Tag: ದೇವದಾಸಿ

  • PUBLiC TV Impact | ಕೊನೆಗೂ ದೇವದಾಸಿ ಮಹಿಳೆಯ ಮಗಳಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸೀಟು ಹಂಚಿಕೆ

    PUBLiC TV Impact | ಕೊನೆಗೂ ದೇವದಾಸಿ ಮಹಿಳೆಯ ಮಗಳಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸೀಟು ಹಂಚಿಕೆ

    – 1 ವರ್ಷದಿಂದಲೂ ಸೀಟು ಸಿಗದೇ ಅಲೆದಾಡಿದ್ದ ಮಹಿಳೆ

    ಬೆಂಗಳೂರು: ವಿಜಯನಗರ (Vijayanagara) ಜಿಲ್ಲೆಯ ದೇವದಾಸಿ ಮಹಿಳೆಯೊಬ್ಬರ ಮಗಳಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ (Morarji Desai School) ಸೀಟು ನಿರಾಕರಣೆ ಕುರಿತು ನಿಮ್ಮ ʻಪಬ್ಲಿಕ್‌ ಟಿವಿʼಯಲ್ಲಿ (Public TV) ವರದಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಫಲಶ್ರುತಿ ಸಿಕ್ಕಿದೆ. ಕಳೆದ ಒಂದು ವರ್ಷದಿಂದಲೂ ಸೀಟು ಸಿಗದೇ ಅಲೆದಾಡುತ್ತಿದ್ದ ದೇವದಾಸಿ ಮಹಿಳೆಯ ಮಗಳಿಗೆ ʻಪಬ್ಲಿಕ್‌ʼ ವರದಿ ಬಳಿಕ ಸೀಟು ಹಂಚಿಕೆಯಾಗಿದೆ.

    ಹೌದು.. ʻಲೋಕದ ಕಣ್ಣಿಗೆ ಈ ‘ದೇವದಾಸಿ’ಯೂ ಕೂಡ ಎಲ್ಲರಂತೆ ಹೆಣ್ಣಾಗಿ ಯಾಕೆ ಕಾಣಲಿಲ್ಲ..!?ʼ ಎನ್ನುವ ಶೀರ್ಷಿಕೆಯೊಂದಿಗೆ ʻಪಬ್ಲಿಕ್‌ ಟಿವಿʼ ಸುದ್ದಿ ಪ್ರಸಾರ ಮಾಡಿತ್ತು. ಇದಕ್ಕೆ ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಕಚೇರಿಯೂ ಸ್ಪಂದಿಸಿತ್ತು. ಇನ್ನೂ ಸುದ್ದಿ ಪ್ರಸಾರವಾದ ಬೆನ್ನಲ್ಲೇ ಎಚ್ಚೆತ್ತ ಸಮಾಜ ಕಲ್ಯಾಣ ಇಲಾಖೆ ಎಚ್ಚೆತ್ತುಕೊಂಡಿತು. ವಿಜಯನಗರ ಜಿಲ್ಲೆ ಮೊರಾರ್ಜಿ ದೇಸಾಯಿ ಶಾಲೆಯ ಪ್ರಾಂಶುಪಾಲರಿಗೆ ಕರೆ ಮಾಡಿ ಸೀಟು ನೀಡುವಂತೆ ಸೂಚನೆ ನೀಡಿತು. ಈ ಹಿನ್ನೆಲೆ ದೇವದಾಸಿ ಮಹಿಳೆಯ ಮಗಳಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸೀಟು ಹಂಚಿಕೆ ಮಾಡಲಾಗಿದೆ. ಸೀಟು ಸಿಕ್ಕ ಬೆನ್ನಲ್ಲೇ ಮಹಿಳೆ ʻಪಬ್ಲಿಕ್‌ ಟಿವಿʼಗೆ ಧನ್ಯವಾದ ಹೇಳಿದ್ದಾರೆ.

    ದೇವದಾಸಿ ಮಹಿಳೆಯ ಬದುಕಿನ ಕಥೆ ಇಂತಿದೆ….
    ಎಲ್ಲಿಂದ ಆರಂಭಿಸಲಿ ಇಂದು ಭೇಟಿಯಾದ ಬಟ್ಟಲುಕಂಗಳ ತಿಳಿ ಹಸಿರ ಸೀರೆಯುಟ್ಟ ಆಕೆಯ ಕಥೆಯನ್ನು..!? ಆಕೆಯ ಕಣ್ಣೀರ ಕಥೆ ನಿಮ್ಮ ಮುಂದಿಡಲಾ, ದೇವದಾಸಿಯಾಗಿ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದು, ಬದುಕಿಡಿ ದಣಿದು ಹೋದ ಜೀವ ಈಗ ಹೊಸ ಬದುಕನ್ನು ಕಟ್ಟಿಕೊಂಡ ಬಗೆ ಹೇಳೋದಾ..!? ಅಥವಾ ತನ್ನ ರಕ್ತ ಹಂಚಿಕೊಂಡು ಬಂದ ಮೂರು ಮಕ್ಕಳಿಗೂ ಶಿಕ್ಷಣ ಕೊಟ್ಟು, ತಾನು ಓದುತ್ತಿರುವ ಆಕೆ ಪಡುತ್ತಿರುವ ಶ್ರಮದ ಕಥೆ ಹೇಳೋದಾ.‌! ಅಥವಾ ಅವಳ್ಯಾರದ್ದೋ ಜೊತೆ ಈಗಲೂ ಹೋಗುತ್ತಿದ್ದಾಳೆ ಬಿಡು ಅಂತಾ ಆಕೆಯ ಬೆನ್ನ ಹಿಂದೆ ಆಡಿಕೊಳ್ಳುವ ಕೆಲ ಘಾತುಕ ಕೆಟ್ಟ ಮನಸುಗಳ ಬಗ್ಗೆ ಧಿಕ್ಕಾರ ಹೇಳುತ್ತಾ ಆಕೆಯ ಕಥೆ ಶುರುಮಾಡಿಬಿಡೋದಾ..! ಆ ಗೋಳಿನ ಕಥೆ ಅಂತಾ ಓದದೇ ಇರಬೇಡಿ, ಈ ದೇವದಾಸಿಯ ಕಥೆ ನಮ್ಮ ನಿಮ್ಮ ಬದುಕನ್ನು ಬದಲಾಯಿಸಿಬಿಡಬಹುದು, ನೆಮ್ಮದಿಯ ಬದುಕು ಕಟ್ಟಿಕೊಂಡ ಮೇಲೂ ಸಣ್ಣ ಅಸಹನೆ, ಬದುಕಿನ ಮೇಲೆ ಬೇಸರದ ಭಾವವನ್ನು ತೊಡೆದುಹಾಕಬಹುದು. ಗೆದ್ದೇ ಗೆಲ್ಲುವೆ ಒಂದು ದಿನ ಅಂತಾ ಮೈಕೊಡವಿ ಎದ್ರೆ ಯಶಸ್ಸು ಕಾಲಬುಡಕ್ಕೆ ಬಂದೇ ಬರುತ್ತದೆ ಬಿಡು ಅನ್ನುವ ಆತ್ಮವಿಶ್ವಾಸವನ್ನು ಹುಟ್ಟಿಹಾಕಬಹುದು. ಹಾಗಾಗಿ ಕೇಳಿಸಿಕೊಂಡು ಬಿಡಿ..!

