Tag: ದೇವಾಲಯ

  • ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

    ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

     

    ಬಳ್ಳಾರಿ: ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರು ಬಸವೇಶ್ವರ ರಥೋತ್ಸವ ವೇಳೆಯಲ್ಲಿ ಚಕ್ರದ ಅಚ್ಚು ಮರಿದು ರಥ ಮುಗುಚಿ ಬಿದ್ದಿದೆ.

    ಚಕ್ರದ ಅಚ್ಚು ಮುರಿದು 60 ಅಡಿ ಎತ್ತರದ ರಥ ಬಿದ್ದಿದೆ. ರಥದ ಕೆಳಗೆ 50 ಕ್ಕೂ ಹೆಚ್ಚು ಭಕ್ತಾದಿಗಳು ಸಿಲುಕಿರುವ ಶಂಕೆಯಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

    ರಥದ ಕೆಳಗೆ ಸಿಲುಕಿರುವ ಭಕ್ತಾದಿಗಳನ್ನು ರಕ್ಷಿಸುವ ಕಾರ್ಯ ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಸಾಗಿದೆ. ರಥ ಕೆಳಗೆ ಸಿಲುಕಿರುವ ಭಕ್ತರ ನರಳಾಟ, ಚೀರಾಟ ಜೋರಾಗಿದೆ.

    ಪ್ರತಿ ವರ್ಷ ನಡೆಯುವ ಗುರು ಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಿದ್ದು, ಈ ವರ್ಷವೂ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.

    .

    https://www.youtube.com/watch?v=iwUr8Y0qoQQ

     

     

    https://www.youtube.com/watch?v=oOGOlAPVqEE

     

  • ಈಶ್ವರ ದೇವಾಲಯ ನಿರ್ಮಿಸಲು ಸಹಕರಿಸಿದ್ರು ಮುಸ್ಲಿಮರು: ರಾಯಚೂರಿನಲ್ಲೊಂದು ಭಾವೈಕ್ಯತಾ ಕೇಂದ್ರ

    ಈಶ್ವರ ದೇವಾಲಯ ನಿರ್ಮಿಸಲು ಸಹಕರಿಸಿದ್ರು ಮುಸ್ಲಿಮರು: ರಾಯಚೂರಿನಲ್ಲೊಂದು ಭಾವೈಕ್ಯತಾ ಕೇಂದ್ರ

    ರಾಯಚೂರು: ನಗರದ ಎಚ್.ಆರ್.ಬಿ ಬಡಾವಣೆಯಲ್ಲಿರುವ ಬೃಂದಾವನ ಹೌಸಿಂಗ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾದ ಶ್ರೀ ಅನಂತೇಶ್ವರ ದೇವಾಲಯ ನಿಜಕ್ಕೂ ಹಿಂದೂ-ಮುಸ್ಲಿಂ ಸಂಗಮದ ಕೇಂದ್ರವಾಗಿದೆ.

    ಬಡಾವಣೆಯ ಜನತೆ ಉದ್ಯಾನವನದಲ್ಲಿದ್ದ ಹಳೆಯ ಪುಟ್ಟ ದೇವಾಲಯವನ್ನು ಜೀರ್ಣೊದ್ಧಾರ ಮಾಡಿ ನೂತನ ದೇವಸ್ಥಾನ ನಿರ್ಮಿಸಿದ್ದಾರೆ. ಈ ಕಾಲೋನಿಯಲ್ಲಿ ಸುಮಾರು 215 ಮನೆಗಳಿದ್ದು ಇದರಲ್ಲಿ ಅರ್ಧಕ್ಕೂ ಹೆಚ್ಚು ಮುಸಲ್ಮಾನರೇ ಇದ್ದು, ದೇವಾಲಯ ಪುನರ್ ನಿರ್ಮಾಣಕ್ಕೆ ಹಿಂದೂ ನಿವಾಸಿಗಳು ಮುಂದಾದಾಗ ಮುಸ್ಲಿಮರು ಸಾಥ್ ಕೊಟ್ಟಿದ್ದಾರೆ. ತಮ್ಮ ಕೈಲಾದಷ್ಟು ತನು-ಮನ-ಧನಗಳನ್ನ ಅರ್ಪಿಸಿ ದೇವಾಲಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

    ನಂದಿ, ಆಂಜನೇಯ, ಗಣಪತಿ, ಶೇಷ ದೇವರು, ರುದ್ರದೇವರ ಮೂರ್ತಿಗಳನ್ನು ಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮೂಲಕ ಬೃಂದಾವನ ಹೌಸಿಂಗ್ ಕಾಲೋನಿ ನಿವಾಸಿಗಳ ಸಂಘದಿಂದ ನಗರದಲ್ಲಿ ಹೊಸದೊಂದು ಭಾವೈಕ್ಯತೆಯ ಅಧ್ಯಾಯ ಆರಂಭವಾಗಿದೆ.

    ಉದ್ಯಾನವನದಲ್ಲಿ ದೇವಾಲಯ ನಿರ್ಮಾಣವಾಗಿರುವ ಹಾಗೇ ಮುಸ್ಲಿಂ ಮಕ್ಕಳಿಗಾಗಿ ಮದರಸಾ ಕೂಡ ನಿರ್ಮಿಸಲಾಗಿದೆ. ಅಕ್ಕಪಕ್ಕದಲ್ಲೇ ಮದರಸಾ ಹಾಗೂ ದೇವಾಲಯಗಳಿದ್ದು ಹಿಂದೂ-ಮುಸಲ್ಮಾನರು ನಿಜಕ್ಕೂ ಅಣ್ಣತಮ್ಮಂದಿರಂತೆ ಇಲ್ಲಿ ವಾಸವಾಗಿದ್ದಾರೆ. ಸಂಜೆಯಾದ್ರೆ ಉದ್ಯಾನವನದಲ್ಲಿ ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಕೋಮು ಸೌಹಾರ್ದತೆಯನ್ನು ಕಾಪಾಡಿಕೊಂಡು ಪರಸ್ಪರ ಆಚರಣೆಗಳನ್ನು ಗೌರವಿಸುತ್ತಾ ಬಂದಿದ್ದಾರೆ.

    ನಿಜಾಮರು, ರಜಾಕರ ಆಡಳಿತಕ್ಕೊಳಪಟ್ಟ ರಾಯಚೂರು ಮೊದಲಿನಿಂದಲೂ ಗಲಭೆಗಳಿಂದ ದೂರ ಉಳಿದು ಹಿಂದೂ-ಮುಸ್ಲಿಂರ ಭಾವೈಕ್ಯದ ಕೇಂದ್ರದಂತೆಯೇ ಇದೆ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಎರಡು ಧರ್ಮದವರು ಒಟ್ಟಾಗಿ ದೇವಾಲಯ ನಿರ್ಮಿಸುವ ಮೂಲಕ ಮಾದರಿಯಾಗಿದ್ದಾರೆ.

  • ತೋಮಲ ಸೇವೆ ನೀಡೋದಾಗಿ ಹೇಳಿ ವಂಚನೆ: ತಿರುಪತಿ ದೇವಾಲಯಕ್ಕೆ 3ಲಕ್ಷ ರೂ. ದಂಡ

    ತೋಮಲ ಸೇವೆ ನೀಡೋದಾಗಿ ಹೇಳಿ ವಂಚನೆ: ತಿರುಪತಿ ದೇವಾಲಯಕ್ಕೆ 3ಲಕ್ಷ ರೂ. ದಂಡ

    ಕಲಬುರಗಿ: ಭಕ್ತರಿಗೆ ತೋಮಲ ಸೇವೆ ನೀಡುವುದಾಗಿ ಹೇಳಿ ವಂಚಿಸಿದ್ದ ಆರೋಪದಡಿ ತಿರುಪತಿ ತಿರುಮಲ ಟ್ರಸ್ಟ್‍ಗೆ ದಂಡ ವಿಧಿಸಲಾಗಿದೆ. ಕಲಬುರಗಿ ಜಿಲ್ಲಾ ಗ್ರಾಹಕರ ವೇದಿಕೆ ಮೂರು ಲಕ್ಷ ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

    ಕಲಬುರಗಿ ನಗರದ ವಕೀಲರಾದ ಮದನರಾವ್ ಕಮಲಾಪುರಕರ್ ಅವರು ತಿರುಮಲ ತಿರುಪತಿ ದೇವಾಲಯದಲ್ಲಿ ಕುಟುಂಬದ 12 ಸದಸ್ಯರ ಸಮೇತ ತೋಮಲ ಸೇವೆ ಸಲ್ಲಿಸಲು ಅವಕಾಶ ನೀಡುವಂತೆ ತಲಾ ಒಬ್ಬರಿಗೆ 220 ರೂ. ವಿನಂತೆ ಒಟ್ಟು 2,640 ರೂ. ಡಿಡಿಯನ್ನು 2007ರ ಅಕ್ಟೋಬರ್ 4ರಂದು ದೇವಾಲಯಕ್ಕೆ ನೀಡಿದ್ದರು. ಈ ಡಿಡಿಗೆ ಪ್ರತಿಕ್ರಿಯಿಸಿದ ದೇವಾಲಯ ಆಡಳಿತ ಮಂಡಳಿ, ತಲಾ 3 ಜನರಂತೆ 660 ಮೌಲ್ಯದ ಪ್ರತ್ಯೇಕ ಡಿಡಿ ಪಾವತಿಸುವಂತೆ ತಿಳಿಸಿತ್ತು. ಮದನ್ ರಾವ್ ಅವರು ಈ ಮೊತ್ತವನ್ನು ಡಿಡಿ ಮೂಲಕ ಪಾವತಿಸಿದ್ದರು.

    2007ರ ಅಕ್ಟೋಬರ್ 9ರಂದು ಎರಡು ಸೇವಾ ಟಿಕೆಟ್‍ಗಳನ್ನು ವಿತರಿಸಿದ ದೇವಾಲಯ ಆಡಳಿತ ಮಂಡಳಿ 2015ರ ಫೆಬ್ರವರಿ 11ರಂದು ತೋಮಲ ಸೇವೆ ಮಾಡಬಹುದು ಎಂದು ತಿಳಿಸಿತ್ತು. ಅಷ್ಟೇ ಅಲ್ಲದೇ ಒಂದು ಟಿಕೆಟ್‍ನಲ್ಲಿ ತಲಾ 6 ಮಂದಿ ಪೂಜೆ ಸಲ್ಲಿಸಬಹುದು ಎಂದು ಹೇಳಿತ್ತು. 2015ರ ಫೆಬ್ರುವರಿ 2ರಂದು ಮತ್ತೊಂದು ಪತ್ರವನ್ನು ಕಳುಹಿಸಿದ ಟ್ರಸ್ಟ್ ಒಂದು ಟಿಕೆಟ್ ರದ್ದುಗೊಳಿಸಿ ಒಂದು ಟಿಕೆಟ್ ಮೂಲಕ 6 ಮಂದಿ ತೋಮಲ ಸೇವೆ ಮಾಡಬಹುದು ಎಂದು ತಿಳಿಸಿತ್ತು.

    ಒಂದು ಸೇವಾ ಟಿಕೆಟ್ ರದ್ದು ಪಡಿಸಿದ್ದನ್ನು ಪ್ರಶ್ನಿಸಿ ಮದನರಾವ್ ಅವರು ಜಿಲ್ಲಾ ಗ್ರಾಹಕರ ವೇದಿಕೆಯಲ್ಲಿ ದೂರು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ವೇದಿಕೆ 3 ಲಕ್ಷ ರೂ. ದಂಡ ಮತ್ತು ದೂರುದಾರರಿಗೆ ವಕಾಲತ್ತಿನ ಖರ್ಚು 5 ಸಾವಿರ ರೂಪಾಯಿಯನ್ನು 4 ವಾರದ ಒಳಗಡೆ ಪಾವತಿಸುವಂತೆ ಸೂಚಿಸಿದೆ.