Tag: ದಿವ್ಯಾ ಹಾಗಾರಗಿ

  • ನಿನ್ನಿಂದ್ಲೇ ಎಲ್ಲಾ ಆಗಿದ್ದು ನಿನ್ನಿಂದ ಅಪ್ಪ ಜೈಲಿಗೆ ಹೋಗಿದ್ದು – ದಿವ್ಯಾ ಹಾಗರಗಿಯನ್ನು ತರಾಟೆಗೆ ತೆಗೆದುಕೊಂಡ ಪುತ್ರ

    ನಿನ್ನಿಂದ್ಲೇ ಎಲ್ಲಾ ಆಗಿದ್ದು ನಿನ್ನಿಂದ ಅಪ್ಪ ಜೈಲಿಗೆ ಹೋಗಿದ್ದು – ದಿವ್ಯಾ ಹಾಗರಗಿಯನ್ನು ತರಾಟೆಗೆ ತೆಗೆದುಕೊಂಡ ಪುತ್ರ

    ಕಲಬುರಗಿ: ಇಂತಹ ಸ್ಥಿತಿ ಯಾವ ಅಮ್ಮನಿಗೂ ಬರಬಾರದು ಅನಿಸುತ್ತೆ. ನಿನ್ನಿಂದ್ಲೇ ಎಲ್ಲಾ ಆಗಿದ್ದು, ನಿನ್ನಿಂದ್ಲೇ ಅಪ್ಪ ಜೈಲಿಗೆ ಹೋದ್ರು. ನಾನು ಎಲ್ಲವನ್ನು ಟಿವಿಯಲ್ಲಿ ನೋಡಿದ್ದೇನೆ ಎಂದು ಬಂಧಿತೆ ದಿವ್ಯಾ ಹಾಗರಗಿಯನ್ನು ಅವರ ಪುತ್ರ ತರಾಟೆಗೆ ತೆಗೆದುಕೊಂಡಿದ್ದಾನೆ.

    ದಿವ್ಯಾ ಹಾಗರಗಿ ವಿರುದ್ಧ ಪುತ್ರ ಕಿಡಿಕಾರುತ್ತಿದ್ದಂತೆ ದಿವ್ಯಾ ಹಾಗರಗಿ ಪಶ್ಚತ್ತಾಪದಿಂದ ಗಳಗಳನೇ ಕಣ್ಣೀರಿಟ್ಟಿದ್ದಾರೆ. ಕಲಬುರಗಿಯನ್ನು ಕೇಂದ್ರವಾಗಿರಿಸಿಕೊಂಡು ಸಿಐಡಿ ತನಿಖೆ ತೀವ್ರಗೊಳಿಸಿದೆ. ಕೋರ್ಟ್ ನೀಡಿದ್ದ ಗಡುವು ನಾಳೆಗೆ ಮುಗಿಯಲಿರೋ ಹಿನ್ನೆಲೆಯಲ್ಲಿ ಪಿಎಸ್‍ಐ ಹಗರಣದ ಮತ್ತೋರ್ವ ಆರೋಪಿ, ಜ್ಞಾನಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಸಿಐಡಿ ಮುಂದೆ ಇಂದು ಶರಣಾಗಿದ್ದಾರೆ. ಇದನ್ನೂ ಓದಿ: ಸಿಐಡಿ ಕಚೇರಿಗೆ ಹೊಸಬಟ್ಟೆ ಸಮೇತ ಆಗಮಿಸಿದ ಆರೋಪಿ ಸದ್ದಾಂ ಫ್ಯಾಮಿಲಿ

    ನೀರಾವರಿ ಇಲಾಖೆ ಜ್ಯೂನಿಯರ್ ಎಂಜಿನಿಯರ್ ಮಂಜುನಾಥ್ ಮೆಳಕುಂದಿ ನಡೆಸ್ತಿದ್ದ ಡೀಲಿಂಗ್ ಕಂಡು ಸ್ವತಃ ಅವ್ರ ಅಪ್ಪ ವಿಪರೀತವಾಗಿ ಮನನೊಂದಿದ್ರು. ಕೆಟ್ಟ ಕೆಲಸ ಮಾಡಿರೋ ನಿನಗೆ ನಮ್ಮ ಮನೆಯಲ್ಲಿ ಜಾಗ ಇಲ್ಲ. ನೀನು ಸರೆಂಡರ್ ಆಗದಿದ್ರೆ ನಾನೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೆತ್ತಪ್ಪ ವಾರ್ನಿಂಗ್ ನೀಡಿದ್ರು ಎನ್ನಲಾಗಿದೆ. ಪರಿಶೀಲನೆಗಾಗಿ ಮನೆಗೆ ಬಂದ ಸಿಐಡಿ ಅಧಿಕಾರಿಗಳಿಗೆ ಮಂಜುನಾಥ್ ತಂದೆ ಶಹಾಬ್ಬಾಶ್‍ಗಿರಿ ಕೊಟ್ಟಿದ್ರು. ನನಗೂ ಇದೇ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಸಂತೃಪ್ತಿ ಇದೆ. ನೂರಾರು ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನಿಮ್ಮಿಂದ ಉಪಕಾರ ಆಗಲಿ. ನಿಮ್ಮ ಕೆಲಸ ನೀವು ಮಾಡಿ ಎಂದು ಸಿಐಡಿ ಅಧಿಕಾರಿಗಳಿಗೆ ತಿಳಿಸಿದ್ರು. ಇದನ್ನೂ ಓದಿ: PSI ಟಾಪರ್ಸ್‍ಗಳ ಅಸಲಿ ಮುಖವಾಡ ಬಯಲು – ತಾತ್ಕಾಲಿಕ ಪಟ್ಟಿಯಲ್ಲಿ ಬೆಂಗ್ಳೂರಿನ 172 ಮಂದಿ ಆಯ್ಕೆ!

    ನಿನ್ನೆ ಮಂಜುನಾಥ್ ಮೆಳಕುಂದಿ ತಾವಾಗಿಯೇ ಬಂದು ಸಿಐಡಿ ಪೊಲೀಸರಿಗೆ ಶರಣಾಗಿದ್ದಾರೆ. ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಪಿಎಸ್‍ಐ ಹಗರಣದಲ್ಲಿ ಎಫ್‍ಐಆರ್ ದಾಖಲಾದ ಬಳಿಕ ನಾಪತ್ತೆ ಆಗಿದ್ದರು. ಈ ಹಿನ್ನೆಲೆಯಲ್ಲಿ 6 ದಿನಗೊಳಗೆ ಶರಣಾಗಬೇಕು, ಇಲ್ಲದಿದ್ದರೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತ್ತು. ನಿನ್ನೆ ಆಟೋದಲ್ಲಿ ಒಬ್ಬನೇ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದರು.

  • ಮೋದಿ ಬಗ್ಗೆ ಮಾತನಾಡುವ ಮೊದಲು, ನೀನು ಗಂಡಸು ಅನ್ನೋದನ್ನು ಪರೀಕ್ಷಿಸಿಕೋ: ನಾರಾಯಣರಾವ್‍ಗೆ ಜಿಲ್ಲಾಧ್ಯಕ್ಷೆ ಸವಾಲ್

    ಮೋದಿ ಬಗ್ಗೆ ಮಾತನಾಡುವ ಮೊದಲು, ನೀನು ಗಂಡಸು ಅನ್ನೋದನ್ನು ಪರೀಕ್ಷಿಸಿಕೋ: ನಾರಾಯಣರಾವ್‍ಗೆ ಜಿಲ್ಲಾಧ್ಯಕ್ಷೆ ಸವಾಲ್

    ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಮೊದಲು ನೀನು ಗಂಡಸೇ ಎನ್ನುವುದನ್ನ ಪರೀಕ್ಷಿಸಿಕೋ ಎಂದು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ದಿವ್ಯಾ ಹಾಗಾರಗಿ ಬಸವಕಲ್ಯಾಣ ಶಾಸಕ ಬಿ. ನಾರಾಯಣರಾವ್‍ಗೆ ಸವಾಲ್ ಹಾಕಿದ್ದಾರೆ.

    ಮೋದಿ ವಿರುದ್ಧ ಬಿ ನಾರಾಯಣರಾವ್ ವಿವಾದತ್ಮಕ ಹೇಳಿಕೆ ಖಂಡಿಸಿ, ಕಲಬುರಗಿ ನಗರದ ಸರ್ಧಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ದಿವ್ಯಾ ಹಾಗಾರಗಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ನಾರಾಯಣರಾವ್ ಅವರ ಭಾವಚಿತ್ರಕ್ಕೆ ಸಗಣಿ ಎರಚಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ದಿವ್ಯಾ ಅವರು, ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದಲ್ಲಿ ಎಂಥಹ ಸಂಸ್ಕೃತಿಯಿಂದ ಮಾತಾನಾಡಬೇಕು ಅಂತ ಕನಿಷ್ಟ ಜ್ಞಾನವಿಲ್ಲದ, ನಿನ್ನಂಥವನಿಗೆ ಆಯ್ಕೆ ಮಾಡಿದ್ದು ಶರಣರ ನಾಡಿನ ಜನರ ದುರ್ದೈವ. ಮೋದಿಯವರ ಬಗ್ಗೆ ಕೀಳಾಗಿ ಮಾತಾನಾಡುವ ಬದಲು, ನೀನು ಗಂಡಸೇ ಎನ್ನುವುದನ್ನ ಮೊದಲು ಪರೀಕ್ಷಿಸಿಕೋ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಬಸವಕಲ್ಯಾಣದ ಜನರಿಗೆ ಸ್ವಾಭಿಮಾನವಿದ್ದಲ್ಲಿ ಮೊದಲು ನಾರಾಯಣರಾವ್‍ನನ್ನ ಕ್ಷೇತ್ರದಿಂದ ಹೊರಹಾಕಿ ಅಂತ ಕರೆ ನೀಡಿದ್ದಾರೆ.

    ನಾರಾಯಣರಾವ್ ಹೇಳಿದ್ದು ಏನು?
    ಜಿಲ್ಲೆಯಲ್ಲಿ ನಡೆದ ಕೈ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡಿದ ನಾರಾಯಣ ರಾವ್, ಮಲ್ಲಿಕಾರ್ಜುನ ಖರ್ಗೆ ಅವರ ಹಿಂದೆ ಇಡೀ ದೇಶವಿದೆ. ಆದರೆ ಅದು ಮೋದಿಗೆ ಅರ್ಥವಾಗುತ್ತಿಲ್ಲ. ನಾಮರ್ಧ್ ಕೇ ಸಾಥ್ ಶಾದಿ ಹೋ ಸಕ್ತಿ ಹೈ, ಮಗರ್ ಔಲಾದ್ ನಹೀ ಹೋತಿ ಹೈ (ಷಂಡರ ಜೊತೆ ಮದ್ವೆಯಾಗುತ್ತದೆ. ಆದರೆ ಮಕ್ಕಳಾಗಲ್ಲ). ಮೋದಿ ಸೇ ಶಾದಿ ಹೋ ಸಕ್ತಿ ಹೈ, ಮಗರ್ ಔಲಾದ್ ನಹೀ ಹೋತೆ ಹೈ(ಮೋದಿ ಜೊತೆ ಮದ್ವೆಯಾಗಬಹುದು, ಆದರೆ ಮೋದಿಗೆ ಮಕ್ಕಳಾಗಲ್ಲ) ಎಂದು ಹೇಳಿ ಪ್ರಧಾನಿ ಅವರನ್ನು ಷಂಡರಿಗೆ ಹೋಲಿಸಿ ವ್ಯಂಗ್ಯವಾಡಿದ್ದರು.

    ಮಲ್ಲಿಕಾರ್ಜುನ ಖರ್ಗೆಯನ್ನು ಎದುರಿಸೋ ಶಕ್ತಿ ಮೋದಿಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಮುಂದೊಂದು ದಿನ ದೇಶದ ಪ್ರಧಾನಿಯಾಗಲಿದ್ದಾರೆ ಎನ್ನುತ್ತ ಹಿಂದಿಯ ಶಾಯರಿಯೊಂದನ್ನು ಬಳಸಿ ಮೋದಿ ಅವರಿಗೆ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ನಾರಾಯಣ್‍ರಾವ್ ನೀಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾಗಿತ್ತು.