Tag: ದೇವಸ್ಥಾನ

  • ನಮ್ಗೂ ವಾರದ ರಜೆ ಕೊಡಿ- ಅರ್ಚಕರಿಂದ ಸರ್ಕಾರಕ್ಕೆ ಹೊಸ ಬೇಡಿಕೆ

    ನಮ್ಗೂ ವಾರದ ರಜೆ ಕೊಡಿ- ಅರ್ಚಕರಿಂದ ಸರ್ಕಾರಕ್ಕೆ ಹೊಸ ಬೇಡಿಕೆ

    ಬೆಂಗಳೂರು: ಐಟಿ, ಸರ್ಕಾರಿ, ಕೂಲಿ ಕಾರ್ಮಿಕರು, ಚಾಲಕರೆಲ್ಲ ವಾರದಲ್ಲೊಂದು ದಿನ ರಜಾ ತೆಗೆದುಕೊಂಡು ರೆಸ್ಟ್ ಮಾಡುತ್ತಾರೆ. ಆದರೆ ನಮಗೆ ಯಾಕೆ ರಜೆ ಇಲ್ಲಾ ಎಂದು ಇದೀಗ ದೇವರಿಗೆ ಪೂಜೆ ಮಾಡೋ ಪೂಜಾರಿಗಳು ಕೂಡ ವಾರದ ರಜೆ ಬೇಕು ಎಂದು ಸರ್ಕಾರದ ಮುಂದೆ ಹೊಸ ಮನವಿ ಸಲ್ಲಿಸೋಕೆ ರೆಡಿಯಾಗಿದ್ದಾರೆ.

    ಪೂಜೆ ಜಪ ಹೋಮ ಹವನ ಎಂದು ದೇವಸ್ಥಾನದ ಅರ್ಚಕರು ಫುಲ್ ಟೈಂ ಬ್ಯುಸಿಯಾಗಿರುತ್ತಾರೆ. ಮುಜರಾಯಿ ದೇವಸ್ಥಾನದ ಅರ್ಚಕರು ಈಗ ವಾರದ ಅಷ್ಟು ಹೊತ್ತು ದೇವರ ಪೂಜೆ ಮಾಡಿ ಸುಸ್ತಾಗಿದ್ದಾರೆ ಅನ್ನಿಸುತ್ತಿದೆ. ಎಲ್ಲರೂ ವಾರಕ್ಕೊಂದು ರಜೆ ತಗೋತಾರೆ. ಆದರೆ ನಮಗ್ಯಾಕೆ ವೀಕ್‍ಆಫ್ ಇಲ್ಲ. ವಾರದ ಒಂದಿನ ನಮಗೆ ರಜಾ ಬೇಕೆ ಬೇಕು ಎಂದು ಅರ್ಚಕರ ಸಂಘಕ್ಕೆ ಬಹುತೇಕ ಮುಜರಾಯಿ ಅರ್ಚಕರು ಮನವಿ ಮಾಡಿದ್ದು ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

    ಶ್ರೀಮಂತ ಮುಜರಾಯಿ ದೇಗುಲಕ್ಕೆ ಪರ್ಯಾಯ ಅರ್ಚಕರು ಇರೋದರಿಂದ ಸಮಸ್ಯೆಯಾಗಲ್ಲ. ಆದರೆ ಸಿ ಗ್ರೇಡ್, ಬಿ ಗ್ರೇಡ್ ದೇಗುಲದಲ್ಲಿ ಒಬ್ಬೊಬ್ಬರೇ ಅರ್ಚಕರು ಇರೋದ್ರಿಂದ ಕಷ್ಟವಾಗುತ್ತಿದೆ. ಇದಕ್ಕಾಗಿ ರಜೆಗಾಗಿ ಅರ್ಚಕರು ಸರ್ಕಾರದ ಮೊರೆ ಹೋಗಿದ್ದಾರೆ. ಜೊತೆಗೆ ಸರ್ಕಾರ ಬೇರೆ ಈ ಹಿಂದೆ ನೀವು ರಜೆ ಹಾಕಿರುವ ದಿನ ದೇವಸ್ಥಾನದ ಚಿನ್ನಭಾರಣ, ಹುಂಡಿ ಹಣದ ಜವಾಬ್ದಾರಿಯೂ ನಿಮ್ಮದೇ ಎಂದು ಭಯ ಹುಟ್ಟಿಸಿದ್ದಾರೆ. ಇದಕ್ಕಾಗಿ ಬಹಳಷ್ಟು ಅರ್ಚಕರು ಬೇಸರಗೊಂಡಿದ್ದಾರೆ ಎಂದು ಅರ್ಚಕರ ಸಂಘದ ಅಧ್ಯಕ್ಷ ಶ್ರೀವತ್ಸ ತಿಳಿಸಿದ್ದಾರೆ.

    ಒಟ್ಟಿನಲ್ಲಿ ಎಲ್ಲರೂ ಮಾಡೋದು ಹೊಟ್ಟೆಗಾಗಿಯೇ. ಹೀಗಾಗಿ ದೇವರ ಪೂಜೆಯೂ ಒಂದು ಕೆಲಸವೇ ಆಗಿದೆ. ನಮಗೆ ರಜೆ ಬೇಕು ಎಂದು ಅರ್ಚಕರ ಹೊಸ ಬೇಡಿಕೆನಾ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

  • ದಕ್ಷಿಣ ಕನ್ನಡದ ಪುಣ್ಯಕ್ಷೇತ್ರಗಳಿಗೆ ನಟ ದರ್ಶನ್ ಭೇಟಿ

    ದಕ್ಷಿಣ ಕನ್ನಡದ ಪುಣ್ಯಕ್ಷೇತ್ರಗಳಿಗೆ ನಟ ದರ್ಶನ್ ಭೇಟಿ

    ಮಂಗಳೂರು: ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ದರ್ಶನ್ ಅವರು ಪುತ್ತೂರಿನ ಸ್ನೇಹಿತರೊಬ್ಬರ ಗೃಹಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದರು. ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ದರ್ಶನ್ ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

    ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸೌತಡ್ಕ ಹಾಗೂ ಧರ್ಮಸ್ಥಳ ದೇವಸ್ಥಾನಕ್ಕೆ ಭೇಟಿ ಕೊಟ್ಟ ಬಳಿಕ ದರ್ಶನ್ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೂ ಭೇಟಿ ನೀಡಿ ಸುಬ್ರಹ್ಮಣ್ಯನ ಅನುಗ್ರಹ ಪಡೆದರು.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಅವರ ಆಪ್ತ ವರ್ಗವೂ ಭಾಗಿಯಾಗಿತ್ತು. ಇದೇ ವೇಳೆ ಅಭಿಮಾನಿಗಳು ನಟ ದರ್ಶನ್ ಅವರನ್ನು ನೋಡಿ ಸಂತಸಪಟ್ಟಿದ್ದಾರೆ.

  • ಚೆಂಡಿನಂತೆ ಊಸರವಳ್ಳಿ ಹಿಡಿದು ಆಟ ಆಡಿದ ಕೋತಿಗಳು

    ಚೆಂಡಿನಂತೆ ಊಸರವಳ್ಳಿ ಹಿಡಿದು ಆಟ ಆಡಿದ ಕೋತಿಗಳು

    ಚಿಕ್ಕಬಳ್ಳಾಪುರ: ಊಸರವಳ್ಳಿ ಹಿಡಿದು ಕೋತಿಗಳು ಚೆಂಡಿನಂತೆ ಆಟ ಆಡಿರುವ ಅಪರೂಪದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ಬಳಿ ನಡೆದಿದೆ.

    ಕೋತಿಗಳು ಊಸರವಳ್ಳಿವನ್ನು ಕ್ರಿಕೆಟ್ ಚೆಂಡಿನಂತೆ ಮನಸ್ಸೋ ಇಚ್ಚೆ ಕೈಯಲ್ಲಿ ಹಿಡಿದು ಅಟ್ಟಾಡಿಸಿದೆ. ಅಲ್ಲದೆ ಬಟ್ಟೆ ಒಗೆದ ರೀತಿಯಲ್ಲಿ ಅದನ್ನು ಬಾರಿಸಿದೆ. ಊಸರವಳ್ಳಿಯನ್ನೆ ತಮ್ಮ ಆಟದ ಚೆಂಡು ಮಾಡಿಕೊಂಡಿದ್ದ ಕೋತಿಗಳ ಕೀಟಲೆ ನೋಡುಗರಿಗೆ ಮನರಂಜನೆ ನೀಡುತ್ತಿತ್ತು. ಕ್ಷಣಕ್ಕೊಂದು ಬಣ್ಣ ಬದಲಾಯಿಸುತ್ತಾ, ತನ್ನ ವಿಷದ ಉಸಿರಾಟದಿಂದಲೇ ಎಲ್ಲರನ್ನು ಭಯಭೀತಿ ಗೊಳಿಸುತ್ತಿದ್ದ ಊಸರವಳ್ಳಿಯೇ ಕೋತಿಗಳ ಕೈಗೆ ಸಿಲುಕಿ ಪ್ರಾಣ ಸಂಕಟದಿಂದ ನರಳಿದೆ.

    ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಗಡಿದಂ ಗ್ರಾಮದ ಬಳಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಬಳಿ ಭಾನುವಾರ ರಜೆ ಎಂದು ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಈ ವೇಳೆ ಐದಾರು ಕೋತಿಗಳ ಹಿಂಡು ಊಸರವಳ್ಳಿಯನ್ನು ಹಿಡಿದು ದೇವಸ್ಥಾನದ ಬಳಿ ಇರುವ ಹೊಂಗೆ ಮರದ ಬಳಿ ಆಟ ಆಡುತ್ತಿದ್ದವು.

    ಒಂದು ಕೋತಿ ಇತ್ತ ಕಡೆಯಿಂದ ಮತ್ತೊಂದು ಕೋತಿ ಅತ್ತ ಕಡೆಯಿಂದ ಚೆಂಡಿನಂತೆ ಊಸರವಳ್ಳಿಯನ್ನು ಹಿಡಿದು ಆಟ ಆಡಿದೆ. ಕೋತಿಗಳ ಕೈಗೆ ಸಿಕ್ಕ ಊಸರವಳ್ಳಿ ರಕ್ಷಣೆಗೆ ಗೀಳಿಡುತ್ತಿದ್ರೆ, ಇತ್ತ ಕೋತಿಗಳು ಸಿಕ್ಕಿದ್ದೆ ಚಾನ್ಸ್ ಎಂದು ಆಟವಾಡಿದೆ.

    https://www.youtube.com/watch?v=-Ml0nl5dvV8

  • ದೇವಸ್ಥಾನದಲ್ಲಿ ಸೀರೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ಮಹಿಳೆ ಸಾವು

    ದೇವಸ್ಥಾನದಲ್ಲಿ ಸೀರೆಗೆ ಬೆಂಕಿ ತಗುಲಿ ಗಾಯಗೊಂಡಿದ್ದ ಮಹಿಳೆ ಸಾವು

    ಹುಬ್ಬಳ್ಳಿ: ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸೀರೆಗೆ ಬೆಂಕಿ ಹೊತ್ತಿಕೊಂಡು ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

    ಛಾಯಾ ನಾಗರಾಜ್ ಚಂದ್ರಶೇಖರಮಠ (49) ಮೃತಪಟ್ಟ ಮಹಿಳೆ ಆಗಿದ್ದು, ಕಳೆದ 1 ವಾರದಿಂದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬೆಂಕಿಯ ಕೆನ್ನಾಲಿಗೆಗೆ ಅವರ ದೇಹ ಶೇ.60 ರಷ್ಟು  ಸುಟ್ಟು ಹೋಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

    ಹುಬ್ಬಳ್ಳಿ ಆದರ್ಶ ನಗರ ನಿವಾಸಿಯಾಗಿದ್ದ ಛಾಯಾ ಅವರು ಜೂನ್ 17 ರಂದು ವಿಶ್ವೇಶ್ವರ ನಗರದ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ದೇವಾಲಯದ ಅವರಣದಲ್ಲಿದ್ದ ದೇವರ ಕಟ್ಟೆಯಲ್ಲಿ ದೀಪ ಬೆಳಗಲು ಮುಂದಾದಾಗ ಬೆಂಕಿ ಏಕಾಏಕಿ ಅವರ ಸೀರೆಗೆ ಹೊತ್ತಿಕೊಂಡಿತ್ತು. ಆಗ ಬೆಂಕಿಯಿಂದ ತಪ್ಪಿಸಿಕೊಳ್ಳಲು ಮಹಿಳೆ ದೇವಸ್ಥಾನದ ಒಳಗೆ ಓಡಿ ಹೋಗಿದ್ದರು. ಘಟನೆಯ ಸಂದರ್ಭದಲ್ಲಿ ಮಹಿಳೆಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದರು ಆ ವೇಳೆಗಾಗಲೇ ಅವರು ಸುಟ್ಟು ಹೋಗಿದ್ದರು.

    ಘಟನೆ ನಡೆದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದರು. ಆ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿತ್ತು. ಘಟನೆಯ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ವಿಡಿಯೋದಲ್ಲೇನಿದೆ?
    ಮಹಿಳೆ ದೇವರಿಗೆ ಕೈ ಮುಗಿದು ಹಿಂದಿರುಗುತ್ತಿದ್ದರು. ಈ ವೇಳೆ ಏಕಾಏಕಿ ಅವರ ಸೀರೆಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಮಹಿಳೆ ಕಿರುಚಾಡುತ್ತಾ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದರು. ಮಹಿಳೆಯ ಚೀರಾಟ ಕೇಳಿದ ಸ್ಥಳದಲ್ಲಿರುವ ತಕ್ಷಣವೇ ಮಹಿಳೆಯ ಬಳಿ ಓಡಿ ಬಂದು, ಕಷ್ಟಪಟ್ಟು ಬೆಂಕಿ ನಂದಿಸಿದ್ದರು. ಬಳಿಕ ಮಹಿಳೆಯನ್ನು ನಗರದ ಆಸ್ಪತ್ರೆಗೆ ದಾಖಲಿಸಿದ್ದರು.

  • ದೇವಸ್ಥಾನದೊಳಗೆ ನುಗ್ಗಿದ ಮೊಸಳೆಗೆ ಜನರಿಂದ ಪೂಜೆ

    ದೇವಸ್ಥಾನದೊಳಗೆ ನುಗ್ಗಿದ ಮೊಸಳೆಗೆ ಜನರಿಂದ ಪೂಜೆ

    ಗಾಂಧಿನಗರ: ದೇವಸ್ಥಾನಕ್ಕೆ ನುಗ್ಗಿದ ಮೊಸಳೆಗೆ ಗ್ರಾಮಸ್ಥರು ಪೂಜೆ ಮಾಡಿದ ಘಟನೆ ಗುಜರಾತ್‍ನ ಕೊಡಿಯಾರ್ ಮಾತಾ ದೇವಾಲಯದಲ್ಲಿ ನಡೆದಿದೆ. ಅಲ್ಲದೆ ಇದು ಶುಭ ಎಂದು ಹೇಳುವ ಮೂಲಕ ಅರಣ್ಯ ಇಲಾಖೆಯ ಕಾರ್ಯಾಚರಣೆಯನ್ನು ವಿಳಂಬಗೊಳಿಸಿದ್ದಾರೆ.

    ರಾಜ್ಯದಲ್ಲಿರುವ ಪಟೇಲ್ ಸಮುದಾಯದರು ಮೊಸಳೆ ಮೇಲೆ ನಿಂತಿರುವ ಕೊಡಿಯಾರ್ ಮಾತೆಯನ್ನು ದೇವತೆಯಾಗಿ ಪೂಜಿಸುತ್ತಾರೆ. ಹೀಗಾಗಿ ಜನರು ಮೊಸಳೆಯನ್ನು ನೋಡುತ್ತಿದ್ದಂತೆ ಪ್ರಾರ್ಥನೆ ಮಾಡಿದ್ದಾರೆ.

    6 ಅಡಿ ಮೊಸಳೆ ದೇವತೆಯ ವಿಗ್ರಹದ ಬಳಿ ಇದ್ದ ಕಾರಣ ಅದಕ್ಕೆ ಆರತಿ ಬೆಳಗಿ ಕುಂಕುಮ ಸಿಂಪಡಿಸಿದ್ದಾರೆ ಎಂದು ಲನ್ವಾದಾ ಅರಣ್ಯ ಇಲಾಖೆ ಅಧಿಕಾರಿ ಆರ್.ವಿ ಪಟೇಲ್ ಹೇಳಿದ್ದಾರೆ. ಇದನ್ನೂ ಓದಿ: ಅನಂತಪದ್ಮನಾಭ ಸ್ವಾಮಿ ದೇವಾಲಯದಲ್ಲಿ ಪ್ರವಚನದ ವೇಳೆ ಮೊಸಳೆ ಪ್ರತ್ಯಕ್ಷ

    ಮೊಸಳೆಯನ್ನು ರಕ್ಷಿಸಲು ಮುಂದಾದಾಗ ಗ್ರಾಮಸ್ಥರು 2 ಗಂಟೆಗಳ ಕಾಲ ತಡ ಮಾಡಿದ್ದಾರೆ. ಅಲ್ಲದೆ ನಮ್ಮ ಸಿಬ್ಬಂದಿ ಮೊಸಳೆಯನ್ನು ಹಿಡಿಯಲು ಹೋದಾಗ ಗ್ರಾಮಸ್ಥರು ಅದಕ್ಕೆ ನಿರಾಕರಿಸಿದ್ದರು. ಬಳಿಕ ಜನರಲ್ಲಿ ಇದ್ದ ಧಾರ್ಮಿಕ ಭಾವನೆಯನ್ನು ನೋಯಿಸಲು ಇಷ್ಟವಿರಲಿಲ್ಲ. ಹಾಗಾಗಿ ಸ್ವಲ್ಪ ಹೊತ್ತು ಕಾದು ನಿಂತು ನಂತರ ಮೊಸಳೆಯನ್ನು ರಕ್ಷಿಸಿ ಕೆರೆಗೆ ಬಿಟ್ಟೇವು ಎಂದು ಆರ್.ಎಂ ಪಾರಮಾರ್ ತಿಳಿಸಿದ್ದಾರೆ.

    ಮಹಿಸಾಗರ ನದಿಯಲ್ಲಿ ಸಾಕಷ್ಟು ಮೊಸಳೆಗಳಿದೆ. ಅದು ತಮ್ಮ ಆಹಾರವನ್ನು ಹುಡುಕುತ್ತಾ 4-5 ಕಿ.ಮೀ ಬರುತ್ತದೆ. ಈ ಮೊಸಳೆಗೆ 4 ವರ್ಷವಾಗಿದ್ದು, ಶನಿವಾರ ರಾತ್ರಿ ದೇವಸ್ಥಾನಕ್ಕೆ ನುಗ್ಗಿರಬಹುದು. ನಾವು ಪ್ರತಿ ವರ್ಷ 30ರಿಂದ 35 ಮೊಸಳೆಯನ್ನು ರಕ್ಷಿಸಿದ್ದೇವೆ ಎಂದು ಪಾರಮಾರ್ ಹೇಳಿದ್ದಾರೆ.

  • 16,356 ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದ ರೆಡ್ಡಿ ಆಪ್ತ

    16,356 ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದ ರೆಡ್ಡಿ ಆಪ್ತ

    ಬಳ್ಳಾರಿ: ನಗರದ ಶಾಸಕ ಸೋಮಶೇಖರ್ ರೆಡ್ಡಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ 16,356 ಮತಗಳಿಂದ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಅವರ ಆಪ್ತ ದೇವರಿಗೆ 16,356 ತೆಂಗಿನಕಾಯಿ ಒಡೆದು ಹರಕೆ ತೀರಿಸಿದ್ದಾರೆ.

    ಇಂದು ಸೋಮಶೇಖರ್ ರೆಡ್ಡಿ ಅವರ 54ನೇ ವರ್ಷದ ಹುಟ್ಟುಹಬ್ಬ. ಹೀಗಾಗಿ ಇಂದು ಜನಾರ್ದನ ರೆಡ್ಡಿ ಹಾಗೂ ಸೋಮಶೇಖರ್ ರೆಡ್ಡಿ ಅವರು ಕೋಟೆ ಮಲ್ಲೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ರೆಡ್ಡಿ ಆಪ್ತ ಪಾಲಣ್ಣ 16,356 ತೆಂಗಿನಕಾಯಿ ಒಡೆದು ಹರಕೆ ಸಲ್ಲಿಕೆ ಮಾಡಿದ್ದಾರೆ.

    ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸೋಮಶೇಖರ್ ರೆಡ್ಡಿ, ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಬಹುದು. ಮಧ್ಯಂತರ ಚುನಾವಣೆ ಬಂದರೆ ಬಿಜೆಪಿಗೆ ಬಹುಮತ ಬರಲಿದೆ. 26 ಲೋಕಸಭಾ ಕ್ಷೇತ್ರಗಳ, 175 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಬಹುಮತ ಬಂದಿದೆ. ಹೀಗಾಗಿ ಈಗಿರುವ ಪರಿಸ್ಥಿತಿ ನೋಡಿದರೆ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಬಹುದು ಎಂದು ಹೇಳಿದ್ದಾರೆ.

    ಈ ಸರ್ಕಾರ ಇದೇಯೋ ಇಲ್ಲವೋ ಗೊತ್ತಾಗುತ್ತಿಲ್ಲ. ಅಧಿಕಾರಿಗಳು ಯಾರ ಮಾತು ಕೇಳುತ್ತಿಲ್ಲ. ಜೊತೆಗೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಸೋಮಶೇಖರ್ ರೆಡ್ಡಿ ಕಿಡಿಕಾರಿದರು.

    ನಾಳೆಯಿಂದ(ಶನಿವಾರ) ಶಾಸಕ ಸೋಮಶೇಖರ್ ರೆಡ್ಡಿ ಉಪವಾಸ ಸತ್ಯಾಗ್ರಹ ಆರಂಭ ಮಾಡಲಿದ್ದಾರೆ. ಮಳೆ ಬಂದು ತುಂಗಭದ್ರಾ ಡ್ಯಾಂ ತುಂಬುವವರೆಗೂ ಉಪವಾಸ ವ್ರತ ಆಚರಣೆ ಮಾಡಲಿದ್ದಾರೆ. ನಾಳೆ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಉಪವಾಸ ಆರಂಭಿಸಲಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಹುಬ್ಬಳ್ಳಿಯ ದೇವಸ್ಥಾನದಲ್ಲಿ ಅಗ್ನಿ ಅವಘಡ – ಮಹಿಳೆ ಸೀರೆಗೆ ತಗುಲಿದ ದೀಪದ ಬೆಂಕಿ

    ಹುಬ್ಬಳ್ಳಿಯ ದೇವಸ್ಥಾನದಲ್ಲಿ ಅಗ್ನಿ ಅವಘಡ – ಮಹಿಳೆ ಸೀರೆಗೆ ತಗುಲಿದ ದೀಪದ ಬೆಂಕಿ

    ಹುಬ್ಬಳ್ಳಿ: ದೇವಸ್ಥಾನದಲ್ಲಿ ದೇವರಿಗೆ ಕೈ ಮುಗಿಯುವ ವೇಳೆ ಮಹಿಳೆಯೊಬ್ಬರ ಸೀರೆಗೆ ಬೆಂಕಿ ಹತ್ತಿಕೊಂಡ ಘಟನೆ ಹುಬ್ಬಳ್ಳಿಯ ವಿಶ್ವೇಶ್ವರ ನಗರದ ದೇವಸ್ಥಾನದಲ್ಲಿ ನಡೆದಿದೆ.

    ಈ ಘಟನೆ ಜೂನ್ 17ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದು ದೇವಸ್ಥಾನಕ್ಕೆ ತೆರಳಿದ್ದ ಮಹಿಳೆ ದೇವಸ್ಥಾನದಲ್ಲಿರುವ ನಾಗರಕಟ್ಟೆಗೆ ಬಾಗಿ ನಮಸ್ಕರಿಸಿ ಹಿಂದಿರುಗುತ್ತಿದ್ದ ವೇಳೆ ಸೀರೆಗೆ ಬೆಂಕಿ ಹೊತ್ತಿಕೊಂಡಿದೆ. ಈ ಎಲ್ಲಾ ದೃಶ್ಯಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ವಿಡಿಯೋದಲ್ಲೇನಿದೆ?
    ಮಹಿಳೆ ದೇವರಿಗೆ ಕೈ ಮುಗಿದು ಹಿಂದಿರುಗುತ್ತಿದ್ದರು. ಈ ವೇಳೆ ಏಕಾಏಕಿ ಅವರ ಸೀರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಮಹಿಳೆ ಕಿರುಚಾಡುತ್ತಾ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಮಹಿಳೆಯ ಚೀರಾಟ ಕೇಳಿದ ಸ್ಥಳದಲ್ಲಿರುವ ತಕ್ಷಣವೇ ಮಹಿಳೆಯ ಬಳಿ ಓಡಿ ಬಂದು, ಕಷ್ಟಪಟ್ಟು ಬೆಂಕಿ ನಂದಿಸಿದ್ದಾರೆ. ನಂತರ ಮಹಿಳೆಯನ್ನು ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಈ ದೃಶ್ಯ ಇದೀಗ ವೈರಲ್ ಆಗಿದ್ದು, ಹೀಗಾಗಿ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಮದ್ವೆಯಾಗಿ ಬೇಡಿ ತೊಟ್ಟರೆ, ಕಳಚಲು ದೇವರ ಅಪ್ಪಣೆಯಾಗಲೇಬೇಕು

    ಮದ್ವೆಯಾಗಿ ಬೇಡಿ ತೊಟ್ಟರೆ, ಕಳಚಲು ದೇವರ ಅಪ್ಪಣೆಯಾಗಲೇಬೇಕು

    – ಬೇಡಿ ಕಳಚೋವರೆಗೆ ಮನೆಗೆ ಹೋಗುವಂತಿಲ್ಲ
    – ದೇವಸ್ಥಾನದಲ್ಲೇ 18 ಜನ ವಾಸ್ತವ್ಯ

    ವಿಜಯಪುರ: ಅಪರಾಧ ಮಾಡಿ ಬೇಡಿ ತೊಟ್ಟ ಕೈದಿ ಜಾಮೀನಿನ ಮೇಲಾದರೂ ಬಿಡುಗಡೆಯಾಗಬಹುದು. ಅದರೆ ಇಲ್ಲಿ ಮದುವೆಯಾಗಿ ಬೇಡಿ ತೊಟ್ಟರೆ ಮುಗೀತು ಯಾರೊಬ್ಬರ ವಕಾಲತ್ತು ನಡೆಯುವುದಿಲ್ಲ. ಬೇಡಿ ಕಳಚಲು ದೇವರ ಅಪ್ಪಣೆಯಾಗಲೇಬೇಕು.

    ಹೌದು. ಅಚ್ಚರಿಯಾದರೂ ಸತ್ಯ. ಇಂಥದ್ದೊಂದು ಸಂಪ್ರದಾಯ ನೂರಾರು ವರ್ಷಗಳಿಂದ ಸದ್ದಿಲ್ಲದೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ. ಮದುವೆಯಾಗಿ ಬೇಡಿ ತೊಟ್ಟು ದೇವಸ್ಥಾನಕ್ಕೆ ಬಂದರೆ ನಂತರ ಬೇಡಿ ಕಳಚಿ ಬೀಳುವವರೆಗೂ ಅವರು ಮನೆಗೆ ಹೋಗುವ ಆಗಿಲ್ಲ.

    ಇಲ್ಲಿನ ಮುಜಾವರ್ ಎಂಬ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಮದುವೆ ಆದರೆ ಈ ರೀತಿ ಕಾಲಿಗೆ ಕಬ್ಬಿಣದ ಕೋಳ ಹಾಕಿಕೊಳ್ಳುವ ಸಂಪ್ರದಾಯವಿದೆ. ಇದರ ಪ್ರಕಾರ ಬೇಡಿ ತೊಟ್ಟ ಸುಮಾರು 18 ಜನ ದೇವಸ್ಥಾನದಲ್ಲೇ ವಾಸ್ತವ್ಯ ಹೂಡಿದ್ದಾರೆ. ಕಳೆದ 15 ದಿನಗಳಿಂದ ಕಾಲಿಗೆ ಕಬ್ಬಿಣದ ಸಣ್ಣ ಸರಳಿನಿಂದ ಮಾಡಿದ ಬೇಡಿ ಕಟ್ಟಿಕೊಂಡು ದೇವಸ್ಥಾನದಲ್ಲೇ ಅಡ್ಡಾಡುತ್ತಿದ್ದಾರೆ. ಎಷ್ಟೇ ದಿನಗಳಾಗಲಿ ಬೇಡಿ ತನ್ನಿಂತಾನೆ ಕಳಚುವವರೆಗೂ ಮನೆಗೆ ಹೋಗುವಂತಿಲ್ಲ.

    ಸ್ಥಳೀಯ ದಾವಲ್‍ಮಲ್ಲಿಕ್ ದೇವಸ್ಥಾನದ ಅರ್ಚಕರಾದ ಹಿಂದೂ ಕುರುಬ ಸಮುದಾಯ ಅರ್ಜುನ ಮುಜಾವರ್ ಆಗಿದ್ದಾರೆ. ಮುಜಾವರ ಕುಟುಂಬ ಸದ್ಯಸರೇ ಬೇಡಿ ಹಾಕಿಕೊಂಡು ದೇವರ ಅಪ್ಪಣೆಗಾಗಿ ಕಾಯುತ್ತಿದ್ದಾರೆ. ಮುಜಾವರ್ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಮದುವೆ ಆದರೆ ಈ ರೀತಿ ಕಾಲಿಗೆ ಕಬ್ಬಿಣದ ಕೋಳ ಹಾಕಿಕೊಳ್ಳುವ ಸಂಪ್ರದಾಯವಿದೆ. ಕಾಲಿಗೆ ಕೋಳ ಹಾಕಿಕೊಂಡು ದಾವಲ್‍ಮಲ್ಲಿಕ್ ದೇವರ ಮೊರೆ ಹೋಗುತ್ತಾರೆ.

    ದೇವರು ಅಪ್ಪಣೆ ಕೊಟ್ಟು ತನ್ನಿಂದ ತಾನೇ ಕೋಳ ಮುರಿಯುವ ವರೆಗೂ ಯಾವೊಬ್ಬ ಕುಟುಂಬದ ಸದಸ್ಯ ಕೂಡ ಮನೆಗೆ ಹೋಗಿ ಸಂಸಾರ ಮಾಡುವಂತಿಲ್ಲ. ಈಗಾಗಲೇ 6 ಜನರ ಬೇಡಿ ಕಳಚಿದ್ದು ಇನ್ನುಳಿದ 18 ಜನ ದೇವರ ಕೃಪೆಗಾಗಿ ಕಾದಿದ್ದಾರೆ.

  • ಬೀದರ್ ಐತಿಹಾಸಿಕ ದೇವಸ್ಥಾನದ ಪೂಜಾರಿಯ ಬರ್ಬರ ಹತ್ಯೆ

    ಬೀದರ್ ಐತಿಹಾಸಿಕ ದೇವಸ್ಥಾನದ ಪೂಜಾರಿಯ ಬರ್ಬರ ಹತ್ಯೆ

    ಬೀದರ್: ಐತಿಹಾಸಿಕ ಪಾಪನಾಶ ದೇವಸ್ಥಾನದ ಪೂಜಾರಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್‍ನಲ್ಲಿ ನಡೆದಿದೆ.

    ರಮೇಶ್ ಮಲ್ಲಯ್ಯ ಸ್ವಾಮಿ (39)ಕೊಲೆಯಾದ ದೇವಸ್ಥಾನದ ಪೂಜಾರಿ. ದೇವಸ್ಥಾನದ ಪೂಜೆ ವಿಷಯಕ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ಮಾಡಲಾಗಿದೆ.

    ಬೀದರ್‍ನ ಪಾಪನಾಶ ಕಲ್ಯಾಣ ಮಂಟದಲ್ಲಿ ಆರೋಪಿಗಳು ರಮೇಶ್ ಮೇಲೆ ರಾಡಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾರೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ದೇವಸ್ಥಾನದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ, ಶ್ವಾನದಳ ಹಾಗೂ ನ್ಯೂಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

    ಈ ಸಂಬಂಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕುಕ್ಕೆ ದೇವಸ್ಥಾನ, ಮಠದ ನಡುವೆ ಕಿತ್ತಾಟ – ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಅರ್ಚಕ

    ಕುಕ್ಕೆ ದೇವಸ್ಥಾನ, ಮಠದ ನಡುವೆ ಕಿತ್ತಾಟ – ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಅರ್ಚಕ

    ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವಸ್ಥಾನ ಹಾಗೂ ಮಠದ ನಡುವೆ ಕಿತ್ತಾಟ ನಡೆಯುತ್ತಿದ್ದು, ಈ ಸಂಬಂಧ ಮಠದ ಪರ ನಿಂತಿದ್ದ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.

    ಅರ್ಚಕ ಕುಮಾರ್ ಬನ್ನಿಂತಾಯ(61) ಹಲ್ಲೆಗೊಳಗಾಗಿದ್ದಾರೆ. ಸರ್ಪ ಸಂಸ್ಕಾರ ಸೇವೆ ವಿಷಯಕ್ಕೆ ಮಠ ಮತ್ತು ದೇವಸ್ಥಾನದ ನಡುವೆ ಗಲಾಟೆ ನಡೆದಿತ್ತು. ಇದರಿಂದ ದೇವಸ್ಥಾನ ಹಾಗೂ ಮಠದ ಸಿಬ್ಬಂದಿ ನಡುವೆ ಕೂಡ ಭಿನ್ನಾಭಿಪ್ರಾಯ ಉಂಟಾಗಿತ್ತು. ಆದರೆ ಈ ಹಿನ್ನೆಲೆಯಲ್ಲಿ ದೇವಸ್ಥಾನದ ಅರ್ಚಕ ಮಠದ ಪರ ನಿಂತಿದ್ದರು. ಶನಿವಾರ ರಾತ್ರಿ ವೇಳೆ ದೇವಸ್ಥಾನದ ಹೊರಗೆ ಅರ್ಚಕ ನಿಂತಿದ್ದಾಗ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯಿಂದ ಗಾಯಗೊಂಡ ಅರ್ಚಕರನ್ನು ಸ್ಥಳದಲ್ಲಿದ್ದವರು ಪುತ್ತೂರು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ದೇವಸ್ಥಾನದ ವಿರುದ್ಧ ನಿಂತು ಮಠಕ್ಕೆ ಬೆಂಬಲ ನೀಡಿದ್ದಕ್ಕೆ ಈ ರೀತಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಬೆಂಗಳೂರಿನ ನಿವಾಸಿ ಪಳನಿಸ್ವಾಮಿ ಅವರು ಸರ್ಪ ಸಂಸ್ಕಾರ ಪೂಜೆ ಮಾಡಿಸಲು 7 ಸಾವಿರ ರೂ. ನೀಡಿ ಮಠದಿಂದ ರಶೀದಿ ಪಡೆದಿದ್ದರು. ಆದರೆ ಈ ರಶೀದಿಯನ್ನು ಹಿಡಿದು ದೇವಸ್ಥಾನಕ್ಕೆ ಪೂಜೆ ಮಾಡಿಸಲು ಹೋದಾಗ ದೇಗುಲದ ಕಚೇರಿಯಲ್ಲಿ ಮಠಕ್ಕೂ ನಮಗೂ ಸಂಬಂಧ ಇಲ್ಲವೆಂದು ಹೇಳಿ ವಾಪಸ್ ಕಳುಹಿಸಿದ್ದಾರೆ. ಹೀಗಾಗಿ ಮಠದ ಸಿಬ್ಬಂದಿ ಬಳಿ ಈ ಬಗ್ಗೆ ಪ್ರಶ್ನಿಸಿದಾಗ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ. ಈ ಕಾರಣಕ್ಕೆ ಸುಬ್ರಹ್ಮಣ್ಯ ಠಾಣೆಗೆ ಪಳನಿಸ್ವಾಮಿ ದೂರು ನೀಡಿದ್ದರು. ಹೀಗಾಗಿ ದೇವಸ್ಥಾನ ಹಾಗೂ ಮಠದ ಸಿಬ್ಬಂದಿ ನಡುವೆ ಬಿರುಕು ಉಂಟಾಗಿತ್ತು.