Tag: ದಿನಸಿ ಅಂಗಡಿ

  • ಲಾಕ್‍ಡೌನ್- ಅಂಗಡಿ ತೆರೆಯಲು ಲಂಚ ನೀಡದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    ಲಾಕ್‍ಡೌನ್- ಅಂಗಡಿ ತೆರೆಯಲು ಲಂಚ ನೀಡದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    – ಪೊಲೀಸರ ಮೂಲಕ ಹಲ್ಲೆ ಮಾಡಿಸಿದ ಪೌರಾಯುಕ್ತ
    – ಲಂಚ ನೀಡಿದವರಿಗೆ ಒಂದು ನ್ಯಾಯ, ನೀಡದಿರುವವರಿಗೆ ಒಂದು ನ್ಯಾಯ

    ಯಾದಗಿರಿ: ಅಂಗಡಿ ತೆರೆಯುವುದಕ್ಕೆ ಲಂಚ ನೀಡದ ವ್ಯಾಪಾರಿಯ ಮೇಲೆ ಪೊಲೀಸರ ಮೂಲಕ ಪೌರಾಯುಕ್ತ ಹಲ್ಲೆ ಮಾಡಿಸಿದ ಘಟನೆ ಜಿಲ್ಲೆಯ ಶಹಪುರದಲ್ಲಿ ನಡೆದಿದೆ. ಲಾಕ್‍ಡೌನ ಸಡಿಲಿಕೆ ಹಿನ್ನೆಲೆ ಶಹಪುರದ ಕಿರಾಣಿ ಅಂಗಡಿಗಳಿಗೆ ಪೌರಾಯುಕ್ತ ರಮೇಶ್ ಸಾವಿರಾರು ರೂಪಾಯಿ ಲಂಚದ ಬೇಡಿಕೆ ಇಡುತ್ತಿದ್ದಾರೆ.

    ಲಂಚ ನೀಡಿದವರಿಗೆ ವ್ಯಾಪಾರಕ್ಕೆ ಸಮಯ ಹೆಚ್ಚು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ರಮೇಶ್ ಓರ್ವ ಕಿರಾಣಿ ವ್ಯಾಪಾರಿಗೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಯ ಮಾತಿಗೆ ವ್ಯಾಪಾರಿ ಆಗುವುದಿಲ್ಲ ಎಂದು ಉತ್ತರಿಸಿದ್ದಾರೆ. ಇದರಿಂದಾಗಿ ಪೌರಾಯುಕ್ತ ರಮೇಶ್ ಪೊಲೀಸರಿಗೆ ಕುಮ್ಮಕ್ಕು ನೀಡಿ ನಡು ರಸ್ತೆಯಲ್ಲಿ ಮನ ಬಂದಂತೆ ವ್ಯಾಪಾರಿಗೆ ಥಳಿಸಿದ್ದಾರೆ. ಆಕ್ರೋಶಗೊಂಡ ವ್ಯಾಪಾರಿಗಳು ಶಹಪುರ ನಗರಸಭೆಗೆ ಮುತ್ತಿಗೆ ಹಾಕಿ, ಪೊಲೀಸರ ಮತ್ತು ನಗರಸಭೆ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

    ನಾಳೆಯಿಂದ ಎಲ್ಲ ರೀತಿಯ ವ್ಯಾಪಾರ ವಹಿವಾಟು ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ. ಸುದ್ದಿ ತಿಳಿದ ಸಹಾಯಕ ಆಯುಕ್ತ ಪ್ರಶಾಂತ್, ವ್ಯಾಪಾರಿಗಳ ಸಂಧಾನಕ್ಕೆ ಪ್ರಯತ್ನ ಪಟ್ಟರು. ಆದರೆ ಎಸಿ ಮಾತಿಗೆ ಬಗ್ಗದ ವ್ಯಾಪಾರಸ್ಥರು, ರಮೇಶ್ ಮತ್ತು ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

  • ಮದ್ಯದ ಬೆಲೆ ಕೇವಲ 40 ರೂ.- ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗ್ತಿತ್ತು ಎಣ್ಣೆ!

    ಮದ್ಯದ ಬೆಲೆ ಕೇವಲ 40 ರೂ.- ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗ್ತಿತ್ತು ಎಣ್ಣೆ!

    ನವದೆಹಲಿ: ಸೋಪಿನ ಪುಡಿ, ಶ್ಯಾಂಪೂ ಬಳಸಿ ತಯಾರಾಗುತ್ತಿದ್ದ ಹಾನಿಕಾರಕ ಮದ್ಯವನ್ನು ಗ್ರಾಹಕರಿಗೆ ಕೇವಲ 40 ರೂ.ಗೆ ಮಾರುತ್ತಿದ್ದ ಖದೀಮರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

    ದೆಹಲಿಯ ರಘುಬೀರ್ ನಗರದಲ್ಲಿ ಶುಕ್ರವಾರ ಪೊಲೀಸರು ಎರಡು ಅಂಗಡಿ ಮೇಲೆ ದಾಳಿ ಮಾಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಮೇಲ್ನೊಟಕ್ಕೆ ದಿನಸಿ ಅಂಗಡಿ ಅಂತ ಬೋರ್ಡ್ ಹಾಕಿಕೊಂಡು ಅಕ್ರಮವಾಗಿ ಡ್ರಮ್‍ಗಟ್ಟಲೆ ಸಾರಾಯಿಯನ್ನು ಇಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಅಂಗಡಿ ಮೇಲೆ ದಾಳಿ ಮಾಡಿದಾಗ ಈ ಸತ್ಯಾಂಶ ಹೊರಬಿದ್ದಿದೆ.

    ಅಂಗಡಿಯಲ್ಲಿ ಪತ್ತೆಯಾದ ಸಾರಾಯಿ ತಯಾರಿಕೆಯ ಸಾಮಾಗ್ರಿ ಪಟ್ಟಿಯಲ್ಲಿ ಈ ಮದ್ಯಕ್ಕೆ ಯಾವ್ಯಾವ ಸಾಮಾಗ್ರಿ ಬಳಕೆಯಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ. ಆಗ ಸಾರಾಯಿ ತಯಾರಿಸಲು ಆರೋಪಿಗಳು ಹಾನಿಕಾರಕ ಸೋಪಿನ ಪುಡಿ ಹಾಗೂ ಶ್ಯಾಂಪುಗಳನ್ನು ಬಳಕೆ ಮಾಡುತ್ತಾರೆ ಎಂಬುದು ಬಯಲಾಗಿದೆ. ಅಲ್ಲದೆ ಗ್ರಾಹಕರಿಗೆ ಪ್ರತಿ ಬಾಟಲಿಗೆ ಕೇವಲ 40 ರೂ.ಗೆ ಈ ಸಾರಾಯಿಯನ್ನು ಅಂಗಡಿಯವರು ಮಾರಾಟ ಮಾಡುತ್ತಿದ್ದರು ಎಂಬುದರ ಬಗ್ಗೆ ಕೂಡ ಸಾಕ್ಷಿಗಳು ದೊರಕಿದೆ.

    ಆರೋಪಿಗಳಾದ ಜಿಜಾರ್ ಸಿಂಗ್ ಹಾಗೂ ವಿಶಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದು, ಸ್ಥಳದಲ್ಲಿದ್ದ ಅಕ್ರಮ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಈ ಹಿಂದೆ 2009ರಲ್ಲಿ ಇದೇ ಪ್ರದೇಶದಲ್ಲಿ ಸಾರಾಯಿ ಸೇವಿಸಿ 17ಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಜಿಜಾರ್ ಸಿಂಗ್‍ನ ಮಾವನೇ ಆರೋಪಿಯಾಗಿದ್ದನು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv