Tag: ದುರ್ಗಾ ಮಾತೆ

  • ‘ಕೆಜಿಎಫ್’ ಚಿತ್ರದಲ್ಲಿ ದುರ್ಗಾಮಾತೆ, ‘ಸಲಾರ್’ ನಲ್ಲಿ ಕಾಳಿಮಾತೆ: ಪ್ರಶಾಂತ್ ನೀಲ್ ಗೆಲುವಿನ ಸೂತ್ರ

    ‘ಕೆಜಿಎಫ್’ ಚಿತ್ರದಲ್ಲಿ ದುರ್ಗಾಮಾತೆ, ‘ಸಲಾರ್’ ನಲ್ಲಿ ಕಾಳಿಮಾತೆ: ಪ್ರಶಾಂತ್ ನೀಲ್ ಗೆಲುವಿನ ಸೂತ್ರ

    ಪ್ರಶಾಂತ್ ನೀಲ್ ಅಡ್ಡದಿಂದ ಇನ್ನೊಂದು ಸಮಾಚಾರ ಹೊರ ಬಿದ್ದಿದೆ. ಇನ್ನೆರಡು ತಿಂಗಳಲ್ಲಿ ಬಿಡುಗಡೆಯಾಗಲಿರುವ ಸಲಾರ್‌ (Salaar)ನಲ್ಲಿ ಮತ್ತೊಂದು ದೈವ ಶಕ್ತಿಯನ್ನು ತಂದು ನಿಲ್ಲಿಸಲಿದ್ದಾರೆ ನೀಲ್. ಕೆಜಿಎಫ್‌ನಲ್ಲಿ ದುರ್ಗಾಮಾತೆ (Durga Maate) ರುದ್ರಾವತಾರದ ದರ್ಶನ ಮಾಡಿಸಿದ್ದರು. ಸಲಾರ್‌ನಲ್ಲಿ ಪ್ರಭಾಸ್‌ಗೆ ಕಾಳಿ ಮಾತೆ (Kaali Maate) ಶಕ್ತಿ ತುಂಬಲಿದ್ದಾರೆ.

    ಪ್ರಶಾಂತ್ ನೀಲ್ (Prashant Neel) ನಿರಾತಂಕವಾಗಿದ್ದಾರೆ. ಇನ್ನೆರಡು ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಸಲಾರ್ ಚಿತ್ರದ ಬಾಕಿ ಕೆಲಸ ಮುಗಿಸಲಿದ್ದಾರೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಬಿರುಸಾಗಿ ನಡೆದಿದೆ. ರವಿ ಬಸ್ರೂರ್ ನೇತೃತ್ವದಲ್ಲಿ ಹಿನ್ನೆಲೆ ಸಂಗೀತದ ಕೆಲಸ ಬಸ್ರೂರಿನ ಸ್ಟುಡಿಯೋದಲ್ಲಿ ಸಾಗಿದೆ. ಈ ಹೊತ್ತಲ್ಲಿ ಎದ್ದಿದೆ ನೋಡಿ ಪ್ರಶಾಂತ್ ನೀಲ್‌ಗೆ ಶಕ್ತಿ ಅಥವಾ ಭಕ್ತಿ ತುಂಬಿರುವ ಇಬ್ಬರು ದೈವ ಮಾತೆಯರ ಸಮಾಚಾರ. ಕೆಜಿಎಫ್‌ನಲ್ಲಿ ದುರ್ಗಾಮಾತೆ ಮಹಿಮೆ ಸಾರಿದ್ದರು. ಸಲಾರ್‌ನಲ್ಲಿ ಕಾಳಿ ಮಾತೆಯಾ? ಏನಿದು ರಹಸ್ಯ? ಇದನ್ನೂ ಓದಿ:2ನೇ ಮಗುವಿನ ಹೆಸರನ್ನ ರಿವೀಲ್‌ ಮಾಡಿದ ‘ಯೇ ಜವಾನಿ ಹೇ ದಿವಾನಿ’ ನಟಿ

    ಕೆಜಿಎಫ್ ಮೊದಲ ಭಾಗದ ಕ್ಲೈಮ್ಯಾಕ್ಸ್ ನಲ್ಲಿ ದುರ್ಗಾ ಮಾತೆಯ ಬೃಹತ್ ಮೂರ್ತಿ ತೋರಿಸಿದ್ದು ನೆನಪಿರಬೇಕು. ಆ ದೇವಿಯ ಪಾದದಡಿಯಲ್ಲಿಯೇ ರಾಕಿಭಾಯ್ ಗರುಡನ ವಧೆ ಮಾಡುತ್ತಾನೆ. ಸಂಪೂರ್ಣ ಕತ್ತಲಲ್ಲಿ. ಯಾವುದೇ ಕೃತಕ ಲೈಟಿನ ಬೆಳಕಿಲ್ಲದೆ, ಬರೀ ಬೆಂಕಿ ದೊಂದಿಯಲ್ಲಿಯೇ ಅದನ್ನು ಚಿತ್ರಿಸಿದ್ದರು. ಇಡೀ ಚಿತ್ರಕ್ಕೆ ಆ ದೃಶ್ಯ ಸೇಮ್ ಟೈಮ್ ದುರ್ಗಾಮಾತೆ ದರ್ಶನ ಹೊಸ ಮೆರುಗು ನೀಡಿತ್ತು. ಸಲಾರ್‌ನಲ್ಲಿ ಅದೇ ರೀತಿ ಕಾಳಿ ಮಾತೆಯ ದಿವ್ಯ ರೂಪ ತೋರಿಸಲಿದ್ದಾರಂತೆ.

