Tag: ಧಮಾಕ

  • ಹೊಸ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀಲೀಲಾ

    ಹೊಸ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀಲೀಲಾ

    ‘ಕಿಸ್’ ಬೆಡಗಿ ಶ್ರೀಲೀಲಾ (Sreeleela) ಸದ್ಯ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸ್ಟಾರ್ ನಟರಿಗೆ ನಾಯಕಿಯಾಗುವ ಮೂಲಕ ಸದ್ದು ಮಾಡುತ್ತಿರುವ ಶ್ರೀಲೀಲಾ ಹೊಸ ಫೋಟೋಶೂಟ್‌ನಿಂದ ಸದ್ದು ಮಾಡುತ್ತಿದ್ದಾರೆ.

    ಲೈಟ್ ಬಣ್ಣದ ಡ್ರೆಸ್‌ನಲ್ಲಿ ನಟಿ ಅಪ್ಸರೆಯಂತೆ ಕಂಗೊಳಿಸಿದ್ದಾರೆ. ವಿವಿಧ ಭಂಗಿಯಲ್ಲಿ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ನಟಿಯ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಅಪ್ಸರೆಯಂತೆ ಮಿಂಚಿರುವ ಶ್ರೀಲೀಲಾರನ್ನು ನೆಟ್ಟಿಗರು ಹಾಡಿಹೊಗಳುತ್ತಿದ್ದಾರೆ.

    ತೆಲುಗಿನಲ್ಲಿ ‘ಪೆಳ್ಳಿ ಸಂದಡಿ’ ಸಿನಿಮಾದ ಮೂಲಕ ನಟಿ ಎಂಟ್ರಿ ಕೊಟ್ಟರು. ಬಳಿಕ ‘ಧಮಾಕ’ (Dhamaka) ಚಿತ್ರದಿಂದ ಅವರಿಗೆ ಯಶಸ್ಸು ಸಿಕ್ಕಿತ್ತು. ಅಲ್ಲಿಂದ ಸ್ಟಾರ್ ನಟರ ಜೊತೆ ನಟಿಸುವ ಅವಕಾಶ ಸಿಕ್ಕಿದ್ರು ಹೇಳಿಕೊಳ್ಳುವಂತ ಬ್ರೇಕ್ ಸಿಗಲಿಲ್ಲ. ಹಾಗಂತ ಅವರಿಗೆ ಬೇಡಿಕೆಯೇನು ಕಮ್ಮಿಯಾಗಲಿಲ್ಲ.

    ಕಳೆದ ವರ್ಷ ತೆರೆಕಂಡ ‘ಭಗವಂತ ಕೇಸರಿ’, ಗುಂಟೂರು ಖಾರಂ ಚಿತ್ರದ ಅಭಿನಯ ಮತ್ತು ಶ್ರೀಲೀಲಾ ಡ್ಯಾನ್ಸ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಇದನ್ನೂ ಓದಿ:ಕಿರುತೆರೆ ನಟ ವರುಣ್ ಆರಾಧ್ಯ ವಿರುದ್ಧ FIR ದಾಖಲು

    ಇನ್ನೂ ಪವನ್ ಕಲ್ಯಾಣ್ ಜೊತೆಗಿನ ಸಿನಿಮಾ, ನಿತಿನ್ ಜೊತೆ ರಾಬಿನ್‌ಹುಡ್, ಮಾಸ್ ಮಹಾರಾಜ್ ರವಿತೇಜ ಜೊತೆಗೆ ಹೊಸ ಚಿತ್ರ ಸೇರಿದಂತೆ ಹಲವು ಸಿನಿಮಾಗಳನ್ನು ನಟಿ ಒಪ್ಪಿಕೊಂಡಿದ್ದಾರೆ.

    ತೆಲುಗು ಮಾತ್ರವಲ್ಲ, ಇದೀಗ ಬಾಲಿವುಡ್‌ಗೂ ಕೂಡ ಪಾದಾರ್ಪಣೆ ಮಾಡೋಕೆ ರೆಡಿಯಾಗಿದ್ದಾರೆ. ಸಿದ್ಧಾರ್ಥ್ ಮಲ್ಹೋತ್ರಾಗೆ ನಾಯಕಿಯಾಗಿ ನಟಿಸಲು ಶ್ರೀಲೀಲಾಗೆ ಅವಕಾಶ ಸಿಕ್ಕಿದೆ.

    ಅಂದಹಾಗೆ, ಬೆಂಗಳೂರಿನ ಬೆಡಗಿ ಶ್ರೀಲೀಲಾ ಕನ್ನಡದ ‘ಕಿಸ್’ (Kiss Kannada) ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಭರಾಟೆ, ಬೈಟು ಲವ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು.

  • ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ಆಸೆ ವ್ಯಕ್ತಪಡಿಸಿದ ಶ್ರೀಲೀಲಾ

    ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ಆಸೆ ವ್ಯಕ್ತಪಡಿಸಿದ ಶ್ರೀಲೀಲಾ

    ನ್ನಡದ ‘ಕಿಸ್’ (Kiss)  ಬೆಡಗಿ ಶ್ರೀಲೀಲಾ (Sreeleela) ಸದ್ಯ ಟಾಲಿವುಡ್‌ನ (Tollywood) ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ವೃತ್ತಿರಂಗದಲ್ಲಿ ಸತತ ಸೋಲಿನ ನಂತರ ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ನಟಿ ಆಸೆ ವ್ಯಕ್ತಪಡಿಸಿದ್ದಾರೆ.

    ಶ್ರೀಲೀಲಾ ಅಂದಕ್ಕೆ, ಆಕೆಯ ಡ್ಯಾನ್ಸ್‌ಗೆ ಅಪಾರ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿಸ್ ಬೆಡಗಿ ನಟಿಸಿದ ಸಿನಿಮಾಗಳು ಹಿಟ್‌ ಆಗಿರಲಿ ಅಥವಾ ಫ್ಲಾಪ್ ಆಗಿರಲಿ ಅವರ ಮೇಲಿನ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಇದೀಗ ತೆಲುಗಿನಲ್ಲಿ ಮಿಂಚುತ್ತಿರುವ ಶ್ರೀಲೀಲಾ ಇತ್ತೀಚೆಗೆ ತಮಿಳುನಾಡಿನಲ್ಲಿ ಮೆಡಿಕಲ್‌ ಕಾಲೇಜು ಕಾರ್ಯಕ್ರಮವೊಂದರಲ್ಲಿ ನಟ ಶಿವಕಾರ್ತಿಕೇಯನ್‌ ಜೊತೆ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಈ ವೇಳೆ, ತಮಿಳು ಅಭಿಮಾನಿಗಳ ಕ್ರೇಜ್ ನೋಡಿ ನಟಿ ಶಾಕ್ ಆಗಿದ್ದಾರೆ.

    ನನಗೆ ತುಂಬಾ ಖುಷಿಯಾಗಿದೆ. ನನಗೆ ಇಷ್ಟು ದಿನ ನನಗೊಂದು ಅನುಮಾನವಿತ್ತು. ನನಗೆ ತಮಿಳು ಬರುವುದಿಲ್ಲ, ತಮಿಳಿನಲ್ಲಿ ಸಿನಿಮಾ ಮಾಡಿಲ್ಲ. ಇಲ್ಲಿನವರಿಗೆ ನನ್ನ ಪರಿಚಯ ಇರಲ್ಲ ಎಂದುಕೊಂಡಿದ್ದೆ. ನನ್ನನ್ನು ಅತಿಥಿ ಆಗಿ ಕರೆದಾಗ, ನನ್ನ ಹೇಗೆ ಸ್ವಾಗತಿಸುತ್ತಾರೆ ಎಂದುಕೊಂಡಿದ್ದೆ. ಆದರೆ ಇಲ್ಲಿ ನಿಮ್ಮ ಪ್ರೀತಿಯನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನಿಮ್ಮನ್ನು ನೋಡಿದ ಮೇಲೆ ಒಂದು ತಮಿಳು ಚಿತ್ರ (Tamil Films) ಮಾಡಬೇಕು ಅನ್ನಿಸುತ್ತಿದೆ ಎಂದು ನಟಿ ಮಾತನಾಡಿದ್ದಾರೆ.

    ಮೆಡಿಕಲ್ ಕಾಲೇಜಿನಲ್ಲಿ ಇಷ್ಟು ಎನರ್ಜಿ ಇರುತ್ತದೆ ಎಂದು ನನಗೆ ಗೊತ್ತಿರಲಿಲ್ಲ. ನಾನು ಕೂಡ ಮೆಡಿಕಲ್ ವಿದ್ಯಾರ್ಥಿ. ನಿಮ್ಮನ್ನು ನೋಡಿ ನನಗೆ ಆಶ್ಚರ್ಯವಾಗಿದೆ. ಸದ್ಯ ಶ್ರೀಲೀಲಾ ಮಾತುಗಳು ವೈರಲ್ ಆಗಿವೆ. ಇದನ್ನೂ ಓದಿ:ಕ್ಲಿಕ್ ಮಾಡಿ ಎರಡು ಲಕ್ಷ ಕಳೆದುಕೊಂಡ ಬಿಗ್ ಬಾಸ್ ಸ್ಪರ್ಧಿ

    ಸದ್ಯ ಪವನ್ ಕಲ್ಯಾಣ್‌ಗೆ (Pawan Kalyan) ನಾಯಕಿಯಾಗಿ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಈ ಸಿನಿಮಾ ಶ್ರೀಲೀಲಾ (Sreeleela) ಕೆರಿಯರ್‌ಗೆ ಬ್ರೇಕ್ ಕೊಡುತ್ತಾ ಕಾದುನೋಡಬೇಕಿದೆ.

  • ಆಕ್ಟರ್‌ ಆಗಿರೋ ಶ್ರೀಲೀಲಾ ಮೆಡಿಕಲ್‌ ಓದಿದ್ದೇಕೆ ಗೊತ್ತಾ? ಇಲ್ಲಿದೆ ಸೀಕ್ರೆಟ್

    ಆಕ್ಟರ್‌ ಆಗಿರೋ ಶ್ರೀಲೀಲಾ ಮೆಡಿಕಲ್‌ ಓದಿದ್ದೇಕೆ ಗೊತ್ತಾ? ಇಲ್ಲಿದೆ ಸೀಕ್ರೆಟ್

    ಟಾಲಿವುಡ್‌ನಲ್ಲಿ(Tollywood) ಶ್ರೀಲೀಲಾ ಮಾಡುತ್ತಿರುವ ಅಬ್ಬರ ಇದೆಯಲ್ಲ. ಅದು ಸುಮ್ಮನೆ ಎಲ್ಲರಿಗೂ ದಕ್ಕುವುದಿಲ್ಲ. ಇದೀಗ ಕಿಸ್ (Kiss) ಬೆಡಗಿ ಅದೊಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ಸಿನಿಮಾದಲ್ಲಿ ಅವಕಾಶ ಸಿಕ್ಕ ಮೇಲೂ ಯಾಕೆ ಮೆಡಿಕಲ್ ಕಲಿಯಲು ಒದ್ದಾಡಿದರು? ಅದ್ಯಾವ ಕಾರಣಕ್ಕೆ ಡಾಕ್ಟರ್ ಆಗುವುದಕ್ಕೆ ನಿರ್ಧಾರ ಮಾಡಿದರು? ಇಲ್ಲಿದೆ ಮಾಹಿತಿ.

    ಕನ್ನಡದ ಈ ಹುಡುಗಿ ಶ್ರೀಲೀಲಾ(Sreeleela) ಈಗ ಟಾಲಿವುಡ್‌ನ ಸೆನ್ಸೇಶನಲ್ ಸ್ಟಾರ್. ಅಪ್ ಕಮ್ಮಿಂಗ್ ಹೀರೋಯಿನ್ ಪಟ್ಟ ಕಿತ್ತೋಗೆದು ಸ್ಟಾರ್ ಹೀರೋಯಿನ್ ಸಿಂಹಾಸನದಲ್ಲಿ ಕೂಡಲು ಸಜ್ಜಾಗಿದ್ದಾರೆ. ಕೈಯಲ್ಲಿ ಸಾಲು ಸಾಲು ಸಿನಿಮಾ ಇವೆ. ಹೀಗಿದ್ದರೂ ಶ್ರೀಲೀಲಾ ಈ ವರ್ಷದ ಕೊನೆಗೆ ಮೆಡಿಕಲ್ ಪರೀಕ್ಷೆ ಬರೆಯಲಿದ್ದಾರೆ. ಅದಕ್ಕಾಗಿ ಶೂಟಿಂಗ್‌ನಿಂದ ಬಿಡುವು ಪಡೆಯಲಿದ್ದಾರೆ. ಅದಕ್ಕೆ ಕಾರಣ ಏನು ಗೊತ್ತೆ? ಅದು ಶ್ರೀಲೀಲಾ ಅಮ್ಮ ಸ್ವರ್ಣಲತಾ. ಇದನ್ನೂ ಓದಿ:ನಮ್ರತಾ ಜೊತೆ ‘ರಾಜಾ ಶಿವರಾಜ’ ಹಾಡಿಗೆ ಸ್ಟೆಪ್ ಹಾಕಿದ ತುಕಾಲಿ ಸಂತು

    ಶ್ರೀಲೀಲಾ ಅಮ್ಮನಿಗೆ (Mother) ಅದೊಮ್ಮೆ ಆರೋಗ್ಯ ತೀವ್ರವಾಗಿ ಕೈ ಕೊಟ್ಟಿತ್ತು. ಪಕ್ಕದಲ್ಲಿದ್ದ ಶ್ರೀಲೀಲಾಗೆ ಏನು ಮಾಡಬೇಕೆಂದು ತೋಚಲಿಲ್ಲ. ಡಾಕ್ಟರ್ ಬರೋವರೆಗೂ ತಾನೊಬ್ಬ ಯುಸ್‌ಲೆಸ್ ಹುಡುಗಿ ಎಂದು ಫೀಲ್ ಆಯಿತು. ಅಂದೇ ಮೆಡಿಕಲ್ ಕಲಿಯಲು ನಿರ್ಧರಿಸಿದರು. ಕಿಸ್ ಸಿನಿಮಾ ಶೂಟಿಂಗ್ ಬಿಡುವಿನ ವೇಳೆಯಲ್ಲಿ ಆಸ್ಪತ್ರೆಗೆ ಹಾಜರಾದರು. ವಾರಕ್ಕೆ ಇಪ್ಪತ್ತು ಗಂಟೆ ಟ್ರೇನಿಂಗ್ ಪಡೆದರು. ಈಗ ಡಾಕ್ಟರ್ ಶ್ರೀಲೀಲಾ ಆಗುವ ಹಾದಿಯಲ್ಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಡ್ಡೆಹುಡುಗರ ರಾಣಿ ಶ್ರೀಲೀಲಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್

    ಪಡ್ಡೆಹುಡುಗರ ರಾಣಿ ಶ್ರೀಲೀಲಾ ಅಭಿಮಾನಿಗಳಿಗೆ ಗುಡ್‌ ನ್ಯೂಸ್

    ‘ಧಮಾಕ’ ಬ್ಯೂಟಿ ಶ್ರೀಲೀಲಾ(Sreeleela) ಅಭಿಮಾನಿಗಳಿಗೆ (Fans) ಇಲ್ಲಿದೆ ಗುಡ್ ನ್ಯೂಸ್. ಕಿಸ್ ಚೆಲುವೆಯನ್ನ ಕಣ್ಣುಂಬಿಕೊಳ್ಳಲು ಬಂಪರ್ ಆಫರ್, ಬ್ಯಾಕ್ ಟು ಬ್ಯಾಕ್ ಲೀಲಾ ಸಿನಿಮಾಗಳ ಮೆರವಣಿಗೆ ರೆಡಿಯಾಗಿದೆ. ಏನದು ಸಿಹಿಸುದ್ದಿ? ಇಲ್ಲಿದೆ ಮಾಹಿತಿ.‌ ಇದನ್ನೂ ಓದಿ:ಪ್ರಭಾಸ್ ಮುಂದಿನ ಚಿತ್ರಕ್ಕೆ ನಾಯಕಿಯಾದ ಬೆಂಗಳೂರಿನ ಬೆಡಗಿ

    ಬೆಂಗಳೂರಿನ ಬ್ಯೂಟಿ ಶ್ರೀಲೀಲಾ, ಟಾಲಿವುಡ್ (Tollywood) ಅಡ್ಡಾದಲ್ಲಿ ಭಾರೀ ಬೇಡಿಕೆಯಲ್ಲಿದ್ದಾರೆ. ಮಾಡಿದ್ದು ತೆಲುಗಿನಲ್ಲಿ ಎರಡೇ ಸಿನಿಮಾ ಆಗಿದ್ರೂ ಅಭಿಮಾನಿಗಳ ಬಳಗ ಈಗ ಹಿರಿದಾಗಿದೆ. ಈ ವರ್ಷದ ಗಣೇಶ್ ಹಬ್ಬದಿಂದ ಮುಂದಿನ ವರ್ಷ ಸಂಕ್ರಾಂತಿವರೆಗೂ ಶ್ರೀಲೀಲಾ ಸಿನಿಮಾಗಳು ಚಿತ್ರಮಂದಿರದಲ್ಲಿ ದರ್ಶನ ಕೊಡಲಿದೆ.

    ಗಣೇಶ ಹಬ್ಬ ಸಂದರ್ಭದಲ್ಲಿ ಸೆಪ್ಟೆಂಬರ್ 15ಕ್ಕೆ ರಾಮ್ ಪೋತಿನೇನಿ ಜೊತೆಗಿನ ಸ್ಕಂದ (Skanda) ತೆರೆಗೆ ಅಬ್ಬರಿಸಲಿದೆ. ನಂತರ ದಸರಾಗೆ ಬಾಲಕೃಷ್ಣ ಅಭಿನಯದ ‘ಭಗವಂತ ಕೇಸರಿ’ (Bhagavantha Kesari) ಚಿತ್ರದ ಅಬ್ಬರ ಶುರುವಾಗಲಿದೆ. ಉಪ್ಪೇನ ಹೀರೋ ವೈಷ್ಣವ್ ತೇಜ್ ಜೊತೆಗಿನ ‘ಆದಿಕೇಶವ’. ಕ್ರಿಸ್‌ಮಸ್‌ಗೆ ನಿತಿನ್ ಜೊತೆಗಿನ ಎಕ್ಸ್ಟ್ರಾರ್ಡಿನರಿ ಮ್ಯಾನ್ ಸಿನಿಮಾ ರಿಲೀಸ್ ಆಗ್ತಿದೆ. ಹೊಸ ವರ್ಷದ ಆರಂಭದಲ್ಲೇ ಮಹೇಶ್ ಬಾಬು ಜೊತೆ ‘ಗುಂಟೂರು ಖಾರಂ’ ಸಿನಿಮಾ ಅಬ್ಬರಿಸಲಿದೆ. ಅಲ್ಲಿಗೆ ಶ್ರೀಲೀಲಾ ಅಭಿನಯದ ಸಾಲು ಸಾಲು ಐದು ಸಿನಿಮಾ ಬೆಳ್ಳಿತೆರೆಯಲ್ಲಿ ಅಬ್ಬರಿಸಲಿದೆ. ಅದರಲ್ಲಿ ಯಾವ ಸಿನಿಮಾ ಗೆಲುವಿನ ಓಟದಲ್ಲಿ ಜಯಭೇರಿ ಬಾರಿಸುತ್ತೆ ಎಂಬುದನ್ನ ಕಾಯಬೇಕಿದೆ.

    ಕನ್ನಡದ ಬ್ಯೂಟಿ ಶ್ರೀಲೀಲಾ (Sreeleela) ಕೈಯಲ್ಲಿ ಒಟ್ಟು 12 ಸಿನಿಮಾಗಳಿವೆ. ಸ್ಟಾರ್ ನಟರಿಗೆ ಜೋಡಿಯಾಗುವ ಮೂಲಕ ಭರಾಟೆ ನಟಿ ಗಮನ ಸೆಳೆದಿದ್ದಾರೆ. ನಟನೆ ಪ್ಲಸ್ ಡ್ಯಾನ್ಸ್ ಮೂಲಕ ಮೋಡಿ ಮಾಡಿರುವ ಚೆಲುವೆ ಶ್ರೀಲೀಲಾ ಕನ್ನಡದ ಕಿಸ್ ಸಿನಿಮಾ ಮೂಲಕ ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟರು. ಬಳಿಕ ಭರಾಟೆ ಮತ್ತು ಬೈಟು ಲವ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದರ ಜೊತೆಗೆ ತೆಲುಗಿನ ಪೆಳ್ಳಿಸಂದಡಿ ಮತ್ತು ಧಮಾಕ (Dhamaka) ಸಿನಿಮಾ ಮೂಲಕ ರಂಜಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕನ್ನಡತಿ ಶ್ರೀಲೀಲಾ ಹಿಂದಿಕ್ಕಿದ ‘ಸೀತಾರಾಮಂ’ ಬೆಡಗಿ ಮೃಣಾಲ್

    ಕನ್ನಡತಿ ಶ್ರೀಲೀಲಾ ಹಿಂದಿಕ್ಕಿದ ‘ಸೀತಾರಾಮಂ’ ಬೆಡಗಿ ಮೃಣಾಲ್

    ನ್ನಡದ ‘ಭರಾಟೆ’ (Bharate) ಬ್ಯೂಟಿ ಶ್ರೀಲೀಲಾ ಅವರು ಟಾಲಿವುಡ್ ರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ (Rashmika Mandanna), ಕೃತಿ ಶೆಟ್ಟಿ (Kriti Shetty), ಪೂಜಾ ಹೆಗ್ಡೆಗೆ (Pooja Hegde) ಟಕ್ಕರ್ ಕೊಟ್ಟಿದ್ದ ನಟಿಗೆ ಈಗ ಸೀತಾರಾಮಂ ನಟಿ ಮೃಣಾಲ್ ಪೈಪೋಟಿ ನೀಡ್ತಿದ್ದಾರೆ. ಯಾವ ವಿಚಾರ? ಏನ್ ಕಥೆ ಇಲ್ಲಿದೆ ಡಿಟೈಲ್ಸ್

    ಕಿಸ್, ಭರಾಟೆ, ಬೈಟು ಲವ್ ಸಿನಿಮಾದ ನಂತರ ‘ಪೆಳ್ಳಿ ಸಂದಡಿ’ ಸಿನಿಮಾದ ಮೂಲಕ ತೆಲುಗಿಗೆ ಕಾಲಿಟ್ಟ ನಟಿ ಶ್ರೀಲೀಲಾ ಈಗ ಅಲ್ಲೇ ಗಟ್ಟಿ ನೆಲೆ ಗಿಟ್ಟಿಸಿಕೊಂಡಿದ್ದಾರೆ. 10ಕ್ಕೂ ಹೆಚ್ಚು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಸ್ಟಾರ್ ಸಿನಿಮಾಗೆ ಈಗ ಕಿಸ್ ನಾಯಕಿನೇ ಬೇಕು ಎಂಬಷ್ಟರ ಮಟ್ಟಿಗೆ ಬೆಂಗಳೂರಿನ ಬ್ಯೂಟಿ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಜುಲೈ 21ರಂದು ಬೆಚ್ಚಿ ಬೀಳಿಸಲು ರೆಡಿಯಾಯ್ತು ‘ಅಂಬುಜ’ ಟೀಂ

    ರಶ್ಮಿಕಾ ಮಂದಣ್ಣ, ಕೃತಿ, ಪೂಜಾ ಹೆಗ್ಡೆಗೆ ಟಕ್ಕರ್ ಕೊಟ್ಟು ಹತ್ತಕೂ ಹೆಚ್ಚು ಚಿತ್ರಗಳಿಗೆ ಶ್ರೀಲೀಲಾ ನಾಯಕಿಯಾಗಿದ್ರೆ ಈಗ ಕನ್ನಡತಿಗೆ ಮರಾಠಿ ಸುಂದರಿ ಸೆಡ್ಡು ಹೊಡೆದಿದ್ದಾರೆ. ಹೌದು.. ‘ಸೀತಾರಾಮಂ’ ಸಿನಿಮಾ ರಿಲೀಸ್ ಆದ್ಮೇಲೆ ಮೃಣಾಲ್ ಠಾಕೂರ್‌ಗೆ (Mrunal Thakur) ಬಂಪರ್ ಅವಕಾಶಗಳು ಅರಸಿ ಬರುತ್ತಿದೆ. ಬಾಲಿವುಡ್- ಟಾಲಿವುಡ್ (Tollywood) ಎರಡಲ್ಲೂ ಅವಕಾಶ ಗಿಟ್ಟಿಸಿಕೊಳ್ತಿದ್ದಾರೆ. ಒಂದು ಸಿನಿಮಾದಿಂದ ಮತ್ತೊಂದು ಸಿನಿಮಾಗೆ ಸಂಭಾವನೆ ಕೂಡ ಏರಿಸಿಕೊಳ್ತಿದ್ದಾರೆ.

    ಇದೀಗ ಶ್ರೀಲೀಲಾ- ಮೃಣಾಲ್ ಸಂಭಾವನೆ ವಿಚಾರ ಅನೇಕರ ಚರ್ಚೆಗೆ ಗ್ರಾಸವಾಗಿದೆ. ಶಿವ ಕಾರ್ತಿಕೇಯನ್ ಅವರ ಪ್ಯಾನ್ ಇಂಡಿಯಾ ಚಿತ್ರಕ್ಕೆ ಮೃಣಾಲ್ ನಾಯಕಿಯಾಗಿದ್ದಾರೆ. ನಾನಿ 30ನೇ ಚಿತ್ರ, ವಿಜಯ್ ದೇವರಕೊಂಡ ಹೊಸ ಸಿನಿಮಾಗೆ ಮೃಣಾಲ್ ಅವರೇ ಜೋಡಿ. ಹೀಗಿರುವಾಗ ಒಂದು ಚಿತ್ರಕ್ಕೆ 4ರಿಂದ 4.5 ಕೋಟಿ ಚಾರ್ಜ್ ಮಾಡ್ತಿದ್ದಾರೆ.

    ಸದ್ಯದ ತೆಲುಗಿನ ಕ್ರೇಜಿ ಗರ್ಲ್‌ ಶ್ರೀಲೀಲಾ ಅವರು ಒಂದು ಚಿತ್ರಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಭರಾಟೆ ನಟಿಗಿಂತ ಮೃಣಾಲ್‌ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಈ ಮೂಲಕ ಕನ್ನಡತಿಗೆ ಮರಾಠಿ ಸುಂದರಿ ಮೃಣಾಲ್ ಸೆಡ್ಡು ಹೊಡೆದಿದ್ದಾರೆ. ಸದ್ಯದ ಮಟ್ಟಿಗೆ ಶ್ರೀಲೀಲಾಗೆ ಟಕ್ಕರ್ ಕೊಡೋರು ಮೃಣಾಲ್ ಮಾತ್ರ ಅಂತಾ ಸಿನಿ ಪಂಡಿತರು ಚರ್ಚೆ ಮಾಡ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರವಿತೇಜ ನಟನೆಯ `ಟೈಗರ್ ನಾಗೇಶ್ವರ್ ರಾವ್’ ರಿಲೀಸ್ ಡೇಟ್ ಫಿಕ್ಸ್

    ರವಿತೇಜ ನಟನೆಯ `ಟೈಗರ್ ನಾಗೇಶ್ವರ್ ರಾವ್’ ರಿಲೀಸ್ ಡೇಟ್ ಫಿಕ್ಸ್

    ʻಧಮಾಕʼ (Dhamaka) ಚಿತ್ರದ ಸಕ್ಸಸ್ ಬಳಿಕ ತೆಲುಗು (Telagu) ಚಿತ್ರರಂಗದ ಮಾಸ್ ಮಹಾರಾಜ ರವಿತೇಜ (Raviteja)  ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ `ಟೈಗರ್ ನಾಗೇಶ್ವರ್ ರಾವ್’ ಬಿಡುಗಡೆ ದಿನಾಂಕ ನಿಗದಿಯಾಗಿದೆ. ದಸರಾ ಹಬ್ಬಕ್ಕೆ Tiger Nageswara Rao ಬಾಕ್ಸಾಫೀಸ್ ಬೇಟೆಗಿಳಿದಿದ್ದಾನೆ. ಅಂದರೆ ಅಕ್ಟೋಬರ್ 22ರಂದು ವಿಶ್ವಾದ್ಯಂತ ರವಿತೇಜ ಸಿನಿಮಾ ಬೆಳ್ಳಿತೆರೆಗಪ್ಪಳಿಸಲಿದೆ. ದಸರಾ ಹಬ್ಬದ ವೇಳೆಯಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

     

    View this post on Instagram

     

    A post shared by RAVI TEJA (@raviteja_2628)

    ವಂಶಿ ನಿರ್ದೇಶನದಲ್ಲಿ ತಯಾರಾಗಿರುವ `ಟೈಗರ್ ನಾಗೇಶ್ವರ್ ರಾವ್’ ಸಿನಿಮಾವನ್ನು ಕಾಶ್ಮೀರಿ ಫೈಲ್ಸ್ ಹಾಗೂ ಕಾರ್ತಿಕೇಯ-2 ನಂತಹ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರ ನಿರ್ಮಿಸಿರುವ ಅಭಿಷೇಕ್ ಅರ್ಗವಾಲ್ ಅವರು `ಅರ್ಗವಾಲ್ ಆರ್ಟ್ಸ್’ ನಡಿ ಅದ್ಧೂರಿಯಾಗಿ ನಿರ್ಮಿಸಿದ್ದಾರೆ. ತಾಂತ್ರಿಕವಾಗಿ ಶ್ರೀಮಂತಿಕೆಯಿಂದ ಸಿನಿಮಾ ಮೂಡಿಬಂದಿದ್ದು, ಅದಕ್ಕಾಗಿ ಐದು ಎಕರೆ ಜಾಗದಲ್ಲಿ ಹಳ್ಳಿಯೊಂದನ್ನು ರೀ ಕ್ರಿಯೇಟ್ ಮಾಡಿ ಕೋಟ್ಯಂತರ ರೂಪಾಯಿ ಬಜೆಟ್ ನಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ.

     

    View this post on Instagram

     

    A post shared by RAVI TEJA (@raviteja_2628)

    70ರ ಕಾಲಘಟ್ಟದ ಹೈದ್ರಾಬಾದ್‌ ಸ್ಟುವರ್ಟ್‌ಪುರಂ ಹಳ್ಳಿಯೊಂದರ ಕುಖ್ಯಾತ ಕಳ್ಳನ ಜೀವನಾಧಾರಿತ ಸಿನಿಮಾ ಇದಾಗಿದ್ದು, ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತಲೂ ರವಿತೇಜ ಗೆಟಪ್, ಬಾಡಿ ಲಾಂಗ್ವೇಜ್ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಮಾಸ್ ಮಹಾರಾಜನಿಗೆ ಸಾಥ್ ಕೊಟ್ಟಿದ್ದಾರೆ. ಆರ್. ಮಧಿ- ಛಾಯಾಗ್ರಹಣ, ಶ್ರೀಕಾಂತ್ ವೀಸಾ- ಸಂಭಾಷಣೆ, ವಿ ಪ್ರಕಾಶ್ ಕುಮಾರ್- ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

  • ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್‌ ದೇವರಕೊಂಡ ರೊಮ್ಯಾನ್ಸ್

    ರಶ್ಮಿಕಾ ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ವಿಜಯ್‌ ದೇವರಕೊಂಡ ರೊಮ್ಯಾನ್ಸ್

    ಟಾಲಿವುಡ್‌ನಲ್ಲಿ (Tollywood) `ಅರ್ಜುನ್ ರೆಡ್ಡಿ’ (Arjun Reddy) ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದ ನಟ ವಿಜಯ್ ದೇವರಕೊಂಡ ಇದೀಗ ರಶ್ಮಿಕಾ (Rashmika Mandanna) ಬಳಿಕ ಮತ್ತೊಬ್ಬ ಕನ್ನಡತಿ ಜೊತೆ ರೊಮ್ಯಾನ್ಸ್ ಮಾಡಲು ರೆಡಿಯಾಗಿದ್ದಾರೆ. ಭರಾಟೆ ಬ್ಯೂಟಿ ಜೊತೆ ಲೈಗರ್ ಜೋಡಿಯಾಗಿ ಬರುತ್ತಿದ್ದಾರೆ.

    `ಗೀತಾ ಗೋವಿಂದಂ’ ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ವಿಜಯ್ ದೇವರಕೊಂಡ ಕಮಾಲ್ ಮಾಡಿದ್ದರು. ಈ ಜೋಡಿಯ ತೆರೆಯ ಮೇಲಿನ ರೊಮ್ಯಾನ್ಸ್ ನೋಡಿ ಫಿದಾ ಆಗಿದ್ದರು. ಈಗ `ಲೈಗರ್’ (Liger) ಸೋಲಿನಿಂದ ಬೆಸತ್ತಿರುವ ವಿಜಯ್‌ಗೆ ಕನ್ನಡದ ನಟಿ ಶ್ರೀಲೀಲಾ (Sreeleela) ಸಾಥ್ ನೀಡ್ತಿದ್ದಾರೆ.

    ಚಿತ್ರರಂಗದಲ್ಲಿ ಹೊಸ ಕ್ರಶ್ ಎಂದರೆ ಶ್ರೀಲೀಲಾ ಅವರಾಗಿದ್ದು, ರವಿತೇಜಾ (Raviteja) ಜೊತೆ ಧಮಾಕದಲ್ಲಿ ಕುಣಿದು ಕುಪ್ಪಳಿಸಿದ ಮೇಲೆ `ಕಿಸ್’ ನಟಿಗೆ ಭರ್ಜರಿ ಆಫರ್ಸ್ ಹರಿದು ಬರುತ್ತಿದೆ. ಸೌತ್‌ನ 8 ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ.

    ನಿರ್ದೇಶಕ ಗೌತಮ್ ತಿನ್ನುವಾರಿ- ವಿಜಯ್ ದೇವರಕೊಂಡ ಕಾಂಬಿನೇಷನ್‌ನ ಹೊಸ ಸಿನಿಮಾಗೆ ಇದೀಗ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸ್ಪೈ ಥ್ರಿಲರ್ ಕಥೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ವಿಜಯ್ ದೇವರಕೊಂಡ ಬರುತ್ತಿದ್ದಾರೆ. ವಿಜಯ್-ರಶ್ಮಿಕಾ ಜೋಡಿ ನೋಡಿ ಮೆಚ್ಚಿಕೊಂಡಿದ್ದ ಅಭಿಮಾನಿಗಳಿಗೆ ಶ್ರೀಲೀಲಾ-ವಿಜಯ್ ಜೋಡಿಯನ್ನ ತೆರೆಯ ಮೇಲೆ ನೋಡಿ ಮೆಚ್ಚಿಕೊಳ್ಳುತ್ತಾರಾ ಎಂಬುದನ್ನ ಕಾದುನೋಡಬೇಕಿದೆ.

  • ಪ್ರಿಯಾಗೆ ಕಾಲ್ಗೆಜ್ಜೆ ತೊಡಿಸಿ ಮಂಡಿಯೂರಿ ಪ್ರಪೋಸ್ ಮಾಡಿದ `ಪಾರು’ ನಟ ಸಿದ್ದು

    ಪ್ರಿಯಾಗೆ ಕಾಲ್ಗೆಜ್ಜೆ ತೊಡಿಸಿ ಮಂಡಿಯೂರಿ ಪ್ರಪೋಸ್ ಮಾಡಿದ `ಪಾರು’ ನಟ ಸಿದ್ದು

    ಕಿರುತೆರೆಯ ಲವ್ ಬರ್ಡ್ಸ್ ಸಿದ್ದು ಮೂಲಿಮನಿ(Siddumoolimani) ಮತ್ತು ಪ್ರಿಯಾ ಆಚಾರ್ (Priya Achar) ನವೆಂಬರ್ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ತಮ್ಮ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ನೀಡಿದ್ದರು. ಹೊಸ ವರ್ಷದ ಸಂಭ್ರಮದ ವೇಳೆ ಪ್ರಿಯಾಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ.

     

    View this post on Instagram

     

    A post shared by Priya j achar???? (@priya_j_achar)

    ಟಿವಿ ಪರದೆಯ ಕ್ಯೂಟ್ ಜೋಡಿ ಪ್ರಿಯಾ ಮತ್ತು ಸಿದ್ದು, ಹೊಸ ವರ್ಷದ ಶುಭಾರಂಭ ಕಾರ್ಯಕ್ರಮದಲ್ಲಿ ತಮ್ಮ ಲವ್ ಸ್ಟೋರಿ ಹೇಳಿಕೊಳ್ಳುವುದರ ಮೂಲಕ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಇನ್ನೂ ಈ ವೇಳೆ ಪ್ರೀತಿ ಮತ್ತು ಮದುವೆ ವಿಚಾರ ಮಾತನಾಡಿದರೆ ಮಾತ್ರ ನನಗೆ ತುಂಬಾ ಸಂಕೋಚ ನಾಚಿಕೆ ಆಗುತ್ತದೆ. ನನಗೆ ಸ್ಟೇಜ್ ಭಯ ಇಲ್ವೇ ಇಲ್ಲ. ಆದರೆ ಆ ವಿಷಯ ಯಾರಾದರೂ ಕೇಳಿದರೆ ನಾಚಿಕೆ ಆಗುತ್ತೆ. ನಾವು ಡಿಕೆಡಿ ರಿಯಾಲಿಟಿ ಶೋ ಮೂಲಕ ಸ್ನೇಹಿತರಾಗಿದ್ವೀ ಪ್ರೀತಿ ಶುರುವಾಗಿದ್ದು ನಮ್ಮ ʻಧಮಾಕʼ ಶೂಟ್‌ನಲ್ಲಿ ಎಂದು ಪ್ರಿಯಾ ಮಾತನಾಡಿದ್ದಾರೆ.

    ನಮ್ಮ ಮನದ ಮೂರು ಮುಖ್ಯ ಪದಗಳನ್ನು ಹೇಳುವ ಸಮಯ, ಅದನ್ನ ನಾನೇ ಹೇಳುವೆ. ಬಿಡು ನೀ ಭಯವ ನನಗೆ ಅರ್ಥ ಆಗುತ್ತೆ. ಇದು ಹೃದಯ ವಿಷಯ, ಪ್ರೀತಿ ಅಂತ ಹೆಸರಿಡಲು. ನನ್ನ ಹುಡುಗಿ ಎಂದು ಕರೆಯಲು ಇಲ್ಲಸಲ್ಲದ ಮಾತಾಡಲು ನಾನಲ್ಲ ಮಾಮೂಲು ಪ್ರೇಮಿ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ

    ಈ ಸಂಬಂಧಕ್ಕೆ ನಾವು ಹೆಸರಿಟ್ಟಿಲ್ಲ. ಒಬ್ಬರಿಗೊಬ್ಬರು ಪ್ರಪೋಸ್ ಮಾಡಿಲ್ಲ ಪ್ರೀತಿ ಅನ್ನೋ ವಿಚಾರ ಹೇಳಿಕೊಂಡಿಲ್ಲ ಮನಸ್ಸಿನಲ್ಲಿ ಮಾತ್ರ ಮದ್ವೆ ಅನ್ನೋ ವಿಚಾರವಿತ್ತು. ನಮ್ಮ ಭಾವನೆಗಳು ಮನೆಯಲ್ಲಿ ಸುಲಭವಾಗಿ ಗೊತ್ತಾಯಿತು. ಆಗ ಮದುವೆ ಮಾತುಕತೆ ಶುರುವಾಯ್ತು. ಆಗ ಬರೆದ ಕವಿತೆ ಕೊನೆ ಸಾಲುಗಳನ್ನು ಈಗ ಹೇಳುವೆ. ಚಂದನೆಯ ಅರಸಿ ನೀನು. ನಾನು ನಿನ್ನ ಜನುಮ ಜನುಮದ ಸಾಮಿ ನಿನ್ನನ್ನು ಪ್ರೀತಿಸುವೆ..ಮದುವೆ ಆಗುವೆಯಾ? ಎಂದು ಮಂಡಿಯೂರಿ ಸಿದ್ದು ಪ್ರಪೋಸ್ ಮಾಡುತ್ತಾರೆ. ಬಳಿಕ ಮತ್ತೆ ಕಾಲ್ಗೆಜ್ಜೆ ತೊಡಿಸಿ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    `ಕಾಂತಾರ’ ನಮ್ಮ ಕನ್ನಡದ ಹೆಮ್ಮೆ ಎಂದ ಭರಾಟೆ ಬ್ಯೂಟಿ ಶ್ರೀಲೀಲಾ

    `ಕಿಸ್’ ಮತ್ತು `ಭರಾಟೆ’ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದ ಸುಂದರಿ ಶ್ರೀಲೀಲಾ, ಸದ್ಯ ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ (Rashmika Mandanna) ನಂತರ ಶ್ರೀಲೀಲಾಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇತ್ತೀಚೆಗೆ ಧಮಾಕ ಪ್ರಚಾರ ಕಾರ್ಯದಲ್ಲಿ `ಕಾಂತಾರ’ (Kantara) ನಮ್ಮ ಕನ್ನಡದ ಹೆಮ್ಮೆ ಎಂದು ನಟಿ ಶ್ರೀಲೀಲಾ (Sreeleela) ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

    ಕನ್ನಡದ ನಟಿ ಶ್ರೀಲೀಲಾ ಈಗ ಸೌತ್ ಸಿನಿಮಾಗಳ ಮೂಲಕ ಸದ್ದು ಮಾಡ್ತಿದ್ದಾರೆ. ತೆಲುಗಿನಲ್ಲಿ ಮಿಂಚ್ತಾ ಇದ್ದರು. ಕನ್ನಡ ಚಿತ್ರರಂಗದ ಮೇಲೆ ಅಗಾಧವಾದ ಪ್ರೀತಿಯನ್ನ ಹೊಂದಿದ್ದಾರೆ. ಸದ್ಯ ರವಿತೇಜಾ ಮತ್ತು ಶ್ರೀಲೀಲಾ ನಟನೆಯ `ಧಮಾಕ’ (Dhamaka)ಚಿತ್ರದ ಪ್ರಚಾರ ಕಾರ್ಯದಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಶ್ರೀಲೀಲಾಗೆ ಕನ್ನಡ ಸಿನಿಮಾರಂಗದ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದುರಾಗಿದೆ. `ಕಾಂತಾರ’ ಸಿನಿಮಾ ಬಗ್ಗೆಯೂ ಕೇಳಲಾಗಿದೆ. ಇದನ್ನೂ ಓದಿ: ಫಿಶ್ ತಿನ್ನುವ ಭರದಲ್ಲಿ ʻಸಾನ್ಯ ಅಂದ್ರೆ ಯಾರುʼ ಎಂದ ರೂಪೇಶ್‌ ಶೆಟ್ಟಿ

    ನಾನು `ಕಾಂತಾರ’ ಸಿನಿಮಾ ನೋಡಿದ್ದೇನೆ. ಚಿತ್ರ ಅದ್ಭುತವಾಗಿದೆ. ನಾನು ಕರ್ನಾಟಕದವಳು(Karnataka). ಕನ್ನಡ ಚಿತ್ರರಂಗದ ವ್ಯಾಪ್ತಿ ಹೆಚ್ಚುತ್ತಿರುವ ಬಗ್ಗೆ ತುಂಬಾ ಹೆಮ್ಮೆ ಇದೆ. ಕಾಂತಾರ ನಮ್ಮ ಕನ್ನಡದ ಹೆಮ್ಮೆ ಎಂದು ಈ ವೇಳೆ ಶ್ರೀಲೀಲಾ ಮಾತನಾಡಿದ್ದಾರೆ. ನಟಿ ಆಡಿರುವ ಮಾತು ಇದೀಗ ಕನ್ನಡಿಗರ ಮನಗೆದ್ದಿದೆ. ರಶ್ಮಿಕಾ ಮಾಡಿದ ತಪ್ಪನ್ನ ಮಾಡದೇ, ಕನ್ನಡ ಚಿತ್ರರಂಗದ ಬಗ್ಗೆ ಶ್ರೀಲೀಲಾ ಹೆಮ್ಮೆಯಿಂದ ಮಾತನಾಡಿದ್ದಕ್ಕೆ ಕನ್ನಡಿಗರು ದಿಲ್‌ಖುಷ್ ಆಗಿದ್ದಾರೆ.

    `ಪೆಳ್ಳಿ ಸಂದಡಿ’ ಮತ್ತು `ಧಮಾಕ’ ನಂತರ ತೆಲುಗಿನ ಸಾಕಷ್ಟು ಸಿನಿಮಾಗಳಿಗೆ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ʻಗಟ್ಟಿಮೇಳʼ ನಟಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ದು ಮೂಲಿಮನಿ

    ʻಗಟ್ಟಿಮೇಳʼ ನಟಿ ಜೊತೆ ಎಂಗೇಜ್‌ಮೆಂಟ್‌ ಮಾಡಿಕೊಂಡ ಸಿದ್ದು ಮೂಲಿಮನಿ

    `ಸತ್ಯ’ ಧಾರಾವಾಹಿಯ ನಟ ಸಾಗರ್ ಗೌಡ ಎಂಗೇಜ್ ಆದ ಬೆನ್ನಲ್ಲೇ ಕಿರುತೆರೆಯ ಮತ್ತೊಂದು ಜೋಡಿ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. `ಪಾರು’ (Paaru Serial) ಸೀರಿಯಲ್ ನಟ ಸಿದ್ದು (Siddu Moolimani) ಜೊತೆ ಪ್ರಿಯಾ ಜೆ ಆಚಾರ್ (Priya J Achar) ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

    `ಪಾರು’ ಸೀರಿಯಲ್ ಮೂಲಕ ಮನೆ ಮಾತಾದ ನಟ ಸಿದ್ದು ಮೂಲಿಮನಿ ನವೆಂಬರ್ 20ರಂದು ಗಟ್ಟಿಮೇಳ ಧಾರಾವಾಹಿ ನಟಿ ಪ್ರಿಯಾ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಡ್ಯಾನ್ಸ್ ಶೋವೊಂದರಲ್ಲಿ ಪರಿಚಿತರಾದ ಈ ಜೋಡಿ ಆ ನಂತರ `ಧಮಾಕ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ವೇಳೆ ಸ್ನೇಹ ಬೆಳೆದು, ಪ್ರೀತಿಗೆ ತಿರುಗಿದೆ. ಆ ನಂತರದಲ್ಲಿ ಗುರುಹಿರಿಯರ ಒಪ್ಪಿಗೆ ಪಡೆದು, ಇದೀಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸದ್ಯ ಈ ಜೋಡಿ ಹಸೆಮಣೆ ಏರಲಿದ್ದಾರೆ.

    ಸಿದ್ದು ಮೂಲಿಮನಿ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಧಮಾಕ, ವಿಕ್ರಾಂತ್‌ರೋಣ, ರಂಗಿತರಂಗ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಪ್ರಿಯಾ `ಗಟ್ಟಿಮೇಳ’ ಸೀರಿಯಲ್ ಜೊತೆ ಪರಭಾಷೆ ಧಾರಾವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:‘ಕಾಮಿಡಿ ಕಿಲಾಡಿ’ ನಯನಾ ವಿರುದ್ಧ ಜೀವ ಬೆದರಿಕೆ ದೂರು ದಾಖಲು

    View this post on Instagram

     

    A post shared by Siddu Moolimani (@sidmoolimani)

    ನಟಿ ಪ್ರಿಯಾ ಹುಟ್ಟುರಾದ ದಾವಣಗೆರೆಯಲ್ಲಿ ಎಂಗೇಜ್‌ಮೆಂಟ್ ನಡೆದಿದೆ. ಈ ಸಂಭ್ರಮಕ್ಕೆ ಪಾರಾ ಮತ್ತು ಗಟ್ಟಿಮೇಳ ಸೀರಿಯಲ್ ತಂಡ ಸಾಕ್ಷಿಯಾಗಿದ್ದಾರೆ. ಹಾಗೇ ಸಾಕಷ್ಟು ನಟ ನಟಿಯರು ಕೂಡ ನವಜೋಡಿಗೆ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]