    ಹೆಸರು ಊರನ್ನು ಆಕೆಯ ಮನವಿ ಮೇರೆಗೆ ಅನಿವಾರ್ಯವಾಗಿ ಮರೆಮಾಚುತ್ತಿದ್ದೇನೆ.
    SSLC ಮುಗೀತಷ್ಟೇ, ಕಾಲೇಜು ಹೋಗುವ ಕನಸು ಹೊತ್ತ ಹೆಣ್ಣುಮಗಳವಳು, ಕಡುಬಡುತನ ಇದ್ರೂ ನೆಮ್ಮದಿಗೆ ಕೊರತೆ ಇರಲಿಲ್ಲ‌. ಅಪ್ಪ-ಅಮ್ಮ ಜೊತೆಗೆ ಅಣ್ಣ-ತಮ್ಮ ಸಹೋದರಿಯರ ಜೊತೆ ಬದುಕು ಚಂದ ಅನಿಸುವಾಗಲೇ ಸಹೋದರರು ಇಬ್ರೂ ಆಕಸ್ಮಿಕವಾಗಿ ಮೃತಪಟ್ರು. ಈಕೆಯ ತಾಯಿ ಮಾನಸಿಕವಾಗಿ ಕುಸಿದುಹೋದ್ರು. ಕುಟುಂಬದ ನೆಮ್ಮದಿ ಹಾರಿಹೋಯ್ತು. ಮನೆ ಸ್ಮಶಾನವಾಯಿತು. ಐದು‌ ಮಕ್ಕಳನ್ನು ಸಂಭಾಳಿಸುತ್ತಿದ್ದ ತಾಯಿ ಎರಡು ಮಕ್ಕಳನ್ನು ಕಳೆದುಕೊಂಡು ಮಾನಸಿಕವಾಗಿ ಅಘಾತಕ್ಕೆ ಒಳಗಾದ್ರು. ದೇವರ ಮುನಿಸು ಕಡಿಮೆಯಾಗಲಿ ಅನ್ನುವ ಮೂಢನಂಬಿಕೆಯ ಕಾರಣಕ್ಕೋ ಏನೋ ಗೊತ್ತಿಲ್ಲ ಆಕೆಯನ್ನು ಕುಟುಂಬಸ್ಥರೇ ಸೇರಿ ದೇವದಾಸಿ ಪದ್ಧತಿಗೆ ತಳ್ಳಿಬಿಟ್ರು.

    ಅದಾದ ಮೇಲೆ ಅಕ್ಷರಶಃ ನರಕದ ಬದುಕು. ಅಲ್ಲಿ ಆಕೆಗೆ ಜೊತೆಗಾರನ ಆಯ್ಕೆ ಮಾಡಲು ಅವಕಾಶ ನೀಡಿದ್ದಾರೆ. ಆದ್ರೇ ಮದುವೆ ಮಾತ್ರ ನಿಷಿದ್ಧ. ಆತ ಯಾವಾಗ ಬೇಕಾದ್ರೂ ಈಕೆಯನ್ನು ಬಿಟ್ಟು ಹೋಗಬಹುದು. ಎರಡು ಮಕ್ಕಳು ಭೂಮಿಗೆ ಬಂದ ಮೇಲೆ ಇನ್ನೊಂದು ಮಗು ಹೊಟ್ಟೆಯಲ್ಲಿ ಇರುವಾಗಲೇ ಈಕೆಯನ್ನು ಬಿಟ್ಟು ಆತ ಬೇರೆ ಹೋಗಿದ್ದಾನೆ. ಮೂರನೇ ಮಗು ಡೆಲಿವರಿಯಾದಾಗ, ಬಾಣಂತಿಗೆ ತಿನ್ನೋಕೆ ಗಂಜಿಯೂ ಇರಲಿಲ್ಲ. ಸಾಕು ಸಾಕು ಇಲ್ಲಿಗೆ ಈ ನರಕದ ಬದುಕು ಅಂತಾ ಅಂದುಕೊಂಡಿದ್ದಾಳೆ. ಆದರೆ, ಮಕ್ಕಳ ಮುಗ್ಧ ಮುಖ ನೆನಪಾಗಿ ಬದುಕು ಸಾಗಿಸುವ ಜಿದ್ದಿಗೆ ಬಿದ್ದಿದ್ದಾಳೆ. ಜಸ್ಟ್ 20 ದಿನಕ್ಕೆ ಹಸಿ ಬಾಣಂತಿ ಮಕ್ಕಳನ್ನು ಸಾಕಲು ಕೆಲ್ಸ ಹುಡುಕಿದ್ದಾಳೆ. ಈಕೆಯ ಪುಣ್ಯಕ್ಕೆ NGO ದಲ್ಲಿ ಕೆಲಸ ಸಿಕ್ಕಿದೆ. ಅಲ್ಲಿಗೆ ಮುಗಿಯಲ್ಲ ಬದುಕಿನ ಕಥೆ. ಅಲ್ಲಿಯೂ ಜನರ ಹೀಯಾಳಿಕೆ, ಆಕೆ ಎಲ್ಲಿ ಕೆಲ್ಸಕ್ಕೆ ಹೋಗ್ತಾಳೆ, ಮೈಮಾರಿ ಬದುಕುತ್ತಾಳೆ ಅಂತಾ ಹೆಜ್ಜೆ ಹೆಜ್ಜೆಗೂ ಆಕೆಯನ್ನು ಅನುಮಾನಿಸುವ, ಅಪಮಾನಿಸುವ ಜನ. ಛೀ ಥೂ ಅಂದ್ರು ಮಕ್ಕಳಿಗಾಗಿ ಅದೆಲ್ಲವನ್ನು ನುಂಗಿದ್ದಾಳೆ. ಈಗ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಿದ್ದಾಳೆ.

