Tag: ದೊರೈ ಭಗವಾನ್

  • ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಿರ್ದೇಶಕ ಭಗವಾನ್ ಅಂತಿಮ ದರ್ಶನಕ್ಕೆ ಸಿದ್ಧತೆ

    ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಿರ್ದೇಶಕ ಭಗವಾನ್ ಅಂತಿಮ ದರ್ಶನಕ್ಕೆ ಸಿದ್ಧತೆ

    ಇಂದು ಬೆಳಗ್ಗೆ ನಿಧನರಾಗಿರುವ ಕನ್ನಡದ ಹೆಸರಾಂತ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (Dorai Bhagavan) ಅವರ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಸಹಕಾರಿ ನಗರದ ಅವರ ನಿವಾಸಕ್ಕೆ ತರಲಾಗಿದೆ. ಕುಟುಂಬಸ್ಥರು ವಿಧಿ ವಿಧಾನ ಮುಗಿಸಿದ ನಂತರ ಅಭಿಮಾನಿಗಳಿಗಾಗಿ ಅಂತಿಮ ದರ್ಶನಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ (Ravindra Kalakshetra) ಮಧ್ಯಾಹ್ನ 12.30ರ  ನಂತರ ವ್ಯವಸ್ಥೆ ಮಾಡಿರುವುದಾಗಿ ಭಗವಾನ್ ಪುತ್ರ ರಿಚ್ಚಿ ತಿಳಿಸಿದ್ದಾರೆ.

    ಶ್ರೀನಿವಾಸ್ ಕೃಷ್ಣ ಅಯ್ಯಂಗಾರ್ ಭಗವಾನ್ ಇವರು ಪೂರ್ಣ ಹೆಸರು. 1933ರಲ್ಲಿ ಮೈಸೂರಿನ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ರಂಗಭೂಮಿ ಹಿನ್ನೆಲೆಯುಳ್ಳವರು. ಕಾಲೇಜು ದಿನಗಳಲ್ಲಿ ರಂಗಭೂಮಿಯ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಂಡವರು. 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು. ಇದನ್ನೂ ಓದಿ: ಸದ್ದಿಲ್ಲದೇ ಆದಿಯೋಗಿ ಶಿವನ ದರ್ಶನ ಪಡೆದ ರಜನಿಕಾಂತ್

    1966ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದವರು. ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರ ನಿರ್ದೇಶಕರಾದವರು. 1993ರಲ್ಲಿ ದೊರೈರಾಜ್ ನಿಧನದ ನಂತರ ಒಂಟಿಯಾದರು ಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ  ನಿರ್ದೇಶನ ಮಾಡಿದೆ.

    ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಅಷ್ಟೂ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೊರೈ-ಭಗವಾನ್ ಜೋಡಿ ಬೆಸೆದದ್ದು ಹೇಗೆ?: ಎಂಟಾಣೆ ಕಥೆ ಹೇಳಿದ ಭಗವಾನ್

    ದೊರೈ-ಭಗವಾನ್ ಜೋಡಿ ಬೆಸೆದದ್ದು ಹೇಗೆ?: ಎಂಟಾಣೆ ಕಥೆ ಹೇಳಿದ ಭಗವಾನ್

    ನ್ನಡ ಸಿನಿಮಾ ರಂಗದ ಹೆಸರಾಂತ ಜೋಡಿಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ದೊರೈ ಭಗವಾನ್ (Bhagavan) ಅವರದ್ದು. ಕನ್ನಡ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆ ಈ ಜೋಡಿಯದ್ದು. ಕನ್ನಡದಲ್ಲಿ ಬಂದ ಮೊದಲ ಬಾಂಡ್ (Bond) ಸಿನಿಮಾಗೆ ಇವರೇ ನಿರ್ದೇಶಕರು. ಈ ಜೋಡಿಯು ಒಂದಾಗಿದ್ದು ಕೇವಲ ಎಂಟಾಣೆ ಮೂಲಕ ಎನ್ನುವುದು ಅಚ್ಚರಿಯ ಸಂಗತಿ. ಆ ಮಾಹಿತಿಯನ್ನು ಸ್ವತಃ ಭಗವಾನ್ ಅವರೇ ಹಂಚಿಕೊಂಡಿದ್ದರು.

    ಅದು ಮದ್ರಾಸಿನ ದಿನಗಳು. ಆಗ ಕನ್ನಡ ಚಿತ್ರರಂಗವೂ ಮುದ್ರಾಸಿನಲ್ಲೇ ನೆಲೆಯೂರಿತ್ತು. ಬಹುತೇಕ ಕನ್ನಡ ಚಿತ್ರಗಳು ಅಲ್ಲಿಯೇ ತಯಾರಾಗುತ್ತಿದ್ದವು. ಹಾಗಾಗಿ  ದೊರೈ ಮತ್ತು ಭಗವಾನ್ ಮೈಸೂರಿನವರಾದರೂ ಮದ್ರಾಸಿನಲ್ಲೇ ಬೀಡು ಬಿಟ್ಟಿದ್ದರು. ಮೊದ ಮೊದಲು ಭಗವಾನ್ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರೆ, ಭಗವಾನ್ ಕ್ಯಾಮೆರಾಮನ್ ಆಗಿದ್ದರು. ಇಬ್ಬರ ಆಸಕ್ತಿಗಳೇ ಅವರನ್ನು ಒಂದಾಗುವಂತೆ ಮಾಡಿದ್ದವು. ಇದನ್ನೂ ಓದಿ: ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ

    ಆಗ ಉದಯಕುಮಾರ್ ನಟನೆಯ ‘ವೀರಪುತ್ರ’ ಸಿನಿಮಾದ ಶೂಟಿಂಗ್ ಸ್ಥಗಿಗೊಂಡಿತ್ತು. ಈ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ಭಗವಾನ್ ಬಳಿ ಊಟಕ್ಕೂ ಹಣವಿರಲಿಲ್ಲ. ಕನ್ನಡದ ಬಹುತೇಕರು ಬರುತ್ತಿದ್ದ ಮದ್ರಾಸಿನ ಹೋಟೆಲ್ ಮುಂದೆ ನಿಂತು, ಅಲ್ಲಿಗೆ ಬರುವ ಕನ್ನಡಿಗರ ಬಳಿ ಸಾಲ ಕೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಭಗವಾನ್. ಇಂತಹ ಸಂದರ್ಭದಲ್ಲೇ ಭಗವಾನ್ ಅವರಿಗೆ ದೊರೈ ಸಿಕ್ಕಿದ್ದು.

    ಎಂದಿನಂತೆ ಹೋಟೆಲ್ ಮುಂದೆ ನಿಂತಿದ್ದ ಭಗವಾನ್, ಯಾರಾದರೂ ಬಂದು ತಮ್ಮ ಹಸಿವು ನೀಗಿಸಬಹುದು ಎಂದುಕೊಂಡು ಕಾಯುತ್ತಿದ್ದರು. ಆಗ ಬಂದವರೇ ದೊರೈ. ಅವರ ಬಳಿ ಒಂದು ರೂಪಾಯಿಯನ್ನು ಕೇಳಿದ್ದರು ಭಗವಾನ್. ತುಂಬಾ ಹಸಿದಿದ್ದ ಭಗವಾನ್ ಕಂಡು ‘ನನ್ನ ಬಳಿ ಒಂದು ರೂಪಾಯಿ ಇಲ್ಲ, ಎಂಟಾಣೆಯಿದೆ ತಗೆದುಕೊ’ ಎಂದು ಎಂಟಾಣೆ ಕೊಟ್ಟು ಹೊರಟು ಬಿಟ್ಟರು ದೊರೈ.

    ಮರುದಿನ ಭಗವಾನ್ ತಂಗಿದ್ದ ರೂಮ್ ಗೆ ಬಂದ ನಿರ್ದೇಶಕ ಜಿ.ವಿ. ಅಯ್ಯರ್ ‘ಊಟಕ್ಕೂ ಗತಿ ಇಲ್ಲದೇ ಇದ್ದೀಯಂತೆ? ಬಾ ನನ್ನ ಜೊತೆ’ ಎಂದು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಅಯ್ಯರ್. ಮುದ್ರಾಸಿನಲ್ಲಿ ಮೊದಲು ಬಾರಿಗೆ ನೆಲೆ ಕಲ್ಪಿಸಿದ್ದು ಅಯ್ಯರ್. ಆದರೆ, ಅಯ್ಯರ್ ಗೆ ಈ ವಿಷಯ ತಿಳಿಸಿದ್ದು ದೊರೈ. ಅಲ್ಲದೇ ಅಯ್ಯರ್ ಕಡೆ ಐವತ್ತು ಪೈಸೆ ಸಾಲ ಪಡೆದುಕೊಂಡು ಊಟಕ್ಕೆ ಬಂದಿದ್ದ ದೊರೈ, ತಾನು ಊಟ ಮಾಡದೇ ಆ ಹಣವನ್ನು ಭಗವಾನ್ ಗೆ ನೀಡಿದ್ದರು. ಅಲ್ಲಿಂದ ಅವರಿಬ್ಬರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು.

    ಜಗಜ್ಯೋತಿ ಬಸವೇಶ್ವರ ಸಿನಿಮಾದಲ್ಲಿ ದೊರೈ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದರೆ, ಭಗವಾನ್ ಅಸೋಸಿಯೇಟ್ ನಿರ್ದೇಶಕ. ಅಲ್ಲಿಂದ ಶುರುವಾದ ಅವರ ಪಯಣ ಮುಂದೆ ದೊಡ್ಡ ದೊಡ್ಡ ಸಿನಿಮಾಗಳನ್ನು ಒಟ್ಟಿಗೆ ನಿರ್ದೇಶನ ಮಾಡುವಂತೆ ಆಯಿತು. ಮುಂದೆ ಮಂತ್ರಾಲಯ ಮಹಾತ್ಮೆ ಸಿನಿಮಾಗೆ ದೊರೈ ಕ್ಯಾಮೆರಾಮನ್, ಭಗವಾನ್ ನಿರ್ದೇಶಕರಾದರು. ಈ ಸಿನಿಮಾಗೆ ಹಣ ಹೂಡಿದ್ದು ಭಗವಾನ್. ಅದಕ್ಕೆ ಧೈರ್ಯ ತುಂಬಿದ್ದು ಇದೇ ದೊರೈ. ಡಾ.ರಾಜ ಕುಮಾರ್ ನಟನೆಯ ಜೇಡರಬಲೆ ಸಿನಿಮಾಗೆ ಇಬ್ಬರೂ ನಿರ್ಮಾಪಕರು. ಹೀಗೆ ಸಾಗಿತ್ತು ಇವರ ಸ್ನೇಹದ ಪಯಣ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕನ್ನಡದ ಹೆಸರಾಂತ ನಿರ್ದೇಶಕ ಎಸ್.ಕೆ. ಭಗವಾನ್ ನಿಧನ

    ಕನ್ನಡದ ಹೆಸರಾಂತ ನಿರ್ದೇಶಕ ಎಸ್.ಕೆ. ಭಗವಾನ್ ನಿಧನ

    ಸ್ಯಾಂಡಲ್ ವುಡ್ ನ ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್ (Dorai Bhagavan) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭಗವಾನ್ (90) ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ (death). ಕನ್ನಡ ಸಿನಿಮಾ ರಂಗದಲ್ಲಿ ದೊರೈ ಭಗವಾನ್ ಎಂದೇ ಜೋಡಿ ಖ್ಯಾತಿಯಾಗಿತ್ತು. ಈಗಾಗಲೇ ದೊರೆ ದೂರವಾಗಿದ್ದಾರೆ. ಅವರನ್ನು ಅರಸಿಕೊಂಡು ಭಗವಾನ್ ಹೊರಟಿದ್ದಾರೆ.

    ಶ್ರೀನಿವಾಸ್ ಕೃಷ್ಣ ಅಯ್ಯಂಗಾರ್ ಭಗವಾನ್ (SK Bhagavan) ಇವರು ಪೂರ್ಣ ಹೆಸರು. 1933ರಲ್ಲಿ ಮೈಸೂರಿನ ತಮಿಳು ಅಯ್ಯಂಗಾರ್ ಕುಟುಂಬದಲ್ಲಿ ಜನಿಸಿದ್ದ ಇವರು, ರಂಗಭೂಮಿ ಹಿನ್ನೆಲೆಯುಳ್ಳವರು. ಕಾಲೇಜು ದಿನಗಳಲ್ಲಿ ರಂಗಭೂಮಿಯ ಸಾಕಷ್ಟು ಚಟುವಟಿಕೆಗಳಲ್ಲಿ ತೊಡಗಿಕೊಂಡವರು. 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದವರು. ಇದನ್ನೂ ಓದಿ:ಟರ್ಕಿ-ಸಿರಿಯಾ ಭೀಕರ ಭೂಕಂಪ: ನೆರವಿಗೆ ನಿಂತ ಸನ್ನಿ ಲಿಯೋನ್

    1966ರಲ್ಲಿ ತೆರೆಕಂಡ ಸಂಧ್ಯಾರಾಗ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ಭಡ್ತಿ ಪಡೆದವರು. ನಂತರ ನಿರ್ದೇಶಕ ದೊರೈರಾಜ್ ಜೊತೆಗೂಡಿ ಸ್ವತಂತ್ರ ನಿರ್ದೇಶಕರಾದವರು. 1993ರಲ್ಲಿ ದೊರೈರಾಜ್ ನಿಧನದ ನಂತರ ಒಂಟಿಯಾದರು ಭಗವಾನ್. ಬರೋಬ್ಬರಿ 49 ಸಿನಿಮಾಗಳನ್ನು ಈ ಜೋಡಿ ನಿರ್ದೇಶನ ಮಾಡಿದ್ದು ವಿಶೇಷ. ಈ ಜೋಡಿಯ ಮತ್ತೊಂದು ದಾಖಲೆಯೆಂದರೆ 24 ಕಾದಂಬರಿ ಆಧರಿಸಿದ ಸಿನಿಮಾಗಳನ್ನು ಈ ಜೋಡಿ  ನಿರ್ದೇಶನ ಮಾಡಿದೆ.

    ಕನ್ನಡದ ಅಷ್ಟೂ ಸೂಪರ್ ಸ್ಟಾರ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ ಹೆಗ್ಗಳಿಕೆ ಈ ಜೋಡಿಯದ್ದು. ಜೇಡರ ಬಲೆ, ಕಸ್ತೂರಿ ನಿವಾಸ, ಎರಡು ಕನಸು, ಬಯಲು ದಾರಿ, ಗಿರಿಕನ್ಯೆ, ಚಂದನದ ಗೊಂಬೆ, ಜೀವನ ಚೈತ್ರ, ಒಡಹುಟ್ಟಿದವರು, ಯಾರಿವನು, ಮುನಿಯನ ಮಾದರಿ ಹೀಗೆ ಅಷ್ಟೂ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k