಾರದ ಆಯುಷ್ಮಾನ್ ಕಾರ್ಡ್ ಯೋಜನೆಯನ್ನು ಹಳ್ಳಿಗರಿಗೆ (Village) ನೋಂದಣಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ, ಸಂಸೆ, ಕಾರ್ಲೆ, ಕಳಕೋಡು ಗ್ರಾಮದಲ್ಲಿ ನೆಟ್‍ವರ್ಕ್ ಸಮಸ್ಯೆ ಯಥೇಚ್ಚವಾಗಿದೆ. ಕರೆಂಟ್ ಹೋದರೆ ನೆಟ್‍ವರ್ಕ್ ಫುಲ್ ಕಟ್ ಆಗುತ್ತೆ. ಮಾಡಿದ ಕೆಲಸವೆಲ್ಲಾ ವೇಸ್ಟ್‌ ಆಗುತ್ತೆ. ಹಾಗಾಗಿ, ಕರೆಂಟ್ ಇಲ್ಲದ ಕಾರಣ ಧರ್ಮಸ್ಥಳ ಸಂಘದವರು ಸಮೀಪದ ಗುಡ್ಡ ಹತ್ತಿ ನೆಟ್‍ವರ್ಕ್ ಹುಡುಕಿದ್ದಾರೆ. ಹಳ್ಳಿಗರಿಗೆ ಅಲ್ಲೇ ಕಾರ್ಡ್ ನೋಂದಣಿ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಮೊದಲ ಬಲಿ – ಸ್ಥಳದಲ್ಲಿಯೇ ಮಹಿಳೆ ಸಾವು

    ಕಾರ್ಡ್ ನೋಂದಣಿ ವೇಳೆಯೂ ವಿದ್ಯುತ್ ಕೈಕೊಟ್ಟಿತ್ತು. ಸಂಸೆಯಲ್ಲಿರುವ ಟವರ್‌ನ ಮೊಬೈಲ್ ನೆಟ್‍ವರ್ಕ್ ಕೂಡ ಕಡಿತವಾಗಿತ್ತು. ಆದ್ರೆ, ಕೆಲಸ ಮಾಡಲೇಬೇಕು ಅಂತ ಸಂಘಟಕರು ನೆಟ್‍ವರ್ಕ್ ಹುಡಕಿ ಗುಡ್ಡಕ್ಕೆ ಹೊರಟಿದ್ದರು. ಗುಡ್ಡದಲ್ಲಿ ನೆಟ್‍ವರ್ಕ್ ಸಿಗುವ ಸ್ಥಳದಲ್ಲೇ ನೋಂದಣಿ ಮಾಡಿದ್ದಾರೆ. ಗ್ರಾಮಸ್ಥರು-ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಿಬ್ಬಂದಿ ಕೂಡ ಬೆಟ್ಟ ಹತ್ತಿ ನೋಂದಣಿ ಮಾಡಿದ್ದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇಂತಹ ಪರಿಸ್ಥಿತಿ ಗ್ರಾಮಗಳಲ್ಲಿ ಪದೇ ಪದೇ ಕೇಳಿ ಬಂದರೂ ಸಮಸ್ಯೆ ಮಾತ್ರ ಹಾಗೇ ಉಳಿದುಕೊಳ್ಳುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕಾಗಿ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳು ಸ್ವಾಮಿಗಳ ಬಳಿ ಹೋಗಲಾರದಂತ ಸ್ಥಿತಿ ನಿರ್ಮಾಣ: ಶಾಮನೂರು ಶಿವಶಂಕರಪ್ಪ

    Live Tv
    [brid partner=56869869 player=32851 video=960834 autoplay=true]

  • ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೃದ್ಧಾಪ್ಯ, ಶಿಷ್ಯ ವೇತನ ಹಂಚಿಕೆ

    ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೃದ್ಧಾಪ್ಯ, ಶಿಷ್ಯ ವೇತನ ಹಂಚಿಕೆ

    ಆನೇಕಲ್: ಸರ್ಕಾರ ನೀಡುವ ವೃದ್ಧಾಪ್ಯ ವೇತನದಿಂದ ಜೀವನ ನಡೆಸಲು ಸಾಧ್ಯವಿಲ್ಲ ಎಂಬುದನ್ನು ಅರಿತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಇದೀಗ ವರ್ಷ ವರ್ಷ ಹಿಂದುಳಿದ ವರ್ಗದ ವೃದ್ಧರನ್ನು ಗುರುತಿಸಿ ಅವರಿಗೆ ಸಂಘದಿಂದ ವೃದ್ಧಾಪ್ಯ ವೇತನ ನೀಡುತ್ತಿದೆ.

    ಇಂದು ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಆನೇಕಲ್ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಆನೇಕಲ್ ತಾಲೂಕಿನಾದ್ಯಂತ 250ಕ್ಕೂ ಹೆಚ್ಚು ವೃದ್ಧರಿಗೆ ವೃದ್ಧಾಪ್ಯ ವೇತನ ನೀಡಲಾಯಿತು. ಸಂಘದಲ್ಲಿ ಸದಸ್ಯರಾಗಿರುವವರ ಮಕ್ಕಳು ಉನ್ನತ ಶಿಕ್ಷಣ ಮಾಡುತ್ತಿದ್ದಾರೆ ಅಂತಹ ಮಕ್ಕಳಿಗೆ ಪ್ರತಿ ತಿಂಗಳು ಅವರ ವಿದ್ಯಾಭ್ಯಾಸದ ವೆಚ್ಚವೆಂದು 400 ರೂಪಾಯಿಂದ 1000 ರೂಪಾಯಿ ಶಿಷ್ಯ ವೇತನ ನೀಡುತ್ತಿದ್ದು, ಆನೇಕಲ್ ತಾಲೂಕಿನ ಸುಮಾರು 150 ಮಕ್ಕಳಿಗೆ ಈ ವರ್ಷ ಈ ಯೋಜನೆಯ ಅಡಿಯಲ್ಲಿ ಶಿಷ್ಯ ವೇತನ ನೀಡಲಾಯಿತು.

    ಅತ್ತಿಬೆಲೆಯ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೃದ್ಧಾಪ್ಯ ವೇತನ ಹಾಗೂ ಶಿಷ್ಯ ವೇತನ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಅನೇಕಲ್ ವಲಯ ಸಂಘದ ಮಂಜುನಾಥ್ ಮಾತನಾಡಿ, ನಮ್ಮ ಸಂಘವು ಕೇವಲ ಸಾಲ ನೀಡಿ ಮರು ವಸೂಲಿ ಮಾಡುವುದು ಎಂಬ ತಿಳುವಳಿಕೆ ಇದೆ. ಆದರೆ ನಮ್ಮ ಸಂಘ ಹಿಂದುಳಿದ ಪ್ರದೇಶಗಳಲ್ಲಿನ ಜನರನ್ನು ಗುರುತಿಸಿ ಅವರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದು, ಮೊದಲಿಗೆ ನಾವು ವೃದ್ಧಾಪ್ಯ ವೇತನಕ್ಕೆ ಗುರುತಿಸಿ ನಂತರ ಕೇಂದ್ರ ಕಛೇರಿಯಿಂದ ಒಪ್ಪಿಗೆ ಪಡೆದು ವಿತರಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದೇವೆ ಎಂದು ತಿಳಿಸಿದರು.