    ಕೆಜಿಎಫ್ ಎರಡು ಸರಣಿಯ ಗೆಲುವು ಸುಮ್ಮನೆ ಬಂದಿದ್ದಲ್ಲ. ಆದರೆ ನೀಲ್ ಮೇಲೆ ಅದೊಂದು ಆರೋಪ ಇದೆ. ಕೆಜಿಎಫ್ ಗೆಲುವನ್ನು ಮೀರಿಸಿದ ಸಿನಿಮಾ ಕೊಡಬೇಕು. ಸಲಾರ್‌ನಲ್ಲಿ ಹೊಸ ಲೋಕ ತೋರಿಸಬೇಕು. ಹಾಗೆಯೇ ಬಂಪರ್ ಗೆಲುವು ಸಾಧಿಸಬೇಕು. ಅದಕ್ಕೆ ಏನೇನು ಬೇಕೊ ಎಲ್ಲ ಮಾಡಿದ್ದಾರೆ. `ಮತ್ತದೇ ಕತ್ತಲು. ಕತ್ತಲು ಲೋಕ…’ ಹೀಗಂತ ಆಡಿಕೊಂಡವರ ಬಾಯಿಗೆ ಕರಿಗಡುಬು ಇಡಬೇಕು. ದುರ್ಗಾಮಾತೆಯಂತೆ ಇದೀಗ ಕಾಳಿ ಮಾತೆ ಕೈ ಹಿಡಿಯುತ್ತಾಳಾ? ಕಾಯದೇ ಬೇರೆ ದಾರಿ ಇಲ್ರಪ್ಪಾ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಳೆ ದುರ್ಗಾದೇವಿ ದರ್ಶನಕ್ಕೆ ಡಿಕೆಶಿ ಆಗಮನ

    ನಾಳೆ ದುರ್ಗಾದೇವಿ ದರ್ಶನಕ್ಕೆ ಡಿಕೆಶಿ ಆಗಮನ

    ಯಾದಗಿರಿ: ಜಿಲ್ಲೆಯ ವಡಗೇರಾ ತಾಲೂಕಿನ ಗೋನಾಲ ಗ್ರಾಮದ ದುರ್ಗಾದೇವಿ ಮತ್ತು ಮಾಜಿ ಸಚಿವ ಡಿಕೆ ಶಿವಕುಮಾರ್ ನಡುವೆ ಭಕ್ತಿಯ ಸಂಬಂಧ ಇಡೀ ರಾಜ್ಯಕ್ಕೆ ಗೊತ್ತಿದೆ. ತನ್ನ ಕಷ್ಟಗಳನ್ನು ದೂರ ಮಾಡಿದ ಮಾತೆಗೆ ನಮಿಸಲು ಡಿಕೆಶಿ ಯಾದಗಿರಿಗೆ ಬರುತ್ತಿದ್ದಾರೆ.

    ಈಗ ದುರ್ಗಾ ಮಾತೆಯ ಜಾತ್ರೆ ನಡೆಯುತ್ತಿದ್ದು, ಈ ಜಾತ್ರೆಗೂ ಡಿಕೆಶಿ ಬರುವುದು ಪಕ್ಕಾ ಆಗಿದೆ. ಕಳೆದ ಬಾರಿ ಜಾತ್ರೆ ಬರುವುದಾಗಿ ಮಾತು ಕೊಟ್ಟು ಕೊನೆಗಳಿಗೆಯಲ್ಲಿ ಮಾತು ತಪ್ಪಿದ್ದರು. ದೇವಿಗೆ ಮಾತು ಕೊಟ್ಟು ಬಾರದ ಕಾರಣ ಸಂಕಷ್ಟ ಎದುರಾಗಿತ್ತು ಎನ್ನುವ ಮಾತು ಇಲ್ಲಿ ಜನ ಆಡಿಕೊಳ್ಳುತ್ತಿದ್ದರು. ಜಾರಿ ನಿರ್ದೇಶನಾಲಯ (ಇಡಿ) ತಾತ್ಕಾಲಿಕ ರಿಲೀಫ್ ಸಿಕ್ಕ ಕೂಡಲೇ ದೇವಸ್ಥಾನದ ಅರ್ಚಕ ಮಹಾದೇವಪ್ಪ ಪೂಜಾರಿಗೆ ಕರೆ ಮಾಡಿ ಕೃತಜ್ಞತೆ ಸಲ್ಲಿಸಿದ್ದರು.

    ಆಗ ಉಪ ಚುನಾವಣಾ ಪ್ರಚಾರದಲ್ಲಿದ್ದ ಡಿಕೆಶಿ, ಮಹಾದೇವಪ್ಪ ಪೂಜಾರಿಯವರನ್ನು ಬೆಂಗಳೂರಿನ ತಮ್ಮ ನಿವಾಸಕ್ಕೆ ಕರೆಯಿಸಿ ತಪ್ಪಿಗೆ ಕ್ಷಮೆ ಕೇಳಿ, ಈ ವರ್ಷದ ಜಾತ್ರೆ ಬರುವುದಾಗಿ ಮತ್ತೆ ಮಾತುಕೊಟ್ಟಿದ್ದರು. ಅದರಂತೆ ಡಿಕೆಶಿ ನಾಳೆ ಬೆಂಗಳೂರಿನ ಮೂಲಕ ಕಲಬುರಗಿಗೆ ವಿಮಾನದಲ್ಲಿ ಬಂದು, ಕಲಬುರಗಿಯಿಂದ ರಸ್ತೆಯ ಮೂಲಕ ಗೋನಾಲಕ್ಕೆ ಬರಲಿದ್ದಾರೆ. ಸುಮಾರು 7 ತಾಸು ದೇವಿಗೆ ಪೂಜೆ ಸಲ್ಲಿಸಲಿರುವ ಡಿಕೆಶಿ ಬಳಿಕ ರಾತ್ರಿ 10 ಗಂಟೆ ಸುಮಾರಿಗೆ ಮತ್ತೆ ಕಲಬುರಗಿಯತ್ತ ಪ್ರಯಾಣ ಬೆಳಸಲಿದ್ದಾರೆ.

    ದೇವಿಗೆ ಡಿಕೆಶಿ ಪತ್ರ: ಇಡಿಯಿಂದ ತಾತ್ಕಾಲಿಕ ರಿಲೀಫ್ ಸಿಕ್ಕ ಹಿನ್ನೆಲೆ ಡಿ.ಕೆ ಶಿವಕುಮಾರ್ ಅವರು, ದುರ್ಗಾ ದೇವಿಗೆ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದರು. ದೇವಸ್ಥಾನ ಅರ್ಚಕ ಮಹಾದೇವಪ್ಪ ಅವರು ಬೆಂಗಳೂರಿಗೆ ಬಂದು ಡಿಕೆಶಿ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅರ್ಚಕರ ಕೈಯಲ್ಲಿ ಡಿಕೆಶಿ ಕೃತಜ್ಞತಾ ಪತ್ರ ನೀಡಿದ್ದರು. ಈಗ ದೇವಸ್ಥಾನಕ್ಕೆ ಬರಲು ಆಗುವುದಿಲ್ಲ. ಮುಂದಿನ ವರ್ಷದ ದೇವಿಯ ಜಾತ್ರೆಗೆ ಖಂಡಿತ ಬರುತ್ತೆನೆಂದು ಅರ್ಚಕರಿಗೆ ಮಾತು ಕೊಟ್ಟಿದ್ದರು. ಡಿಕೆಶಿ ಪತ್ರ ತಲುಪಿದ ಹಿನ್ನೆಲೆ ಪತ್ರದೊಂದಿಗೆ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು. ಡಿಕೆಶಿ ಅಭಿಮಾನಿಗಳು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಚನ್ನಾರೆಡ್ಡಿ ತುನ್ನೂರ ಪೂಜೆಯಲ್ಲಿ ಭಾಗಿಯಾಗಿ ಡಿಕೆ ಶಿವಕುಮಾರ್ ಅವರಿಗೆ ಒಳಿತಾಗಲೆಂದು ದೇವಿಯಲ್ಲಿ ಪ್ರಾರ್ಥಿಸಿಕೊಂಡಿದ್ದರು.

    ಬಹಳ ವರ್ಷಗಳಿಂದಲೂ ಈ ದೇವಿಯ ಪರಮ ಭಕ್ತರಾಗಿರುವ ಡಿಕೆಶಿ, ಈ ಹಿಂದೆ ತಮಗೆ ಸಂಕಷ್ಟ ಎದುರಾದಾಗ ಈ ದೇವಸ್ಥಾನ ಅರ್ಚಕರಿಂದ ತಮ್ಮ ಮನೆಯಲ್ಲಿ ವಿಶೇಷ ಪೂಜೆ ಮಾಡಿಸಿದ್ದರು. ಈಗ ಕೊಟ್ಟ ಮಾತಿನಂತೆ ಡಿಕೆಶಿ ನಾಳೆ ನಡೆಯಲಿರುವ ಜಾತ್ರೆಗೆ ಬರುತ್ತಿದ್ದಾರೆ.