Tag: ದಾವಣಗೆರೆ

  • ರಾಜ್ಯಾದ್ಯಂತ `ರಾಜಕುಮಾರ’ನ ಹವಾ- ದಾವಣಗೆರೆಯಲ್ಲಿ ಅಪ್ಪು ಅಭಿಮಾನಿಗಳಿಗೆ ಲಾಠಿಚಾರ್ಜ್

    ರಾಜ್ಯಾದ್ಯಂತ `ರಾಜಕುಮಾರ’ನ ಹವಾ- ದಾವಣಗೆರೆಯಲ್ಲಿ ಅಪ್ಪು ಅಭಿಮಾನಿಗಳಿಗೆ ಲಾಠಿಚಾರ್ಜ್

    – ಮಧ್ಯರಾತ್ರಿಯಿಂದಲೇ ಭಾರೀ ಸಡಗರ

    ಬೆಂಗಳೂರು: ರಾಜ್ಯಾದ್ಯಂತ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅಭಿನಯದ `ರಾಜಕುಮಾರ’ ಸಿನಿಮಾದ ಹವಾ ಜೋರಾಗಿದೆ. ದಾವಣಗೆರೆ, ಬಳ್ಳಾರಿ ಶೀವಮೊಗ್ಗ ಸೇರಿದಂತೆ ಹಲವೆಡೆ ಮಧ್ಯರಾತ್ರಿಯೇ ಪ್ರದರ್ಶನ ಕಂಡಿದೆ. ದಾವಣಗೆರೆಯಲ್ಲಂತೂ ರಾಜಕುಮಾರನನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದಿದ್ರು. ಗೀತಾಂಜಲಿ ಹಾಗೂ ಪುಷ್ಪಾಂಜಲಿ ಚಿತ್ರಮಂದಿರಗಳ ಬಳಿ ನೂರಾರು ಅಭಿಮಾನಿಗಳು ರಾತ್ರಿ 9 ಗಂಟೆಯಿಂದಲೇ ಟಿಕೆಟ್‍ಗಾಗಿ ಕ್ಯೂ ನಿಂತಿದ್ದರು. ಆದ್ರೆ, ಟಿಕೆಟ್ ಹಂಚಿಕೆ ತಡವಾದ ಕಾರಣ ಅಭಿಮಾನಿಗಳು ಟಿಕೆಟ್ ಕೌಂಟರ್‍ಗೆ ನುಗ್ಗಿ ದಾಂಧಲೆ ನಡೆಸಲು ಯತ್ನಿಸಿದ್ರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ರು.

    ಕೊಪ್ಪಳದಲ್ಲಿ ಕೂಡ ಕಲ್ಲು ತೂರಾಟ ನಡೆದಿದೆ. ಗಂಗಾವತಿಯ ಪ್ರಶಾಂತ ಚಿತ್ರಮಂದಿರದಲ್ಲಿ ರಾತ್ರಿ 1 ಗಂಟೆಗೆ ಆರಂಭವಾಗಬೇಕಿದ್ದ ರಾಜಕುಮಾರ ಸಿನಿಮಾ ಶೋ ಬೆಳಗಿನ ಜಾವ 4ಕ್ಕೆ ಆರಂಭವಾಯ್ತು. ಇದ್ರಿಂದ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರಮಂದಿರದ ಮೇಲೆ ಕಲ್ಲುತೂರಾಟ ಮಾಡಿದ್ದಾರೆ. ಘಟನೆಯ ಚಿತ್ರ ಥಿಯೇಟರ್‍ನ ಗಾಜು ಪುಡಿಪುಡಿಯಾಗಿವೆ. ಇನ್ನು ಚಿತ್ರ ಮಂದಿರದ ಎದುರು ಅಭಿಮಾನಿಗಳು ಅಪ್ಪುಗೆ ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸಿದರು.

    ಬಳ್ಳಾರಿಯಲ್ಲಿ ಸಿನಿಮಾಗಳು ನಸುಕಿನ ಜಾವ ತರೆಕಾಣೋದು ಮಾಮೂಲು. ಆದ್ರೆ ಪುನೀತ್ ಅಭಿಮಾನಿಗಳ ಅಬ್ಬರಕ್ಕೆ ಮಣಿದ ಶಿವ ಮತ್ತು ಗಂಗಾ ಚಿತ್ರಮಂದಿರದ ಮಾಲೀಕರು ಮಧ್ಯರಾತ್ರಿ 12ಕ್ಕೆ ಚಿತ್ರ ಪ್ರದರ್ಶನ ಮಾಡಿದ್ರು. ಸಿನಿಮಾ ನೋಡಲು ಪುನೀತ್ ಅಭಿಮಾನಿಗಳು ಮುಗಿಬಿದ್ದಿದ್ರು. ಟಿಕೇಟ್‍ಗೆ ನೂಕುನುಗ್ಗಲು ಏರ್ಪಟ್ಟಿತ್ತು. ಚಿತ್ರಮಂದಿರದ ಎದುರು ಅಪ್ಪು ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು. ಒಟ್ಟಿನಲ್ಲಿ ರಾಜಕುಮಾರ್ ಚಿತ್ರದ ಬಗ್ಗೆ ಬಳ್ಳಾರಿಯಲ್ಲಿ ಪಾಸೀಟವ್ ರೆಸ್ಪಾನ್ಸ್ ಕಂಡು ಬಂತು.

    ತುಮಕೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಕೆಲವೆಡೆ ಗುರುವಾರ ರಾತ್ರಿನೇ `ರಾಜಕುಮಾರ’ನ ಮೊದಲ ಪ್ರದರ್ಶನ ನಡೆದಿದೆ. ಎರಡೂ ಕಡೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು.

    ಬೆಂಗಳೂರಿನ ನರ್ತಕಿ ಚಿತ್ರಮಂದಿರಲ್ಲಿ ತಡ ರಾತ್ರಿ ಹಬ್ಬದ ವಾತವಾರಣ ನಿರ್ಮಾಣವಾಗಿತ್ತು. ಇಂದು ಸಿನಿಮಾ ನೋಡೋಕೆ ಬರೋ ವಿಕ್ಷಕರಿಗೆ ಅಖಿಲ ಕರ್ನಾಟಕ ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಮಂದಿ ಹಬ್ಬದ ಸಿಹಿ ಊಟ ಹಾಗು ಯುಗಾದಿಯ ಹೊಳಿಗೆ ಮತ್ತು ಬೇವು ಬೆಲ್ಲವನ್ನ ಹಂಚಲಿದ್ದಾರೆ. ರಾತ್ರಿಯೇ 20 ಅಡುಗೆ ಭಟ್ಟರನ್ನ ಕರೆಸಿ ಚಿತ್ರಮಂದಿರದ ಎದುರೇ 8 ಸಾವಿರ ಹೊಳಿಗೆಯನ್ನ ಮಾಡಿಸಿದ್ದಾರೆ.

    ಇದನ್ನೂ ಓದಿ : `ರಾಜಕುಮಾರ’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

    ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಅಪ್ಪು ಡ್ಯಾನ್ಸ್ ವಿಡಿಯೋ

  • ನೀರಿಲ್ಲದ್ದಕ್ಕೆ ದಾವಣಗೆರೆ ಆಸ್ಪತ್ರೆಯಲ್ಲಿ ಆಪರೇಷನ್ ಇಲ್ಲ!

    ನೀರಿಲ್ಲದ್ದಕ್ಕೆ ದಾವಣಗೆರೆ ಆಸ್ಪತ್ರೆಯಲ್ಲಿ ಆಪರೇಷನ್ ಇಲ್ಲ!

    ದಾವಣಗೆರೆ: ಇತ್ತೀಚಿನ ದಿನನಗಳಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ ಎಂದು ಆರೋಪಗಳು ಕೇಳಿ ಬರುತ್ತಿದ್ದರೆ, ದಾವಣಗೆರೆಯ ಇಎಸ್‍ಐ ಆಸ್ಪತ್ರೆಯಲ್ಲಿ ನೀರಿನ ಕೊರತೆಯಿಂದಾಗಿ ವೈದ್ಯಾಧಿಕಾರಿಗಳು ಆಪರೇಷನ್ ಮಾಡೋದನ್ನೇ ಮುಂದೂಡುತ್ತಿದ್ದಾರೆ.

    ಹೌದು. ಕಳೆದ 15 ದಿನಗಳಿಂದ ನಗರದ ಇಎಸ್‍ಐ ಆಸ್ಪತ್ರೆಗೆ ನೀರಿನ ಸಮಸ್ಯೆಯಾಗಿದೆ. ಆಸ್ಪತ್ರೆಯಲ್ಲಿ ನೀರು ಸಿಗದೇ ರೋಗಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ವಾರದಿಂದಲೂ ಯಾರೊಬ್ಬರಿಗೂ ಅಪರೇಷನ್ ಮಾಡದ ಕಾರಣ ರೋಗಿಗಳಿಗೆ ನರಕಯಾತನೆ ಪಡುತ್ತಿದ್ದಾರೆ. ವೈದ್ಯರ ಬಳಿ ಅಪರೇಷನ್ ಮಾಡಿ ಅಂತ ಕೇಳಿದ್ರೆ ನಾಳೆ, ನಾಡಿದ್ದು ಎಂದು ದಿನ ದೂಡುತ್ತ ಬಂದಿದ್ದಾರೆ. ಇದರಿಂದ ಕೆಲ ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ಈ ಸಮಸ್ಯೆಗೆ ಪರಿಹಾರವಿಲ್ಲವೇ ಎಂದು ಪಬ್ಲಿಕ್ ಟಿವಿ ಇಎಸ್‍ಐ ಆಸ್ಪತ್ರೆಯ ಸೂಪರಿಡೆಂಟ್ ಪ್ರಕಾಶ್ ಅವರನ್ನು ಪ್ರಶ್ನಿಸಿದ್ದಕ್ಕೆ, ನಾವು ಏನು ಮಾಡಲು ಸಾಧ್ಯ? ಈ ಬಗ್ಗೆ ಪಾಲಿಕೆ ಮೇಯರ್ ಅವರಿಗೆ ಕೇಳಿದ್ರೆ ಎರಡು ಟ್ಯಾಂಕರ್ ಮಾತ್ರ ಉಚಿತ ನೀಡುತ್ತೇವೆ. ನಂತರ ಪ್ರತಿ ಟ್ಯಾಂಕರ್ ಗೆ 675 ರೂಪಾಯಿ ಪಾವತಿ ಮಾಡಿ ನೀರು ಬಿಡಿಸಿಕೊಳ್ಳಿ ಎಂದು ತಿಳಿಸುತ್ತಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ನೀರು ಸಿಗುತ್ತಿಲ್ಲ. ಅಲ್ಲದೆ ನಮ್ಮ ಆಸ್ಪತ್ರೆಯಲ್ಲಿ ಇದ್ದ ಕೊಳವೆ ಬಾವಿ ಬತ್ತಿ ಹೋಗಿದ್ದರಿಂದ ನೀರು ಸಿಗದೇ ಅನಿವಾರ್ಯವಾಗಿ ನಾವು ಕೆಲಸ ಮಾಡುವುದನ್ನ ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

    ದಾವಣಗೆರೆ ಜಿಲ್ಲೆಯ ಕೃಷಿಕರಿಗೆ ಇಲ್ಲಿಯವರೆಗೆ ನೀರಿನ ಸಮಸ್ಯೆಯಾಗಿತ್ತು. ಆದರೆ ಈಗ ನೀರಿನ ಎಫೆಕ್ಟ್ ಆಸ್ಪತ್ರೆಯ ಮೇಲೆ ದುಷ್ಪರಿಣಾಮ ಬೀರಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು, ಶಾಸಕರು ಈ ಸಮಸ್ಯೆಯನ್ನು ಬಗೆಹರಿಸಬೇಕಿದೆ.

     

  • ದಾವಣಗೆರೆಯ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಿದ ಪವರ್ ಸ್ಟಾರ್!

    ದಾವಣಗೆರೆಯ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಿದ ಪವರ್ ಸ್ಟಾರ್!

    ಬೆಂಗಳೂರು: ದಾವಣಗೆರೆಯ ಪುಟ್ಟ ಅಭಿಮಾನಿಯನ್ನು ಆಸೆಯನ್ನು ಪುನೀತ್ ರಾಜ್‍ಕುಮಾರ್ ಕಂಠೀರವ ಸ್ಟುಡಿಯೋದಲ್ಲಿ ಈಡೇರಿಸಿದ್ದಾರೆ.

    ಮಾರ್ಚ್ 17ರಂದು ನಟ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬವಿತ್ತು. ಈ ವೇಳೆ ತನ್ನ ಎರಡೂ ಕಿಡ್ನಿಗಳನ್ನು ಕಳೆದುಕೊಂಡಿರೋ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಳಸಾಲ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟ ಬಾಲಕಿ ಪ್ರೀತಿ ನೆಚ್ಚಿನ ನಾಯಕನನ್ನು ನೋಡಬೇಕೆಂಬ ಹಂಬಲ ವ್ಯಕ್ತಪಡಿಸಿದ್ದಳು.

    ಈ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡುವುದರ ಜೊತೆ ಪುನೀತ್ ರಾಜ್‍ಕುಮಾರಿಗೂ ಈ ವಿಷಯವನ್ನ ಮುಟ್ಟಿಸಿತ್ತು. ಈ ವಿಚಾರಕ್ಕೆ ಸ್ಪಂದಿಸಿದ ಪುನೀತ್ ಇಂದು ಪ್ರೀತಿ ಕುಟುಂಬವನ್ನ ಭೇಟಿ ಮಾಡಿದ್ದಾರೆ. ಕಂಠೀರವ ಸ್ಟುಡಿಯೋಗೆ ಕರೆಸಿ ಪ್ರೀತಿ ಜೊತೆ ಮಾತನಾಡಿದ್ದಾರೆ.

    ಖುಷಿಯಾಯ್ತು: ಹುಷಾರಾಗು, ಚೆನ್ನಾಗಿ ಓದು, ಕಿಡ್ನಿ ಬಗ್ಗೆ ಯೋಚನೆ ಮಾಡ್ಬೇಡ. ಹುಷಾರಾಗೋವಂಗೆ ಮಾಡ್ತೀನಿ ಅಂತಾ ಹೇಳಿದ್ರು. ಅವರನ್ನೂ ಬೇಟಿ ಮಾಡಿ ತುಂಬಾ ಖುಷಿಯಾಯ್ತು. ಅವರನ್ನು ಭೇಟಿ ಮಾಡಿ ಮಾತಾನಾಡಿಸ್ಬೇಕು ಅಂತಾ ತುಂಬಾ ದಿನಗಳಿಂದ ಆಸೆ ಇತ್ತು. ಈ ಆಸೆ ಇತ್ತು ನೆರವೇರಿತು. ಚಾಕಲೇಟ್ ಕೊಟ್ರು. ಭಯಪಡಬೇಡ ನಾವಿದ್ದೀವಿ ಎಂದು ಪುನಿಥ್ ರಾಜ್ ಕುಮಾರ್ ಹೇಳಿರೋದಾಗಿ ಬಾಲಕಿ ತಿಳಿಸಿದ್ದಾಳೆ.

    ಇದನ್ನೂ ಓದಿ: ಪವರ್ ಸ್ಟಾರ್ ಪುನೀತ್‍ಗೆ 42ನೇ ಹುಟ್ಟುಹಬ್ಬದ ಸಂಭ್ರಮ

    ಪುನೀತ್‍ರನ್ನು ನೋಡ್ಬೇಕು: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಳಸಾಲ ಬಡಾವಣೆಯಲ್ಲಿ ವಾಸವಾಗಿರುವ ಪುಟ್ಟ ಬಾಲಕಿ ಪ್ರೀತಿಗೆ ಎರಡು ಕಿಡ್ನಿ ಫೇಲ್ಯೂರ್ ಆಗಿದ್ದು, ಅಪ್ಪನ ಇಸ್ತ್ರಿ ವೃತ್ತಿಯೇ ಬದುಕಿಗೆ ಆಧಾರ. ಚಿಕಿತ್ಸೆ ಸಿಗದಿದ್ರೆ ಪ್ರೀತಿ ಹೆಚ್ಚು ದಿನ ಬದುಕೋದಿಲ್ಲ ಎಂಬಂತಾಗಿದೆ. ಒಮ್ಮೆ ತನ್ನ ನೆಚ್ಚಿನ ಹೀರೋ ಪುನೀತ್‍ರನ್ನ ನೋಡ್ಬೇಕು, ಅವರೊಂದಿಗೆ ಮಾತಾಡ್ಬೇಕು, ಕೈ ಕುಲುಕಿ ಥ್ಯಾಂಕ್ಸ್ ಹೇಳ್ಬೇಕು ಅನ್ನೋದು ಈ ಬಾಲಕಿ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಹೇಳಿದ್ದಳು.

    https://www.youtube.com/watch?v=9jGgNRqUVP4

     

  • ದಾವಣಗೆರೆ: ಹಳೇ ನೋಟು ಬದಲಾವಣೆ ಕಾರ್ಯದಲ್ಲಿ ತೊಡಗಿದ್ದ ಮೂವರ ಬಂಧನ

    ದಾವಣಗೆರೆ: ಹಳೇ ನೋಟು ಬದಲಾವಣೆ ಕಾರ್ಯದಲ್ಲಿ ತೊಡಗಿದ್ದ ಮೂವರ ಬಂಧನ

    ದಾವಣಗೆರೆ: ಹಳೆಯ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಬದಲಾವಣೆಯಲ್ಲಿ ತೊಡಗಿದ್ದ ಮೂವರನ್ನು ಜಿಲ್ಲೆಯ ಹರಿಹರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ.

    ಮೂಲತಃ ಹಾಸನದ ಸುನೀಲ್ ಕುಮಾರ್, ಚನ್ನಪಟ್ಟಣದ ಪ್ರದೀಪ್, ಶಿರಾ ತಾಲೂಕಿನ ಲಕ್ಷ್ಮೀಕಾಂತ್ ಬಂಧಿತರಾಗಿದ್ದಾರೆ. ಈ ಮೂವರು ನಗರದಲ್ಲಿ ಅಕ್ರಮವಾಗಿ ಹಣ ಬದಲಾವಣೆ ಮಾಡಲು ಪ್ರಯತ್ನಿಸುತ್ತಿದ್ದರು. ಇದೇ ಮೂವರು ಎರಡು ದಿನಗಳ ಹಿಂದೆ ದಾವಣಗೆರೆಯ ಲಾಡ್ಜ್‍ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.

    ದಾವಣಗರೆರಯಿಂದ ಹರಿಹರಕ್ಕೆ ಹೋಗುವ ಮಾರ್ಗದಲ್ಲಿ ಚೆಕ್‍ಪೋಸ್ಟ್ ಬಳಿ ಪೊಲೀಸರು ವಾಹನ ಪರಿಶೀಲಿಸುವಾಗ ಹಳೇ ನೋಟು ಪತ್ತೆಯಾಗಿದೆ. ಬಂಧಿತರಿಂದ 500 ಮುಖಬೆಲೆಯ 50 ಸಾವಿರ ರೂಪಾಯಿ ಹಾಗೂ 1000 ಮುಖಬೆಲೆಯ 20.5 ಲಕ್ಷ ರೂ. ಹಣವನ್ನು ಪೊಲೀಸರು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

     

  • ಆಸ್ತಿ ಪತ್ರಕ್ಕೆ ಸಹಿ ಹಾಕದ್ದಕ್ಕೆ ತಮ್ಮನಿಂದ ಅಕ್ಕನ ಕೊಲೆ

    ಆಸ್ತಿ ಪತ್ರಕ್ಕೆ ಸಹಿ ಹಾಕದ್ದಕ್ಕೆ ತಮ್ಮನಿಂದ ಅಕ್ಕನ ಕೊಲೆ

    ದಾವಣಗೆರೆ: ಆಸ್ತಿ ವಿಚಾರವಾಗಿ ತಮ್ಮನೇ ತನ್ನ ಸ್ವಂತ ಅಕ್ಕನನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಬೊಮ್ಮನಹಳ್ಳಿ ತಾಂಡಾದಲ್ಲಿ ನಡೆದಿದೆ.

    ಶಾಂತಾಬಾಯಿ (50) ಸಹೋದರನಿಂದ ಕೊಲೆಯಾದ ದುರ್ದೈವಿ. ಗಣೇಶ್ ನಾಯಕ್ ಎಂಬಾತನೇ ತನ್ನ ಅಕ್ಕಳಾದ ಶಾಂತಾಬಾಯಿ ಎಂಬವರನ್ನು ಎರಡು ಎಕರೆ ಜಮೀನು ವಿಚಾರವಾಗಿ ಕೊಲೆ ಮಾಡಿದ್ದಾನೆ.

    ಏನಿದು ಪ್ರಕರಣ?: ಗಣೇಶ್ ಮೂರು ದಿನಗಳ ಹಿಂದೆ ಅದೇ ಗ್ರಾಮದಲ್ಲಿರುವ ತನ್ನ ಅಕ್ಕ ಶಾಂತಾಬಾಯಿ ಅವರ ಮನೆಗೆ ಕುಡಿದು ಹೋಗಿದ್ದಾನೆ. ತಾನು ತಂದೆಯಿಂದ ಬಂದ ಎರಡು ಎಕರೆ ಜಮೀನು ಮಾರುತ್ತಿದ್ದು, ಕಾಗದಕ್ಕೆ ಸಹಿ ಹಾಕುವಂತೆ ಪೀಡಿಸಿದ್ದಾನೆ. ಆದರೆ ಶಾಂತಾಬಾಯಿ ನಿನ್ನ ಹೆಂಡತಿ ಬಂದು ಹೇಳಿದರೆ ಮಾತ್ರ ಸಹಿ ಹಾಕುವುದಾಗಿ ತಿಳಿಸಿದ್ದಾರೆ. ಇದರಿಂದ ಕುಪಿತನಾದ ಗಣೇಶ್ ಕಬ್ಬಿಣದ ರಾಡ್‍ನಿಂದ ಅಕ್ಕನ ತಲೆಗೆ ಹೊಡೆದಿದ್ದಾನೆ.

    ತಲೆಗೆ ಗಂಭೀರವಾಗಿ ಗಾಯಗೊಂಡ ಶಾಂತಾಬಾಯಿರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಶಾಂತಾಬಾಯಿ ಮೃತಪಟ್ಟಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಗಣೇಶ್ ನಾಯಕ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ದಾವಣಗೆರೆ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ಜಾತ್ರೆ – ಸಾವಿರಾರು ಭಕ್ತರು ಭಾಗಿ

    ದಾವಣಗೆರೆ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ಜಾತ್ರೆ – ಸಾವಿರಾರು ಭಕ್ತರು ಭಾಗಿ

    ದಾವಣಗೆರೆ: ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಅಜ್ಜಯ್ಯನ ಸುಕ್ಷೇತ್ರದಲ್ಲಿ ವಿಶಿಷ್ಟ ಜಾತ್ರೆ ನಡೆಯುತ್ತಿದೆ. ಮಾನಸಿಕ ಕಾಯಿಲೆಯಿಂದ ಹಿಡಿದು ಎಲ್ಲಾ ರೋಗಗಳನ್ನು ವಾಸಿ ಮಾಡುವ ಶಕ್ತಿ ಈ ಕ್ಷೇತ್ರಕ್ಕಿದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.

    ಪ್ರತಿ ಅಮಾವಾಸ್ಯೆಯಲ್ಲಿ ಈ ಕ್ಷೇತ್ರದಲ್ಲಿ ವಿಶಿಷ್ಟವಾದ ಪೂಜೆ ನಡೆಯುತ್ತವೆ. ಅದರಲ್ಲೂ ವರ್ಷದ ಶಿವರಾತ್ರಿ ಅಮಾವಾಸ್ಯೆ ನಂತರ ನಡೆಯುವ ಅಜ್ಜಯ್ಯನ ರಥೋತ್ಸವದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ನೆರೆದು ಜಾತ್ರೆಯನ್ನು ವಿಜೃಂಭಣೆಯಿಂದ ನೆರವೇರಿಸುತ್ತಾರೆ. ಬೆಳ್ಳಗ್ಗೆಯಿಂದಲೂ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಗೆ ವಿಶೇಷವಾದ ಪೂಜೆ ಪುನಸ್ಕಾರ ನಡೆಯುತ್ತವೆ. ಮೊದಲಿಗೆ ಅಜ್ಜಯ್ಯನ ಗದ್ದುಗೆ ಪೂಜೆ ನಡೆಸಿ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಾರೆ.

     

    ಅಜ್ಜಯ್ಯನ ಪವಾಡವನ್ನು ನಂಬಿ ಲಕ್ಷಾಂತರ ಮಂದಿ ಭಕ್ತ ಸಂಕುಲವೇ ಇಲ್ಲಿ ನೆರೆಯುತ್ತದೆ. ಶಿವರಾತ್ರಿ ಬಳಿಕ ಅಮವಾಸ್ಯೆಯಂದು ನಡೆಯುವ ಜಾತ್ರೆಯಲ್ಲಿ ಕ್ಷುದ್ರ ಶಕ್ತಿಗಳಿಂದ ತೊಂದರೆ ಅನುಭವಿಸುತ್ತಿರುವ ಭಕ್ತರನ್ನು ಪಾರು ಮಾಡುವ ಶಕ್ತಿ ಶ್ರೀ ಗುರು ಕರಿಬಸವೇಶ್ವರ ಸ್ವಾಮಿಗೆ ಇದೆ ಎನ್ನುವುದು ಇಲ್ಲಿನ ಭಕ್ತರ ನಂಬಿಕೆ.

    ಹೀಗಾಗಿ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಕಷ್ಟಗಳನ್ನು ಅಜ್ಜಯ್ಯನ ಮುಂದಿಟ್ಟು ಬೇಡಿಕೊಳ್ಳುತ್ತಾರೆ. ಶ್ರೀ ಕ್ಷೇತ್ರಗಳಲ್ಲಿ ಒಂದಾದ ಉಕ್ಕಡಗಾತ್ರಿಯಲ್ಲಿ ರಥೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ನಂಬಿದ ಭಕ್ತರಿಗೆ ಕ್ಷೇಮವನ್ನಾಚಿಸುವ ಶ್ರೀ ಕರಿಬಸವೇಶ್ವರನ ದರ್ಶನ ಪಡೆದು ಭಕ್ತಾದಿಗಳು ಪುನೀತರಾಗುತ್ತಾರೆ.

     

     

  • ಡೈರಿ ಬಾಂಬ್ ಪ್ರತೀಕಾರಕ್ಕೆ ಕಾಂಗ್ರೆಸ್ ಸಜ್ಜು- 2 ದಿನದಲ್ಲಿ ಬಿಜೆಪಿ ಬಂಡವಾಳ ಬಯಲು ಮಾಡ್ತೀವಿ ಎಂದ ಕೈ ನಾಯಕರು

    ಡೈರಿ ಬಾಂಬ್ ಪ್ರತೀಕಾರಕ್ಕೆ ಕಾಂಗ್ರೆಸ್ ಸಜ್ಜು- 2 ದಿನದಲ್ಲಿ ಬಿಜೆಪಿ ಬಂಡವಾಳ ಬಯಲು ಮಾಡ್ತೀವಿ ಎಂದ ಕೈ ನಾಯಕರು

    ದಾವಣಗೆರೆ/ಬೆಂಗಳೂರು: ತಮ್ಮ ಮೇಲಿನ ಡೈರಿ ಬಾಂಬ್ ಪ್ರತೀಕಾರಕ್ಕೆ ಕಾಂಗ್ರೆಸ್ ಸಜ್ಜಾಗಿದೆ. ಇನ್ನೆರಡು ದಿನದಲ್ಲಿ ಬಿಜೆಪಿ ಹಾಗೂ ಯಡಿಯೂರಪ್ಪ ಬಂಡವಾಳ ಬಯಲಾಗುತ್ತೆ ಅಂತಾ ದಾವಣಗೆರೆಯಲ್ಲಿ ವಿಎಸ್ ಉಗ್ರಪ್ಪ ಬಾಂಬ್ ಹಾಕಿದ್ದಾರೆ. ಇನ್ನು ಹೆಚ್‍ಎಂ ರೇವಣ್ಣ ಕೂಡಾ ಬಿಜೆಪಿ ವಿರುದ್ಧ ಡೈರಿ ಬಾಂಬ್ ಸಿಡಿಸೋದಾಗಿ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತರ ಮೂಲಕ ಬಿಜೆಪಿ ಮೇಲೆ ಡೈರಿ ಬಾಂಬ್ ಹಾಕಲು ತಯಾರಿ ನಡೆಸಿದ್ದಾರೆ.

    ಮುಂದಿನ ಎರಡು-ಮೂರು ದಿನಗಳಲ್ಲಿ ಬಿಜೆಪಿಯ ಕರ್ಮಕಾಂಡ ಬಯಲು ಮಾಡುತ್ತೇವೆ. ನಮ್ಮ ಬಳಿಯೂ ಡೈರಿಗಳಿವೆ, ಅವುಗಳನ್ನು ಶೀಘ್ರವೇ ಬಿಡುಗಡೆ ಮಾಡುತ್ತೆವೆ ಎಂದು ಸಿಎಂ ಆಪ್ತ, ಎಂಎಲ್‍ಸಿ ಹೆಚ್.ಎಂ. ರೇವಣ್ಣ ಹೇಳಿದ್ದಾರೆ.

    ನೆಲಮಂಗಲದ ಬೀರೇಶ್ವರ ಜಾತ್ರೆಯಲ್ಲಿ ಪಾಲ್ಗೊಂಡು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ರೇವಣ್ಣ, ಐಟಿ ಇಲಾಖೆ ಹಾಗೂ ಒಬ್ಬ ವ್ಯಕ್ತಿಯ ನಡುವಿನ ವಿಷಯ ಹೊರಹಾಕಲು ಬಿಜೆಪಿ ಕುತಂತ್ರ ಮಾಡಿದೆ. ಬಿಜೆಪಿಯವರು ಇಲಾಖೆಯನ್ನ ದುರುಪಯೋಗಪಡಿಸಿಕೊಂಡಿರುವುದು ಈ ಡೈರಿ ಬಿಡುಗಡೆ ವಿಚಾರದಲ್ಲಿ ಸಾಬೀತಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮಸಿ ಬಳಿಯುವ ನಿಟ್ಟಿನಲ್ಲಿ ಯಡಿಯೂರಪ್ಪ ಹಾಗೂ ಬಿಜೆಪಿ ಹುಟ್ಟುಹಾಕಿರುವ ಕಟ್ಟುಕಥೆಯ ಕುತಂತ್ರ ಎಂದು ರೇವಣ್ಣ ಯಡಿಯೂರಪ್ಪ ವಿರುದ್ಧ ಹರಿಹಾಯ್ದರು.

    ದಾವಣಗೆರೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಕೂಡ ಇದೇ ರೀತಿ ಬಾಂಬ್ ಸಿಡಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಬಿಜೆಪಿಯವರ ಹಾಗೂ ಯಡಿಯೂರಪ್ಪ ನವರ ಬಂಡವಾಳ ಬಯಲಾಗಲಿದೆ. ಬಿಜೆಪಿಯವರು ಹೈಕಮಾಂಡ್ ಗೆ ಎಷ್ಟು ಹಣವನ್ನು ನೀಡಿದ್ದಾರೆ ಎನ್ನುವ ಮಾಹಿತಿ ಸಹ ಇದೆ. ಬಿಜೆಪಿಯವರ ಡೈರಿಯು ಸಹ ಬಿಡುಗಡೆ ಮಾಡಲಾಗುತ್ತದೆ ಎನ್ನುವ ಸುಳಿವು ನೀಡಿದ್ರು.

    ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ನಡುವಿನ ಸಂಭಾಷಣೆ ಸ್ಪಷ್ಟವಾಗಿದೆ. ಜನರು ಬುದ್ಧಿವಂತರು, ಮುಂದಿನ ಚುನಾವಣೆಯಲ್ಲಿ ಯಾರು ಯೋಗ್ಯರು ಎನ್ನುವುದನ್ನು ಅವರೇ ನಿರ್ಧಾರ ಮಾಡುತ್ತಾರೆ ಅಂದ್ರು.

    ಗೋವಿಂದರಾಜು ರವರ ಮನೆ ಮೇಲೆ ಐಟಿ ರೇಡ್ ಅಗಿ ಒಂದು ವರ್ಷ ಕಳೆದಿದೆ. ಈಗ ಡೈರಿ ಹೇಗೆ ಸಿಕ್ಕಿತು? ಎನ್ನುವ ಪ್ರಶ್ನೆ ಕಾಡುತ್ತಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಡೀ ದೇಶದಲ್ಲಿ ಚೆಕ್ ಮುಖಾಂತರ ಹಣವನ್ನು ಪಡೆದು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದ ಮುಖ್ಯಮಂತ್ರಿ ಏನಾದ್ರು ಇದ್ದರೆ ಅದು ಯಡಿಯೂರಪ್ಪ ಮಾತ್ರ ಎಂದು ವಿಎಸ್ ಉಗ್ರಪ್ಪ ಲೇವಡಿ ಮಾಡಿದ್ರು.

     

  • ರಾಜ್ಯದ ಹಲವೆಡೆ ಮಧ್ಯರಾತ್ರಿಯೇ `ಹೆಬ್ಬುಲಿ’ ರಿಲೀಸ್ – ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ

    ರಾಜ್ಯದ ಹಲವೆಡೆ ಮಧ್ಯರಾತ್ರಿಯೇ `ಹೆಬ್ಬುಲಿ’ ರಿಲೀಸ್ – ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ

    – ಟಿಕೆಟ್‍ಗಾಗಿ ಎಲ್ಲೆಲ್ಲೂ ನೂಕುನುಗ್ಗಲು

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಹೆಬ್ಬುಲಿ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಬುಧವಾರ ಮಧ್ಯರಾತ್ರಿಯೇ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ ಹಾಗೂ ಬೆಂಗಳೂರಿನ ಕೆಲ ಥಿಯೇಟರ್‍ನಲ್ಲಿ ರಾತ್ರಿ 12.30 ರಿಂದಲೇ ವಿಶೇಷ ಪ್ರದರ್ಶನ ಆಯೋಜಿಸಲಾಗಿತ್ತು.

    ಬೆಂಗಳೂರಿನ ವೀರೇಶ್ ಹಾಗೂ ಸಂತೋಷ್ ಚಿತ್ರಮಂದಿರದ ಬಳಿಯೂ ಹೆಬ್ಬುಲಿ ಸಂಭ್ರಮ ಮನೆಮಾಡಿದೆ. ಈಗಾಗಲೇ 20-30 ಅಡಿಯ ಕಟೌಟ್‍ಗಳು ರಾರಾಜಿಸುತ್ತಿದ್ದು, ಅಭಿಮಾನಿಗಳ ಸಡಗರ ಮುಗಿಲುಮುಟ್ಟಿದೆ.

    ದಾವಣಗೆರೆ ನಗರದ ಎರಡು ಚಿತ್ರ ಮಂದಿರಗಳಲ್ಲಿ ಮಧ್ಯ ರಾತ್ರಿ 1 ಗಂಟೆಗೆ ತೆರೆಕಂಡಿತು. ಸುದೀಪ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ 8 ಗಂಟೆಯಿಂದಲೇ ಟಿಕೆಟ್ ಗಾಗಿ ಮುಂದೆ ಕ್ಯೂ ನಿಂತಿದ್ದರು. ಕೆಲವರು ಹೆಬ್ಬುಲಿ ಸ್ಟೈಲ್ ನಲ್ಲಿ ಕೂದಲು ಬಿಟ್ಟಿದ್ದರೆ, ಇನ್ನು ಕೆಲ ಸುದೀಪ್ ಅಭಿಮಾನಿ ಬಳಗ ಹೀಗೆ ವಿವಿಧ ರೀತಿಯಲ್ಲಿ ಟಿ-ಶರ್ಟ್ ಧರಿಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದರು. ಮಧ್ಯ ರಾತ್ರಿ 12.30ಕ್ಕೆ ಸರಿಯಾಗಿ ಪಟಾಕಿ ಸಿಡಿಸಿ ಸಿನಿಮಾ 150 ದಿನ ಓಡಲಿ ಅಂತಾ ಸಂಭ್ರಮಿಸಿದರು. ರಾತ್ರಿ ಆರಂಭವಾದ ಮೊದಲ ಶೋಗೆ ಟಿಕೆಟ್ ಸಿಗದ ಅಭಿಮಾನಿಗಳು ದಾವಣಗೆರೆ ನಗರದ ಅಶೋಕ ಹಾಗೂ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ಬೆಳಗ್ಗೆವರೆಗೂ ಕಾದು ಕುಳಿತಿದ್ದರು. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

    ಕೃಷ್ಣ ನಿರ್ದೇಶನದ ಚಿತ್ರದಲ್ಲಿ ಸುದೀಪ್ ಪ್ಯಾರಾಕಮಾಂಡೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್ ಸುದೀಪ್ ಅಣ್ಣನಾಗಿ ಮಿಂಚಿದ್ದಾರೆ. ಉಳಿದಂತೆ ರವಿಕಿಶನ್, ರವಿಶಂಕರ್, ಚಿಕ್ಕಣ್ಣ ಹಾಗ ಕಬೀರ್ ದುಹಾನ್ ಸಿಂಗ್ ಕೂಡಾ ನಟಿಸಿದ್ದಾರೆ. ಜೊತೆಗೆ ಮೊದಲ ಬಾರಿಗೆ ಕಾಲಿವುಡ್ ಸುಂದರಿ ಅಮಲಾ ಪಾಲ್ ಜೊತೆಯಾಗಿದ್ದಾರೆ. ರಘುನಾಥ್ ಮತ್ತು ಉಮಾಪತಿ ನಿರ್ಮಾಪಕರಾಗಿದ್ದು, ಚಿತ್ರದಲ್ಲಿ ಅರ್ಜುನ್ ಜನ್ಯ ಅವರ ಸಂಗೀತವಿದೆ.

     

  • ದಾವಣಗೆರೆ: ಗ್ಯಾಸ್ ಸಿಲಿಂಡರ್ ಲಾರಿ ಪಲ್ಟಿ; ಓರ್ವ ಸಾವು

    -ಶಾಲೆಗೆ ಹೋಗುತ್ತಿದ್ದ ಬಾಲಕಿಯರ ಮೇಲೂ ಬಿದ್ದ ಸಿಲಿಂಡರ್‍ಗಳು

    ದಾವಣಗೆರೆ: ಗ್ಯಾಸ್ ಸಿಲಿಂಡರ್ ಲಾರಿಯೊಂದು ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗಾಣದಕಟ್ಟೆ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.

    ರಸ್ತೆಯ ಪಕ್ಕದಲ್ಲಿ ಹೋಗುತ್ತಿದ್ದ ಬಸವರಾಜ್ (42) ಮೇಲೆ ಗ್ಯಾಸ್ ಸಿಲಿಂಡರ್‍ಗಳು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದೇ ವೇಳೆ ಶಾಲೆಗೆ ತೆರಳುತ್ತಿದ್ದ ಶಾಲಾ ಬಾಲಕಿಯರ ಮೇಲೆಯೂ ಗ್ಯಾಸ್ ಸಿಲಿಂಡರ್‍ಗಳು ಬಿದ್ದದರಿಂದ ಅಕ್ಷತಾ ಮತ್ತು ತನುಶ್ರೀ ಎಂಬ ಇಬ್ಬರು ಶಾಲಾ ಬಾಲಕಿಯರಿಗೆ ಗಂಭೀರ ಗಾಯಗಳಾಗಿವೆ. ಅಕ್ಷತಾಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಮತ್ತು ತನುಶ್ರೀಯನ್ನು ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ರವಾನಿಸಲಾಗಿದೆ.

    ಬೆಳಗ್ಗೆ ಮಂಜು ಕವಿದಿದ್ದರಿಂದ ಲಾರಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಲಾರಿ ಭದ್ರಾವತಿಯಿಂದ ಚನ್ನಗಿರಿ ಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ ಅಪಘಾತ ಸಂಭವಿಸಿದೆ. ಘಟನೆಯ ನಂತರ ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಚನ್ನಗಿರಿ ಠಾಣಾ ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಲಾರಿಯಿಂದ ಬಿದ್ದ ಗ್ಯಾಸ್ ಸಿಲಿಂಡರ್‍ಗಳು ಲೀಕ್ ಆಗುತ್ತಿರುವುದರಿಂದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು ಕಾರ್ಯಾಚರಣೆ ನಡೆಸುತ್ತಿದ್ದಾರೆ.

     

  • ಇಲ್ಲಿ ಪರೀಕ್ಷೆ ಬರೆಯದೇ ಸಿಗುತ್ತೆ SSLC, PUC ಮಾರ್ಕ್ಸ್ ಕಾರ್ಡ್

    ದಾವಣಗೆರೆ: ನಗರದ ಎಸ್.ಎಸ್.ಲೇಔಟ್‍ನ ರಿಂಗ್ ರೋಡ್ ಬಳಿ ಇರುವ ವಿದ್ಯಾಸಂಸ್ಥೆಯೊಂದು ಜನರಿಗೆ ಪರೀಕ್ಷೆ ಬರೆಯದೇ ನಕಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಮಾರ್ಕ್ಸ್ ಕಾರ್ಡ್‍ಗಳನ್ನು ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

    ಶ್ರೀದೇವಿ ಇನ್ಸಿಟ್ಯೂಟ್ ಎಂಬ ವಿದ್ಯಾಸಂಸ್ಥೆ ಕೇವಲ 10 ರಿಂದ 20 ಸಾವಿರ ರೂ.ಗಳಿಗೆ ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡುತ್ತಿದೆ. ಭ್ರಷ್ಟಾಚಾರ ವಿರೋಧಿ ವೇದಿಕೆಯ ಕಾರ್ಯಕರ್ತರು ದಾಳಿ ನಡೆಸಿದಾಗ ಈ ಅಕ್ರಮ ಗೊತ್ತಾಗಿದೆ. ಇದೇ ವೇಳೆ ಸ್ಥಳಕ್ಕೆ ಮಾಧ್ಯಮದವರು ತೆರಳಿದಾಗ ಶ್ರೀದೇವಿ ವಿದ್ಯಾಸಂಸ್ಥೆಯ ಸಿಬ್ಬಂದಿಗಳು ಬಾತ್ ರೂಂನಲ್ಲಿ ಅವಿತುಕೊಂಡಿದ್ದರು.

    ಶ್ರೀದೇವಿ ವಿದ್ಯಾಸಂಸ್ಥೆಯು ಕಾಳಿಂಗೆಗೌಡ ಎಂಬವರಿಗೆ ಸೇರಿದೆ. 2013 ರಲ್ಲಿ ಸಾಗರ್ ಎನ್ನುವರು ಈ ಸಂಸ್ಥೆಯಿಂದ ನಕಲಿ ಅಂಕಪಟ್ಟಿಯನ್ನ ಪಡೆದಿದ್ದರು. ಪ್ರತಿವರ್ಷ ಈ ಸಂಸ್ಥೆ ನೂರಾರು ವಿದ್ಯಾರ್ಥಿಗಳಿಗೆ ನಕಲಿ ಮಾರ್ಕ್ಸ್ ಕಾರ್ಡ್ ನೀಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.