Tag: ದೇವಸ್ಥಾನ

  • ಮೋಡಗಳ ನಡುವೆ ಸೂರ್ಯ ಗ್ರಹಣ – ಗ್ರಹಣ ಸಂದರ್ಭದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    ಮೋಡಗಳ ನಡುವೆ ಸೂರ್ಯ ಗ್ರಹಣ – ಗ್ರಹಣ ಸಂದರ್ಭದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

    – ಜಿಲ್ಲೆಯ ಹಲವೆಡೆ ಅಘೋಷಿತ ಬಂದ್

    ಕೋಲಾರ: ಆಗಸದಲ್ಲಿ ಮುಂಜಾನೆಯಿಂದಲೂ ದಟ್ಟವಾದ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ಕೇತುಗ್ರಸ್ತ ಸೂರ್ಯಗ್ರಹಣವನ್ನು ಸರಿಯಾಗಿ ವೀಕ್ಷಣೆ ಮಾಡಲಾಗದೆ ಕೋಲಾರದ ಜನರಿಗೆ ಕೊಂಚ ನಿರಾಶೆ ಉಂಟಾಗಿದೆ.

    ಬೆಳಗ್ಗೆ 9 ಗಂಟೆಯ ನಂತರ ಮೋಡ ಸ್ವಲ್ಪ ಕಡಿಮೆಯಾದ ಹಿನ್ನೆಲೆ ಆಗಾಗ ಸೂರ್ಯ ಆಗಸದಲ್ಲಿ ಕಾಣುತ್ತಿದ್ದನು. ಮೊದಲು ಅರ್ಧಚಂದ್ರಾಕೃತಿ ಕಂಡುಬಂದಿತು, ಅದಾದ ಮೇಲೆ ಆಗಾಗ ಮೋಡ ಪಕ್ಕಕ್ಕೆ ಸರಿದಂತೆ ಸೂರ್ಯನನ್ನು ಗ್ರಹಣ ಆವರಿಸುವ ದೃಶ್ಯಗಳು ಆಗಾಗ ಕಂಡು ಬಂದಿತು. 9:45ರ ವೇಳೆ ಸೂರ್ಯನನ್ನು ಪೂರ್ಣವಾಗಿ ಗ್ರಹಣ ಆವರಿಸಿ ಉಂಗುರಾಕೃತಿಯಲ್ಲಿ ಕಂಡುಬಂದ ದೃಶ್ಯಗಳು ಕಂಡುಬಂದಿತು. ಈ ವೇಳೆ ಬಹುತೇಕ ಕತ್ತಲು ಆವರಿಸಿದ ವಾತಾವರಣ ಕಂಡುಬಂದಿತು. ಇಂದು ಗ್ರಹಣದ ಹಿನ್ನೆಲೆ ಕೋಲಾರ ನಗರದಲ್ಲಿ ಜನರು ಯಾರೂ ರಸ್ತೆಗಿಳಿದಿರಲಿಲ್ಲ, ಪರಿಣಾಮ ಕೋಲಾರ ನಗರದ ರಸ್ತೆಗಳಲ್ಲಿ ಜನರಿಲ್ಲದೆ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು.

    ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು, ಅಲ್ಲಲ್ಲಿ ಹೋಟೆಲ್ ಹಾಗೂ ಒಂದೆರಡು ಅಂಗಡಿಗಳು ತೆರೆದಿದ್ದವು. ಅದನ್ನು ಹೊರತು ಪಡಿಸಿದರೆ ಬಸ್ ಸಂಚಾರ ಕೂಡಾ ವಿರಳವಾಗಿತ್ತು. ಗ್ರಹಣದ ಹಿನ್ನೆಲೆ ಕೋಲಾರದ ಬಹುತೇಕ ಮುಜರಾಯಿ ದೇವಾಲಯಗಳು ಬಂದ್ ಆಗಿದ್ದವು. ಕೋಲಾರ ನಗರದ ಡೂಂ ಲೈಟ್ ಸರ್ಕಲ್‍ನಲ್ಲಿರುವ ವಿದ್ಯಾಗಣಪತಿ ದೇವಾಲಯದಲ್ಲಿ ಗ್ರಹಣ ದೋಷವಿರುವ ನಕ್ಷತ್ರ ರಾಶಿಯವರಿಗೆ ಮಂತ್ರ ಪಠನೆ, ನವಹಗ್ರಹ ಪೂಜೆ ಹಾಗೂ ಶಾಂತಿ ಹೋಮ ಏರ್ಪಡಿಸಲಾಗಿತ್ತು. ಈ ಪೂಜಾ ಕಾರ್ಯಕ್ರಮದಲ್ಲಿ ಹತ್ತಾರು ಜನ ಭಾಗವಹಿಸಿ ಗ್ರಹಣ ಕಾಲದಲ್ಲಿ ದೇವರ ಪ್ರಾರ್ಥನೆ ಮಾಡಿದರು.

    11:04ಕ್ಕೆ ಸೂರ್ಯ ಗ್ರಹಣ ಮೋಕ್ಷ ಸಿಗುತ್ತಿದ್ದಂತೆ ಎಲ್ಲಾ ದೇವಾಲಯಗಳನ್ನು ಗೋಮೂತ್ರ ಹಾಕಿ ಶುದ್ಧಿ ಮಾಡಿ, 1 ಗಂಟೆ ನಂತರ ಭಕ್ತರಿಗೆ ದರ್ಶನಕ್ಕೆ ಎಲ್ಲೆಡೆ ಅವಕಾಶ ಕಲ್ಪಿಸಿಲಾಯಿತು. ಒಟ್ಟಾರೆ ಇಂದು ಸೂರ್ಯಗ್ರಹಣದ ಕೌತುಕ ಹಾಗೂ ಆಚರಣೆಗೆ ಮೋಡಕವಿದದ್ದು ಮಾತ್ರ ಸುಳ್ಳಲ್ಲ.

    ಗ್ರಹಣದ ಸಮಯದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ:
    ಗ್ರಹಣದ ಮಧ್ಯಕಾಲದಲ್ಲಿ ಅಂದರೆ 9:50ರ ಸುಮಾರಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಮುಳಬಾಗಿಲು ತಾಲೂಕು ಪುಟ್ಟೇನಹಳ್ಳಿ ಗ್ರಾಮದ ಶ್ವೇತ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ.

  • ಮಲೆ ಮಾದಪ್ಪನ ಹೊರತುಪಡಿಸಿ ಉಳಿದ ದೇವಸ್ಥಾನದ ಬಾಗಿಲು ಬಂದ್

    ಮಲೆ ಮಾದಪ್ಪನ ಹೊರತುಪಡಿಸಿ ಉಳಿದ ದೇವಸ್ಥಾನದ ಬಾಗಿಲು ಬಂದ್

    ಚಾಮರಾಜನಗರ: ಗ್ರಹಣದ ಹಿನ್ನೆಲೆ ಬೆಳಗ್ಗೆ 8ರಿಂದ 11:30ರವರೆಗೆ ಜಿಲ್ಲೆಯ ವಿವಿಧ ದೇವಸ್ಥಾನಗಳ ಬಾಗಿಲು ಮುಚ್ಚಲಾಗಿತ್ತು. ಆದರೆ ಕೇತುಗ್ರಸ್ಥ ಸೂರ್ಯ ಗ್ರಹಣವಿದ್ದರೂ ಸಹ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಎಂದಿನಂತೆ ಭಕ್ತರು ಮಾದಪ್ಪನ ದರ್ಶನ ಪಡೆದರು.

    ಬೆಳಗ್ಗೆ 8 ಗಂಟೆಗೂ ಮೊದಲೇ ಸ್ವಾಮಿಗೆ ವಿಶೇಷ ಪೂಜೆ ನಡೆಯಿತು. ದಾಸೋಹ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಸಂಜೆ 4ರಿಂದ 7ರವರೆಗೆ ದೇಗುಲದಲ್ಲಿ ವಿಶೇಷ ಪೂಜೆ ಜರುಗುವುದರಿಂದ ಪ್ರಮುಖ ದ್ವಾರಗಳನ್ನು ಮುಚ್ಚಲಾಗಿತ್ತು. ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಯಿತು.

    ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥಶಸ್ವಾಮಿ ದೇಗುಲವನ್ನು ಬೆಳಗ್ಗೆ 5.30ರಿಂದ 1 ಗಂಟೆಯವರೆಗೆ ಮುಚ್ಚಲಾಗಿತ್ತು. ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಶ್ರಿರಂಗನಾಥಸ್ವಾಮಿ ಮತ್ತು ಸಮೂಹ ದೇವಾಲಯ ಪ್ರಸನ್ನ ಮೀನಾಕ್ಷಿ, ಸೋಮೇಶ್ವರ ಮತ್ತು ಆದಿಶಕ್ತಿ ಮಾರಮ್ಮನ ದೇವಾಲಯಗಳಲ್ಲಿ ಸೂರ್ಯಗ್ರಹಣ ಇರುವುದರಿಂದ ಇಂದು ಬೆಳಗ್ಗೆ 7 ರಿಂದ ಮಧ್ಯಾಹ್ನ 12.30ವರೆಗೆ ದೇವರ ದರ್ಶನಕ್ಕೆ ಅವಕಾಶವಿರಲಿಲ್ಲ.

    ಇತ್ತ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ, ಚಾಮರಾಜನಗರದ ಶ್ರೀಚಾಮರಾಜೇಶ್ವರ ದೇವಸ್ಥಾನವನ್ನು ಸೂರ್ಯಗ್ರಹಣ ಪೂರೈಸಿದ ನಂತರ ತೆರೆಯಲಾಯಿತು. ಗ್ರಹಣ ಕಾಲ ಕಳೆದ ನಂತರ ಬಾಗಿಲು ತೆರೆದ ದೇವಸ್ಥಾನಗಳಲ್ಲಿ ವಿಶೇಷ ಹೋಮ-ಹವನಗಳನ್ನು ನೆರವೇರಿಸಲಾಯಿತು.

  • ಬಾಗಲಕೋಟೆ ಜಿಲ್ಲೆಯಾದ್ಯಂತ ಮಠ-ಮಂದಿರಗಳಲ್ಲಿ ವಿಶೇಷ ಪೂಜೆ

    ಬಾಗಲಕೋಟೆ ಜಿಲ್ಲೆಯಾದ್ಯಂತ ಮಠ-ಮಂದಿರಗಳಲ್ಲಿ ವಿಶೇಷ ಪೂಜೆ

    ಬಾಗಲಕೋಟೆ: ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯಾದ್ಯಂತ ಮಠ-ಮಂದಿರಗಳಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದೆ.

    ಬಾಗಲಕೋಟೆ ನಗರದ ಕಿಲ್ಲಾ ಏರಿಯಾದ ಗುರು ರಾಘವೇಂದ್ರ ರಾಯರ ಮಠದಲ್ಲಿ ಗ್ರಹಣ ಗಂಡಾಂತರ ನಿವಾರಣೆಗಾಗಿ, ರಾಯರ ಬೃಂದಾವನಕ್ಕೆ ಜಲಾಭಿಷೇಕ ಹಾಗೂ ಹೋಮ ಹವನ ಹಾಗೂ ಜಪಯಜ್ಞಗಳನ್ನು ಹಮ್ಮಿಕೊಳ್ಳಲಾಗಿತ್ತು. ಭಕ್ತರು ಮಡಿವಂತಿಕೆಯಿಂದ ಮಠಕ್ಕೆ ಬಂದು ರಾಯರ ಜಪಯಜ್ಞಗಳನ್ನು ಮಾಡಿ ಗ್ರಹಣ ಗಂಡಾಂತರವನ್ನು ದೂರ ಮಾಡಿಕೊಂಡರು.

    ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಿ ದೇವಸ್ಥಾನದಲ್ಲಿ ಗ್ರಹಣ ವೇಳೆಯಲ್ಲಿ ದೇವಿಗೆ ಜಲಾಭಿಷೇಕ ನೆರವೇರಿಸಲಾಯಿತು. ಗ್ರಹಣ ಮೋಕ್ಷದವರೆಗೆ ದೇವಿ ಗರ್ಭಗುಡಿ ದರ್ಶನಕ್ಕೆ ಅವಕಾಶವಿರಲಿಲ್ಲ, ಯಾವುದೇ ಪೂಜೆ ಸಹ ಇರಲಿಲ್ಲ. ಹೊರಗಡೆಯಿಂದ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

    ಗ್ರಹಣ ಮೋಕ್ಷದ ನಂತರ ದೇವಿಗೆ ಹಾಲು, ಹಣ್ಣು ಅಭಿಷೇಕ, ವಿಶೇಷ ಪೂಜೆ ಹಾಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ ಎಂದು ದೇವಸ್ಥಾನದ ಪ್ರಧಾನ ಅರ್ಚಕರು ಹೇಳಿದರು. ನಗರದ ಹೊಳೆ ಆಂಜನೇಯ ದೇವಸ್ಥಾನದಲ್ಲಿ ಗ್ರಹಣ ಗಂಡಾಂತರ ನಿವಾರಣೆಗಾಗಿ ಅಯ್ಯಪ್ಪ ಮಾಲಾಧಾರಿಗಳು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿ, ಜಪ ಯಜ್ಞಗಳನ್ನುನೆರವೇರಿಸಿದರು.

    ಗ್ರಹಣ ವೀಕ್ಷಣೆಗಾಗಿ ಬಾಗಲಕೋಟೆ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಕಾಲೇಜ್ ಮೈದಾನದಲ್ಲಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಇದೇ ವೇಳೆ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಗ್ರಹಣ ವೀಕ್ಷಣೆ ಮಾಡಿದರು. ಉಳಿದಂತೆ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದ ಉಪನ್ಯಾಸಕರು ಗ್ರಹಣ ವೀಕ್ಷಣೆ ಮಾಡಿ, ಗ್ರಹಣ ರೂಪ ಬದಲಾಗ್ತಿರೋ ಬಗ್ಗೆ ಮಾಹಿತಿ ಪಡೆದರು.

  • ಗದಗನಲ್ಲಿ ಗ್ರಹಣ ವೇಳೆ ದೇವಸ್ಥಾನ ಬಂದ್ ಇಲ್ಲ

    ಗದಗನಲ್ಲಿ ಗ್ರಹಣ ವೇಳೆ ದೇವಸ್ಥಾನ ಬಂದ್ ಇಲ್ಲ

    ಗದಗ: ಇಂದು ಅಪರೂಪದ ಕಂಕಣಾಕೃತಿ ಸೂರ್ಯಗ್ರಹಣ ಇರುವ ಹಿನ್ನೆಲೆ ಗದಗ ಜಿಲ್ಲೆಯಲ್ಲಿನ ಐತಿಹಾಸ ಪ್ರಸಿದ್ಧ ದೇವಸ್ಥಾನಗಳಾದ ತ್ರಿಕೂಟೇಶ್ವರ, ಸೂರ್ಯನಾರಾಯಣ, ವೀರನಾರಾಯಣ, ಸಾವಿತ್ರಿ-ಗಾಯತ್ರಿ-ಸಾವಿತ್ರಿ ದೇವಸ್ಥಾನಗಳಲ್ಲಿ ಬೆಳಗ್ಗೆಯಿಂದಲೇ ಪೂಜೆ ಆರಂಭವಾಗಿವೆ.

    ಗದಗನಲ್ಲಿ ಗ್ರಹಣ ಗೋಚರವಾಗುವ ಸಮಯ ಬೆಳಗ್ಗೆ 8 ಗಂಟೆ 5 ನಿಮಿಷ, ಮಧ್ಯಕಾಲ 9 ಗಂಟೆ 25 ನಿಮಿಷ ಇನ್ನು ಮೋಕ್ಷಕಾಲ 11 ಗಂಟೆ 4 ನಿಮಿಷವರೆಗೆ ಇದೆ. ಈ ಸಮಯದಲ್ಲಿ ದೇವರುಗಳಿಗೆ ಕೇವಲ ಜಲಾಭಿಷೇಕ ನಡೆಯಲಿವೆ. ಗ್ರಹಣ ಸಂದರ್ಭದಲ್ಲಿ ದೇವಸ್ಥಾನಗಳು ಬಂದ್ ಮಾಡಲ್ಲ. ಗ್ರಹಣ ಮೋಕ್ಷ ಕಾಲ ನಂತರ ಪುಷ್ಕರಣಿಯಿಂದ ಜಲತಂದು ವಿಶೇಷವಾಗಿ ಜಲಾಭಿಷೇಕ, ಪಂಚಾಮೃತ, ಕ್ಷೀರಾಭಿಷೇಕ, ಎಳೆನೀರು ಸೇರಿದಂತೆ ಹೋಮ-ಹವನಗಳು ನಡೆಯುತ್ತಿವೆ.

    ಇನ್ನು ಅಶುಭ ಫಲ, ಮಧ್ಯಫಲ ಇರುವವರು ಗ್ರಹಣ ಸಂದರ್ಭದಲ್ಲಿ ಯಾವುದೇ ಉಪಹಾರ ನೀರು ಸೇವನೆ ಮಾಡಬಾರದು. ಗ್ರಹಣ ಮೋಕ್ಷ ನಂತರ ತೀರ್ಥ ಪ್ರಸಾದ ಸ್ವೀಕರಿಸುವುದು ಒಳಿತು ಎಂದು ತ್ರಿಕೂಟೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ರಮೇಶ ಭಟ್ಟರು ಪಬ್ಲಿಕ್ ಟಿವಿಗೆ ತಿಳಿಸಿದರು.

  • ಕಂಕಣ ಸೂರ್ಯ ಗ್ರಹಣ – ನಗರದ ಬಹುತೇಕ ಎಲ್ಲಾ ದೇವಾಲಯಗಳು ಬಂದ್

    ಕಂಕಣ ಸೂರ್ಯ ಗ್ರಹಣ – ನಗರದ ಬಹುತೇಕ ಎಲ್ಲಾ ದೇವಾಲಯಗಳು ಬಂದ್

    ಬೆಂಗಳೂರು: ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ನಗರದ ಬಹುತೇಕ ಎಲ್ಲ ದೇವಾಲಯಗಳು ಬಂದ್ ಆಗಲಿದೆ.

    ಗುರುವಾರ ಬೆಳಗ್ಗೆ 7 ಗಂಟೆಯಿಂದ 12 ಗಂಟೆವರೆಗೂ ದೇವಾಲಯಗಳು ಬಂದ್ ಆಗಲಿದೆ. ದೇವಸ್ಥಾನದ ಗರ್ಭಗುಡಿಯೊಳಗಿನ ಮೂಲ ಮೂರ್ತಿ ಹಾಗೂ ಎಲ್ಲ ಆಹಾರ ಸಾಮಾಗ್ರಿಗೂ ದರ್ಬೆ ಹಾಕಿ ಬಂದ್ ಮಾಡಲಾಗಿರುತ್ತದೆ. 12 ಗಂಟೆಗೆ ದೇವಾಲಯ ಮೂರ್ತಿ ಹಾಗೂ ಗೋಪುರ ಎಲ್ಲದರ ಶುದ್ಧೀಕರಣ ಕಾರ್ಯ ಆರಂಭಗೊಳ್ಳಲಿದೆ.

    ಅದೇ ರೀತಿ ಸಂಜೆ 4 ಗಂಟೆಗೆ ಮತ್ತೆ ದೇವಾಲಯ ಓಪನ್ ಆಗಲಿದ್ದು, ಶಾಂತಿ ಹೋಮ, ಗ್ರಹ ದೋಷ ನಿವಾರಣೆ ಹೋಮ ನಡೆಯಲಿದೆ. ದರ್ನುಮಾಸ ಹಿನ್ನೆಲೆಯಲ್ಲಿ ಮುಂಜಾನೆ 5 ಗಂಟೆಗೆ ದೇವಾಲಯ ತೆರೆದಿರುತ್ತದೆ. ಹೀಗಾಗಿ ಸೂರ್ಯ ಗ್ರಹಣ ಆರಂಭದ ಮುನ್ನವೇ ಕ್ಲೋಸ್ ಮಾಡಲಾಗಿರುತ್ತದೆ. ಅದೇ ರೀತಿ ಗ್ರಹಣ ಕಾಲ ಮುಕ್ತಿಯಾದರು ದೇವಾಲಯದಲ್ಲಿ ಪೂಜೆ ಇರಲ್ಲ, ಕಾರಣ ಮಧ್ಯಾಹ್ನ ಸಮಯದಲ್ಲಿ ಪೂಜೆ ಕಾರ್ಯ ಮಾಡುವಂತಿಲ್ಲ.

    ಗವಿಗಂಗಾಧರೇಶ್ವರ ದೇವಸ್ಥಾನ ಬೆಳಗ್ಗೆ 7:30ಕ್ಕೆ ಬಂದ್ ಆಗಿ, ಸಂಜೆ 4:00 ಗಂಟೆಗೆ ಓಪನ್ ಆಗಲಿದೆ. ಬನಶಂಕರಿ ದೇವಸ್ಥಾನ ಬೆಳಗ್ಗೆ 7:45ಕ್ಕೆ ಕ್ಲೋಸ್ ಮಾಡಿ ಸಂಜೆ 5:00 ಗಂಟೆಗೆ ತೆರೆಯಲಾಗುತ್ತದೆ. ಕಾಡುಮಲ್ಲೇಶ್ವರ ದೇವಾಲಯ ಬೆಳಗ್ಗೆ 7:30ಕ್ಕೆ ಬಂದ್ ಆಗಿ ಸಂಜೆ 5:00 ಗಂಟೆಗೆ ಓಪನ್ ಮಾಡಲಾಗುತ್ತದೆ. ನರಸಿಂಹ ದೇವ ದೇವಸ್ಥಾನ ಬೆಳಗ್ಗೆ 7:15 ಗಂಟೆಗೆ ಬಾಗಿಲು ಕ್ಲೋಸ್ ಮಾಡಿ ಸಂಜೆ 4:30ಕ್ಕೆ ತೆರೆಯಲಾಗುತ್ತದೆ. ಗಂಗಮ್ಮ ದೇವಿ ದೇವಸ್ಥಾನ ಬೆಳಗ್ಗ 7:00ಗಂಟೆಗೆ ಕ್ಲೋಸ್ ಮಾಡಿ ಸಂಜೆ 4:00ಗಂಟೆಗೆ ಓಪನ್ ಮಾಡಲಾಗುತ್ತೆ. ಇನ್ನು ದೊಡ್ಡ ಗಣಪತಿ ದೇವಾಲಯ ಕೂಡ ಬೆಳಗ್ಗೆ 7:30ಕ್ಕೆ ಬಂದ್ ಮಾಡಿ ಸಂಜೆ 5:00ಗೆ ಓಪನ್ ಮಾಡಲಾಗುತ್ತೆ.

    ಹೀಗೆ ನಗರದ ಹಲವು ದೇವಾಲಯಗಳು ಬೆಳಗ್ಗೆ ತೆರೆಯುವುದು ಹಾಗೂ ಮುಚ್ಚಲಾಗುತ್ತದೆ.

  • ಸೂರ್ಯ ಗ್ರಹಣ ಹಿನ್ನೆಲೆ ಮಂಡ್ಯದ ಐತಿಹಾಸಿಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

    ಸೂರ್ಯ ಗ್ರಹಣ ಹಿನ್ನೆಲೆ ಮಂಡ್ಯದ ಐತಿಹಾಸಿಕ ದೇವಸ್ಥಾನಗಳಲ್ಲಿ ವಿಶೇಷ ಪೂಜೆ

    ಮಂಡ್ಯ:  ಡಿಸೆಂಬರ್ 26 ರಂದು ಜಿಲ್ಲೆಯಲ್ಲಿ ಸೂರ್ಯ ಗ್ರಹಣ ಬೆಳಗ್ಗೆ 8.5ಕ್ಕೆ ಕಾಣಿಸಿಕೊಳ್ಳಲಿದ್ದು, ಬೆಳಗ್ಗೆ 9.37ಕ್ಕೆ ಗ್ರಹಣದ ಮಧ್ಯಕಾಲ ಇದ್ದು, ಗ್ರಹಣದ ಮೋಕ್ಷ ಕಾಲ 11.8ಕ್ಕೆ ಆಗಲಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನ ಹಾಗೂ ನಿಮಿಷಾಂಬ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

    ಮೇಲುಕೋಟೆಯ ಚಲುವರಾಯಸ್ವಾಮಿ ದೇವಸ್ಥಾನದಲ್ಲಿ ಬೆಳಗ್ಗೆ 4 ಗಂಟೆಯಿಂದ 6 ಗಂಟೆವರೆಗೆ ಸುಪ್ರಭಾತ ಸೇವೆ ಹಾಗೂ ಧನುರ್ಮಾಸದ ವಿಶೇಷ ಪೂಜೆಗಳನ್ನು ಸಲ್ಲಿಸಲಾಗುತ್ತದೆ. ಬಳಿಕ ಬೆಳಗ್ಗೆ 7 ಗಂಟೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಿ ಗ್ರಹಣ ಮುಗಿದ ಬಳಿಕ ಮಧ್ಯಾಹ್ನ 12 ಗಂಟೆಗೆ ದೇವಸ್ಥಾನದ ಬಾಗಿಲನ್ನು ತೆರೆದು ಶುಚಿತ್ವಗೊಳಿಸಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.

    ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಬಾಗಿಲು ಬೆಳಗ್ಗೆ 4.30 ತೆರೆದು 6 ಗಂಟೆಯ ವಿಶೇಷ ಪೂಜೆಯನ್ನು ಸಲ್ಲಿಸಿದ ಬಳಿಕ ದೇವಸ್ಥಾನದ ಬಾಗಿಲು ಹಾಕಲಾಗುತ್ತದೆ. ಗ್ರಹಣ ಮುಗಿದ ಬಳಿಕ 12.30ಕ್ಕೆ ದೇವಸ್ಥಾನದ ಬಾಗಿಲು ತೆರೆದು, ದೇವಸ್ಥಾನವನ್ನು ಶುದ್ಧಿಗೊಳಿಸಿ ರಂಗನಾಥಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

    ಇನ್ನೂ ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದಲ್ಲೂ ಕೂಡ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ 4 ಗಂಟೆಯಿಂದ ಧನುರ್ಮಾಸದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಲಾಗುತ್ತದೆ. ಬಳಿಕ ಬೆಳಗ್ಗೆ 8 ಗಂಟೆಗೆ ದೇವಸ್ಥಾನದ ಬಾಗಿಲನ್ನು ಮುಚ್ಚಲಾಗುತ್ತದೆ. ಗ್ರಹಣ ಮುಗಿದ ಬಳಿಕ 12 ಗಂಟೆಗೆ ದೇವಸ್ಥಾನದ ಬಾಗಿಲು ತೆರೆದು ದೇವಸ್ಥಾನದ ಶುದ್ಧಿಕರಣಗೊಳಿಸಿ ವಿಶೇಷ ಅಭಿಷೇಕ ಹಾಗೂ ಪೂಜೆ ಮಾಡಲಾಗುತ್ತದೆ.

  • ಇಲ್ಲಿ ನಿಮ್ಮ ನೆಚ್ಚಿನ ಬ್ರ್ಯಾಂಡ್ ಮದ್ಯವೇ ದೇವರಿಗೆ ಎಡೆ

    ಇಲ್ಲಿ ನಿಮ್ಮ ನೆಚ್ಚಿನ ಬ್ರ್ಯಾಂಡ್ ಮದ್ಯವೇ ದೇವರಿಗೆ ಎಡೆ

    ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಮೂರ್ಮನೆ ಗ್ರಾಮದ ಕೊರಗಜ್ಜ ಮದ್ಯಪಾನ ಬಿಡಿಸೋದರಲ್ಲಿ ಫೇಮಸ್. ನಿಮ್ಮ ಕುಟುಂಬದವರಿಗೆ ಮದ್ಯ ಸೇವನೆ ಬಿಡಿಸಬೇಕು ಎಂದ್ರೆ ನೀವು ಅವರು ಕುಡಿಯುವ ಬ್ರ್ಯಾಂಡ್ ಇಲ್ಲಿಯ ದೇವರಿಗೆ ಎಡೆ ಇಟ್ಟರೆ ನಿಮ್ಮ ಕೋರಿಕೆ ಈಡೇರುತ್ತದೆ ಎಂಬುವುದು ಇಲ್ಲಿಯ ನಂಬಿಕೆ.

    ಇಲ್ಲಿಗೆ ಬರುವ ಭಕ್ತಾದಿಗಳು ತಮ್ಮ ಆಪ್ತರು ಕುಡಿಯುವ ಮದ್ಯ ಮತ್ತು ಸೈಡ್ (ಚಕ್ಕಲಿ, ನಿಪ್ಪಟು, ಮಾಂಸಾಹಾರ)ನಲ್ಲಿ ತೆಗೆದುಕೊಳ್ಳುವ ಆಹಾರವನ್ನು ದೇವರಿಗೆ ಎಡೆಯಾಗಿ ತರುತ್ತಾರೆ. ಈ ರೀತಿ ಮಾಡಿದ್ರೆ ಮುಂದಿನ ಬಾರಿ ದೇವಸ್ಥಾನಕ್ಕೆ ಬರೋವಷ್ಟರಲ್ಲಿ ನಿಮ್ಮ ಆಪ್ತರು ಮದ್ಯವ್ಯಸನದಿಂದ ದೂರ ಆಗಿರುತ್ತಾರೆ ಎಂದು ಭಕ್ತರು ಹೇಳುತ್ತಾರೆ.

    ಬೆಂಗಳೂರು, ಮಂಗಳೂರು, ಮೈಸೂರು, ಮಂಡ್ಯ, ಹಾಸನ, ಶಿವಮೊಗ್ಗ, ಉಡುಪಿ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಭಕ್ತರು ಬರುತ್ತಾರೆ. ದಟ್ಟ ಕಾನನದ ಕಾಫಿತೋಟದ ಮಧ್ಯೆ ಇರೋ ಈ ಕೊರಗಜ್ಜನ ಮಹಿಮೆ ಅಪಾರ ಅನ್ನೋದು ಅಸಂಖ್ಯಾತ ಭಕ್ತರ ನಂಬಿಕೆ. ಇಲ್ಲಿ ಪ್ರತಿ ಶುಕ್ರುವಾರ ಮದ್ಯಪಾನ ಬಿಡಿಸುವ ಪೂಜೆ ನಡೆಯಲಿದ್ದು, ಇಲ್ಲಿಯವರಗೆ 410ಕ್ಕೂ ಅಧಿಕ ಮಂದಿ ಕುಡಿಯೋದನ್ನ ಬಿಟ್ಟಿದ್ದಾರೆ ಸ್ಥಳೀಯರು ಹೇಳುತ್ತಾರೆ.

  • ಸೂರ್ಯ ಗ್ರಹಣದಂದು ಘಾಟಿ, ಭೋಗನಂದಿಶ್ವರ ದೇವಾಲಯ ಬಂದ್

    ಸೂರ್ಯ ಗ್ರಹಣದಂದು ಘಾಟಿ, ಭೋಗನಂದಿಶ್ವರ ದೇವಾಲಯ ಬಂದ್

    ಚಿಕ್ಕಬಳ್ಳಾಪುರ: ಡಿಸೆಂಬರ್ 26ರಂದು ಘಟಿಸಲಿರುವ ಸೂರ್ಯ ಗ್ರಹಣದ ದಿನ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಶ್ರೀ ಭೋಗನಂದೀಶ್ವರನ ದೇವಾಲಯ ಬಂದ್ ಆಗಲಿದೆ.

    ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳಗ್ಗೆ 08.05 ನಿಮಿಷಕ್ಕೆ ಗ್ರಹಣ ಸ್ಪರ್ಶ ಕಾಲ ಆರಂಭವಾಗಲಿದ್ದು, 9.30 ನಿಮಿಷಕ್ಕೆ ಮಧ್ಯ ಕಾಲ ಸೇರಿದಂತೆ 11.05 ನಿಮಿಷಕ್ಕೆ ಗ್ರಹಣ ಮೋಕ್ಷಕಾಲವಾಗಲಿದೆ. ಹೀಗಾಗಿ ಸೂರ್ಯ ಗ್ರಹಣದ ಹಿಂದಿನ ದಿನ ಡಿಸೆಂಬರ್ 25ರ ರಾತ್ರಿ ಪೂಜೆ ನಂತರ ದೇವಾಲಯದ ಬಾಗಿಲು ಬಂದ್ ಆಗಲಿದೆ.

    ಎಂದಿನಂತೆ ಡಿಸೆಂಬರ್ 26ರ ಮುಂಜಾನೆ ದೇವಾಲಯದ ಬಾಗಿಲು ತೆರೆಯುವುದಿಲ್ಲ. ಗ್ರಹಣ ಮುಕ್ತಾಯದ ನಂತರ ದೇವಾಲಯದಲ್ಲಿ ಶುದ್ಧಿ ಕಾರ್ಯಗಳನ್ನು ನೆರವೇರಿಸಿ ತದನಂತರ 1 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗುವುದು ಎಂದು ಚಿಕ್ಕಬಳ್ಳಾಪುರ ತಹಶೀಲ್ದಾರ್ ನರಸಿಂಹಮೂರ್ತಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಇನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯವೂ ಸಹ ಆ ದಿನ ಬಂದ್ ಆಗಲಿದೆ. ಗ್ರಹಣ ಮುಕ್ತಾಯದ ನಂತರ ದೇವಾಲಯದಲ್ಲಿ ಶುದ್ಧಿ ಕಾರ್ಯ ನೆರವೇರಿಸಿದ ನಂತರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸುವುದಾಗಿ ದೇವಾಲಯದ ಕಾರ್ಯ ನಿರ್ವಾಹಕಾಧಿಕಾರಿ ಕೃಷ್ಣಪ್ಪ ಪಬ್ಲಿಕ್ ಟಿವಿಗೆ ತಿಳಿಸಿದರು.

  • ದೇವಸ್ಥಾನದಲ್ಲಿ ಜಾವಳ ಕಾರ್ಯಕ್ರಮದ ಊಟ ಸೇವಿಸಿ 50 ಮಂದಿ ಅಸ್ವಸ್ಥ

    ದೇವಸ್ಥಾನದಲ್ಲಿ ಜಾವಳ ಕಾರ್ಯಕ್ರಮದ ಊಟ ಸೇವಿಸಿ 50 ಮಂದಿ ಅಸ್ವಸ್ಥ

    ಯಾದಗಿರಿ: ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವನೆ ಮಾಡಿ 50 ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಯಾದಗಿರಿಯಲ್ಲಿ ನಡೆದಿದೆ.

    ಜಿಲ್ಲೆಯ ಸುರಪುರ ತಾಲೂಕಿನ ಬೆಂಚಿಗಡ್ಡಿ ಗ್ರಾಮದ ಗವಿರಂಗ ಹನುಮಾನ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ಬೆಂಚಿಗಡ್ಡಿ ಗ್ರಾಮದ ಗವಿಯಪ್ಪ ಅವರ ಪುತ್ರನ ಜಾವಳ ಕಾರ್ಯಕ್ರಮ ಭಾನುವಾರ ನಡೆದಿತ್ತು. ಕಾರ್ಯಕ್ರಮಕ್ಕೆ ಬಂದವರಿಗಾಗಿ ಹೊಳಿಗೆ, ಅನ್ನ ಸಾಂಬರ್ ಹೀಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಜಾವಳ ಕಾರ್ಯಕ್ರಮ ಮುಗಿದ ನಂತರ ಊಟ ಬಡಿಸಲಾಯ್ತು. ಆದರೆ ಊಟ ಮಾಡಿದವರೆಲ್ಲರಿಗೂ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

    ಇದರಿಂದ ಗಾಬರಿಗೊಂಡ ಸ್ಥಳೀಯರು ಊಟವನ್ನು ಅರ್ಧಕ್ಕೆ ಬಿಟ್ಟು, ಅಸ್ವಸ್ಥಗೊಂಡವರನ್ನು ಕಕ್ಕೇರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಸದ್ಯ ವೈದ್ಯರು ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

    ಯಾವ ಕಾರಣಕ್ಕಾಗಿ ಈ ರೀತಿಯಾಗಿದೆ ಎಂದು ತಿಳಿದು ಬಂದಿಲ್ಲ. ಆಸ್ಪತ್ರೆಗೆ ಪೊಲೀಸರು ಭೇಟಿ ನೀಡಿ ಈ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

  • ನಿರ್ಮಾಣ ಹಂತದ ದೇವಸ್ಥಾನ ಕುಸಿತ- ತಪ್ಪಿದ ಭಾರೀ ಅನಾಹುತ

    ನಿರ್ಮಾಣ ಹಂತದ ದೇವಸ್ಥಾನ ಕುಸಿತ- ತಪ್ಪಿದ ಭಾರೀ ಅನಾಹುತ

    ಬೀದರ್: ನಗರದ ಸಾಯಿ ಕಾಲೋನಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಶ್ರೀ ಸಾಯಿ ಮಂದಿರದ ಮೇಲ್ಛಾವಣಿ ಕುಸಿದು ಭಾರೀ ಅವಘಡ ತಪ್ಪಿದೆ.

    ಲಕ್ಷಾಂತರ ಭಕ್ತರು ನೀಡಿದ ದೇಣಿಗೆ ಹಣದಲ್ಲಿ ಹಲವು ತಿಂಗಳುಗಳಿಂದ ಶ್ರೀ ಸಾಯಿ ಮಂದಿರದ ನಿರ್ಮಾಣವಾಗುತ್ತಿದೆ. ಆದರೆ ಶನಿವಾರ ದೇವಸ್ಥಾನ ಕುಸಿದು ಬಿದ್ದಿದೆ. ಅದೃಷ್ಟವಷಾತ್ ಈ ವೇಳೆ ಸ್ಥಳದಲ್ಲಿ ಕಾರ್ಮಿಕರು, ಸಾರ್ವಜನಿಕರು ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಕುಸಿದು ಬಿದ್ದ ಕಟ್ಟಡದ ಪಕ್ಕದ ಕಟ್ಟಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹೀಗಾಗಿ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳವು ಕುಸಿದಿರುವ ಕಟ್ಟಡವನ್ನು ತೆರವು ಗೊಳಿಸಿದೆ. ಗಾಂಧಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.