Tag: ಧರ್ಮಸ್ಥಳ ಪ್ರಕರಣ

  • ಸಮೀರ್ ಮುಸ್ಲಿಂ ಸಮುದಾಯದ ಪ್ರತಿನಿಧಿ ಅಲ್ಲ: ಜಮಾತ್ ಎ ಇಸ್ಲಾಮಿ ಹಿಂದ್ ಸಂಘಟನೆ ಸ್ಪಷ್ಟನೆ

    ಸಮೀರ್ ಮುಸ್ಲಿಂ ಸಮುದಾಯದ ಪ್ರತಿನಿಧಿ ಅಲ್ಲ: ಜಮಾತ್ ಎ ಇಸ್ಲಾಮಿ ಹಿಂದ್ ಸಂಘಟನೆ ಸ್ಪಷ್ಟನೆ

    ಬೆಂಗಳೂರು: ಸಮೀರ್ ಮುಸ್ಲಿಂ ಸಮುದಾಯದ ಪ್ರತಿನಿಧಿ ಅಲ್ಲ ಎಂದು ಜಮಾತ್ ಎ ಇಸ್ಲಾಮಿ ಹಿಂದ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಹಮದ್ ಕುನ್ಞಿ ತಿಳಿಸಿದ್ದಾರೆ.

    ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಮಹಮದ್, ಯೂಟ್ಯೂಬರ್ ಸಮೀರ್ ಎಐ ವಿಡಿಯೋಗಳ ವಿಚಾರ ಚರ್ಚೆಯಲ್ಲಿದೆ. ಸಮೀರ್ ಯಾರೂ ಅನ್ನೋದೆ ಮುಸ್ಲಿಂ ಸಮುದಾಯಕ್ಕೆ ಗೊತ್ತಿರಲಿಲ್ಲ. ಸಮೀರ್ ಮುಸ್ಲಿಂ ಸಮುದಾಯದ ಪ್ರತಿನಿಧಿ ಅಂತೂ ಖಂಡಿತ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕರ್ನಾಟಕದಲ್ಲಿ ಸುಮಾರು ಒಂದೂವರೆ ಕೋಟಿ ಮುಸ್ಲಿಮರಿದ್ದಾರೆ. ಇವರಲ್ಲಿ ಎಷ್ಟು ಜನರಿಗೆ ಸಮೀರ್ ಗೊತ್ತಿದ್ದಾನೆ? ನಾವು ದೊಡ್ಡ ಸಂಘಟನೆಗಳಲ್ಲಿ ಇರುವವರು. ನಮಗಂತೂ ಸಮೀರ್ ಗೊತ್ತೇ ಇರಲಿಲ್ಲ ಎಂದು ಹೇಳಿದ್ದಾರೆ.

    ಈಗಲೂ ಅವನೊಬ್ಬ ಯೂಟ್ಯೂಬರ್ ಅನ್ನೋದಷ್ಟೇ ಗೊತ್ತು. ಅವನು ಮಾಡಿದ ವಿಡಿಯೋಗಳು ತಪ್ಪಿದ್ರೆ ಅವನಿಗೂ ಶಿಕ್ಷೆಯಾಗುತ್ತೆ. ಯಾವುದೇ ಧಾರ್ಮಿಕ ಕ್ಷೇತ್ರಗಳ ಮೇಲೆ ಅಪಪ್ರಚಾರ ಆಗಬಾರದು. ಇದು ನಮ್ಮ ಮೂಲಭೂತ ನಂಬಿಕೆ ಎಂದು ತಿಳಿಸಿದ್ದಾರೆ.

    ಧರ್ಮಸ್ಥಳ ಪ್ರಕರಣಕ್ಕೆ ಸಂಬಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಎಐ ವೀಡಿಯೋ ಹಂಚಿಕೊಂಡಿರುವ ಬಗ್ಗೆ ಸಮೀರ್, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

  • ಧರ್ಮಸ್ಥಳ ಕೇಸ್-‌ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಎಸ್‌ಐಟಿ ಕಸ್ಟಡಿ ನಾಳೆಗೆ ಅಂತ್ಯ

    ಧರ್ಮಸ್ಥಳ ಕೇಸ್-‌ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಎಸ್‌ಐಟಿ ಕಸ್ಟಡಿ ನಾಳೆಗೆ ಅಂತ್ಯ

    * ಕೋರ್ಟ್‌ನಲ್ಲಿ 10-15 ದಿನ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ

    ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿದಂತೆ ಮಾಸ್ಕ್‌ ಮ್ಯಾನ್‌ ಚಿನ್ನಯ್ಯನ (Chinnayya) ಎಸ್‌ಐಟಿ ಕಸ್ಟಡಿ ಬುಧವಾರಕ್ಕೆ ಅಂತ್ಯ ಆಗಲಿದೆ. ನಾಳೆ ಚಿನ್ನಯ್ಯನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು.

    ಚಿನ್ನಯ್ಯ ಕಳೆದ 10 ದಿನಗಳಿಂದ ಎಸ್‌ಐಟಿ ಕಸ್ಟಡಿಯಲ್ಲಿದ್ದ. ನಾಳೆ ಆರೋಪಿಯನ್ನು ಬೆಳ್ತಂಗಡಿ ಕೋರ್ಟಿಗೆ ಹಾಜರುಪಡಿಸಲಾಗುವುದು. ಚಿನ್ನಯ್ಯ ವಾಸವಿದ್ದ ಮಂಡ್ಯ-ತಮಿಳುನಾಡು ಸ್ಥಳ ಮಹಜರು ಬಾಕಿ ಇದೆ. ಹೀಗಾಗಿ, ಮತ್ತೆ 10 ರಿಂದ 15 ದಿನ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಇದನ್ನೂ ಓದಿ: ಧರ್ಮಸ್ಥಳ ಪರ ಬಿಜೆಪಿ `ಧರ್ಮ’ ಸಮರ – ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹ

    ನಿನ್ನೆ ಕೂಡ ಸಂಜೆ 7 ಗಂಟೆ ಬಳಿಕ ಎಸ್‌ಐಟಿ ಸ್ಥಳ ಮಹಜರು ನಡೆಸಿತ್ತು. ಮತ್ತೆ ವಶಕ್ಕೆ ಪಡೆದು ಮಂಡ್ಯ-ತಮಿಳುನಾಡು ಭೇಟಿ ಸಾಧ್ಯತೆ ಇದೆ. ಇವತ್ತು ಚಿನ್ನಯ್ಯನನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಲಿದೆ.

    ಧರ್ಮಸ್ಥಳದ ಭಾಗದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನ ವಿಚಾರಣೆ ನಡೆದಿತ್ತು. ಆತ ತೋರಿಸಿದ ಸ್ಥಳಗಳಲ್ಲಿ ಶವಗಳ ಉತ್ಖನನ ನಡೆದಿತ್ತು. ಎರಡು ಸ್ಥಳಗಳಲ್ಲಿ ಬಿಟ್ಟರೆ, ಇನ್ಯಾವ ಕಡೆಯೂ ಯಾವುದೇ ಕುರುಹು ದೊರೆಯಲಿಲ್ಲ. ಇದಾದ ಬಳಿಕ ಹೆಚ್ಚಿನ ವಿಚಾರಣೆಗೆ ಚಿನ್ನಯ್ಯನನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ

  • ಧರ್ಮಸ್ಥಳ ಪರ ಬಿಜೆಪಿ `ಧರ್ಮ’ ಸಮರ – ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹ

    ಧರ್ಮಸ್ಥಳ ಪರ ಬಿಜೆಪಿ `ಧರ್ಮ’ ಸಮರ – ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹ

    – ಬಿಜೆಪಿ-ಜೆಡಿಎಸ್ `ಧರ್ಮ’ ಯುದ್ಧಕ್ಕೆ `ಕೈ’ ಕೌಂಟರ್ ಯಾತ್ರೆ..?

    ಮಂಗಳೂರು: ಧರ್ಮಸ್ಥಳ (Dharmasthala) ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಪ್ರಕರಣವನ್ನ ಎನ್‌ಐಎ ತನಿಖೆಗೆ (NIA Investigation) ವಹಿಸಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ನಾಯಕರು ಧರ್ಮಸ್ಥಳ ಚಲೋ ನಡೆಸಿದ್ರು. ಸಾವಿರಾರು ಕಾರ್ಯಕರ್ತರು ಕಾರು, ಟಿಟಿ, ಬಸ್‌ಗಳಲ್ಲಿ ಧರ್ಮಸ್ಥಳಕ್ಕೆ ಭೇಟಿ ಕೊಟ್ರು. ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು. ಬಳಿಕ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮಂಜುನಾಥನ ದರ್ಶನ ಪಡೆದ್ರು. ಷಡ್ಯಂತ್ರ ಮಾಡುವವರಿಗೆ ತಕ್ಕ ಶಿಕ್ಷೆ ಆಗ್ಬೇಕು ಅಂತ ಸಂಕಲ್ಪ ಮಾಡಿದ್ರು.

    `ಕೈ’ ವಿರುದ್ಧ ವಿಜಯೇಂದ್ರ, ಅಶೋಕ್ ವಾಗ್ದಾಳಿ..!
    ಧರ್ಮಸ್ಥಳ ಪರ ಬಿಜೆಪಿ ಧರ್ಮ ಸಂಗ್ರಾಮ ಜೋರಾಗಿದೆ. ಶ್ರೀಮಂಜುನಾಥನ ದರ್ಶನ ಪಡೆದ ಬಿಜೆಪಿ ನಾಯಕರು ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಮಾತನಾಡಿ, ದುಷ್ಟಶಕ್ತಿಗಳು ಅಟ್ಟಹಾಸ ಮೆರೆಯುತ್ತಿವೆ. ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಪ್ರಚಾರ ನಡೆಯುತ್ತಿದೆ. ಕೋಟ್ಯಂತರ ಭಕ್ತರು ಅಪಪ್ರಚಾರದಿಂದ ಕಣ್ಣೀರು ಹಾಕ್ತಿದ್ದಾರೆ. ಅಪಪ್ರಚಾರದ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಅಂತ ವಾಗ್ದಾಳಿ ನಡೆಸಿದ್ರು.

    ಇನ್ನು ಆರ್‌. ಅಶೋಕ್ ಮಾತನಾಡಿ, ಮಧ್ಯಂತರ ವರದಿ ಕೊಡಲು ಸರ್ಕಾರ ಹಿಂದೇಟು ಹಾಕಿದೆ. ಇದು ಸರ್ಕಾರದ ವಿಫಲತೆ, ಗುಪ್ತಚರ ಇಲಾಖೆ ವೈಫಲ್ಯ ಎಂದಿದ್ದಾರೆ. ಯಾರೋ ದಾರಿಲಿ ಹೋಗುವನು ಹೇಳಿದ ತಕ್ಷಣ ತನಿಖೆಗೆ ಕೊಟ್ರು ಕಾಂಗ್ರೆಸ್ ನವರಿಗೆ ಧರ್ಮದ ಪರ ಮಾತನಾಡುವ ನೈತಿಕತೆ ಇಲ್ಲ ಅಂತ ವಾಗ್ದಾಳಿ ನಡೆಸಿದ್ರು.

    ವೀರೇಂದ್ರ ಹೆಗ್ಗಡೆ ಭೇಟಿಯಾಗಿ ಮಾತುಕತೆ
    ಧರ್ಮಸ್ಥಳ ವಿರುದ್ಧದ ಅಪಪ್ರಚಾರದ ವಿರುದ್ಧ ಸಿಡಿದೆದ್ದ ಬಿಜೆಪಿ ನಾಯಕರು ಧರ್ಮಸ್ಥಳಕ್ಕೆ ತೆರಳಿ ಬಿಜೆಪಿ ಸಮಾವೇಶ ನಡೆಸ್ತು. ಅದಕ್ಕೂ ಮುನ್ನ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭೇಟಿಯಾಗಿ ಕಾರ್ಯಕ್ರಮದ ಬಗ್ಗೆ ಮಾತುಕತೆ ನಡೆಸಿದ್ರು. ಬಳಿಕ ಧರ್ಮಸ್ಥಳದಲ್ಲಿ ಧರ್ಮ ಜಾಗೃತಿ ಸಮಾವೇಶ ನಡೀತು. ಧರ್ಮಸ್ಥಳ ದೇವಸ್ಥಾನದ ಹೊರವಲಯದಲ್ಲಿರುವ ಮೈದಾನದಲ್ಲಿ ಸಮಾವೇಶ ನಡೆದಿದ್ದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ ಭಾಗಿಯಾಗಿದ್ರು. ಈ ವೇಳೆ ಅಪಪ್ರಾಚಾರಕರ ವಿರುದ್ಧ ವಾಗ್ದಾಳಿ ನಡೆಸಿದ್ರು.

    ಬಿಜೆಪಿ-ಜೆಡಿಎಸ್ `ಧರ್ಮ’ ಯುದ್ಧಕ್ಕೆ `ಕೈ’ ಕೌಂಟರ್ ಯಾತ್ರೆ..?
    ಇನ್ನೂ ಧರ್ಮಸ್ಥಳ ವಿರುದ್ಧ ಬಿಜೆಪಿ-ಜೆಡಿಎಸ್ `ಧರ್ಮ’ ಯುದ್ಧಕ್ಕೆ ಕಾಂಗ್ರೆಸ್ ಕೌಂಟರ್ ಯಾತ್ರೆ ನಡೆಸೋಕೆ ಪ್ಲ್ಯಾನ್‌ ಮಾಡಿಕೊಂಡಿದೆ. ಧರ್ಮಸ್ಥಳದಲ್ಲಿನ ಬೆಳವಣಿಗೆಯನ್ನು ವಿಪಕ್ಷಗಳು ರಾಜಕೀಯವಾಗಿ ಅಸ್ತ್ರ ಮಾಡಿಕೊಂಡಿರುವ ಬಗ್ಗೆ ಚರ್ಚೆ ನಡೆಯುತ್ತಿದ್ದು ಬಿಜೆಪಿ-ಜೆಡಿಎಸ್‌ಗೆ ಕೌಂಟರ್ ಕೊಡಲು ಕಾಂಗ್ರೆಸ್ ಶಾಸಕರು ಡಿಮ್ಯಾಂಡ್ ಮಾಡ್ತಿದ್ದಾರೆ. ಹೀಗಾಗಿ ವಿಪಕ್ಷಗಳ ರಾಜಕೀಯ ಯುದ್ಧಕ್ಕೆ ಕಾಂಗ್ರೆಸ್ ಪ್ರತಿತಂತ್ರ ಹೂಡುತ್ತಾ? ಅನ್ನೋ ಮಾತುಗಳು ಕೇಳಿಬರುತ್ತಿವೆ. ಒಂದ್ವೇಳೆ ವಿಪಕ್ಷಗಳ ವಿರುದ್ಧ ಸಮರ ಸಾರಿದ್ದೇ ಆದ್ರೆ ಕೌಂಟರ್ ಯಾತ್ರೆಯೋ? ಧರ್ಮಸ್ಥಳಕ್ಕೆ ನಿಯೋಗ ಭೇಟಿಯೋ? ಅನ್ನೋದನ್ನು ಮುಂದಿನ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

    `ಕೈ’ ಶಾಸಕರು, ನಾಯಕರ ಒತ್ತಾಯ ಏನು?
    * ಧರ್ಮಸ್ಥಳ ಕೇಸ್‌ನಲ್ಲಿ ಬಿಜೆಪಿ-ಜೆಡಿಎಸ್‌ನಿಂದ ಪೊಲಿಟಿಕಲ್ ಮೈಲೇಜ್
    * ವಿಪಕ್ಷಗಳು ಕಾಂಗ್ರೆಸ್ ಪಕ್ಷವನ್ನು ವಿಲನ್ ರೀತಿ ಬಿಂಬಿಸುತ್ತಿವೆ
    * ಹೀಗೆ ಆದ್ರೆ ಭಕ್ತರ ಕಣ್ಣಲ್ಲಿ ಕಾಂಗ್ರೆಸ್ ಮೇಲೆ ತಪ್ಪು ಭಾವನೆ ಮೂಡುತ್ತೆ
    * ಬಿಜೆಪಿ-ಜೆಡಿಎಸ್ ಯಾತ್ರೆಗೆ ಕಾಂಗ್ರೆಸ್‌ನಿಂದಲೂ ಕೌಂಟರ್ ಯಾತ್ರೆ
    * ಯಾತ್ರೆಗೂ ಮುನ್ನವೇ ಎಸ್‌ಐಟಿ ವರದಿ ಕೊಟ್ಟು ಕೇಸ್ ಅಂತ್ಯ ಮಾಡ್ಬೇಕು
    * ಕಾಂಗ್ರೆಸ್‌ನಿಂದಲೂ ಧರ್ಮಸ್ಥಳ ಚಲೋ ಅಥವಾ ಕ್ಷೇತ್ರ ದರ್ಶನ ಆಗ್ಬೇಕು
    * ಧರ್ಮಸ್ಥಳ ಕೇಸ್‌ನಲ್ಲಿ ವಿಪಕ್ಷಗಳ ಪ್ಲ್ಯಾನ್ ವಿಫಲ ಮಾಡುವುದು.

  • ಧರ್ಮಸ್ಥಳ ಪ್ರಕರಣ RSS vs RSS ನಡುವಿನ ಜಗಳ – ಪ್ರಿಯಾಂಕ್ ಖರ್ಗೆ

    ಧರ್ಮಸ್ಥಳ ಪ್ರಕರಣ RSS vs RSS ನಡುವಿನ ಜಗಳ – ಪ್ರಿಯಾಂಕ್ ಖರ್ಗೆ

    ಬೆಂಗಳೂರು: ಧರ್ಮಸ್ಥಳ ಕೇಸ್ RSS vs RSS ನಡುವಿನ ಜಗಳ ಅಂತ ಬಿಜೆಪಿ ನಾಯಕರ ವಿರುಧ್ಧ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಕಿಡಿಕಾರಿದ್ದಾರೆ. ಬಿಜೆಪಿಯಿಂದ ʻಧರ್ಮಸ್ಥಳ ಚಲೋʼ ಮಾಡ್ತಿರೋ ಬಗ್ಗೆ ವಿಕಾಸಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ತೀವ್ರ ವಾಗ್ದಾಳಿ ನಡೆಸಿದರು.

    ಧರ್ಮಸ್ಥಳ ಕೇಸ್ ನಲ್ಲಿ (Dharmasthala Case) ಬಿಜೆಪಿ ಅವರೇ SIT ಆಗಬೇಕು, ತ‌ನಿಖೆ ಆಗಬೇಕು ಅಂತ ಹೇಳಿದ್ರು. SIT ಆದ ಮೇಲೆ ಇವರು ಯಾವುದೇ ಹೇಳಿಕೆ ಕೊಟ್ಟಿರಲಿಲ್ಲ. ಈಗ ತನಿಖೆ ನಡೆಯೋವಾಗ ಜ್ಞಾನೋದಯ ಆಗಿದೆಯೋ ಅಥವಾ ಯಾರಾದ್ರು ಒತ್ತಡ ಹಾಕಿದ್ದಾರೋ ಗೊತ್ತಿಲ್ಲ, ಒಟ್ನಲ್ಲಿ ಮಾತಾಡ್ತಿದ್ದಾರೆ. ಧಮಸ್ಥಳ ಕೇಸ್ RSS vs RSS ಜಗಳ ಅಂತ ಕಿಡಿಕಾರಿದರು. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ

    ಷಡ್ಯಂತ ಆಗಿದೆ ಅಂತ ಹೇಳ್ತಿರೋದು, ಷಡ್ಯಂತ ಮಾಡಿರೋದು ಯಾರು? ಬಿಜೆಪಿ ಅವರು ತಿಮರೋಡಿ, ಗಿರಿಶ್ ಮಟ್ಟಣ್ಣನವರ್ ಬಗ್ಗೆ ಮಾತಾಡ್ತಿದ್ದಾರೆ. ಇವರೆಲ್ಲ ಯಾರ ಕೂಸುಗಳು? ಯಾರ ಗರಡಿಯಲ್ಲಿ ಬೆಳೆದ ವ್ಯಕ್ತಿಗಳು ಇವರು. ಇವೆರೆಲ್ಲ BJP, RSS ವ್ಯಕ್ತಿಗಳೇ. ಮಟ್ಟಣ್ಣನವರ್ ಬಿಜೆಪಿ ಯುವ ಮೋರ್ಚಾದಲ್ಲಿ ಇದ್ದವರು. ಮರೆತು ಹೋಗಿದೆಯಾ? ಬಿಜೆಪಿ ಸ್ಥಳೀಯ ಮುಖಂಡರಿಗೆ ಇದು ಗೊತ್ತಿದೆ ಅಂತ ಹೇಳ್ತಿದ್ದಾರೆ. ಹೇಳಲಿ ಹಾಗಾದ್ರೆ. ತಿಮರೋಡಿ RSS ವ್ಯಕ್ತಿ, RSSಗೆ ಗೊತ್ತಿಲ್ಲದೇ ಇವೆಲ್ಲಾ ನಡೆಯುತ್ತದೆಯಾ? RSS ಜಗಳವನ್ನ ತನಿಖೆ ತಂದು ಹಚ್ಚೋದು ಸರಿಯಲ್ಲ ಅಂತ ಬಿಜೆಪಿ, RSS ವಿರುದ್ಧ ಕಿಡಿಕಾರಿದರು.

    ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯದ ಬಗ್ಗೆ ಚಲೋ ಮಾಡಿ
    SIT ತನಿಖೆ ಆಗ್ತಿದೆ. ಸತ್ಯ ಹೊರಗೆ ತರುತ್ತೇವೆ ಅಂತ ಸಿಎಂ, ಗೃಹ ಸಚಿವರು ಸದನದಲ್ಲಿ ಹೇಳಿದ್ದಾರೆ. ಸತ್ಯಾಂಶ ಹೊರಗೆ ಬರೋ ಮುನ್ನ ಇವರು ಧರ್ಮಸ್ಥಳ ಚಲೋ, ಚಾಮುಂಡೇಶ್ವರಿ ಚಲೋ ಯಾಕೆ ಮಾಡ್ತೀರಾ? ಬಿಜೆಪಿ ಅವರು ಯಾವತ್ತಾದ್ರು ಒಂದು ಸಾರಿ ದೆಹಲಿ ಚಲೊ ಮಾಡಿ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯದ ಬಗ್ಗೆ ಚಲೋ ಮಾಡಿ. ರಾಜಕೀಯ ಬೇಳೆ ಬೇಯಿಸೋಕೆ ಈ ಧರ್ಮಸ್ಥಳ ಯಾತ್ರೆ ಮಾಡ್ತಿದ್ದಾರೆ ಅಷ್ಟೆ ಅಂತ ಬಿಜೆಪಿ ವಿರುದ್ದ ಪ್ರಿಯಾಂಕ್ ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ನಡೆಯಲಾರದ ನಾಣ್ಯಗಳು ಚಾಲ್ತಿಗೆ ಬರೋಕೆ ದಸರಾ ಬಗ್ಗೆ ಮಾತು – ಪ್ರಿಯಾಂಕ್ ಖರ್ಗೆ

    CBI, NIA ಯಲ್ಲಿ ಕರ್ನಾಟಕ ಕೇಸ್ ಎಷ್ಟು ಇದೆ?
    CBIಗೆ ಕೊಡಿ NIA ಗೆ ಕೊಡಿ ಅಂತಾರೆ CBI, NIA ಯಲ್ಲಿ ಕರ್ನಾಟಕ ಕೇಸ್ ಎಷ್ಟು ಇದೆ ಅಂತ ಬಿಜೆಪಿ ಅವರಿಗೆ ಅರಿವಿದೆಯಾ? CBI ನಲ್ಲಿ 74 ಕೇಸ್ ಕರ್ನಾಟಕದ ಕೇಸ್ ಇವೆ. ಹಲವಾರು ವರ್ಷಗಳಿಂದ ಕೇಸ್ ಇವೆ. ಏನ್ ಮಾಡ್ತಾ ಇದ್ದೀರಪ್ಪಾ? CBI ಅವರು ಇವು ತನಿಖೆ ಮಾಡೋಕೆ ಆಗದೇ ನಮ್ ಸರ್ಕಾರಕ್ಕೆ ಸಿಬ್ಬಂದಿ, ಕಚೇರಿ ಕೊಡಿ ಅಂತ 2024 ರಲ್ಲಿ ಪತ್ರ ಬರೆದಿದ್ದಾರೆ. ನಮ್ ಅಧಿಕಾರಿಗಳನ್ನ ತೆಗೆದುಕೊಂಡು ತನಿಖೆ ಮಾಡೋಕೆ CBI, NIA ಬೇಕಾ? ಅಂತ CBI ನಲ್ಲಿ ಬಾಕಿ ಇರೋ ಕೇಸ್ ಪಟ್ಟಿ ಬಿಡುಗಡೆ ಮಾಡಿ ಬಿಜೆಪಿಗೆ ತಿರುಗೇಟು ಕೊಟ್ರು. ಇದನ್ನೂ ಓದಿ: ವಿಜಯೇಂದ್ರನಿಗೆ ಬೇರೆ ಬಂಡವಾಳವಿಲ್ಲ, ಧರ್ಮಸ್ಥಳ ವಿಚಾರದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸ್ತಿದ್ದಾನೆ – ಎಂ.ಬಿ ಪಾಟೀಲ್

    NIA ಸೂಮೊಟೊ ಕೇಸ್ ಹಾಕಿಕೊಳ್ಳಲಿ
    NIAಗೆ ಕೊಡೋಕೆ ಯಾವ ದೊಡ್ಡ ನ್ಯಾಷನಲ್ ಸೆಕ್ಯುರಿಟಿ ವಿಷಯ ಇದರಲ್ಲಿ. NIAಗೆ ಕೊಡೋದನ್ನ ಸಿಎಂ, ಗೃಹ ಸಚಿವರು ತಿರಸ್ಕಾರ ಮಾಡಿದ್ದಾರೆ. ಅಷ್ಟು ಇದ್ದರೆ ನೀವು ಹೋಗಿ ಅಲ್ಲಿ ಹೋಗಿ ಆಗ್ರಹ ಮಾಡಿ. NIA ಅವರು ಸುಮೋಟೋ ಕೇಸ್ ಹಾಕಿಕೊಳ್ಳಲಿ. ಯಾವುದಕ್ಕೆ ಆದ್ಯತೆ ನೀಡಬೇಕು ಅಂತ ಗೊತ್ತಾಗ್ತಿಲ್ಲ. ಧರ್ಮಸ್ಥಳ ಕೇಸ್ RSS VS RSS ಜಗಳ ಅಷ್ಟೇ. ಇದನ್ನ ರಾಜ್ಯ ಸರ್ಕಾರಕ್ಕೆ ಹಚ್ಚೋ ಹುನ್ನಾರ ನಡೆದಿದೆ. ಧರ್ಮಸ್ಥಳ ಚಲೋ, ಚಾಮುಂಡಿ ಚಲೋ ರಾಜ್ಯಾಧ್ಯಕ್ಷ, ವಿಪಕ್ಷ ಸ್ಥಾನ ಉಳಿಸಿಕೊಳ್ಳೋಕೆ, ಕುರ್ಚಿ ಉಳಿಸಿಕೊಳ್ಳೋದಕ್ಕೆ ಈ ಚಲೋ ಮಾಡ್ತಿರೋದು ಅಂತ ವಾಗ್ದಾಳಿ ನಡೆಸಿದರು. ನಳಿನ್‌ ಕುಮಾರ್‌ ಕಟೀಲ್‌ ಅವರು 2023 ರಲ್ಲಿ ಬಹಿರಂಗವಾಗಿ ಹೇಳ್ತಾರೆ. ಸುನೀಲ್ ಕುಮಾರ್‌ಗೆ ಸೌಜನ್ಯ ಕೇಸ್ ಬಗ್ಗೆ ಎಲ್ಲಾ ಗೊತ್ತಿದೆ. ಅವರನ್ನ ಮಾತಾಡೋಕೆ ಹೇಳಿ ಅಂತ ಅಂತ ಹೇಳಿದ್ರು.

    ಕೇಂದ್ರ ಸರ್ಕಾರದಿಂದ ಸೆಕ್ಯುರಿಟಿ ಕೊಡಿಸ್ತೀವಿ ಅಂತ ಮಾತಾಡಿದ್ರು. ಇದರ ಬಗ್ಗೆ ಮೊದಲು ಬಿಜೆಪಿ ಅವರು ಮಾತಾಡಲಿ. ಮರೆತು ಹೋಗಿದ್ರೆ ಕಟೀಲ್‌ ಅವರು ಬಿಜೆಪಿ ಭಾಷಣ ಕೇಳಿ. ಮೊದಲು ಬಿಜೆಪಿ ಅವರು ಇದಕ್ಕೆ ಉತ್ತರ ಕೊಡಲಿ. ಆಮೇಲೆ ಯಾವ ಚಲೋಬೇಕಾದ್ರೆ ಮಾಡಲಿ ಅವರು ಅಂತ ಸವಾಲ್ ಹಾಕಿದ್ರು. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ; ಎನ್‌ಐಎ ತನಿಖೆಗೆ ಶಾಸಕ ಗೋಪಾಲಯ್ಯ ಒತ್ತಾಯ

  • ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ: ಸಿದ್ದರಾಮಯ್ಯ

    ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ: ಸಿದ್ದರಾಮಯ್ಯ

    – ಉದ್ಘಾಟಕರು ದನ ತಿನ್ನೋದನ್ನ ಬಿಜೆಪಿಯವರು ನೋಡಿದ್ದಾರಾ?
    – ದಸರಾ ಎಲ್ಲಾ ಜಾತಿ ಧರ್ಮಕ್ಕೆ ಸೇರಿದ ಹಬ್ಬ ಎಂದ ಸಿಎಂ

    ಮೈಸೂರು: ಧರ್ಮಾಂಧರು ಮಾತ್ರ ಬಾನು ಮುಷ್ತಾಕ್‌ ಹೆಸರನ್ನ ವಿರೋಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

    ಮೈಸೂರಿನ ವಿಮಾನ ನಿಲ್ದಾಣದಲ್ಲಿ (Mysuru Airport) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಉದ್ಘಾಟಕರಾಗಿ ಬಾನು ಮುಷ್ಕಾಕ್‌ ಅವರ ಆಯ್ಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಕನ್ನಡಾಂಬೆಯ ಬಗ್ಗೆ ಬಾನು ಮುಷ್ತಾಕ್ (Banu Mushtaq) ನೀಡಿರುವ ಹಳೇ ಹೇಳಿಕೆಗು ಇದಕ್ಕೂ ಏನು ಸಂಬಂಧ? ಬಿಜೆಪಿ ಕುಂಟು ನೆಪ ಹುಡುಕುತ್ತಿದ್ದಾರೆ ಅಷ್ಟೇ. ಯಾವತ್ತೋ ಏನೋ ಹೇಳಿದ್ದಾರೆ ಅಂತ ಅದನ್ನ ಇಲ್ಲಿಗೆ ಲಿಂಕ್ ಮಾಡುವುದು ಎಷ್ಟು ಸರಿ? ಧರ್ಮಾಂಧರು ಮಾತ್ರ ಬಾನು ಮುಷ್ತಾಕ್ ಆಯ್ಕೆಯನ್ನ ವಿರೋಧಿಸುತ್ತಾರೆ ಎಂದರು. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನದ ಎಂಜಿನ್‌ನಲ್ಲಿ ಬೆಂಕಿ; ಫ್ಲೈಟ್‌ ದೆಹಲಿಗೆ ವಾಪಸ್‌

    ದನ ತಿನ್ನೋದನ್ನ ಬಿಜೆಪಿಯವರು ನೋಡಿದ್ದಾರಾ?
    ಬೆರಳಣಿಕೆಯ ಮಂದಿಗೆ ಮಾತ್ರ ಬೂಕರ್ ಪ್ರಶಸ್ತಿ ಬಂದಿದೆ. ನಾನೇ ಅವರ ಹೆಸರನ್ನ ಆಯ್ಕೆ ಮಾಡಿದ್ದೇನೆ. ಉದ್ಘಾಟಕರು ದನ ತಿನ್ನುವುದನ್ನ ಬಿಜೆಪಿಯವರು (BJP) ನೋಡಿದ್ದಾರಾ? ಅವರನ್ನ ವಿರೋಧಿಸಲೇಬೇಕೆಂದು ವಿರೋಧ ಮಾಡ್ತಿದ್ದಾರೆ. ದಸರಾ ಒಂದು ಸಾಂಸ್ಕೃತಿಕ ಹಬ್ಬ. ಇದು ಧರ್ಮಾತೀತವಾದ ಹಬ್ಬ. ಇದು ಎಲ್ಲಾ ಜಾತಿ, ಧರ್ಮಕ್ಕೆ ಸೇರಿದ್ದು. ನಿಸಾರ್ ಅಹಮದ್ ಕೂಡ ದಸರಾ ಉದ್ಘಾಟನೆ ಮಾಡಿದ್ದಾರೆ. ಟಿಪ್ಪು ಹೈದಾರಲಿ ಕೂಡ ದಸರಾ ನಡೆಸಿದ್ದಾರೆ. ದಿವಾನ್ ಮಿರ್ಜಾ ಇಸ್ಮಾಯಿಲ್ ಕೂಡ ದಸರಾ ನಡೆಸಿದ್ದಾರೆ. ಇದಕ್ಕೆ ಧರ್ಮದ ಲೇಪನ ಬಳಿಯುವುದು ಸರಿಯಲ್ಲ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಖಂಡಿಸಿ ಜೆಡಿಎಸ್ ಸತ್ಯ ಯಾತ್ರೆ

    ಬಿಜೆಪಿಯವರು ಡೋಂಗಿಗಳು
    ಇದೇ ವೇಳೆ ಧರ್ಮಸ್ಥಳ ತನಿಖಾ (Dharmasthala Investigation) ವಿಚಾರ ಕುರಿತು ಪ್ರತಿಕ್ರಿಯಿಸಿ, ಉನ್ನತಮಟ್ಟದ ತನಿಖೆ ಅಗತ್ಯತೆ ಇಲ್ಲ. ಧರ್ಮಸ್ಥಳದ ಮೇಲೆ ಅನುಮಾನ ತೂಗುಗತ್ತಿ ಇದೆ. ಅದನ್ನು ನಿವಾರಿಸಲು ತನಿಖೆ ಮಾಡುತ್ತಿದ್ದೇವೆ. ಎಸ್‌ಐಟಿ ತನಿಖೆಯನ್ನ ಧರ್ಮಾಧಿಕಾರಿಗಳೇ ಸ್ವಾಗತ ಮಾಡಿದ್ದಾರೆ. ಬಿಜೆಪಿ ಕೂಡ ಸ್ವಾಗತ ಮಾಡಿತ್ತು. ತನಿಖೆ ನಡೆಯುವ ಈ ಹಂತದಲ್ಲಿ ಧರ್ಮದ ರ‍್ಯಾಲಿ ಮಾಡಿದರೆ ಅದರಲ್ಲಿ ಅರ್ಥ ಇದ್ಯಾ? ಬಿಜೆಪಿ ರಾಜಕೀಯಕ್ಕಾಗಿ ಈ ರ‍್ಯಾಲಿ ಮಾಡುತ್ತಿದೆ. ಬಿಜೆಪಿಯವರು ಡೋಂಗಿಗಳು. ಡೋಂಗಿಗಳು ಮಾತ್ರ ತಮಗೆ ಬೇಕಾದಾಗ ಬೇಕಾದ ರೀತಿ ಮಾತನಾಡುತ್ತಾರೆ. ನಾವು ಎಸ್‌ಐಟಿ ತನಿಖೆಯಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ. ಯಾವ ಒತ್ತಡವನ್ನ ಸಹ ನಾವು ತನಿಖೆ ಮೇಲೆ ಹೇರಿಲ್ಲ, ತನಿಖೆಗೆ ಸಮಯ ನಿಗದಿ ಮಾಡಿಲ್ಲ. ಯಾರು ಏನು ಬೇಕಾದರೂ ರ‍್ಯಾಲಿ ಮಾಡಿಕೊಳ್ಳಲಿ. ನಮಗೂ ಅದಕ್ಕೂ ಸಂಬಂಧ ಇಲ್ಲ. ಬಿಜೆಪಿಯವರಿಗೆ ಧರ್ಮವೂ ಗೊತ್ತಿಲ್ಲ, ಜಾತಿಯೂ ಗೊತ್ತಿಲ್ಲ. ಬರೀ ರಾಜಕಾರಣ ಮಾಡುತ್ತಿದ್ದಾರೆ ಎಂದು ನುಡಿದರು.

    ಇದೇ ವೇಳೆ ಆಸ್ತಿ ಮುದ್ರಾಂಕ ಶುಲ್ಕ ಹೆಚ್ಚಳ ವಿಚಾರ ಕುರಿತು ಪ್ರತಿಕ್ರಿಯಿಸಿ, 1% ಮುದ್ರಾಂಕ ಶುಲ್ಕ ಹೆಚ್ಚು ಮಾಡಿದ್ದೇವೆ. ಬೇರೆ ರಾಜ್ಯಗಳಲ್ಲಿ ಈ ತೆರಿಗೆ ಈಗಾಗಲೇ ಇದೆ. ಅದರ ಅನುಸಾರ ಹೆಚ್ಚಳ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಕಿರುತೆರೆ ನಟಿ ಪ್ರಿಯಾ ಮರಾಠೆ ನಿಧನ; 38ನೇ ವಯಸ್ಸಿಗೆ ನಟಿ ದುರಂತ ಅಂತ್ಯ

  • ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ

    ಬುರುಡೆ ಕೇಸ್‌ಗೆ ಬೆಂಗಳೂರು ಲಿಂಕ್ – ಚಿನ್ನಯ್ಯ ನನ್ನ ಮನೆಯಲ್ಲಿದ್ದ, ತಲೆಬುರುಡೆ ತಂದಿದ್ದ; ʻಪಬ್ಲಿಕ್ ಟಿವಿʼಗೆ ಜಯಂತ್ ಸ್ಫೋಟಕ ಹೇಳಿಕೆ

    – 6 ತಿಂಗಳಿಂದ ಷಡ್ಯಂತ್ರ ನಡೆದಿತ್ತು ಅನ್ನೋದೆಲ್ಲ ಸುಳ್ಳು
    – 7-8 ವರ್ಷದಿಂದ ಮಲ್ಲಸಂದ್ರದಲ್ಲಿ ವಾಸವಿರುವ ಜಯಂತ್

    ಬೆಂಗಳೂರು: ಚಿನ್ನಯ್ಯ ತಂದಿದ್ದ ಬುರುಡೆ ಪ್ರಕರಣಕ್ಕೆ ಈಗ ಬೆಂಗಳೂರು (Bengaluru) ನಂಟು ತಳುಕುಹಾಕಿಕೊಂಡಿದೆ. ಧರ್ಮಸ್ಥಳ ವಿರುದ್ಧ ಮಹಾ ಷಡ್ಯಂತ್ರಕ್ಕೆ ಬೆಂಗಳೂರಿನಲ್ಲೇ ಸ್ಕೆಚ್ ನಡೆದಿರೋದು ಬೆಳಕಿಗೆ ಬಂದಿದೆ. ಎಸ್‌ಐಟಿ ವಿಚಾರಣೆ (SIT Investigation) ವೇಳೆ ಚಿನ್ನಯ್ಯ ಜಯಂತ್ ಹೆಸರು ಬಾಯ್ಬಿಟ್ಟಿದ್ದಾನೆ. ಚಿನ್ನಯ್ಯನ (Chinnayya) ಹೇಳಿಕೆ ಆಧರಿಸಿ ಬೆಂಗಳೂರಿನ ಮಲ್ಲಸಂದ್ರದಲ್ಲಿರೋ ಜಯಂತ್‌ ಮನೆ ಮೇಲೆ ದಾಳಿ ನಡೆಸಿ, ಮಹಜರು ನಡೆಸಿದ್ದಾರೆ.

    ಈ ನಡುವೆ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿರುವ ಮಹೇಶ್‌ ಶೆಟ್ಟಿ ತಿಮರೋಡಿ (Mahesh Shetty Thimarody) ಆಪ್ತ ಹಾಗೂ ದೂರುದಾರ ಜಯಂತ್‌, ಚಿನ್ನಯ್ಯ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ನನ್ನ ಬೆಂಗಳೂರಿನ ಮನೆಗೆ ಚಿನ್ನಯ್ಯ ಬಂದಿದ್ದು ನಿಜ. ನಾನು ಅವನಿಗೆ ಆಶ್ರಯ ನೀಡಿದ್ದೆ. ಅವನೇ ಬುರುಡೆ ತಂದಿದ್ದ ಎಂದು ಹೇಳಿದ್ದಾರೆ. ಅಷ್ಟೆ ಅಲ್ಲ ತಪ್ಪಿದ್ದರೆ ನನಗೆ ಶಿಕ್ಷೆ ಆಗಲಿ ಎಂದು ಒತ್ತಾಯಿಸಿದ್ದಾರೆ.

    3ನೇ ಬಾರಿ ಬಂದಾಗ ಬುರುಡೆ ತಂದಿದ್ದ
    ಚಿನ್ನಯ್ಯನನ್ನ ನನ್ನ ಮನೆಯಲ್ಲೇ ಇರಿಸಿ ಊಟ ಹಾಕಿದ್ದೇನೆ. ಕಳೆದ ಏಪ್ರಿಲ್‌ನಲ್ಲಿ ಸ್ಯಾಟಲೈಟ್‌ ಬಸ್‌ ನಿಲ್ದಾಣಕ್ಕೆ ಬಂದಾಗ ಮನೆಗೆ ಕರೆದುಕೊಂಡು ಹೋಗಿದ್ದೆ. 2 ದಿನ ಊಟ ಹಾಕಿದ್ದೆ. ಅದಕ್ಕೆ ಮನೆಗೆ ಬಂದು ಮಹಜರು ಮಾಡಿದ್ದಾರೆ. ಏಸ್‌ಐಟಿಯವರು ಏನು ಬೇಕಾದ್ರೂ ಕೇಳಲಿ, ವಿಚಾರಣೆಗೆ ಸಹಕರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.

    ಮೊದಲು 2 ಬಾರಿ ಬಂದಾಗಲೂ ಬರಿಗೈನಲ್ಲಿ ಬಂದಿದ್ದ. 3ನೇ ಬಾರಿಗೆ ಬಂದಾಗ ಕಟ್ಟುವೊಂದನ್ನ (ಬ್ಯಾಗ್‌) ತಂದಿದ್ದ. ಅದರಲ್ಲಿ ತಲೆಬುರುಡೆ ಇತ್ತು, ಅದನ್ನ ಫೋಟೋ ತೆಗೆದು ಕಳಿಸಿದ್ದ. ನಂತರ ಸುಪ್ರೀಂ ಕೋರ್ಟ್‌ಗೆ ಹೋಗಲು ಸಹಾಯ ಮಾಡಿದ್ದೆ, ಅವನೊಂದಿಗೆ ನಾನೂ ಹೋಗಿದ್ದೆ. ಆಗ ನಾನು ಹಾಗೂ ಅವನು ಬುರುಡೆ ತೆಗೆದುಕೊಂಡು ಹೋಗಿದ್ದೇವೆ. ಆದ್ರೆ ಯಾವುದೇ ಕಾರಣಕ್ಕೂ ನಾನು ಷಡ್ಯಂತ್ರದಲ್ಲಿ ಭಾಗಿಯಾಗಿಲ್ಲ. ಬೇಕಿದ್ದರೆ ನನ್ನ ಹೆಂಡತಿ ಮಕ್ಕಳನ್ನು ಕೇಳಲಿ. ಸತ್ಯಕ್ಕಾಹಿ ನಾನು ಈ ಸಹಾಯ ಮಾಡಿದ್ದೇನೆ. ಷಡ್ಯಂತ್ರದಲ್ಲಿ ಮಾಡಿದ್ದೇವೆ, 6 ತಿಂಗಳಿಂದ ಪ್ಲ್ಯಾನ್‌ ನಡೆದಿತ್ತು ಅನ್ನೋದೆಲ್ಲ ಸುಳ್ಳು. ಇದು ಇಷ್ಟು ದೊಡ್ಡದಾಗುತ್ತೆ ಅಂದುಕೊಂಡಿರಲಿಲ್ಲ. ನಾನು ಸತ್ಯಕ್ಕಾಗಿ ಮಾಡಿದ ಕೆಲಸ. ಎಸ್‌ಐಟಿ ಯಾವುದೇ ವಿಚಾರಣೆ ನಾನು ಸಿದ್ಧ, ತಪ್ಪು ಮಾಡಿದ್ದರೆ, ಯಾವುದೇ ಶಿಕ್ಷೆಗೂ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

    7-8 ವರ್ಷದಿಂದ ಮಲ್ಲಸಂದ್ರದಲ್ಲಿ ಜಯಂತ್ ವಾಸ
    ಜಯಂತ್ ಕಳೆದ 7-8 ವರ್ಷದಿಂದ ಇಬ್ಬರು ಮಕ್ಕಳು, ಹೆಂಡತಿಯೊಂದಿಗೆ ಮಲ್ಲಸಂದ್ರದಲ್ಲಿ ವಾಸವಾಗಿದ್ದಾರೆ. ಐದಾರು ವರ್ಷಗಳಿಂದ ಮಲ್ಲಸಂದ್ರ ರಸ್ತೆಯಲ್ಲಿ ನಿಸರ್ಗ ನಿಧಿ ಕೊಬ್ಬರಿ ಎಣ್ಣೆ ಅಂಗಡಿ ನಡೆಸುತ್ತಿದ್ದಾರಂತೆ. ಇನ್ನು ಸ್ಥಳೀಯರು ಹೇಳುವ ಪ್ರಕಾರ, ಸ್ಥಳೀಯ ವಾಟ್ಸಪ್ ಗ್ರೂಪ್‌ಗಳಲ್ಲಿ ಧರ್ಮಸ್ಥಳ ವಿರುದ್ಧ ಕೆಲ ಪೋಸ್ಟ್ ಮಾಡ್ತಿದ್ರು. ಪ್ರಶ್ನೆ ಮಾಡಿದ್ದಕ್ಕೆ ನಂತರ ಪೋಸ್ಟ್‌ ಹಾಕೋದನ್ನು ಜಯಂತ್ ಬಿಟ್ಟಿದ್ರು. ಆಮೇಲೆ ಸ್ವಲ್ಪ ದಿನ ಜಯಂತ್ ಅವರು ನಮಗೆ ಕಾಣಲಿಲ್ಲ. ಬುರುಡೆ ಕೇಸಲ್ಲಿ ಜಯಂತ್ ಹೆಸರು ಕೇಳಿ ನಮಗೆ ಆಶ್ಚರ್ಯವಾಗಿದೆ ಅಂತಿದ್ದಾರೆ.

    ಎಸ್‌ಐಟಿ ನೂರಾರು ಪ್ರಶ್ನೆ; ಚಿನ್ನಯ್ಯ ತಬ್ಬಿಬ್ಬು
    ಬುರುಡೆ ಪ್ರಕರಣದ ಷಡ್ಯಂತ್ರ ಭೇದಿಸಲು ಸಂಬಂಧ ಎಸ್‌ಐಟಿ ಟೀಂ ಚಿನ್ನಯ್ಯನಿಂದ ಚಿನ್ನಯ್ಯನ ಬಾಯಿಂದ ಸತ್ಯ ಕಕ್ಕಿಸುತ್ತಿದ್ದಾರೆ. ಎಸ್‌ಐಟಿ ಪ್ರಶ್ನೆಗಳಿಂದ ಚಿನ್ನಯ್ಯ ದಂಗಾಗಿ ಹೋಗಿದ್ದಾನೆ. ಪ್ರಶ್ನೋತ್ತರ ಹೇಗಿತ್ತು ಅಂತ ನೋಡೋದಾದ್ರೆ..

    ಎಸ್‌ಐಟಿ – ಚಿನ್ನಯ್ಯ ಪ್ರಶ್ನೋತ್ತರ ಹೀಗಿತ್ತು….
    * ಎಸ್‌ಐಟಿ: ಧರ್ಮಸ್ಥಳ ಕ್ಷೇತ್ರದಲ್ಲಿ ಎಷ್ಟು ವರ್ಷ ಕೆಲಸ ಮಾಡಿದ್ರಿ..?
    ಚಿನ್ನಯ್ಯ: ಸುಮಾರು ಇಪ್ಪತ್ತು ವರ್ಷ
    * ಎಸ್‌ಐಟಿ: ಮೃತ ದೇಹಗಳನ್ನು ಹೂತಿದ್ದು ಹೌದಾ?
    ಚಿನ್ನಯ್ಯ: ನಾನು ಬಹಳ ಮೃತ ದೇಹಗಳನ್ನು ಹೂತ್ತಿದ್ದೇನೆ
    * ಎಸ್‌ಐಟಿ: ಎಷ್ಟು ಎಂಬ ಲೆಕ್ಕ ಇದೆಯಾ?
    ಚಿನ್ನಯ್ಯ: ಸರಿಯಾದ ಲೆಕ್ಕ ಇಲ್ಲ
    * ಎಸ್‌ಐಟಿ: ನೂರಾರು.. ಮುನ್ನೂರು ಎಂದು ಹೇಗೆ ಹೇಳಿದೆ..?
    ಚಿನ್ನಯ್ಯ: ಒಂದು ಅಂದಾಜಿನಲ್ಲಿ ಲೆಕ್ಕ ಹೇಳಿದೆ
    * ಎಸ್‌ಐಟಿ: ಅಂತ್ಯಕ್ರಿಯೆ ಸ್ಥಳಕ್ಕೆ ವೈದ್ಯರು, ಪೊಲೀಸರು ಬರುತ್ತಿದ್ದರಾ..?
    ಚಿನ್ನಯ್ಯ: ವೈದ್ಯರು, ಪೊಲೀಸರು, ಪಂಚಾಯತ್, ಗ್ರಾಮಸ್ಥರು ಬರುತ್ತಿದ್ದರು
    * ಎಸ್‌ಐಟಿ: ನೂರಾರು ಅತ್ಯಾಚಾರ ಎಂಬ ದೂರು ಇದ್ಯಲ್ಲ
    ಚಿನ್ನಯ್ಯ: ಅದೆಲ್ಲ ಗೊತ್ತಿಲ್ಲ ಸ್ವಾಮಿ, ನನಗೆ ಓದು-ಬರಹ ಬರಲ್ಲ
    * ಎಸ್‌ಐಟಿ: ಕ್ಷೇತ್ರದ ವಿರುದ್ಧ ಷಡ್ಯಂತ್ರ ನಡೆದಿದೆ ನಿನಗೆ ಗೊತ್ತಾ?
    ಚಿನ್ನಯ್ಯ: ನನಗೆ ಪಿತೂರಿಗಳ ಬಗ್ಗೆ ನನಗೆ ಮಾಹಿತಿ ಇಲ್ಲ, ನಾನು ಯಾರ ವಿರುದ್ಧವಲ್ಲ.. ಯಾರ ಪರವೂ ಅಲ್ಲ
    * ಎಸ್‌ಐಟಿ: ನೀನು ಪ್ರಕರಣದಲ್ಲಿ ಆರೋಪಿ ಎಂಬ ಮಾಹಿತಿ ಇದ್ಯಾ..?
    ಚಿನ್ನಯ್ಯ: ನನಗೆ ತಿಳಿದಿರುವುದನ್ನು ಹೇಳಿದ್ದೇನೆ ದಯವಿಟ್ಟು ಬಿಟ್ಟು ಬಿಡಿ

    ಇನ್ನು ಬುರುಡೆ ಗ್ಯಾಂಗ್ ನಂಟಿನ ಬಗ್ಗೆಯೂ ಎಸ್‌ಐಟಿ ಪ್ರಶ್ನಾವಳಿ ಇಟ್ಟಿದ್ದು, ತನಿಖಾಧಿಕಾರಿಗಳ ಮುಂದೆ ಸತ್ಯ ಕಕ್ಕಿದ್ದಾನೆ.
    `ಬುರುಡೆ’ ಚಿನ್ನಯ್ಯಗೆ ಗ್ರಿಲ್

    * ಎಸ್‌ಐಟಿ: ಮಹೇಶ್ ತಿಮರೋಡಿ ಮಟ್ಟಣ್ಣ ಗೊತ್ತಾ..?
    ಚಿನ್ನಯ್ಯ: ಗೊತ್ತು ಸರ್..
    * ಎಸ್‌ಐಟಿ: ಯಾವಾಗಿನಿಂದ ಪರಿಚಯ ಇದೆ..?
    ಚಿನ್ನಯ್ಯ: ಒಂದೂವರೆ-ಎರಡು ವರ್ಷದಿಂದ ಗೊತ್ತು
    * ಎಸ್‌ಐಟಿ: ನಿನಗೆ ಹಣ ಕೊಟ್ಟು ಕರೆಸಿದ್ದಾರಾ?
    ಚಿನ್ನಯ್ಯ: ನಾನು ಆಗಾಗ ಖರ್ಚಿಗೆ ಹಣ ತೆಗೆದುಕೊಳ್ಳುತ್ತಿದ್ದೆ, ಲೆಕ್ಕ ಇಲ್ಲ
    * ಎಸ್‌ಐಟಿ: ಎಲ್ಲೆಲ್ಲಿ ಭೇಟಿಯಾಗಿದ್ದೀರಿ..?
    ಚಿನ್ನಯ್ಯ: ಉಜಿರೆ, ಮಂಗಳೂರು ಕೇರಳ, ತಮಿಳುನಾಡು
    * ಎಸ್‌ಐಟಿ: ತಿಮರೋಡಿ ಮನೆಯಲ್ಲಿ ಏನೆಲ್ಲ ಚರ್ಚೆ ನಡೆಯುತ್ತಿತ್ತು..?
    ಚಿನ್ನಯ್ಯ: ಕ್ಷೇತ್ರದಲ್ಲಿ ಏನೆಲ್ಲ ಕೆಲಸ ಮಾಡುತ್ತಿದ್ದೆ ಎಂಬುದನ್ನು ಹೇಳುತ್ತಿದ್ದೆ, ಬಹಳ ಜನ ಬಂದು ವಿಡಿಯೋ ಮಾಡುತ್ತಿದ್ದರು
    * ಎಸ್‌ಐಟಿ: ಹೀಗೆ ಹೇಳಬೇಕು ಎಂಬ ತಾಕೀತು ಏನಾದರೂ ಇತ್ತಾ..?
    ಚಿನ್ನಯ್ಯ: ಕೆಲ ವಿಚಾರವನ್ನು ಅಲ್ಲಿ ಇದ್ದವರು ಹೇಳಿಕೊಡುತ್ತಿದ್ದರು, ನಾನು ಅವರು ಹೇಳಿದಂತೆ ಹೇಳುತ್ತಿದ್ದೆ.

    500 ಪುಟಗಳ ವಿವರ ನೀಡಿದ ಮಟ್ಟಣ್ಣನವರ್
    ಇತ್ತ ಸುಳ್ಳುಕೋರ ಸಮೀರ್, ದಾಖಲೆ ಹಿಡಿದುಕೊಂಡು ಬೆಳ್ತಂಗಡಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ. ಇತ್ತ ಗಿರೀಶ್ ಮಟ್ಟಣ್ಣನವರ್, ಎಸ್‌ಐಟಿಗೆ 500 ಪುಟಗಳ ವಿವರವಾದ ಮಾಹಿತಿ ಒಳಗೊಂಡ ದಾಖಲೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ಕೆಲವು ಅಸಹಜ ಸವುಗಳ ಸರಿಯಾದ ತನಿಖೆ ನಡೆದಿಲ್ಲ. ಆ ಸಾವುಗಳ ತನಿಖೆ ನಡೆಸಿ ಎಂದು ಗಿರೀಶ್ ಮಟ್ಟಣ್ಣ ಎಸ್‌ಐಟಿಗೆ ಮನವಿ ಮಾಡಿದ್ದಾರೆ.

  • ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT

    ಧರ್ಮಸ್ಥಳ ಬುರುಡೆ ಕೇಸ್‌ಗೆ ಬೆಂಗಳೂರಿನ ನಂಟು – ತಿಮರೋಡಿ ಆಪ್ತ ಜಯಂತ್ ಮನೆ ಜಾಲಾಡಿದ SIT

    – ಜಯಂತ್ ಮನೆಯಲ್ಲೇ 8 ದಿನಗಳ ಕಾಲ ಹೆಣೆಯಲಾಗಿತ್ತಾ ಷಡ್ಯಂತ್ರದ ಬಲೆ?

    ಮಂಗಳೂರು: ಬುರುಡೆ ಪ್ರಕರಣದಲ್ಲಿ (Dharmasthala Case) ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದ್ದು, ಈಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬುರುಡೆ ಪ್ರಕರಣದಲ್ಲಿ ರಾಜಧಾನಿ ಬೆಂಗಳೂರಿನ (Bengaluru) ನಂಟು ಬೆಸೆದುಕೊಂಡಿದೆ. ಧರ್ಮಸ್ಥಳ ಷಡ್ಯಂತ್ರಕ್ಕೆ ಬೆಂಗಳೂರಿನಲ್ಲೇ ಸ್ಕೆಚ್ ನಡೆದಿರೋದು ಬೆಳಕಿಗೆ ಬಂದಿದೆ.

    ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಆರೋಪ ಪ್ರಕರಣ ಸಂಬಂಧ ಎಸ್‌ಐಟಿ ಅಧಿಕಾರಿಗಳು (SIT Officers) ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಬೆಳ್ತಂಗಡಿಯಿಂದ ಬೆಂಗಳೂರಿಗೆ ಕರೆತಂದಿದ್ದಾರೆ. ಬೆಳ್ಳಂಬೆಳಗ್ಗೆ ಚಿನ್ನಯ್ಯನನ್ನು ಮಹಜರು ಟ್ರಾವೆಲ್‌ಗೆ ಎಸ್‌ಐಟಿ ಅಧಿಕಾರಿಗಳು ಕರೆದುಕೊಂಡು ಬಂದಿದ್ದಾರೆ. ಚಿನ್ನಯ್ಯ ಹೇಳಿಕೆಯಲ್ಲಿ ತಿಳಿಸಿರುವ ಕೆಲವು ಸ್ಥಳಗಳ ಮಹಜರಿಗೆ ಕರೆತರಲಾಗಿದೆ. ಆದರೆ ಆರಂಭದಲ್ಲಿ ತಮಿಳುನಾಡು, ಮಂಡ್ಯ ಕಡೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೀಗ ಪ್ರಕರಣದಲ್ಲಿ ಅತಿದೊಡ್ಡ ರಹಸ್ಯ ರಿವೀಲ್ ಆಗಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್

    ಬೆಂಗಳೂರು ಲಿಂಕ್‌
    ಧರ್ಮಸ್ಥಳ ಬರುಡೆ ಪ್ರಕರಣಕ್ಕೆ ಬೆಂಗಳೂರು ಲಿಂಕ್ ಇರೋದು ಬೆಳಕಿಗೆ ಬಂದಿದೆ. ಧರ್ಮಸ್ಥಳದ ಷಡ್ಯಂತ್ರದ ಸ್ಕೆಚ್ ಬೆಂಗಳೂರಿನಲ್ಲೇ ನಡಿದಿದ್ದು, ತಿಮರೋಡಿ ಆಪ್ತ ಜಯಂತ್ (Jayanth) ಬುರುಡೆ ಷಡ್ಯಂತ್ರದ ಸೂತ್ರಧಾರಿಯಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ತಿಮರೋಡಿ ಆಪ್ತ ಜಯಂತ್, ಚಿನ್ನಯ್ಯನಿಗೆ ತಲೆಬುರುಡೆ ಕೊಟ್ಟಿದ್ನಾ ಅನ್ನೋ ಅನುಮಾನ ಮೂಡಿದ್ದು, ವಿಚಾರಣೆ ವೇಳೆ ಚಿನ್ನಯ್ಯ ಜಯಂತ್ ಹೆಸರು ಬಾಯ್ಬಿಟ್ಟಿದ್ದಾನೆ. ಷಡ್ಯಂತ್ರದ ಪ್ರಮುಖ ಪಾತ್ರಧಾರಿಯೇ ಜಯಂತ್ ಎನ್ನಲಾಗ್ತಿದ್ದು, ಚಿನ್ನಯ್ಯನ ಹೇಳಿಕೆ ಆಧಾರದ ಮೇಲೆ ಬೆಂಗಳೂರಿನ ಮಲ್ಲಸಂದ್ರದಲ್ಲಿರುವ ಮನೆ ಮೇಲೆ ಎಸ್‌ಐಟಿ ರೇಡ್ ಮಾಡಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಎಸ್‌ಐಟಿಗೆ 500 ಪುಟಗಳ ದಾಖಲೆ ನೀಡಿದ ಗಿರೀಶ್ ಮಟ್ಟಣ್ಣನವರ್

    ಚಿನ್ನಯ್ಯ ಸಮ್ಮುಖದಲ್ಲಿ ಮಲ್ಲಸಂದ್ರದಲ್ಲಿರುವ ಜಯಂತ್ ಮನೆಯಲ್ಲಿ ಮಹಜರ್ ನಡೆದಿದ್ದು, ಎಸ್‌ಐಟಿ ಇಂಚಿಂಚೂ ಶೋಧ ನಡೆಸಿದೆ. ಬಾಡಿಗೆ ಮನೆ ಹೊಂದಿರುವ ಜಯಂತ್, ಪಿತೂರಿ ಸಾಧಕರ ಕೂಟದ ಸಭೆ ನಡೆಸಿದ್ದರು ಅನ್ನೋ ಅನುಮಾನ ಇದೆ. ಇಲ್ಲೇ ಬುರುಡೆ ಗ್ಯಾಂಗ್ ಧರ್ಮಸ್ಥಳ ವಿರುದ್ಧ ಷಡ್ಯಂತ್ರದ ಮಸಲತ್ತು ಹೆಣೆಯಲಾಗಿತ್ತಾ ಅನ್ನೋ ಶಂಕೆ ಇದ್ದು, ಮಸಲತ್ತಿನ ಸಭೆಯಲ್ಲಿ ಚಿನ್ನಯ್ಯ ಭಾಗಿಯಾಗಿದ್ದ ಅನ್ನೋ ಆಧಾರದಲ್ಲಿ ಸಾಕ್ಷಿಗಾಗಿ ಎಸ್‌ಐಟಿ ತಲಾಶ್ ನಡೆಸಿದೆ. ಕ್ರೈಂ ಸೀನ್ ಮರು ಸೃಷ್ಟಿಸಿ ಮನೆಯ ಮುಂಬಾಗಿಲಿನಿಂದಲೇ ಎಸ್‌ಐಟಿ ಮಹಜರು ನಡೆಸಿದೆ. ಇದನ್ನೂ ಓದಿ: SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!

    8 ದಿನಗಳ ಕಾಲ ನಡೆದಿತ್ತಾ ಮಹಾ ಪ್ಲ್ಯಾನ್‌
    ಮಂಗಳೂರಿಗೆ ಭೇಟಿ ಕೊಡುವ ಮುನ್ನ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಹೆಣೆಯಲಾಗಿದೆ ಎನ್ನುವ ಅನುಮಾನ ಇದೆ. ಜಯಂತ್ ಮನೆಯಲ್ಲಿಯೇ ಕುಳಿತು ನಿರಂತರ ಪ್ಲ್ಯಾನ್ ಮಾಡಿದ್ದು, ಜಡ್ಜ್ ಮುಂದೆ ಹೇಳಿಕೆ ನೀಡಲು ಸ್ಕ್ರಿಪ್ಟ್ ನೀಡಲಾಗಿತ್ತಾ ಅನ್ನೊ ಶಂಕೆಯೂ ವ್ಯಕ್ತವಾಗಿದೆ. ಮಲ್ಲಸಂದ್ರದಲ್ಲಿರುವ ಜಯಂತ್ ಬಾಡಿಗೆ ಮನೆಯಲ್ಲಿ ಚಿನ್ನಯ್ಯ ಕಳೆದ ಏಪ್ರಿಲ್‌ನಲ್ಲಿ 8 ದಿನಗಳ ಕಾಲ ಇದ್ದ. ಇದೇ ವೇಳೆ ಬುರುಡೆ ಷಡ್ಯಂತ್ರ ಹೆಣೆಯಲಾಗಿದೆ ಎನ್ನಲಾಗ್ತಿದೆ.

    ಸುಜಾತ ಭಟ್‌ರನ್ನು ವಶಕ್ಕೆ ಪಡೆಯೋದು ಅನುಮಾನ
    ಈ ನಡುವೆ ಸುಜಾತಾ ಭಟ್‌ಗೆ ಎಸ್‌ಐಟಿಯಿಂದ ಬಿಗ್ ರಿಲೀಫ್ ಸಿಕ್ಕಿದೆ. ಸುಜಾತ ಭಟ್‌ರನ್ನು ಎಸ್‌ಐಟಿ ವಶಕ್ಕೆ ಪಡೆಯೋದು ಅನುಮಾನ ಎನ್ನಲಾಗಿದೆ. ವಯಸ್ಸು ಹಾಗೂ ಅನಾರೋಗ್ಯದ ಕಾರಣ ವಶಕ್ಕೆ ಪಡೆಯದಿರಲು ತೀರ್ಮಾನಿಸಲಾಗಿದೆ. ಸುಜಾತ ಭಟ್ ಮೇಲೆ ಇರುವುದು ತಪ್ಪು ಮಾಹಿತಿ ನೀಡಿದ ಆರೋಪ. ತಪ್ಪು ಮಾಹಿತಿಯಲ್ಲೂ ತಮ್ಮದೇ ಕಥೆ ಹೇಳಿಕೊಂಡಿದ್ದಾರೆಯೇ ಹೊರತು ನೇರವಾಗಿ, ನಿರ್ದಿಷ್ಟವಾಗಿ ಯಾರ ಮೇಲೂ ಆರೋಪ ಮಾಡುತ್ತಿಲ್ಲ. ತಮ್ಮ ಸಮಸ್ಯೆಯನ್ನು ಯಾರು ಕೇಳಿಸಿಕೊಳ್ಳದಿದ್ದಾಗ ಮಗಳ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆಗ ಸುಜಾತ ಭಟ್‌ರನ್ನ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳಲು ಬುರುಡೆ ಗ್ಯಾಂಗ್ ಮುಂದಾಗಿದೆ. ಅಲ್ಲದೇ ವಿಚಾರಣೆ ಸಂದರ್ಭದಲ್ಲಿ ಧರ್ಮಸ್ಥಳಕ್ಕೆ ಇವರ ಕುಟುಂಬದ ಆಸ್ತಿ ಸೇರಿರುವುದು ಗೊತ್ತಾಗಿದೆ. ಅದರ ಲೆಕ್ಕದಲ್ಲಿ ಈಗ ನನಗೆ ಹಣ ಸಿಕ್ಕರೆ ನನ್ನ ಜೀವನ ನಿರ್ವಾಹಣೆಗೆ ಸಹಾಯ ಆಗುತ್ತದೆ ಎಂದು ಕಣ್ಣೀರಿಟ್ಟಿದ್ದಾರೆ. ತೀರ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಬಹುದಾದ ಪ್ರಕರಣ ಅಲ್ಲ ಎಂಬ ಕಾರಣಕ್ಕೆ ಸಧ್ಯಕ್ಕೆ ವಶಕ್ಕೆ ಪಡೆಯುವ ಅಥವ ಬಂಧನ ಮಾಡದಿರಲು ಎಸ್‌ಐಟಿ ತೀರ್ಮಾನಿಸಿದೆ.

  • ಧರ್ಮಸ್ಥಳ ಕೇಸ್; ಎಸ್‌ಐಟಿಗೆ 500 ಪುಟಗಳ ದಾಖಲೆ ನೀಡಿದ ಗಿರೀಶ್ ಮಟ್ಟಣ್ಣನವರ್

    ಧರ್ಮಸ್ಥಳ ಕೇಸ್; ಎಸ್‌ಐಟಿಗೆ 500 ಪುಟಗಳ ದಾಖಲೆ ನೀಡಿದ ಗಿರೀಶ್ ಮಟ್ಟಣ್ಣನವರ್

    * 35 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ಆಗಿರುವ ಅಸಹಜ ಸಾವುಗಳ ದಾಖಲೆ ಸಲ್ಲಿಕೆ

    ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿದಂತೆ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಇದೀಗ, ಎಸ್‌ಐಟಿಗೆ 500 ಪುಟುಗಳ ದಾಖಲೆಯನ್ನು ಗಿರೀಶ್ ಮಟ್ಟಣ್ಣನವರ್ ನೀಡಿದ್ದಾರೆ.

    ಧರ್ಮಸ್ಥಳದಲ್ಲಿ ಕೆಲವು ಅಸಹಜ ಸಾವುಗಳ ಸರಿಯಾದ ತನಿಖೆ ನಡೆದಿಲ್ಲ. ಆ ಸಾವುಗಳ ತನಿಖೆ ನಡೆಸಿ ಎಂದು ಗಿರೀಶ್ ಮಟ್ಟಣ್ಣನವರ್, ಎಸ್‌ಐಟಿ (SIT) ಮುಂದೆ ಮನವಿ ಮಾಡಿದ್ದಾರೆ. ಕಳೆದ 35 ವರ್ಷಗಳಲ್ಲಿ ಧರ್ಮಸ್ಥಳದಲ್ಲಿ ಆಗಿರುವ ಅಸಹಜ ಸಾವುಗಳ ವಿವರವಾದ ದಾಖಲೆ ನೀಡಿದ್ದಾರೆ. ಇದನ್ನೂ ಓದಿ: SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!

    ಈ ಸಾವುಗಳಲ್ಲಿ ಬಹುತೇಕ ಸಾವುಗಳ ತನಿಖೆಯೇ ನಡೆದಿಲ್ಲ. ಧರ್ಮಸ್ಥಳ ಪೊಲೀಸರು ಈ ತನಿಖೆ ನಡೆಸಲು ವಿಫಲರಾಗಿದ್ದಾರೆ. ತನಿಖೆ ನಡೆಸದಿರಲು ಏನು ಕಾರಣ ಎಂಬುದರ ಬಗ್ಗೆ ನಮಗೆ ಅನುಮಾನವಿದೆ ಎಂದು ಎಸ್‌ಐಟಿಗೆ ಕೊಟ್ಟ ದಾಖಲೆಯಲ್ಲಿ ಉಲ್ಲೇಖಿಸಿದ್ದಾರೆ.

    ಗಿರೀಶ್ ಮಟ್ಟಣ್ಣನವರ್ ಅವರಿಂದ ಧರ್ಮಸ್ಥಳ ಪಂಚಾಯಿತಿ ದಾಖಲೆ ಫೋರ್ಜರಿ ದಾಖಲೆ ಬಿಡುಗಡೆ ಹಿನ್ನೆಲೆ, ಎಸ್‌ಐಟಿಯಿಂದ ಧರ್ಮಸ್ಥಳ ಪಂಚಾಯಿತಿ ಅಧಿಕಾರಿಗಳಿಗೆ ಬುಲಾವ್ ನೀಡಲಾಗಿದೆ. ಪರಿಣಾಮವಾಗಿ ಧರ್ಮಸ್ಥಳ ಗ್ರಾಪಂ ಅಧಿಕಾರಿ, ಸಿಬ್ಬಂದಿಯು ಎಸ್‌ಐಟಿ ಕಚೇರಿಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳು ಎಂತಹ ಹೋರಾಟಕ್ಕೂ ತಯಾರಿದ್ದಾರೆ, ಆದ್ರೆ ಅಗತ್ಯವಿಲ್ಲ – ಡಿ.ವೀರೇಂದ್ರ ಹೆಗ್ಗಡೆ

    ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒ, ಪಂಚಾಯತ್ ಅಧಿಕಾರಿಗಳಿಗೆ ವಿಚಾರಣೆಗೆ ಹಾಜರಾಗಲು ಎಸ್‌ಐಟಿ ಸೂಚಿಸಿತ್ತು. ದಾಖಲೆ ತೆಗೆದುಕೊಂಡು ಬಂದಿದ್ದಾರೆ. ಮಟ್ಟಣ್ಣನವರ್ ದಾಖಲೆ ಜೊತೆ ಪಂಚಾಯತ್ ದಾಖಲೆಗಳ ಸಾಮ್ಯತೆ ಪರಿಶೀಲನೆ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ.

  • SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!

    SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!

    – ತನಿಖಾಧಿಕಾರಿಗಳಿಗೆ ತಲೆನೋವಾದ ಸುಜಾತಾ ಭಟ್
    – ಮಟ್ಟಣ್ಣನವರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

    ಮಂಗಳೂರು: ಧರ್ಮಸ್ಥಳ ಕೇಸ್‌ನ *(Dharmasthala Case) ಬುರುಡೆ ಗ್ಯಾಂಗ್‌ನ ಷಡ್ಯಂತ್ರ ಬಯಲಾದ ಬಳಿಕ ಎಸ್‌ಐಟಿ ತನಿಖೆ ಮುಂದುವರಿಸಿದೆ. ಕಳೆದ 4 ದಿನಗಳಿಂದ ತಲೆಮರೆಸಿಕೊಂಡಿದ್ದ ಬುರುಡೆ ಗ್ಯಾಂಗ್ ಲೀಡರ್ ಮಹೇಶ್ ಶೆಟ್ಟಿ ತಿಮರೋಡಿ ಇವತ್ತು ಪ್ರತ್ಯಕ್ಷರಾಗಿದ್ದಾರೆ.

    ಕಳೆದ ಮಂಗಳವಾರ ಮಹೇಶ್ ತಿಮರೋಡಿ ಮನೆಗೆ ಚಿನ್ನಯ್ಯನನ್ನ ಕರೆದುಕೊಂಡು ಬಂದು ಶೋಧ ನಡೆಸಲಾಗಿತ್ತು. ಉಜಿರೆ ಮನೆಯಲ್ಲಿ ಮುಸುಕುಧಾರಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟಿದ್ದ ವಿಚಾರದಲ್ಲಿ ಬೆಳ್ತಂಗಡಿ ಪೊಲೀಸರು (Belthangady Police) ಸ್ಥಳ ಮಹಜರಿಗೆ ಬರೋದು ಗೊತ್ತಾಗ್ತಿದ್ದಂತೆ ತಿಮರೋಡಿ ತಮ್ಮ ಮನೆಯಿಂದ ಜಾಗ ಖಾಲಿ ಮಾಡಿದ್ದರು. ಆವತ್ತು ಎಸ್ಕೇಪ್ ಆದವ್ರು ಇವತ್ತು ಸೀದಾ ಬೆಳ್ತಂಗಡಿ ಪೊಲೀಸ್ ಠಾಣೆ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಬ್ರಹ್ಮಾವರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಪ್ರಕರಣದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ. ಬಳಿಕ ಅಲ್ಲಿಂದ ಎಸ್‌ಐಟಿ (SIT) ಕಚೇರಿಗೂ ತೆರಳಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳು ಎಂತಹ ಹೋರಾಟಕ್ಕೂ ತಯಾರಿದ್ದಾರೆ, ಆದ್ರೆ ಅಗತ್ಯವಿಲ್ಲ – ಡಿ.ವೀರೇಂದ್ರ ಹೆಗ್ಗಡೆ

    ಅಂದ್ಹಾಗೆ ಈ ಹಿಂದೆ ಚಿನ್ನಯ್ಯ ವಿಚಾರಣೆಗೆ ಬರುತ್ತಿದ್ದ ಕಾರಿನಲ್ಲೇ ತಿಮರೋಡಿ ಬಂದಿದ್ದಾರೆ. ಅಲ್ಲದೇ ಇವತ್ತು ಗಿರೀಶ್ ಮಟ್ಟಣ್ಣನವರ್ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ. ತನಿಖೆಗೆ ಪೂರಕವಾದ ದಾಖಲೆ ನೀಡಲು ಅವಕಾಶ ನೀಡಿ ಎಂದು ಮೊನ್ನೆ ಇಮೇಲ್ ಮೂಲಕ ಮನವಿ ಮಾಡಿದ್ದರು. ತನಿಖೆಗೆ ಪೂರಕವಾದ ದಾಖಲೆ, ಲ್ಯಾಪ್‌ಟ್ಯಾಪ್, ಪೆನ್‌ಡ್ರೈವ್‌ ಜೊತೆ ವಿಚಾರಣೆಗೆ ಹಾಜರಾಗಿದ್ದಾರೆ. ಬಳಿಕ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, ನನ್ನ ಬಳಿ ಇರುವ ದಾಖಲೆಗಳನ್ನ ನೀಡಿದ್ದೇನೆ. ಚಿನ್ನಯ್ಯ 164 ಹೇಳಿಕೆ ಹಿಂದೆ ಸರಿದ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ. ಈ ನಡುವೆ ಬುರುಡೆ ಪ್ರಕರಣದ ಪಾತ್ರಧಾರಿ ಚಿನ್ನಯ್ಯನನ್ನ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ವಿಚಾರಣೆ ನಡೆಸಿದ್ದಾರೆ.

    ಚಿನ್ನಯ್ಯ, ಆತನ ಅಣ್ಣ ತಾನಾಸಿ ಮಗ ಪುರುಷೋತ್ತಮ್ ಕೂಡ ವಿಚಾರಣೆಗೆ ಹಾಜರಾಗಿದ್ದಾನೆ. ಹಾಗೆಯೇ ಚಿನ್ನಯ್ಯ ಮತ್ತು ಪತ್ನಿ ಮಲ್ಲಿಕಾ ಬ್ಯಾಂಕ್ ಅಕೌಂಟ್ ಜಾಲಾಡಿದ್ದಾರೆ. ಈ ನಡುವೆ ವಿಕ್ಷಗಳು ಬುರುಡೆ ಪ್ರಕರಣವನ್ನ ಎನ್‌ಐಎ ಹೆಗಲಿಗೆ ವಹಿಸುವಂತೆ ಪಟ್ಟು ಹಿಡಿದಿವೆ.  ಇದನ್ನೂ ಓದಿ: ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ ಮಹೇಶ್ ಶೆಟ್ಟಿ ತಿಮರೋಡಿ

    ಅನಾರೋಗ್ಯ ನೆಪ – ವಿಚಾರಣೆಗೆ ಗೈರಾದ ಸಮೀರ್
    AI ಮೂಲಕ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಿ ಜನರನ್ನ ಯಾಮಾರಿಸಿದ್ದ ಯೂಟ್ಯೂಬರ್ ಸಮೀರ್ ಇವತ್ತು ವಿಚಾರಣೆಗೆ ಹಾಜರಾಗಬೇಕಿತ್ತು. ಅನಾರೋಗ್ಯ ನೆಪ ಹೇಳಿ ಗೈರಾಗಿದ್ದಾನೆ. ಮತ್ತೊಂದು ದಿನ ವಿಚಾರಣೆಗೆ ಹಾಜರಾಗಲು ಆತನ ಪರ ವಕೀಲರು ಅನುಮತಿ ಕೇಳಿದ್ದಾರೆ. ಸಮೀರ್ ಆದಾಯ ಮೂಲ ಕೆದಕುತ್ತಿರುವ ಎಸ್‌ಐಟಿ, ಅಕೌಂಟ್ ಡಿಟೇಲ್ಸ್ ಕೆದಕಿದ್ದಾರೆ. ಒಂದು ಎಐ ವಿಡಿಯೋಗೆ ತಗಲುವ ಖರ್ಚೆಷ್ಟು? ಒಂದು ವಿಡಿಯೋ ಸಿಗೋ ಆದಾಯವೆಷ್ಟು ಅನ್ನೋ ಮಾಹಿತಿ ಕೇಳಿದ್ದಾರೆ. ಪೊಲೀಸರ ಪ್ರಶ್ನೆಗೆ ಸಮೀರ್, ಐನೂರು, 1 ಸಾವಿರ ಖರ್ಚು ಮಾಡಿ ಎಐ ವಿಡಿಯೋ ಮಾಡ್ತಿರೋದಾಗಿ ಹೇಳಿದ್ದಾನೆ. ಈ ಮಧ್ಯೆ, ಸಮೀರ್ ವಿಡಿಯೋ ಬಗ್ಗೆ ಮುಸ್ಲಿಂ ವ್ಯಕ್ತಿ, ನಾವೇ ಈ ವಿಡಿಯೋ ನಂಬಲ್ಲ. ನೀವ್ಯಾಕೆ ನಂಬುತ್ತೀರಿ ಅಂತ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ತಿಮರೋಡಿ ತೋಟದಲ್ಲಿ ಸಿಕ್ತಾ ಚಿನ್ನಯ್ಯ ತಂದ ಬುರುಡೆ?

    ಮಟ್ಟಣ್ಣನವರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
    ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಹೂಡಿದ ಬುರುಡೆ ಗ್ಯಾಂಗ್‌ನ ಗಿರೀಶ್ ಮಟ್ಟಣ್ಣನವರ್‌ಗೆ ಮತ್ತೊಂದು ಶಾಕ್ ಎದುರಾಗಿದೆ. ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ಮದುವೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಹಿನ್ನೆಲೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿಯಾಗಿ ವಿಡಿಯೋ ಸಹಿತ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತಂದಿದ್ದು, ಧರ್ಮಸ್ಥಳ ಭಕ್ತರ ಬಗ್ಗೆ ಹೀನವಾಗಿ ಮಾತಾಡಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಲಾಗಿದೆ. ದೂರು ಸ್ವೀಕರಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಹೆಣ್ಣು ಮಗಳ ಚಾರಿತ್ರಿಕ ವಧೆ ಮಾಡಿದ್ರೆ ಪೊಲೀಸ್ ಆಯುಕ್ತರಿಗೆ ಎಫ್ ಐಆರ್ ಮಾಡಲು ಸೂಚಿಸುತ್ತೇನೆ ಎಂದಿದ್ದಾರೆ.

  • ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು, ಮಾವೋವಾದಿ, ಜಿಹಾದಿಗಳಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    ಬುರುಡೆ ಗ್ಯಾಂಗ್ ಸಮೀರ್ ಹಿಂದೆ ಎಡಪಂಥೀಯರು, ಮಾವೋವಾದಿ, ಜಿಹಾದಿಗಳಿದ್ದಾರೆ: ಚಕ್ರವರ್ತಿ ಸೂಲಿಬೆಲೆ

    – ಮಸೀದಿಯಲ್ಲಿ ನಡೆಯೋ ಅತ್ಯಾಚಾರ ಕೇಸ್ ಬಗ್ಗೆ ಮಾತೆತ್ತದ ಮುಸಲ್ಮಾನ ಇಲ್ಲಿ ಯಾಕೆ ಬಂದ: ವಾಗ್ಮಿ ಪ್ರಶ್ನೆ
    – ದಸರಾ ಉದ್ಘಾಟನೆಗೆ ಮುಸಲ್ಮಾನರನ್ನು ಕರೆತಂದಿದ್ದಾರೆ: ಸರ್ಕಾರದ ವಿರುದ್ಧ ಟೀಕೆ

    ಕಾರವಾರ: ಬುರುಡೆ ಗ್ಯಾಂಗ್ ಸಮೀರ್ (Sameer) ಹಿಂದೆ ಎಡಪಂಥೀಯರು, ಮಾವೋವಾದಿಗಳು, ಜಿಹಾದಿಗಳು ಇದ್ದಾರೆ ಎಂದು ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಗಂಭೀರ ಆರೋಪ ಮಾಡಿದ್ದಾರೆ.

    ಸಿದ್ದಾಪುರ ತಾಲೂಕಿನ ಮಾವಿನಗುಂಡಿಯಲ್ಲಿ ಮಾತನಾಡಿದ ಅವರು, 2012 ರಲ್ಲಿ ಗಿರೀಶ್ ಮಟ್ಟಣ್ಣನವರ್ ಮೊದಲು ಸೌಜನ್ಯ ಪ್ರರಣದಲ್ಲಿ ಹಿಡಿದುಕೊಂಡು ಬಂದ ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಗಲಾಟೆ ಮಾಡಿದ್ದ. ಇದೇ 2013 ರಲ್ಲಿ ಹಿಡಿದುಕೊಂಡ ವ್ಯಕ್ತಿ ಆರೋಪಿ ಅಲ್ಲ ಎಂದು ಹೇಳುತ್ತಾನೆ. ಇದರಲ್ಲಿ ವೀರೇಂದ್ರ ಹೆಗ್ಗಡೆ ಪರಿವಾರದವರ ಹೆಸರು ಸೇರಿಸುತ್ತಾನೆ. ಧರ್ಮಸ್ಥಳವನ್ನು ಕಿತ್ತುಕೊಳ್ಳಬೇಕು ಎಂಬ ಹುಳ ಅವರಲ್ಲಿ ಹೊಕ್ಕಿದೆ. 2023 ಸಂತೋಷ್ ರಾವ್ ಹೊರ ಬರುತ್ತಾನೆ. ಸ್ಟ್ಯಾನ್ಲಿ ಒಡನಾಡಿ ಸಂಸ್ಥೆ ಮೂಲಕ ಎಂಟ್ರಿಯಾಗಿ ಮನೆ ಮನೆಗೂ ಹೋಗಿ ಪ್ರಚಾರ ಮಾಡುತ್ತಾನೆ. ಸೌಜನ್ಯ ಪ್ರಕರಣದಲ್ಲಿ ಔಟ್‌ಪುಟ್ ಹೊರಗೆ ಬರದೇ ಇದ್ದುದರಿಂದ ಮಾವೂ ವಾದಿಗಳ ಮುಖವಾಡ ಕಳಚಿ ಅವರ ಹಿಂದೆ ಬಂದು ಗಿರೀಶ್ ಮಟ್ಟಣ್ಣನವರ್ ಎಂಟ್ರಿಯಾಗುತ್ತದೆ. ಗಿರೀಶ್ ಮಟ್ಟಣ್ಣನವರ್ ಎಂಟ್ರಿ ಆದ್ಮೇಲೆ ಅವರ ಪೊಲೀಸ್ ಬುದ್ದಿ ಬಳಸಿಕೊಂಡು ಇಲ್ಲಿ ನಡೆಯುವ ಪ್ರತಿಯೊಂದು ಸಾವನ್ನೂ ಧರ್ಮಸ್ಥಳಕ್ಕೆ ಟ್ಯಾಗ್ ಮಾಡುವ ಪ್ರಯತ್ನ ಮಾಡುತ್ತಾರೆ. ಸೌಜನ್ಯ ಪ್ರಕರಣದಿಂದ ಹೊರಬಂದ ಸಂತೋಷ್ ರಾವ್ ಮುಂದಿಟ್ಟುಕೊಂಡು ಧರ್ಮಸ್ಥಳವನ್ನು ಮುಗಿಸುವ ಧಾವಂತ ಇತ್ತು. ಆಗ ಸಮೀರ್‌ನನ್ನು ಕರೆತಂದರು. ಅಲ್ಲಿಗೆ ಜಿಹಾದಿ ಎಲಿಮಿನೇಟ್‌ಗಳ ಎಂಟ್ರಿ ಆಗುತ್ತದೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ನಲ್ಲಿ ತಾವೇ ತೋಡಿದ ಹಳ್ಳಕ್ಕೆ ಬಿದ್ದರು, ಡಿಕೆಶಿ ಹೇಳಿಕೆ ವಾಪಸ್ ಪಡೆಯಲಿ: ವಿ.ಸೋಮಣ್ಣ

    ಒಬ್ಬ ಮುಸಲ್ಮಾನ ಬಂದ ಎಂದರೇ ಇದರಲ್ಲಿ ಏನೋ ಇರಬೇಕು. ಒಬ್ಬ ಮುಸಲ್ಮಾನ ತನ್ನ ಮಸೀದಿಯಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಮಾತೆತ್ತದವನು ಸೌಜನ್ಯ ಪ್ರಕರಣ ಹಿಡಿದುಕೊಂಡು ಇಲ್ಲಿಗೆ ಏಕೆ ಬಂದ? ಎಐ ವಿಡಿಯೋ ಮಾಡಲು ದುಡ್ಡು ಎಲ್ಲಿಂದ ಬಂತು? ಧರ್ಮಸ್ಥಳದ ಪರ ಹೋರಾಟಗಾರರು ಎಲ್ಲಿ ಬಂದರೂ, ಬೇರೆ ದಾರಿ ಇಲ್ಲದೇ ಎಸ್‌ಡಿಪಿಐ ಎಂಟ್ರಿ ಆಗಿದೆ. ಮೊದಲು ಎಡಪಂಥೀಯರು ಬಂದರು. ಅದರ ಹಿಂದೆ ಇವಾಂಜಿಲಿಸ್ಟ್‌ಗಳು ಬಂದರು, ಅವರ ಹಿಂದೆ ಜಿಹಾದಿಗಳು ಬಂದರು. ಜಿಹಾದಿ ಎಲಿಮಿನೇಟ್ ಮೂಲಕ ಮೊದಲ ಹೆಜ್ಜೆಯಾಗಿ ಸಮೀರ್ ಮುಂದಕ್ಕೆ ಬಂದಿದ್ದಾನೆ. ಸಮೀರ್‌ನ ಹಿಂದೆ ಪೂರ್ತಿ ಬ್ಯಾಕಪ್ ಎಡಪಂಥೀಯರದ್ದು ಇತ್ತು. ಸಮೀರ್ ವಿಡಿಯೋ ಆದ ನಂತರ ಎಲ್ಲರಿಗೂ ಹಂಚಲಾಗಿದೆ ಎಂದು ಆರೋಪಿಸಿದ್ದಾರೆ.

    ಜನರನ್ನು ಬಡಕಾಯಿಸುವುದು ಸಾಮಾನ್ಯ ಯೂಟ್ಯೂಬರ್ ತಲೆಯಲ್ಲ. ಇದರ ಹಿಂದೆ ಯಾರೋ ದೊಡ್ಡದಾಗಿ ಪ್ರಯತ್ನ ಮಾಡುತ್ತಿದ್ದವರು ಇದ್ದಾರೆ. ದಸರಾ ಉದ್ಘಾಟನೆಗೆ ಮುಸಲ್ಮಾನರನ್ನು ಕರೆದುಕೊಂಡು ಬಂದಿದ್ದಾರೆ. ದಸರಾ ಹಿಂದೂಗಳ ಧಾರ್ಮಿಕ ಹಬ್ಬವಾಗಿ ಸೆಲಬ್ರೇಟ್ ಮಾಡುತ್ತೇವೆ. ನಿಸಾರ್ ಅಹ್ಮದ್ ಬಂದಾಗ ಗಲಾಟೆ ಮಾಡಲಿಲ್ಲ. ಏಕೆಂದರೆ ನಿಸಾರ್ ಅಹ್ಮದ್ ಅವರನ್ನು ಬೇರೆಯವರು ಎಂದು ನಾವು ಗಮನಿಸಿಲ್ಲ. ನಮಗೆ ಹಿಂದೂ ಮುಸ್ಮಿಂ ಪ್ರಾಬ್ಲಮ್ ಅಲ್ಲ. ನಮಗೆ ಧರ್ಮ ಶ್ರದ್ಧೆಯನ್ನು ವಿರೋಧಿಸುವವರ ಕುರಿತು ಇರುವ ಪ್ರಾಬ್ಲಂ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚಾಮುಂಡೇಶ್ವರಿ ದೇವಸ್ಥಾನ ಎಲ್ಲರ ಆಸ್ತಿ ಅನ್ನೋದು ಸರಿ ಅಲ್ಲ, ಡಿಕೆಶಿ ಕ್ಷಮೆ ಕೇಳ್ಬೇಕು: ಆರ್.ಅಶೋಕ್

    ಕನ್ನಡ ಭಾಷೆಯನ್ನು ದೇವಿ ರೂಪದಲ್ಲಿ ನೋಡಿದರೆ ಸಹಿಸಲಾಗದವರು, ಚಾಮುಂಡಿ ತಾಯಿ ಪೂಜೆ ಎಂದರೆ ಹೇಗೆ ಸಹಿಸುತ್ತಾರೆ? ಹಿಂದೂಗಳನ್ನು ಅವಮಾನಿಸಬೇಕು, ಕಿರಿಕಿರಿ ಉಂಟು ಮಾಡಬೇಕು. ನೀವು ಕರ್ನಾಟಕದಲ್ಲಿ ಸೆಕೆಂಡರಿ ಸಿಟಿಜನ್ ಎಂದು ಪದೇ ಪದೇ ಹೇಳಬೇಕು. ನಿಮ್ಮ ವೋಟು ಅವಶ್ಯಕತೆ ಇಲ್ಲ ಎಂದು ಹೇಳುವ ಪ್ರಯತ್ನವನ್ನು ಸಿದ್ದರಾಮಯ್ಯ ಹಿಂದೆಯೂ ಮಾಡಿದ್ದಾರೆ. ಇಂದೂ ಸಹ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.