    ದೇವದಾಸಿಯಿಂದ ಹೊರ ಬಂದು ಅಪ್ಪ-ಅಮ್ಮನ ಸಾಕೋಕೆ ನಿಂತಿದ್ದಾಳೆ. ಅದಾದ ಮೇಲೆ ನನ್ನನ್ನು ಹೀಗಳೆದ ಸಮಾಜಕ್ಕೆ ಶಿಕ್ಷಣದಿಂದಲೇ ಉತ್ತರ ಕೊಡಬೇಕು ಅಂತಾ ಅನಿಸಿದೆ. ಮಕ್ಕಳನ್ನು ಓದಿಸುತ್ತಲೇ, ತಾನು ಹತ್ತು ವರ್ಷದ ಗ್ಯಾಪ್ ಬಳಿಕ ಪಿಯುಸಿ ಬರೆದಿದ್ದಾಳೆ‌. ಊಹೂ ಎಲ್ಲಾ ಸಬ್ಜೆಕ್ಟ್ ಫೇಲೂ..! ಮತ್ತೆ ಪರೀಕ್ಷೆ ಆಗ್ಲೂ ಫೇಲ್..! ಪೆಟ್ಟು ತಿಂದ ಜೀವಕ್ಕೆ ಛಲ ಕೊಂಚ ಹೆಚ್ಚೇ ಇರುತ್ತದೆ. ಮೂರನೇ ಸಲಕ್ಕೆ ಪಿಯುಸಿ ಪಾಸ್. ರಿಸಲ್ಟ್ ನೋಡಿ ಪುಟ್ಟ ಮಕ್ಕಳಂತೆ ಕುಣಿದಾಡಿದ್ದಾಳೆ. ಮಕ್ಕಳು ಅಮ್ಮನ ಖುಷಿ ಕಂಡು ಚಪ್ಪಾಳೆ ತಟ್ಟಿದ್ದಾರೆ. ಆಕೆ ಎಲ್ಲಿ ಪಾಸಾಗ್ತಾಳೆ, ಅಂತಾ ಎರಡು ಬಾರಿ ಪಿಯುಸಿ ಫೇಲ್ ಆಗಿದ್ದಾಗ ಪಕಪಕನೇ ನಕ್ಕಿದ್ದ ಊರವರು ಗಪ್ ಚುಪ್. ಆಕೆಯನ್ನು ಆಡಿಕೊಂಡ ಕೆಲವ್ರು ಪಿಯುಸಿ ಪಾಸಾದಾಗ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕ್ಕೊಂಡು ಕಂಗ್ರಾಟ್ಸ್ ಅಂದರಂತೆ.

    ಹೂಂ.. ಸರಿ ಸಾಕಪ್ಪ, ಇಷ್ಟು ಅಂತಾ ಸುಮ್ಮನಾಗಿಲ್ಲ ಈಕೆ.! ಡಿಗ್ರಿ ಓದಬೇಕು ಅಂತಾ ಮನಸಾಗಿದೆ. ಈಗ ನಾಲ್ಕನೇ ಸೆಮಿಸ್ಟರ್. ಕನಸು ಕಂಡು ನನಸು ಮಾಡಲು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿದ್ದಾಳೆ. ಒಂದು ಹೊತ್ತಿನ ಊಟಕ್ಕೆ ಕಷ್ಟ, ಮಕ್ಕಳನ್ನು ಓದಿಸುವ ಜವಾಬ್ದಾರಿ, ಇಷ್ಟೆಲ್ಲ ಇರುವಾಗಲೂ ಎಲ್ಲಿಂದ ಬರುತ್ತದೇ ಈ ಧೈರ್ಯ, ಓದುವ ಹಂಬಲ ಅಂತಾ ಕುತೂಹಲಕ್ಕೆ ಕೇಳಿದೆ. ನನ್ನ ಮಕ್ಕಳಿಗಾಗಿ ಅಂತಾ ಉತ್ತರ ರಪ್ ಅಂತಾ ಬಂತು. ನಾಳೆ ಈ ಸಮಾಜ ನನ್ನ ಮಕ್ಕಳಿಗೆ ನಿಮ್ಮ ಅಪ್ಪ ಎಲ್ಲಿ, ನಿಮ್ಮಮ್ಮ ಏನು ಮಾಡ್ಕೊಂಡಿದ್ಲು ಗೊತ್ತಾ ಅಂತಾ ನನ್ ಮಕ್ಕಳಿಗೆ ವ್ಯಂಗ್ಯ ಪ್ರಶ್ನೆ ಕೇಳುತ್ತೆ. ಆಗ ನನ್ ಮಕ್ಕಳು, ನಮಗೆ ಅಮ್ಮಾನೇ ಎಲ್ಲಾ, ಅಮ್ಮ ಹಿಂದೆ ದೇವದಾಸಿಯಾಗಿರಬಹುದು, ಆದ್ರೇ ಈಗ ಪಿಯುಸಿ ಬರೆದು ಬಿಎ ಓದಿದ್ದಾರೆ ಗೊತ್ತಾ ಅಂತಾ ಹೆಮ್ಮೆಯಿಂದ ದಿಟ್ಟತನದಿಂದ ಮಾತಾನಾಡಬೇಕು, ಅಲ್ಲಿಗೆ ನನ್ನ ಬದುಕು ಸಾರ್ಥಕ. ಅಬ್ಬಾ ಈ ಸಮಾಜ ಈ ತಾಯಿಯ ಬದುಕನ್ನು ಎಷ್ಟೇ ಅವಮಾನಿಸಿದ್ರೂ, ಆಕೆಯ ಮಕ್ಕಳು ಎಂದೂ ಅನುಮಾನಿಸದೇ ಇರಲಿ ದೇವರೇ ಅಂತಾ ಪ್ರಾರ್ಥಿಸಿಕೊಂಡೆ.

    ವಿಚಿತ್ರ ಗೊತ್ತಾ, ಶಿಕ್ಷಣದಿಂದ ಬದುಕು ಬದಲಾಯಿಸಬಹುದು ಅಂತಾ ಸರಸ್ವತಿಯ ಹಿಂದೆ ಹೊರಟ ಈ ಜೀವವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ‘ಉನ್ನತ’ ಶಿಕ್ಷಣ ಪಡೆದ ಅಧಿಕಾರಿಗಳು ಮಾತ್ರ ಆದ್ಯಾಗೆ ಕಡೆಗಣಿಸುತ್ತಿದ್ದಾರೆ ಗೊತ್ತಾ? ಒಂದು ವರ್ಷದಿಂದ ಈಕೆಯ ಮಗಳಿಗೆ ವಸತಿ ಶಾಲೆಯಲ್ಲಿ ಸೀಟು ಕೊಡುತ್ತಿಲ್ವಂತೆ. ಅಲೆದಾಡಿಸುತ್ತಿದ್ದಾರೆ ಪಾಪ.! ಈಕೆಯನ್ನು ಚೇಂಬರ್‌ನಲ್ಲಿ ಕರೆದುಕೊಂಡು ಕೂರಿಸಿ ನಿನ್ನ ಬದುಕೇ ಒಂದು ಪ್ರೇರಣೆ, ಕರೆದುಕೊಂಡು ಬಾ ನಿನ್ನ ಮಗಳನ್ನು ಚೆನ್ನಾಗಿ ಓದಲಿ ಅಂತಾ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕಾಗಿತ್ತು. ಆದ್ರೆ, ಅಧಿಕಾರಿಗಳು ಈ ಹೆಣ್ಣುಮಗಳನ್ನು ಒಂದು ವರ್ಷದಿಂದ ಅಲೆದಾಡಿಸುತ್ತಿದ್ದಾರೆ. ಹೇಗಾದ್ರೂ ಅಧಿಕಾರಿಗಳನ್ನು ಕಾಂಟೆಕ್ಟ್ ಮಾಡಿ ಸೀಟು ಕೊಡಿಸುವ ಭರವಸೆಯನ್ನು ಕೊಟ್ಟು ಬಂದಿದ್ದೇನೆ‌. ಆಕೆಯ ಬದುಕು, ಆಕೆಯ ಮಕ್ಕಳ ಬದುಕು ಚೆನ್ನಾಗಿರಲಿ ದೇವರೆ. ಅಮ್ಮನ ಕಷ್ಟ, ಸೆಣಸಾಟದ ಇಡೀ ಬದುಕನ್ನು ಮಕ್ಕಳು ಗೌರವಿಸಲಿ, ಅನ್ನೋದಷ್ಟೇ ನನ್ನ ಪ್ರಾರ್ಥನೆ.

  • ಲೋಕದ ಕಣ್ಣಿಗೆ ಈ ‘ದೇವದಾಸಿ’ಯೂ ಕೂಡ ಎಲ್ಲರಂತೆ ಹೆಣ್ಣಾಗಿ ಯಾಕೆ ಕಾಣಲಿಲ್ಲ..!?

    ಲೋಕದ ಕಣ್ಣಿಗೆ ಈ ‘ದೇವದಾಸಿ’ಯೂ ಕೂಡ ಎಲ್ಲರಂತೆ ಹೆಣ್ಣಾಗಿ ಯಾಕೆ ಕಾಣಲಿಲ್ಲ..!?

    – ಮೂರು ಮಕ್ಕಳ ಶಿಕ್ಷಣದ ಜೊತೆ ತನ್ನ ವಿದ್ಯಾಭ್ಯಾಸ ಮುಂದುವರೆಸಿದ ದೇವದಾಸಿ ಮಹಿಳೆಯ ಬದುಕಿನ ಕಥೆ‌‌!

    ಪವಿತ್ರ ಕಡ್ತಲ, ಪಬ್ಲಿಕ್ ಟಿವಿ

    ಲ್ಲಿಂದ ಆರಂಭಿಸಲಿ ಇಂದು ಭೇಟಿಯಾದ ಬಟ್ಟಲುಕಂಗಳ ತಿಳಿ ಹಸಿರ ಸೀರೆಯುಟ್ಟ ಆಕೆಯ ಕಥೆಯನ್ನು..!? ಆಕೆಯ ಕಣ್ಣೀರ ಕಥೆ ನಿಮ್ಮ ಮುಂದಿಡಲಾ, ದೇವದಾಸಿಯಾಗಿ ಕಾಲಿಗೆ ಗೆಜ್ಜೆ ಕಟ್ಟಿ ಕುಣಿದು, ಬದುಕಿಡಿ ದಣಿದು ಹೋದ ಜೀವ ಈಗ ಹೊಸ ಬದುಕನ್ನು ಕಟ್ಟಿಕೊಂಡ ಬಗೆ ಹೇಳೋದಾ..!? ಅಥವಾ ತನ್ನ ರಕ್ತ ಹಂಚಿಕೊಂಡು ಬಂದ ಮೂರು ಮಕ್ಕಳಿಗೂ ಶಿಕ್ಷಣ ಕೊಟ್ಟು, ತಾನು ಓದುತ್ತಿರುವ ಆಕೆ ಪಡುತ್ತಿರುವ ಶ್ರಮದ ಕಥೆ ಹೇಳೋದಾ.‌! ಅಥವಾ ಅವಳ್ಯಾರದ್ದೋ ಜೊತೆ ಈಗಲೂ ಹೋಗುತ್ತಿದ್ದಾಳೆ ಬಿಡು ಅಂತಾ ಆಕೆಯ ಬೆನ್ನ ಹಿಂದೆ ಆಡಿಕೊಳ್ಳುವ ಕೆಲ ಘಾತುಕ ಕೆಟ್ಟ ಮನಸುಗಳ ಬಗ್ಗೆ ಧಿಕ್ಕಾರ ಹೇಳುತ್ತಾ ಆಕೆಯ ಕಥೆ ಶುರುಮಾಡಿಬಿಡೋದಾ..! ಆ ಗೋಳಿನ ಕಥೆ ಅಂತಾ ಓದದೇ ಇರಬೇಡಿ, ಈ ದೇವದಾಸಿಯ ಕಥೆ ನಮ್ಮ ನಿಮ್ಮ ಬದುಕನ್ನು ಬದಲಾಯಿಸಿಬಿಡಬಹುದು, ನೆಮ್ಮದಿಯ ಬದುಕು ಕಟ್ಟಿಕೊಂಡ ಮೇಲೂ ಸಣ್ಣ ಅಸಹನೆ, ಬದುಕಿನ ಮೇಲೆ ಬೇಸರದ ಭಾವವನ್ನು ತೊಡೆದುಹಾಕಬಹುದು. ಗೆದ್ದೇ ಗೆಲ್ಲುವೆ ಒಂದು ದಿನ ಅಂತಾ ಮೈಕೊಡವಿ ಎದ್ರೆ ಯಶಸ್ಸು ಕಾಲಬುಡಕ್ಕೆ ಬಂದೇ ಬರುತ್ತದೆ ಬಿಡು ಅನ್ನುವ ಆತ್ಮವಿಶ್ವಾಸವನ್ನು ಹುಟ್ಟಿಹಾಕಬಹುದು. ಹಾಗಾಗಿ ಕೇಳಿಸಿಕೊಂಡು ಬಿಡಿ..!

    ಹೆಸರು ಊರನ್ನು ಆಕೆಯ ಮನವಿ ಮೇರೆಗೆ ಅನಿವಾರ್ಯವಾಗಿ ಮರೆಮಾಚುತ್ತಿದ್ದೇನೆ.

    SSLC ಮುಗೀತಷ್ಟೇ, ಕಾಲೇಜು ಹೋಗುವ ಕನಸು ಹೊತ್ತ ಹೆಣ್ಣುಮಗಳವಳು, ಕಡುಬಡುತನ ಇದ್ರೂ ನೆಮ್ಮದಿಗೆ ಕೊರತೆ ಇರಲಿಲ್ಲ‌. ಅಪ್ಪ-ಅಮ್ಮ ಜೊತೆಗೆ ಅಣ್ಣ-ತಮ್ಮ ಸಹೋದರಿಯರ ಜೊತೆ ಬದುಕು ಚಂದ ಅನಿಸುವಾಗಲೇ ಸಹೋದರರು ಇಬ್ರೂ ಆಕಸ್ಮಿಕವಾಗಿ ಮೃತಪಟ್ರು. ಈಕೆಯ ತಾಯಿ ಮಾನಸಿಕವಾಗಿ ಕುಸಿದುಹೋದ್ರು. ಕುಟುಂಬದ ನೆಮ್ಮದಿ ಹಾರಿಹೋಯ್ತು. ಮನೆ ಸ್ಮಶಾನವಾಯಿತು. ಐದು‌ ಮಕ್ಕಳನ್ನು ಸಂಭಾಳಿಸುತ್ತಿದ್ದ ತಾಯಿ ಎರಡು ಮಕ್ಕಳನ್ನು ಕಳೆದುಕೊಂಡು ಮಾನಸಿಕವಾಗಿ ಅಘಾತಕ್ಕೆ ಒಳಗಾದ್ರು. ದೇವರ ಮುನಿಸು ಕಡಿಮೆಯಾಗಲಿ ಅನ್ನುವ ಮೂಢನಂಬಿಕೆಯ ಕಾರಣಕ್ಕೋ ಏನೋ ಗೊತ್ತಿಲ್ಲ ಆಕೆಯನ್ನು ಕುಟುಂಬಸ್ಥರೇ ಸೇರಿ ದೇವದಾಸಿ ಪದ್ಧತಿಗೆ ತಳ್ಳಿಬಿಟ್ರು. ಇದನ್ನೂ ಓದಿ: ನವೀಕರಿಸಬಹುದಾದ ಇಂಧನದಿಂದ 4 ಲಕ್ಷ ಕೋಟಿ ರೂ. ಉಳಿತಾಯ: ಪ್ರಹ್ಲಾದ್ ಜೋಶಿ

    ಅದಾದ ಮೇಲೆ ಅಕ್ಷರಶಃ ನರಕದ ಬದುಕು. ಅಲ್ಲಿ ಆಕೆಗೆ ಜೊತೆಗಾರನ ಆಯ್ಕೆ ಮಾಡಲು ಅವಕಾಶ ನೀಡಿದ್ದಾರೆ. ಆದ್ರೇ ಮದುವೆ ಮಾತ್ರ ನಿಷಿದ್ಧ. ಆತ ಯಾವಾಗ ಬೇಕಾದ್ರೂ ಈಕೆಯನ್ನು ಬಿಟ್ಟು ಹೋಗಬಹುದು. ಎರಡು ಮಕ್ಕಳು ಭೂಮಿಗೆ ಬಂದ ಮೇಲೆ ಇನ್ನೊಂದು ಮಗು ಹೊಟ್ಟೆಯಲ್ಲಿ ಇರುವಾಗಲೇ ಈಕೆಯನ್ನು ಬಿಟ್ಟು ಆತ ಬೇರೆ ಹೋಗಿದ್ದಾನೆ. ಮೂರನೇ ಮಗು ಡೆಲಿವರಿಯಾದಾಗ, ಬಾಣಂತಿಗೆ ತಿನ್ನೋಕೆ ಗಂಜಿಯೂ ಇರಲಿಲ್ಲ. ಸಾಕು ಸಾಕು ಇಲ್ಲಿಗೆ ಈ ನರಕದ ಬದುಕು ಅಂತಾ ಅಂದುಕೊಂಡಿದ್ದಾಳೆ. ಆದರೆ, ಮಕ್ಕಳ ಮುಗ್ಧ ಮುಖ ನೆನಪಾಗಿ ಬದುಕು ಸಾಗಿಸುವ ಜಿದ್ದಿಗೆ ಬಿದ್ದಿದ್ದಾಳೆ. ಜಸ್ಟ್ 20 ದಿನಕ್ಕೆ ಹಸಿ ಬಾಣಂತಿ ಮಕ್ಕಳನ್ನು ಸಾಕಲು ಕೆಲ್ಸ ಹುಡುಕಿದ್ದಾಳೆ. ಈಕೆಯ ಪುಣ್ಯಕ್ಕೆ NGO ದಲ್ಲಿ ಕೆಲಸ ಸಿಕ್ಕಿದೆ. ಅಲ್ಲಿಗೆ ಮುಗಿಯಲ್ಲ ಬದುಕಿನ ಕಥೆ. ಅಲ್ಲಿಯೂ ಜನರ ಹೀಯಾಳಿಕೆ, ಆಕೆ ಎಲ್ಲಿ ಕೆಲ್ಸಕ್ಕೆ ಹೋಗ್ತಾಳೆ, ಮೈಮಾರಿ ಬದುಕುತ್ತಾಳೆ ಅಂತಾ ಹೆಜ್ಜೆ ಹೆಜ್ಜೆಗೂ ಆಕೆಯನ್ನು ಅನುಮಾನಿಸುವ, ಅಪಮಾನಿಸುವ ಜನ. ಛೀ ಥೂ ಅಂದ್ರು ಮಕ್ಕಳಿಗಾಗಿ ಅದೆಲ್ಲವನ್ನು ನುಂಗಿದ್ದಾಳೆ. ಈಗ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುತ್ತಿದ್ದಾಳೆ.

     

    ದೇವದಾಸಿಯಿಂದ ಹೊರ ಬಂದು ಅಪ್ಪ-ಅಮ್ಮನ ಸಾಕೋಕೆ ನಿಂತಿದ್ದಾಳೆ. ಅದಾದ ಮೇಲೆ ನನ್ನನ್ನು ಹೀಗಳೆದ ಸಮಾಜಕ್ಕೆ ಶಿಕ್ಷಣದಿಂದಲೇ ಉತ್ತರ ಕೊಡಬೇಕು ಅಂತಾ ಅನಿಸಿದೆ. ಮಕ್ಕಳನ್ನು ಓದಿಸುತ್ತಲೇ, ತಾನು ಹತ್ತು ವರ್ಷದ ಗ್ಯಾಪ್ ಬಳಿಕ ಪಿಯುಸಿ ಬರೆದಿದ್ದಾಳೆ‌. ಊಹೂ ಎಲ್ಲಾ ಸಬ್ಜೆಕ್ಟ್ ಫೇಲೂ..! ಮತ್ತೆ ಪರೀಕ್ಷೆ ಆಗ್ಲೂ ಫೇಲ್..! ಪೆಟ್ಟು ತಿಂದ ಜೀವಕ್ಕೆ ಛಲ ಕೊಂಚ ಹೆಚ್ಚೇ ಇರುತ್ತದೆ. ಮೂರನೇ ಸಲಕ್ಕೆ ಪಿಯುಸಿ ಪಾಸ್. ರಿಸಲ್ಟ್ ನೋಡಿ ಪುಟ್ಟ ಮಕ್ಕಳಂತೆ ಕುಣಿದಾಡಿದ್ದಾಳೆ. ಮಕ್ಕಳು ಅಮ್ಮನ ಖುಷಿ ಕಂಡು ಚಪ್ಪಾಳೆ ತಟ್ಟಿದ್ದಾರೆ. ಆಕೆ ಎಲ್ಲಿ ಪಾಸಾಗ್ತಾಳೆ, ಅಂತಾ ಎರಡು ಬಾರಿ ಪಿಯುಸಿ ಫೇಲ್ ಆಗಿದ್ದಾಗ ಪಕಪಕನೇ ನಕ್ಕಿದ್ದ ಊರವರು ಗಪ್ ಚುಪ್. ಆಕೆಯನ್ನು ಆಡಿಕೊಂಡ ಕೆಲವ್ರು ಪಿಯುಸಿ ಪಾಸಾದಾಗ ಮೊಬೈಲ್‌ನಲ್ಲಿ ಸ್ಟೇಟಸ್ ಹಾಕ್ಕೊಂಡು ಕಂಗ್ರಾಟ್ಸ್ ಅಂದರಂತೆ.

    ಹೂಂ.. ಸರಿ ಸಾಕಪ್ಪ, ಇಷ್ಟು ಅಂತಾ ಸುಮ್ಮನಾಗಿಲ್ಲ ಈಕೆ.! ಡಿಗ್ರಿ ಓದಬೇಕು ಅಂತಾ ಮನಸಾಗಿದೆ. ಈಗ ನಾಲ್ಕನೇ ಸೆಮಿಸ್ಟರ್. ಕನಸು ಕಂಡು ನನಸು ಮಾಡಲು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿದ್ದಾಳೆ. ಒಂದು ಹೊತ್ತಿನ ಊಟಕ್ಕೆ ಕಷ್ಟ, ಮಕ್ಕಳನ್ನು ಓದಿಸುವ ಜವಾಬ್ದಾರಿ, ಇಷ್ಟೆಲ್ಲ ಇರುವಾಗಲೂ ಎಲ್ಲಿಂದ ಬರುತ್ತದೇ ಈ ಧೈರ್ಯ, ಓದುವ ಹಂಬಲ ಅಂತಾ ಕುತೂಹಲಕ್ಕೆ ಕೇಳಿದೆ. ನನ್ನ ಮಕ್ಕಳಿಗಾಗಿ ಅಂತಾ ಉತ್ತರ ರಪ್ ಅಂತಾ ಬಂತು. ನಾಳೆ ಈ ಸಮಾಜ ನನ್ನ ಮಕ್ಕಳಿಗೆ ನಿಮ್ಮ ಅಪ್ಪ ಎಲ್ಲಿ, ನಿಮ್ಮಮ್ಮ ಏನು ಮಾಡ್ಕೊಂಡಿದ್ಲು ಗೊತ್ತಾ ಅಂತಾ ನನ್ ಮಕ್ಕಳಿಗೆ ವ್ಯಂಗ್ಯ ಪ್ರಶ್ನೆ ಕೇಳುತ್ತೆ. ಆಗ ನನ್ ಮಕ್ಕಳು, ನಮಗೆ ಅಮ್ಮಾನೇ ಎಲ್ಲಾ, ಅಮ್ಮ ಹಿಂದೆ ದೇವದಾಸಿಯಾಗಿರಬಹುದು, ಆದ್ರೇ ಈಗ ಪಿಯುಸಿ ಬರೆದು ಬಿಎ ಓದಿದ್ದಾರೆ ಗೊತ್ತಾ ಅಂತಾ ಹೆಮ್ಮೆಯಿಂದ ದಿಟ್ಟತನದಿಂದ ಮಾತಾನಾಡಬೇಕು, ಅಲ್ಲಿಗೆ ನನ್ನ ಬದುಕು ಸಾರ್ಥಕ. ಅಬ್ಬಾ ಈ ಸಮಾಜ ಈ ತಾಯಿಯ ಬದುಕನ್ನು ಎಷ್ಟೇ ಅವಮಾನಿಸಿದ್ರೂ, ಆಕೆಯ ಮಕ್ಕಳು ಎಂದೂ ಅನುಮಾನಿಸದೇ ಇರಲಿ ದೇವರೇ ಅಂತಾ ಪ್ರಾರ್ಥಿಸಿಕೊಂಡೆ. ಇದನ್ನೂ ಓದಿ: ಶಾಲಾ ಕಟ್ಟಡ ಕುಸಿದು 4 ಮಕ್ಕಳ ದಾರುಣ ಸಾವು – ಅವಶೇಷಗಳ ಅಡಿ ಸಿಲುಕಿದ 60 ಮಕ್ಕಳು

    ವಿಚಿತ್ರ ಗೊತ್ತಾ, ಶಿಕ್ಷಣದಿಂದ ಬದುಕು ಬದಲಾಯಿಸಬಹುದು ಅಂತಾ ಸರಸ್ವತಿಯ ಹಿಂದೆ ಹೊರಟ ಈ ಜೀವವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿರುವ ‘ಉನ್ನತ’ ಶಿಕ್ಷಣ ಪಡೆದ ಅಧಿಕಾರಿಗಳು ಮಾತ್ರ ಆದ್ಯಾಗೆ ಕಡೆಗಣಿಸುತ್ತಿದ್ದಾರೆ ಗೊತ್ತಾ? ಒಂದು ವರ್ಷದಿಂದ ಈಕೆಯ ಮಗಳಿಗೆ ವಸತಿ ಶಾಲೆಯಲ್ಲಿ ಸೀಟು ಕೊಡುತ್ತಿಲ್ವಂತೆ. ಅಲೆದಾಡಿಸುತ್ತಿದ್ದಾರೆ ಪಾಪ.! ಈಕೆಯನ್ನು ಚೇಂಬರ್‌ನಲ್ಲಿ ಕರೆದುಕೊಂಡು ಕೂರಿಸಿ ನಿನ್ನ ಬದುಕೇ ಒಂದು ಪ್ರೇರಣೆ, ಕರೆದುಕೊಂಡು ಬಾ ನಿನ್ನ ಮಗಳನ್ನು ಚೆನ್ನಾಗಿ ಓದಲಿ ಅಂತಾ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕಾಗಿತ್ತು. ಆದ್ರೆ, ಅಧಿಕಾರಿಗಳು ಈ ಹೆಣ್ಣುಮಗಳನ್ನು ಒಂದು ವರ್ಷದಿಂದ ಅಲೆದಾಡಿಸುತ್ತಿದ್ದಾರೆ. ಹೇಗಾದ್ರೂ ಅಧಿಕಾರಿಗಳನ್ನು ಕಾಂಟೆಕ್ಟ್ ಮಾಡಿ ಸೀಟು ಕೊಡಿಸುವ ಭರವಸೆಯನ್ನು ಕೊಟ್ಟು ಬಂದಿದ್ದೇನೆ‌. ಆಕೆಯ ಬದುಕು, ಆಕೆಯ ಮಕ್ಕಳ ಬದುಕು ಚೆನ್ನಾಗಿರಲಿ ದೇವರೆ. ಅಮ್ಮನ ಕಷ್ಟ, ಸೆಣಸಾಟದ ಇಡೀ ಬದುಕನ್ನು ಮಕ್ಕಳು ಗೌರವಿಸಲಿ, ಅನ್ನೋದಷ್ಟೇ ನನ್ನ ಪ್ರಾರ್ಥನೆ.

  • ದೇವದಾಸಿಯರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯ ಆಗುತ್ತೆ : ಲಕ್ಷ್ಮಿ ಹೆಬ್ಬಾಳ್ಕರ್

    ದೇವದಾಸಿಯರಿಗೆ ಗೃಹಲಕ್ಷ್ಮಿ ಯೋಜನೆ ಅನ್ವಯ ಆಗುತ್ತೆ : ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ರಾಜ್ಯದಲ್ಲಿನ ದೇವದಾಸಿ ಮಹಿಳೆಯರಿಗೆ ಕೂಡಾ ಗೃಹ ಲಕ್ಷ್ಮೀ (Gruha Lakshmi) ಯೋಜನೆಯ ನೆರವು ದೊರೆಯುತ್ತಿದ್ದು, ಸೌಲಭ್ಯ ದೊರೆಯದ ಬಗ್ಗೆ ಯಾವುದೇ ದೂರು ಸಲ್ಲಿಕೆಯಾದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಅಂತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.

    ವಿಧಾನ ಪರಿಷತ್ (Vidhan Parishad) ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಹೇಮಲತಾ ನಾಯಕ್ ಪ್ರಶ್ನೆ ಕೇಳಿದ್ರು.ಕೊಪ್ಪಳದಲ್ಲಿ ಸರಿಯಾಗಿ ದೇವದಾಸಿಯರಿಗೆ (Devadasi) ಮಾಶಾಸನ ಸಿಗುತ್ತಿಲ್ಲ. ದೇವದಾಸಿಯರ ಸರ್ವೆ ಸರಿಯಾಗಿ ಆಗಿಲ್ಲ. ದೇವದಾಸಿಯರ ಮಾಶಾಸನ 5 ಸಾವಿರಕ್ಕೆ ಹೆಚ್ಚಳ ಮಾಡಬೇಕು.ಗೃಹಲಕ್ಷ್ಮಿ ಯೋಜನೆ ದೇವದಾಸಿಯರಿಗೆ ನೀಡಬೇಕು ಅಂತ ಒತ್ತಾಯ ಮಾಡಿದ್ರು.

     

    ಇದಕ್ಕೆ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಿ, ದೇವದಾಸಿಯರಿಗೆ ಸರಿಯಾಗಿ ಮಾಶಾಸನ ಡಿಬಿಟಿ ಮೂಲಕ ಹಾಕಲಾಗ್ತಿದೆ.ಎಲ್ಲೂ ಕೂಡಾ ಮಾಶಾಸನ ಸೋರಿಕೆ ಆಗ್ತಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ ದೇವದಾಸಿಯರ ಸರ್ವೆ ಸರಿಯಾಗಿ ಆಗಿಲ್ಲ ಅನ್ನೋ ಬಗ್ಗೆ ಮತ್ತೊಮ್ಮೆ ಸಮೀಕ್ಷೆ ಮಾಡುತ್ತೇವೆ ಎಂದರು.

    ದೇವದಾಸಿಯರಿಗೆ 2 ಸಾವಿರ ರೂ. ಮಾಶಾಸನ ಕೊಡಲಾಗುತ್ತಿದೆ‌. ಪ್ರತಿ ವರ್ಷ 250 ದೇವದಾಸಿಯರಿಗೆ ಒಂದು ಸಾರಿಗೆ ಪ್ರೊತ್ಸಾಹ ಧನವಾಗಿ 30 ಸಾವಿರ ನೀಡಲಾಗುತ್ತದೆ‌. ಈ ಹಣ ವಾಪಸ್ ಕೊಡುವ ಹಾಕಿಲ್ಲ.ದೇವದಾಸಿಯರಿಗೆ ಆರೋಗ್ಯ ತಪಾಸಣೆ ಮಾಡೋ ಕೆಲಸ ಆಗ್ತಿದೆ.ಮನೆಗಳು ಕೊಡೋ ಬಗ್ಗೆ ನಾವು ಪಟ್ಟಿ ಮಾಡಿ ವಸತಿ ಇಲಾಖೆಗೆ ಕಳಿಸುತ್ತೇವೆ. ಅವರು ಅಂತಿಮ ನಿರ್ಧಾರ ಮಾಡಬೇಕು.ಯಾರು ಅರ್ಜಿ ಹಾಕಿರುತ್ತಾರೋ ಅವರಿಗೆ ಆದ್ಯತೆ ಮೇರೆಗೆ ಮನೆ ಹಂಚಿಕೆ ಮಾಡುತ್ತದೆ.ಗೃಹಲಕ್ಷ್ಮಿ ಯೋಜನೆ ದೇವದಾಸಿಯರಿಗೆ ಕೊಡಲಾಗ್ತಿದೆ. ಯಾರಿಗಾದರೂ ಸಿಗದೇ ಇದ್ದರೆ ಮಾಹಿತಿ ಕೊಟ್ಟರೆ ಅವರಿಗೆ ಗೃಹಲಕ್ಷ್ಮಿ ಯೋಜನೆ ಕೊಡುತ್ತೇವೆ ಎಂದು ತಿಳಿಸಿದರು.

     

  • ಮದ್ವೆಯಾಗದೇ ನಿರಂತರ ದೈಹಿಕ ಸಂಬಂಧ ಹೊಂದಲು ಮುತ್ತುಕಟ್ಟಿ ದೇವದಾಸಿ ಮಾಡ್ದ!

    ಮದ್ವೆಯಾಗದೇ ನಿರಂತರ ದೈಹಿಕ ಸಂಬಂಧ ಹೊಂದಲು ಮುತ್ತುಕಟ್ಟಿ ದೇವದಾಸಿ ಮಾಡ್ದ!

    ಕೊಪ್ಪಳ: ಯುವತಿಯೊಂದಿಗೆ ಪ್ರೀತಿ ನಾಟಕವಾಡಿದ್ದ ವ್ಯಕ್ತಿ ಆಕೆಯನ್ನು ದೇವದಾಸಿ ಪದ್ಧತಿಗೆ ದೂಡಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಕುಷ್ಟಗಿ ತಾಲೂಕು ತೆಗ್ಗಿಹಾಳ ಗ್ರಾಮದಲ್ಲಿ 22 ವರ್ಷದ ಯುವತಿಯನ್ನು ದೇವದಾಸಿ ಪದ್ಧತಿಗೆ ದೂಡಲಾಗಿದೆ. ತೆಗ್ಗಿಹಾಳ ಗ್ರಾಮದ ಚಂದ್ರಶೇಖರ್ ಕುರಿ ಎಂಬಾತ ಆ ಗ್ರಾಮದ ದಲಿತ ಯುವತಿಯೊಂದಿಗೆ ಪ್ರೀತಿ ನಾಟಕವಾಡಿ ದೈಹಿಕವಾಗಿ ಸಂಪರ್ಕ ಬೆಳೆಸಿದ್ದಾನೆ.

    ಈ ವಿಷಯ ತಿಳಿದ ಯುವತಿಯ ಸಹೋದರ ಆಕೆಗೆ ಮದುವೆ ಮಾಡಿಸಲು ಮುಂದಾಗಿದ್ದಾನೆ. ಮದುವೆಯಾದರೆ ಯುವತಿ ದೂರವಾಗುತ್ತಾಳೆ ಎಂಬ ಕಾರಣಕ್ಕೆ ಆಕೆ ತಾಯಿ ಮತ್ತು ಸೋದರ ಮಾವನಿಗೆ ಯುವಕ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ ಹಣದ ಆಮಿಷ ತೋರಿಸಿ ಆಕೆಗೆ ಮುತ್ತು ಕಟ್ಟಿಸಿದ್ದಾನೆ. ಆಕೆಯನ್ನು ಮದುವೆಯಾಗದೇ ನಿರಂತರ ದೈಹಿಕ ಸಂಬಂಧ ಇಟ್ಟುಕೊಳ್ಳುವ ದುರುದ್ದೇಶದಿಂದ ಚಂದ್ರಶೇಖರ ಈ ಕೃತ್ಯ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

    ಮುತ್ತು ಕಟ್ಟಿ ದೇವದಾಸಿ ಮಾಡಿಸಿ ಬಾಳು ಹಾಳು ಮಾಡಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದರೂ ಅನಿಷ್ಠ ಪದ್ಧತಿ ತಡೆಯುವಲ್ಲಿ ಕೊಪ್ಪಳ ಜಿಲ್ಲಾಡಳಿತ ವಿಫಲವಾಗಿದೆ ಎಂದು ವಿಮುಕ್ತ ದೇವದಾಸಿ ಮಹಿಳೆಯರು ಮತ್ತು ಮಕ್ಕಳ ವೇದಿಕೆ ಆರೋಪಿಸಿದೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ 12 ವೃದ್ಧ ದೇವದಾಸಿಯರು!

    ದಾಂಪತ್ಯ ಜೀವನಕ್ಕೆ ಕಾಲಿಟ್ಟ 12 ವೃದ್ಧ ದೇವದಾಸಿಯರು!

    – ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ವೇಳೆ ನಡೆದ ಶುಭವಿವಾಹ

    ರಾಯಚೂರು: ಯವ್ವನದಲ್ಲಿ ಅನಿಷ್ಠ ಪದ್ದತಿಗೆ ಬಲಿಯಾಗಿ ದೇವದಾಸಿಯರಾಗಿ ಬದುಕಿದ 12 ಜನ ವೃದ್ಧೆಯರು ಈಗ ನವ ದಾಂಪತ್ಯಕ್ಕೆ ಕಾಲಿಟ್ಟು ಸಂಸಾರಸ್ಥರಾಗಿದ್ದಾರೆ. ರಾಯಚೂರಿನ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನಡೆದ ಜಿಲ್ಲಾ ಮಟ್ಟದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಇಳಿ ವಯಸ್ಸಿನ ದೇವದಾಸಿಯರಿಗೆ ಕಾನೂನುಬದ್ಧವಾಗಿ ಮದುವೆ ಮಾಡಲಾಯಿತು.

    ಈಗಾಗಲೇ ತಮಗೆ ನೆಚ್ಚಿದವರ ಜೊತೆ ಸಂಸಾರ ಮಾಡುತ್ತಿರುವ ಮಹಿಳೆಯರಿಗೆ ಅವರ ಮದುವೆಯನ್ನು ನೋಂದಣಿ ಮಾಡಿಸುವ ಮೂಲಕ ಪುನಃ ವಿವಾಹ ಮಾಡಲಾಯಿತು. ಕಾರ್ಯಕ್ರಮದಲ್ಲಿ 59 ವರ್ಷದ ಹುಲಿಗೆಮ್ಮ, 63 ವರ್ಷದ ದಸ್ತಗಿರಿ ಸಾಬ್, ಜಾತಿ-ಧರ್ಮ ಬದಿಗೊತ್ತಿ ಸ್ವಯಂ ಪ್ರೇರಣೆಯಿಂದ ಮದುವೆಯಾಗುವ ಮೂಲಕ ಇತರರಿಗೆ ಮಾದರಿಯಾದರು.

    ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ದೇವದಾಸಿ ಪದ್ಧತಿಯಿಂದ ಹೊರಬರುವವರಿಗೆ ಸರ್ಕಾರಿ ಸೌಲಭ್ಯಗಳನ್ನು ಕೂಡಲೇ ಕೊಡಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ದೇವದಾಸಿ ಪದ್ಧತಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಇಳಿವಯಸ್ಸಿನಲ್ಲಿ ಜಾತಿ-ಧರ್ಮ ಎಲ್ಲವನ್ನೂ ಮೀರಿ ದಾಂಪತ್ಯಕ್ಕೆ ಕಾಲಿಟ್ಟ ದಂಪತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

    ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ, ಜಿಲ್ಲಾ ದೇವದಾಸಿ ವಿಮೋಚನಾ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೇವದಾಸಿ ಪದ್ಧತಿಯಿಂದ ವಿಮುಕ್ತಿಗೊಂಡು ಉನ್ನತ ಸಾಮಾಜಿಕ ಬದುಕನ್ನ ನಡೆಸುತ್ತಿರುವ ಜಿಲ್ಲೆಯ ನೂರಾರು ಜನ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಮಹಿಳೆಯರಿಗಾಗಿ ಓಟದ ಸ್ಪರ್ಧೆ, ಮ್ಯೂಸಿಕಲ್ ಚಯರ್, ನಿಂಬು ಚಮಚದ ಆಟಗಳನ್ನ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಗೆದ್ದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.