Tag: ದಿಗ್ವಿಜಯ್ ಸಿಂಗ್

  • ಬಿಎಸ್‍ವೈ, ಈಶ್ವರಪ್ಪ ಟೀಮ್‍ನಿಂದ ನಾಲ್ವರಿಗೆ ಕೊಕ್- ಮುರಳೀಧರ್‍ರಾವ್ ಖಡಕ್ ಆದೇಶ

    ಬಿಎಸ್‍ವೈ, ಈಶ್ವರಪ್ಪ ಟೀಮ್‍ನಿಂದ ನಾಲ್ವರಿಗೆ ಕೊಕ್- ಮುರಳೀಧರ್‍ರಾವ್ ಖಡಕ್ ಆದೇಶ

    ಬೆಂಗಳೂರು: ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ಹೈಕಮಾಂಡ್ ಶನಿವಾರ ರಾತ್ರೋರಾತ್ರಿ ಬಿಗ್‍ಶಾಕ್ ಕೊಟ್ಟಿದೆ. ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ಎರಡು ಬಣಗಳಿಗೂ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಬಿಸಿ ಮುಟ್ಟಿಸಿದ್ದಾರೆ.

    ಈಶ್ವರಪ್ಪ ಟೀಂನಿಂದ ಭಾನುಪ್ರಕಾಶ್, ನಿರ್ಮಲ್ ಕುಮಾರ ಸುರಾನಾ ಅವರು ಹೊಂದಿದ್ದ ಉಪಾಧ್ಯಕ್ಷ ಸ್ಥಾನವನ್ನ ಕಿತ್ಕೊಂಡು ಇಬ್ಬರಿಗೂ ಕೊಕ್ ಕೊಟ್ಟಿದೆ. ಇತ್ತ ಬಿ.ಎಸ್ ಯಡಿಯೂರಪ್ಪ ಬಣದ ಎಂ.ಪಿ. ರೇಣುಕಾಚಾರ್ಯಗೆ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನದಿಂದ ಕೊಕ್ ಕೊಟ್ರೆ, ಗೋ ಮಧುಸೂಧನ್ ಅವರಿಗೆ ನೀಡಲಾಗಿದ್ದ ರಾಜ್ಯ ವಕ್ತಾರ ಹುದ್ದೆಯನ್ನ ಹೈಕಮಾಂಡ್ ಕಸಿದುಕೊಂಡು ಇಬ್ಬರು ನಾಯಕರಿಗೆ ಖಡಕ್ ಎಚ್ಚರಿಕೆ ಕೊಟ್ಟಿದೆ.

    ನಿನ್ನೆ ರಾತ್ರಿ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತುಕತೆ ನಡೆದಿತ್ತು.  ಕೊನೆಗೆ ಯಡಿಯೂರಪ್ಪ-ಈಶ್ವರಪ್ಪ ಕಿತ್ತಾಟ ಕಂಡು ಮುರಳೀಧರ್ ರಾವ್ ಖಡಕ್ ತೀರ್ಮಾನ ಕೈಗೊಂಡು ನಿಮಗಿಂತಾ ಬಿಜೆಪಿ ಹೈಕಮಾಂಡ್ ಸ್ಟ್ರಾಂಗ್ ಇದೆ. ಕೈಕಟ್ಟಿ ಕೂತಿಲ್ಲ ಅನ್ನೋ ಎಚ್ಚರಿಕೆ ಕೊಟ್ಟಿದ್ದಾರೆ.

    ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಭೇಟಿ ಬಳಿಕ ಅಲ್ಲಿಂದ ತೆರಳಿದ ಬಿ.ಎಸ್ ಯಡಿಯೂರಪ್ಪ ಸೀದಾ ಶಿವಮೊಗ್ಗಕ್ಕೆ ಹೋದ್ರು. ಇಂದು ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಯಡಿಯೂರಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ಅಂದಹಾಗೆ ಕಾಂಗ್ರೆಸ್‍ನಲ್ಲೂ ನಿನ್ನೆ ಮಹಾ ಬದಲಾವಣೆಯೇ ಆಗಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿದ್ದ ದಿಗ್ವಿಜಯ್ ಸಿಂಗ್‍ಗೆ ಕೊಕ್ ಕೊಟ್ಟು ಆ ಜಾಗಕ್ಕೆ ವೇಣುಗೋಪಾಲ್ ಅವ್ರನ್ನ ನೇಮಿಸಿದೆ.

  • ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಿಂದ ದಿಗ್ವಿಜಯ್ ಸಿಂಗ್‍ಗೆ ಕೊಕ್

    ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಿಂದ ದಿಗ್ವಿಜಯ್ ಸಿಂಗ್‍ಗೆ ಕೊಕ್

    – ಗೋವಾ ಖುರ್ಚಿಯಿಂದಲೂ ಕಿಕ್‍ಔಟ್
    – ಕರ್ನಾಟಕಕ್ಕೆ ಬಂದ್ರು ಕೆ.ಸಿ. ವೇಣುಗೋಪಾಲ್

    ನವದೆಹಲಿ: ರಾಜ್ಯ ಕಾಂಗ್ರೆಸ್‍ನಲ್ಲಿ ಎಲೆಕ್ಷನ್ ಹೊಸ್ತಿಲಲ್ಲೇ ದೊಡ್ಡ ಬದಲಾವಣೆ ಮಾಡಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸ್ಥಾನದಿಂದ ದಿಗ್ವಿಜಯ್ ಸಿಂಗ್‍ಗೆ ಕೊಕ್ ಕೊಡಲಾಗಿದೆ. ಗೋವಾ ಉಸ್ತುವಾರಿಯಿಂದಲೂ ಕೊಕ್ ನೀಡಲಾಗಿದೆ.

    ದಿಲ್ಲಿ ಮಟ್ಟದ ಕೆಲ ನಾಯಕರು ಹಾಗೂ ರಾಜ್ಯ ಮಟ್ಟದ ಕೆಲ ನಾಯಕರಿಂದಲೂ ದಿಗ್ವಿಜಯ್ ಉಸ್ತುವಾರಿಗೆ ವಿರೋಧ ಇತ್ತು. ಇದೇ ಕಾರಣದಿಂದ ಹೈಕಮಾಂಡ್, ದಿಗ್ವಿಜಯ್ ಸಿಂಗ್ ಅವರನ್ನು ಉಸ್ತುವಾರಿ ಸ್ಥಾನದಿಂದ ಕೆಳಗಿಳಿಸಿದೆ ಎನ್ನಲಾಗಿದೆ. ದಿಗ್ವಿಜಯ್ ಸಿಂಗ್ ಸ್ಥಾನಕ್ಕೆ ಕೇರಳ ಮೂಲದ ಹಾಲಿ ಸಂಸದ, 48 ವರ್ಷದ ಕೆ.ಸಿ. ವೇಣುಗೋಪಾಲ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

    ಇವರ ಜೊತೆ ಮಾಣಿಕಂ ಠಾಗೂರ್, ಪಿ.ಸಿ. ವಿಶ್ವನಾಥ್, ಮಧು ಯಕ್ಷಿಗೌಡ್, ಡಾ. ಸಾಯಿಲಿಂಗನಾಥ್ ಅವರನ್ನು ಕಾರ್ಯದರ್ಶಿಗಳನ್ನಾಗಿ ನೇಮಿಸಿದೆ. ಇನ್ನು ಗೋವಾ ಉಸ್ತುವಾರಿಯನ್ನಾಗಿ ಡಾ. ಚಲ್ಲಕುಮಾರ್ ಅವರನ್ನು ನೇಮಕ ಮಾಡಲಾಗಿದೆ.

    ಕೆಸಿ ವೇಣುಗೋಪಾಲ್ ಯಾರು?
    ಕಾಲೇಜು ದಿನಗಳಲ್ಲೇ ಎನ್‍ಎಸ್‍ಯುಐ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಟ್ಟ ವೇಣುಗೋಪಾಲ್ 1992 ರಿಂದ 8 ವರ್ಷ ಕೇರಳದ ಯೂಥ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಮಾಡಿರುವ ಇವರು 1996, 2001, ಹಾಗೂ 2006ರಲ್ಲಿ ಆಲ್ಲಪುಜ್ಜಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2004 – 2006 ಕೇರಳದ ಯುಡಿಎಫ್ ಸರ್ಕಾರದಲ್ಲಿ ಸಚಿವರಾಗಿದ್ದ ವೇಣುಗೋಪಾಲ್ 2009ರಲ್ಲಿ ಮೊದಲ ಬಾರಿ ಆಲ್ಲಪುಜ್ಜಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿದ್ದರು. ಯುಪಿಎ 2ನೇ ಅವಧಿಯಲ್ಲಿ ಕೇಂದ್ರದಲ್ಲಿ ರಾಜ್ಯಖಾತೆ ವಿಮಾನಯಾನ ಸಚಿವ 2014ರಲ್ಲಿ ಸಂಸದರಾಗಿ ಮರು ಆಯ್ಕೆ ಆಗಿದ್ದರು. ಸಚಿವರಾಗಿದ್ದ ವೇಳೆ ವಿಮಾನದಲ್ಲಿ ಟಿಕೆಟ್ ಹಗರಣವನ್ನು ಪತ್ತೆ ಮಾಡಿದ್ರು.

  • ಹಸುಗಳ ಆಧಾರ್ ಕಾರ್ಡ್ ವೆಚ್ಚವನ್ನು ಯಾರು ಭರಿಸ್ತಾರೆ? ಗುತ್ತಿಗೆ ಗೋ ರಕ್ಷಕರಿಗೆ ಸಿಗುತ್ತಾ: ದಿಗ್ವಿಜಯ್ ಪ್ರಶ್ನೆ

    ಹಸುಗಳ ಆಧಾರ್ ಕಾರ್ಡ್ ವೆಚ್ಚವನ್ನು ಯಾರು ಭರಿಸ್ತಾರೆ? ಗುತ್ತಿಗೆ ಗೋ ರಕ್ಷಕರಿಗೆ ಸಿಗುತ್ತಾ: ದಿಗ್ವಿಜಯ್ ಪ್ರಶ್ನೆ

    ನವದೆಹಲಿ: ಆಧಾರ್ ರೀತಿಯ ವಿಶಿಷ್ಟ ಗುರುತು ಸಂಖ್ಯೆಯನ್ನು ಹಸುಗಳಿಗೂ ನೀಡಲು ಹೊರಟಿರುವ ಕೇಂದ್ರದ ಪ್ರಸ್ತಾಪಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕಿಡಿ ಕಾರಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು ಆಧಾರ್ ವ್ಯವಸ್ಥೆ ಜಾರಿಗೆ ತಗಲುವ ವೆಚ್ಚವನ್ನು ಯಾರು ಭರಿಸುತ್ತಾರೆ ಎಂದು ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

    ಮೋದಿಜೀ ಏನಾಯ್ತು? ಈಗ ನೀವು ಹಸುಗಳಿಗೂ ಆಧಾರ್ ಕಾರ್ಡ್ ನೀಡುತ್ತೀರಾ. ಇದಕ್ಕೆ ಎಷ್ಟು ಖರ್ಚಾಗುತ್ತದೆ? ಇದರ ಗುತ್ತಿಗೆ ಗೋ ರಕ್ಷಕರಿಗೆ ಸಿಗುತ್ತಾ ಎಂದು ಪ್ರಶ್ನಿಸಿದ್ದಾರೆ. ಈ ಆಧಾರ್ ಬಂದ ನಂತರ ಮಾಂಸ ವ್ಯಾಪಾರ ಮಾಡುವ ಮುಸ್ಲಿಮ್ ಬಾಂಧವರಿಗೆ ಗೋ ರಕ್ಷಕರಿಂದ ರಕ್ಷಣೆ ಸಿಗುತ್ತದೆ ಎಂದು ಭರವಸೆ ನೀಡುತ್ತೀರಾ ಎಂದು ಕೇಳಿದ್ದಾರೆ.

    ಮೋದಿ ಭಕ್ತರೇ.. ಅಹಿಂಸಾತ್ಮಕವಾಗಿ ಗೋವುಗಳನ್ನು ರಕ್ಷಣೆ ಮಾಡುವುದನ್ನು ತಿಳಿದುಕೊಳ್ಳಿ. ದೇಶ ಒಡೆಯುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.

    ದೇಶಾದ್ಯಂತ ಇರುವ ಪ್ರತಿ ಹಸು ಮತ್ತು ಅದರ ಸಂತತಿಗೆ “ವಿಶಿಷ್ಟ ಗುರುತಿನ ಸಂಖ್ಯೆ’ಯನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ  ಸೋಮವಾರ ಸುಪ್ರೀಂಗೆ ಸಲ್ಲಿಸಿತ್ತು.

    ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯ ವರದಿಯನ್ನು ಕೋರ್ಟ್‍ಗೆ ಒಪ್ಪಿಸಿದ ಕೇಂದ್ರ, ಹಸುಗಳ ಕಳ್ಳಸಾಗಣೆ ತಡೆಯಲು ಪ್ರತಿ ಜಿಲ್ಲೆ ಯಲ್ಲೂ ಕನಿಷ್ಠ 500 ಹಸುಗಳ ವಾಸಕ್ಕೆ ಅಗತ್ಯ ವಿರುವ ಗೋಶಾಲೆ ನಿರ್ಮಿಸಿ, ಬಿಡಾಡಿ ದನಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಬಿಡಾಡಿ ದನಗಳನ್ನು ಪೋಷಿಸುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳದ್ದಾಗಿದೆ ಎಂದು ಹೇಳಿದೆ.