Tag: ದಿನೇಶ್ ಅಮೀನ್ ಮಟ್ಟು

  • ಪೇಜಾವರ ಶ್ರೀ ಕೋಮುವಾದಿ ಹೇಗೆ ಆಗ್ತಾರೆ – ಮಟ್ಟು ವಿರುದ್ಧ ಕೋಟ ಕಿಡಿ

    ಪೇಜಾವರ ಶ್ರೀ ಕೋಮುವಾದಿ ಹೇಗೆ ಆಗ್ತಾರೆ – ಮಟ್ಟು ವಿರುದ್ಧ ಕೋಟ ಕಿಡಿ

    ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾಧ್ಯಮ ಸಲಹೆಗಾರಾಗಿದ್ದ ದಿನೇಶ್ ಅಮೀನ್ ಮಟ್ಟು ವಿರುದ್ಧ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಕಿಡಿಕಾರಿದ್ದಾರೆ. ಕೃಷ್ಣಮಠ, ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಟೀಕಿಸಿದ್ದಾರೆ.

    ಮಂಗಳೂರಲ್ಲಿ ಮಾತನಾಡಿದ್ದ ಅಮಿನ್ ಮಟ್ಟು ಅವರು, ಕೃಷ್ಣಮಠ ಕೋಮುವಾದದ ಕೇಂದ್ರ. ಪೇಜಾವರ ಸ್ವಾಮೀಜಿ ಅದರ ಮುಖಂಡ ಎಂದು ಹೇಳಿದ್ದರು. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ಮಟ್ಟು ಹೇಳಿಕೆ ಅತ್ಯಂತ ನೋವಿನ ಸಂಗತಿ. ಪೇಜಾವರ ಸ್ವಾಮೀಜಿ ವಯೋವೃದ್ಧರು, ಜ್ಞಾನ ವಂತರು. ಪೇಜಾವರ ಶ್ರೀಗಳು ಇಫ್ತಾರ್ ಕೂಟ ಮಾಡಿದ್ದರು. ಆಗ ನಿಮ್ಮಂತೆ ಯೋಚಿಸುವವರು ಸ್ವಾಗತಿಸಿರಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

    ಅಯೋಧ್ಯೆಯಲ್ಲಿ ರಾಮಮಂದಿರ ಆಗಬೇಕು ಅಂದರೆ ಪೇಜಾವರ ಶ್ರೀ ಕೋಮುವಾದಿ ಹೇಗಾಗ್ತಾರೆ? ಮಠ ಕೋಮುವಾದಿಗಳ ಕೇಂದ್ರ ಎಂದು ಹೇಗೆ ಹೇಳುತ್ತೀರಿ? ಕೃಷ್ಣಮಠ ಹಿಂದೂ ಧರ್ಮದ ಸರ್ವಶ್ರೇಷ್ಟ ದೇವಾಲಯ. ಪೇಜಾವರ ಶ್ರೀ ಬಗ್ಗೆ ಲಘುವಾಗಿ ಮಾತನಾಡುವುದು ಖಂಡನೀಯ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

  • ದಿನೇಶ್ ಅಮೀನ್ ಮಟ್ಟು ಸೇರಿದಂತೆ ಐವರು ಪ್ರಗತಿಪರ ಚಿಂತಕರ ವಿರುದ್ಧ ಕೇಸ್

    ದಿನೇಶ್ ಅಮೀನ್ ಮಟ್ಟು ಸೇರಿದಂತೆ ಐವರು ಪ್ರಗತಿಪರ ಚಿಂತಕರ ವಿರುದ್ಧ ಕೇಸ್

    ಉಡುಪಿ: ಸಹಬಾಳ್ವೆ ಸಂಘಟನೆ ನೇತೃತ್ವದಲ್ಲಿ ನಡೆದ ಸರ್ವ ಜನೋತ್ಸವ ಕಾರ್ಯಕ್ರಮದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿ ಚುನಾವಣಾ ಪ್ರಚಾರ ಮಾಡಿದ ಐವರು ಪ್ರಗತಿಪರ ಚಿಂತಕರ ವಿರುದ್ಧ ಕೇಸು ದಾಖಲಾಗಿದೆ.

