Tag: ದೊಡ್ಡಪ್ಪ

  • ಚಾಕ್ಲೇಟ್ ಆಸೆ ತೋರಿಸಿ 2 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರಗೈದ ದೊಡ್ಡಪ್ಪ!

    ಚಾಕ್ಲೇಟ್ ಆಸೆ ತೋರಿಸಿ 2 ವರ್ಷದ ಕಂದಮ್ಮನ ಮೇಲೆ ಅತ್ಯಾಚಾರಗೈದ ದೊಡ್ಡಪ್ಪ!

    ರಾಮನಗರ: ಚಾಕ್ಲೇಟ್ ಕೊಡಿಸ್ತೀನೆಂದು ಕರೆದುಕೊಂಡು ಹೋಗಿ 2 ವರ್ಷದ ಪುಟ್ಟ ಕಂದಮ್ಮನ ಮೇಲೆ ಆಕೆಯ ದೊಡ್ಡಪ್ಪನೇ ಅತ್ಯಾಚಾರ ಎಸಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.

    ಆರೋಪಿಯನ್ನು ಸಾದಿರ್ ಪಾಷಾ (28) ಎಂದು ಗುರುತಿಸಲಾಗಿದೆ. ಆರೋಪಿ ಪಾಷಾ ಗುರುವಾರ ಮಧ್ಯಾಹ್ನ ಚಾಕ್ಲೇಟ್ ಕೊಡಿಸುವುದಾಗಿ ಹೇಳಿ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಇತ್ತ ತಡರಾತ್ರಿ ಆದರೂ ಮಗುವನ್ನು ಮನೆಗೆ ಕರೆದುಕೊಂಡು ಬಾರದ ಹಿನ್ನೆಲೆಯಲ್ಲಿ ಮಗುವಿನ ಪೋಷಕರು ಆತಂಕಗೊಂಡಿದ್ದಾರೆ. ಅಲ್ಲದೆ ಮಗುವನ್ನು ಈ ಕೂಡಲೇ ಮನೆಗೆ ಕರೆದುಕೊಂಡು ಬರುವಂತೆ ಹೇಳಿದ್ದಾರೆ.

    ಅಂತೆಯೇ ಪಾಷಾ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಬಾಲಕಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಮಗುವಿನ ಬಟ್ಟೆಯಲ್ಲಿ ರಕ್ತದ ಕಲೆ, ಮೈಮೇಲೆ ಗಾಯಗಳನ್ನು ಕಂಡು ಪೋಷಕರು ಗಾಬರಿಗೊಂಡಿದ್ದಾರೆ. ಕೂಡಲೇ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ತನ್ನನ್ನು ತಾನೇ ಮದುವೆಯಾಗಿ, ಗೋವಾಗೆ ಹನಿಮೂನಿಗೆ ಹೊರಟ ಹುಡುಗಿಗೆ ಈ ಸಿನಿಮಾ ಸ್ಫೂರ್ತಿ?

    ತೀವ್ರ ರಕ್ತ ಸ್ರಾವದಿಂದ ಬಳಲುತ್ತಿದ್ದ ಮಗುವಿಗೆ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಚನ್ನಪಟ್ಟಣ ಪೂರ್ವ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಈ ಸಂಬಂಧ ಬಾಲಕಿ ತಾಯಿ ಮಾತನಾಡಿ, ನನ್ನ ಮಗಳನ್ನ ಚಾಕ್ಲೇಟ್ ಕೊಡಿಸುತ್ತೇನೆಂದು ಕರೆದುಕೊಂಡು ಹೋದರು. ನಮ್ಮ ಬಾವನೆ ಈ ಕೆಲಸ ಮಾಡಿದ್ದಾರೆ. ನಮಗೆ ಬಹಳ ನೋವಾಗ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.

  • ಒನಕೆಯಿಂದ ಹೊಡೆದು ದೊಡ್ಡಪ್ಪನನ್ನೇ ಕೊಲೆಗೈದ!

    ಒನಕೆಯಿಂದ ಹೊಡೆದು ದೊಡ್ಡಪ್ಪನನ್ನೇ ಕೊಲೆಗೈದ!

    ಚಿತ್ರದುರ್ಗ: ಜಮೀನು ವಿವಾದದಿಂದಾಗಿ ಸಹೋದರನ ಮಗನೇ ಮದ್ಯದ ಅಮಲಿನಲ್ಲಿ ತನ್ನ ದೊಡ್ಡಪ್ಪನನ್ನು ಕೊಲೆಗೈದಿರೋ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಆದ್ರಿಕಟ್ಟೆ ಗ್ರಾಮದಲ್ಲಿ ನಡೆದಿದೆ.

