Tag: ದಾವರಣಗೆರೆ

  • 3 ಬಾರಿ ಸಿಎಂ ಆಗೋದು ತಪ್ಪಿದೆ, ಬೇಡ ಎಂದ್ರು ಡಿಸಿಎಂ ಮಾಡಿದ್ದಾರೆ: ಪರಮೇಶ್ವರ್ ಅಸಮಾಧಾನ

    3 ಬಾರಿ ಸಿಎಂ ಆಗೋದು ತಪ್ಪಿದೆ, ಬೇಡ ಎಂದ್ರು ಡಿಸಿಎಂ ಮಾಡಿದ್ದಾರೆ: ಪರಮೇಶ್ವರ್ ಅಸಮಾಧಾನ

    ದಾವರಣಗೆರೆ: ದಲಿತರು ಅನಾದಿ ಕಾಲದಿಂದ ತುಳಿತಕ್ಕೆ ಓಳಗಾಗಿದ್ದು, ರಾಜ್ಯ ರಾಜಕೀಯದಲ್ಲಿ ದಲಿತರನ್ನು ತುಳಿಯುವ ಕೆಲಸ ನಡೆಯುತ್ತಿದೆ. ಹಲವು ದಲಿತ ನಾಯಕರು ಸಿಎಂ ಆಗುದನ್ನ ತಪ್ಪಿಸಿದ್ದಾರೆ. ನನಗೂ 3 ಬಾರಿ ಸಿಎಂ ಆಗೋದು ತಪ್ಪಿದೆ, ಈಗ ಬೇಡ ಎಂದರೂ ಡಿಸಿಎಂ ಮಾಡಿದ್ದಾರೆ ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ.

    ಜಿಲ್ಲೆಯಲ್ಲಿ ಶಿವಯೋಗಿ ಮಂದಿರದ ಆವರಣದಲ್ಲಿ ನಡೆದ ಛಲವಾದಿ ಮಹಾಸಭಾದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್ ಅವರು, ದಲಿತರು ಅನಾದಿ ಕಾಲದಿಂದಲೂ ತುಳಿತಕ್ಕೆ ಓಳಗಾಗಿದ್ದಾರೆ. ರಾಜ್ಯ ರಾಜಕೀಯದಲ್ಲಿ ದಲಿತರನ್ನು ತುಳಿಯುವ ಕೆಲಸ ನಡೆಯುತ್ತಿದೆ. ದಲಿತರಿಗೆ ಮುಖ್ಯಮಂತ್ರಿ ಆಗುವ ಅವಕಾಶ ಅವಕಾಶ ಯಾರಿಗೂ ಬರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಾವು ಯಾವುದೇ ನಾಯಕರು ಕೂಡ ವರ್ಗಿಕರಣ ಮಾಡಿಲ್ಲ. ಆದರೆ ನಮ್ಮನ್ನು ತುಳಿಯುವ ಕಾರ್ಯ ಮುಂದುವರೆದಿದೆ. ಈ ಹಿಂದೆ ಬಸವಲಿಂಗಪ್ಪ ಅವರು, ಕೆಚ್ ರಂಗನಾಥ್ ಅವರಿಗೂ ಸಿಎಂ ಆಗುವ ಸ್ಥಾನ ತಪ್ಪಿಸಿದ್ದರು. ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಒಂದು ಹೆಜ್ಜೆ ಇಟ್ಟಿದ್ದಾರೆ ಸಿಎಂ ಆಗುತ್ತಿದ್ದರು. ನನಗೂ 3 ಬಾರಿ ಸಿಎಂ ಆಗುವ ಅವಕಾಶ ತಪ್ಪಿತ್ತು. ಈಗ ಬೇಡ ಎಂದರೂ ಡಿಸಿಎಂ ಮಾಡಿದ್ದಾರೆ. ಇನ್ನು ಎಷ್ಟು ಅಂತ ತುಳಿಸಿಕೊಳ್ಳಬೇಕು? ಆದ್ದರಿಂದಲೇ ನಾನು ಇಂದು ಸಮಾವೇಶದಲ್ಲಿ ಭಾಗವಹಿಸಿದ್ದು, ಅಂಬೇಡ್ಕರ್ ಹಾಕಿ ಕೊಟ್ಟ ಹಾದಿಯಲ್ಲಿ ನಾವು ನಡೆಯಬೇಕಿದೆ ಎಂದು ಸಮಾವೇಶದಲ್ಲಿ ಬೆಂಬಲಿಗರಿಗೆ ಕರೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

     

  • ಭ್ರಷ್ಟಾಚಾರ ಬಯಲು ಮಾಡಿದಕ್ಕೆ ಮಾರಣಾಂತಿಕ ಹಲ್ಲೆ!

    ಭ್ರಷ್ಟಾಚಾರ ಬಯಲು ಮಾಡಿದಕ್ಕೆ ಮಾರಣಾಂತಿಕ ಹಲ್ಲೆ!

    ದಾವಣಗೆರೆ: ಗ್ರಾಮ ಪಂಚಾಯ್ತಿಯಲ್ಲಿನ ಭ್ರಷ್ಟಾಚಾರ ಬಯಲಿಗೆಳೆದ ಹಿನ್ನೆಲೆ, ಭ್ರಷ್ಟಾಚಾರ ವಿರೋಧಿ ವೇದಿಕೆ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ.

    ಕುಂದೂರು ಗ್ರಾಮ ಪಂಚಾಯ್ತಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಬಯಲು ಮಾಡಿದಕ್ಕೆ ಹಲ್ಲೆ ಮಾಡಲಾಗಿದೆ. ಭ್ರಷ್ಟಾಚಾರ ವಿರೋಧಿ ವೇದಿಕೆ ಮುಖಂಡ ಪ್ರಸನ್ನ ಕುಮಾರ್ ಮೇಲೆ ಪಂಚಾಯ್ತಿಯ ಕೆಲ ಸದಸ್ಯರು ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಪ್ರಸನ್ನ ಅವರನ್ನು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪ್ರಸನ್ನ ಕುಮಾರ್ ಅವರು ಕುಂದೂರು ಗ್ರಾಮ ಪಂಚಾಯ್ತಿಯಲ್ಲಿ ನಡೆಯುತ್ತಿದ್ದ ಲಕ್ಷಾಂತರ ರೂಪಾಯಿ ಹಗರಣ ಬಯಲಿಗೆಳೆದಿದ್ದರು. ಅಲ್ಲದೆ ಭ್ರಷ್ಟಾಚಾರ ಬಯಲಿಗೆಳೆದು ಗ್ರಾಮ ಪಂಚಾಯತಿ ಉಪಾಧ್ಯಕ್ಷನ ಸ್ಥಾನವನ್ನು ವಜಾಗೊಳಿಸಿದ್ದರು. ಇದರಿಂದಾಗಿ ಪ್ರಸನ್ನ ಅವರ ಮೇಲೇ ಪಂಚಾಯ್ತಿಯ ಕೆಲ ಸದಸ್ಯರಿಗೆ ದ್ವೇಷ ಹುಟ್ಟಿಕೊಂಡಿತ್ತು. ಆದರಿಂದ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಜಮ್ಮ ಹಾಗೂ ಅವರ ಪತಿ, ಮಾಜಿ ಅಧ್ಯಕ್ಷೆ ಗೌರಮ್ಮ ಹಾಗೂ ಅವರ ಮಗ ಮತ್ತು ಕೊಮ್ರಿ ಮಂಜುನಾಥ ಹಾಗೂ ಆಂಜನೇಯ ಎಂಬವರು ಪ್ರಸನ್ನ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಘಟನೆ ಕುರಿತು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪೈನಾನ್ಸ್ ಕಂಪನಿಯ ಮಹಾ ಮೋಸ ಬಯಲು – ಗ್ರಾಹಕರ ವೇದಿಕೆಗೆ ದೂರು

    ಪೈನಾನ್ಸ್ ಕಂಪನಿಯ ಮಹಾ ಮೋಸ ಬಯಲು – ಗ್ರಾಹಕರ ವೇದಿಕೆಗೆ ದೂರು

    ದಾವಣಗೆರೆ: ಫೈನಾನ್ಸ್ ಕಂಪೆನಿಯಲ್ಲಿ ಕೊಂಡುಕೊಳ್ಳದ ವಸ್ತುಗಳಿಗೆ ಇಎಂಐ ಕಟ್ ಮಾಡ್ತಾ ಗ್ರಾಹಕರಿಗೆ ಮೋಸ ಮಾಡಿದ ಘಟನೆ ದಾವಣಗೆರೆಯ ಹರಿಹರದಲ್ಲಿ ನಡೆದಿದೆ.

    ನಗರದ ಬಜಾಜ್ ಫೈನಾನ್ಸ್‍ನಿಂದ ಕೆಲ ತಿಂಗಳ ಹಿಂದೆ ಜೈರಾಂ ಗೌಡ, ಸಂತೋಷ್ ಹಾಗೂ ವೀರೇಶ್ ಅನ್ನೋರು ಇಎಂಐ ಮೂಲಕ ಪ್ರಿಡ್ಜ್, ಟಿವಿಗಳನ್ನು ಖರೀದಿಸಿದ್ದರು. ಪ್ರತಿ ತಿಂಗಳು ಇಎಂಐ ಕಟ್ಟಿ ಎನ್‍ಒಸಿಯನ್ನು ಪಡೆದುಕೊಂಡರು. ಆದರೆ ಇದೀಗ ಅವರ ಹೆಸರಿನಲ್ಲಿ 90 ಸಾವಿರ ರೂ. ಸಾಲವಿದೆ ಅಂತ ಪ್ರತಿ ತಿಂಗಳು ಖಾತೆಯಿಂದ ಹಣ ಕಡಿತವಾಗುತ್ತಿದೆ.

    ಈ ಬಗ್ಗೆ ಬಜಾಜ್ ಫೈನಾನ್ಸ್‍ನ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಕಂಪನಿಯಿಂದ ನೋಟಿಸ್ ಕೂಡ ಬಂದಿದೆ. ಇದರಿಂದ ಬೇಸತ್ತ ಗ್ರಾಹಕರು ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದು, ಫೈನಾನ್ಸ್ ಕಂಪನಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.