ಬೆಂಗಳೂರು: ರಾಜಗುರು ದ್ವಾರಕನಾಥ್ ಗುರೂಜಿ ಮಾತು ಕೇಳಿದ ಸಿಎಂ ಹೆಚ್.ಡಿ ಕುಮಾರಸ್ವಾಮಿ ಫುಲ್ ಟೆನ್ಷನ್ ಆಗಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬರದ ಛಾಯೆ ಕಾಣಿಸಲಿದೆ ಎಂದು ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಅವಧಿಯಲ್ಲಿ ಬರದ ಕಪ್ಪು ಚುಕ್ಕೆ ತಪ್ಪಿಸಲು ಸಿಎಂಗೆ ರಾಜಗುರು ಸಲಹೆಯೊಂದನ್ನು ನೀಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಗುರೂಜಿ, ಈ ವರ್ಷ ಮಳೆಯ ಅಭಾವ ಕಾಡಲಿದೆ. ಹನಿ ನೀರಿಗೂ ಕಷ್ಟಪಡುವ ಪರಿಸ್ಥಿತಿ ಎದುರಾಗುವ ಸಾಧ್ಯತೆಗಳು ಹೆಚ್ಚಿವೆ. ರಾಜ್ಯ ಈ ವರ್ಷ ಭೀಕರ ಬರಗಾಲಕ್ಕೆ ತುತ್ತಾಗಲಿದೆ ಎಂದು ಗುರೂಜಿ ಹೇಳಿದ್ದಾರೆ. ಬರಗಾಲವನ್ನು ತಪ್ಪಿಸಲು ಸಿಎಂಗೆ ಕೆಲವು ಸಲಹೆ ನೀಡಿದ್ದು, ಶೃಂಗೇರಿ ಋಷ್ಯಶೃಂಗದಲ್ಲಿ ಮಹಾ ಪೂಜೆ ಕೈಗೊಳ್ಳಲು ಸೂಚಿಸಿರುವುದಾಗಿ ಹೇಳಿದರು.
ಶೃಂಗೇರಿ ಜೊತೆ ರಾಜ್ಯದ ಎಲ್ಲ ಮುಜರಾಯಿ ದೇಗುಲದಲ್ಲಿ ಈಗಿನಿಂದಲೇ ವಿಶೇಷ ವರುಣನ ಪೂಜೆ ಆರಂಭಿಸಬೇಕು. ಈಶ್ವರ ದೇಗುಲದಲ್ಲಿ ಶತರುದ್ರಾಭಿಷೇಕ ನಡೆಸಬೇಕೆಂದು ರಾಜಗುರುಗಳು ಸೂಚಿಸಿದ್ದಾರೆ. ರಾಜ್ಯದಲ್ಲೂ ಕಲಹ, ರಾಜಕೀಯದ ವೈಷಮ್ಯದಿಂದಾಗಿ ವಿಕೃತಿ ಮನೋಭಾವ ಬಂದಿದೆ. ಇದೆಲ್ಲದರ ನಿವಾರಣೆಗಾಗಿ ದೇವರ ಪೂಜೆ ನಡೆಸಬೇಕೆಂದು ತಿಳಿಸಿರುವುದಾಗಿ ಅವರು ಹೇಳಿದರು.
ರಾಯಚೂರು: ಗುರು ಬದಲಾವಣೆಯಿಂದ ಡಿಸೆಂಬರ್ 19ರ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹಾ ಬದಲಾವಣೆಯಾಗಲಿದೆ ಅಂತ ರಾಜಗುರು ಬೆಳ್ಳೂರು ಶಂಕರನಾರಾಯಣ ದ್ವಾರಕನಾಥ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಸಿಎಂ ಕುಮಾರಸ್ವಾಮಿ ಗೆ ಗುರು ಬದಲಾವಣೆಯಿಂದ ಬಾರಿ ಕಂಟಕ ಕಾದಿದ್ದು ಮುಂದಿನದ್ದು ಮುಳ್ಳಿನ ಹಾದಿ ಅಂತ ಗುರೂಜಿ ಹೇಳಿದ್ದಾರೆ. ಮಾರ್ಚ್ 27 ರವರೆಗೆ ಸಿಎಂ ತುಂಬಾ ಎಚ್ಚರವಾಗಿರಲೇ ಬೇಕು. ಇಲ್ಲದಿದ್ದರೇ ಭಾರೀ ಬದಲಾವಣೆಯಾಗುವ ಸಾಧ್ಯತೆಯಿದೆ. ಕುಮಾರಸ್ವಾಮಿ ಮಾತಿನ ಮೇಲೆ ನಿಗಾ ಇರಬೇಕು. ಎಲ್ಲದಕ್ಕೂ ಪ್ರತಿಕ್ರಿಯಿಸುತ್ತಾ ಹೋದರೆ ಸಿಎಂ ಖುರ್ಚಿಗೆ ಕಂಟಕ. ಉತ್ತಮ ಕುಟುಂಬದಿಂದ ಬಂದಿರುವ ಕುಮಾರಸ್ವಾಮಿಗೆ ಇನ್ನೂ ಶನಿ ಕಂಟಕ ಇದೆ ಅಂತ ಗುರೂಜಿ ಹೇಳಿದ್ದಾರೆ.
ಬಿಎಸ್ವೈ ಸೇಫ್:
ಡಿಸೆಂಬರ್ 19ರ ಬಳಿಕ ಮೋದಿಗೆ ಸಮಯ ಸರಿಯಿಲ್ಲ, ರಾಷ್ಟ್ರ ರಾಜಕಾರಣದಲ್ಲೂ ದೊಡ್ಡ ಬದಲಾವಣೆಯಿದೆ ಅಂತ ಗುರೂಜಿ ಭವಿಷ್ಯ ನುಡಿದಿದ್ದಾರೆ. ಆದ್ರೆ ಯಡಿಯೂರಪ್ಪ ನವರಿಗೆ ಗುರು ಪ್ರಭಾವ ಬೀರಲ್ಲ. ಶನಿ ದೂರವಾಗುತ್ತಿರುವುದರಿಂದ ಬಿಎಸ್ವೈಗೆ ಶಾಂತಿ ಜೀವನ ಲಭಿಸಲಿದೆ. ಡಿಸೆಂಬರ್ 19ರ ಬಳಿಕ ಯಡಿಯೂರಪ್ಪ ನವರ ಚಿಂತೆಗಳು ಕಡಿಮೆಯಾಗುತ್ತವೆ. ಈಗಾಗಲೇ ಸಾಕಷ್ಟು ಕಷ್ಟಗಳನ್ನ ಅನುಭವಿಸಿರುವ ಬಿಎಸ್ವೈ ಗೆ ಉತ್ತಮ ದಿನಗಳು ಎದುರಾಗಲಿವೆ ಎಂದಿದ್ದಾರೆ.
ಡಿಕೆಶಿ ಸಿಎಂ ಆಗೋದು ಪಕ್ಕಾ:
ಶನಿಯ ಕಾಟವೂ ಇಲ್ಲದಿರುವುದರಿಂದ ಗುರು ಬದಲಾವಣೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಹೆಚ್ಚು ಬಲ ತರಲಿದೆ. ಮುಂದೆ ಡಿಕೆಶಿ ಸಿಎಂ ಆಗುವುದರಲ್ಲಿ ಅನುಮಾನವಿಲ್ಲ. ಗುರು ಬಲ ಹೆಚ್ಚುವುದರಿಂದ ಡಿ.ಕೆ.ಶಿವಕುಮಾರ್ ಎಷ್ಟೇ ಕಷ್ಟ ಬಂದರೂ ಎಲ್ಲಾ ಕಷ್ಟ ಎದುರಿಸುತ್ತಾರೆ. ತಮ್ಮ ಮಾತಿನ ಶೈಲಿ, ವರ್ತನೆಯನ್ನು ಅವರು ಬದಲಾಯಿಸಿಕೊಳ್ಳಬೇಕಿದೆ. ಗುರು ಬದಲಾವಣೆ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇದ್ದರೆ ಯಾವ ಕೆಡುಕು ಉಂಟಾಗಲ್ಲ. ಡಿಕೆ ಶಿವಕುಮಾರ್ ಉಚ್ಛ ಸ್ಥಾಯಿಗೆ ಏರುತ್ತಾರೆ ಅನ್ನೋ ನನ್ನ ಮಾತು ಸುಳ್ಳಾಗಲ್ಲ. ಡಿಕೆಶಿ ವಿಚಾರದಲ್ಲಿ ನನ್ನ ಮೇಲೂ ಶೋಧ ನಡೆಯಿತು. ಗುರು ಬಲ ಚೆನ್ನಾಗಿರುವುದರಿಂದ ಎಂದೂ ಕೆಡುಕಾಗಲ್ಲ ಅಂತ ದ್ವಾರಕನಾಥ್ ಗುರೂಜಿ ತಿಳಿಸಿದರು.
ಗುರು ಪ್ರಭಾವ ಏನೆಲ್ಲಾ ಬೀರಿದೆ?
ಗುರು ಬದಲಾವಣೆ ಪರಿಣಾಮವಾಗಿ ಕೆಲ ಸಚಿವರ ವರ್ತನೆ ಬದಲಾಗಿದೆ. ಸಚಿವರು ಅಥವಾ ಕಾಂಗ್ರೆಸ್ ನ ಕೆಲ ಮುಖಂಡರಿಂದ ಸರ್ಕಾರಕ್ಕೆ ತೊಂದರೆಯಿದೆ. ಸಿಎಂ ಕುಮಾರಸ್ವಾಮಿ ತುಂಬಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ ಅಂತ ನಾನು ನೇರವಾಗಿ ಹೇಳುವುದಿಲ್ಲ. ಬದಲಾವಣೆಗಳ ಬಗ್ಗೆ ತುಂಬಾ ಎಚ್ಚರ ವಹಿಸಲೇ ಬೇಕು. ಡಿಸೆಂಬರ್ 19 ರಾಜ್ಯ ರಾಜಕಾರಣದ ಮಹತ್ವದ ದಿನ ಅಂತ ದ್ವಾರಕನಾಥ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರು: ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರು ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಕಲಬುರಗಿ ಸಮೀಪ ಗಾಣಗಾಪುರ ದತ್ತಾತ್ರೇಯ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಹೌದು, ಡಿಕೆಶಿ ಅವರ ಆಪ್ತ ಗುರೂಜಿ ಆಗಿರುವ ದ್ವಾರಕನಾಥ ಗುರೂಜಿ ಸಲಹೆಯ ಮೇರೆಗೆ ಕುಮಾರಸ್ವಾಮಿ ದತ್ತಾತ್ರೇಯ ಪೀಠದಲ್ಲಿ ವಿಶೇಷ ಪೂಜೆ ಮಾಡಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ದ್ವಾರಕನಾಥ ಗುರೂಜಿ, ಇವತ್ತು ಕನ್ಯಾ ಸಂಕ್ರಮಣ. ಇದು ಅತ್ಯಂತ ಶೇಷ್ಠವಾದ ದಿವಸ. ಮುಂದಿನ 15 ದಿವಸ ದೇವರುಗಳಿಗೆ ಉಳಿದ 15 ದಿವಸ ಪಿತೃ ದೇವರುಗಳಿಗೆ ಇರುವುದು. ನಾನು ಯಾರ ಪರವಾಗಿಯೂ ಇಲ್ಲ. ನಾವು ಕೂಡ ಈ ರಾಷ್ಟ್ರದ ಪ್ರಜೆಗಳು. ನಮ್ಮದು ಒಂದು ಕೊಡುಗೆ ಇರಬೇಕು. ರಾಜ್ಯವನ್ನು ರಾಷ್ಟ್ರವನ್ನು ಆಳುವುದಕ್ಕಾಗಿ ಅವತ್ತಿನ ದಿನದಲ್ಲಿ ಶ್ರೀ ಪಾದ ಶ್ರೀ ದತ್ತಾತ್ರೇಯ ಕ್ಷೇತ್ರ ಗಾಣಗಾಪುರಕ್ಕೆ ಹೋಗಿ ದೇವರನ್ನು ಕೇಳಿಕೊಂಡು ಬರಲಿ ಎಂದು ಕುಮಾರಸ್ವಾಮಿ ಅವರಿಗೆ ಒಳ್ಳೆದು ಮಾಡುತ್ತಾರೆ ಅಂತ ಹೇಳಿದ್ದೆ. ಕಾಲಜ್ಞಾನದಲ್ಲಿ ಈ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆಯುವುದು ಅಸಂಭವನೀಯ ಎಂದರು. ಇದನ್ನು ಓದಿ: Exclusive: ಡಿಕೆಶಿ ಗುರು, ಜ್ಯೋತಿಷಿ ದ್ವಾರಕಾನಾಥ್ ಯಾರು? ರಾಜ್ಯದಲ್ಲಿ ಅಷ್ಟೊಂದು ಪ್ರಭಾವಿಯೇ?
ಈಗಾಗಲೇ ಸದ್ಯಕ್ಕೆ ಸಿಎಂ ಕುಮಾರಸ್ವಾಮಿ ಬದಲಾವಣೆ ಸಾಧ್ಯವಿಲ್ಲ. ಅಕ್ಟೋಬರ್ 11 ರವರೆಗೆ ಕುಮಾರಸ್ವಾಮಿಗೆ ಗುರುಬಲ ಚೆನ್ನಾಗಿದೆ. ರವಿ ಬುಧ ಪ್ರವೇಶವಾಗಿದೆ. ರವಿ ಬುಧ ಒಂದೇ ಮನೆಯಲ್ಲಿದ್ದಾರೆ. ಈಗ ರವಿಯದ್ದು ಆದಿತ್ಯ ಬುಧಯೋಗ. ಈ ರೀತಿ ಇದ್ದಾಗ ರಾಜನನ್ನು ಕದಡಿಸುವುದು ಅಷ್ಟು ಸುಲಭವಲ್ಲ ಎಂದು ಹೇಳಿದರು.
ಈ ಹಿಂದೆ ಧರ್ಮಸ್ಥಳ ದೇವಾಲಯಕ್ಕೆ ಪ್ರಧಾನಿ ಮೋದಿ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅರ್ಧಗಂಟೆಯ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದರು. ಆಗ ಕೂಡ ವಾತಾವರಣ ಚೆನ್ನಾಗಿರಲಿಲ್ಲ. ಆಗಲೇ ನಾನು ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಹೇಳಿದ್ದೆ. ಆದರೆ ಮೋದಿ ಧರ್ಮಸ್ಥಳ ಕ್ಷೇತ್ರದ ಮಂಜುನಾಥನ ದರ್ಶನ ಪಡೆದು ದೇವರ ಸ್ವರೂಪಿಯಾದ ವೀರೇಂದ್ರ ಹೆಗಡೆಯವರ ಆರ್ಶೀವಾದ ಪಡೆದರೋ ಎಲ್ಲಾ ಕಡೆ ಗೆಲ್ತಾರೆ ಎಂದು ಹೇಳಿದ್ದೆ. ಹಾಗೆಯೇ ಉತ್ತರ ಭಾರತದ ಎಲ್ಲ ಕಡೆ ಗೆದ್ದಿದ್ದಾರೆ. ಮಹಾ ಪುಣ್ಯಕಾಲ ಇಂತ ಯೋಗದಲ್ಲಿ ದೇವರ ದರ್ಶನ ಮಾಡಿದರೆ ಭಂಗವಂತ ಖಂಡಿತವಾಗಿಯೂ ಕಾಪಾಡುತ್ತಾನೆ ಎಂದರು. ಇದನ್ನು ಓದಿ: ಐಟಿ ದಾಳಿ ಬಳಿಕ ಡಿಕೆಶಿ ಗುರೂಜಿ ದ್ವಾರಕನಾಥ್ ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಹೇಳಿದ್ದೇನು?
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ವೈ ಬಗ್ಗೆ ಕೇಳಲಾದ ಪ್ರಶ್ನೆಗೆ, ಯಡಿಯೂರಪ್ಪನವರು ಆತುರ ಮಾಡಬಾರದು. ಯಡಿಯೂರಪ್ಪ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಜಾಸ್ತಿ ಆತುರ ಇದೆ. ಡಿಕೆಶಿಗೆ ಎದುರಾಗಿರುವ ಸಂಕಷ್ಟ ಬಗೆಹರಿಯಲು ದತ್ತಾತ್ರೇಯ ದೇಗುಲಕ್ಕೆ ಭೇಟಿ ನೀಡಲು ಹೇಳಿದ್ದೆ. ಇದರಿಂದಾಗಿ ಡಿಕೆಶಿಗೆ ಒಂದೊಂದೆ ಸಮಸ್ಯೆ ಬಗೆಹರಿಯುತ್ತಾ ಇದೆ. ಡಿಕೆಶಿ ಮುಂದೊಂದು ದಿನ ಸಿಎಂ ಆಗ್ತಾರೆ ಎಂದು ಈ ವೇಳೆ ಭವಿಷ್ಯ ನುಡಿದರು.
ಹೈದ್ರಾಬಾದ್ ಕರ್ನಾಟಕದಲ್ಲಿ ಈ ಗಾಣಗಪುರ ಕ್ಷೇತ್ರ ಕಲಬುರಗಿಯಲ್ಲಿ ತುಂಬ ಹಿಂದುಳಿದ ಪ್ರದೇಶದಲ್ಲಿದೆ. ತಿಂಗಳುಗಟ್ಟಲೆ ಇಲ್ಲಿರುವ ಅಷ್ಟ ತೀರ್ಥಗಳಲ್ಲಿ ಸ್ನಾನಮಾಡುತ್ತಾರೆ. ಕುಡಿಯುವುದಕ್ಕೂ ನೀರಿಲ್ಲದೇ ಸರಿಯಾದ ವ್ಯವಸ್ಥೆ ಇಲ್ಲ ಎಂದು ಈ ವೇಳೆ ದ್ವಾರಕನಾಥ ಗುರೂಜಿ ತಿಳಿಸಿದರು.