Tag: ದೆವ್ವ

  • Shivamogga | ದೆವ್ವ ಬಿಡಿಸುತ್ತೇನೆಂದು ಚಿತ್ರಹಿಂಸೆ – ಮಹಿಳೆ ಸಾವು

    Shivamogga | ದೆವ್ವ ಬಿಡಿಸುತ್ತೇನೆಂದು ಚಿತ್ರಹಿಂಸೆ – ಮಹಿಳೆ ಸಾವು

    ಶಿವಮೊಗ್ಗ: ದೆವ್ವ (Evil) ಅಂಟಿಕೊಂಡಿದೆ, ಬಿಡಿಸುತ್ತೇನೆಂದು ಹೇಳಿ ಚಿತ್ರಹಿಂಸೆ ನೀಡಿದ ಪರಿಣಾಮ ಆರೋಗ್ಯದಲ್ಲಿ ಏರುಪೇರಾಗಿ ಮಹಿಳೆ (Woman) ಸಾವನ್ನಪ್ಪಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಳೆಹೊನ್ನೂರಿನ ಜಂಬರಗಟ್ಟೆಯಲ್ಲಿ ನಡೆದಿದೆ.

    ಜಂಬರಗಟ್ಟೆ ನಿವಾಸಿ ಗೀತಮ್ಮ (50) ಸಾವನ್ನಪ್ಪಿದ ಮಹಿಳೆ. ತಾಯಿಗೆ ಹುಷಾರಿಲ್ಲದ ಹಿನ್ನೆಲೆ ಮಗನೇ ದೆವ್ವ ಬಿಡಿಸಲು ಹೊಸ ಜಂಬರಘಟ್ಟಕ್ಕೆ ಕರೆದುಕೊಂಡು ಹೋಗಿದ್ದ. ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಗೀತಮ್ಮನನ್ನು ದೆವ್ವ ಹಿಡಿದಿದೆ ಎಂದು ಕರೆದುಕೊಂಡು ಹೋಗಿದ್ದ. ಇದನ್ನೂ ಓದಿ: ನಮಗೆ ಕುಡಿಯೋಕೆ ನೀರು ಕೊಡಿ: ಸಿಎಂಗೆ ವಿದ್ಯಾರ್ಥಿನಿ ಪತ್ರ

    ಈ ವೇಳೆ ದೆವ್ವಾ ಬಿಡಿಸುತ್ತೇನೆ ಎಂದು ಶಾಂತಮ್ಮ ಎಂಬ ಮಹಿಳೆ ಗೀತಮ್ಮನಿಗೆ ಚಿತ್ರಹಿಂಸೆ ನೀಡಿದ್ದಾಳೆ. ಚಿತ್ರಹಿಂಸೆ ತಾಳಲಾರದೇ ಗೀತಮ್ಮ ಸಾವನ್ನಪ್ಪಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ರೌಡಿಶೀಟರ್‌ನಿಂದ ದಾಂಧಲೆ – 18ಕ್ಕೂ ಹೆಚ್ಚು ವಾಹನಗಳ ಗಾಜು ಪುಡಿಪುಡಿ, ಮೂವರು ಅರೆಸ್ಟ್

  • Bigg Boss Kannada: ಮನೆ ಒಳಗೆ ಕಾಣಿಸಿಕೊಂಡ ದೆವ್ವ

    Bigg Boss Kannada: ಮನೆ ಒಳಗೆ ಕಾಣಿಸಿಕೊಂಡ ದೆವ್ವ

    ಬಿಗ್ ಬಾಸ್ ಸೀಸನ್ 7ರಲ್ಲಿ ಬಿಗ್ ಬಾಸ್ (Bigg Boss Kannada) ಮನೆಯಲ್ಲೇ ದೆವ್ವ ಕಾಣಿಸಿಕೊಂಡು ಗಾಬರಿ ಮೂಡಿಸಿತ್ತು. ಆಗ ದೊಡ್ಮನೆ ಒಳಗಿದ್ದ ಚೈತ್ರಾ ಕೋಟೂರು ಭೂತ ಕಂಡ ಬೊಬ್ಬೆ ಹಾಕಿದ್ದರು. ಮನೆಯಲ್ಲಿ ದೆವ್ವ ಇದೆ ನಾನು ನೋಡಿದ್ದೇನೆ ಎಂದು ಇಡೀ ಬಿಗ್ ಬಾಸ್ ಮನೆಯ ವಾತಾವರಣವನ್ನೇ ಭಯಭೀತಿಗೊಳಿಸಿದ್ದಳು. ಚೈತ್ರಾ ಮಾತನ್ನು ಅನೇಕರು ನಂಬಿದ್ದರು. ಭಯದಲ್ಲೇ ಅಂದಿನ ದಿನವನ್ನು ಕಳೆಯಲಾಗಿತ್ತು.

    ಬಿಗ್ ಬಾಸ್ ಮನೆಯಲ್ಲಿ ದೆವ್ವ ಕಾಣಿಸಿಕೊಂಡ ವಿಚಾರ ದೊಡ್ಮನೆ ಒಳಗೆ ಮಾತ್ರವಲ್ಲ, ಆಚೆಯೂ ಸಾಕಷ್ಟು ಸದ್ದು ಮಾಡಿತ್ತು. ತಮ್ಮದೇ ಆದ ಕಲ್ಪನೆಯನ್ನು ಸೇರಿಸಿ ಸುದ್ದಿಯನ್ನು ಮತ್ತಷ್ಟು ದೊಡ್ಡದು ಮಾಡಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ಸದ್ದು ಮಾಡಿತ್ತು. ಈ ಬಾರಿಯೂ ಬಿಗ್ ಬಾಸ್ ಮನೆಯಲ್ಲಿ ದೆವ್ವ ಕಾಣಿಸಿಕೊಂಡಿದೆ. ಆದರೆ, ಯಾರೂ ಭಯ ಪಡಲು ಹೋಗಿಲ್ಲ. ಕಾರಣ, ಆ ದೆವ್ವವನ್ನು ಸೃಷ್ಟಿ ಮಾಡಿದವರು ಅದೇ ಮನೆಯಲ್ಲೇ ಇದ್ದರು.

    ಬಿಗ್ ಬಾಸ್ ಮನೆಯಲ್ಲಿ ಇಂದು ಇಂಟ್ರಸ್ಟಿಂಗ್ ಸಂಗತಿಯೊಂದು ನಡೆಯಿತು. ಒಬ್ಬೊಬ್ಬರು ಒಂದೊಂದು ಸಾಲನ್ನು ಜೋಡಿಸುವ ಮೂಲಕ ಹಾರರ್ ಸಿನಿಮಾದ ಕಥೆಯನ್ನು ರೆಡಿ ಮಾಡಿದರು. ಒಬ್ಬೊಬ್ಬರು ಒಂದೊಂದು ರೋಚಕ ಸಾಲುಗಳನ್ನು ಪೋಣಿಸುವ ಮೂಲಕ ದೆವ್ವದ ಕಥೆಯೊಂದನ್ನು ರೆಡಿ ಮಾಡಿದರು. ಆ ಕಥೆ ನಿಜಕ್ಕೂ ಇಂಟ್ರಸ್ಟಿಂಗ್ ಆಗಿತ್ತು. ಜೋಡಿಸಿದ ಸಾಲುಗಳಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳು ಇದ್ದವು.

    ಅದರಲ್ಲೂ ತುಕಾಲಿ ಸಂತು ದೆವ್ವ, ನಾಗಿಣಿಯಾದ ಎಳೆಗೆ ಹಾಲು ಕುಡಿಸುವ ದೃಶ್ಯವನ್ನೂ ಪೋಣಿಸಿದರು. ಅಲ್ಲಿಂದ ಕಥೆಯ ಚಿತ್ರಣವೇ ಬದಲಾಯಿತು. ಇಡೀ ಮನೆಯಲ್ಲಿ ಆಹ್ಲಾದಕರ ವಾತಾವರಣವಿತ್ತು. ಯಾವುದೇ ಕೆಲಸವಿರಲಿ ಎಲ್ಲರೂ ಕೈ ಜೋಡಿಸಿದರೆ ಅದ್ಭುತವಾದ ಕೆಲಸವನ್ನು ಮಾಡಲು ಸಾಧ್ಯ ಎನ್ನುವುದಕ್ಕೆ ಈ ದೃಶ್ಯ ಸಾಕ್ಷಿಯಾಗಿತ್ತು.

     

    ಈ ಕಥೆ ಹೆಣೆಯುವ ಪ್ರಕ್ರಿಯೆಯಲ್ಲಿ ಸ್ನೇಕ್ ಶ್ಯಾಮ್ ಉತ್ತೇಜಿಸುತ್ತಲೇ, ಹಾದಿ ತಪ್ಪುವ ಮಾತುಗಳಿಗೆ ಬ್ರೇಕ್ ಹಾಕುತ್ತಿದ್ದರು. ಕೆಲವರು ಉತ್ಸಾಹದಿಂದ ಭಾಗಿಯಾದರೆ, ಇನ್ನೂ ಕೆಲವರು ಕಥೆ ಕೇಳಿಕೊಂಡು ಎಂಜಾಯ್ ಮಾಡುತ್ತಿದ್ದರು. ಅವರು ಕಟ್ಟಿದ ಕಥೆಯನ್ನು JioCinema live ನಲ್ಲೂ ವೀಕ್ಷಿಸಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಮಾಧಿ ಪಕ್ಕ ಮನೆಯ ಮಾಡಿ, ದೆವ್ವಕ್ಕೆ ಹೆದರಿದ ನಟಿ ನರ್ಗೀಸ್

    ಸಮಾಧಿ ಪಕ್ಕ ಮನೆಯ ಮಾಡಿ, ದೆವ್ವಕ್ಕೆ ಹೆದರಿದ ನಟಿ ನರ್ಗೀಸ್

    ಬಾಲಿವುಡ್ (Bollywood)ನ ಖ್ಯಾತ ತಾರೆ ನರ್ಗೀಸ್ ಫಾಖ್ರಿ (Nargis Fakhri) ತಮ್ಮ ಜೀವನದಲ್ಲಿ ನಡೆದ ಭಯಂಕರ ಘಟನೆಯನ್ನು ಹಂಚಿಕೊಂಡಿದ್ದಾರೆ. ಸದ್ಯ ಅವರ ನಟನೆಯ ಟಟ್ಲುಬಾಜ್ ಎಂಬ ಹಾರರ್ ಸರಣಿಯು ಬಿಡುಗಡೆ ಆಗುತ್ತಿದ್ದು, ಈ ಸಂದರ್ಭದಲ್ಲಿ ಅವರು ತಮ್ಮ ಜೀವನದಲ್ಲಿ ನಡೆದ ಹಾರರ್ ಘಟನೆಯನ್ನು ಹೇಳಿಕೊಂಡಿದ್ದಾರೆ.

    ಅಮೆರಿಕಾ ಮೂಲದ ನರ್ಗೀಸ್ ಬಾಲಿವುಡ್ ಅಂಗಳಕ್ಕೆ ಬಂದಿದ್ದು ರಾಕ್ ಸ್ಟರ್ ಸಿನಿಮಾ ಮೂಲಕ. ಈ ವೇಳೆಯಲ್ಲಿ ಮುಂಬೈಗೆ (Mumbai) ಬಂದಾಗ ಅವರ ಸ್ಮಶಾನದ ಹತ್ತಿರವೇ ಇದ್ದಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಿದ್ದರಂತೆ. ಈ ಸಮಯದಲ್ಲಿ ಬೆಳಗಿನ ಜಾವ ಸರಿಯಾಗಿ ಮೂರು ಗಂಟೆಯ ಹೊತ್ತಿಗೆ ಎಚ್ಚರವಾಗುತ್ತಿತ್ತಂತೆ. ಹಾಗೂ ಕೆಟ್ಟ ಕನಸಿನೊಂದಿಗೆ ಅವರು ಕಣ್ಣು ತೆರೆಯುತ್ತಿದ್ದರಂತೆ. ಇದನ್ನೂ ಓದಿ:ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

    ಒಂದು ದಿನ ಆಳೆತ್ತರದ ವ್ಯಕ್ತಿಯೊಬ್ಬ ನರ್ಗೀಸ್ ನನ್ನು ಎಳೆದುಕೊಂಡು ಸ್ಮಶಾನಕ್ಕೆ (Graveyard)ಹೋಗಿ ಬಿಟ್ಟನಂತೆ. ಅಲ್ಲಿದ್ದ ಸಮಾಧಿಯನ್ನು ತೆರೆದು ಮಾಂಸ, ಎಲುಬು ತಿನ್ನುತ್ತಿದ್ದನಂತೆ. ತನಗೂ ತಿನ್ನಲು ಹೇಳುತ್ತಿದ್ದನಂತೆ. ಇಂಥದ್ದೊಂದು ಕನಸು ಬಿದ್ದ ತಕ್ಷಣವೇ ಅವರು ಮನೆಯನ್ನೇ ಖಾಲಿ ಮಾಡಿಬಿಟ್ಟರಂತೆ.

     

    ಸದ್ಯ ಅವರು ಹಾರರ್ ವೆಬ್ ಸರಣಿಯು ಬಿಡುಗಡೆಗೆ ಸಿದ್ಧವಾಗಿದೆ. ನರ್ಗೀಸ್ ಆ ಸೀರಿಸ್ ನ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ ಪವನ್ ಕಲ್ಯಾಣ್ ನಟನೆಯ ಸಿನಿಮಾದಲ್ಲಿ ಇವರು ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಿಗ್ ಬಾಸ್ ಮನೆಯಲ್ಲಿ ದೆವ್ವ: ಲಿಂಬೆಹಣ್ಣು ಇಟ್ಕೊಂಡಿದ್ದಾರಂತೆ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ ಮನೆಯಲ್ಲಿ ದೆವ್ವ: ಲಿಂಬೆಹಣ್ಣು ಇಟ್ಕೊಂಡಿದ್ದಾರಂತೆ ಪ್ರಶಾಂತ್ ಸಂಬರ್ಗಿ

    ಬಿಗ್ ಬಾಸ್ (Bigg Boss Season 9 ) ಮನೆಯಲ್ಲಿ ಇದೀಗ ದೆವ್ವದ್ದೇ ಸದ್ದು. ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಗೌಡ ಮಧ್ಯೆ ದೆವ್ವಗಳ ಬಗ್ಗೆ ರಸವತ್ತಾದ ಚರ್ಚೆ ನಡೆಯುತ್ತಿದೆ. ರೂಪೇಶ್ ಕೊಂಚ ಭಯಗೊಂಡಂತೆ ಕಂಡರೆ, ಇವರನ್ನು ಭಯಕ್ಕೆ ಬೀಳಿಸಿದ್ದಾರೆ ಕಾವ್ಯಶ್ರೀ ಗೌಡ. ಈ ಕಥೆಗೆ ಸ್ಕ್ರಿಪ್ಟ್ ಬರೆದು, ನಿರ್ದೇಶನ ಮಾಡಿದ್ದಾರೆ ಪ್ರಶಾಂತ್ ಸಂಬರ್ಗಿ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ದೆವ್ವಗಳ ಕಾರುಬಾರು ಶುರುವಾಗಿದೆ. ಪ್ರಶಾಂತ್ ಸಂಬರ್ಗಿ ತನ್ನ ಜೇಬಿನಲ್ಲಿ ಲಿಂಬೆಹಣ್ಣು ಇಟ್ಟುಕೊಂಡು ದೆವ್ವಗಳಿಂದ ರಕ್ಷಣೆ ಪಡೆದುಕೊಂಡಿದ್ದಾರಂತೆ.

    ರೂಪೇಶ್ ಶೆಟ್ಟಿ ಬಳಿ ಬರುವ ಕಾವ್ಯಶ್ರೀ ಗೌಡ (Kavyashree Gowda), ದೆವ್ವಗಳ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ‘ಪ್ರಶಾಂತ್ ಸಂಬರ್ಗಿ ಸಖತ್ ಪುಕ್ಕಲು. ಯಾವುದೋ ಒಂದು ಶಬ್ದಕ್ಕೆ ಹೆದರಿಕೊಂಡಿದ್ದಾರೆ. ದೆವ್ವಗಳು ಇರುವುದು ಅನುಭವಕ್ಕೆ ಬಂದರೆ, ಮಂಚದ ಕೆಳಗೆ ಈರುಳ್ಳಿ ಇಟ್ಟುಕೊಳ್ಳಲು ಅವರ ತಾಯಿ ಹೇಳಿದ್ದಾರಂತೆ. ಹಾಗಾಗಿ ಅವರು ಈರುಳ್ಳಿ ಇಟ್ಟುಕೊಂಡಿದ್ದಾರೆ. ರಾತ್ರಿ ಒಬ್ಬರೇ ಬಾತ್ ರೂಮ್ ಗೆ ಹೋಗುವುದಕ್ಕೂ ಹೆದರಿಕೊಳ್ಳುತ್ತಾರೆ. ಸಡನ್ನಾಗಿ ಮಧ್ಯರಾತ್ರಿ ಎದ್ದು ಕೂರುತ್ತಾರೆ’ ಎಂದೆಲ್ಲ ರೂಪೇಶ್ ಬಳಿ ಕಥೆ ಕಟ್ಟಿದ್ದಾರೆ.

    ಅಷ್ಟಕ್ಕೂ ರೂಪೇಶ್ ಬಳಿಯೇ ಕಾವ್ಯಶ್ರೀ ಗೌಡ ಈ ಕಥೆ ಹೇಳುವುದಕ್ಕೆ ಕಾರಣವಿದೆ. ರೂಪೇಶ್ ಗೆ ಭಯ ಪಡಿಸುವುದಕ್ಕಾಗಿ ಪ್ರಶಾಂತ್ ಸಂಬರ್ಗಿ (Prashant Sambargi), ಕಾವ್ಯಶ್ರೀ ಗೌಡ ಅವರನ್ನು ಬಳಸಿಕೊಂಡಿದ್ದಾರೆ. ದೆವ್ವ (Devil), ಲಿಂಬೆಹಣ್ಣಿನ ಕಥೆಯನ್ನು ಕಾವ್ಯಶ್ರೀ ಗೌಡರಿಂದ ರೂಪೇಶ್ ಶೆಟ್ಟಿಗೆ ಹೇಳಿಸಿದ್ದಾರೆ. ಕೊಂಚ ಭಯದಲ್ಲಿಯೇ ಇರುವ ರೂಪೇಶ್, ತನ್ನ ಅನುಭವಕ್ಕೆ ಬಂದರೆ ಮಾತ್ರ ದೆವ್ವವನ್ನು ನಂಬುತ್ತೇನೆ ಎಂದು ಮಾತನಾಡಿದ್ದಾರೆ. ಅಲ್ಲದೇ, ತಮಗೆ ಇವರಿಬ್ಬರೂ ಫ್ರಾಂಕ್ ಮಾಡುತ್ತಿರಬಹುದಾ? ಎಂದು ಅನುಮಾನವನ್ನೂ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

    ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ಶೆಟ್ಟಿ (Rupesh Shetty) ಮತ್ತೆ ಮತ್ತೆ ದೆವ್ವಗಳ ವಿಚಾರವನ್ನು ಚರ್ಚೆ ಮಾಡುತ್ತಾ, ಮನೆಯ ಇತರ ಸದಸ್ಯರಿಗೂ ಭಯ ಹುಟ್ಟಿಸುತ್ತಿದ್ದಾರೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಹೂಡಿರುವ ಈ ನಾಟಕಕ್ಕೆ ರೂಪೇಶ್ ಶೆಟ್ಟಿ ಬಕ್ರಾ ಆಗ್ತಾರಾ? ಅಥವಾ ಇವರು ತಮಾಷೆ ಮಾಡುತ್ತಿರುವ ವಿಚಾರವನ್ನು ಅರಿತುಕೊಳ್ಳುತ್ತಾರಾ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ದೆವ್ವದ ಕಥೆ ಸದ್ಯಕ್ಕೆ ರೋಚಕತೆ ಹುಟ್ಟು ಹಾಕಿದೆ. ದೆವ್ವ ಯಾರನ್ನು ಎಷ್ಟು ಕಾಡುತ್ತದೆ ಎಂದು ಕಾದು ನೋಡೋಣ.

    Live Tv
    [brid partner=56869869 player=32851 video=960834 autoplay=true]

  • ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ

    ವೈಷ್ಣವಿಗೆ ದೆವ್ವದ ಕಥೆ ಹೇಳಿದ ಅಕುಲ್ ಬಾಲಾಜಿ

    ಬಿಗ್‍ಬಾಸ್ ಮಿನಿ ಸೀಸನ್ ಆರಂಭವಾಗಿದ್ದು, ದೊಡ್ಮನೆಯಲ್ಲಿ 16 ಮಂದಿ ಸ್ಪರ್ಧಿಗಳು ತುಂಬಿ ತುಳುಕುತ್ತಿದ್ದಾರೆ. ಈ ಮಧ್ಯೆ ಅಕುಲ್ ಬಾಲಾಜಿ ವೈಷ್ಣವಿಗೆ ದೆವ್ವದ ವಿಚಾರವೊಂದನ್ನು ಹೇಳಿ ಹೆದರಿಸಿದ್ದಾರೆ.

    ಬಿಗ್‍ಬಾಸ್ ಮಿನಿ ಸೀಸನ್ ಮೊದಲನೇ ದಿನ ವೈಷ್ಣವಿ ಹಾಗೂ ಅಕುಲ್ ಬಾಲಾಜಿ ಬೆಡ್ ರೂಂನಲ್ಲಿ ಕುಳಿತುಕೊಂಡಿರುತ್ತಾರೆ. ಈ ವೇಳೆ ಅಕುಲ್ ಬಾಲಾಜಿ ಒಮ್ಮೆ ವಾಶ್ ರೂಂ ಬಳಿ ರಾತ್ರಿ 12 ಗಂಟೆಗೆ ಹೋಗಿ ನೋಡು ನಿನಗೆ ಏನಿದೆ ಅಂತ ಗೊತ್ತಾಗುತ್ತದೆ ಎಂದಿದ್ದಾರೆ. ಆಗ ವೈಷ್ಣವಿ ಕುತೂಹಲದಿಂದ ನೀವೇ ಹೇಳಿ ನಾನು ಹೆದರಿಕೊಳ್ಳುವುದಿಲ್ಲ ಅಂತ ಕೇಳುತ್ತಾರೆ. ಇದಕ್ಕೆ ಅಕುಲ್ ನಿಮ್ಮ ಪೋಷಕರು ಬೇರೆ ಇಲ್ಲಿ ಇಲ್ಲ, ನಿನಗೆ ಮೊದಲೇ ದೆವ್ವ ಅಂದರೆ ಭಯ, ಆಮೇಲೆ ನಿನಗೆ ಅದರತ್ತ ಗಮನ ಸೆಳೆಯುತ್ತದೆ. ಹಾಗಾಗಿ ನಾನು ಹೇಳುವುದಿಲ್ಲ ಎನ್ನುತ್ತಾರೆ.

    ನಿನಗೆ ಯಾವತ್ತಾದರೂ ನೀನು ಮಲಗಿಕೊಂಡಾಗ ಬೆಡ್ ಶೀಟ್ ಎಳೆದ ಅನುಭವ ಆಗಿದ್ಯಾ? ಅಂದಾಗ ವೈಷ್ಣವಿ ಇಲ್ಲ ಅಂದಿದ್ದಾರೆ. ಅಲ್ಲದೇ ನಾನು ನಿನ್ನೆ ಹೋಟೆಲ್‍ನಲ್ಲಿ ಇದ್ದಾಗ ಬಾಗಿಲು ಅಲ್ಲಡುತ್ತಿದ್ದ ಶಬ್ಧ ಆಗುತ್ತಿತ್ತು. ಆಗ ನಾನು ಯಾಕೆ ಹೀಗೆ ಸದ್ದು ಮಾಡುತ್ತಿದ್ಯಾ, ಇಲ್ಲೆ ಇದ್ಯಾ, ಸರಿ ನಾನು ಮಲಗುವುದಕ್ಕೆ ಬಿಡು ಅಂತ ಆತ್ಮ ಜೊತೆ ಮಾತನಾಡಿರುವುದಾಗಿ ಹೇಳಿದ್ದಾರೆ.

    ನಂತರ ಇದನ್ನು ಕೇಳಿ ನಿಮ್ಮ ಮೈ ಮೇಲೆ ಒಂದು ರೀತಿ ರೋಮಾಂಚನ ಆಗಿದೆ ಎಂದರೆ ಆತ್ಮ ಬಂದು ನಿಮ್ಮನ್ನು ಟಚ್ ಮಾಡಿ ಹೋಗಿದೆ ಎಂದರ್ಥ. ಆತ್ಮಗಳಿಗೆ ನನ್ನ ಜೊತೆ ಯಾರಾದರೂ ಮಾತನಾಡಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ಅವು ನಮ್ಮ ಬಳಿ ಮಾತನಾಡಲು ಬರುತ್ತದೆ ಎಂದು ಹೇಳುತ್ತಾರೆ. ಈ ಮಧ್ಯೆ ಜಗನ್ ಹಾಸ್ಯಮಯವಾಗಿ ನನ್ನ ಫೋನ್ ನಂಬರ್ ಕೊಡಿ ನಾನು ಮಾತನಾಡುತ್ತೇನೆ ಅಂತ ಹಾಸ್ಯ ಮಾಡುತ್ತಾರೆ. ಇದನ್ನೂ ಓದಿ:ಅರ್ಜುನ್ ಸರ್ಜಾ ಹುಟ್ಟುಹಬ್ಬಕ್ಕೆ ಜೂ.ಚಿರು ವಿಶ್

  • ದೆವ್ವ ಬಿಡಿಸೋ ನೆಪದಲ್ಲಿ 2 ವರ್ಷದ ಕಂದಮ್ಮನನ್ನೇ ಕೊಲೆಗೈದ!