    ಹಿಂದೂ ಧರ್ಮವನ್ನು ನಿಂದಿಸಿ ಪ್ರಚೋದನಕಾರಿ ಭಾಷಣ ಮಾಡಿದ್ದ ಸಹಬಾಳ್ವೆ ಅಧ್ಯಕ್ಷ ಸಹಿತ ಐವರ ಮೇಲೆ ಪ್ರಕರಣ ದಾಖಲಾಗಿದೆ. ಸಹಬಾಳ್ವೆ ಉಡುಪಿ ಅಧ್ಯಕ್ಷ ಅಮೃತ್ ಶೆಣೈ, ಹಿರಿಯ ಪತ್ರಕರ್ತ-ಪ್ರಗತಿಪರ ಚಿಂತಕ ದಿನೇಶ್ ಅಮೀನ್ ಮಟ್ಟು, ದಲಿತ ಮುಖಂಡ ಇಂದೂಧರ ಹೊನ್ನಾಪುರ, ಜಿ.ಎನ್ ನಾಗರಾಜ್, ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್ ಅವರ ಮೇಲೆ ಚುನಾವಣಾ ಆಯೋಗ ಫ್ಲೈಯಿಂಗ್ ಸ್ಕ್ವಾಡ್ ಮೂಲಕ ಪ್ರಕರಣ ದಾಖಲು ಮಾಡಿಕೊಂಡಿದೆ. ಇದನ್ನೂ ಓದಿ:ಪ್ರಕಾಶ್ ರೈ ಮತ ವಿಭಜನೆಗೆ ಹೊರಟಿದ್ದಾರೆ: ದಿನೇಶ್ ಅಮಿನ್ ಮಟ್ಟು

    ಉಡುಪಿಯಲ್ಲಿ ನಡೆದ ಸರ್ವಜನೋತ್ಸವದಲ್ಲಿ ದಿನೇಶ್ ಅಮೀನ್ ಮಟ್ಟು ಮತ್ತು ಇತರರು ಮಾ. 17 ರಂದು ಕಲ್ಸಂಕದ ರಾಯಲ್ ಗಾರ್ಡನ್‍ನಲ್ಲಿ ನಡೆದ ಸಹಬಾಳ್ವೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದರು. ಚುನಾವಣಾ ಪ್ರಚಾರದ ಜೊತೆಗೆ ಧರ್ಮಗಳ ನಿಂದನೆ ಮಾಡಿದ್ದರು. ಪ್ರಧಾನಿ ಮೋದಿ, ಪೇಜಾವರಶ್ರೀ, ಪ್ರಕಾಶ್ ರೈ ಮೇಲೆ ವಾಗ್ದಾಳಿ ಮಾಡಿದ್ದರು. ಹಿಂದೂ ಧರ್ಮದ ಹೆಸರು ತೆಗೆದು ಟೀಕೆ ಮಾಡಿದ್ದರು.

    ಬಳಿಕ ಯಾರಿಗೆ ಮತಹಾಕಿ, ಯಾರಿಗೆ ಮತ ಹಾಕಬೇಡಿ ಎಂದು ಸಾರ್ವಜನಿಕರ ಮೇಲೆ ಒತ್ತಡ ಹೇರಿದ್ದರು. ಈ ಬಗ್ಗೆ ಚುನಾವಣಾ ವೀಕ್ಷಣಾಧಿಕಾರಿಗಳು ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಗೆದ್ರೆ ಖುಷಿಯಲ್ಲಿ, ಸೋತ್ರೆ ದು:ಖದಲ್ಲಿ ತಿನ್ನೋಣವೆಂದು 2 ಕೆಜಿ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ- ಅಮೀನ್ ಮಟ್ಟು

    ಗೆದ್ರೆ ಖುಷಿಯಲ್ಲಿ, ಸೋತ್ರೆ ದು:ಖದಲ್ಲಿ ತಿನ್ನೋಣವೆಂದು 2 ಕೆಜಿ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ- ಅಮೀನ್ ಮಟ್ಟು

    ಬೆಂಗಳೂರು: ತೀವ್ರ ಕುತೂಹಲ ಮೂಡಿಸಿರೋ ಗುಜರಾತ್, ಹಿಮಾಚಲಪ್ರದೇಶ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸಿಎಂ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್‍ಮಟ್ಟು ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಿದ್ದಾರೆ.

    ಗೆದ್ದರೆ ಗೆದ್ದ ಖುಷಿಯಲ್ಲಿ, ಸೋತರೆ ಸೋತ ದು:ಖದಲ್ಲಿ ತಿನ್ನುವ ಎಂದು ಎರಡು ಕಿಲೋ ಕಾಣೆ ಮೀನು ತಂದಿಟ್ಟುಕೊಂಡಿದ್ದೇನೆ. ಮೀನು ತಿಂದು ಬಿಸಾಡಿದ ಮುಳ್ಳುಗಳಿಗೆ ಕಾಯುತ್ತಿರುವವರನ್ನು ಯಾಕೆ ನಿರಾಶೆ ಪಡಿಸಬೇಕಲ್ವಾ? ಸೋತು ಗೆದ್ದರೆ ಸ್ವಲ್ಪ ಖುಷಿ, ಸ್ವಲ್ಪ ದು:ಖಕ್ಕೆ ಇರಲಿ ಎಂದು ಮಡಿಕೇರಿ ಗೆಳೆಯರು ಕೊಟ್ಟಿರುವ ಸಿಹಿ- ಒಗರಿನ ಅಡಿಕೆ ವೈನ್ ಕೂಡಾ ಇಟ್ಟುಕೊಂಡಿದ್ದೇನೆ ಎಂದು ಅಮೀನ್ ಮಟ್ಟು ಪೋಸ್ಟ್ ಮಾಡಿದ್ದಾರೆ.

    ಭಾರೀ ಕುತೂಹಲ ಮೂಡಿಸುತ್ತಿರುವ ಗುಜರಾತ್ ಚುನಾವಣೆಯ ಫಲಿತಾಂಶಗಳು ನಿಮಿಷ ನಿಮಿಷಗಳಲ್ಲಿ ಬದಲಾಗುತ್ತಿದೆ. ಆರಂಭದ ಮತ ಎಣಿಕೆಯ ವೇಳೆ ಬಿಜೆಪಿಯ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದರೆ ನಂತರ ಕಾಂಗ್ರೆಸ್ ಅಭ್ಯರ್ಥಿಗಳು ಮುನ್ನಡೆ ಸಾಧಿಸುತ್ತಿದ್ದಾರೆ. ಇನ್ನು ಕೆಲವೇ ನಿಮಿಷಗಳಲ್ಲಿ ಸ್ಪಷ್ಟ ಫಲಿತಾಂಶ ತಿಳಿದುಬರಲಿದೆ.

     

  • ರಾಷ್ಟ್ರಪತಿಗಳಿಗೆ ಟಿಪ್ಪು ಭಾಷಣ ಬರೆದು ಕೊಟ್ಟಿದ್ರು ಇವ್ರು ಅಂದ್ರು ದಿನೇಶ್ ಅಮೀನ್ ಮಟ್ಟು

    ರಾಷ್ಟ್ರಪತಿಗಳಿಗೆ ಟಿಪ್ಪು ಭಾಷಣ ಬರೆದು ಕೊಟ್ಟಿದ್ರು ಇವ್ರು ಅಂದ್ರು ದಿನೇಶ್ ಅಮೀನ್ ಮಟ್ಟು

    ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವದ ಭಾಷಣದಲ್ಲಿ ಟಿಪ್ಪುವಿನ ಬಗ್ಗೆ ಉಲ್ಲೇಖವಾಗಿದ್ದಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಪರ – ವಿರೋಧದ ಚರ್ಚೆಗಳು ಮುಂದುವರೆದಿದೆ. ನಿನ್ನೆ ಮಧ್ಯಾಹ್ನದಿಂದ ರಾಷ್ಟ್ರಪತಿಗಳ ಭಾಷಣ ನಿಜವಾಗಿಯೂ ಬರೆದಿದ್ದು ಯಾರು ಎಂಬ ಬಗ್ಗೆ ಚರ್ಚೆಯೋ ಚರ್ಚೆ. ಕೆಲವರು ರಾಜ್ಯದತ್ತ ಕೈತೋರಿಸಿದರೆ, ಇನ್ನು ಕೆಲವರು ಕೇಂದ್ರದತ್ತ ಕೈ ತೋರಿಸಿದ್ದಾರೆ. ಈ ಎಲ್ಲದರ ನಡುವೆ ಸಿಎಂ ಮಾಧ್ಯಮ ಸಲಹೆಗಾರರಾದ ದಿನೇಶ್ ಅಮೀನ್ ಮಟ್ಟು ಅವರು ರಾಮನಾಥ್ ಕೋವಿಂದ್ ವಿಧಾನಸಭೆ ವಜ್ರಮಹೋತ್ಸವದಲ್ಲಿ ಮಾಡಿದ ಭಾಷಣ ಯಾರು ಬರೆದು ಕೊಟ್ಟಿದ್ದಾರೆ ಎಂಬ ಬಗ್ಗೆಯೂ ತಮ್ಮ ಫೇಸ್ ಬುಕ್ ಪುಟದಲ್ಲಿ ವಿವರವಾಗಿ ಬರೆದಿದ್ದಾರೆ. ಜೊತೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಹಾಗೂ ಬಿಜೆಪಿಯ ಪ್ರಕಾಶ್ ಕಾಲೆಳೆದಿದ್ದಾರೆ. ಇದೆಲ್ಲದರ ನಡುವೆ ಕಾಂಗ್ರೆಸ್ ಕಚೇರಿಯಲ್ಲಿ ಸುತ್ತಾಡುತ್ತಿರುವ ವಿಗ್ ಗಿರಾಕಿಯೊಬ್ಬರು ನನ್ನ ರಾಜೀನಾಮೆ ಕೇಳಿ ಪ್ರೆಸ್ ನೋಟ್ ಸಿದ್ಧಪಡಿಸುತ್ತಿದ್ದ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ.

    ದಿನೇಶ್ ಅಮೀನ್ ಮಟ್ಟು ಫೇಸ್ ಬುಕ್ ಪುಟದಲ್ಲಿ ಬರೆದಿದ್ದೇನು?
    ರಾಷ್ಟ್ರಪತಿಗಳ ಭಾಷಣದ ಬಗ್ಗೆ ಚರ್ಚಿಸುತ್ತಾ ಮಧ್ಯಾಹ್ನ ಹೋಟೆಲ್ ಗೆ ಊಟಕ್ಕೆ ಹೋಗಿದ್ದಾಗ ದಲಿತ ಸಮುದಾಯಕ್ಕೆ ಸೇರಿರುವ ಬಿಜೆಪಿಯ ಶಾಸಕರೊಬ್ಬರು ಭೇಟಿಯಾದರು. (ನನಗೆ ಆತ್ಮೀಯರಾಗಿರುವ ಕಾರಣ ಹೆಸರು ಹೇಳುವುದಿಲ್ಲ). ನನ್ನನ್ನು ನೋಡಿದವರೇ ‘ಏನ್ಸಾಮಿ, ನೀವು ಹೀಗೆಲ್ಲ ಬರೆದುಕೊಡೋದಾ? ಎಂದು ನಗುತ್ತಲೇ ಆಕ್ಷೇಪದ ದನಿಯಲ್ಲಿ ಪ್ರಶ್ನಿಸಿದರು. ಅವರು ತಮಾಷೆ ಮಾಡ್ತಾ ಇದ್ದಾರೆ ಎಂದು ಸುಮ್ಮನೆ ನಕ್ಕೆ. ಆದರೆ ಅದು ತಮಾಷೆಯಾಗಿರಲಿಲ್ಲ. ಅವರೇ ಮಾತು ಮುಂದುವರಿಸಿ ನಮ್ಮ ಪಕ್ಷದ ಕಚೇರಿಯಲ್ಲಿ ಇದೇ ವಿಷಯ ಚರ್ಚೆಯಾಗುತ್ತಿದೆ’ ಎಂದರು. ರಾಷ್ಟ್ರಪತಿ ಭಾಷಣ ಹೇಗೆ ತಯಾರಿಸುತ್ತಾರೆ ಎಂದು ವಿವರವಾಗಿ ತಿಳಿಸಿದರೂ ಅವರಿಗಾಗಲಿ, ಅವರ ಜತೆಯಲ್ಲಿರುವವರಿಗಾಲಿ ಪೂರ್ಣವಾಗಿ ಮನವರಿಕೆಯಾಗಲಿಲ್ಲ.

    ಇದನ್ನೇ ನಿಜವೆಂದು ನಂಬಿ ಸ್ನೇಹಿತರಾದ ಶಾಸಕ ಸುರೇಶ್ ಕುಮಾರ್ ಮತ್ತು ಪಕ್ಷದ ಅರೆವಕ್ತಾರ ‘ಪರನಿಂದಕಾಶ’ ಅನುಕ್ರಮವಾಗಿ 14 ಮತ್ತು 19ನೇ ಬಾರಿ ರಾಜೀನಾಮೆ ಕೇಳಿದರೆ ನನ್ನ ಗತಿ ಏನು ಎಂದು ಸಂಜೆ ವರೆಗೆ ಬಹಳ ಚಿಂತೆಯಲ್ಲಿದ್ದೆ. ಇದರ ಜತೆಗೆ ಕಾಂಗ್ರೆಸ್ ಕಚೇರಿಯಲ್ಲಿ ಸುತ್ತಾಡುತ್ತಿರುವ ಒಬ್ಬ ವಿಗ್ ಗಿರಾಕಿ ನನ್ನ ರಾಜೀನಾಮೆ ಕೇಳಿ ಪ್ರೆಸ್ ನೋಟ್ ರೆಡಿ ಮಾಡ್ತಾ ಇದ್ದಾನೆ ಎಂಬ ಸುದ್ದಿ ಇನ್ನಷ್ಟು ಭಯಭೀತನನ್ನಾಗಿ ಮಾಡಿತ್ತು. ದೇವರ ದಯೆಯಿಂದ ಏನೂ ಆಗಲಿಲ್ಲ.

    ಗೊತ್ತಿಲ್ಲದವರಿಗಾಗಿ ಮಾಹಿತಿ: ರಾಷ್ಟ್ರಪತಿಗಳ ಭಾಷಣ ತಯಾರಿಸಲು ಅವರೇ ನೇಮಿಸಿಕೊಂಡ ಪತ್ರಿಕಾ ಕಾರ್ಯದರ್ಶಿಗಳಿರುತ್ತಾರೆ. ಸಾಮಾನ್ಯವಾಗಿ ಆ ಹುದ್ದೆಗೆ ಐಎಎಸ್, ಐಎಫ್ ಎಸ್ ಅಧಿಕಾರಿಗಳನ್ನು ನೇಮಿಸುತ್ತಾರೆ. ಇದೇ ಮೊದಲಬಾರಿಗೆ ಕೋವಿಂದ್ ಅವರು ಹಿರಿಯ ಪತ್ರಕರ್ತ, ಅಂಕಣಕಾರ ಮತ್ತು ಬಿಜೆಪಿ ಬೆಂಬಲಿಗರಾದ ಅಶೋಕ್ ಮಲ್ಲಿಕ್ ಅವರನ್ನು ಪತ್ರಿಕಾ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡಿದ್ದಾರೆ. ರಾಷ್ಟ್ರಪತಿಗಳ ಭಾಷಣ ತಯಾರಿಯ ಹೊಣೆ ಅವರದ್ದು. ರಾಷ್ಟ್ರಪತಿಗಳು ಓದಿದ್ದ ಭಾಷಣದ ಬಗ್ಗೆ ಬಿಜೆಪಿ ನಾಯಕರಿಗೆ ಆಕ್ಷೇಪ ಇದ್ದರೆ, ಸುಮ್ಮನೆ ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು, ಮುಖ್ಯಕಾರ್ಯದರ್ಶಿಗಳು ಕೊನೆಗೆ ನನ್ನಂತಹ ಬಡಪಾಯಿ ಮೇಲೆ ಆರೋಪ ಮಾಡುವ ಬದಲಿಗೆ ಅವರ ಪತ್ರಿಕಾ ಕಾರ್ಯದರ್ಶಿಯ ರಾಜೀನಾಮೆ ಕೇಳಲಿ.

    ಇದರ ಜೊತೆಗೆ ಅಶೋಕ್ ಮಲ್ಲಿಕ್ ಯಾರು ಎಂದು ತಿಳಿಯಲು ಅವರ ಫೋಟೋವನ್ನು ಕೂಡಾ ಇಂದು ಸಂಜೆಯ ವೇಳೆಗೆ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

  • ಉಡುಪಿ ಚಲೋ ವೇಳೆ ಗೋಮೂತ್ರ ಸಿಂಪಡಣೆ ಈಗ ಏಕಿಲ್ಲ: ಅಮೀನ್ ಮಟ್ಟು ವಿವಾದಾದ್ಮಕ ಪೋಸ್ಟ್

    ಉಡುಪಿ ಚಲೋ ವೇಳೆ ಗೋಮೂತ್ರ ಸಿಂಪಡಣೆ ಈಗ ಏಕಿಲ್ಲ: ಅಮೀನ್ ಮಟ್ಟು ವಿವಾದಾದ್ಮಕ ಪೋಸ್ಟ್

    ಬೆಂಗಳೂರು: ಉಡುಪಿ ಮಠದಲ್ಲಿ ನಡೆದ ಇಫ್ತಾರ್ ಕೂಟಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಫೇಸ್‍ಬುಕ್‍ನಲ್ಲಿ ವಿವಾದಾತ್ಮಕವಾಗಿ ಬರಹವನ್ನು ಪೋಸ್ಟ್ ಮಾಡಿದ್ದಾರೆ.

    ದಲಿತರು ಉಡುಪಿ ಚಲೋ ಮಾಡಿದ್ದ ಸಂದರ್ಭದಲ್ಲಿ ಮಠದ ಶುದ್ಧೀಕರಣಕ್ಕೆ ಅನುಮತಿ ನೀಡಿದ್ದ ಪೇಜಾವರ ಶ್ರೀಗಳು ಇದೀಗ ಮಠದಲ್ಲಿ ನಡೆದ ಇಫ್ತಾರ್ ಕೂಟವನ್ನು ಬೆಂಬಲಿಸುತ್ತಿದ್ದಾರೆ. ಹಾಗಾದರೆ ದಲಿತರು ಮುಸ್ಲಿಂಮರಿಗಿಂತಲೂ ಕೀಳಾದರೆ ಎಂದು ಅಮೀನ್ ಮಟ್ಟು ಪ್ರಶ್ನಿಸಿದ್ದಾರೆ.

    ಈ ಎಫ್‍ಬಿ ಪೋಸ್ಟ್ ಗೆ ಇಫ್ತಾರ್ ಕೂಟದಲ್ಲಿ ಭಾಗಿಯಾದ ಮುಸ್ಲಿಂ ಮುಖಂಡ ರಹೀಂ ಉಚ್ಚಿಲ್ ಖಾರವಾಗಿ ಪ್ರತಿಕ್ರಿಯಿಸಿದ್ದು, ಅಮೀನ್ ಮಟ್ಟು ಯಾಕೆ ಈ ರೀತಿ ಹೇಳ್ತಿದ್ದಾರೆ ಅಂತ ನನಗೆ ಅರ್ಥವಾಗ್ತಿಲ್ಲ. ಇಲ್ಲಿ ದಲಿತರು ಮುಸ್ಲಿಮರು ಎಂಬ ಪ್ರಶ್ನೆ ಇಲ್ಲ. ಈ ಹಿಂದೆ ದಲಿತ ಸಮುದಾಯದ ಕೆಲವು ಮಂದಿ ಅಲ್ಲಿಗೆ ಹೋಗಿದ್ದು ಸ್ವಾಮೀಜಿ ವಿರುದ್ಧವಾಗಿ, ಮಠದ ವಿರುದ್ಧವಾಗಿ. ಮಠದ ವಿರುದ್ಧ ಹೋರಾಟ ಮಾಡಲು. ಆದ್ರೆ ನಾವು ಮುಸ್ಲಿಮರು ಹೋಗಿದ್ದು ಸ್ವಾಮೀಜಿಯ ಆಹ್ವಾನದ ಮೇಲೆ. ಆದ್ದರಿಂದ ಮಠದ ವಿರುದ್ಧ ಹೋದವರ ಮನಸ್ಸು ಶುದ್ಧಿ ಮಾಡುವ ಕೆಲಸ ಆಗಿದೆ. ಅದು ಕೂಡ ಮಠದಿಂದ ಆಗಿದ್ದಲ್ಲ. ಮಠದ ವಿಶ್ವಾಸವಿದ್ದವರಿಂದ ಆಗಿದ್ದು. ನಾವು ಪರಿಶುದ್ಧವಾದ ಮನಸ್ಸಿನಿಂದ ಹೋಗಿದ್ದರಿಂದ ಆ ರೀತಿ ಮಾಡೋ ಪ್ರಶ್ನೆಯೇ ಇಲ್ಲ. ಶುದ್ಧ ಮನಸ್ಸಿನಿಂದ ಹೋಗಿದ್ದೇವೆ. ಇಲ್ಲಿ ಹಿಂದೂ, ಮುಸ್ಲಿಂ, ದಲಿತ ಎಂಬ ವಿಚಾರವೇ ಬರುವುದಿಲ್ಲ. ಅಮೀನ್ ಮಟ್ಟು ಈ ರೀತಿ ಹೇಳಿಕೆ ನೀಡಿ ದಲಿತರ ಓಲೈಕೆ ಮಾಡಲು ಹೊರಟಿದ್ದು, ಇದರಲ್ಲಿ ಖಂಡಿತ ಯಶಸ್ವಿಯಾಗಲ್ಲ ಎಂದಿದ್ದಾರೆ.

    ಚುನಾವಣೆ ಉದ್ದೇಶ ಇಟ್ಕೊಂಡು ಅಮೀನ್ ಮಟ್ಟು ಈ ರೀತಿ ಹೇಳಿದ್ದಾರೆ. ಮೊದಲು ಅಮೀನ್ ಮಟ್ಟು ಅಂತವರ ಮನಸ್ಸನ್ನು ಶುದ್ಧಿ ಮಾಡ್ಬೇಕು. ಕರ್ನಾಟಕ ರಾಜ್ಯದ ಜನತೆ ಕಾಂಗ್ರೆಸ್‍ಗೂ ಹಾಗೂ ಅಮೀನ್ ಮಟ್ಟು ಮನಸ್ಸನ್ನು ಶುದ್ಧಿ ಮಾಡಬೇಕಿದೆ. ಮುಸ್ಲಿಂ ಸಮುದಾಯ ಆಕ್ರೋಶಗೊಳ್ಳುವ ರೀತಿಯಲ್ಲಿ ಮಟ್ಟು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.

    ಈ ಬಗ್ಗೆ ಉಡುಪಿ ಚಲೋದಲ್ಲಿ ಪಾಲ್ಗೊಂಡ ಜಿಲ್ಲೆಯ ದಲಿತ ಮುಖಂಡ ಸುಂದರ್ ಮಾಸ್ಟರ್ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ಸ್ವಾಮೀಜಿಯದ್ದು ದ್ವಂದ್ವ ನಿಲುವು. ಶ್ರೀಗಳ ನಡವಳಿಕೆ ಡೋಂಗಿತನ. ಆಗ ದಲಿತರು ರಸ್ತೆಯಲ್ಲಿ ನಡೆದ ಕೂಡಲೇ ಇಡೀ ಉಡುಪಿ ಮಲಿನವಾಗಿದೆ. ಈಗ ಇಫ್ತಾರ್ ಕೂಟ ನಡೆದಾಗ ಮಠದ ಒಳಗಡೆ ಹೋದಾಗ ಮಲಿನವೇ ಆಗಿಲ್ಲ. ಗೋಮೂತ್ರ ಹಾಕಿ ಶುದ್ಧೀಕರಣ ಮಾಡುವ ಅಗತ್ಯವಿಲ್ಲ. ದಲಿತರು ಬಂದಾಗ ಏನಾಗಿತ್ತು ಅವರಿಗೆ? ಸ್ವಾಮೀಜಿ ದಲಿತರು ಮತ್ತು ಮುಸ್ಲೀಮರ ಬಗ್ಗೆ ಇಬ್ಬಗೆ ನೀತಿ ಅನುಸರಿಸಿದ್ದಾರೆ ಎಂದು ದೂರಿದ್ದಾರೆ.

    ಅಮಿನ್ ಮಟ್ಟು ಅವರ ಫೇಸ್‍ಬುಕ್ ಪೋಸ್ಟ್,