    ಹಲವು ವರ್ಷಗಳಿಂದ ಜಮೀನನ್ನು ಪಾಲು ಮಾಡಿ ವೈಯಕ್ತಿಕವಾಗಿ ಭಾಗ ಮಾಡಿಕೊಡುವ ವಿಚಾರದಲ್ಲಿ ಕುಟುಂಬದ ಹಿರಿಯರಾದ ನಾಗಣ್ಣ ಹಾಗು ಆತನ ಸಹೋದರನ ಮಗನಾದ ಲೋಹಿತ್ ನಡುವೆ ಪದೇ ಪದೇ ಕಲಹ ನಡೆಯುತಿತ್ತು. ಇದೇ ವಿಚಾರವಾಗಿ ಮತ್ತೆ ತಗಾದೆ ಶುರುವಾಗಿದ್ದು, ಮದ್ಯಪಾನದ ಅಮಲಿನಲ್ಲಿದ್ದ ಲೋಹಿತ್ ಮಾತಿಗೆ ಮಾತು ಬೆಳೆಸಿ, ತನ್ನ ದೊಡ್ಡಪ್ಪ ಅನ್ನೋದನ್ನು ಲೆಕ್ಕಿಸದೇ ಒನಕೆಯಿಂದ ಬಲವಾಗಿ ಹೊಡೆದಿದ್ದಾನೆ.

    ಪರಿಣಾಮ ತೀವ್ರ ರಕ್ತಸ್ರಾವದಿಂದಾಗಿ ಸುಸ್ತಾದ 60 ವರ್ಷದ ನಾಗಣ್ಣ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಈ ವೇಳೆ ಇವರ ಜಗಳ ಬಿಡಿಸಲು ಹೋದ ಸಂಬಂಧಿ ಕುಮಾರಪ್ಪಗೂ ಕೂಡ ಗಾಯಗಳಾಗಿದ್ದೂ ಹೊಸದುರ್ಗ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತಿದ್ದಾರೆ.

    ಈ ವಿಷಯ ತಿಳಿದ ಹೊಸದುರ್ಗ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಮಾಹಿತಿ ಪಡೆದಿದ್ದಾರೆ. ತಲೆತಪ್ಪಿಸಿಕೊಂಡಿರೋ ಆರೋಪಿ ಲೊಹಿತ್ ನ ಪತ್ತೆಗಾಗಿ ಬಲೆ ಬೀಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೊಡ್ಡಪ್ಪನಿಂದ ಲೈಂಗಿಕ ಕಿರುಕುಳ- ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ, ಎಫ್‍ಐಆರ್ ದಾಖಲು

    ದೊಡ್ಡಪ್ಪನಿಂದ ಲೈಂಗಿಕ ಕಿರುಕುಳ- ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ, ಎಫ್‍ಐಆರ್ ದಾಖಲು

    ದಾವಣಗೆರೆ: ದೊಡ್ಡಪ್ಪನೇ ಯುವತಿಗೆ ಲೈಂಗಿಕ ಕಿರುಕುಳ ನೀಡಿರೋ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ಚಿಕ್ಕ ವಯಸ್ಸಿನಲ್ಲೇ ತಂದೆ- ತಾಯಿಯನ್ನು ಕಳೆದುಕೊಂಡ ಯುವತಿ ದೊಡ್ಡಪ್ಪನ ಮನೆಯಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದರು. ಕಳೆದ ಮೂರು ವರ್ಷಗಳಿಂದ ಸ್ವಂತ ದೊಡ್ಡಪ್ಪನೇ ಯುವತಿ ಮೇಲೆ ಮಾನಸಿಕವಾಗಿ ಹಾಗೂ ಲೈಂಗಿಕವಾಗಿ ದೌರ್ಜನ್ಯ ಎಸಗುತ್ತಿದ್ದರು.

    ದೊಡ್ಡಪ್ಪನ ವರ್ತನೆಯಿಂದ ಬೇಸತ್ತು ಯುವತಿ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಮುಂದಾಗಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದರು. ಯುವತಿಯ ದೊಡ್ಡಪ್ಪ ಸಿ.ವಿ ಪ್ರಭಾಕರ್ ಬೀಜ ನಿಗಮದ ಅಧಿಕಾರಿಯಾಗಿ ದಾವಣಗೆರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

    ಸಿ.ವಿ ಪ್ರಭಾಕರ್ ಪ್ರತಿನಿತ್ಯ ಯುವತಿಗೆ ಕಿರುಕುಳ ನೀಡುತ್ತಿದ್ದು, ನೊಂದ ಯುವತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ. ಸಿ.ವಿ ಪ್ರಭಾಕರ್ ವಿರುದ್ಧ ಐಪಿಸಿ ಸೆಕ್ಷನ್ 376ರ ಅನ್ವಯ ಕೇಸ್ ದಾಖಲಾಗಿದೆ.

    ಸದ್ಯ ಆರೋಪಿ ಪ್ರಭಾಕರ್ ಬಂಧನದ ಭೀತಿಯಲ್ಲಿದ್ದು, ಯುವತಿ ಸರ್ಕಾರಿ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಲಿದ್ದಾರೆ. ಯುವತಿಗೆ ಬೆಂಬಲಕ್ಕೆ ಸ್ಥಳೀಯರು ನಿಂತಿದ್ದಾರೆ.

  • 500 ರೂಪಾಯಿ ಕೊಡಲಿಲ್ಲವೆಂದು ಸ್ವಂತ ದೊಡ್ಡಪ್ಪನನ್ನೇ ಕೊಂದ!

    500 ರೂಪಾಯಿ ಕೊಡಲಿಲ್ಲವೆಂದು ಸ್ವಂತ ದೊಡ್ಡಪ್ಪನನ್ನೇ ಕೊಂದ!

    ರಾಯಚೂರು: ಚಿಲ್ಲರೆ ಹಣಕ್ಕಾಗಿ ಸ್ವಂತ ದೊಡ್ಡಪ್ಪನನ್ನೇ ಮಗ ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

    ನಗರದ ಕುಲಸುಂಬಿ ಕಾಲೋನಿ ನಿವಾಸಿ, ಜೆಸ್ಕಾಂ ನಿವೃತ್ತ ನೌಕರರಾಗಿದ್ದ 62 ವರ್ಷದ ಚಿಕ್ಕಗಂಗಣ್ಣ ಕೊಲೆಯಾದ ವ್ಯಕ್ತಿ. ಚಿಕ್ಕಗಂಗಣ್ಣ ಅವರ ಶವ ಸೆಪ್ಟಂಬರ್ 11 ರಂದು ರಾಯಚೂರಿನ ರೈಲ್ವೇ ಹಳಿ ಪಕ್ಕದಲ್ಲಿ ಪತ್ತೆಯಾಗಿತ್ತು. ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಮೃತ ದೇಹಕ್ಕೆ ಬೆಂಕಿ ಹಚ್ಚಿ ಸುಡಲಾಗಿತ್ತು. ಚಿಕ್ಕಗಂಗಣ್ಣ ಮನೆಯಿಂದ ಕಾಣೆಯಾಗಿ ಮೂರುದಿನ ಬಳಿಕ ಕೊಳೆತ ಶವವಾಗಿ ಪತ್ತೆಯಾಗಿದ್ದರು.

    ಚಿಕ್ಕಗಂಗಣ್ಣ ಮನೆಯವರ ಮಾಹಿತಿ ಆಧಾರದ ಮೇರೆಗೆ ತನಿಖೆ ಆರಂಭಿಸಿ ಪಶ್ಚಿಮ ಠಾಣೆ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ಚಿಕ್ಕಗಂಗಣ್ಣ ಸಹೋದರನ ಪುತ್ರ ಯಲ್ಲಪ್ಪ ಹಾಗೂ ಅವನ ಸ್ನೇಹಿತರಾದ ತಿರುಪತಿ ಹಾಗೂ ಮಹೇಶ್ ಬಂಧಿತ ಆರೋಪಿಗಳು. ಆರೋಪಿಗಳಿಂದ ಎರಡು ಚಿನ್ನದ ಉಂಗುರ ಹಾಗೂ ಕೊರಳಿನ ಸರ ಜಪ್ತಿ ಮಾಡಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

    ಕೊಲೆಗೆ ಕಾರಣವೇನು?: ಗಣೇಶ ಚತುರ್ಥಿಗಾಗಿ 500 ರೂಪಾಯಿ ಹಣ ಕೊಡದ ಹಿನ್ನೆಲೆಯಲ್ಲಿ ಆರೋಪಿ ಯಲ್ಲಪ್ಪ ವಾಕಿಂಗ್‍ಗೆ ತೆರಳಿದ್ದ ಸ್ವಂತ ದೊಡ್ಡಪ್ಪನನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಸ್ನೇಹಿತರ ಸಹಾಯದಿಂದ ಪಬ್ಲಿಕ್ ಗಾರ್ಡನ್ ಹತ್ತಿರ ರೈಲ್ವೇ ಹಳಿ ಬಳಿ ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದ.

    ಈ ಕುರಿತು ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೋರ್ವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.