    ದೆವ್ವ ಬಿಡಿಸೋ ನೆಪದಲ್ಲಿ 2 ವರ್ಷದ ಕಂದಮ್ಮನನ್ನೇ ಕೊಲೆಗೈದ!

    ಚಿತ್ರದುರ್ಗ: ದೆವ್ವ ಬಿಡಿಸುವ ನೆಪದಲ್ಲಿ 2 ವರ್ಷದ ಹೆಣ್ಣು ಮಗುವನ್ನು ಮಾಂತ್ರಿಕನೊಬ್ಬ ಬರ್ಬರ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಅಜ್ಕಿಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಮೃತ ದುರ್ದೈವಿ ಮಗುವನ್ನು ಪೂರ್ಣಿಕಾ ಎಂದು ಗುರುತಿಸಲಾಗಿದ್ದು, ಈಕೆ ಪ್ರವೀಣ್ ಹಾಗೂ ಬೇಬಿ ದಂಪತಿಯ ಪುತ್ರಿ. ಸದ್ಯ ಪೋಷಕರ ಮೌಢ್ಯತೆಗೆ ಪುಟ್ಟ ಕಂದಮ್ಮ ಬಲಿಯಾಗಿದೆ.

    ಪೂರ್ಣಿಕಾ ಪದೇ ಪದೇ ಬೆಚ್ಚಿ ಬೀಳುತ್ತಿದ್ದಳು. ಅಜ್ಜಿಕ್ಯಾತನಹಳ್ಳಿಯ ರಾಕೇಶ್ ಯಲ್ಲಮ್ಮನ ಆರಾಧಕನಾಗಿದ್ದು, ಮಂತ್ರವಾದಿಯಾಗಿ ಗುರುತಿಸಿಕೊಂಡಿದ್ದ. ಹೀಗಾಗಿ ಪೋಷಕರನ್ನು ಈಕೆಯನ್ನು ಮಾಂತ್ರಿಕ ರಾಕೇಶ್ ಬಳಿ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ರಾಕೇಶ್, ಮಗು ಪದೇ ಪದೇ ಬೆಚ್ಚಿ ಬೀಳೋದಕ್ಕೆ ದೆವ್ವ ಹಿಡಿದಿದೆ, ಅದನ್ನು ಬಿಡಿಸಬೇಕು ಎಂದು ಹೇಳಿದ್ದ.

    ದೆವ್ವ ಬಿಡಿಸಬೇಕು ಎಂದಾಗ ಮಗುವಿನ ಪೋಷಕರು ಒಪ್ಪಿಕೊಂಡರು. ಅಂತೆಯೇ ರಾಕೇಶ್ ದೆವ್ವ ಬಿಡಿಸುವ ನೆಪದಲ್ಲಿ ಎಕ್ಕೆಗಿಡ ಬೆತ್ತದಿಂದ ಬಾರಿಸಿದ್ದಾನೆ. ರಾಕೇಶ್ ಹೊಡೆತಕ್ಕೆ ಪೂರ್ಣಿಕಾ ದೇಹದ ತುಂಬ ಬೆತ್ತದ ಗಾಯ, ಬಾಸುಂಡೆ ಎದ್ದಿದೆ. ಅಲ್ಲದೆ ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾಳೆ. ಇತ್ತ ಮಗು ಕುಸಿದು ಬಿದ್ದಿದ್ದರಿಂದ ರಾಕೇಶ್, ಪೂರ್ಣಿಕಾ ಪೋಷಕರನ್ನು ಕರೆದು ಮಗುವಿಗೆ ಪ್ರಜ್ಞೆ ತಪ್ಪಿದೆ, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಮಗುವಿನ ಸ್ಥಿತಿ ಕಂಡು ಕಂಗಾಲಾದ ಪೋಷಕರು ಕೂಡಲೇ ಆಕೆಯನ್ನು ಹೊಳಲ್ಕೆರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಮಗು ಅದಾಗಲೇ ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೂರ್ಣಿಕಾ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಪರಾರಿಯಾಗಿದ್ದ ರಾಕೇಶ್ ನನ್ನು ಮಗುವಿನ ಪೋಷಕರ ದೂರು ಆಧರಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

  • ‘ನಾನಲ್ಲ ದೆವ್ವ ಕೊಲೆ ಮಾಡಿದ್ದು’ – ಮಗನ ಕತ್ತು ಹಿಸುಕಿ ಕೊಂದು ಭೂತಗಳ ಕಥೆ ಕಟ್ಟಿದ ಮಲತಾಯಿ

    ‘ನಾನಲ್ಲ ದೆವ್ವ ಕೊಲೆ ಮಾಡಿದ್ದು’ – ಮಗನ ಕತ್ತು ಹಿಸುಕಿ ಕೊಂದು ಭೂತಗಳ ಕಥೆ ಕಟ್ಟಿದ ಮಲತಾಯಿ

    – ಮಲತಾಯಿ, ತಂದೆಯನ್ನು ಬಂಧಿಸಿದ ಪೊಲೀಸರು

    ಲಕ್ನೋ: 5 ವರ್ಷದ ಬಾಲಕನನ್ನು ಕತ್ತು ಹಿಸುಕಿ ಕೊಂದ ಮಲತಾಯಿ ಪೊಲೀಸರ ಬಳಿ ದೆವ್ವಗಳು ಕೊಲೆ ಮಾಡಿದೆ ಎಂದು ಕಥೆ ಕಟ್ಟಿದ ಘಟನೆ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

    ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಗಿರಿಯಾ ಖಲ್ಸಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃತ್ಯವೆಸಗಿದ ಮಲತಾಯಿ ಹಾಗೂ ತಂದೆ ಚಂದನ್ ಮೇಹ್ತಾನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕನ ಮೃತದೇಹ ಮಹಿಳೆಯ ಕೋಣೆಯಲ್ಲಿ ಪತ್ತೆಯಾಗಿತ್ತು. ಆತನ ದೇಹದ ಮೇಲೆ, ಮುಖದ ಮೇಲೆ ಗಾಯಗಳು ಆಗಿದ್ದವು. ಈ ಬಗ್ಗೆ ವಿಚಾರಣೆ ವೇಳೆ ಮಹಿಳೆಯನ್ನು ಕೇಳಿದರೆ, ನಾನು ಕೊಲೆ ಮಾಡಿಲ್ಲ. ದೆವ್ವ, ಭೂತಗಳು ಬಾಲಕನನ್ನು ಕೊಲೆ ಮಾಡಿದೆ ಎಂದು ಕಥೆ ಕಟ್ಟಿದ್ದಾಳೆ.

    ಮಹಿಳೆಯ ದೆವ್ವದ ಕಥೆ ಕೇಳಿ ಗ್ರಾಮಸ್ಥರು ಭಯಗೊಂಡಿದ್ದಾರೆ. ಈಗಾಗಲೇ ಬಾಲಕನ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿಗಾಗಿ ಕಾಯುತ್ತಿದ್ದಾರೆ.

    ಈ ಕೊಲೆ ಬಗ್ಗೆ ಗ್ರಾಮಸ್ಥರನ್ನು ವಿಚಾರಿಸಿದಾಗ, ಕೊಲೆಯಾದ ಬಾಲಕ ಮಹಿಳೆಯ ಎರಡನೇ ಪತಿ ಚಂದನ್ ಮೇಹ್ತಾನ ಮಗ. ಮೊದಲನೇ ಪತಿ ಬಿಟ್ಟುಹೋದ ಬಳಿಕ ಮಹಿಳೆ ಎರಡನೇ ಮದುವೆ ಆಗಿದ್ದಳು. ಚಂದನ್ ಮೇಹ್ತಾನ ಪತ್ನಿ 4 ವರ್ಷದ ಹಿಂದೆ ಮೃತಪಟ್ಟಿದ್ದಳು. ಆತನಿಗೆ 5 ವರ್ಷದ ಮಗ ಹಾಗೂ 7 ವರ್ಷದ ಮಗಳಿದ್ದಳು. ಆತನಿಗೂ ಕೂಡ ಇದು ಎರಡನೇ ಮದುವೆ ಆಗಿದೆ. ಮೊದ ಮೊದಲು ಮಹಿಳೆ ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು.

    ಆದರೆ ಸಮಯ ಕಳೆಯುತ್ತಿದ್ದಂತೆ ಆಕೆಯ ವರ್ತನೆ ಬದಲಾಗಿತ್ತು. ಮಕ್ಕಳನ್ನು ಆಕೆ ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಬಹುಶಃ ಮಕ್ಕಳನ್ನು ಸಾಕಬೇಕಲ್ಲ ಎಂಬ ಕಾರಣಕ್ಕೆ ಮಹಿಳೆ ಬಾಲಕನನ್ನು ಕೊಲೆ ಮಾಡಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

  • ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ

    ಕಂಬಿ ಮೇಲೆ ನೇತಾಡ್ತಾಳೆ, ಗಿರಗಿರ ಬುಗುರಿಯಂತೆ ತಿರುಗ್ತಾಳೆ

    – ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ವಿಚಿತ್ರ ಆಚರಣೆ
    – ಕಂಬಿಗೆ ತಲೆಕೆಳಗಾಗಿ ನೇತುಬಿದ್ದ ಮಹಿಳೆ

    ಕಲಬುರಗಿ: ಜಿಲ್ಲೆಯ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನ ಅಂದರೆ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಇದೀಗ ಈ ದೇವಸ್ಥಾನದಲ್ಲಿ ದೆವ್ವ-ಪ್ರೇತಾತ್ಮಗಳ ಸಂಖ್ಯೆ ಹೆಚ್ಚಾಗಿದೆಯಂತೆ, ಅಚ್ಚರಿಯಾದರೂ ಇದು ನಿಜವಾಗಿದೆ.

    ಅಫಜಲಪುರ ತಾಲೂಕಿನ ಶ್ರೀ ಕ್ಷೇತ್ರ ಗಾಣಗಾಪುರ ದತ್ತಾತ್ರೇಯ ದೇವಸ್ಥಾನದಲ್ಲಿ ಬೆಚ್ಚಿಬೀಳಿಸುವ ದೃಶ್ಯಗಳನ್ನು ನಿತ್ಯ ಇಲ್ಲಿ ಕಾಣಬಹುದು. ಮೈಮೇಲೆ ಪರಿವೇ ಇಲ್ಲದಂತೆ ಚಿತ್ರ ವಿಚಿತ್ರವಾಗಿ ವರ್ತಿಸುವ ಇವರ ಮೇಲೆ ದೆವ್ವ, ಪಿಶಾಚಿ, ಪ್ರಾತಾತ್ಮಗಳು ಆವಾಹಿಸಿಕೊಂಡಿವೆಯಂತೆ. ಇದರಿಂದ ಮುಕ್ತರಾಗಲು ಇವರೆಲ್ಲ ದತ್ತನ ಸನ್ನಿಧಿಗೆ ಬರುತ್ತಾರೆ.

    ಪ್ರತಿನಿತ್ಯ ಮಧ್ಯಾಹ್ನ 1.30ಕ್ಕೆ ದತ್ತನಿಗೆ ಮಹಾ ಮಂಗಳಾರತಿ ನೆರವೇರಿಸುವ ವೇಳೆ ಮಾನಸಿಕ ಅಸ್ವಸ್ಥರು, ಮೈಮೇಲೆ ದೆವ್ವ ಬಂದವರ ರೀತಿ ಆಡುತ್ತಾರೆ. ಕೂದಲು ಕೆದರಿಕೊಂಡು ತಮ್ಮ ದೇಹವನ್ನು ದಂಡಿಸಿಕೊಳ್ಳುತ್ತಾರೆ, ಕೇಕೆ ಹಾಕುತ್ತಾರೆ, ಅಳುತ್ತಾರೆ, ದೇವರನ್ನೇ ಬಾಯಿಗೆ ಬಂದಂತೆ ಬೈಯ್ಯುತ್ತಾರೆ. ಕೆಲವರು ಕಂಬಿ ಮೇಲೆ ನಿದ್ದೆ ಹೋಗುತ್ತಾರೆ. ಹೀಗೆ ಬರೋರಲ್ಲಿ ಕರ್ನಾಟಕದವರು ಇದ್ದಾರೆ. ಆಂಧ್ರ, ತೆಲಂಗಾಣದವರು ಇದ್ದಾರೆ. ಆದರೆ ಪ್ರೇತಾತ್ಮಗಳ ಕಾಟಕ್ಕೆ ತುತ್ತಾಗುವವರಲ್ಲಿ ಮಹಾರಾಷ್ಟ್ರ ಮಂದಿಯೇ ಅಧಿಕ. ಇಲ್ಲಿ ಬಂದು ಕೆಲ ದಿನಗಳ ದತ್ತನ ಆರಾಧನೆ ಮಾಡಿದರೆ ದುಷ್ಟ ಶಕ್ತಿಗಳಿಂದ ಜನ ಪಾರಾಗುತ್ತಾರೆ ಎಂದು ಅರ್ಚಕ ಪ್ರಸನ್ನ ಪೂಜಾರಿ ಹೇಳಿದ್ದಾರೆ.

    ಇವರೆಲ್ಲರೂ ಚಿತ್ರ ವಿಚಿತ್ರವಾಗಿ ವರ್ತಿಸಲು ಒಂದು ಕಾರಣ ಇದೆ. ಜೊತೆಗೆ ಪುರಾಣದ ಹಿನ್ನೆಲೆ ಇದೆ. ಇಲ್ಲಿನ ಅಶ್ವಥ್ಥ ವೃಕ್ಷದಲ್ಲಿ ಸಾಕ್ಷತ್ ಬ್ರಹ್ಮ ರಾಕ್ಷಸ ನೆಲೆಸಿದ್ದನಂತೆ. ಇಲ್ಲಿನ ಜನ ಜಾನುವಾರುಗಳ ನೆಮ್ಮದಿ ಕೆಡಿಸಿದ್ದರು. ಆಗ ದತ್ತಾತ್ರೇಯ ಸ್ವಾಮಿ, ಎರಡನೇ ಅವತಾರ ಎತ್ತಿ ಶ್ರೀಮಾನ್ ನರಸಿಂಹ ಸರಸ್ವತಿ ಮಹಾರಾಜರು ರೂಪದಲ್ಲಿ ರಾಕ್ಷಸನಿಗೆ ಮುಕ್ತಿ ನೀಡಿದ್ದರು ಎನ್ನಲಾಗುತ್ತದೆ. ಅಂದಿನಿಂದ ಇದು ಪ್ರೇತಾತ್ಮಗಳನ್ನು ದೂರ ಮಾಡುವ ಭಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಭಕ್ತೆ ಮಾಲತಿ ರೇಷ್ಮಿ ಹೇಳಿದರು.

    ಅಂದಹಾಗೆ ಬ್ರಹ್ಮ ವಿಷ್ಣು ಮಹೇಶ್ವರ ಈ ಮೂರು ಅವತಾರವನ್ನೆತ್ತಿರುವ ಗುರುದತ್ತನ ಸನ್ನಿಧಿಯಲ್ಲಿ ಈ ಪವಾಡಗಳು ನಿತ್ಯ ನಡೆಯುತ್ತವೆ. ಯಾಕೆಂದರೆ ಈ ದೇವಾಲಯದ ಆವರಣದಲ್ಲಿರುವ ಅಶ್ವಥ ವೃಕ್ಷದಲ್ಲಿ ಸಾಕ್ಷತ್ ಬ್ರಹ್ಮ ರಾಕ್ಷಸ ವಾಸಿಸುತ್ತಿದ್ದು, ಇಲ್ಲಿರುವ ಜನ-ಜಾನುವಾರುಗಳಿಗೆ ತೊಂದರೆ ನೀಡುತ್ತಿದ್ದರು. ಆದರೆ ದತ್ತಾತ್ರೇಯ ಸ್ವಾಮಿಗಳ ಎರಡನೇ ಅವತಾರದಲ್ಲಿ ಸಾಕ್ಷತ್ ಶ್ರೀಮನ ನರಸಿಂಹ ಸರಸ್ವತಿ ಮಹಾರಾಜರು ಆ ರಾಕ್ಷಸನಿಗೇ ಮುಕ್ತಿ ನೀಡಿದ್ದಾರೆ. ಹೀಗಾಗಿ ಪ್ರತಿ ದಿನ ನಡೆಯುವ ಮಹಾಮಂಗಳಾರತಿ ವೇಳೆ ಭೂತ-ಪ್ರೇತಗಳು ಇದೆ ಎಂದು ನಂಬಿದ ಜನ, ಇಲ್ಲಿ ಬಂದು ಶ್ರೀ ಗುರು ದತ್ತನ ಪೂಜೆ ಸಲ್ಲಿಸಿದರೆ, ಅವರಲ್ಲಿರುವ ಎಲ್ಲಾ ದುಷ್ಟ ಶಕ್ತಿಗಳು ಹೋಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ.

    ಭೀಮಾ ಅಮರ್ಜಾ ನದಿ ಸಂಗಮವಿರುವ ಈ ಪುಣ್ಯಕ್ಷೇತ್ರಕ್ಕೆ ನಿತ್ಯವು ಸಾವಿರಾರು ಜನ ಬಂದು ಹೋಗುತ್ತಾರೆ. ಕೆಲವರು ಬರಿ ದರ್ಶನ ಭಾಗ್ಯಕ್ಕೆಂದು ಬಂದು ಶ್ರೀಗುರುದತ್ತನ ನಿರ್ಗುಣ ಪಾದುಕೆಗೆ ಪೂಜೆ ಸಲ್ಲಿಸಿದರೆ, ಇನ್ನೂ ಕೆಲವರು ಇನ್ನೂ ಕೆಲವರು ಅವರಿಗೆ ಕಾಡುತ್ತಿರುವ ದುಷ್ಟ ಶಕ್ತಿಗಳು ಸಂಕಟ ದೂರು ಮಾಡಿಕೊಳ್ಳಲು ಬರುತ್ತಾರೆ.

  • ‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹೊಡೆದ ಮಲೆನಾಡಿಗರು

    ‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹೊಡೆದ ಮಲೆನಾಡಿಗರು

    ಚಿಕ್ಕಮಗಳೂರು: ಶ್ರೀಗಂಧದ ಮರಗಳ ಕಳ್ಳತನಕ್ಕೆ ಬಂದಿದ್ದ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಅರೇಹಳ್ಳಿಯ ‘ದೆವ್ವ’ವನ್ನು ಮಲೆನಾಡಿಗರು ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ.

    ಕೇಳೋಕೆ ಆಶ್ಚರ್ಯ ಅನ್ನಿಸಿದರು ಸತ್ಯ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದಂಚಿನಲ್ಲಿದ್ದ ಐದು ಶ್ರೀಗಂಧದ ಮರಗಳನ್ನ ಕದಿಯಲೆಂದು ಅರೇಹಳ್ಳಿಯ ಐವರು ಕಳ್ಳರು ಬಂದಿದ್ದರು. ಊರ ಹೊರಗೆ ಮರ ಕಡಿಯುವ ಶಬ್ಧವನ್ನು ಆಲಿಸಿದ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಗಂಧದ ಕಳ್ಳರು ಮುಖಕ್ಕೆ ವಿಚಿತ್ರ ಮಾಸ್ಕ್ ಹಾಕಿ ಗ್ರಾಮಸ್ಥರನ್ನ ಹೆದರಿಸಲು ಪ್ರಯತ್ನಿಸಿದ್ದಾರೆ.

    ದೆವ್ವಕ್ಕೆ ಹೆದರದ ಗ್ರಾಮಸ್ಥರು ಒಟ್ಟಾಗಿ ಮುನ್ನುಗ್ಗಿದಾಗ, ಮುಖದಿಂದ ಮಾಸ್ಕ್ ತೆಗೆದು ಎಲ್ಲರೂ ಓಡಲು ಆರಂಭಿಸಿದ್ದಾರೆ. ಆದರೆ ಊರಿನ ಜನ ಓರ್ವನನ್ನ ಹಿಡಿದು ಕಂಬಕ್ಕೆ ಕಟ್ಟಿ ಚೆನ್ನಾಗಿ ಹೊಡೆದು ಅರಣ್ಯ ಇಲಾಖೆಯ ವಶಕ್ಕೆ ನೀಡಿದ್ದಾರೆ. ಐವರಲ್ಲಿ ಓರ್ವ ಸಿಕ್ಕಿಬಿದ್ದಿದ್ದು, ನಾಲ್ವರು ತಪ್ಪಿಸಿಕೊಂಡಿದ್ದಾರೆ. ಬಂಧಿತರಿಂದ ಐದು ಗಂಧದ ತುಂಡು, ಆಟೋ, ಒಂದು ಬೈಕ್ ಹಾಗೂ ಮುಖವಾಡಗಳನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

  • ಹೆಣ್ಣು ದೆವ್ವಕ್ಕೆ ಹೆದರಿ ಜನರು ಗ್ರಾಮವನ್ನೇ ಖಾಲಿ ಮಾಡಿದ್ರು!

    ಹೆಣ್ಣು ದೆವ್ವಕ್ಕೆ ಹೆದರಿ ಜನರು ಗ್ರಾಮವನ್ನೇ ಖಾಲಿ ಮಾಡಿದ್ರು!

    ಹೈದರಾಬಾದ್: ಹೆಣ್ಣು ದೆವ್ವಕ್ಕೆ ಭಯಗೊಂಡು ಗ್ರಾಮವನ್ನೇ ಖಾಲಿ ಮಾಡುತ್ತಿರುವ ವಿಚಿತ್ರ ಘಟನೆ ತೆಲಂಗಾಣದ ನಿರ್ಮಲ ಜಿಲ್ಲೆಯ ಕಾಶಿಗುಡ್‍ನಲ್ಲಿ ನಡೆದಿದೆ.

    ಈ ಗ್ರಾಮದಲ್ಲಿ ಕತ್ತಲಾದ ಮೇಲೆ ಹೆಣ್ಣು ಪ್ರೇತಾತ್ಮಗಳು ಪುರುಷರ ಮೇಲೆ ದಾಳಿ ಮಾಡುತ್ತಿವೆಯಂತೆ. ಆದ್ದರಿಂದ ಈ ಗ್ರಾಮದಲ್ಲಿ ಮಹಿಳೆಯರು ಮಾತ್ರ ಬದುಕುಳಿಯುತ್ತಿದ್ದಾರೆ. ಆದ್ದರಿಂದ ಪುರುಷರು ಗ್ರಾಮದಲ್ಲಿ ಇರಲು ಭಯಬೀತರಾಗಿ ಜೀವ ಉಳಿದರೆ ಸಾಕು ಎಂದು ಊರನ್ನೇ ಖಾಲಿ ಮಾಡಿ ಹೋಗುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

    ಕಾಶಿಗುಡ ಗ್ರಾಮದಲ್ಲಿ ಸುಮಾರು 60 ಕುಟುಂಬಗಳಿದ್ದು, ಗ್ರಾಮದ ಸಮೀಪದಲ್ಲಿ ಕಲ್ಲು ಕ್ವಾರಿಗಳಿವೆ. ಅಲ್ಲಿ ಕಲ್ಲುಗಳನ್ನು ಕತ್ತರಿಸುವುದು ಮತ್ತು ಪುಡಿಮಾಡುವ ಕೆಲಸವನ್ನು ಮಾಡಿ ಜೀವನ ನಡೆಸುತ್ತಿದ್ದೇವು. ಆದರೆ ಈಗ ಕೆಲವು ದಿನಗಳಿಂದ ನಮ್ಮ ಮೇಲೆ ಯಾರೋ ದಾಳಿ ಮಾಡಿದಂತೆ ಭಾಸವಾಗುತ್ತಿದೆ. ಹೀಗಾಗಿ ಭಯಗೊಂಡು ನಾವು ಊರನ್ನು ತೊರೆಯುತ್ತಿದ್ದೇವೆ ಎಂದು ಈ ಗ್ರಾಮದ ಪುರುಷರು ಹೇಳಿದ್ದಾರೆ.

    ಗ್ರಾಮದಲ್ಲಿರುವ ಮನೆಗಳೆಲ್ಲಾ ಬೀಗ ಹಾಕಿದ್ದಾರೆ. ಹಚ್ಚ ಹಸಿರಿನಿಂದ ಕೂಡಿದ್ದ ಈ ಗ್ರಾಮ ಇಂದು ದೆವ್ವದ ಗ್ರಾಮವಾಗಿದೆ. ಇನ್ನೂ ಉಳಿದ ಸ್ವಲ್ಪ ಜನರು ಕತ್ತಲಾಗುವ ಮುನ್ನವೇ ಮನೆಗೆ ಬಂದು ಸೇರಿಕೊಳ್ಳುತ್ತಿದ್ದು, ಸೂರ್ಯ ಉದಯಿಸುವರೆಗೂ ಮನೆಯಿಂದ ಯಾರೂ ಹೊರಗೆ ಬರುತ್ತಿಲ್ಲ.

    ಗ್ರಾಮ ದೊರೆದ ಜನರು ಸುರಕ್ಷಿತವಾದ ಜಾಗಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.