Tag: ದೇವಾನಂದ ಚವ್ಹಾಣ್

  • ಎಂ.ಬಿ ಪಾಟೀಲ್ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಜೆಡಿಎಸ್ ಶಾಸಕ

    ಎಂ.ಬಿ ಪಾಟೀಲ್ ಪ್ರತಿಮೆ ನಿರ್ಮಾಣಕ್ಕೆ ಮುಂದಾದ ಜೆಡಿಎಸ್ ಶಾಸಕ

    ವಿಜಯಪುರ: ರಾಜ್ಯ ಸರ್ಕಾರದ ಗೃಹ ಸಚಿವ ಎಂ.ಬಿ ಪಾಟೀಲ್ ಅವರ ಪ್ರತಿಮೆ ನಿರ್ಮಾಣ ಮಾಡಲು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ್ ಚವ್ಹಾಣ್ ಮುಂದಾಗಿದ್ದಾರೆ.

    ಈ ವಿಚಾರದ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಎಂ.ಬಿ ಪಾಟೀಲ್ ಅವರ ಪ್ರತಿಮೆಯನ್ನು ನಿರ್ಮಿಸಲು ಮುಂದಾಗಿರುವದಾಗಿ ತಿಳಿಸಿದರು.

    ಹಾಲಿ ಗೃಹ ಮಂತ್ರಿ ಆಗಿರುವ ಎಂ.ಬಿ ಪಾಟೀಲ್ ಅವರು ಕಾಂಗ್ರೆಸ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದಾಗ ನಮ್ಮ ಜಿಲ್ಲೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಜೆಡಿಎಸ್ ವರಿಷ್ಠ ದೇವೆಗೌಡರಂತೆ ಅವರು ಕೂಡ ಜಿಲ್ಲೆಯ ಜನರಿಗೆ ನೀರಿನ ಕೊಡುಗೆ ನೀಡಿದ್ದಾರೆ. ಆದ ಕಾರಣ ವೈಯಕ್ತಿಕವಾಗಿ ಸೇರಿದಂತೆ ಸಾರ್ಜನಿಕರ ಸಹಯೋಗದಲ್ಲಿ ಪ್ರತಿಮೆ ಪ್ರತಿಷ್ಠಪನೆಗೆ ನಿರ್ಧರಿಸಿರುವುದಾಗಿ ಶಾಸಕ ದೇವಾನಂದ್ ಚವ್ಹಾಣ್ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.

    ಪೂಜ್ಯ ಶ್ರೀ ಸಿದ್ದೇಶ್ವರ ಅಪ್ಪಾಜಿ ಅವರು ನಮ್ಮ ಜಿಲ್ಲೆಗೆ ನೀರಿನ ವ್ಯವಸ್ಥೆ ಮಾಡಿಕೊಂಡುವಂತೆ ಎಂ.ಬಿ ಪಾಟೀಲ್ ಅವರಿಗೆ ಮನವಿ ಮಾಡಿದ್ದರು. ಅದರಂತೆ ನಮ್ಮ ಜಿಲ್ಲೆಗೆ ಪಾಟೀಲ್ ಅವರು ನೀರಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅದಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಈ ಪ್ರತಿಮೆ ಮಾಡಿಸಲಿದ್ದೇವೆ ಎಂದು ಹೇಳಿದರು

  • ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಭಯೋತ್ಪಾದಕ ಇದ್ದಂತೆ: ದೇವಾನಂದ ಚವ್ಹಾಣ್ ವಾಗ್ದಾಳಿ

    ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಭಯೋತ್ಪಾದಕ ಇದ್ದಂತೆ: ದೇವಾನಂದ ಚವ್ಹಾಣ್ ವಾಗ್ದಾಳಿ

    ವಿಜಯಪುರ: ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಭಯೋತ್ಪಾದಕ ಇದ್ದಂತೆ. ಅವರು ಕ್ಷೇತ್ರದಲ್ಲಿ ಏನೂ ಕೆಲಸ ಮಾಡಿಲ್ಲ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಂಕೇತಿಕವಾಗಿ ಮೈತ್ರಿ ಅಭ್ಯರ್ಥಿ ಸುನಿತಾ ಚವ್ಹಾಣ್ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅವರು, ಅಕ್ಕ-ಕಾಕಾ-ಮಾಮಾ ಎಂದು ರಮೇಶ್ ಜಿಗಜಿಣಗಿ ರಾಜಕಾರಣ ಮಾಡಿದ್ದಾರೆ. ವಿಜಯಪುರಕ್ಕೆ ಅವರ ಕೊಡುಗೆ ಶೂನ್ಯ, ಯಾವುದೇ ಅಭಿವೃದ್ಧಿ ಮಾಡಿಲ್ಲ. ಎರಡು ಬಾರಿ ಅವಕಾಶ ನೀಡಿದರೂ ಪ್ರಯೋಜನ ಆಗಿಲ್ಲ. ಅಭಿವೃದ್ಧಿ ಮಾಡದೇ ಜಿಲ್ಲೆಗೆ ಜಿಗಜಿಣಗಿ ಭಯೋತ್ಪಾದಕ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಅಭಿವೃದ್ಧಿ ಮಾಡದವರು ಭಯೋತ್ಪಾದಕರು ಇದ್ದಂತೆ. ಜನರು ಜಿಗಜಿಣಗಿ ಅವರ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದರು. ಆದ್ರೆ ಅವರು ಜನರಿಗಾಗಿ ಯಾವ ಕೆಲಸ ಕೂಡ ಮಾಡಿಲ್ಲ. ಬಾಯಿ ಮಾತಿನಲ್ಲಿ ಜನರಿಗೆ ಭರವಸೆ ನೀಡಿ ಸುಮ್ಮನಾಗ್ತಾರೆ. ಇದೆಂಥ ರಾಜಕಾರಣ, ಅವರ ಸೋಲನ್ನು ಈಗಾಗಲೇ ಅವರೇ ಒಪ್ಪಿಕೊಂಡಿದ್ದಾರೆ ಎಂದು ದೇವಾನಂದ ಚವ್ಹಾಣ್ ಆಕ್ರೋಶ ಹೊರಹಾಕಿದರು.

  • ಗಂಭೀರ ಸಭೆಯಲ್ಲಿ ಬೇಜವಾಬ್ದಾರಿ ತೋರಿದ ಮಂತ್ರಿಗೆ ಶಾಸಕ ದೇವಾನಂದ ಚವ್ಹಾಣ್ ಕ್ಲಾಸ್!

    ಗಂಭೀರ ಸಭೆಯಲ್ಲಿ ಬೇಜವಾಬ್ದಾರಿ ತೋರಿದ ಮಂತ್ರಿಗೆ ಶಾಸಕ ದೇವಾನಂದ ಚವ್ಹಾಣ್ ಕ್ಲಾಸ್!

    ವಿಜಯಪುರ: ಕೆಡಿಪಿ ಸಭೆಯಲ್ಲಿ ಫೋನಿನಲ್ಲಿ ಹರಟೆ ಹೊಡೆಯುತ್ತಾ ಬೇಜವಾಬ್ದಾರಿ ಪ್ರದರ್ಶಿಸಿದ ಜಿಲ್ಲಾ ಉಸ್ತವಾರಿ ಹಾಗೂ ಕೈಗಾರಿಕಾ ಮಂತ್ರಿ ಎಂ.ಸಿ ಮನಗೋಳಿ ಅವರನ್ನು ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ತರಾಟೆಗೆ ತೆಗೆದುಕೊಂಡಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ತಾವೇ ಸ್ವತಃ ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ ಹಿಡಿದು ಶಾಸಕ ದೇವಾನಂದ್ ಚವ್ಹಾಣ್ ಜನರಿಂದ ಭೇಷ್ ಎನಿಸಿಕೊಂಡಿದ್ದರು. ಈಗ ಸಭೆಯಲ್ಲಿ ಮಂತ್ರಿಗಳನ್ನೇ ತರಾಟೆಗೆ ತೆಗೆದುಕೊಳ್ಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

    ಇಂದು ನಡೆದ ಕೆಡಿಪಿ ಸಭೆಯಲ್ಲಿ ಫೋನಿನಲ್ಲಿ ಹರಟೆ ಹೊಡೆಯುತ್ತಿದ್ದ ವಿಜಯಪುರ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಸಖತ್ ಕ್ಲಾಸ್ ತೆಗೆದುಕೊಳ್ಳುವ ಮೂಲಕ ರೆಬಲ್ ಸ್ಟೈಲ್ ಪ್ರದರ್ಶಿಸಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬರಗಾಲದ ಕುರಿತಾಗಿ ಗಂಭೀರ ಚರ್ಚೆ ನಡೆಯುತ್ತಿತ್ತು. ಈ ವೇಳೆ ಸಚಿವ ಎಂ.ಸಿ ಮನಗೂಳಿ ಫೋನ್ ಸಂಭಾಷಣೆಯಲ್ಲಿ ನಿರತರಾಗಿದ್ದರು. ಇದನ್ನು ಕಂಡು ದೇವಾನಂದ ಅವರು ಸಿಡಿದೆದ್ದರು.

    ಸಭೆಯಲ್ಲಿ ಬರಗಾಲದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಇದಕ್ಕೆ ಪರಿಹಾರ ಹುಡುಕಬೇಕಾದ ನೀವೇ ಫೋನಿನಲ್ಲಿ ಮಾತನಾಡುತ್ತಾ ಕುಳಿತರೆ ಹೇಗೆ ಎಂದು ಸಖತ್ ಕ್ಲಾಸ್ ತೆಗೆದುಕೊಂಡರು. ಒಂದು ಕಡೆಗೆ ಶಾಸಕರೊಬ್ಬರು ಮಂತ್ರಿಗಳನ್ನ ತರಾಟೆಗೆ ತೆಗೆದುಕೊಳ್ಳುತ್ತಿದ್ದರೆ ಇನ್ನೊಂದೆಡೆ ಅಧಿಕಾರಿ ವರ್ಗ ಒಂದು ಕ್ಷಣ ಆಶ್ಚರ್ಯದಿಂದ ನೋಡುತ್ತಾ ಕುಳಿತಿತ್ತು.

    ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ನಾನು ಬರಗಾಲ ಪರಿಹಾರ ಕ್ರಮಕ್ಕಾಗಿ ಡಾಕ್ಯುಮೆಂಟ್ ರೆಡಿಮಾಡಿಕೊಂಡು ಬಂದಿದ್ದರೆ, ನೀವು ಫೋನಿನಲ್ಲಿ ಮಾತನಾಡ್ತಾ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ ಎಂದು ಶಾಸಕ ದೇವಾನಂದ್ ಅವರು ಪ್ರಶ್ನಿಸಿದಾಗ ಸಚಿವರು ತುಟಿಕ್ ಪಿಟಿಕ್ ಎನ್ನದೆ ನಂತರ ಸಭೆ ವಿಚಾರದಲ್ಲಿ ಮಗ್ನರಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv