Tag: ದಹನ

  • ಅಗ್ನಿ ಅವಘಡ: ಮಹಿಳೆ ಸೇರಿ ಒಡಹುಟ್ಟಿದ ಮೂವರು ಸಜೀವ ದಹನ

    ಅಗ್ನಿ ಅವಘಡ: ಮಹಿಳೆ ಸೇರಿ ಒಡಹುಟ್ಟಿದ ಮೂವರು ಸಜೀವ ದಹನ

    ನವದೆಹಲಿ: ಅಮೆರಿಕಾರದ ಮೆಂಫಿಸ್ ಉಪನಗರದ ಟೆನ್ನೆಸ್ಸಿಯಲ್ಲಿ ನಡೆದ ಬೆಂಕಿ ದುರುಂತದಲ್ಲಿ ತೆಲಂಗಾಣ ಮೂಲದ ಮೂವರು ಒಡಹುಟ್ಟಿದವರು ಸೇರಿದಂತೆ ಮತ್ತೋರ್ವ ಮಹಿಳೆ ಸಜೀವ ದಹನವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ತೆಲಂಗಾಣ ಮೂಲದ ಆರನ್ ನಾಯಕ್ (17), ಶರೋನ್ ನಾಯಕ್ (14) ಹಾಗೂ ಜಾಯ್ ನಾಯಕ್ (15) ಒಡಹುಟ್ಟಿದವರಾಗಿದ್ದಾರೆ. 46 ವರ್ಷದ ಕ್ಯಾರಿ ಕಾಡ್ರಿಟ್ ಸಹ ಬೆಂಕಿ ದುರಂತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

    ಭಾನುವಾರ ರಾತ್ರಿ 11 ಸುಮಾರಿಗೆ ಕ್ಯಾರಿ ಕಾಡ್ರಿಟ್ ವಾಸಿಸುತ್ತಿದ್ದ ಮನೆಗೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆಗೆ ಕ್ಯಾರಿ ಕಾಡ್ರೀಟ್ ಸೇರಿದಂತೆ ಮೂವರು ಒಡಹುಟ್ಟಿದವರೂ ಸಹ ಮೃತಪಟ್ಟಿದ್ದರು. ತೆಲಂಗಾಣ ಮೂಲದ ಮೂವರು ಮಕ್ಕಳು ಅಮೆರಿಕಾದ ದಂಪತಿಗಳ ಜೊತೆ ವಾಸವಾಗಿದ್ದರು ಎನ್ನುವ ಮಾಹಿತಿಯನ್ನು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ.

    ಘಟನೆ ಕುರಿತು ಫ್ರೆಂಚ್ ಕ್ಯಾಂಪ್ ಸಮುದಾಯ ತನ್ನ ಫೇಸ್ಬುಕ್ ಖಾತೆಯಲ್ಲಿ, ಪಾಸ್ಟರ್ ನಾಯ್ಕ್ ಮತ್ತು ಆಕೆಯ ಪತ್ನಿಗಾಗಿ ಪ್ರಾರ್ಥಿಸೋಣ. ದಂಪತಿ ತಮ್ಮ ಮೂರು ಅಮೂಲ್ಯ ಮಕ್ಕಳನ್ನು ಅಮೆರಿಕಾಕ್ಕೆ ಕಳುಹಿಸಿದ್ದರು. ಆದರೆ ಅವರು ಅಗ್ನಿಗೆ ಆಹುತಿಯಾಗಿದ್ದಾರೆ. ಈ ಮೂರು ಮಕ್ಕಳನ್ನು ಇಡೀ ಪಟ್ಟಣವೇ ಪ್ರೀತಿಸುತ್ತಿತ್ತು. ಆದರೆ ಅವರ ಅಕಾಲಿಕ ಮರಣದಿಂದಾಗಿ ಇಡೀ ಪಟ್ಟಣವೇ ದು:ಖದಲ್ಲಿ ಮುಳುಗಿದೆ. ನಮಗೆ ಗೊತ್ತು ಹೆತ್ತವರ ನೋವನ್ನು ಅಳೆಯಲು ಸಾಧ್ಯವಿಲ್ಲವೆಂದು ಬರೆದು ಪೋಸ್ಟ್ ಮಾಡಿದೆ.

    ಮಾಹಿತಿಗಳ ಪ್ರಕಾರ ಮಕ್ಕಳು ಸ್ಥಳೀಯ ಚರ್ಚ್ ಮಿಷನರಿಯಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿದ್ದರು. ಇವರನ್ನು ಡ್ಯಾನಿಯಲ್ ಕಾಡ್ರಿಟ್ ದಂಪತಿ ನೋಡಿಕೊಳ್ಳುತ್ತಿದ್ದರು. ಆದರೆ ಬೆಂಕಿ ದುರಂತದಲ್ಲಿ ಡ್ಯಾನಿಯಲ್ ಹಾಗೂ ಅವರ 13 ವರ್ಷದ ಕೋಲ್ ಮಾತ್ರ ಬದುಕುಳಿದಿದ್ದಾರೆ. ಸದ್ಯ ಚರ್ಚ್ ಮಕ್ಕಳು ತೆಲಂಗಾಣ ಮೂಲದವರೆಂದು ಮಾತ್ರ ಹೇಳಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ನಾಲ್ವರು ಸಜೀವ ದಹನ!

    ಬಟ್ಟೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ನಾಲ್ವರು ಸಜೀವ ದಹನ!

    ನವದೆಹಲಿ: ಬಟ್ಟೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಸಜೀವವಾಗಿ ದಹನವಾಗಿರುವ ಘಟನೆ ದೆಹಲಿಯ ಕರೋಲ್ ಬಾಗ್ ಪ್ರದೇಶದಲ್ಲಿ ನಡೆದಿದೆ.

    ಸೋಮವಾರ ಮಧ್ಯಾಹ್ನ 12.30ರ ವೇಳೆಗೆ ಬಟ್ಟೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ನಾಲ್ವರು ಸಜೀವವಾಗಿ ಸುಟ್ಟುಹೋಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎರಡು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ಅಧಿಕಾರಿ, ಕಾರ್ಖಾನೆಯಲ್ಲಿ ಕಾರ್ಮಿಕರು ಬಟ್ಟೆಗಳನ್ನು ಸ್ಟೀಮ್ ಮಾಡುವ ಮೂಲಕ ಒಣಗಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಬೆಂಕಿ ಹತ್ತಿಕೊಂಡಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹೊರಬರುತ್ತಿರುವಾಗ ಓರ್ವ ಬಲಶಾಲಿ ವ್ಯಕ್ತಿ ಬಾಗಿಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಇದರಿಂದಾಗಿ ನಾಲ್ವರು ಹೊರಬರಲಾಗದೇ ಬೆಂಕಿಗೆ ಆಹುತಿಯಾಗಿದ್ದಾರೆ. ಕಾರ್ಖಾನೆಯಯಲ್ಲಿ ಒಂದೇ ಒಂದು ದ್ವಾರವನ್ನು ಹೊರತುಪಡಿಸಿ, ಬೇರೆ ಯಾವುದೇ ಮಾರ್ಗಗಳು ಇರಲಿಲ್ಲವೆಂದು ತಿಳಿಸಿದ್ದಾರೆ.

    ಮೃತರನ್ನು ಬಗಾನ್ ಪ್ರಸಾದ್(55), ಆರ್.ಎಂ.ನರೇಶ್(40), ಆರತಿ (20) ಹಾಗೂ ಆಶಾ(40) ಎಂದು ಗುರುತಿಸಲಾಗಿದ್ದು, 25 ವರ್ಷದ ಅಜಿತ್ ಎಂಬವರ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews