Tag: ಧನಂಜಯ್

  • ಡಾಲಿಯ ಭೈರವ ಗೀತಾ ಟ್ರೇಲರ್ ಮೆಚ್ಚಿಕೊಂಡ ಐರಾವತ!

    ಡಾಲಿಯ ಭೈರವ ಗೀತಾ ಟ್ರೇಲರ್ ಮೆಚ್ಚಿಕೊಂಡ ಐರಾವತ!

    ಬೆಂಗಳೂರು: ತಾವು ಅದೆಷ್ಟೇ ಬ್ಯುಸಿಯಾಗಿದ್ದರೂ ಬೇರೆಯವರ ಕೆಲಸ ಕಾರ್ಯಗಳನ್ನು ಗಮನಿಸುತ್ತಾ ಮೆಚ್ಚಿಕೊಳ್ಳುವ, ಪ್ರೋತ್ಸಾಹಿಸುವ ಮನೋಭಾವ ಹೊಂದಿರುವವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಇದೀಗ ಅವರು ಡಾಲಿ ಧನಂಜಯ್ ಅಭಿನಯದ ಭೈರವ ಗೀತಾ ಚಿತ್ರದ ಟ್ರೈಲರ್ ಬಿಡುಗಡೆಯಾದಾಕ್ಷಣವೇ ಅದನ್ನು ವೀಕ್ಷಿಸಿ ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿದ್ದಾರೆ.

    ರಾಮ್‍ಗೋಪಾಲ್ ವರ್ಮಾ ನಿರ್ಮಾಣದ ಈ ಚಿತ್ರದ ಟ್ರೈಲರ್ ಬಿಡುಗಡೆಯಾದಾಕ್ಷಣದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಒಳ್ಳೆ ಅಭಿಪ್ರಾಯಗಳು ಹರಿದಾಡಲಾರಂಭಿಸಿದ್ದವು. ತಕ್ಷಣವೇ ಇದನ್ನು ವೀಕ್ಷಿಸಿ ಮೆಚ್ಚಿಕೊಂಡಿರೋ ದರ್ಶನ್ ಅವರು ಭೈರವಗೀತಾ ಟ್ರೈಲರ್ ಸೂಪರ್ ಅಂತ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಡಾಲಿ ಧನಂಜಯ ಕೂಡಾ ಧನ್ಯವಾದ ಹೇಳಿದ್ದಾರೆ.

    ಭೈರವ ಗೀತಾ ಟ್ರೈಲರ್ ಬಿಡುಗಡೆಯಾಗಿ ಗಂಟೆ ಕಳೆಯೋ ಮುನ್ನವೇ ವ್ಯಾಪಕ ವೀಕ್ಷಣೆ ಪಡೆದುಕೊಂಡು ಕಡಿಮೆ ಅವಧಿಯಲ್ಲಿ ಮೂರು ಲಕ್ಷ ಕ್ರಾಸ್ ಮಾಡಿದೆ. ಇದರಲ್ಲಿಯೂ ಧನಂಜಯ್ ಟಗರು ಚಿತ್ರದ ಡಾಲಿ ಪಾತ್ರದಂಥಾದ್ದೇ ಖದರ್ ಹೊಂದಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪ್ರೇಮಕಥೆ ಮತ್ತು ಗ್ಯಾಂಗುಗಳ ಬಡಿದಾಟದ ಸುತ್ತ ನಡೆಯೋ ಕಥೆಯ ಹೊಳಹು ಬಿಟ್ಟುಕೊಟ್ಟಿರೋ ಈ ಟ್ರೈಲರ್ ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಡಾಲಿ ಧನಂಜಯ್!

    ಅರ್ಥಪೂರ್ಣ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಡಾಲಿ ಧನಂಜಯ್!

    ಬೆಂಗಳೂರು: ಇಂದು ಟಗುರು ಡಾಲಿಯ ಹುಟ್ಟುಹಬ್ಬವಾಗಿದ್ದು, ಧನಂಜಯ್ ಅರ್ಥಪೂರ್ಣವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

    ನಿನ್ನೆ ರಾತ್ರಿಯೇ ನೂರಾರು ಅಭಿಮಾನಿಗಳು ಸೇರಿ ಡಾಲಿ ಹುಟ್ಟುಹಬ್ಬವನ್ನು ಆಚರಿಸೋ ಪ್ಲಾನ್ ಕೂಡ ಮಾಡಿದರು. ಆದರೆ ಧನಂಜಯ್ ಮಾತ್ರ ಹುಟ್ಟುಹಬ್ಬದ ಅಡಂಭರಕ್ಕೆ ಬ್ರೇಕ್ ಹಾಕಿ ಹುಟ್ಟುಹಬ್ಬವನ್ನು ನೆರೆಪೀಡಿತ ಕೊಡಗು ಜನರ ನೆರವಿಗೆ ದೇಣಿಗೆ ಸಂಗ್ರಹಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

    ಜಯನಗರ ಬಳಿ ಇರುವ ಶಾಲಿನಿ ಮೈದಾನದಲ್ಲಿ ಧನಂಜಯ್ ಅವರ ನೂರಾರು ಅಭಿಮಾನಿಗಳು ಧಾವಿಸಿ ಶುಭ ಕೋರಿದಲ್ಲದೆ, ಕೈಲಾದ ದೇಣಿಗೆಯನ್ನು ನೀಡಿದರು. ಸೆಲ್ಫೀಗೊಂದಕ್ಕೆ ಕಾಣಿಕೆ ಎಂಬಂತೆ ಧನ ಸಂಗ್ರಹಣೆ ಕಾರ್ಯ ಮಾಡಿದ ನಟ ಧನಂಜಯ್ ಅಲ್ಲಿನ ಜನ ಸಂಕಷ್ಟದಲ್ಲಿದ್ದಾರೆ ಅವರಿಗೆ ನಾನು ಸಹ ಸಹಾಯ ಮಾಡುತ್ತೇನೆ ಎಂದು ಹೇಳಿದರು.

    ಇತ್ತೀಚಿಗೆ ರವಿಚಂದ್ರನ್, ಕೊಡಗು ಪ್ರವಾಹ ಸಂತ್ರಸ್ತರಿಗೆ ನಾಡಿನ ಜನರು ನೆರವಾಗುತ್ತಿದ್ದಾರೆ ನಿಜ. ಊಟ, ತಿಂಡಿ ಕೊಟ್ಟು ತಾತ್ಕಾಲಿಕವಾಗಿ ನೆರವಾಗೋದಷ್ಟೇ ಅಲ್ಲದೇ ಕೊಡಗನ್ನು ಮರು ನಿರ್ಮಾಣ ಮಾಡೋದು ಹೇಗೆ ಅಂತ ಸ್ವಲ್ಪ ಯೋಚನೆ ಮಾಡಬೇಕಾಗುತ್ತೆ. ಸರ್ಕಾರ ನೆರವಾಗುತ್ತೆ ಅಂತ ಕಾಯುತ್ತಾ ಕುಳಿತುಕೊಳ್ಳುವುದು ಬೇಡ. ನಾವೇ ಸರ್ಕಾರದ ರೀತಿ ಕೆಲಸ ಮಾಡೋಣ ಎಂದು ಹೇಳಿದರು.

    ಈ ವೇಳೆ ನಟ ಧನಂಜಯ್ ಮಾಧ್ಯಮಗಳೊಂದಿಗೆ ಮಾತನಾಡಿ, ನಟ ರವಿಚಂದ್ರನ್ ಅವರು ಹೇಳಿರುವ ಕೊಡಗು ಮರು ನಿರ್ಮಾಣದ ಹೇಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಅವರ ಕಾರ್ಯಕ್ಕೆ ನಾವು ಕೂಡ ಸಾಥ್ ಕೊಡುತ್ತೀವಿ ಎಂದು ಹೇಳಿದರು.

    ತಮ್ಮ ಹುಟ್ಟುಹಬ್ಬದ ಕುರಿತು ಧನಂಜಯ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಒಂದು ವಿಡಿಯೋವನ್ನು ಹಾಕಿದ್ದರು. ಅದರಲ್ಲಿ `ಎಲ್ಲರಿಗೂ ನಮಸ್ಕಾರ, ನಾನು ಸುಮಾರು ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ನೋಡಿತ್ತಿದ್ದೇನೆ. ಅಭಿಮಾನಿಗಳು 22 ರಾತ್ರಿ ಹಾಗೂ 23ರಂದು ಡಾಲಿ ಡೇ ಎಂದು ಆಚರಿಸಲು ರೆಡಿ ಆಗುತ್ತಿದ್ದೀರಾ. ಆದರೆ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ. ನನ್ನ ಹುಟ್ಟುಹಬ್ಬ ಆಚರಿಸಲು ನೀವು ಕಾತುರರಾಗಿದ್ದೀರಾ ಹಾಗೂ ಖುಷಿಯಾಗಿದ್ದೀರಾ ಎಂದು ಗೊತ್ತಾಗುತ್ತದೆ. ನಿಮ್ಮ ಅಭಿಮಾನ ನನಗೆ ದೊಡ್ಡದ್ದು. ಆದರೆ ಈ ದಿನ ಕೇರಳ ಹಾಗೂ ಕೊಡಗಿನಲ್ಲಿ ಆಗುತ್ತಿರುವುದು ನೋಡುತ್ತಿದ್ದೀರಾ. ಇತಂಹ ಪರಿಸ್ಥಿತಿಯಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ. ಅಲ್ಲದೇ ನಾನು ಹುಟ್ಟುಹಬ್ಬ ಆಚರಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಇದು ಸಂಭ್ರಮಾಚರಣೆಯ ಸಮಯವಲ್ಲ, ಸಹಾಯ ಮಾಡುವಂತಹ ಸಮಯ’ ಎಂದು ತಿಳಿಸಿದ್ದರು.

    `ಡಾಲಿ ಡೇ ದಿನಕ್ಕೆ ನೀವು ಅರ್ಥ ಕೊಡಬೇಕಾದರೆ ನನ್ನನ್ನು ಭೇಟಿ ಮಾಡಬಹುದು. ಆದರೆ ಆ ದಿನ ನಿಮ್ಮ ಕೈಲಾದಷ್ಟು ಅಂದರೆ 5 ರೂ., 10 ರೂ. ನೀಡಬಹುದು. ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹೂವಿನ ಹಾರ, ಪಟಾಕಿಯಲ್ಲಿ ಹಣ ವ್ಯರ್ಥ ಆಗುವುದರ ಬದಲು ಇತಂಹ ಕೆಲಸಕ್ಕೆ ಉಪಯೋಗಿಸಿಕೊಳ್ಳಿ. ನಿಮ್ಮ ಕೈಲಾದಷ್ಟು ನೀವು ದಾನ ಮಾಡಿ, ನನ್ನ ಕೈಲಾದಷ್ಟು ನಾನು ದಾನ ಮಾಡುತ್ತೇನೆ. ಒಂದು ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಿಸೋಣ’ ಎಂದು ಧನಂಜಯ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಡಿಯೋ: `ಡಾಲಿ ಡೇ’ ಆಚರಿಸಲು ಇದು ಸರಿಯಾದ ಸಮಯವಲ್ಲ: ಧನಂಜಯ್

    ವಿಡಿಯೋ: `ಡಾಲಿ ಡೇ’ ಆಚರಿಸಲು ಇದು ಸರಿಯಾದ ಸಮಯವಲ್ಲ: ಧನಂಜಯ್

    ಬೆಂಗಳೂರು:‘ಟಗರು’ ಚಿತ್ರದ ಮೂಲಕ ಡಾಲಿ ಎಂದೇ ಖ್ಯಾತಿಗೊಂಡಿರುವ ಧನಂಜಯ್ ಅವರಿಗೆ ಇದೇ 23ರಂದು ಹುಟ್ಟುಹಬ್ಬವಿದ್ದು, ಆದ್ರೆ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ ಅಂತ ನಟ ಧನಂಜಯ್ ಹೇಳಿದ್ದಾರೆ.

    ಈ ಕುರಿತು ಧನಂಜಯ್ ಅವರು ತಮ್ಮ ಫೇಸ್‍ಬುಕ್‍ನಲ್ಲಿ ಒಂದು ವಿಡಿಯೋವನ್ನು ಹಾಕಿದ್ದಾರೆ. ಅದರಲ್ಲಿ `ಎಲ್ಲರಿಗೂ ನಮಸ್ಕಾರ, ನಾನು ಸುಮಾರು ಒಂದು ತಿಂಗಳಿನಿಂದ ಸಾಮಾಜಿಕ ಜಾಲತಾಣದಲ್ಲಿ ನೋಡಿತ್ತಿದ್ದೇನೆ. ಅಭಿಮಾನಿಗಳು 22 ರಾತ್ರಿ ಹಾಗೂ 23ರಂದು ಡಾಲಿ ಡೇ ಎಂದು ಆಚರಿಸಲು ರೆಡಿ ಆಗುತ್ತಿದ್ದೀರಾ. ಆದರೆ ಡಾಲಿ ಡೇ ಆಚರಿಸಲು ಇದು ಸರಿಯಾದ ಸಮಯವಲ್ಲ. ನನ್ನ ಹುಟ್ಟುಹಬ್ಬ ಆಚರಿಸಲು ನೀವು ಕಾತುರರಾಗಿದ್ದೀರಾ ಹಾಗೂ ಖುಷಿಯಾಗಿದ್ದೀರಾ ಎಂದು ಗೊತ್ತಾಗುತ್ತದೆ. ನಿಮ್ಮ ಅಭಿಮಾನ ನನಗೆ ದೊಡ್ಡದ್ದು. ಆದರೆ ಈ ದಿನ ಕೇರಳ ಹಾಗೂ ಕೊಡಗಿನಲ್ಲಿ ಆಗುತ್ತಿರುವುದು ನೋಡುತ್ತಿದ್ದೀರಾ. ಇತಂಹ ಪರಿಸ್ಥಿತಿಯಲ್ಲಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಸರಿಯಲ್ಲ. ಅಲ್ಲದೇ ನಾನು ಹುಟ್ಟುಹಬ್ಬ ಆಚರಿಸಿದರೆ ಅದು ತಪ್ಪಾಗುತ್ತದೆ. ಏಕೆಂದರೆ ಇದು ಸಂಭ್ರಮಾಚರಣೆಯ ಸಮಯವಲ್ಲ, ಸಹಾಯ ಮಾಡುವಂತಹ ಸಮಯ’ ಎಂದು ತಿಳಿಸಿದ್ದಾರೆ.

    `ನನಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯಾವುದೇ ಆಸಕ್ತಿ ಇಲ್ಲ. ನಿಮಗೆ ನಾನು ಸಿಗಲೇ ಬೇಕೆಂದರೆ ನಾನು ನಿಮ್ಮನ್ನು ಭೇಟಿ ಮಾಡುತ್ತೇನೆ. ಆದರೆ ಆ ದಿನದಂದು ನೀವು ಕೇಕ್, ಹೂವಿನ ಹಾರ, ಪಟಾಕಿ ಸಂಭ್ರಮಗಳಿಲ್ಲದೇ ಬಂದು, ಆ ದಿನ ಹಣವನ್ನು ಸಂಗ್ರಹಿಸಿ. ಆ ಹಣವನ್ನು ನೀವು ಕೇರಳ ಹಾಗೂ ಕೊಡಗು ಸಂತ್ರಸ್ತರಿಗೆ ತಲುಪಿಸುವುದಾದರೆ, ನೀವು ಕರೆದ ಜಾಗಕ್ಕೆ ಬಂದು ನಿಮ್ಮ ಜೊತೆ ಮಾತನಾಡಿ, ಫೋಟೋ ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

    `ಡಾಲಿ ಡೇ ದಿನಕ್ಕೆ ನೀವು ಅರ್ಥ ಕೊಡಬೇಕಾದರೆ ನನ್ನನ್ನು ಭೇಟಿ ಮಾಡಬಹುದು. ಆದರೆ ಆ ದಿನ ನಿಮ್ಮ ಕೈಲಾದಷ್ಟು ಅಂದರೆ 5 ರೂ., 10 ರೂ. ನೀಡಬಹುದು. ನನ್ನ ಹುಟ್ಟುಹಬ್ಬಕ್ಕೆ ಕೇಕ್, ಹೂವಿನ ಹಾರ, ಪಟಾಕಿಯಲ್ಲಿ ಹಣ ವ್ಯರ್ಥ ಆಗುವುದರ ಬದಲು ಇತಂಹ ಕೆಲಸಕ್ಕೆ ಉಪಯೋಗಿಸಿಕೊಳ್ಳಿ. ನಿಮ್ಮ ಕೈಲಾದಷ್ಟು ನೀವು ದಾನ ಮಾಡಿ, ನನ್ನ ಕೈಲಾದಷ್ಟು ನಾನು ದಾನ ಮಾಡುತ್ತೇನೆ. ಒಂದು ಅರ್ಥಪೂರ್ಣ ಹುಟ್ಟುಹಬ್ಬವನ್ನು ಆಚರಿಸೋಣ’ ಎಂದು ಧನಂಜಯ್ ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ

    ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಡಾಲಿ ಡೇ ಆಗಿ ಆಚರಿಸಲು ನಿರ್ಧರಿಸಿದ್ದಾರೆ. ಈ ಡಾಲಿ ಡೇಯನ್ನು ಸಾರ್ಥಕವಾಗಿ ಆಚರಿಸಲು ಧನಂಜಯ್ ಅವರ ಅಭಿಮಾನಿ ಬಳಗ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಆಚರಣೆಯ ರೂಪುರೇಷೆ ಏನು ಎಂಬುದನ್ನು ಅಭಿಮಾನಿಗಳು ಗೌಪ್ಯವಾಗಿಟ್ಟಿದ್ದು, ಖುದ್ದು ಧನಂಜಯ್ ಕೂಡಾ ಈ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಗಸ್ಟ್ 23ರಂದು ‘ಡಾಲಿ ಡೇ’!

    ಆಗಸ್ಟ್ 23ರಂದು ‘ಡಾಲಿ ಡೇ’!

    ಬೆಂಗಳೂರು: ಟಗರು ಚಿತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡು ಅವರಿಂದ ಡಾಲಿ ಅಂತಲೇ ಕರೆಸಿಕೊಳ್ಳುತ್ತಿರುವವರು ಧನಂಜಯ್. ಒಂದು ಪಾತ್ರವೇ ಸೃಷ್ಟಿಸಿದ ಅದ್ಭುತಗಳಿಗೆ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಉದಾಹರಣೆಗಳಿವೆ. ಅದಕ್ಕೆ ತಾಜಾ ಉದಾಹರಣೆಯಂತಿರುವ ಡಾಲಿ ಅಭಿಮಾನ ದಕ್ಕಿಸಿಕೊಂಡಿರೋ ಪರಿ ನಿಜಕ್ಕೂ ಅಚ್ಚರಿ!

    ಹೀಗಿರುವಾಗ ಅಭಿಮಾನಿಗಳ ಪಾಲಿಗೆ ಧನಂಜಯ್ ಹುಟ್ಟುಹಬ್ಬ ನಿಜಕ್ಕೂ ಹಬ್ಬವಾಗದಿರಲು ಹೇಗೆ ಸಾಧ್ಯ? ಧನಂಜಯ್ ಹುಟ್ಟಹಬ್ಬವನ್ನು ಈ ಬಾರಿ ರಾಜ್ಯಾದ್ಯಂತ ಡಾಲಿ ಡೇ ಆಗಿ ಆಚರಿಸಲು ಸಮಸ್ತ ಅಭಿಮಾನಿ ಬಳಗ ನಿರ್ಧರಿಸಿದೆ!

     

    ಈ ಡಾಲಿ ಡೇಯನ್ನು ಸಾರ್ಥಕವಾಗಿ ಆಚರಿಸಲು ಧನಂಜಯ್ ಅವರ ಅಭಿಮಾನಿ ಬಳಗ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿದೆ. ಇಂಥಾ ತಯಾರಿಯೊಂದಿಗೆ ಅಭಿಮಾನಿಗಳು ಆಗಸ್ಟ್ 23ಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ ಈ ಡಾಲಿ ಡೇ ಆಚರಣೆಯ ರೂಪುರೇಷೆ ಏನು ಎಂಬುದನ್ನು ಅಭಿಮಾನಿಗಳೆಲ್ಲ ಗೌಪ್ಯವಾಗಿಟ್ಟಿದ್ದಾರೆ. ಖುದ್ದು ಧನಂಜಯ್ ಕೂಡಾ ಈ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ!

    ಧನಂಜಯ್ ಅವರ ಪಾಲಿಗೂ ಈ ಹುಟ್ಟುಹಬ್ಬ ವಿಶೇಷ. ಟಗರು ಚಿತ್ರದಲ್ಲಿ ಡಾಲಿ ಪಾತ್ರ ಮಾಡಿದ ಕ್ಷಣದಿಂದಲೇ ಅವರ ಲಕ್ಕು ಕುದುರಿಕೊಂಡಿದೆ. ಕೈ ತುಂಬಾ ಅವಕಾಶ, ಭರಪೂರವಾದ ಅಭಿಮಾನಗಳಿಂದ ಅವರು ಖುಷಿಗೊಂಡಿದ್ದಾರೆ. ಅಂತೂ ಈ ಬಾರಿ ಡಾಲಿ ಡೇ ಆಗಿ ಆಚರಿಸಲ್ಪಡುತ್ತಿರುವ ಧನಂಜಯ್ ಹುಟ್ಟುಹಬ್ಬದ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ!

  • ರಶ್ಮಿಕಾರ ‘ಇಕಿಂ ಇಕಿಂ ಕಾವಾಲೇ’ ಮೇಲೆ ಧನಂಜಯ್‍ಗೆ ಲವ್!

    ರಶ್ಮಿಕಾರ ‘ಇಕಿಂ ಇಕಿಂ ಕಾವಾಲೇ’ ಮೇಲೆ ಧನಂಜಯ್‍ಗೆ ಲವ್!

    ಬೆಂಗಳೂರು: ಡಾಲಿ ಧನಂಜಯ್ ಅವರಿಗೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರ ಹಾಡಿನ ಮೇಲೆ ಲವ್ ಆಗಿದೆ.

    ರಶ್ಮಿಕಾ ಮಂದಣ್ಣ ಕನ್ನಡ ಹಾಗೂ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ರಶ್ಮಿಕಾ ‘ಗೀತಾ ಗೋವಿದಂ’ ತೆಲುಗು ಚಿತ್ರದ ಲಿರಿಕಲ್ ಹಾಡೊಂದು ಬಿಡುಗಡೆಯಾಗಿದ್ದು, ಈ ಹಾಡು ಸಾಕಷ್ಟು ವೈರಲ್ ಆಗಿದೆ. ರಶ್ಮಿಕಾ ಅವರ ಈ ವೈರಲ್ ಹಾಡು ಧನಂಜಯ್ ಅವರಿಗೆ ಇಷ್ಟವಾಗಿದ್ದು, ಸ್ವತಃ ಧನಂಜಯ್ ಟ್ವೀಟ್ ಮಾಡಿ ರಶ್ಮಿಕಾ ಬಳಿ ಹೇಳಿಕೊಂಡಿದ್ದಾರೆ.

    “ರಶ್ಮಿಕಾ ನನಗೆ ‘ಇಕಿಂ ಇಕಿಂ ಕಾವಾಲೇ’ ಹಾಡಿನ ಮೇಲೆ ಲವ್ ಆಗಿದೆ. ಈ ಹಾಡನ್ನು ನಾನು ಸಾಕಷ್ಟು ಬಾರಿ ರಿಪೀಟ್ ಮೋಡ್‍ನಲ್ಲಿ ಕೇಳುತ್ತಿದ್ದೇನೆ. ನಿಮ್ಮ ‘ಗೀತಾ ಗೋವಿದಂ’ ಚಿತ್ರಕ್ಕೆ ಆಲ್ ದಿ ಬೆಸ್ಟ್” ಎಂದು ಡಾಲಿ ಧನಂಜಯ್ ಟ್ವೀಟ್ ಮಾಡಿದ್ದಾರೆ.

    ಗೀತಾ ಗೋವಿದಂ ಚಿತ್ರದಲ್ಲಿ ರಶ್ಮಿಕಾಗೆ ನಾಯಕನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಹಾಡು ಯೂಟ್ಯೂಬ್‍ನಲ್ಲಿ ಸಾಕಷ್ಟು ಹಿಟ್ ಆಗಿದೆ. ಭಾಷೆ ಗೊತ್ತಿಲ್ಲದವರು ಈ ಹಾಡನ್ನು ಕೇಳಿ ಇಷ್ಟಪಡುತ್ತಿದ್ದಾರೆ. ಸದ್ಯ ಈ ಹಾಡು ಇದುವರೆಗೂ 17.3 ಮಿಲಿಯನ್ ವ್ಯೂ ಪಡೆದಿದೆ. ಇದನ್ನೂ ಓದಿ: ಸಾನ್ವಿ ಟೀಚರ್ ರಶ್ಮಿಕಾ ಮಂದಣ್ಣ ‘ಗೀತಾ ಗೋವಿಂದಂ’ ಟೀಸರ್ ಸೂಪರ್ ಹಿಟ್!

    ಇತ್ತ ಸಿನಿಮಾದ ಟೀಸರ್ ಬಿಡುಗಡೆಯಾದ 7 ಗಂಟೆಯಲ್ಲಿ 14 ಲಕ್ಷ ವ್ಯೂ ಆಗಿದ್ದು, ನಂ.1 ಟ್ರೆಂಡಿಂಗ್ ನಲ್ಲಿದೆ. ಕನ್ನಡದ ವರನಟ ರಾಜ್ ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ನಾನಿರಲಾರೆ? ಹಾಡಿನ ತೆಲುಗು ಟ್ಯೂನ್ ನೊಂದಿಗೆ ಟೀಸರ್ ಆರಂಭವಾಗುತ್ತದೆ.

    ಸದ್ಯ ಈ ಚಿತ್ರವನ್ನು ಪರುಶರಾಮ್ ನಿರ್ದೇಶನ ಮಾಡಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಲಿರಿಕಲ್ ವಿಡಿಯೋ ಸಾಂಗ್ ಮೂಲಕವೇ ಈ ಹಾಡು ಸಾಕಷ್ಟು ವೈರಲ್ ಆಗಿದೆ. ಸದ್ಯ ಈ ಸಿನಿಮಾ ರಶ್ಮಿಕಾ ಅವರ ಎರಡನೇ ತೆಲುಗು ಸಿನಿಮಾ ಆಗಿದ್ದು, ಇದೇ ಆಗಷ್ಟ್ 15ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

  • ಭೈರವ ಡಾಲಿಗೆ ಸಿಕ್ಕಳು ಗೆಳತಿ ಗೀತಾ!

    ಭೈರವ ಡಾಲಿಗೆ ಸಿಕ್ಕಳು ಗೆಳತಿ ಗೀತಾ!

    – ಧನಂಜಯ್ ತೆಲುಗು ಚಿತ್ರದ ನಾಯಕಿ ಇರಾ

    ಬೆಂಗಳೂರು: ಈಗ ಟಗರು ಡಾಲಿಯ ಅಬ್ಬರ ತೆಲುಗಿನಲ್ಲಿಯೂ ಶುರುವಾಗಿದೆ. ಸೂರಿ ನಿರ್ದೇಶನದ ಟಗರು ಚಿತ್ರದ ಡಾಲಿ ಪಾತ್ರದ ಪ್ರಭಾವದಿಂದಲೇ ಧನಂಜಯ್‍ಗೆ ತೆಲುಗಿನ `ಭೈರವ ಗೀತ’ ಚಿತ್ರದಲ್ಲಿ ನಾಯಕನಾಗಿ ನಟಿಸೋ ಅವಕಾಶ ಒದಗಿ ಬಂದಿದೆ. ಮೊನ್ನೆಯಷ್ಟೇ ಚಿತ್ರೀಕರಣ ಶುರುವಿಟ್ಟುಕೊಂಡಿರೋ ಈ ಚಿತ್ರಕ್ಕೆ ತೆಲುಗು ನಟಿ ಇರಾ ನಾಯಕಿಯಾಗಿ ಆಗಮಿಸಿದ್ದಾಳೆ!

    ಭೈರವನಿಗೆ ಗೀತಾ ಆಗಿ ಜೊತೆಯಾಗಲಿರೋ ಇರಾ, ರಾಮ್ ಗೋಪಾಲ್ ವರ್ಮಾ ಪರಿಚಯಿಸಿದ್ದ ಪ್ರತಿಭೆ. ಆರ್‍ಜಿವಿ ಪ್ರೊಡಕ್ಷನ್ ಚಿತ್ರದ ಮೂಲಕವೇ ನಟಿಯಾಗಿದ್ದ ಇರಾಳನ್ನು ವರ್ಮಾ ಸ್ವತಃ ಈ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ. ವರ್ಮಾ ಮತ್ತು ಭಾಸ್ಕರ್ ಸೇರಿಕೊಂಡು ನಿರ್ಮಾಣ ಮಾಡುತ್ತಿರೋ ಈ ಚಿತ್ರವನ್ನು ಅವರ ಶಿಷ್ಯ ಸಿದ್ಧಾರ್ಥ ನಿರ್ದೇಶನ ಮಾಡುತ್ತಿದ್ದಾರೆ.

    ಆರ್‍ಜಿವಿ ಈ ಹಿಂದೆ ಬೆಂಗಳೂರಿನ ಒರಾಯನ್ ಮಾಲಿಗೆ ಆಗಮಿಸಿ ಟಗರು ಚಿತ್ರ ನೋಡಿದ್ದರು. ಅದರಲ್ಲಿನ ಡಾಲಿ ಪಾತ್ರವನ್ನು ಮತ್ತು ಅದರೆಲ್ಲಿ ನಟಿಸಿದ್ದ ಧನಂಜಯ್‍ನನ್ನು ಮೆಚ್ಚಿಕೊಂಡಿದ್ದ ಆರ್‍ಜಿವಿ ಆ ಕ್ಷಣವೇ ಭೈರವ ಗೀತಾ ಚಿತ್ರಕ್ಕೆ ಮುಹೂರ್ತವಿಟ್ಟಿದ್ದರು. ಈ ಒಂದು ಪಾತ್ರದ ಮೂಲಕವೇ ಧನಂಜಯ್ ನಟನಾ ಚಾತುರ್ಯವನ್ನು ಗಮನಿಸಿರುವ ವರ್ಮಾ ಅದಕ್ಕೆ ತಕ್ಕುದಾದ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.

    ಈಗಾಗಲೇ ಭೈರವ ಗೀತ ಚಿತ್ರದ ಚಿತ್ರೀಕರಣ ಶುರುವಾಗಿದೆ. ಹೈದ್ರಾಬಾದಿನ ಹಳ್ಳಿಯೊಂದರಲ್ಲಿ ಚಿತ್ರ ತಂಡ ಬೀಡು ಬಿಟ್ಟು ಧನಂಜಯ್ ಭಾಗದ ಚಿತ್ರೀಕರಣವನ್ನು ನಡೆಸುತ್ತಿದೆ. ಧನಂಜಯ್ ಲುಂಗಿ ಬನಿಯನ್ನಿನ ರಗಡ್ ಲುಕ್ಕಿನಲ್ಲಿ ಮಿಂಚುತ್ತಿದ್ದಾರೆ. ಇದು ತೆಲುಗಿನಲ್ಲಿ ಧನಂಜಯ್ ಪಾಲಿಗೆ ಮೊದಲ ಚಿತ್ರ. ಈ ಚಿತ್ರದ ಮೊದಲ ದಿನದ ಚಿತ್ರೀಕರಣ ಮೊದಲ ದಿನ ಶಾಲೆಗೆ ಹೋದಂತೆಯೇ ಇತ್ತು ಅಂದಿರುವ ಧನಂಜಯ್ ಈ ಚಿತ್ರದ ಮೂಲಕ ತೆಲುಗಿನಲ್ಲಿಯೂ ನೆಲೆ ಕಂಡುಕೊಳ್ಳುವ ಲಕ್ಷಣಗಳಿದ್ದಾವೆ!

  • ಶಿವಣ್ಣ-ಗೀತಾ ಜೋಡಿ ನೋಡಿ ಈ ಒಂಟಿ ಬಾಳು ಬೇಕಾ ನಮಗೆ ಅಂದ್ರು ಧನಂಜಯ್!

    ಶಿವಣ್ಣ-ಗೀತಾ ಜೋಡಿ ನೋಡಿ ಈ ಒಂಟಿ ಬಾಳು ಬೇಕಾ ನಮಗೆ ಅಂದ್ರು ಧನಂಜಯ್!

    ಬೆಂಗಳೂರು: ಟಗುರು ಸಿನಿಮಾದಲ್ಲಿ ವಿಲನ್ ಡಾಲಿ ಆಗಿ ಮಿಂಚಿದ್ದ ಧನಂಜಯ್, ಶಿವಣ್ಣ ಹಾಗೂ ಗೀತಾ ಅವರ ಜೋಡಿ ನೋಡಿ ಈ ಒಂಟಿ ಬಾಳು ಬೇಕಾ ನಮಗೆ ಎಂದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಟಗರು ಸಿನಿಮಾ ದೇಶಾದ್ಯಂತ ಯಶಸ್ವಿ ಕಾಣುತ್ತಿದ್ದು, ಈಗ ವಿದೇಶದಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾ ಮಸ್ಕತ್‍ನಲ್ಲಿ ಬಿಡುಗಡೆಯಾಗಿದ್ದು, ಚಿತ್ರತಂಡದ ಸದಸ್ಯರು ಮಸ್ಕತ್‍ಗೆ ಭೇಟಿ ನೀಡಿದ್ದಾರೆ.

    ಟಗರು ಚಿತ್ರತಂಡ ಜೊತೆಗೆ ಶಿವರಾಜ್‍ಕುಮಾರ್ ಅವರ ಪತ್ನಿ ಗೀತಾ ಕೂಡ ಸಾಥ್ ನೀಡಿದ್ದಾರೆ. ಈ ವೇಳೆ ಮಸ್ಕತ್‍ನಲ್ಲಿ ಲವ್ ಎಂದಿರುವ ಜಾಗದಲ್ಲಿ ಶಿವರಾಜ್‍ಕುಮಾರ್ ತಮ್ಮ ಪತ್ನಿ ಗೀತಾ ಜೊತೆ ಫೋಟೋಗೆ ಪೋಸ್ ನೀಡಿದ್ದರು.

    Ee ಒಂಟಿ ಬಾಳು ಬೇಕಾ ನಮಗೆ????????

    A post shared by Dhananjaya (@dhananjaya_ka) on

    ಈ ಫೋಟೋವನ್ನು ಧನಂಜಯ್ ತಮ್ಮ ಫೋಟೋ ಜೊತೆ ಒಂದೇ ಫೋಟೋವನ್ನಾಗಿ ಮಾಡಿ ಅದನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಆ ಫೋಟೋಗೆ ‘ಈ ಒಂಟಿ ಬಾಳು ಬೇಕಾ ನಮಗೆ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

    ಸದ್ಯ ಈ ಫೋಟೋಗೆ ಅಭಿಮಾನಿಗಳು ಪ್ರತಿಕ್ರಿಯಿಸಿ ಬೇಗ ಮದುವೆ ಆಗಿ ಡಾಲಿ ಎಂದು ಧನಂಜಯ್ ಅವರಿಗೆ ಸಲಹೆ ನೀಡುತ್ತಿದ್ದಾರೆ. ಇನ್ನೂ ಕೆಲವರು ಮದುವೆ ಬದಲು ಸಿಂಗಲ್ ಆಗಿ ಇರುವುದೇ ಬೆಸ್ಟ್ ಎಂದು ಕಮೆಂಟ್ ಮಾಡಿದ್ದಾರೆ.

    Set for the premier at Muscat????#Tagaru

    A post shared by Dhananjaya (@dhananjaya_ka) on

    Traveling to Dubai #tagaru #premier With Shivanna, Geethakka, Sreekanth and family:)

    A post shared by Dhananjaya (@dhananjaya_ka) on

  • SSLC ಟಾಪರ್ ಆಗಿದ್ದ ಹುಡ್ಗ, ಇಂದು ಸ್ಯಾಂಡಲ್‍ ವುಡ್ ನ ಟಾಪ್ ರೌಡಿ

    SSLC ಟಾಪರ್ ಆಗಿದ್ದ ಹುಡ್ಗ, ಇಂದು ಸ್ಯಾಂಡಲ್‍ ವುಡ್ ನ ಟಾಪ್ ರೌಡಿ

    ಬೆಂಗಳೂರು: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದ ಹುಡುಗ ಇಂದು ಸ್ಯಾಂಡಲ್ ವುಡ್ ನ ಟಾಪ್ ಖಳನಟನಾಗಿ ಮಿಂಚುತ್ತಿದ್ದಾರೆ.

    ಟಗರು ಸಿನಿಮಾದ ಯಶಸ್ವಿನ ಗುಂಗಿನಲ್ಲಿರುವ, ಚಿತ್ರದ ಡಾಲಿ ಪಾತ್ರದ ಮೂಲಕವೇ ಧನಂಜಯ್ ಗುರುತಿಸಿಕೊಳ್ಳುತ್ತಿದ್ದಾರೆ. ನಟ ಧನಂಜಯ್ ಅಂದು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದರು. ಇಂದು ಟಗರು ಸಿನಿಮಾದಲ್ಲಿ ಡಾಲಿ ಪಾತ್ರದಲ್ಲಿ ರೌಡಿಯಾಗಿ ಮಿಂಚಿದ್ದಾರೆ.

    ಅರಸೀಕೆರೆ ತಾಲೂಕಿನ ಸೆಂಟ್ ಮೇರಿಸ್ ಪ್ರೌಢಶಾಲೆಯಲ್ಲಿ ಧನಂಜಯ್ ಓದಿದ್ದರು. ಅಂದು ಧನಂಜಯ್ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆಯಲ್ಲಿ 95.32% ಅಂಕಗಳನ್ನು ಪಡೆದುಕೊಂಡು ಟಾಪರ್ ಆಗಿದ್ದರು. ಟಾಪರ್ ಆಗಿದ್ದರಿಂದ ಧನಂಜಯ್ ಅವರ ಫೋಟೋ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಡೈರೆಕ್ಟರ್ ಸ್ಪೆಷಲ್, ಬಾಕ್ಸ್ ರ್, ರಾಟೆ ಮತ್ತು 2016 ರಲ್ಲಿ ಬಿಡುಗಡೆಗೊಂಡ ಪವನ್ ಒಡೆಯರ್ ನಿರ್ದೇಶನದ `ಜೆಸ್ಸಿ’ ಸಿನಿಮಾದಲ್ಲಿ ಹೀರೋ ಆಗಿ ಅಭಿನಯಿಸಿದ್ದಾರೆ.

    ಇಲ್ಲಿಯವರೆಗೆ ಹೀರೋ ಪಾತ್ರ ಮಾಡುತ್ತಿದ್ದ ನಟ ಧನಂಜಯ್ ಸೂರಿ ನಿರ್ದೇಶನದ ಟಗರು ಸಿನಿಮಾದಲ್ಲಿ ಮೊದಲ ಬಾರಿಗೆ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ನನ್ನ ವೃತ್ತಿ ಜೀವನದಲ್ಲಿ ಇದು ಹೊಸ ಆರಂಭವಾಗಿದೆ. ನಾನು ಎಲ್ಲೇ ಹೋದರೂ ಇದೀಗ ಡಾಲಿ ಅಂತಲೇ ಅಭಿಮಾನಿಗಳು ಕರೆಯುತ್ತಿದ್ದಾರೆ. ಅಭಿಮಾನಿಗಳ ರೆಸ್ಪಾನ್ಸ್ ಗೆ ಸಖತ್ ಖುಷಿಯಾಗುತ್ತಿದೆ. ಅಲ್ಲದೇ ಶಿವಣ್ಣನ ಜೊತೆ ನಟನೆ ಮಾಡಿರೋದು ತುಂಬಾ ಸಂತಸ ನೀಡಿದೆ ಎಂದು ಎಂದು ಧನಂಜಯ್ ಹೇಳಿದ್ದರು.

    ಟಗರಿನ ಡಾಲಿ ನಂತರ ದರ್ಶನ್ ಅವರ ಮುಂದಿನ ಚಿತ್ರ ಯಜಮಾನದಲ್ಲಿ ಕೂಡ ಧನಂಜಯ್ ನೆಗೆಟಿವ್ ಪಾತ್ರ ಮಾಡುತ್ತಿದ್ದಾರೆ. ಇದು ಮತ್ತೊಂದು ಕುತೂಹಲಕಾರಿ ಪಾತ್ರವಾಗಿದ್ದು ದರ್ಶನ್ ಅವರ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ.

  • ಚಿಕ್ಕಮಗಳೂರಿನಲ್ಲಿ ಟಗರು ಶಿವ, ಡಾಲಿ ಹವಾ- ಡ್ರಮ್ ಸೆಟ್ ಬಾರಿಸಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

    ಚಿಕ್ಕಮಗಳೂರಿನಲ್ಲಿ ಟಗರು ಶಿವ, ಡಾಲಿ ಹವಾ- ಡ್ರಮ್ ಸೆಟ್ ಬಾರಿಸಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು

    ಚಿಕ್ಕಮಗಳೂರು: ಟಗರು ಚಿತ್ರದ ಪ್ರಮೋಷನ್‍ಗಾಗಿ ನಟ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಭಾನುವಾರ ಚಿಕ್ಕಮಗಳೂರಿಗೆ ಭೇಟಿ ನೀಡಿದರು.

    ಭಾನುವಾರ ಸಂಜೆ 4 ಗಂಟೆಗೆ ಬಂದ ಶಿವಣ್ಣ ಹಾಗೂ ಧನಂಜಯ್ ಆಜಾದ್ ಪಾರ್ಕ್ ವೃತ್ತದಿಂದ ರೋಡ್ ಶೋ ಮೂಲಕ ಮಿಲನ ಚಿತ್ರಮಂದಿರಕ್ಕೆ ಆಗಮಿಸಿದರು. ಶಿವರಾಜ್ ಕುಮಾರ್ ಬರುತ್ತಾರೆಂದು ಅಭಿಮಾನಿಗಳು ಮೂರು ಗಂಟೆಯಿಂದಲೇ ಆಜಾದ್ ಪಾರ್ಕ್ ವೃತ್ತದಲ್ಲಿ ಡ್ರಮ್ ಸೆಟ್ ಬಾರಿಸಿಕೊಂಡು ಕುಣಿದು ಕುಪ್ಪಳಿಸಿದರು.

    ಶಿವಣ್ಣ ಬರುತ್ತಿದ್ದಂತೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದಿದ್ದು, ತೆರೆದ ವಾಹನದ ಮೇಲೆಯೇ ಹತ್ತಿ ಸೆಲ್ಫಿ ತೆಗೆದುಕೊಂಡರು. ಶಿವಣ್ಣ ಥಿಯೇಟರ್ ಬಳಿ ಆಗಮಿಸುತ್ತಿದ್ದಂತೆ ನೂರಾರು ಯುವಕರು ಕುಣಿದು ಕುಪ್ಪಳಿಸಿದರು. ಶಿವಣ್ಣ ಜೊತೆಯೇ ಟಾಕೀಸ್ ಪ್ರವೇಶಿಸಲು ಯತ್ನಿಸಿದ ಅಭಿಮಾನಿಗಳನ್ನು ನಿಯಂತ್ರಿಸೋದಕ್ಕೆ ಪೊಲೀಸರು ಹರಸಾಹಸಪಟ್ಟರು.

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಹಿಟ್ ಆಗಿದ್ದು, ಈ ಹಿಂದೆ ಶಿವಮೊಗ್ಗದಲ್ಲಿ ಟಗರು ವಿಜಯೋತ್ಸವ ಮೆರವಣಿಗೆ ಮಾಡಿದ್ದರು.

    ಟಗರು ವಿಜಯೋತ್ಸವದಲ್ಲಿ ಡಾ. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಚಿಟ್ಟೆ ವಶಿಷ್ಟ ಭಾಗಿಯಾಗಿದ್ದು, ಶಿವಪ್ಪನಾಯಕನ ಪ್ರತಿಮಗೆ ಹೂವಿನ ಹಾರ ಹಾಕಿ ನಹೆರು ರಸ್ತೆಯಲ್ಲಿ ರೋಡ್ ಶೋ ನಡೆಸಿದ್ದರು.

    ಶಿವರಾಜ್ ಕುಮಾರ್ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್, ಧನಂಜಯ್ ಹಾಗೂ ವಶಿಷ್ಟ ಅವರನ್ನು ನೋಡಿ ಕಣ್ತುಂಬಿಕೊಂಡು ಹರ್ಷೋದ್ಗಾರ ವ್ಯಕ್ತಪಡಿಸಿ, ಜಯ ಘೋಷ ಕೂಗಿದ್ದರು.

  • ಶಿವಮೊಗ್ಗದಲ್ಲಿ ಟಗರು ವಿಜಯೋತ್ಸವ- ಡಾ. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಚಿಟ್ಟೆ ವಶಿಷ್ಟ ಭಾಗಿ

    ಶಿವಮೊಗ್ಗದಲ್ಲಿ ಟಗರು ವಿಜಯೋತ್ಸವ- ಡಾ. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಚಿಟ್ಟೆ ವಶಿಷ್ಟ ಭಾಗಿ

    ಶಿವಮೊಗ್ಗ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರ ಹಿಟ್ ಆಗಿದ್ದು, ಶಿವಮೊಗ್ಗದಲ್ಲಿ ಟಗರು ವಿಜಯೋತ್ಸವ ಮೆರವಣಿಗೆ ಮಾಡಿದ್ದಾರೆ.

    ಟಗರು ವಿಜಯೋತ್ಸವದಲ್ಲಿ ಡಾ. ಶಿವರಾಜ್ ಕುಮಾರ್, ಡಾಲಿ ಧನಂಜಯ್, ಚಿಟ್ಟೆ ವಶಿಷ್ಟ ಭಾಗಿಯಾಗಿದ್ದು, ಶಿವಪ್ಪನಾಯಕನ ಪ್ರತಿಮಗೆ ಹೂವಿನ ಹಾರ ಹಾಕಿ ನಹೆರು ರಸ್ತೆಯಲ್ಲಿ ರೋಡ್ ಶೋ ನಡೆಸಿದರು.

    ಶಿವರಾಜ್ ಕುಮಾರ್ ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಅಭಿಮಾನಿಗಳು ತಮ್ಮ ನೆಚ್ಚಿನ ನಟ ಶಿವರಾಜ್ ಕುಮಾರ್, ಧನಂಜಯ್ ಹಾಗೂ ವಶಿಷ್ಟ ಅವರನ್ನು ನೋಡಿ ಕಣ್ತುಂಬಿಕೊಂಡು ಹರ್ಷೋದ್ಗಾರ ವ್ಯಕ್ತಪಡಿಸಿ, ಜಯ ಘೋಷ ಕೂಗಿದರು.

    ಜೋಗಿ ಸಿನಿಮಾದಲ್ಲಿ ನೋಡಿದ ಶಿವಣ್ಣನನ್ನು ಮತ್ತೆ ನೆನಪಿಸುವಂತಹ `ಟಗರು’ ಪಕ್ಕಾ ಮಾಸ್ ಫಿಲಂ ಆಗಿದ್ದು, ಸಿನಿಮಾದಲ್ಲಿ ಶಿವಣ್ಣ ಅವರು ಒಬ್ಬ ಪೊಲೀಸ್ ಅಧಿಕಾರಿಯಾಗಿ ಖಡಕ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ ಸಿನಿಮಾದ ಹೆಸರಿನ ಟಗರಿನಂತೆ ಎಗರಿ ಎಗರಿ ಎದುರಾಳಿಗಳನ್ನು ಸದೆಬಡಿಯುತ್ತಾರೆ.

    ಪೊಲೀಸ್ ಪಾತ್ರ ಸೇರಿದಂತೆ ಹಲವಾರು ಗೆಟಪ್‍ಗಳಲ್ಲಿ ಶಿವಣ್ಣ ಮಿಂಚಿದ್ದರೆ, ಖಳನಾಯಕರ ಪಾತ್ರದಲ್ಲಿ ಧನಂಜಯ್ ಮತ್ತು ವಶಿಷ್ಟ ಸಿಂಹ ಅಭಿನಯಿಸಿದ್ದಾರೆ. ಭಾವನಾ ಮೆನನ್ ಮತ್ತು ಮಾನ್ವಿತಾ ಹರೀಶ್ ನಾಯಕಿಯರಾಗಿ ಅಭಿನಯಿಸಿದ್ದಾರೆ.

    ಸದ್ಯ ಟಗರು ಚಿತ್ರ ಕರ್ನಾಟಕದಾದ್ಯಂತ ಯಶಸ್ವಿಯಾಗಿದ್ದು, ಈಗ ವಿದೇಶದಲ್ಲೂ ರಾರಾಜಿಸುತ್ತಿದೆ. ಅಮೆರಿಕದ ಚಿಕಾಗೋ, ಫಿಲಡೆಲ್ಫಿಯ ಸೇರಿದಂತೆ 25ಕ್ಕೂ ಹೆಚ್ಚು ಕಡೆ ಸಿನಿಮಾ ಬಿಡುಗಡೆಯಾಗಿದೆ.